15.11.23 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಸರ್ವರಿಗೆ ಆಶೀರ್ವಾದ ಮಾಡುವಂತಹ ದಯಾಸಾಗರ ಒಬ್ಬ ತಂದೆಯಾಗಿದ್ದಾರೆ, ತಂದೆಯನ್ನೇ
ದುಃಖಹರ್ತ-ಸುಖಕರ್ತ ಎಂದು ಹೇಳಲಾಗುತ್ತದೆ, ಅವರ ವಿನಃ ಮತ್ತ್ಯಾರೂ ದುಃಖವನ್ನು ಹರಣ ಮಾಡಲು
ಸಾಧ್ಯವಿಲ್ಲ”
ಪ್ರಶ್ನೆ:
ಭಕ್ತಿಮಾರ್ಗ
ಮತ್ತು ಜ್ಞಾನಮಾರ್ಗ ಎರಡರಲ್ಲಿ ದತ್ತು ಮಾಡಿಕೊಳ್ಳುವ ಸಂಪ್ರದಾಯವಿದೆ, ಆದರೆ ಇವೆರಡರ ಅಂತರವೇನು?
ಉತ್ತರ:
ಭಕ್ತಿಮಾರ್ಗದಲ್ಲಿ ಯಾರಿಗಾದರೂ ದತ್ತು ಆಗುತ್ತಾರೆಂದರೆ ಗುರು ಮತ್ತು ಶಿಷ್ಯರ ಸಂಬಂಧವಿರುತ್ತದೆ,
ಸನ್ಯಾಸಿಗಳೂ ಸಹ ದತ್ತು ಮಾಡಿಕೊಳ್ಳಲ್ಪಟ್ಟರೆ ತಮ್ಮನ್ನು ಅನುಯಾಯಿಯೆಂದು ಕರೆಸಿಕೊಳ್ಳಲಾಗುತ್ತದೆ
ಆದರೆ ಜ್ಞಾನಮಾರ್ಗದಲ್ಲಿ ನೀವು ಶಿಷ್ಯರು ಅಥವಾ ಅನುಯಾಯಿಗಳಲ್ಲ, ನೀವು ತಂದೆಯ ಮಕ್ಕಳಾಗಿದ್ದೀರಿ.
ಮಕ್ಕಳಾಗುವುದು ಎಂದರೆ ಆಸ್ತಿಗೆ ಅಧಿಕಾರಿಗಳಾಗುವುದು.
ಗೀತೆ:
ಓಂ ನಮಃ ಶಿವಾಯ....
ಓಂ ಶಾಂತಿ.
ಮಕ್ಕಳು ಗೀತೆಯನ್ನು ಕೇಳಿದಿರಿ. ಇದು ಪರಮಪಿತ ಪರಮಾತ್ಮ ಶಿವನ ಮಹಿಮೆಯಾಗಿದೆ. ಶಿವಾಯ ನಮಃ ಎಂದು
ಹೇಳುತ್ತಾರೆಯೇ ಹೊರತು ರುದ್ರಾಯ ನಮಃ ಅಥವಾ ಸೋಮನಾಥಾಯ ನಮಃ ಎಂದು ಹೇಳುವುದಿಲ್ಲ. ಶಿವಾಯ ನಮಃ ಎಂದೇ
ಹೇಳುತ್ತಾರೆ ಮತ್ತು ಮಹಿಮೆಯೂ ಸಹ ಅವರದೇ ಆಗುತ್ತದೆ. ಶಿವಾಯ ನಮಃ ಎಂದರೆ ತಂದೆಯಾದರು. ಪರಮಪಿತ
ಪರಮಾತ್ಮನ ಹೆಸರೇ ಶಿವ. ಅವರು ನಿರಾಕಾರನಾಗಿದ್ದಾರೆ ಅಂದಮೇಲೆ ಓ ಗಾಡ್ಫಾದರ್ ಎಂದು ಯಾರು ಹೇಳಿದರು?
ಆತ್ಮ. ಕೇವಲ ‘ಓ ತಂದೆಯೇ’ ಎಂದು ಹೇಳಿದರೆ ಅವರು ಶರೀರದ ತಂದೆಯಾಗಿಬಿಡುತ್ತಾರೆ ಆದರೆ ಓ ಗಾಡ್
ಫಾದರ್ ಎಂದು ಹೇಳುವುದರಿಂದ ಅವರು ಆತ್ಮಿಕ ತಂದೆಯಾಗಿಬಿಡುತ್ತಾರೆ. ಇವು ತಿಳಿದುಕೊಳ್ಳುವ
ಮಾತುಗಳಾಗಿವೆ. ದೇವತೆಗಳಿಗೆ ಪಾರಸಬುದ್ಧಿಯವರು ಎಂದು ಹೇಳಲಾಗುತ್ತದೆ. ದೇವತೆಗಳಂತೂ ವಿಶ್ವದ
ಮಾಲೀಕರಾಗಿದ್ದರು ಈಗಂತೂ ಯಾರೂ ಮಾಲೀಕರಿಲ್ಲ. ಭಾರತದ ದಣಗಳು-ಒಡೆಯರು ಯಾರೂ ಇಲ್ಲ. ರಾಜನಿಗೂ ಸಹ
ಪಿತಾ, ಅನ್ನದಾತ ಎಂದು ಕರೆಯಲಾಗುತ್ತದೆ. ಈಗಂತೂ ರಾಜರ್ಯಾರೂ ಇಲ್ಲ ಅಂದಾಗ ಶಿವಾಯ ನಮಃ ಎಂದು ಯಾರು
ಹೇಳಿದರು? ಇವರು ತಂದೆಯಾಗಿದ್ದಾರೆಂದು ಹೇಗೆ ಗೊತ್ತಾಗುವುದು? ಬ್ರಹ್ಮಾಕುಮಾರ-ಕುಮಾರಿಯರಂತೂ
ಅನೇಕರಿದ್ದೀರಿ ಅಂದರೆ ನೀವೆಲ್ಲರೂ ಶಿವತಂದೆಯ ಮೊಮ್ಮಕ್ಕಳಾದಿರಿ. ನಿಮ್ಮನ್ನು ಬ್ರಹ್ಮಾರವರ
ಮುಖಾಂತರ ದತ್ತು ಮಾಡಿಕೊಳ್ಳುತ್ತೇನೆ. ನಾವು ಬ್ರಹ್ಮಾಕುಮಾರ-ಕುಮಾರಿಯರೆಂದು ಎಲ್ಲರೂ ಹೇಳುತ್ತೀರಿ
ಅಂದಮೇಲೆ ಬ್ರಹ್ಮನು ಯಾರ ಮಗ? ಶಿವನ ಮಗನಾಗಿದ್ದಾರೆ. ಬ್ರಹ್ಮಾ, ವಿಷ್ಣು, ಶಂಕರ ಮೂವರೂ ಸಹ ಶಿವನ
ಮಕ್ಕಳು. ಶಿವತಂದೆಯು ಶ್ರೇಷ್ಠಾತಿ ಶ್ರೇಷ್ಠ ಭಗವಂತ, ನಿರಾಕಾರಿ ವತನದಲ್ಲಿ ಇರುವವರಾಗಿದ್ದಾರೆ.
