01.05.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ನೀವು
ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆಯಲು ಬಂದಿದ್ದೀರಿ, ಇಲ್ಲಿ ಯಾವುದೇ ಹದ್ದಿನ
ಮಾತಿಲ್ಲ, ನೀವು ಬಹಳ ಉಮ್ಮಂಗದಿಂದ ತಂದೆಯನ್ನು ನೆನಪು ಮಾಡಿ ಆಗ ಹಳೆಯ ಪ್ರಪಂಚವು ಮರೆತು ಹೋಗುವುದು”
ಪ್ರಶ್ನೆ:
ಯಾವ ಒಂದು
ಮಾತನ್ನು ನೀವು ಪದೇ-ಪದೇ ತಮ್ಮೊಂದಿಗೆ ಪಕ್ಕಾ ಮಾಡಿಕೊಳ್ಳಬೇಕು?
ಉತ್ತರ:
ನಾವು
ಆತ್ಮಗಳಾಗಿದ್ದೇವೆ, ನಾವು ಪರಮಾತ್ಮ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಆತ್ಮಗಳು
ಮಕ್ಕಳಾಗಿದ್ದೇವೆ, ಪರಮಾತ್ಮ ತಂದೆಯಾಗಿದ್ದಾರೆ. ಈಗ ಮಕ್ಕಳು ಮತ್ತು ತಂದೆಯ ಮೇಳವಾಗಿದೆ, ಈ
ಮಾತನ್ನು ಪದೇ-ಪದೇ ಪಕ್ಕಾ ಮಾಡಿಕೊಳ್ಳಿ. ಎಷ್ಟು ಆತ್ಮಾಭಿಮಾನಿಯಾಗುತ್ತಾ ಹೋಗುವಿರೋ ಅಷ್ಟು
ದೇಹಾಭಿಮಾನವು ಕಳೆಯುವುದು.
ಗೀತೆ:
ಯಾರು ತಂದೆಯ
ಜೊತೆಯಿದ್ದಾರೆಯೋ ಅವರ ಮೇಲೆ ಜ್ಞಾನದ ಸುರಿಮಳೆ..........
ಓಂ ಶಾಂತಿ.
ಮಕ್ಕಳಿಗೆ ತಿಳಿದಿದೆ- ನಾವು ತಂದೆಯ ಜೊತೆಯಲ್ಲಿ ಕುಳಿತಿದ್ದೇವೆ, ಇವರು ದೊಡ್ಡದಕ್ಕಿಂತ ದೊಡ್ಡ
ತಂದೆ, ಎಲ್ಲರ ತಂದೆಯಾಗಿದ್ದಾರೆ. ತಂದೆಯು ಬಂದಿದ್ದಾರೆ, ತಂದೆಯಿಂದ ಏನು ಸಿಗುತ್ತದೆಯೆಂಬ
ಪ್ರಶ್ನೆಯೇ ಉದ್ಭವಿಸುವುದಿಲ್ಲ ಏಕೆಂದರೆ ತಂದೆಯಿಂದಲೇ ಆಸ್ತಿಯು ಸಿಗುತ್ತದೆ. ಇವರು ಎಲ್ಲರ
ಬೇಹದ್ದಿನ ತಂದೆಯಾಗಿದ್ದಾರೆ, ಇವರಿಂದ ಬೇಹದ್ದಿನ ಸುಖ, ಬೇಹದ್ದಿನ ಸಂಪತ್ತು ಸಿಗುತ್ತದೆ. ಅದು
ಹದ್ದಿನ ಸಂಪತ್ತಾಗಿದೆ, ಕೆಲವರ ಬಳಿ ಸಾವಿರ, ಕೆಲವರ ಬಳಿ ಐದು ಸಾವಿರ, ಇನ್ನೂ ಕೆಲವರ ಬಳಿ
10,20,50 ಕೋಟಿಗಳಿರುತ್ತವೆ. ಅವರೆಲ್ಲರೂ ಲೌಕಿಕ ತಂದೆಯರು ಮತ್ತು ಹದ್ದಿನ ಮಕ್ಕಳಾಗಿರುತ್ತಾರೆ.
ನೀವಿಲ್ಲಿ ತಿಳಿದುಕೊಂಡಿದ್ದೀರಿ- ನಾವು ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆಯಲು
ಬಂದಿದ್ದೇವೆ. ಹೃದಯದಲ್ಲಿ ಆಸೆಯಂತೂ ಇರುತ್ತದೆಯಲ್ಲವೆ. ಶಾಲೆಯ ವಿನಃ ಮತ್ತ್ಯಾವುದೇ ಸತ್ಸಂಗ
ಮುಂತಾದವುಗಳಲ್ಲಿ ಯಾವುದೇ ಆಸೆಗಳಿರುವುದಿಲ್ಲ. ಶಾಂತಿಯು ಬೇಕೆಂದು ಹೇಳುತ್ತಾರೆ, ಅದಂತೂ ಸಿಗಲು
ಸಾಧ್ಯವಿಲ್ಲ. ಇಲ್ಲಿ ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ನಾವು ಹೊಸಪ್ರಪಂಚದ ಮಾಲೀಕರಾಗಲು
ಬಂದಿದ್ದೇವೆ ಇಲ್ಲವೆಂದರೆ ಇಲ್ಲಿಗೇಕೆ ಬರುತ್ತಿದ್ದೆವು. ಮಕ್ಕಳು ಎಷ್ಟೊಂದು ವೃದ್ದಿ
ಹೊಂದುತ್ತಿದ್ದೆವು! ಬಾಬಾ, ನಾವು ವಿಶ್ವದ ಮಾಲೀಕರಾಗಲು ಬಂದಿದ್ದೇವೆ. ಇಲ್ಲಿ ಯಾವುದೇ ಹದ್ದಿನ
ಮಾತಿಲ್ಲ. ಮಕ್ಕಳು ಹೇಳುತ್ತಾರೆ- ಬಾಬಾ, ನಾವು ತಮ್ಮಿಂದ ಬೇಹದ್ದಿನ ಸ್ವರ್ಗದ ಆಸ್ತಿಯನ್ನು ಪಡೆಯಲು
ಬಂದಿದ್ದೇವೆ. ಕಲ್ಪ-ಕಲ್ಪವೂ ಸಹ ನಾವು ತಂದೆಯಿಂದ ಆಸ್ತಿಯನ್ನು ಪಡೆಯುತ್ತೇವೆ ಮತ್ತೆ ಮಾಯಾ ಬೆಕ್ಕು
ಹಸಿದುಕೊಂಡಿರುತ್ತದೆ ಆದ್ದರಿಂದ ಇದಕ್ಕೆ ಸೋಲು-ಗೆಲುವಿನ ಆಟವೆಂದು ಹೇಳಲಾಗುತ್ತದೆ. ತಂದೆಯು
