08.06.25 Avyakt Bapdada
Kannada
Murli 15.11.2005 Om Shanti Madhuban
“ಸತ್ಯಹೃದಯದಿಂದ ತಂದೆ
ಹಾಗೂ ಪರಿವಾರದ ಸ್ನೇಹಿಗಳಾಗಿ ಪರಿಶ್ರಮದಿಂದ ಮುಕ್ತರಾಗುವ ಪ್ರತಿಜ್ಞೆ ಮಾಡಿ ಮತ್ತು ಲಾಭವನ್ನು
ಪಡೆಯಿರಿ”
ಇಂದು ಬಾಪ್ದಾದಾ ತಮ್ಮ
ನಾಲ್ಕಾರು ಕಡೆಯ ಶ್ರೇಷ್ಠ ಸ್ವರಾಜ್ಯಾಧಿಕಾರಿ, ಸ್ವಮಾನಧಾರಿ ಮಕ್ಕಳನ್ನು ನೋಡುತ್ತಿದ್ದಾರೆ.
ತಂದೆಯು ಮಕ್ಕಳಿಗೆ ತಮಗಿಂತಲೂ ಶ್ರೇಷ್ಠ ಸ್ವಮಾನವನ್ನು ಕೊಟ್ಟಿದ್ದಾರೆ. ಪ್ರತಿಯೊಬ್ಬ ಮಗುವನ್ನು
ಚರಣಗಳಿಗೆ ಬೀಳುವುದರಿಂದ ಮುಕ್ತನನ್ನಾಗಿ ಮಾಡಿ ತಲೆಯ ಕಿರೀಟವನ್ನಾಗಿ ಮಾಡಿಕೊಂಡರು. ಸ್ವಯಂನ್ನು
ಸದಾ ಪ್ರಿಯ ಮಕ್ಕಳ ಸೇವಾಧಾರಿಯೆಂದು ಕರೆಸಿಕೊಂಡರು. ಮಕ್ಕಳಿಗೆ ಇಷ್ಟು ದೊಡ್ಡ ಅಥಾರಿಟಿಯ
ಸ್ವಮಾನವನ್ನು ಕೊಟ್ಟಿದ್ದಾರೆ. ಅಂದಾಗ ಪ್ರತಿಯೊಬ್ಬರೂ ತಮ್ಮನ್ನು ತಾವು ಇಷ್ಟು ಸ್ವಮಾನಧಾರಿ ಎಂದು
ತಿಳಿಯುತ್ತೀರಾ? ಸ್ವಮಾನಧಾರಿಗಳ ವಿಶೇಷ ಲಕ್ಷಣಗಳು ಏನಿರುತ್ತವೆ? ಯಾರೆಷ್ಟು
ಸ್ವಮಾನಧಾರಿಯಾಗಿರುವರೋ ಅಷ್ಟೇ ಸರ್ವರಿಗೆ ಸಮ್ಮಾನ ನೀಡುವವರಾಗಿರುತ್ತಾರೆ. ಎಷ್ಟು ಸ್ವಮಾನಧಾರಿಗಳೋ
ಅಷ್ಟೇ ನಿರ್ಮಾನ, ಸರ್ವರ ಸ್ನೇಹಿಯಾಗಿರುವರು. ಸ್ವಮಾನಧಾರಿಗಳ ಚಿಹ್ನೆಯೇನೆಂದರೆ - ತಂದೆಗೆ
ಪ್ರಿಯರು, ಜೊತೆಜೊತೆಗೆ ಸರ್ವರಿಗೂ ಪ್ರಿಯರಾಗಿರುವರು. ಹದ್ದಿನ ಪ್ರಿಯರಲ್ಲ, ಬೇಹದ್ದಿನ ಪ್ರಿಯರು.
ಹೇಗೆ ತಂದೆಯು ಸರ್ವರಿಗೆ ಪ್ರಿಯರಾಗಿದ್ದಾರೆ, ಭಲೆ ಒಂದು ತಿಂಗಳಿನ ಮಗುವಿರಬಹುದು ಅಥವಾ
ಆದಿರತ್ನಗಳಿರಬಹುದು ಆದರೆ ಪ್ರತಿಯೊಬ್ಬರೂ ಸಹ ‘ನಾನು ತಂದೆಯವನು, ತಂದೆಯು ನನ್ನವರು’ ಎಂದು
ಹೃದಯದಿಂದ ಒಪ್ಪಿಕೊಳ್ಳುತ್ತಾರೆ. ಇದು ಸರ್ವರಿಗೆ ಪ್ರಿಯರಾಗುವ, ಶ್ರೇಷ್ಠಸ್ವಮಾನದ ಚಿಹ್ನೆಯಾಗಿದೆ
ಏಕೆಂದರೆ ಇಂತಹ ಮಕ್ಕಳು ತಂದೆಯನ್ನು ಫಾಲೋ ಮಾಡುವವರಾಗಿದ್ದಾರೆ. ನೋಡಿ, ತಂದೆಯು ಪ್ರತೀ ವರ್ಗದ
ಮಕ್ಕಳಿಗೆ ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೆ ಸ್ವಮಾನ ನೀಡಿದರು. ಯುವಕರಿಗೆ ವಿನಾಶಕಾರಿಯಿಂದ
ವಿಶ್ವಕಲ್ಯಾಣಕಾರಿಯ ಸ್ವಮಾನವನ್ನು ಕೊಟ್ಟರು. ಮಹಾನರನ್ನಾಗಿ ಮಾಡಿದರು. ಪ್ರವೃತ್ತಿ ಮಾರ್ಗದವರಿಗೆ
ಮಹಾತ್ಮರು, ದೊಡ್ಡ-ದೊಡ್ಡ ಜಗದ್ಗುರುಗಳಿಗಿಂತಲೂ ಶ್ರೇಷ್ಠ, ಪ್ರವೃತ್ತಿಯಲ್ಲಿರುತ್ತಾ ಪರವೃತ್ತಿಯ
ಮಹಾತ್ಮರೂ ಸಹ ತಲೆಬಾಗುವಂತೆ ಮಾಡಿದರು. ಕನ್ಯೆಯರಿಗೆ ಶಿವಶಕ್ತಿಸ್ವರೂಪದ ಸ್ವಮಾನವನ್ನು ನೆನಪಿಗೆ
ತರಿಸಿದರು ಹಾಗೂ ಮಾಡಿದರು. ವೃದ್ಧರಿಗೆ ಬ್ರಹ್ಮಾತಂದೆಯ ಜೊತೆಗಾರ ಅನುಭವಿಯ ಸ್ವಮಾನವನ್ನು ಕೊಟ್ಟರು.
ಇದೇರೀತಿ ಸ್ವಮಾನಧಾರಿ ಮಕ್ಕಳೂ ಸಹ ಪ್ರತಿಯೊಬ್ಬ ಆತ್ಮನನ್ನೂ ಸ್ವಮಾನದಿಂದ ನೋಡುತ್ತಾರೆ. ಕೇವಲ
ನೋಡುವುದಲ್ಲ, ಸಂಬಂಧ-ಸಂಪರ್ಕದಲ್ಲಿ ಬರುತ್ತಾರೆ ಏಕೆಂದರೆ ಸ್ವಮಾನವು ದೇಹಾಭಿಮಾನವನ್ನು
ಕಳೆಯುವಂತದ್ದಾಗಿದೆ. ಎಲ್ಲಿ ಸ್ವಮಾನವಿರುವುದೋ ಅಲ್ಲಿ ದೇಹದ ಅಭಿಮಾನವಿರುವುದಿಲ್ಲ.