ಬ್ರಹ್ಮಾ, ವಿಷ್ಣು, ಶಂಕರರು ಸೂಕ್ಷ್ಮವತನವಾಸಿಗಳಾಗಿದ್ದಾರೆ. ಅಂದಮೇಲೆ ಮನುಷ್ಯ ಸೃಷ್ಟಿಯನ್ನು
ಹೇಗೆ ರಚಿಸಿದರು? ಅದಕ್ಕೆ ತಂದೆಯು ತಿಳಿಸುತ್ತಾರೆ - ನಾನು ಡ್ರಾಮಾ ಅನುಸಾರ ಬ್ರಹ್ಮನ ಸಾಧಾರಣ
ತನುವಿನಲ್ಲಿ ಪ್ರವೇಶ ಮಾಡಿ ಇವರನ್ನು ಪ್ರಜಾಪಿತನನ್ನಾಗಿ ಮಾಡುತ್ತೇನೆ. ನಾನು ಇವರಲ್ಲಿಯೇ ಪ್ರವೇಶ
ಮಾಡಬೇಕಿದೆ, ಇವರಿಗೆ ಬ್ರಹ್ಮಾ ಎಂದು ಹೆಸರಿಟ್ಟಿದ್ದೇನೆ. ದತ್ತು ಮಾಡಿಕೊಂಡ ನಂತರ ಹೆಸರು
ಬದಲಾಗುತ್ತದೆ. ಸನ್ಯಾಸಿಗಳೂ ಸಹ ಹೆಸರನ್ನು ಬದಲಾಯಿಸುತ್ತಾರೆ. ಮೊದಲು ಗೃಹಸ್ಥಿಗಳ ಬಳಿ ಜನ್ಮ
ಪಡೆಯುತ್ತಾರೆ ನಂತರ ಸಂಸ್ಕಾರದ ಅನುಸಾರ ಬಾಲ್ಯದಲ್ಲಿಯೇ ಶಾಸ್ತ್ರ ಮುಂತಾದುವುಗಳನ್ನು ಓದುತ್ತಾರೆ
ಮತ್ತೆ ವೈರಾಗ್ಯವು ಬರುತ್ತದೆ. ಆಗ ಸನ್ಯಾಸಿಗಳ ಬಳಿ ಹೋಗಿ ದತ್ತು ಆಗುತ್ತಾರೆ. ಇವರು ನನ್ನ
ಗುರುವಾಗಿದ್ದಾರೆಂದು ಹೇಳುತ್ತಾರೆ. ನಮ್ಮ ತಂದೆಯೆಂದು ಹೇಳುವುದಿಲ್ಲ. ಕೇವಲ ಗುರುವಿಗೆ ಶಿಷ್ಯರು
ಅಥವಾ ಅನುಯಾಯಿಗಳು ಆಗುತ್ತಾರೆ. ಗುರುಗಳೂ ಸಹ ನೀವು ನನ್ನ ಶಿಷ್ಯರು ಅಥವಾ
ಅನುಯಾಯಿಗಳಾಗುತ್ತೀರೆಂದು ಶಿಷ್ಯರನ್ನು ದತ್ತು ಮಾಡಿಕೊಳ್ಳುತ್ತಾರೆ. ಆದರೆ ಇಲ್ಲಿ ತಂದೆಯು
ತಿಳಿಸುತ್ತಾರೆ - ನೀವು ನನ್ನ ಮಕ್ಕಳಾಗಿದ್ದೀರಿ. ನೀವು ಆತ್ಮಗಳು ಭಕ್ತಿಮಾರ್ಗದಲ್ಲಿ ನನ್ನನ್ನು
ಕರೆಯುತ್ತಾ ಬಂದಿದ್ದೀರಿ ಏಕೆಂದರೆ ಇಲ್ಲಿ ಬಹಳ ದುಃಖವಿದೆ, ತ್ರಾಹೀ ತ್ರಾಹೀ ಎನ್ನುತ್ತಿದ್ದಾರೆ.
ಪತಿತ-ಪಾವನನಂತೂ ಒಬ್ಬ ತಂದೆಯೇ ಆಗಿದ್ದಾರೆ. ನಿರಾಕಾರ ಶಿವನಿಗೆ ಆತ್ಮವು ನಮಸ್ಕರಿಸುತ್ತದೆ
ಅಂದಮೇಲೆ ತಂದೆಯಂತೂ ಇದ್ದೇ ಇರುವರು. ‘ನೀವು ಮಾತಾಪಿತ’ ಇದನ್ನೂ ಸಹ ಪರಮಾತ್ಮನಿಗೇ ಹಾಡುತ್ತಾರೆ.
ತಂದೆಯಿದ್ದಾರೆಂದ ಮೇಲೆ ತಾಯಿಯೂ ಅವಶ್ಯವಾಗಿ ಬೇಕು. ತಂದೆ-ತಾಯಿಯ ವಿನಃ ರಚನೆಯಾಗುವುದಿಲ್ಲ.
ತಂದೆಯು ಮಕ್ಕಳ ಬಳಿ ಬರಲೇಬೇಕು. ಈ ಸೃಷ್ಟಿಚಕ್ರವು ಹೇಗೆ ಪುನರಾವರ್ತನೆಯಾಗುತ್ತದೆ, ಇದರ
ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳುವುದಕ್ಕೆ ತ್ರಿಕಾಲದರ್ಶಿಗಳು ಆಗುವುದೆಂದು ಹೇಳಲಾಗುತ್ತದೆ.