ಕುಳಿತು ಮಕ್ಕಳಿಗೆ ತಿಳಿಸುತ್ತಾರೆ- ಮಕ್ಕಳೂ ಸಹ ನಂಬರ್ವಾರ್ ತಿಳಿದುಕೊಳ್ಳುತ್ತೀರಿ. ಇವರು ಯಾವುದೇ
ಸಾಧು-ಸಂತರಲ್ಲ. ಹೇಗೆ ನಿಮಗೆ ವಸ್ತ್ರಗಳಿವೆಯೋ ಹಾಗೆಯೇ ಇವರಿಗೂ ಇದೆ. ಇವರು ತಂದೆಯಲ್ಲವೆ. ನೀವು
ಯಾರಬಳಿ ಹೋಗುತ್ತೀರೆಂದರೆ ಯಾರಾದರೂ ಕೇಳುತ್ತಾರೆಂದರೆ ಆಗ ನಾವು ಬಾಪ್ದಾದಾರವರ ಬಳಿ
ಹೋಗುತ್ತೇವೆಂದು ತಿಳಿಸಿ. ಅಂದಮೇಲೆ ಇದು ಪರಿವಾರವಾಯಿತು. ಏಕೆ ಹೋಗುತ್ತೀರಿ, ಏನನ್ನು ಪಡೆಯಲು
ಹೋಗುತ್ತೀರಿ ಎಂಬುದನ್ನು ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ ಮತ್ತು ನಾವು ಬಾಪ್ದಾದಾರವರ
ಬಳಿ ಹೋಗುತ್ತೇವೆ, ಅವರಿಂದ ಆಸ್ತಿಯು ಸಿಗುತ್ತದೆ ಎಂಬ ಮಾತನ್ನು ಹೇಳಲು ಸಾಧ್ಯವಿಲ್ಲ. ತಾತನ
ಆಸ್ತಿಗೆ ಎಲ್ಲರೂ ಹಕ್ಕ್ಕುದಾರರಾಗಿದ್ದಾರೆ. ಶಿವತಂದೆಗೆ ಅವಿನಾಶಿ ಮಕ್ಕಳಂತೂ ಆಗಿಯೇ ಇದ್ದೇವೆ
ಹಾಗೂ ಪ್ರಜಾಪಿತ ಬ್ರಹ್ಮಾನ ಮಕ್ಕಳಾಗುವುದರಿಂದ ಇವರಿಗೆ ಮೊಮ್ಮಕ್ಕಳಾಗಿದ್ದೀರಿ, ನೀವೀಗ
ತಿಳಿದುಕೊಂಡಿದ್ದೀರಿ- ನಾವು ಆತ್ಮರಾಗಿದ್ದೇವೆ, ಇದನ್ನು ತಮ್ಮೊಂದಿಗೆ ಬಹಳ ಮನನಮಾಡಿ
ಅರ್ಥಮಾಡಿಕೊಳ್ಳಬೇಕು. ನಾವಾತ್ಮಗಳು ಪರಮಾತ್ಮ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ.
ನಾವಾತ್ಮಗಳು ಬಂದು ತಂದೆಯೊಂದಿಗೆ ಮಿಲನ ಮಾಡಿದ್ದೇವೆ, ಮೊದಲಂತೂ ಶರೀರದ ಪರಿವೆಯಿರಲಿಲ್ಲ. ಈಗಂತೂ
ಆತ್ಮಗಳಾಗಿದ್ದೀರಿ, ಪರಮಾತ್ಮನಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಆತ್ಮಗಳು ಮಕ್ಕಳು,
ಪರಮಾತ್ಮ ತಂದೆಯಾಗಿದ್ದಾರೆ. ಬಹಳ ಸಮಯದ ನಂತರ ತಂದೆ ಮತ್ತು ಮಕ್ಕಳ ಮೇಳವಾಗುತ್ತದೆ ಅದೂ ಒಂದೇ ಬಾರಿ.
ಭಕ್ತಿಮಾರ್ಗದಲ್ಲಿ ಅನೇಕ ಅಯತಾರ್ಥವಾದ ಮೇಳಗಳು ಆಗುತ್ತಿರುತ್ತವೆ ಆದರೆ ಇದು ಎಲ್ಲದಕ್ಕಿಂತ
ಅದ್ಭುತವಾದ ಮೇಳವಾಗಿದೆ. ಆತ್ಮಗಳು ಪರಮಾತ್ಮನಿಂದ ಬಹಳಕಾಲ ಅಗಲಿಹೋಗಿದ್ದರು...... ಯಾರು?
ನೀವಾತ್ಮಗಳು. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ- ನಾವಾತ್ಮಗಳು ನಮ್ಮ ಮಧುರ ಶಾಂತಿಧಾಮದಲ್ಲಿ
ಇರುವವರಾಗಿದ್ದೇವೆ, ನಾವಿಲ್ಲಿ ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಸುಸ್ತಾಗಿದ್ದೇವೆ
ಆದ್ದರಿಂದ ಸನ್ಯಾಸಿ, ಗುರು ಮೊದಲಾದವರ ಬಳಿ ಹೋಗಿ ಶಾಂತಿಯನ್ನು ಬೇಡುತ್ತಾರೆ. ಅವರು ಮನೆ-ಮಠವನ್ನು
ಬಿಟ್ಟು ಕಾಡಿಗೆ ಹೋಗುತ್ತಾರೆ, ಅವರು ಶಾಂತಿಯು ಸಿಗುವುದೆಂದು ತಿಳಿಯುತ್ತಾರೆ ಆದರೆ ಈ ರೀತಿಯಲ್ಲ.
ಈಗಂತೂ ಎಲ್ಲರೂ ನಗರಗಳಿಗೆ ಬಂದುಬಿಟ್ಟಿದ್ದಾರೆ. ಕಾಡಿನಲ್ಲಿ ಗುಹೆಗಳು ಖಾಲಿಯಾಗಿಬಿಟ್ಟಿದೆ.
ಗುರುಗಳಾಗಿ ಕುಳಿತಿದ್ದಾರೆ, ಇಲ್ಲವಾಗಿದ್ದರೆ ಅವರು ನಿವೃತ್ತಿಮಾರ್ಗದ ಜ್ಞಾನವನ್ನು ಕೊಟ್ಟು
ಪವಿತ್ರತೆಯನ್ನು ಕಲಿಸಬೇಕಿತ್ತು. ಇತ್ತೀಚೆಗೆ ನೋಡಿ, ವಿವಾಹ ಮಾಡಿಕೊಳ್ಳುತ್ತಿರುತ್ತಾರೆ.