ದೇಹಾಭಿಮಾನವನ್ನು ಕಳೆಯುವ ಬಹಳ ಸಹಜ ಸಾಧನವಾಗಿದೆ - ಸದಾ ಸ್ವಮಾನದಲ್ಲಿರುವುದು, ಸದಾ
ಪ್ರತಿಯೊಬ್ಬರನ್ನೂ ಸ್ವಮಾನದಿಂದ ನೋಡುವುದು. ಭಲೆ ಕಾಲಾಳು ಆಗಿರಬಹುದು, ಭಲೆ 16000ದ ಮಾಲೆಯಲ್ಲಿ
ಕೊನೆಯವರಿರಬಹುದು ಆದರೆ ಆ ಕೊನೆಯವರಲ್ಲಿಯೂ ಸಹ ಡ್ರಾಮಾನುಸಾರ ತಂದೆಯ ಮೂಲಕ ಯಾವುದಾದರೊಂದು
ವಿಶೇಷತೆಯಿದೆ ಆದ್ದರಿಂದ ಸ್ವಮಾನಧಾರಿಗಳು ವಿಶೇಷತೆಯನ್ನು ನೋಡಿ ಸ್ವಮಾನ ಕೊಡುತ್ತಾರೆ. ಅವರ
ದೃಷ್ಟಿ, ವೃತ್ತಿ, ಕೃತಿಯಲ್ಲಿ ಪ್ರತಿಯೊಬ್ಬರ ವಿಶೇಷತೆಯು ಸಮಾವೇಶವಾಗಿರುತ್ತದೆ. ಯಾರೆಲ್ಲಾ
ತಂದೆಯ ಮಕ್ಕಳಾದರು ಅವರು ವಿಶೇಷ ಆತ್ಮನಾಗಿದ್ದಾರೆ. ನಂಬರ್ವಾರ್ ಆಗಿದ್ದರೂ ಸಹ ಪ್ರಪಂಚದ
ಕೋಟಿಯಲ್ಲಿ ಕೆಲವರು, ಕೆಲವರಲ್ಲಿಯೂ ಕೆಲವರಾಗಿದ್ದಾರೆ ಅಂದಾಗ ಎಲ್ಲರೂ ತಮ್ಮನ್ನು ತಾವು ಹೀಗೆ
ವಿಶೇಷ ಆತ್ಮನೆಂದು ತಿಳಿಯುತ್ತೀರಾ? ಸ್ವಮಾನದಲ್ಲಿ ಸ್ಥಿತರಾಗಿರಬೇಕಾಗಿದೆ. ದೇಹಾಭಿಮಾನದಲ್ಲಲ್ಲ,
ಸ್ವಮಾನದಲ್ಲಿ.
ತಂದೆಗೆ ಪ್ರತಿಯೊಬ್ಬ
ಮಗುವಿನೊಂದಿಗೆ ಪ್ರೀತಿಯಿದೆ - ಏಕೆ? ಏಕೆಂದರೆ ತಂದೆಗೆ ತಿಳಿದಿದೆ - ಮಕ್ಕಳು ನನ್ನನ್ನು ಅರಿತು
ನನ್ನವರಾದರಲ್ಲವೆ. ಇಂದು ಈ ಮೇಳದಲ್ಲಿ ಮೊದಲನೆಬಾರಿ ಬಂದಿರಬಹುದು ಆದರೂ ಬಾಬಾ ಎಂದು ಹೇಳಿದಿರಿ
ಅಂದಮೇಲೆ ತಂದೆಯ ಪ್ರೀತಿಗೆ ಪಾತ್ರರಾಗಿದ್ದೀರಿ. ಬಾಪ್ದಾದಾರವರಿಗೆ ನಾಲ್ಕಾರುಕಡೆಯ ಎಲ್ಲಾ ಮಕ್ಕಳೂ
ಸಹ ಪ್ರಿಯರಾಗಿದ್ದಾರೆ. ಹಾಗೆ0iÉುೀ ನೀವೂ ಸಹ ಫಾಲೋ ಫಾದರ್ ಮಾಡಿ. ಯಾರೂ ಅಪ್ರಿಯರಿಲ್ಲ, ಸರ್ವರೂ
ಪ್ರಿಯರಾಗಿದ್ದಾರೆ. ನೋಡಿ, ಯಾವುದೇ ಮಗು ನನ್ನ ಬಾಬಾ ಎಂದು ಹೇಳುತ್ತದೆಯೆಂದರೆ ಈ ನನ್ನತನವನ್ನು
ಯಾರು ತಂದರು? ಸ್ನೇಹವು ತಂದಿತಲ್ಲವೆ. ಈಗ ಯಾರೆಲ್ಲರೂ ಕುಳಿತಿದ್ದೀರೋ ಎಲ್ಲರೂ
ತಿಳಿದುಕೊಳ್ಳುತ್ತೀರಿ - ಸ್ನೇಹವು ತಂದೆಯ ಮಕ್ಕಳನ್ನಾಗಿ ಮಾಡಿತೆಂದು. ತಂದೆಯ ಸ್ನೇಹವು
ಅಯಸ್ಕಾಂತವಾಗಿದೆ. ಸ್ನೇಹದ ಅಯಸ್ಕಾಂತದಿಂದ ತಂದೆಯ ಮಕ್ಕಳಾಗಿಬಿಟ್ಟಿರಿ. ಹೃದಯದ ಸ್ನೇಹ,
ನಾಮಮಾತ್ರಕ್ಕೆ ಸ್ನೇಹವಲ್ಲ. ಹೃದಯದ ಸ್ನೇಹವು ಈ ಬ್ರಾಹ್ಮಣ ಜೀವನದ ತಳಪಾಯವಾಗಿದೆ. ಮಿಲನ ಮಾಡಲು
ಏಕೆ ಬರುತ್ತೀರಿ? ಸ್ನೇಹವೇ ಕರೆತಂದಿತಲ್ಲವೆ. ಯಾರೆಲ್ಲರೂ ಕುಳಿತಿದ್ದೀರಿ, ಬಂದಿದ್ದೀರಿ, ಏಕೆ
ಬಂದಿದ್ದೀರಿ? ಸ್ನೇಹವು ಸೆಳೆಯಿತಲ್ಲವೆ. ಆ ಸ್ನೇಹವು ಎಷ್ಟಿದೆ? 100% ಇದೆಯೋ ಅಥವಾ ಕಡಿಮೆಯಿದೆಯೋ?
ನಾವು ಸ್ನೇಹದಲ್ಲಿ 100% ಇದೆಯೆಂದು ತಿಳಿಯುವವರು ಕೈಯನ್ನೆತ್ತಿ. ಸ್ನೇಹದಲ್ಲಿ 100%, ಸ್ವಲ್ಪವೂ
ಕಡಿಮೆಯಿಲ್ಲವೆ? ಒಳ್ಳೆಯದು- ಅಂದಾಗ ಇಷ್ಟೇ ಸ್ನೇಹವು ಪರಸ್ಪರ ಬ್ರಾಹ್ಮಣರಲ್ಲಿಯೂ ಇದೆಯೇ? ಇದಕ್ಕೆ
ಕೈಯನ್ನೆತ್ತಿ. ಇದರಲ್ಲಿ ಪರ್ಸೆಂಟೇಜ್ ಇದೆ. ಹೇಗೆ ತಂದೆಗೆ ಎಲ್ಲರ ಜೊತೆಗೆ ಸ್ನೇಹವಿದೆಯೋ ಅದೇರೀತಿ
ಮಕ್ಕಳಿಗೂ ಸರ್ವರೊಂದಿಗೆ ಸ್ನೇಹ, ಸರ್ವರ ಸ್ನೇಹಿಯಾಗಿರಿ. ಅನ್ಯರ ನಿರ್ಬಲತೆಗಳನ್ನು ನೋಡಬೇಡಿ.