ಇಷ್ಟು ಕೋಟ್ಯಾಂತರ ಪಾತ್ರಧಾರಿಗಳಿದ್ದಾರೆ, ಪ್ರತಿಯೊಬ್ಬರದೂ ಬೇರೆ-ಬೇರೆ ಪಾತ್ರವಾಗಿದೆ. ಇದು
ಬೇಹದ್ದಿನ ನಾಟಕವಾಗಿದೆ. ನಾನು ನಿರ್ದೇಶಕ, ರಚಯಿತ, ಮುಖ್ಯಪಾತ್ರಧಾರಿ ಆಗಿದ್ದೇನೆ. ಪಾತ್ರ
ಮಾಡುತ್ತಿದ್ದೇನೆ ಆದರೆ ನಾನಾತ್ಮನಿಗೆ ಪರಮ ಆತ್ಮನೆಂದು ಹೇಳುತ್ತಾರೆ ಎಂದು ತಂದೆಯು ತಿಳಿಸುತ್ತಾರೆ.
ಆತ್ಮ ಮತ್ತು ಪರಮಾತ್ಮನ ರೂಪವು ಒಂದೇ ಆಗಿದೆ. ಅವಶ್ಯವಾಗಿ ಭೃಕುಟಿಯ ಮಧ್ಯೆ ಆತ್ಮರೂಪಿ ನಕ್ಷತ್ರವು
ಇರುತ್ತದೆಯಲ್ಲವೆ. ಆತ್ಮವು ಅತೀ ಸೂಕ್ಷ್ಮವಾಗಿದೆ, ಅದನ್ನು ನೋಡಲು ಸಾಧ್ಯವಿಲ್ಲ. ಆತ್ಮವೂ
ಸೂಕ್ಷ್ಮ ಆದ್ದರಿಂದ ಆತ್ಮದ ತಂದೆಯೂ ಸೂಕ್ಷ್ಮವಾಗಿದ್ದಾರೆ. ನೀವಾತ್ಮಗಳು ಬಿಂದು ಸಮಾನರಾಗಿದ್ದೀರಿ,
ಶಿವನಾದ ನಾನೂ ಸಹ ಬಿಂದು ರೂಪವಾಗಿದ್ದೇನೆ ಆದರೆ ನಾನು ಪರಮ ಆತ್ಮ, ರಚೈತ, ನಿರ್ದೇಶಕ,
ಜ್ಞಾನಸಾಗರನಾಗಿದ್ದೇನೆ. ನನ್ನಲ್ಲಿ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ನಾನು ಜ್ಞಾನಸಾಗರ,
ದಯಾಸಾಗರನಾಗಿದ್ದೇನೆ, ಎಲ್ಲರಿಗೆ ಆಶೀರ್ವಾದ ನೀಡುತ್ತೇನೆ. ಎಲ್ಲರನ್ನು ಸದ್ಗತಿಯಲ್ಲಿ ಕರೆದುಕೊಂಡು
ಹೋಗುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ದುಃಖಹರ್ತ-ಸುಖಕರ್ತ ಒಬ್ಬ ತಂದೆಯೇ ಆಗಿದ್ದಾರೆ.
ಸತ್ಯಯುಗದಲ್ಲಿ ಯಾರೂ ದುಃಖಿಯಾಗುವುದೇ ಇಲ್ಲ. ಲಕ್ಷ್ಮಿ-ನಾರಾಯಣರ ರಾಜ್ಯವಿರುತ್ತದೆ.
ತಂದೆಯು ತಿಳಿಸುತ್ತಾರೆ
- ನಾನು ಈ ಸೃಷ್ಟಿರೂಪಿ ವೃಕ್ಷದ ಬೀಜರೂಪನಾಗಿದ್ದೇನೆ. ತಿಳಿದುಕೊಳ್ಳಿ, ಮಾವಿನ ಮರದ ಬೀಜವು
ಜಡಬೀಜವಾಗಿರುತ್ತದೆ, ಅದು ಮಾತನಾಡುವುದಿಲ್ಲ. ಒಂದುವೇಳೆ ಅದು ಚೈತನ್ಯವಾಗಿದ್ದರೆ ನನ್ನಿಂದ ಈ
ಎಲ್ಲಾ ರೆಂಬೆ-ಕೊಂಬೆಗಳು, ಎಲೆಗಳು ಬರುತ್ತವೆ ಎಂದು ಹೇಳುತ್ತಿತ್ತು. ಆದರೆ ನಾನಂತೂ ಚೈತನ್ಯ
ಬೀಜವಾಗಿದ್ದೇನೆ. ಇದಕ್ಕೆ ಕಲ್ಪವೃಕ್ಷವೆಂದು ಕರೆಯಲಾಗುತ್ತದೆ. ಮನುಷ್ಯ ಸೃಷ್ಟಿರೂಪಿ ವೃಕ್ಷದ
ಬೀಜವು ಪರಮಪಿತ ಪರಮಾತ್ಮನಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನೇ ಬಂದು ಇದರ ಜ್ಞಾನವನ್ನು
ತಿಳಿಸುತ್ತೇನೆ, ಮಕ್ಕಳನ್ನು ಸದಾ ಸುಖಿಯನ್ನಾಗಿ ಮಾಡುತ್ತೇನೆ. ಮಾಯೆಯು ದುಃಖಿಯನ್ನಾಗಿ ಮಾಡುತ್ತದೆ,
ಭಕ್ತಿಮಾರ್ಗವು ಮುಕ್ತಾಯವಾಗಲಿದೆ. ಈ ನಾಟಕವು ಅವಶ್ಯವಾಗಿ ಸುತ್ತಬೇಕಾಗಿದೆ. ಇದು ಬೇಹದ್ದಿನ
ವಿಶ್ವದ ಇತಿಹಾಸ, ಭೂಗೋಳವಾಗಿದೆ. ಈ ಚಕ್ರವು ಸುತ್ತುತ್ತಲೇ ಇರುತ್ತದೆ. ಕಲಿಯುಗವು ಬದಲಾಗಿ ಮತ್ತೆ
ಸತ್ಯಯುಗವಾಗಲಿದೆ. ಸೃಷ್ಟಿಯಂತೂ ಒಂದೇ ಆಗಿದೆ, ಭಗವಂತನೂ ಒಬ್ಬರೇ ಆಗಿದ್ದಾರೆ. ಅವರಿಗೆ ಯಾರೂ
ತಂದೆಯಿಲ್ಲ. ಅವರೇ ಶಿಕ್ಷಕರೂ ಆಗಿದ್ದಾರೆ, ಓದಿಸುತ್ತಿದ್ದಾರೆ. ಭಗವಾನುವಾಚ - ನಾನು ನಿಮಗೆ
ರಾಜಯೋಗವನ್ನು ಕಲಿಸುತ್ತೇನೆ, ಮನುಷ್ಯರು ಮಾತಾಪಿತರನ್ನು ತಿಳಿದುಕೊಂಡಿಲ್ಲ, ನೀವು ಮಕ್ಕಳೇ
ತಿಳಿದುಕೊಂಡಿದ್ದೀರಿ - ನಿರಾಕಾರ ಶಿವತಂದೆಗೆ ನಾವು ನಿರಾಕಾರಿ ಮಕ್ಕಳಾಗಿದ್ದೇವೆ ಮತ್ತು ಸಾಕಾರೀ
ಬ್ರಹ್ಮಾರವರಿಗೂ ಸಹ ಮಕ್ಕಳಾಗಿದ್ದೇವೆ. ನಿರಾಕಾರನ ಮಕ್ಕಳೆಲ್ಲರೂ ಸಹೋದರ-ಸಹೋದರರಾಗಿದ್ದೇವೆ ಮತ್ತು
ಬ್ರಹ್ಮಾರವರ ಮಕ್ಕಳು ಸಹೋದರ-ಸಹೋದರಿಯರಾಗಿದ್ದೇವೆ. ಇದು ಪವಿತ್ರರಾಗಿರುವ ಯುಕ್ತಿಯಾಗಿದೆ.