ನೀವು ಮಕ್ಕಳಂತೂ ತಮ್ಮ
ಯೋಗಬಲದಿಂದ ತಮ್ಮ ಕರ್ಮೇಂದ್ರಿಯಗಳನ್ನು ವಶದಲ್ಲಿಟ್ಟುಕೊಳ್ಳುತ್ತೀರಿ. ಯೋಗಬಲದಿಂದ
ಕರ್ಮೇಂದ್ರಿಯಗಳು ಶೀತಲವಾಗಿಬಿಡುತ್ತವೆ. ಕರ್ಮೇಂದ್ರಿಯಗಳಲ್ಲಿಯೂ ಚಂಚಲತೆಯಾಗುತ್ತದೆಯಲ್ಲವೆ. ಈಗ
ಕರ್ಮೇಂದ್ರಿಯಗಳ ಮೇಲೆ ವಿಜಯಪಡೆಯಬೇಕಾಗಿದೆ, ಯಾವುದೇ ಚಂಚಲತೆ ಆಗಬಾರದು. ಯೋಗಬಲದ ವಿನಃ
ಕರ್ಮೇಂದ್ರಿಯಗಳನ್ನು ವಶಪಡಿಸಿಕೊಳ್ಳುವುದು ಅಸಂಭವವಾಗಿದೆ. ತಂದೆಯು ತಿಳಿಸುತ್ತಾರೆ-
ಕರ್ಮೇಂದ್ರಿಯಗಳ ಚಂಚಲತೆಯು ಯೋಗಬಲದಿಂದಲೇ ವಶದಲ್ಲಿ ಬರುವುದು. ಯೋಗಬಲದ ಶಕ್ತಿಯಂತೂ ಇದೆಯಲ್ಲವೆ.
ಇದರಲ್ಲಿ ಬಹಳ ಶ್ರಮವಾಗುತ್ತದೆ. ಮುಂದೆ ಹೋದಂತೆ ಕರ್ಮೇಂದ್ರಿಯಗಳ ಚಂಚಲತೆಯಿರುವುದಿಲ್ಲ.
ಸತ್ಯಯುಗದಲ್ಲಿ ಯಾವುದೇ ಕೊಳಕು ರೋಗಗಳಿರುವುದಿಲ್ಲ. ಅಲ್ಲಿ ನೀವು ಕರ್ಮೇಂದ್ರಿಯಗಳನ್ನು
ವಶಪಡಿಸಿಕೊಂಡು ಹೋಗುತ್ತೀರಿ ಆದ್ದರಿಂದ ಯಾವುದೇ ಕೆಟ್ಟಮಾತು ಅಲ್ಲಿರುವುದಿಲ್ಲ. ಹೆಸರೇ
ಸ್ವರ್ಗವಾಗಿದೆ, ಅದನ್ನು ಮರೆತಿರುವ ಕಾರಣ ಲಕ್ಷಾಂತರ ವರ್ಷಗಳೆಂದು ಹೇಳಿಬಿಡುತ್ತಾರೆ.
ಇಲ್ಲಿಯವರೆಗೂ ಮಂದಿರಗಳನ್ನು ಕಟ್ಟಿಸುತ್ತಿರುತ್ತಾರೆ. ಒಂದುವೇಳೆ ಲಕ್ಷಾಂತರ ವರ್ಷಗಳಿದ್ದಿದ್ದರೆ
ಮಾತೇ ನೆನಪಿರುತ್ತಿರಲಿಲ್ಲ. ಈ ಮಂದಿರ ಇತ್ಯಾದಿಗಳನ್ನು ಯಾರು ಕಟ್ಟಿಸುತ್ತಿದ್ದರು? ಅಂದಾಗ
ಸತ್ಯಯುಗದಲ್ಲಿ ಕರ್ಮೇಂದ್ರಿಯಗಳು ಶೀತಲವಾಗಿರುತ್ತದೆ, ಯಾವುದೇ ಚಂಚಲತೆಯಿರುವುದಿಲ್ಲ.
ಶಿವತಂದೆಗಂತೂ ಕರ್ಮೇಂದ್ರಿಯಗಳಿಲ್ಲ, ಆದರೆ ಆತ್ಮದಲ್ಲಿ ಪೂರ್ಣ ಜ್ಞಾನವಿದೆಯಲ್ಲವೆ. ಅವರೇ ಶಾಂತಿಯ
ಸಾಗರ, ಸುಖದ ಸಾಗರನಾಗಿದ್ದಾರೆ. ಕರ್ಮೇಂದ್ರಿಯಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲವೆಂದು ಅವರು
ಹೇಳುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ- ಯೋಗಬಲದಿಂದ ನೀವು ಕರ್ಮೇಂದ್ರಿಯಗಳನ್ನು
ವಶಪಡಿಸಿಕೊಳ್ಳಿ, ತಂದೆಯ ನೆನಪಿನಲ್ಲಿರಿ. ನಿಯಮಕ್ಕೆ ವಿರುದ್ಧವಾದ ಯಾವುದೇ ಕೆಲಸವನ್ನು
ಕರ್ಮೇಂದ್ರಿಯಗಳಿಂದ ಮಾಡಬಾರದು. ಇಂತಹ ಪ್ರೀತಿಯ ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಪ್ರೇಮದ
ಕಣ್ಣೀರು ಬರಬೇಕು. ಆತ್ಮವು ಪರಮಾತ್ಮನಲ್ಲಿ ಲೀನವಾಗುವುದಿಲ್ಲ. ತಂದೆಯು ಒಂದೇ ಬಾರಿ ಸಿಗುತ್ತಾರೆ
ಆಗ ಶರೀರದ ಲೋನ್ ತೆಗೆದುಕೊಳ್ಳುತ್ತಾರೆ ಅಂದಮೇಲೆ ತಂದೆಯ ಜೊತೆ ಎಷ್ಟೊಂದು ಪ್ರೀತಿಯಿಂದ ನಡೆಯಬೇಕು.