ಒಂದುವೇಳೆ ಯಾರಾದರೂ ಸಂಸ್ಕಾರಕ್ಕೆ ವಶೀಭೂತರಾಗಿದ್ದರೆ ನೀವು ಯಾರನ್ನು ಫಾಲೋ ಮಾಡಬೇಕು - ವಶೀಭೂತ
ಆತ್ಮಗಳನ್ನೇ? ತಾವು ವಶೀಭೂತ ಮಂತ್ರವನ್ನು ಕೊಡುವವರಾಗಿದ್ದೀರಿ, ವಶೀಭೂತರಿಂದ ಅವರನ್ನು ಬಿಡಿಸುವ
ಮಂತ್ರವನ್ನು ಕೊಡುವವರು, ಮುಕ್ತಗೊಳಿಸುವವರಾಗಿದ್ದೀರಲ್ಲವೆ. ಅಥವಾ ನೋಡುವವರಾಗಿದ್ದೀರೋ?
ಕಾಣುತ್ತದೆಯೇ? ಒಂದುವೇಳೆ ಯಾವುದೇ ಕೆಟ್ಟವಸ್ತು ಕಾಣಿಸಿದರೂ ಸಹ ಏನು ಮಾಡುತ್ತೀರಿ? ನೋಡುತ್ತಾ
ಇರುತ್ತೀರೋ ಅಥವಾ ದೂರ ಸರಿಯುತ್ತೀರೋ? ಏಕೆಂದರೆ ಬಾಪ್ದಾದಾ ನೋಡಿದೆವು - ಯಾರು ಹೃದಯದ
ಸ್ನೇಹಿಗಳಿದ್ದಾರೆಯೋ, ತಂದೆಯ ಹೃದಯದ ಸ್ನೇಹಿಗಳು ಸರ್ವರ ಸ್ನೇಹಿಗಳು ಅವಶ್ಯವಾಗಿ ಆಗಿರುತ್ತಾರೆ.
ಹೃದಯದ ಸ್ನೇಹವು ಸಂಪನ್ನ ಮತ್ತು ಸಂಪೂರ್ಣರಾಗುವ ಬಹಳ ಸಹಜ ವಿಧಿಯಾಗಿದೆ. ಭಲೆ ಯಾರೆಷ್ಟಾದರೂ
ಜ್ಞಾನಿಯಾಗಿರಲಿ ಒಂದುವೇಳೆ ಹೃದಯದ ಸ್ನೇಹವು ಇಲ್ಲವೆಂದರೆ ಬ್ರಾಹ್ಮಣಜೀವನದಲ್ಲಿ ರಮಣೀಕ
ಜೀವನವೆನಿಸುವುದಿಲ್ಲ, ನೀರಸ ಜೀವನವೆನಿಸುತ್ತದೆ ಏಕೆಂದರೆ ಜ್ಞಾನದಲ್ಲಿ ಸ್ನೇಹವಿಲ್ಲದೆ ಕೇವಲ
ಜ್ಞಾನವಿದ್ದರೆ ಆ ಜ್ಞಾನದಲ್ಲಿ ಏಕೆ, ಏನು ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ ಸ್ನೇಹವು
ಜ್ಞಾನಸಹಿತವಾಗಿದ್ದರೆ ಸ್ನೇಹಿಯು ಸದಾ ಸ್ನೇಹದಲ್ಲಿ ಲವಲೀನರಾಗಿರುತ್ತಾರೆ. ಸ್ನೇಹಿಯನ್ನು ನೆನಪು
ಮಾಡಲು ಪರಿಶ್ರಮಪಡಬೇಕಾಗುವುದಿಲ್ಲ, ಕೇವಲ ಜ್ಞಾನಿಯಾಗಿದ್ದು ಸ್ನೇಹವಿಲ್ಲವೆಂದರೆ
ಪರಿಶ್ರಮಪಡಬೇಕಾಗುತ್ತದೆ. ಕೇವಲ ಜ್ಞಾನವಿರುವವರು ಪರಿಶ್ರಮದ ಫಲವನ್ನು ತಿನ್ನುತ್ತಾರೆ, ಸ್ನೇಹಿಗಳು
ಪ್ರೀತಿಯ ಫಲವನ್ನು ತಿನ್ನುತ್ತಾರೆ. ಜ್ಞಾನವು ಬೀಜವಾಗಿದೆ ಆದರೆ ಸ್ನೇಹವು ಜಲವಾಗಿದೆ. ಒಂದುವೇಳೆ
ಬೀಜಕ್ಕೆ ಸ್ನೇಹದ ನೀರು ಸಿಗದಿದ್ದರೆ ಅದರಿಂದ ಫಲ ಬರುವುದಿಲ್ಲ.
ಇಂದು ಬಾಪ್ದಾದಾ ಸರ್ವ
ಮಕ್ಕಳ ಹೃದಯದ ಸ್ನೇಹವನ್ನು ಪರಿಶೀಲನೆ ಮಾಡುತ್ತಿದ್ದರು. ತಂದೆಯೊಂದಿಗೆ ಇರಬಹುದು,
ಸರ್ವರೊಂದಿಗಿರಬಹುದು. ತಾವೆಲ್ಲರೂ ತಮ್ಮನ್ನು ಏನೆಂದು ತಿಳಿಯುತ್ತೀರಿ? ಸ್ನೇಹಿಗಳಾಗಿದ್ದೀರಾ?
ಆಗಿದ್ದೀರಾ? ಯಾರು ತಮ್ಮನ್ನು ತಾವು ಹೃದಯದ ಸ್ನೇಹಿಗಳೆಂದು ತಿಳಿಯುತ್ತೀರೋ ಅವರು ಕೈಯೆತ್ತಿರಿ.
ಸರ್ವರಿಗೆ ಸ್ನೇಹಿಗಳಾಗಿದ್ದೀರಾ? ಒಳ್ಳೆಯದು. ತಂದೆಗೆ ಹೃದಯದ ಸ್ನೇಹಿಗಳಾಗಿದ್ದೀರಿ, ಹಾಗೆಯೇ
ಸರ್ವರಿಗೂ ಸ್ನೇಹಿಗಳಾಗಿದ್ದೀರಾ? ಇವರು ನನ್ನ ಸಹೋದರ, ನನ್ನ ಸಹೋದರಿಯೆಂದು ಪ್ರತಿಯೊಬ್ಬರೂ
ತಿಳಿದುಕೊಳ್ಳುವಿರಾ? ಇವರು ನನ್ನವರು ಎಂದು ಪ್ರತಿಯೊಬ್ಬರೂ ತಿಳಿದುಕೊಳ್ಳುತ್ತಾರೆಯೇ? ಅಥವಾ
ಕೆಲಕೆಲವರು ಮಾತ್ರವೇ ತಿಳಿದುಕೊಳ್ಳುತ್ತಾರೆಯೇ? ಹೇಗೆ ತಂದೆಯ ಸ್ನೇಹದಲ್ಲಿ ಹೌದು ತಂದೆಯ
ಸ್ನೇಹಿಗಳಾಗಿದ್ದೇವೆ ಎಂದು ಎಲ್ಲರೂ ಕೈಯೆತ್ತುತ್ತೀರಿ. ಹಾಗೆಯೇ ತಾವು ಪ್ರತಿಯೊಬ್ಬರಿಗಾಗಿ ಹೌದು,
ಇವರು ಸರ್ವರ ಸ್ನೇಹಿಯಾಗಿದ್ದಾರೆ ಎಂದು ಕೈಯೆತ್ತುತ್ತೀರಾ? ಈ ಸರ್ಟಿಫಿಕೇಟ್ ಸಿಗುತ್ತದೆಯೇ?