ಸಹೋದರ-ಸಹೋದರಿಯರು ವಿಕಾರದಲ್ಲಿ ಹೇಗೆ ಹೋಗುವರು! ವಿಕಾರದ ಬೆಂಕಿಯೇ ಬೀಳುತ್ತದೆಯಲ್ಲವೆ ಅದಕ್ಕೆ
ಕಾಮಾಗ್ನಿಯೆಂದು ಹೇಳಲಾಗುತ್ತದೆ, ಅದರಿಂದ ಪಾರಾಗುವ ಯುಕ್ತಿಯನ್ನು ತಂದೆಯು ತಿಳಿಸುತ್ತಾರೆ.
ಮೊದಲನೆಯದಾಗಿ ಪ್ರಾಪ್ತಿಯಂತೂ ಬಹಳಷ್ಟಿದೆ. ಒಂದುವೇಳೆ ನಾವು ತಂದೆಯ ಶ್ರೀಮತದಂತೆ ನಡೆದಿದ್ದೇ ಆದರೆ
ಬೇಹದ್ದಿನ ತಂದೆಯ ಆಸ್ತಿಯನ್ನು ಪಡೆಯುತ್ತೇವೆ. ನೆನಪಿನಿಂದಲೇ ಸದಾ ಆರೋಗ್ಯವಂತರಾಗುತ್ತೇವೆ.
ಪ್ರಾಚೀನ ಭಾರತದ ಯೋಗವು ಪ್ರಸಿದ್ಧವಾಗಿದೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು
ಮಾಡುತ್ತಾ-ಮಾಡುತ್ತಾ ನೀವು ಪವಿತ್ರರಾಗಿಬಿಡುತ್ತೀರಿ, ಪಾಪಗಳು ಭಸ್ಮವಾಗಿಬಿಡುತ್ತವೆ. ತಂದೆಯ
ನೆನಪಿನಲ್ಲಿ ಶರೀರವನ್ನು ಬಿಟ್ಟರೆ ನನ್ನ ಬಳಿ ಬಂದುಬಿಡುತ್ತೀರಿ. ಈ ಹಳೆಯ ಪ್ರಪಂಚವು
ಸಮಾಪ್ತಿಯಾಗಲಿದೆ. ಇದು ಅದೇ ಮಹಾಭಾರತದ ಯುದ್ಧವಾಗಿದೆ. ಯಾರು ತಂದೆಯ ಮಕ್ಕಳಾಗಿದ್ದಾರೆಯೋ ಅವರದೇ
ವಿಜಯವಾಗಲಿದೆ. ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಭಗವಂತನು ಸ್ವರ್ಗದ ಮಾಲಿಕರನ್ನಾಗಿ
ಮಾಡುವುದಕ್ಕೋಸ್ಕರ ರಾಜಯೋಗವನ್ನು ಕಲಿಸುತ್ತಾರೆ. ನಂತರ ಮಾಯಾ ರಾವಣನು ನರಕದ ಮಾಲಿಕರನ್ನಾಗಿ
ಮಾಡುತ್ತಾನೆ ಅದು ಶಾಪವು ಸಿಕ್ಕಹಾಗೆ.
ತಂದೆಯು ತಿಳಿಸುತ್ತಾರೆ
- ಮುದ್ದಾದ ಮಕ್ಕಳೇ, ನನ್ನ ಮತದಂತೆ ನೀವು ಸ್ವರ್ಗವಾಸಿಗಳಾಗಿ ನಂತರ ಯಾವಾಗ ರಾವಣರಾಜ್ಯವು
ಪ್ರಾರಂಭವಾಗುತ್ತದೆಯೋ ಆಗ ರಾವಣನು ಹೇಳುತ್ತಾನೆ - ಹೇ ಈಶ್ವರನ ಮಕ್ಕಳೇ, ನರಕವಾಸೀ ಭವ. ನರಕದ
ನಂತರ ಸ್ವರ್ಗವು ಅವಶ್ಯವಾಗಿ ಬರಬೇಕಾಗಿದೆ. ಇದು ನರಕವಾಗಿದೆಯಲ್ಲವೆ. ಎಷ್ಟೊಂದು ಹೊಡೆದಾಟಗಳಿವೆ.
ಸತ್ಯಯುಗದಲ್ಲಿ ಈ ಜಗಳ-ಕಲಹ ಏನೂ ಇರುವುದಿಲ್ಲ. ಭಾರತವೇ ಸ್ವರ್ಗವಾಗಿತ್ತು, ಮತ್ತ್ಯಾವುದೇ
ರಾಜ್ಯವಿರುವುದಿಲ್ಲ. ಈಗ ಭಾರತವು ನರಕವಾಗಿದೆ, ಅನೇಕ ಧರ್ಮಗಳಾಗಿವೆ. ಗಾಯನವಿದೆ - ಅನೇಕ ಧರ್ಮಗಳ
ವಿನಾಶ, ಒಂದು ಧರ್ಮದ ಸ್ಥಾಪನೆ ಮಾಡಲು ನಾನು ಬರಬೇಕಾಗುತ್ತದೆ. ನಾನು ಒಂದೇ ಬಾರಿ ಅವತರಿಸುತ್ತೇನೆ.