ಬ್ರಹ್ಮಾತಂದೆಗೂ ಸಹ ಉಮ್ಮಂಗವು ಬಂದಿತಲ್ಲವೆ- ಓಹೋ! ತಂದೆಯು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ
ಅಂದಾಗ ಈ ಹಣ, ಸಂಪತ್ತು ಇತ್ಯಾದಿಯನ್ನು ಏನು ಮಾಡುವುದು, ಎಲ್ಲವನ್ನೂ ಬಿಟ್ಟುಬಿಟ್ಟರು. ಇವರಿಗೆ
ಇದ್ದಕ್ಕಿದ್ದಂತೆಯೇ ಏನಾಯಿತು ಎಂದು ಎಲ್ಲರೂ ಹೇಳತೊಡಗಿದರು. ಎಲ್ಲಾ ಕೆಲಸಗಳನ್ನು ಬಿಟ್ಟು
ಬಂದುಬಿಟ್ಟರು, ಖುಷಿಯ ನಶೆಯೇರಿತು, ಸಾಕ್ಷಾತ್ಕಾರವಾಗತೊಡಗಿತು. ರಾಜ್ಯಭಾಗ್ಯವು ಸಿಗುವುದಿದೆ ಆದರೆ
ಹೇಗೆ ಸಿಗುವುದು, ಏನಾಗುವುದು- ಇದು ಯಾರಿಗೂ ತಿಳಿದಿಲ್ಲ. ಕೇವಲ ಸಿಗುತ್ತದೆಯೆಂದು ತಿಳಿಯಿತು. ಆ
ಖುಷಿಯಲ್ಲಿ ಎಲ್ಲವನ್ನೂ ಬಿಟ್ಟರು. ನಂತರ ನಿಧಾನ-ನಿಧಾನವಾಗಿ ಜ್ಞಾನವು ಸಿಗುತ್ತಾ ಬಂದಿತು. ನೀವು
ಮಕ್ಕಳು ಇಲ್ಲಿ ಶಾಲೆಯಲ್ಲಿ ಕುಳಿತಿದ್ದೀರಿ, ಗುರಿ-ಧ್ಯೇಯವಿದೆಯಲ್ಲವೆ. ಇದು ರಾಜಯೋಗವಾಗಿದೆ,
ಬೇಹದ್ದಿನ ತಂದೆಯಿಂದ ರಾಜ್ಯಭಾಗ್ಯವನ್ನು ಪಡೆಯಲು ಬಂದಿದ್ದೀರಿ. ಮಕ್ಕಳಿಗೆ ತಿಳಿದಿದೆ- ಬಂದು
ನಮ್ಮ ದುಃಖವನ್ನು ದೂರ ಮಾಡು, ಸುಖ ಕೊಡು ಎಂದು ಯಾರನ್ನು ನೆನಪು ಮಾಡುತ್ತಿದ್ದೆವೋ ಅವರಿಂದ ನಾವೀಗ
ಓದುತ್ತೇವೆ. ನಮಗೆ ಕೃಷ್ಣನಂತಹ ಮಗುವಾಗಲೆಂದು ಹೇಳುತ್ತಾರೆ. ಅರೆ! ಕೃಷ್ಣನು ಸತ್ಯಯುಗದಲ್ಲಿ
ಸಿಗುತ್ತಾನಲ್ಲವೆ. ಕೃಷ್ಣನು ವೈಕುಂಠದವನಾಗಿದ್ದಾನೆ, ಅವರನ್ನು ನೀವು ತೂಗುತ್ತೀರಿ ಅಂದಾಗ ಅವರಂತಹ
ಮಗು ವೈಕುಂಠದಲ್ಲಿಯೇ ಸಿಗುತ್ತದೆಯಲ್ಲವೆ. ನೀವೀಗ ವೈಕುಂಠದ ರಾಜ್ಯಭಾಗ್ಯವನ್ನು ಪಡೆಯಲು
ಬಂದಿದ್ದೀರಿ. ಅಲ್ಲಿ ಅವಶ್ಯವಾಗಿ ರಾಜಕುಮಾರ-ಕುಮಾರಿಯರೇ ಸಿಗುತ್ತಾರೆ. ಪವಿತ್ರವಾದ ಮಗುವಾಗಲಿ
ಎಂಬ ಆಸೆಯು ಪೂರ್ಣವಾಗುತ್ತದೆ. ಹಾಗೆ ನೋಡಿದರೆ ಇಲ್ಲಿಯೂ ಅನೇಕ ರಾಜಕುಮಾರ-ಕುಮಾರಿಯರಿದ್ದಾರೆ ಆದರೆ
ನರಕವಾಸಿಗಳಾಗಿದ್ದಾರೆ. ನೀವು ಸ್ವರ್ಗವಾಸಿಗಳನ್ನು ಬಯಸುತ್ತೀರಿ. ವಿದ್ಯೆಯು ಬಹಳ ಸಹಜವಾಗಿದೆ,
ತಂದೆಯು ಬಂದು ತಿಳಿಸುತ್ತಾರೆ- ನೀವು ಬಹಳ ಭಕ್ತಿಮಾಡಿದ್ದೀರಿ, ಬಹಳ ಅಲೆದಿದ್ದೀರಿ. ನೀವು
ಎಷ್ಟೊಂದು ಖುಷಿಯಿಂದ ತೀರ್ಥಸ್ಥಾನಗಳಿಗೆ ಹೋಗುತ್ತೀರಿ. ಅಮರನಾಥಕ್ಕೆ ಹೋಗುತ್ತೀರಿ, ಶಂಕರನು
ಪಾರ್ವತಿಗೆ ಅಮರಕಥೆಯನ್ನು ಹೇಳಿದನೆಂದು ತಿಳಿಯುತ್ತಾರೆ. ಅಮರನಾಥನ ಸತ್ಯಕಥೆಯನ್ನು ನೀವೀಗ
ಕೇಳುತ್ತೀರಿ, ಇದನ್ನು ತಂದೆಯೇ ಹೇಳಿದನೆಂದು ತಿಳಿಯುತ್ತಾರೆ. ಅಮರನಾಥನ ಸತ್ಯಕಥೆಯನ್ನು ನೀವೀಗ
ಕೇಳುತ್ತೀರಿ, ಇದನ್ನು ತಂದೆಯೇ ನಿಮಗೆ ತಿಳಿಸುತ್ತಾರೆ- ನೀವು ತಂದೆಯ ಬಳಿ ಬಂದಿದ್ದೀರಿ. ನಿಮಗೆ
ತಿಳಿದಿದೆ- ಇವರು ಭಾಗ್ಯಶಾಲಿ ರಥವಾಗಿದ್ದಾರೆ, ತಂದೆಯು ಇವರ ರಥವನ್ನು ಬಾಡಿಗೆಯಾಗಿ ಪಡೆದಿದ್ದಾರೆ.