ಏಕೆಂದರೆ ಬಾಪ್ದಾದಾ ಮೊದಲೂ ಸಹ ತಿಳಿಸಿದ್ದೆವು - ಕೇವಲ ತಂದೆಯಿಂದ ಸರ್ಟಿಫಿಕೇಟ್
ತೆಗೆದುಕೊಳ್ಳುವುದಲ್ಲ, ಬ್ರಾಹ್ಮಣ ಪರಿವಾರದಿಂದಲೂ ತೆಗೆದುಕೊಳ್ಳಬೇಕಾಗಿದೆ ಏಕೆಂದರೆ ಈ ಸಮಯದಲ್ಲಿ
ತಂದೆಯು ಧರ್ಮ ಮತ್ತು ರಾಜ್ಯ ಎರಡನ್ನೂ ಜೊತೆಜೊತೆಯಲ್ಲಿ ಸ್ಥಾಪನೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ
ಕೇವಲ ತಂದೆಯಿರುವುದಿಲ್ಲ, ಪರಿವಾರವೂ ಇರುತ್ತದೆ. ತಂದೆಗೂ ಪ್ರಿಯರು, ಪರಿವಾರಕ್ಕೂ ಪ್ರಿಯರಾಗಿರಿ.
ಜ್ಞಾನಿಗಳಂತು ಆಗಿದ್ದೀರಿ
ಆದರೆ ಜೊತೆಯಲ್ಲಿ ಸ್ನೇಹಿಗಳಾಗುವುದೂ ಸಹ ಬಹಳ ಅವಶ್ಯಕವಾಗಿದೆ. ಸ್ವಮಾನದಲ್ಲಿರುವುದು ಮತ್ತು
ಸನ್ಮಾನ ಕೊಡುವುದು - ಇವೆರಡೂ ಅತ್ಯವಶ್ಯಕವಾಗಿದೆ. ತಂದೆಯು ಪ್ರತಿಯೊಬ್ಬ ಮಗುವಿಗೆ ಬ್ರಾಹ್ಮಣ
ಜನ್ಮವನ್ನು ಪಡೆಯುತ್ತಿದ್ದಂತೆಯೇ ಸನ್ಮಾನ ನೀಡಿದರು ಆದುದರಿಂದಲೇ ಶ್ರೇಷ್ಠರಾದಿರಿ. ಈ
ಒಂದುಜನ್ಮದಲ್ಲಿ ಸನ್ಮಾನವನ್ನು ಕೊಡುವುದರಿಂದ ಇಡೀ ಕಲ್ಪ ಅದರ ಪ್ರಾಲಬ್ಧವಾಗಿ ಸನ್ಮಾನವು
ಪ್ರಾಪ್ತವಾಗುತ್ತದೆ. ಅರ್ಧಕಲ್ಪದವರೆಗೆ ರಾಜ್ಯಾಧಿಕಾರಿಯಾಗುವ ಸನ್ಮಾನ ಸಿಗುತ್ತದೆ. ಇನ್ನರ್ಧಕಲ್ಪ
ಭಕ್ತಿಯಲ್ಲಿ ಭಕ್ತರ ಮೂಲಕ ಸನ್ಮಾನ ಸಿಗುತ್ತದೆ ಆದರೆ ಈ ಇಡೀ ಕಲ್ಪದಲ್ಲಿ ಸನ್ಮಾನಧಾರಿಗಳಾಗುವ
ಆಧಾರವೇನೆಂದರೆ ಈ ಒಂದುಜನ್ಮದಲ್ಲಿ ಸನ್ಮಾನ ಕೊಡುವುದು, ಸನ್ಮಾನ ಪಡೆಯುವುದು.
ಈಗಲೂ ಬಾಪ್ದಾದಾ
ನೋಡುತ್ತಿದ್ದೇವೆ, ನಾಲ್ಕಾರುಕಡೆ ವಿದೇಶದಲ್ಲಿ ಕೆಲವರು ರಾತ್ರಿಯಲ್ಲಿ, ಕೆಲವರು ದಿನದಲ್ಲಿ
ಮಿಲನವನ್ನಾಚರಿಸುತ್ತಿದ್ದಾರೆ. ಚೆನ್ನಾಗಿ ಪುರುಷಾರ್ಥದ ಗತಿಯನ್ನು ಹೆಚ್ಚಿಸಿಕೊಳ್ಳಲು ತಮಗೆ
ಒಳ್ಳೆಯ ದಾದೀಜಿ(ಜಾನಕಿ ದಾದಿ) ಸಿಕ್ಕಿದ್ದಾರೆ. ಹೌದಲ್ಲವೆ? ಸ್ವಲ್ಪ ಯಾರಲ್ಲಿಯಾದರೂ
ನಿರ್ಬಲತೆಯನ್ನು ನೋಡುತ್ತಾರೆಂದರೆ ಕೂಡಲೆ ತರಗತಿಯಲ್ಲಿ ಅದರ ಬಗ್ಗೆ ತಿಳಿಸಿಬಿಡುತ್ತಾರೆ. ಯಾವುದೇ
ಮಕ್ಕಳಿಗೆ ದೇಶದವರಿರಲಿ, ವಿದೇಶದವರಿರಲಿ, ಯಾವುದೇ ಸಬ್ಜೆಕ್ಟ್ನಲ್ಲಿ ಪರಿಶ್ರಮವಾಗುತ್ತದೆಯೆಂದರೆ
ಅದಕ್ಕೆ ಮೂಲಕಾರಣ ಹೃದಯದ ಸ್ನೇಹದ ಕೊರತೆಯಾಗಿದೆ. ಸ್ನೇಹವೆಂದರೆ ಲವಲೀನ ಸ್ಥಿತಿ. ಸ್ನೇಹವಿದ್ದೆಡೆ
ನೆನಪು ಮಾಡಬೇಕಾಗುವುದಿಲ್ಲ, ನೆನಪನ್ನು ಮರೆಯುವುದು ಕಷ್ಟವಾಗುತ್ತದೆ. ಒಂದುವೇಳೆ ನೆನಪು ಮಾಡಲು
ಪರಿಶ್ರಮವಾಗುತ್ತಿದೆಯೆಂದರೆ ಅದಕ್ಕೆ ಕಾರಣ ಹೃದಯದ ಸ್ನೇಹವನ್ನು ಪರಿಶೀಲನೆ ಮಾಡಿಕೊಳ್ಳಿ -
ಎಲ್ಲಿಯೂ ಲೀಕೇಜ್ ಇಲ್ಲವೆ? ಯಾವುದೇ ವ್ಯಕ್ತಿಯೊಂದಿಗೆ ಸೆಳೆತವಿರಬಹುದು, ವ್ಯಕ್ತಿಯ
ವಿಶೇಷತೆಯೊಂದಿಗೆ ಅಥವಾ ಯಾವುದೇ ಸಾಧನದೊಂದಿಗೆ, ಪರಿವಾರದೊಂದಿಗೆ ಸೆಳೆತವಿರಬಹುದು. ನಿಯಮಪ್ರಮಾಣ
ಪರಿಹಾರ ತೆಗೆದುಕೊಳ್ಳುವುದು ಸರಿಯಾಗಿದೆ ಆದರೆ ಹೆಚ್ಚಿನ ಸಹಯೋಗ (ಪರಿಹಾರ) ವನ್ನು
ತೆಗೆದುಕೊಳ್ಳುವುದರಿಂದಲೂ ಸೆಳೆತವು ಆರಂಭವಾಗುತ್ತದೆ. ಮತ್ತೆ-ಮತ್ತೆ ಅದೇ ನೆನಪಿಗೆ
ಬರುತ್ತಿರುತ್ತದೆ. ಅದಕ್ಕೆ ಚಿಹ್ನೆಯೇನೆಂದರೆ - ಎಲ್ಲಿಯಾದರೂ ಲೀಕೇಜ್ ಇದ್ದರೆ ಸದಾ ಜೀವನದಲ್ಲಿ
ಯಾವುದಾದರೂ ಕಾರಣದಿಂದ ಸಂತುಷ್ಟತೆಯ ಅನುಭೂತಿಯಾಗುವುದಿಲ್ಲ. ಯಾವುದಾದರೊಂದು ಕಾರಣವು
ಅಸಂತುಷ್ಠತೆಯ ಅನುಭವ ಮಾಡಿಸುತ್ತದೆ ಮತ್ತು ಎಲ್ಲಿ ಸಂತುಷ್ಟತೆಯಿರುವುದೋ ಅಲ್ಲಿ ಸದಾ
ಪ್ರಸನ್ನತೆಯಿರುವುದು. ಅವರು ಸದಾ ಆತ್ಮಿಕ ಗುಲಾಬಿಯ ತರಹ ಮುಗುಳ್ನಗುತ್ತಿರುವರು,
ಹರ್ಷಿತಮುಖಿಯಾಗಿರುವರು. ಮೂಡ್ ಆಫ್ ಆಗುವುದಿಲ್ಲ, ಸದಾ ಡಬಲ್ಲೈಟ್ ಆಗಿರುವರು ಅಂದಾಗ ತಿಳಿಯಿತೆ?