ತಂದೆಯು ಪತಿತ ಪ್ರಪಂಚದಲ್ಲಿಯೇ ಬರಬೇಕಾಗುತ್ತದೆ. ಯಾವಾಗ ಹಳೆಯ ಪ್ರಪಂಚವು ಸಮಾಪ್ತಿಯಾಗಬೇಕು ಆಗಲೇ
ಬರುತ್ತಾರೆ. ಅದಕ್ಕೋಸ್ಕರ ಯುದ್ಧವೂ ಆಗಬೇಕು.
ತಂದೆಯು ತಿಳಿಸುತ್ತಾರೆ
- ಮಧುರ ಮಕ್ಕಳೇ, ನೀವು ಅಶರೀರಿಯಾಗಿ ಬಂದಿರಿ, 84 ಜನ್ಮಗಳ ಪಾತ್ರವನ್ನು ಪೂರ್ಣ ಮಾಡಿದಿರಿ ಈಗ
ವಾಪಸ್ ಹೋಗಬೇಕಾಗಿದೆ ನಾನು ನಿಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡಿ ವಾಪಸ್ಸು ಕರೆದುಕೊಂಡು
ಹೋಗುತ್ತೇನೆ. ಲೆಕ್ಕವಂತೂ ಇದೆಯಲ್ಲವೆ. 5000 ವರ್ಷಗಳಲ್ಲಿ ದೇವತೆಗಳು 84 ಜನ್ಮಗಳನ್ನು
ಪಡೆಯುತ್ತಾರೆ, ಎಲ್ಲರೂ 84 ಜನ್ಮಗಳನ್ನು ಪಡೆಯುವುದಿಲ್ಲ. ಈಗ ನನ್ನನ್ನು ನೆನಪು ಮಾಡಿ ಮತ್ತು
ಆಸ್ತಿಯನ್ನು ಪಡೆಯಿರಿ ಎಂದು ತಂದೆಯು ತಿಳಿಸುತ್ತಾರೆ. ಸೃಷ್ಟಿಚಕ್ರವು ಬುದ್ಧಿಯಲ್ಲಿ ತಿರುಗಬೇಕು.
ನಾವು ಪಾತ್ರಧಾರಿಗಳಾಗಿದ್ದೇವಲ್ಲವೆ. ಪಾತ್ರಧಾರಿಯಾಗಿ ನಾಟಕದ ನಿರ್ದೇಶಕ, ರಚೈತ, ಮುಖ್ಯ
ಪಾತ್ರಧಾರಿಯನ್ನೇ ಅರಿತುಕೊಂಡಿಲ್ಲವೆಂದರೆ ಅವರು ಬುದ್ಧಿಹೀನರಾದರು. ಇದರಿಂದಲೇ ಭಾರತವು ಇಷ್ಟೊಂದು
ಕಂಗಾಲಾಗಿದೆ. ಪುನಃ ತಂದೆಯು ಬಂದು ಸಂಪನ್ನರಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು
ಭಾರತವಾಸಿಗಳೇ ಸ್ವರ್ಗದಲ್ಲಿದ್ದಿರಿ ಮತ್ತೆ ನಿಮಗೆ 84 ಜನ್ಮಗಳನ್ನು ಅವಶ್ಯವಾಗಿ
ತೆಗೆದುಕೊಳ್ಳಬೇಕಾಯಿತು. ಈಗ ನಿಮ್ಮ 84 ಜನ್ಮಗಳು ಮುಕ್ತಾಯವಾಯಿತು. ಈ ಅಂತಿಮಜನ್ಮ ಒಂದೇ ಉಳಿದಿದೆ.
ಭಗವಾನುವಾಚ, ಭಗವಂತನಂತೂ ಎಲ್ಲರಿಗೂ ಒಬ್ಬರೇ ಆಗಿದ್ದಾರೆ. ಕೃಷ್ಣನನ್ನು ಬೇರೆ ಧರ್ಮದವರು
ಭಗವಂತನೆಂದು ಒಪ್ಪುವುದಿಲ್ಲ ನಿರಾಕಾರನನ್ನೇ ಒಪ್ಪುತ್ತಾರೆ. ಅವರು ಎಲ್ಲಾ ಆತ್ಮಗಳ
ತಂದೆಯಾಗಿದ್ದಾರೆ. ತಿಳಿಸುತ್ತಾರೆ, ನಾನು ಅನೇಕ ಜನ್ಮಗಳ ಅಂತಿಮ ಜನ್ಮದಲ್ಲಿ ಬಂದು ಇವರಲ್ಲಿ (ಬ್ರಹ್ಮಾ)ಪ್ರವೇಶ
ಮಾಡುತ್ತೇನೆ. ರಾಜಧಾನಿಯು ಸ್ಥಾಪನೆಯಾಗಿ ವಿನಾಶವು ಪ್ರಾರಂಭವಾಗುವುದು. ಅನಂತರ ನಾನು
ಹೊರಟುಹೋಗುತ್ತೇನೆ. ಇದು ಬಹಳ ದೊಡ್ಡ ಯಜ್ಞವಾಗಿದೆ. ಮತ್ತೆಲ್ಲಾ ಯಜ್ಞಗಳಿವೆಯೋ ಅವುಗಳು ಇದರಲ್ಲಿ
ಹಾಗೂ ಇಡೀ ಪ್ರಪಂಚದ ಕೊಳಕೆಲ್ಲವೂ ಸ್ವಾಹಾ ಆಗುತ್ತವೆ. ಇದರ ನಂತರ ಮತ್ತ್ಯಾವುದೇ ಯಜ್ಞವನ್ನು
ರಚಿಸಲಾಗುವುದಿಲ್ಲ. ಭಕ್ತಿಮಾರ್ಗವು ಸಮಾಪ್ತಿ ಆಗಿಬಿಡುತ್ತದೆ. ಸತ್ಯಯುಗ-ತ್ರೇತಾದ ನಂತರ ಭಕ್ತಿಯು
ಪ್ರಾರಂಭವಾಗುತ್ತದೆ. ಈಗ ಆ ಭಕ್ತಿಯು ಮುಕ್ತಾಯವಾಗುತ್ತದೆ. ಮಹಿಮೆಯೆಲ್ಲವೂ ಶಿವತಂದೆಯದ್ದಾಗಿದೆ.
ಅನೇಕರು ಅನೇಕ ಹೆಸರುಗಳನ್ನು ಇಟ್ಟಿದ್ದಾರೆ ಆದರೆ ಅವರನ್ನು ತಿಳಿದುಕೊಂಡಿಲ್ಲ. ಈ ಶಿವತಂದೆಯನ್ನು
ರುದ್ರ, ಸೋಮನಾಥ, ಬಾಬುರೀನಾಥ ಎಂದೂ ಹೇಳುತ್ತಾರೆ. ಒಬ್ಬರಿಗೆ ಅನೇಕ ಹೆಸರುಗಳನ್ನು
ಇಟ್ಟುಬಿಟ್ಟಿದ್ದಾರೆ. ಎಂತೆಂತಹ ಕರ್ತವ್ಯ ಮಾಡಿದ್ದಾರೆಯೋ ಅಂತಹ ಹೆಸರುಗಳನ್ನು ಇಟ್ಟಿದ್ದಾರೆ.