ನಾವು ಆ ತಂದೆಯ ಬಳಿ ಹೋಗುತ್ತೇವೆ, ಅವರ ಶ್ರೀಮತದನುಸಾರವೇ ನಡೆಯುತ್ತೇವೆ. ಏನೇ ಕೇಳಬೇಕೆಂದರೆ
ತಂದೆಯೊಂದಿಗೆ ಕೇಳಬಹುದು. ಬಾಬಾ ನಾವು ಹೇಳುವುದಕ್ಕೇ ಆಗುವುದಿಲ್ಲವೆಂದು ಹೇಳುತ್ತಾರೆ. ಅದಕ್ಕೆ
ತಂದೆಯು ತಿಳಿಸುತ್ತಾರೆ- ನೀವು ಪುರುಷಾರ್ಥ ಮಾಡಿ, ಇದರಲ್ಲಿ ತಂದೆಯೇನು ಮಾಡುವರು?
ತಂದೆಯು ನೀವು ಮಕ್ಕಳಿಗೆ
ಶ್ರೇಷ್ಠರಾಗುವ ಸಹಜಮಾರ್ಗವನ್ನು ತಿಳಿಸುತ್ತಾರೆ- ಮಕ್ಕಳೇ, ಮೊದಲನೆಯದಾಗಿ ಕರ್ಮೇಂದ್ರಿಯಗಳನ್ನು
ವಶಪಡಿಸಿಕೊಳ್ಳಿ. ಎರಡನೆಯದಾಗಿ ದೈವೀಗುಣಗಳನ್ನು ಧಾರಣೆ ಮಾಡಿ. ಯಾರಾದರೂ ಕ್ರೋಧದಿಂದ ಮಾತನಾಡಿದರೆ
ಕೇಳಿಸಿಕೊಳ್ಳಬೇಡಿ, ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟುಬಿಡಿ. ಯಾವ ಮಾತುಗಳು
ಇಷ್ಟವಾಗುವುದಿಲ್ಲವೋ ಅವನ್ನು ಕೇಳಲೇಬೇಡಿ. ಪತಿಯು ಕ್ರೋಧ ಮಾಡುತ್ತಾರೆ, ಹೊಡೆಯುತ್ತಾರೆಂದರೆ ಏನು
ಮಾಡಬೇಕು. ಪತಿಯು ಕ್ರೋದಕ್ಕೊಳಗಾದಾಗ ಅವರ ಮೇಲೆ ಹೂಗಳನ್ನು ಹಾಕಿ ಹಸನ್ಮುಖಿಯಾಗಿರಿ, ಬಹಳಷ್ಟು
ಯುಕ್ತಿಗಳಿವೆ. ಕಾಮೇಶು, ಕ್ರೋದೇಶುಗಳಿರುತ್ತಾರಲ್ಲವೆ. ಅಬಲೆಯರು ಹೋಗುತ್ತಾರೆ, ಒಬ್ಬ ದ್ರೌಪದಿಯ
ಮಾತಲ್ಲ. ಎಲ್ಲರೂ ದ್ರೌಪದಿಗಳಾಗಿದ್ದಾರೆ. ತಂದೆಯು ಅಪವಿತ್ರರಾಗುವುದರಿಂದ ಪಾರು ಮಾಡಲು
ಬಂದಿದ್ದಾರೆ. ತಿಳಿಸುತ್ತಾರೆ- ಮಕ್ಕಳೇ, ಈ ಮೃತ್ಯುಲೋಕದಲ್ಲಿ ಇದು ನಿಮ್ಮ ಅಂತಿಮಜನ್ಮವಾಗಿದೆ.
ನಾನು ನೀವು ಮಕ್ಕಳನ್ನು ಶಾಂತಿಧಾಮದಲ್ಲಿ ಕರೆದುಕೊಂಡು ಹೋಗಲು ಬಂದಿದ್ದೇನೆ. ಅಲ್ಲಿಗೆ ಪತಿತ
ಆತ್ಮಗಳು ಹೋಗಲು ಸಾಧ್ಯವಿಲ್ಲ ಆದ್ದರಿಂದ ನಾನು ಬಂದು ಎಲ್ಲರನ್ನೂ ಪಾವನ ಮಾಡುತ್ತೇನೆ. ಯಾರಿಗೆ
ಯಾವ ಪಾತ್ರವು ಸಿಕ್ಕಿದೆಯೋ ಅದನ್ನು ಪೂರ್ಣ ಮಾಡಿ ಈಗ ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ. ಇಡೀ
ವೃಕ್ಷದ ರಹಸ್ಯವು ನಿಮ್ಮ ಬುದ್ಧಿಯಲ್ಲಿದೆ ಆದರೆ ವೃಕ್ಷದ ಎಲ್ಲಾ ಎಲೆಗಳನ್ನು ಎಣಿಸಲು ಸಾಧ್ಯವಿಲ್ಲ
ಅಂದಾಗ ತಂದೆಯೂ ಸಹ ಮೂಲಮಾತನ್ನು ತಿಳಿಸುತ್ತಾರೆ- ಬೀಜ ಮತ್ತು ವೃಕ್ಷ. ಮನುಷ್ಯರಂತೂ ಅನೇಕರಿದ್ದಾರೆ,
ಒಬ್ಬೊಬ್ಬರಲ್ಲಿಯೂ ಕುಳಿತು ಅರಿತುಕೊಳ್ಳಲು ಸಾಧ್ಯವೇ! ಭಗವಂತನಂತೂ ಅಂತರ್ಯಾಮಿಯಾಗಿದ್ದಾರೆ.
ಪ್ರತಿಯೊಬ್ಬರ ಅಂತರಾಳದ ಮಾತನ್ನು ತಿಳಿದುಕೊಳ್ಳುತ್ತಾರೆಂದು ಮನುಷ್ಯರು ತಿಳಿಸುತ್ತಾರೆ. ಇದೆಲ್ಲವೂ
ಅಂಧಶ್ರದ್ಧೆಯಾಗಿದೆ.
ತಂದೆಯು ತಿಳಿಸುತ್ತಾರೆ-
ನೀವು ನನ್ನನ್ನು ಕರೆಯುತ್ತೀರಿ- ಪತಿತ-ಪಾವನನೇ ಬಂದು ಪಾವನ ಮಾಡಿ, ರಾಜಯೋಗವನ್ನು ಕಲಿಸಿ. ಈ
ರಾಜಯೋಗವನ್ನು ನೀವೀಗ ಕಲಿಯುತ್ತಿದ್ದೀರಿ. ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿ.