ಈಗ ಪರಿಶ್ರಮದಿಂದ ಮುಕ್ತರಾಗಿ. ಬಾಪ್ದಾದಾರವರಿಗೆ ಮಕ್ಕಳ ಪರಿಶ್ರಮವು ಇಷ್ಟವಾಗುವುದಿಲ್ಲ ಏಕೆಂದರೆ
ಅರ್ಧಕಲ್ಪ ಪರಿಶ್ರಮಪಟ್ಟಿದ್ದೀರಿ, ಈಗ ಮೋಜನ್ನಾಚರಿಸಿ, ಪ್ರೀತಿಯಲ್ಲಿ ಲವಲೀನರಾಗಿರಿ.
ಜ್ಞಾನಸಾಗರನ ಆಳದಲ್ಲಿ ಹೋಗಿ ಅನುಭವದ ಮುತ್ತುಗಳ ಅನುಭವ ಮಾಡಿ. ಕೇವಲ ಮುಳುಗಿ ಹೊರಬರುವವರಲ್ಲ,
ಜ್ಞಾನಸಾಗರನಲ್ಲಿ ಲವಲೀನರಾಗಿರಿ.
ಎಲ್ಲರೂ
ಪ್ರತಿಜ್ಞೆಯನ್ನಂತೂ ಮಾಡಿದ್ದೀರಲ್ಲವೆ - ಜೊತೆಯಿರುತ್ತೇವೆ, ಜೊತೆಯಲ್ಲಿಯೇ ನಡೆಯುತ್ತೇವೆ.
ಪ್ರತಿಜ್ಞೆ ಮಾಡಿದ್ದೀರಾ? ಜೊತೆಯಲ್ಲಿ ನಡೆಯುತ್ತೀರಾ ಅಥವಾ ಹಿಂದೆ-ಹಿಂದೆ ಬರುತ್ತೀರಾ? ಯಾರು
ಜೊತೆಯಲ್ಲಿ ಹೋಗಲು ತಯಾರಾಗಿದ್ದೀರೋ ಅವರು ಕೈಯನ್ನೆತ್ತಿ. ತಯಾರಾಗಿದ್ದೀರಾ? ಆಲೋಚಿಸಿ
ಕೈಯನ್ನೆತ್ತಿ, ತಯಾರಾಗಿದ್ದೀರಿ ಎಂದರೆ ತಂದೆಯ ಸಮಾನರಾಗಿದ್ದೀರಿ ಎಂದರ್ಥ. ಜೊತೆಯಲ್ಲಿ ಯಾರು
ನಡೆಯುವರು? ಸಮಾನರಾಗಿರುವವರೇ ಜೊತೆ ಹೋಗುವರಲ್ಲವೆ! ಅಂದಾಗ ಜೊತೆ ಹೋಗುತ್ತೀರಾ?
ಎವರೆಡಿಯಾಗಿದ್ದೀರಾ? ಮೊದಲನೇ ಸಾಲಿನವರು ಎವರೆಡಿಯಾಗಿದ್ದೀರಾ? ಒಂದುವೇಳೆ ನಾಳೆಯೇ ಹೋಗಲು ಆದೇಶ
ಸಿಕ್ಕಿದರೆ ಹೋಗಲು ಸಿದ್ಧರಾಗಿದ್ದೀರಾ? ಪ್ರವೃತ್ತಿಯವರು ಹೋಗಲು ತಯಾರಿದ್ದೀರಾ? ಮಕ್ಕಳು ನೆನಪಿಗೆ
ಬರುವುದಿಲ್ಲವೆ? ಮಾತೆಯರು ಜೊತೆ ನಡೆಯುವಿರಾ? ತಯಾರಾಗಿದ್ದೀರಾ? ನೆನಪು ಬರುವುದಿಲ್ಲವೆ?
ಶಿಕ್ಷಕಿಯರಿಗೆ ಸೇವಾಕೇಂದ್ರ ಹಾಗೂ ಜಿಜ್ಞಾಸುಗಳು ನೆನಪಿಗೆ ಬರುತ್ತಾರೆಯೇ? ಬರುವುದಿಲ್ಲ ತಾನೆ.
ಒಳ್ಳೆಯದು. ಎಲ್ಲರೂ ನಿರ್ಮೋಹಿಗಳಾಗಿಬಿಟ್ಟಿದ್ದೀರಾ? ಅಂದಮೇಲೆ ಬಹಳ ಒಳ್ಳೆಯದು- ಮತ್ತೆ
ಪರಿಶ್ರಮಪಡುವ ಅವಶ್ಯಕತೆಯೇ ಇರುವುದಿಲ್ಲ.