ನಿಮಗೆ ಸೋಮರಸವನ್ನು ಕುಡಿಸುತ್ತಿದ್ದಾರೆ. ನೀವು ಮಾತೆಯರು ಸ್ವರ್ಗದ ದ್ವಾರವನ್ನು ತೆರೆಯಲು
ನಿಮಿತ್ತರಾಗಿದ್ದೀರಿ. ಪವಿತ್ರರಿಗೆ ವಂದನೆ ಮಾಡಲಾಗುತ್ತದೆ. ಅಪವಿತ್ರರು ಪವಿತ್ರರಿಗೆ ನಮಸ್ಕಾರ
ಮಾಡುತ್ತಾರೆ. ಕನ್ಯೆಯರಿಗೆ ಎಲ್ಲರೂ ತಲೆಬಾಗಿಸುತ್ತಾರೆ. ಬ್ರಹ್ಮಾಕುಮಾರ-ಕುಮಾರಿಯರು ಭಾರತದ
ಉದ್ಧಾರ ಮಾಡುತ್ತಿದ್ದಾರೆ. ಪವಿತ್ರರಾಗಿ ತಂದೆಯಿಂದ ಪವಿತ್ರ ಪ್ರಪಂಚದ ಆಸ್ತಿಯನ್ನು ಪಡೆಯಬೇಕಾಗಿದೆ.
ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಿರಬೇಕಾಗಿದೆ ಆದರೆ ಇದರಲ್ಲಿ ಪರಿಶ್ರಮವಿದೆ. ಕಾಮ
ಮಹಾಶತ್ರುವಾಗಿದೆ. ಕಾಮವಿಲ್ಲದೆ ಇರಲು ಸಾಧ್ಯವಾಗುವುದಿಲ್ಲವೆಂದರೆ ಹೊಡೆಯಲು ಪ್ರಾರಂಭಿಸುತ್ತಾರೆ.
ರುದ್ರಯಜ್ಞದಲ್ಲಿ ಅಬಲೆಯರ ಅತ್ಯಾಚಾರಗಳಾಗುತ್ತವೆ. ಯಾವಾಗ ಅತ್ಯಾಚಾರ ಮಾಡುವವರ ಪಾಪದ ಕೊಡವು
ತುಂಬುತ್ತದೆಯೋ ಆಗ ವಿನಾಶವಾಗಿಬಿಡುತ್ತವೆ. ಅನೇಕ ಮಕ್ಕಳಿದ್ದಾರೆ, ನನ್ನನ್ನೆಂದೂ ನೋಡಿಯೇ ಇಲ್ಲ.
ಆದರೂ ಸಹ ಬರೆಯುತ್ತಾರೆ - ಬಾಬಾ, ನಾವು ನಿಮ್ಮನ್ನು ಅರಿತುಕೊಂಡಿದ್ದೇವೆ. ತಮ್ಮಿಂದ ಆಸ್ತಿಯನ್ನು
ಪಡೆಯಲು ಅವಶ್ಯವಾಗಿ ಪವಿತ್ರವಾಗುತ್ತೇವೆ. ತಂದೆಯೂ ಸಹ ತಿಳಿಸುತ್ತಾರೆ - ಮಕ್ಕಳೇ ಶಾಸ್ತ್ರಗಳನ್ನು
ಓದುವುದು, ತೀರ್ಥಯಾತ್ರೆಗಳನ್ನು ಮಾಡುವುದು. ಇವೆಲ್ಲಾ ಭಕ್ತಿಮಾರ್ಗದ ಶಾರೀರಿಕ ಯಾತ್ರೆಗಳನ್ನಂತೂ
ಮಾಡುತ್ತಲೇ ಬಂದಿದ್ದೀರಿ. ಈಗ ನೀವು ಹಿಂತಿರುಗಿ ಹೋಗಬೇಕಾಗಿದೆ ಆದ್ದರಿಂದ ನನ್ನೊಂದಿಗೆ
ಬುದ್ಧಿಯೋಗವನ್ನು ಇಡಿ. ಬೇರೆಲ್ಲಾ ಸಂಗಗಳನ್ನು ಬಿಟ್ಟು ನನ್ನೊಬ್ಬನ ಜೊತೆ ಬುದ್ಧಿಯೋಗವನ್ನು
ಜೋಡಿಸಿದಾಗ ನಿಮ್ಮನ್ನು ಜೊತೆ ಕರೆದುಕೊಂಡು ಹೋಗುತ್ತೇನೆ ನಂತರ ಸ್ವರ್ಗದಲ್ಲಿ ಕಳುಹಿಸುತ್ತೇನೆ.
ಅದು ಶಾಂತಿಧಾಮವಾಗಿದೆ. ಅಲ್ಲಿ ಆತ್ಮಗಳು ಏನನ್ನೂ ಮಾತನಾಡುವುದಿಲ್ಲ. ಸತ್ಯಯುಗವು ಸುಖಧಾಮ, ಇದು
ದುಃಖಧಾಮವಾಗಿದೆ. ಈಗ ಈ ದುಃಖಧಾಮದಲ್ಲಿರುತ್ತಾ ಶಾಂತಿಧಾಮ, ಸುಖಧಾಮವನ್ನು ನೆನಪು ಮಾಡಿದರೆ ನೀವು
ಸ್ವರ್ಗದಲ್ಲಿ ಬಂದುಬಿಡುತ್ತೀರಿ. ಈಗ ನೀವು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ವರ್ಣಗಳು
ಸುತ್ತುತ್ತಾ ಇರುತ್ತವೆ. ಇದರಲ್ಲಿ ಮೊದಲನೆಯದು ಬ್ರಾಹ್ಮಣ (ಬ್ರಾಹ್ಮಣ ವರ್ಣ) ಶಿಖೆಗೆ ಸಮಾನವಾಗಿದೆ
ನಂತರ ದೇವತಾ ವರ್ಣ, ಕ್ಷತ್ರಿಯ ವರ್ಣ, ಹೇಗೆ ಚಕ್ರ (ಬಾಜೋಲಿ) ದ ಆಟವನ್ನು ಆಡುತ್ತಾರಲ್ಲವೆ.