ತಂದೆಯು ಈ ಮತವನ್ನು ಕೊಡುತ್ತಾರಲ್ಲವೆ, ತಂದೆಯ ಶ್ರೀಮತ ಮತ್ತು ಗತಿಯು ಎಲ್ಲದಕ್ಕಿಂತ ಭಿನ್ನವಾಗಿದೆ.
ಮತ ಎಂದರೆ ಸಲಹೆ ಅದರಿಂದ ಸದ್ಗತಿಯಾಗುತ್ತದೆ. ಆ ತಂದೆಯೊಬ್ಬರೇ ನಮ್ಮ ಸದ್ಗತಿ ಮಾಡುವವರಾಗಿದ್ದಾರೆ
ಮತ್ತ್ಯಾರೂ ಇಲ್ಲ. ಈ ಸಮಯದಲ್ಲಿಯೇ ಕರೆಯುತ್ತಾರೆ, ಸತ್ಯಯುಗದಲ್ಲಿ ಅವರನ್ನು ಕರೆಯುವುದಿಲ್ಲ.
ಸರ್ವರ ಸದ್ಗತಿದಾತ ಒಬ್ಬ ರಾಮನೆಂದು ಈಗಲೇ ಹೇಳುತ್ತಾರೆ. ಮಾಲೆಯನ್ನು ಜಪಿಸುವಾಗ ಯಾವಾಗ ಹೂವು
ಬರುತ್ತದೆಯೋ ಆಗ ಅದನ್ನು ರಾಮನೆಂದು ಹೇಳಿ ಕಣ್ಣಿಗೆ ಒತ್ತಿಕೊಳ್ಳುತ್ತಾರೆ. ವಾಸ್ತವದಲ್ಲಿ ಒಂದು
ಹೂವನ್ನು (ಶಿವತಂದೆ) ಜಪಿಸಬೇಕಾಗಿದೆ. ಉಳಿದೆಲ್ಲವೂ ಅವರ ಪವಿತ್ರ ರಚನೆಯಾಗಿದೆ. ಮಾಲೆಯನ್ನು ನೀವು
ಬಹಳ ಚೆನ್ನಾಗಿ ಅರಿತಿದ್ದೀರಿ. ಯಾರು ತಂದೆಯ ಜೊತೆಯಲ್ಲಿ ಸೇವೆ ಮಾಡುವರೋ ಅವರದು ಈ ಮಾಲೆಯಾಗಿದೆ.
ಶಿವತಂದೆಗೆ ರಚೈತನೆಂದು ಹೇಳುವುದಿಲ್ಲ, ರಚೈತನೆಂದು ಹೇಳಿದಾಗ ಯಾವ ರಚೈತನೆಂದು ಪ್ರಶ್ನೆಯು
ಉದ್ಭವವಾಗುತ್ತದೆ. ಪ್ರಜಾಪಿತ ಬ್ರಹ್ಮನು ಈಗ ಸಂಗಮಯುಗದಲ್ಲಿಯೇ ಬ್ರಾಹ್ಮಣರನ್ನು ರಚಿಸುತ್ತಾರಲ್ಲವೆ.
ಶಿವತಂದೆಯ ರಚನೆಯಂತೂ ಅನಾದಿಯಾಗಿದೆ ಕೇವಲ ಪತಿತರಿಂದ ಪಾವನರನ್ನಾಗಿ ಮಾಡಲು ತಂದೆಯು ಬರುತ್ತಾರೆ.
ಈಗಂತೂ ಹಳೆಯ ಸೃಷ್ಟಿಯಾಗಿದೆ, ಹೊಸಸೃಷ್ಟಿಯಲ್ಲಿ ದೇವತೆಗಳಿರುತ್ತಾರೆ ಅಂದಮೇಲೆ ಶೂದ್ರರನ್ನು
ದೇವತೆಗಳನ್ನಾಗಿ ಯಾರು ಮಾಡಿದರು! ನೀವೀಗ ಪುನಃ ದೇವತೆಗಳಾಗುತ್ತೀರಿ. ನಿಮಗೆ ತಿಳಿದಿದೆ- ತಂದೆಯು
ನಮ್ಮನ್ನು ಶೂದ್ರರಿಂದ ಬ್ರಾಹ್ಮಣ, ಬ್ರಾಹ್ಮಣರಿಂದ ದೇವತೆಗಳನ್ನಾಗಿ ಮಾಡುತ್ತಾರೆ.
ದೇವತೆಗಳಾಗುವುದಕ್ಕಾಗಿ ನೀವೀಗ ಬ್ರಾಹ್ಮಣರಾಗಿದ್ದೀರಿ. ಮನುಷ್ಯ ಸೃಷ್ಟಿಯನ್ನು ರಚಿಸುವವರು
ಬ್ರಹ್ಮಾನಾದರು, ಇವರು ಮನುಷ್ಯ ಸೃಷ್ಟಿಯ ಮೂಲಪುರುಷನಾಗಿದ್ದಾರೆ. ಆತ್ಮಗಳ ಅವಿನಾಶಿ ತಂದೆಯು
ಶಿವನಾಗಿದ್ದಾರೆ. ಇವೆಲ್ಲಾ ಹೊಸ ಮಾತುಗಳನ್ನು ನೀವು ಕೇಳುತ್ತೀರಿ. ಯಾರು ಬುದ್ಧಿವಂತರಿದ್ದಾರೆಯೋ
ಅವರು ಚೆನ್ನಾಗಿ ಧಾರಣೆ ಮಾಡುತ್ತಾರೆ, ನಿಧಾನ-ನಿಧಾನವಾಗಿ ನಿಮ್ಮದೂ ವೃದ್ಧಿಯಾಗುತ್ತಾ ಹೋಗುವುದು.
ಈಗ ನೀವು ಮಕ್ಕಳಿಗೆ ಸ್ಮೃತಿ ಬಂದಿದೆ- ನಾವು ಮೂಲತಃ ದೇವತೆಗಳಾಗಿದ್ದೆವು, ನಂತರ 84 ಜನ್ಮಗಳನ್ನು
ಹೇಗೆ ತೆಗೆದುಕೊಳ್ಳುತ್ತೇವೆ, ಇದೆಲ್ಲದರ ರಹಸ್ಯವನ್ನು ನೀವು ತಿಳಿದುಕೊಂಡಿದ್ದೀರಿ. ಹೆಚ್ಚಿನ
ಮಾತುಗಳಲ್ಲಿ ಹೋಗುವ ಅವಶ್ಯಕತೆಯೇ ಇಲ್ಲ.