ಇಂದು ಬಾಪ್ದಾದಾ
ಎಲ್ಲರಿಗೆ ಸನ್ಮುಖದಲ್ಲಿ ಕುಳಿತಿರಬಹುದು, ದೂರದಲ್ಲಿ ಕುಳಿತಿರಬಹುದು, ಎಲ್ಲರೂ ತಂದೆಯ ಹೃದಯದಲ್ಲಿ
ಕುಳಿತಿದ್ದೀರಿ. ಎಲ್ಲರನ್ನೂ ಇಂದಿನ ದಿನ ಪರಿಶ್ರಮದಿಂದ ಮುಕ್ತರನ್ನಾಗಿ ಮಾಡಲು ಬಯಸುತ್ತೇವೆ,
ಆಗುವಿರಾ? ಚಪ್ಪಾಳೆಯನ್ನಂತೂ ತಟ್ಟಿದಿರಿ, ಆಗುತ್ತೀರಾ? ನಾಳೆಯಿಂದ ಯಾರೂ ದಾದಿಯರ ಬಳಿ
ಪರಿಹಾರಕ್ಕಾಗಿ ಬರುವುದಿಲ್ಲ ತಾನೆ. ಪರಿಶ್ರಮ ಪಡುವಂತೆ ಮಾಡುವುದಿಲ್ಲ ತಾನೆ. ಖುಷಿ-ಖುಷಿಯಿಂದ
ಮಿಲನ ಮಾಡುತ್ತೀರಲ್ಲವೆ. ಜೋನಿನ ನಿಮಿತ್ತರ ಬಳಿ ದೂರು ತೆಗೆದುಕೊಂಡು ಹೋಗುವುದಿಲ್ಲ ತಾನೆ. ಈಗ
ಕೈಯನ್ನೆತ್ತಿ. ನೋಡಿ, ಆಲೋಚಿಸಿ ಕೈಯನ್ನೆತ್ತಿ, ಹಾಗೆಯೇ ಕೈಯನ್ನೆತ್ತಬೇಡಿ.ಯಾವುದೇ
ನನ್ನದು-ನನ್ನದು ಎಂಬುದಿಲ್ಲ, ನಾನು ಎಂಬುದೂ ಇಲ್ಲ, ನನ್ನದೂ ಇಲ್ಲ, ಎಲ್ಲವೂ ಸಮಾಪ್ತಿ. ನೋಡಿ,
ಪ್ರತಿಜ್ಞೆಯನ್ನಂತೂ ಮಾಡಿದಿರಿ ಆದರೆ ಪ್ರತಿಜ್ಞೆಯ ಲಾಭವನ್ನು ತೆಗೆದುಕೊಳ್ಳುವುದಿಲ್ಲ.
ಪ್ರತಿಜ್ಞೆಯನ್ನಂತೂ ಬಹಳ ಬೇಗನೆ ಮಾಡಿಬಿಡುತ್ತೀರಿ ಆದರೆ ಪ್ರತಿಜ್ಞೆಯ ಲಾಭವನ್ನು ತೆಗೆದುಕೊಳ್ಳಲು
ಪ್ರತಿನಿತ್ಯವೂ ಮೊದಲನೆಯದು ರಿಯಲೈಜೇಷನ್, ಎರಡನೆಯದು ರಿವೈಜ್ ಮಾಡಿ. ಪ್ರತಿಜ್ಞೆಯನ್ನು
ಪ್ರತಿನಿತ್ಯವೂ ನಾನು ಏನು ಪ್ರತಿಜ್ಞೆ ಮಾಡಿದೆನು? ಎಂದು ರಿವೈಜ್ ಮಾಡಿಕೊಳ್ಳಿ. ಅಮೃತವೇಳೆಯ ನಂತರ
ಪ್ರತಿಜ್ಞೆ ಮತ್ತು ಲಾಭ ಎರಡರ ಸಮತೋಲನದ ಚಾರ್ಟ್ ಬರೆಯಿರಿ. ಏನು ಪ್ರತಿಜ್ಞೆ ಮಾಡಿದೆನು ಮತ್ತು ಏನು
ಲಾಭವನ್ನು ತೆಗೆದುಕೊಳ್ಳುತ್ತಿದ್ದೇನೆ? ಹೀಗೆ ರಿಯಲೈಜ್ ಮಾಡಿ, ರಿವೈಜ್ ಮಾಡಿ - ಇವೆರಡೂ
ಬ್ಯಾಲೆನ್ಸ್ ಆದಾಗ ಸರಿಹೋಗುವುದು. ಬಾಪ್ದಾದಾರವರಿಗೆ ತಿಳಿದಿದೆ - ಮೀಟಿಂಗ್ನವರು ಪ್ರತಿಜ್ಞೆ
ಮಾಡಿದ್ದೀರಿ.
ಬಾಪ್ದಾದಾ ನೋಡಿದ್ದೇವೆ,
ಬಹಳ ಒಳ್ಳೊಳ್ಳೆಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತೀರಿ. ಬಾಪ್ದಾದಾರವರಿಗೆ ಇಷ್ಟವಾಗಿದೆ ಆದರೆ
ಬಾಪ್ದಾದಾ ಈಗ ಏನನ್ನು ಬಯಸುತ್ತಾರೆ? ಬಾಪ್ದಾದಾ ಕೇವಲ ಒಂದು ಶಬ್ಧವನ್ನು ಬಯಸುತ್ತೇವೆ, ಆ ಒಂದು
ಶಬ್ಧವಾಗಿದೆ - ಸಫಲ ಮಾಡಿ, ಸಫಲರಾಗಿ. ಯಾವುದೆಲ್ಲಾ ಖಜಾನೆಗಳು, ಶಕ್ತಿಗಳಿವೆಯೋ, ಸಂಕಲ್ಪವಿದೆಯೋ,
ಮಾತುಗಳಿವೆಯೋ ಕರ್ಮವೂ ಶಕ್ತಿಯಾಗಿದೆ. ಈ ಸಮಯವೂ ಸಹ ಖಜಾನೆಯಾಗಿದೆ, ಶಕ್ತಿಯಾಗಿದೆ. ಎಲ್ಲವನ್ನು
ಈಗ ಸಫಲ ಮಾಡಿಕೊಳ್ಳಿ. ಸ್ಥೂಲಧನವಿರಲಿ ಅಥವಾ ಅಲೌಕಿಕ ಖಜಾನೆಯಿರಲಿ, ಎಲ್ಲವನ್ನೂ ಸಫಲ
ಮಾಡಿಕೊಳ್ಳಬೇಕಾಗಿದೆ. ಸಫಲತಾ ಮೂರ್ತಿಯ ಸರ್ಟಿಫಿಕೇಟನ್ನು ತೆಗೆದುಕೊಳ್ಳಲೇಬೇಕಾಗಿದೆ. ಸಫಲ ಮಾಡಿ
ಮತ್ತು ಅನ್ಯರಿಂದ ಸಫಲ ಮಾಡಿಸಿ. ಒಂದುವೇಳೆ ಯಾರಾದರೂ ಅಸಫಲ ಮಾಡುತ್ತಾರೆಂದರೆ ಅವರಿಗೆ ಮಾತಿನ
ಮೂಲಕ, ಶಿಕ್ಷಣದ ಮೂಲಕ ಅಲ್ಲ. ತಮ್ಮ ಶುಭಕಾಮನೆ ಮತ್ತು ಸದಾ ಶುಭಸನ್ಮಾನ ಕೊಡುವುದರ ಮೂಲಕ ಸಫಲ
ಮಾಡಿಸಿ. ಕೇವಲ ಶಿಕ್ಷಣ ಕೊಡಬೇಡಿ, ಒಂದುವೇಳೆ ಶಿಕ್ಷಣ ಕೊಡಬೇಕಾದರೂ ಸಹ ಕ್ಷಮೆ ಮತ್ತು ಶಿಕ್ಷಣ
ಕ್ಷಮಾರೂಪರಾಗಿ ಶಿಕ್ಷಣ ಕೊಡಿ. ದಯಾಹೃದಯಿಗಳಾಗಿ, ತಮ್ಮ ದಯಾಹೃದಯೀ ರೂಪವು ಅವಶ್ಯವಾಗಿ ಶಿಕ್ಷಣದ
ಫಲವನ್ನು ತೋರಿಸುವುದು. ನೋಡಿ, ಈಗಿನ ವಿಜ್ಞಾನದವರೂ ಸಹ ಮೊದಲು ಆಪರೇಷನ್ ಮಾಡುತ್ತಾರೆ ಆದರೆ
ಅದಕ್ಕಿಂತ ಮೊದಲು ಏನು ಮಾಡುತ್ತಾರೆ? ಮೊದಲು ಮೂರ್ಛಿತರನ್ನಾಗಿ ಮಾಡಿ ನಂತರ ಆಪರೇಷನ್ ಮಾಡುತ್ತಾರೆ.