ನಾವೀಗ ಈ ಚಕ್ರವು ಸುತ್ತುತ್ತಾ ಇರುತ್ತೇವೆ. ಇದನ್ನು ಅರಿತು ಕೊಳ್ಳುವುದರಿಂದ ಚಕ್ರವರ್ತಿ
ರಾಜರಾಗುತ್ತೀರಿ. ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಬೇಕು ಅಂದಮೇಲೆ ಅವಶ್ಯವಾಗಿ ಆ ತಂದೆಯ
ಮತದಂತೆ ನಡೆಯಬೇಕು. ನೀವು ತಿಳಿಸುತ್ತೀರಿ - ನಿರಾಕಾರ ಪರಮಾತ್ಮನು ಬಂದು ಈ ಸಾಕಾರ ಶರೀರದಲ್ಲಿ
ಪ್ರವೇಶ ಮಾಡಿದ್ದಾರೆ. ನಾವಾತ್ಮಗಳು ನಿರಾಕಾರಿಯಾಗಿದ್ದಾಗ ಪರಮಧಾಮದಲ್ಲಿ ಇರುತ್ತೇವೆ. ಈ
ಸೂರ್ಯ-ಚಂದ್ರರೇ ದೀಪಗಳು, ಇದನ್ನೇ ಬೇಹದ್ದಿನ ದಿನ ಮತ್ತು ರಾತ್ರಿಯೆಂದು ಕರೆಯಲಾಗುತ್ತದೆ.
ಸತ್ಯಯುಗ, ತ್ರೇತಾಯುಗವು ದಿನ, ದ್ವಾಪರ ಮತ್ತು ಕಲಿಯುಗವು ರಾತ್ರಿಯಾಗಿದೆ. ತಂದೆಯು ಬಂದು
ಸದ್ಗತಿಯ ಮಾರ್ಗವನ್ನು ತಿಳಿಸುತ್ತಾರೆ. ಎಷ್ಟು ಒಳ್ಳೆಯ ತಿಳುವಳಿಕೆಯು ಸಿಗುತ್ತದೆ. ಸತ್ಯಯುಗದಲ್ಲಿ
ಸುಖವಿರುತ್ತದೆ ನಂತರ ಸ್ವಲ್ಪ-ಸ್ವಲ್ಪವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಸತ್ಯಯುಗದಲ್ಲಿ 16 ಕಲೆ,
ತ್ರೇತಾಯುಗದಲ್ಲಿ 14 ಕಲೆ...... ಇವೆಲ್ಲವನ್ನೂ ತಿಳಿದುಕೊಳ್ಳುವ ಮಾತುಗಳಾಗಿವೆ. ಅಲ್ಲಿ ಎಂದೂ
ಅಕಾಲ ಮೃತ್ಯುವಾಗುವುದಿಲ್ಲ. ಜಗಳ, ಕಲಹ ಮಾಡುವ ಅಳುವ ಮಾತಿಲ್ಲ. ಇದೆಲ್ಲವೂ ವಿದ್ಯೆಯ ಮೇಲೆ
ಆಧಾರಿತವಾಗಿದೆ. ವಿದ್ಯೆಯಿಂದಲೇ ಮನುಷ್ಯರಿಂದ ದೇವತೆಗಳಾಗಬೇಕಾಗಿದೆ. ಭಗವಂತನು ಭಗವಾನ್
ಭಗವತಿಯರನ್ನಾಗಿ ಮಾಡುವುದಕ್ಕೋಸ್ಕರ ಓದಿಸುತ್ತಾರೆ. ಅದಂತೂ ನಯಾ ಪೈಸೆಯ ವಿದ್ಯೆಯಾಗಿದೆ. ಇದು
ವಜ್ರಸಮಾನ ವಿದ್ಯೆಯಾಗಿದೆ. ಕೇವಲ ಈ ಅಂತಿಮ ಜನ್ಮದಲ್ಲಿ ಪವಿತ್ರರಾಗುವ ಮಾತಾಗಿದೆ. ಇದು
ಸಹಜಕ್ಕಿಂತ ಸಹಜ ರಾಜಯೋಗವಾಗಿದೆ. ಬ್ಯಾರಿಸ್ಟರಿ ಇತ್ಯಾದಿಗಳನ್ನೇನೂ ಓದುವುದು ಅಷ್ಟು ಸಹಜವಲ್ಲ.
ಇಲ್ಲಂತೂ ತಂದೆ ಮತ್ತು ಚಕ್ರವನ್ನು ನೆನಪು ಮಾಡಿದರೆ ಚಕ್ರವರ್ತಿ ರಾಜರಾಗಿಬಿಡುತ್ತೀರಿ. ತಂದೆಯನ್ನು
ಅರಿತುಕೊಂಡಿಲ್ಲವೆಂದರೆ ಏನೂ ಅರಿತುಕೊಂಡಿಲ್ಲ. ತಂದೆಯೇನೂ ವಿಶ್ವದ ಮಾಲೀಕರಾಗುವುದಿಲ್ಲ.
ಮಕ್ಕಳನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ತಿಳಿಸುತ್ತಾರೆ - ಇವರೂ (ಬ್ರಹ್ಮಾ)
ಮಹಾರಾಜನಾಗುತ್ತಾರೆ, ನಾನಾಗುವುದಿಲ್ಲ. ನಾನು ನಿರ್ವಾಣಧಾಮದಲ್ಲಿ ಹೋಗಿ ಕುಳಿತುಬಿಡುತ್ತೇನೆ.