ತಂದೆಯಿಂದ ಪೂರ್ಣ
ಆಸ್ತಿಯನ್ನು ತೆಗೆದುಕೊಳ್ಳಲು ತಂದೆಯು ಮುಖ್ಯ ಮಾತನ್ನು ತಿಳಿಸುತ್ತಾರೆ- ಮೊದಲನೆಯದು ನನ್ನನ್ನು
ನೆನಪು ಮಾಡಿ, ಎರಡನೆಯದಾಗಿ ಪವಿತ್ರರಾಗಿ. ಸ್ವದರ್ಶನಚಕ್ರಧಾರಿಗಳಾಗಿ ಮತ್ತು ತಮ್ಮ ಸಮಾನ
ಮಾಡಿಕೊಳ್ಳಿ. ಎಷ್ಟು ಸಹಜವಾಗಿದೆ! ಕೇವಲ ನೆನಪು ಸ್ಥಿರವಾಗಿರುವುದಿಲ್ಲ, ಜ್ಞಾನವು ಬಹಳ ಸಹಜವಾಗಿದೆ.
ಈಗ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ ನಂತರ ಸತ್ಯಯುಗ ಹೊಸ ಪ್ರಪಂಚದಲ್ಲಿ ದೇವಿ-ದೇವತೆಗಳು
ರಾಜ್ಯಭಾರ ಮಾಡುತ್ತಾರೆ. ಈ ಪ್ರಪಂಚದಲ್ಲಿ ಹಳೆಯದಕ್ಕಿಂತ ಹಳೆಯದು ಈ ದೇವತೆಗಳ ಚಿತ್ರಗಳಾಗಿವೆ ಹಾಗೂ
ಇವರ ಮಂದಿರಗಳಾಗಿವೆ. ನೀವು ಹೇಳುತ್ತೀರಿ- ಹಳೆಯದಕ್ಕಿಂತ ಹಳೆಯದೆಂದರೆ ನಾವು ವಿಶ್ವದ
ಮಹಾರಾಜ-ಮಹಾರಾಣಿಯಾಗಿದ್ದೆವು, ಶರೀರಗಳು ಸಮಾಪ್ತಿಯಾಗುತ್ತವೆ ಉಳಿದಂತೆ ಚಿತ್ರಗಳನ್ನು
ಮಾಡುತ್ತಿರುತ್ತಾರೆ. ಈ ಲಕ್ಷ್ಮೀ-ನಾರಾಯಣರು ಯಾರು ರಾಜ್ಯ ಮಾಡುತ್ತಿದ್ದರು ಅವರು ಎಲ್ಲಿ ಹೋದರು?
ಹೇಗೆ ರಾಜ್ಯವನ್ನು ಪಡೆದುಕೊಂಡರು? ಎಂದು ಯಾರೇನೂ ತಿಳಿದಿಲ್ಲ. ಬಿರ್ಲಾದವರು ಎಷ್ಟೊಂದು
ಮಂದಿರಗಳನ್ನು ಕಟ್ಟಿಸುತ್ತಾರೆ ಆದರೆ ತಿಳಿದುಕೊಂಡಿಲ್ಲ. ಹಣವು ಸಿಗುತ್ತಾಹೋದಂತೆ ಕಟ್ಟಿಸುತ್ತಾ
ಇರುತ್ತಾರೆ. ಇದು ದೇವತೆಗಳ ಕೃಪೆಯೆಂದು ತಿಳಿಯುತ್ತಾರೆ. ಒಬ್ಬ ಶಿವನ ಪೂಜೆಯು ಅವ್ಯಭಿಚಾರಿ
ಭಕ್ತಿಯಾಗಿದೆ. ಜ್ಞಾನವನ್ನು ಕೊಡುವಂತಹ ಜ್ಞಾನಸಾಗರ ಒಬ್ಬರೇ ಆಗಿದ್ದಾರೆ. ಉಳಿದೆಲ್ಲವೂ
ಭಕ್ತಿಮಾರ್ಗವಾಗಿದೆ, ಜ್ಞಾನದಿಂದ ಅರ್ಧಕಲ್ಪ ಸದ್ಗತಿಯಾಗುತ್ತದೆ. ನಂತರ ಭಕ್ತಿಯ
ಅವಶ್ಯಕತೆಯಿರುವುದಿಲ್ಲ. ಜ್ಞಾನ, ಭಕ್ತಿ, ವೈರಾಗ್ಯ. ಈಗ ಭಕ್ತಿಯಿಂದ ಹಳೆಯ ಪ್ರಪಂಚದಿಂದ
ವೈರಾಗ್ಯವಿದೆ. ಈಗ ಹಳೆಯದೆಲ್ಲವನ್ನೂ ಸಮಾಪ್ತಿಯಾಗುವುದಿದೆ, ಇದರಲ್ಲಿ ಆಸಕ್ತಿಯನ್ನೇನಿಡುವುದು?
ಈಗ ನಾಟಕವು ಮುಕ್ತಾಯವಾಗುತ್ತದೆ, ನಾವು ಮನೆಗೆ ಹೋಗುತ್ತೇವೆ ಈ ಖುಷಿಯಿದೆ. ಮೋಕ್ಷವನ್ನು
ಪಡೆಯುವುದೇ ಒಳ್ಳೆಯದು, ಇದರಿಂದ ಮತ್ತೆ ಬರುವುದೇ ಇಲ್ಲ. ಆತ್ಮವು ನೀರಿನ ಗುಳ್ಳೆಯಂತೆ, ಅದು
ಸಾಗರದಲ್ಲಿ ಸೇರಿ ಹೋಗುತ್ತದೆಯೆಂದು ತಿಳಿಯುತ್ತಾರೆ. ಇದೆಲ್ಲವೂ ಸುಳ್ಳು ಮಾತುಗಳಾಗಿವೆ.
ಪಾತ್ರಧಾರಿಯಂತೂ ಅವಶ್ಯವಾಗಿ ಪಾತ್ರವನ್ನಭಿನಯಿಸುವರು, ಯಾರು ಮನೆಯಲ್ಲಿ ಕುಳಿತುಬಿಡುವರೋ ಅವರು
ಪಾತ್ರಧಾರಿಯಾಗಲಿಲ್ಲ ಅಂದಾಗ ಮೋಕ್ಷವು ಯಾರಿಗೂ ಇಲ್ಲ, ಈ ನಾಟಕವು ಅನಾದಿಯಾಗಿ ಮಾಡಲ್ಪಟ್ಟಿದೆ.