ಟಿಂಚರ್ ಹಾಕುತ್ತಾರೆ. ಹಾಗೆಯೇ ತಾವೂ ಸಹ ದಯಾಹೃದಯಿಗಳಾಗಿ ನಂತರ ಶಿಕ್ಷಣ ಕೊಡಿ ಆಗ ಪ್ರಭಾವ
ಬೀರುವುದು. ಇಲ್ಲದಿದ್ದರೆ ಏನಾಗುತ್ತದೆ? ತಾವು ಶಿಕ್ಷಣ ಕೊಡಲು ಆರಂಭಿಸುತ್ತೀರಿ. ಅವರು ಮೊದಲೇ
ತಮಗಿಂತಲೂ ಹೆಚ್ಚು ಶಿಕ್ಷಕರಾಗಿರುತ್ತಾರೆ ಅಂದಾಗ ಶಿಕ್ಷಕರು ಶಿಕ್ಷಕರ ಶಿಕ್ಷಣವನ್ನು
ಒಪ್ಪುವುದಿಲ್ಲ. ಹೀಗೆ ಮಾಡಬೇಡಿ, ಹೀಗೆ ಮಾಡಿ ಎಂದು ತಾವು ಹೇಳತೊಡಗುತ್ತೀರಿ. ಅದಕ್ಕಿಂತ ಮೊದಲೇ
ಅವರಬಳಿ ಆ ಮಾತನ್ನು ಕತ್ತರಿಸಲು ಹತ್ತುಮಾತುಗಳಿರುತ್ತವೆ. ಆದ್ದರಿಂದ ಕ್ಷಮೆ ಮತ್ತು ಶಿಕ್ಷಣ -
ಎರಡೂ ಜೊತೆಜೊತೆಗೆ ಇರಲಿ ಅಂದಾಗ ಈ 70ನೇ ವರ್ಷದ ಪ್ರಬಂಧವಾಗಿದೆ - ಸಫಲ ಮಾಡಿ, ಸಫಲ ಮಾಡಿಸಿ.
ಸಫಲತಾಮೂರ್ತಿಗಳಾಗಿ, ಎಲ್ಲವನ್ನೂ ಸಫಲ ಮಾಡಿಕೊಳ್ಳಿ. ಡಬಲ್ಲೈಟ್ ಆಗಬೇಕಲ್ಲವೆ ಅಂದಾಗ ಸಫಲ
ಮಾಡಿಕೊಳ್ಳಿ. ಸಂಸ್ಕಾರವನ್ನೂ ಸಫಲ ಮಾಡಿ. ತಮ್ಮ ಆದಿಸಂಸ್ಕಾರ, ದೇವತಾಸಂಸ್ಕಾರ, ಆತ್ಮದ
ನಿಜೀಸಂಸ್ಕಾರವನ್ನು ಇಮರ್ಜ್ ಮಾಡಿಕೊಳ್ಳಿ. ಉಲ್ಟಾ ಸಂಸ್ಕಾರಗಳ ಸಂಸ್ಕಾರ(ಭಸ್ಮ) ಮಾಡಿ. ಆದಿ-ಅನಾದಿ
ಸಂಸ್ಕಾರವನ್ನು ಇಮರ್ಜ್ ಮಾಡಿಕೊಳ್ಳಿ. ಈಗ ಎಲ್ಲರದೂ ವಿಶೇಷವಾಗಿ ಒಂದೇ ಒಂದು ದೂರು ಉಳಿದುಕೊಂಡಿದೆ.
ಅದೇನೆಂದರೆ - ಸಂಸ್ಕಾರ ಬದಲಾಗುತ್ತಿಲ್ಲ, ಸಂಸ್ಕಾರ ಬದಲಾಗುತ್ತಿಲ್ಲ ಎಂದು.
ಎಲ್ಲರೂ ಪರಿಶ್ರಮ
ಮುಕ್ತರಾಗುವ ಪ್ರತಿಜ್ಞೆ ಮಾಡಿದ್ದೀರಲ್ಲವೆ. ಮಾಡಿದ್ದೀರಾ? ಎಲ್ಲರ ಫೋಟೋ ತೆಗೆಯಿರಿ ಅಂದಾಗ ಈಗ
ಒಂದು ನಿಮಿಷಕ್ಕಾಗಿ ತಮ್ಮ ಹೃದಯಪೂರ್ವಕವಾಗಿ ಈ ಪ್ರತಿಜ್ಞೆಗೆ ಧೃಡತೆಯ ಅಂಡರ್ಲೈನ್ ಮಾಡಿಕೊಳ್ಳಿ,
ತಮ್ಮ ಮನಸ್ಸಿನಲ್ಲಿ ಪಕ್ಕಾ ಮಾಡಿಕೊಳ್ಳಿ. ಒಳ್ಳೆಯದು.
ನಾಲ್ಕಾರು ಕಡೆಯ ಎಲ್ಲಾ
ಸ್ವಮಾನಧಾರಿ ಮಕ್ಕಳಿಗೆ, ಸದಾ ತಂದೆಯ ಹೃದಯದ ಸ್ನೇಹಿ, ಸರ್ವರ ಸ್ನೇಹಿ-ಶ್ರೇಷ್ಠ ಆತ್ಮರಿಗೆ, ಸದಾ
ಪರಿಶ್ರಮಮುಕ್ತ ಜೀವನ್ಮುಕ್ತ ಅನುಭವ ಮಾಡುವಂತಹ ತೀವ್ರ ಪುರುಷಾರ್ಥಿ ಮಕ್ಕಳಿಗೆ ಸದಾ ಪ್ರತಿಜ್ಞೆ
ಮತ್ತು ಪ್ರತಿಜ್ಞೆಯ ಲಾಭವನ್ನು ತೆಗೆದುಕೊಳ್ಳುವಂತಹ, ಬ್ಯಾಲೆನ್ಸ್ ಇಟ್ಟುಕೊಳ್ಳುವಂತಹ ಬ್ಲಿಸ್ಫುಲ್
ಮಕ್ಕಳಿಗೆ, ಸದಾ ಮೋಜಿನಲ್ಲಿರುವಂತಹ ಅನ್ಯರನ್ನೂ ಮೋಜಿನಲ್ಲಿ ತರುವಂತಹ ಸಂಗಮಯುಗೀ ಶ್ರೇಷ್ಠಭಾಗ್ಯದ
ಅಧಿಕಾರಿ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಮತ್ತು ಹೃದಯರಾಮನ ಹೃದಯದ ಆಶೀರ್ವಾದಗಳನ್ನು
ಸ್ವೀಕಾರ ಮಾಡಿರಿ, ನೆನಪು-ಪ್ರೀತಿ ಹಾಗೂ ನಮಸ್ತೆ.