ಮಕ್ಕಳನ್ನು ವಿಶ್ವದ ಮಾಲಿಕರನ್ನಾಗಿ ಮಾಡುತ್ತೇನೆ. ಸತ್ಯ-ಸತ್ಯ ನಿಷ್ಕಾಮ ಸೇವೆಯನ್ನು ನಿರಾಕಾರ
ಪರಮಪಿತ ಪರಮಾತ್ಮನೇ ಮಾಡಲು ಸಾಧ್ಯ, ಮನುಷ್ಯರ್ಯಾರೂ ಮಾಡಲು ಸಾಧ್ಯವಿಲ್ಲ. ಈಶ್ವರನನ್ನು ಪಡೆದರೆ
ಇಡೀ ವಿಶ್ವದ ಮಾಲಿಕರಾಗಿಬಿಡುತ್ತೀರಿ. ಭೂಮಿ, ಆಕಾಶ ಎಲ್ಲದರ ಮಾಲಿಕರಾಗಿಬಿಡುತ್ತೀರಿ. ದೇವತೆಗಳು
ವಿಶ್ವದ ಮಾಲಿಕರಾಗಿದ್ದಾರಲ್ಲವೆ. ಈಗಂತೂ ಎಷ್ಟೊಂದು ವಿಭಜನೆಗಳಾಗಿವೆ. ಈಗ ಮತ್ತೆ ತಂದೆಯು
ತಿಳಿಸುತ್ತಾರೆ - ನಾನು ನಿಮ್ಮನ್ನು ವಿಶ್ವದ ಮಾಲಿಕರನ್ನಾಗಿ ಮಾಡುತ್ತೇನೆ. ನೀವೇ
ಸ್ವರ್ಗದಲ್ಲಿದ್ದಿರಿ. ಭಾರತವು ವಿಶ್ವದ ಮಾಲಿಕವಾಗಿತ್ತು, ಈಗ ಕಂಗಾಲಾಗಿದೆ ಪುನಃ ಈ ಮಾತೆಯರ
ಮುಖಾಂತರ ಭಾರತವು ವಿಶ್ವದ ಮಾಲಿಕವಾಗುತ್ತದೆ. ಹೆಚ್ಚಿನ ಸಂಖ್ಯೆಯು ಮಾತೆಯರದ್ದಾಗಿದೆ ಆದ್ದರಿಂದ
ವಂದೇ ಮಾತರಂ ಎಂದು ಹೇಳಲಾಗುತ್ತದೆ.
ಸಮಯವು ಬಹಳ ಕಡಿಮೆಯಿದೆ,
ಈ ಶರೀರದ ಮೇಲೆ ಯಾವುದೇ ಭರವಸೆಯಿಲ್ಲ. ಎಲ್ಲರೂ ಶರೀರ ಬಿಡಬೇಕಾಗಿದೆ. ಈಗ ಎಲ್ಲರದು ವಾನಪ್ರಸ್ಥ
ಸ್ಥಿತಿಯಾಗಿದೆ ಆದ್ದರಿಂದ ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ. ಇದನ್ನು ಭಗವಂತನೇ ಓದಿಸುತ್ತಾರೆ.
ಜ್ಞಾನಸಾಗರ, ಶಾಂತಿಯಸಾಗರ, ಆನಂದಸಾಗರನೆಂದು ಅವರಿಗೆ ಹೇಳಲಾಗುತ್ತದೆ. ತಂದೆಯೇ ಇಂತಹ ಸರ್ವಗುಣ
ಸಂಪನ್ನರು, 16 ಕಲಾ ಸಂಪೂರ್ಣ ಪವಿತ್ರರನ್ನಾಗಿ ಮಾಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನಂಬರ್ವಾರ್ ಪುರುಷಾರ್ಥದನುಸಾರ
ನೆನಪು, ಪ್ರೀತಿ ಮತ್ತು ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಈ ವಿದ್ಯೆಯು
ವಜ್ರಸಮಾನರನ್ನಾಗಿ ಮಾಡುತ್ತದೆ ಆದ್ದರಿಂದ ಇದನ್ನು ಚೆನ್ನಾಗಿ ಓದಬೇಕು, ಬೇರೆಲ್ಲಾ ಸಂಗಗಳನ್ನು
ಬಿಟ್ಟು ಒಬ್ಬ ತಂದೆಯ ಸಂಗವನ್ನು ಸೇರಬೇಕಾಗಿದೆ.
2. ಶ್ರೀಮತದಂತೆ ನಡೆದು
ಸ್ವರ್ಗದ ಪೂರ್ಣ ಆಸ್ತಿಯನ್ನು ಪಡೆಯಬೇಕಾಗಿದೆ. ನಡೆಯುತ್ತಾ-ತಿರುಗಾಡುತ್ತಾ ಸ್ವದರ್ಶನಚಕ್ರವನ್ನು
ತಿರುಗಿಸುತ್ತಾ ಇರಬೇಕಾಗಿದೆ.
ವರದಾನ:
ನನ್ನತನವನ್ನು
ಬಿಟ್ಟು ಟ್ರಸ್ಟಿ ಆಗಿ ಸೇವೆ ಮಾಡುವಂತಹ ಅದಾ ಸಂತುಷ್ಠ ಆತ್ಮ ಭವ
ಲೌಕಿಕ
ಪರಿವಾರದಲ್ಲಿರುತ್ತ, ಸೇವೆ ಮಾಡುತ್ತಾ ಸದಾ ನೆನಪಿರಲಿ ನಾನು ಟ್ರಸ್ಟಿಯಾಗಿದ್ದೇನೆ,
ಸೇವಾಧಾರಿಯಾಗಿದ್ದೇನೆ. ಸೇವೆ ಮಾಡುತ್ತಾ ಸ್ವಲ್ಪವೂ ಸಹ ನನ್ನತನ ಇಲ್ಲದೆ ಇದ್ದಾಗ
ಸಂತುಷ್ಠರಾಗಿರುವಿರಿ. ಯಾವಾಗ ನನ್ನತನವಿರುವುದು ಆಗ ಬೇಸರವಾಗುವಿರಿ, ಯೋಚಿಸುವಿರಿ ನನ್ನ ಮಗ ಈ
ರೀತಿ ಮಾಡುವನಾ?.... ಎಲ್ಲಿ ನನ್ನತನವಿದೆ ಅಲ್ಲಿ ಬೇಸರವಾಗುವಿರಿ ಮತ್ತು ಎಲ್ಲಿ ನಿನ್ನದು-ನನ್ನದು
ಎಂದು ಬರುವುದು ಅಲ್ಲೇ ಈಜಾಡುತ್ತಿರುವಿರಿ. ನಿನ್ನದು-ನಿನ್ನದು ಎಂದು ಹೇಳುವುದು ಎಂದರೇನೆ
ಸ್ವಮಾನದಲ್ಲಿರುವುದು, ನನ್ನದು-ನನ್ನದು ಎಂದು ಹೇಳುವುದು ಎಂದರೆ ಅಭಿಮಾನದಲ್ಲಿ ಬರುವುದು.
ಸ್ಲೋಗನ್:
ಬುದ್ಧಿಯಲ್ಲಿ
ಪ್ರತಿ ಸಮಯ ತಂದೆ ಮತ್ತು ಶ್ರೀಮತದ ಸ್ಮೃತಿ ಇರಲಿ ಆಗ ಹೇಳಲಾಗುವುದು ಹೃದಯ ಪೂರ್ವಕವಾಗಿ ಸಮರ್ಪಿತ
ಆತ್ಮ..