ಇಲ್ಲಿ ನಿಮಗೆ ಇಷ್ಟೊಂದು ಜ್ಞಾನವು ಸಿಗುತ್ತದೆ. ಮನುಷ್ಯರ ಬುದ್ಧಿಯಲ್ಲಂತೂ ಏನೂ ಇಲ್ಲ. ನಿಮ್ಮ
ಪಾತ್ರವೇ ಆಗಿದೆ- ತಂದೆಯಿಂದ ಜ್ಞಾನಾಮೃತವನ್ನು ಪಡೆದುಕೊಳ್ಳುವುದು ಮತ್ತು ಆಸ್ತಿಯನ್ನು ಪಡೆಯುವುದು.
ನೀವು ನಾಟಕದಲ್ಲಿ ಬಂಧಿತರಾಗಿದ್ದೀರಿ. ಅವಶ್ಯವಾಗಿ ಪುರುಷಾರ್ಥವನ್ನು ಮಾಡುತ್ತೀರಿ.
ನಾಟಕದಲ್ಲಿದ್ದರೆ ಸಿಗುವುದೆಂದಲ್ಲ, ಹಾಗೆಂದು ಹೇಳಿ ಕುಳಿತುಬಿಡುವುದಲ್ಲ. ಕರ್ಮಮಾಡದೆ ಯಾರೂ
ಇರುವುದಕ್ಕೆ ಸಾಧ್ಯವಿಲ್ಲ. ಕರ್ಮಸನ್ಯಾಸವಾಗಲು ಸಾಧ್ಯವಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಯೋಗಬಲದ
ಶಕ್ತಿಯಿಂದ ತನ್ನ ಕರ್ಮೇಂದ್ರಿಯಗಳನ್ನು ಶೀತಲ ಮಾಡಿಕೊಳ್ಳಬೇಕಾಗಿದೆ, ವಶದಲ್ಲಿಟ್ಟುಕೊಳ್ಳಬೇಕಾಗಿದೆ.
ಕೆಟ್ಟಮಾತುಗಳನ್ನು ಕೇಳಲೂಬಾರದು, ಹೇಳಲೂಬಾರದು. ಯಾವ ಮಾತು ಇಷ್ಟವಾಗುವುದಿಲ್ಲವೋ ಅದನ್ನು
ಒಂದುಕಿವಿಯಿಂದ ಕೇಳಿ ಇನ್ನೊಂದರಿಂದ ತೆಗೆದುಹಾಕಬೇಕು.
2. ತಂದೆಯಿಂದ ಪೂರ್ಣ
ಆಸ್ತಿಯನ್ನು ಪಡೆಯಲು ಸ್ವದರ್ಶನಚಕ್ರಧಾರಿಗಳಾಗಬೇಕು, ಪವಿತ್ರರಾಗಿ ತನ್ನ ಸಮಾನ ಮಾಡಿಕೊಳ್ಳುವ ಸೇವೆ
ಮಾಡಬೇಕಾಗಿದೆ.
ವರದಾನ:
ಮುರುಳಿಯ ಸ್ವರದ
ಮೂಲಕ ಮಾಯೆಯನ್ನು ಸರೆಂಡರ್ ಮಾಡಿಸುವಂತಹ ಮಾಸ್ಟರ್ ಮುರಳಿಧರ್ ಭವ
ಮುರುಳಿಯಂತೂ ಬಹಳ
ಕೇಳಿರುವಿರಿ ಈಗ ಇಂತಹ ಮುರುಳಿಧರರಾಗಿ ಯಾವುದರಿಂದ ಮಾಯೆ ಮುರಳಿಯ ಮುಂದೆ ಬಲಿಹಾರಿಯಾಗಿಬಿಡಬೇಕು.
ಮುರಳಿಯ ರಹಸ್ಯದ ಸ್ವರ ಒಂದುವೇಳೆ ಸದಾ ನುಡಿಯುತ್ತಿದ್ದರೆ ಆಗ ಮಾಯೆ ಸದಾಕಾಲಕ್ಕಾಗಿ
ಬಲಿಹರಿಯಾಗಿಬಿಡುತ್ತದೆ. ಮಾಯೆಯ ಮುಖ್ಯ ಸ್ವರೂಪ ಕಾರಣದ ರೂಪದಲ್ಲಿ ಬರುತ್ತದೆ. ಯಾವಾಗ ಮುರಳಿಯ
ಮೂಲಕ ಕಾರಣದ ನಿವಾರಣೆ ಸಿಕ್ಕಿಬಿಡುತ್ತದೆ ಆಗ ಮಾಯೆ ಸದಾಕಾಲಕ್ಕಾಗಿ ಸಮಾಪ್ತಿಯಾಗಿಬಿಡುತ್ತದೆ.
ಕಾರಣ ಸಮಾಪ್ತಿಯಾದರೆ ಮಾಯೆನೂ ಸಹ ಸಮಾಪ್ತಿ.
ಸ್ಲೋಗನ್:
ಅನುಭವೀ
ಸ್ವರೂಪರಾಗಿ ಆಗ ನಿಮ್ಮ ಮುಖದಿಂದ ಅದೃಷ್ಟಶಾಲಿಯ ಹೊಳಪು ಕಂಡುಬರುತ್ತದೆ.
ಅವ್ಯಕ್ತ ಸೂಚನೆ:
ಆತ್ಮಿಕ ಘನತೆ ಮತ್ತು ಪವಿತ್ರತೆಯ ವ್ಯಕ್ತಿತ್ವವನ್ನು ಧಾರಣೆ ಮಾಡಿ.
ಸಂಗಮಯುಗೀ ಬ್ರಾಹ್ಮಣ
ಜೀವನದ ವಿಶೇಷತೆ ಪವಿತ್ರತೆಯಾಗಿದೆ. ಪ್ರವೃತ್ತಿಯಲ್ಲಿರುತ್ತಾ ಅಪವಿತ್ರತೆಯಿಂದ
ನಿವೃತ್ತರಾಗಿರುವುದು, ಸ್ವಪ್ನ ಮಾತ್ರದಲ್ಲಿಯೂ ಅಪವಿತ್ರತೆಯ ಸಂಕಲ್ಪದಿಂದ ಮುಕ್ತರಾಗಿರುವುದು –
ಇದೇ ವಿಶ್ವವನ್ನು ಚಾಲೆಂಜ್ ಮಾಡುವ ಸಾಧನವಾಗಿದೆ, ಇದೇ ನೀವು ಬ್ರಾಹ್ಮಣರ ಆತ್ಮಿಕ ಘನತೆ ಮತ್ತು
ವ್ಯಕ್ತಿತ್ವವಾಗಿದೆ.