ದಾದಿಯವರೊಂದಿಗೆ:
ಚೆನ್ನಾಗಿದ್ದೀರಲ್ಲವೆ? ತಮ್ಮೆಲ್ಲರನ್ನೂ ನೋಡಿ ಎಲ್ಲರಿಗೂ ಖುಷಿಯಾಗುತ್ತದೆ. ತಂದೆ ಮತ್ತು ಮಕ್ಕಳು
ಇಬ್ಬರನ್ನೂ ನೋಡಿ ಖುಷಿಪಡುತ್ತಾರೆ. ಇಬ್ಬರೂ ಸಮಾನ, ಎಲ್ಲರ ಅನನ್ಯ ಆತ್ಮಗಳಾಗಿದ್ದೀರಿ. ಎಲ್ಲರಿಗೆ
ದಾದಿಯರೆಂದರೆ ವಿಶೇಷ ಪ್ರೀತಿಯಿದೆಯಲ್ಲವೆ. ಬಹಳ ಪ್ರೀತಿಯಿದೆ ಏಕೆಂದರೆ ಯಾರು ನಿಮಿತ್ತರಾಗುವರೋ ಆ
ನಿಮಿತ್ತರಾಗುವವರ ಮೇಲೆ ಜವಾಬ್ದಾರಿಯೂ ಇರುತ್ತದೆ ಮತ್ತು ಅಷ್ಟೇ ಸ್ನೇಹವಿರುತ್ತದೆ ಏಕೆಂದರೆ
ಎಲ್ಲರ ಪ್ರೀತಿ ಮತ್ತು ಆಶೀರ್ವಾದಗಳ ಲಿಫ್ಟ್ ಅವರ ಜೀವನದಲ್ಲಿ ಪ್ರಾಪ್ತಿಯಾಗುತ್ತದೆ. ತಾವೂ ಸಹ
ಯಾರು ನಿಮಿತ್ತರಾಗುತ್ತೀರೋ ಅವರಿಗೂ ಲಿಫ್ಟ್ ಸಿಗುತ್ತದೆ ಆದರೆ ಲಿಫ್ಟ್ ನ ಗಿಫ್ಟನ್ನು
ಸ್ಥಿರವಾಗಿಟ್ಟುಕೊಂಡಾಗ ಬಹಳ ಲಾಭವಾಗುತ್ತದೆ. ಈ ಅಧಿಕ ವರದಾನವು ಸಿಗುತ್ತದೆ. ಯಾವುದೇ
ಕಾರ್ಯಕ್ಕಾಗಿ ಈಶ್ವರೀಯ ಕಾರ್ಯದಲ್ಲಿ, ಯಜ್ಞಸೇವೆಯಲ್ಲಿ ಯಾರು ವಿಶೇಷವಾಗಿ ನಿಮಿತ್ತರಾಗುವರೋ
ಅವರಿಗೆ ಆಶೀರ್ವಾದಗಳು ಮತ್ತು ಪ್ರೀತಿ ಎರಡರ ಲಿಫ್ಟ್ ಸಿಗುತ್ತದೆ. ಪ್ರೀತಿಯು ಇಂತಹ ವಸ್ತುವಾಗಿದೆ
ಅದು ಹೇಗಿದ್ದವರನ್ನು ಹೇಗೆ ಮಾಡಿಬಿಡುತ್ತದೆ! ಈಗಿನ ಪ್ರಪಂಚದಲ್ಲಿಯೂ ಸಹ ಏನು ಬೇಕು ಎಂದು
ಯಾರೊಂದಿಗಾದರೂ ಕೇಳಿದರೆ ಪ್ರೀತಿ ಬೇಕು, ಶಾಂತಿ ಬೇಕೆಂದು ಹೇಳುತ್ತಾರೆ. ಶಾಂತಿಯೂ ಸಹ
ಪ್ರೀತಿಯಿಂದಲೇ ಸಿಗುತ್ತದೆ ಅಂದಾಗ ಆತ್ಮಿಕ ಪ್ರೀತಿಯು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ.
ವರದಾನ:
ಕಂಬೈಂಡ್
ಸ್ವರೂಪದ ಸ್ಮೃತಿಯ ಮೂಲಕ ಸ್ಮೃತಿ ಸ್ವರೂಪರನ್ನಾಗಿ ಮಾಡುವಂತಹ ನಿರಂತರ ಯೋಗಿ ಭವ
ಯಾವ ಮಕ್ಕಳು ಸ್ವಯಂನ್ನು
ತಂದೆಯವರ ಜೊತೆಯ ಕಂಬೈಂಡ್ ಅನುಭವವನ್ನು ಮಾಡುತ್ತಾರೆಯೋ, ಅವರಿಗೆ ಸ್ವತಃವಾಗಿಯೇ ನಿರಂತರ ಯೋಗಿ
ಭವದ ವರದಾನವು ಸಿಗುತ್ತದೆ. ಏಕೆಂದರೆ ಅವರೆಲ್ಲಿಯೇ ಇರಬಹುದು, ಅವರಿಗೆ ಮಿಲನದ
ಮೇಳವಾಗುತ್ತಿರುತ್ತದೆ. ಅವರನ್ನು ಮರೆಸಲು ಯಾರೆಷ್ಟಾದರೂ ಪ್ರಯತ್ನ ಪಡಬಹುದು ಆದರೆ ಅವರು ಸ್ಮೃತಿ
ಸ್ವರೂಪರಾಗಿ ಇರುತ್ತಾರೆ. ಇಂತಹ ಸ್ಮೃತಿ ಸ್ವರೂಪ ಮಕ್ಕಳು ತಂದೆಯವರಿಗೆ ಅತಿ ಪ್ರಿಯರಾಗಿದ್ದಾರೆ,
ಅವರೇ ನಿರಂತರ ಯೋಗಿಯಾಗಿದ್ದಾರೆ ಏಕೆಂದರೆ ಪ್ರೀತಿಯ ಸಂಕೇತವಾಗಿದೆ- ಸ್ವತಹ ನೆನಪಿನಲ್ಲಿರುವುದು.
ಮಾಯೆಯು ಅವರ ಸಂಕಲ್ಪವೆಂಬ ಉಗುರನ್ನೂ ಸಹ ಅಲುಗಾಡಿಸಲು ಸಾಧ್ಯವಾಗುವುದಿಲ್ಲ.
ಸ್ಲೋಗನ್:
ಕಾರಣವನ್ನು
ತಿಳಿಸುವ ಬದಲು, ಅದರ ನಿವಾರಣೆ ಮಾಡುತ್ತೀರೆಂದರೆ ಆಶೀರ್ವಾದಗಳ ಅಧಿಕಾರಿ ಆಗಿಬಿಡುತ್ತೀರಿ.
ಅವ್ಯಕ್ತ ಸೂಚನೆಗಳು:
ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ
ಅಂತರ್ಮುಖಿಯಾಗಿ ಜ್ಞಾನ
ಮಾನನದ ಅಭ್ಯಾಸದ ಮೂಲಕ ಅಲೌಕಿಕ ಮಸ್ತಿಯಲ್ಲಿ ಸದಾ ಮಸ್ತರಾಗಿರಿ. ಆಗ ಈ ಪ್ರಪಂಚದ ಚಿಂತೆಗಳು
ನಿಮ್ಮನ್ನು ತಮ್ಮಕಡೆ ಆಕರ್ಷಿತ ಮಾಡುವುದಿಲ್ಲ . ಹೇಗೆ ಮಿಲಿಟ್ರಿಯವರು ಅಂಡರ್ ಗ್ರ್ವೊಂಡ್ ಹೊರಟು
ಹೋಗುತ್ತಾರೆ ಎಂದರೆ ಹೊರಗಿನ ಬಾಂಬ್ ನ ಪ್ರಭಾವ ಬೀರುವುದಿಲ್ಲ , ಅದೇ ರೀತಿ ತಾವು ಅಂತರ್ಮುಖಿ
ಅಂಡರ್ ಗ್ರ್ವೊಂಡ್ ಆತ್ಮಿಕ ಸ್ಥಿತಿಯಲ್ಲಿರುವ ಅಭ್ಯಾಸ ಮಾಡಿ. ಆಗ ಬಾಹರ್ಮುಖತೆಯ ಮಾತುಗಳು ನಿಮಗೆ
ತೊಂದರೆ ಮಾಡುವುದಿಲ್ಲ.