11.03.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ನೆನಪಿನ ಯಾತ್ರೆಯಲ್ಲಿ ರೇಸ್ ಮಾಡಿ, ಆಗ ಪುಣ್ಯಾತ್ಮರಾಗಿ ಬಿಡುತ್ತೀರಿ, ಸ್ವರ್ಗದ ರಾಜ್ಯಭಾಗ್ಯ
ಸಿಗುವುದು”
ಪ್ರಶ್ನೆ:
ಬ್ರಾಹ್ಮಣ
ಜೀವನದಲ್ಲಿ ಒಂದುವೇಳೆ ಅತೀಂದ್ರಿಯ ಸುಖದ ಅನುಭವವಾಗದಿದ್ದರೆ ಏನೆಂದು ತಿಳಿದುಕೊಳ್ಳಬೇಕು?
ಉತ್ತರ:
ಅವಶ್ಯವಾಗಿ
ಸೂಕ್ಷ್ಮದಲ್ಲಿಯೂ ಯಾವುದಾದರೂ ಪಾಪಗಳಾಗುತ್ತವೆ, ದೇಹಾಭಿಮಾನದಲ್ಲಿದ್ದಾಗಲೇ ಪಾಪವಾಗುತ್ತದೆ, ಯಾವ
ಕಾರಣದಿಂದ ಆ ಸುಖದ ಅನುಭೂತಿ ಮಾಡಲು ಸಾಧ್ಯವಿಲ್ಲ. ತಮ್ಮನ್ನು ಗೋಪ-ಗೋಪಿಕೆಯರೆಂದು
ತಿಳಿದುಕೊಂಡಿದ್ದರೂ ಅತೀಂದ್ರಿಯ ಸುಖವು ಭಾಸವಾಗುವುದಿಲ್ಲವೆಂದರೆ ಅವಶ್ಯವಾಗಿ ಯಾವುದೋ
ತಪ್ಪುಗಳಾಗುತ್ತಿವೆ, ಆದ್ದರಿಂದ ತಂದೆಗೆ ಸತ್ಯವನ್ನು ತಿಳಿಸಿ ಶ್ರೀಮತವನ್ನು ತೆಗೆದುಕೊಳ್ಳುತ್ತಾ
ಇರಿ.
ಓಂ ಶಾಂತಿ.
ನಿರಾಕಾರ ಭಗವಾನುವಾಚ - ಈಗ ನಿರಾಕಾರ ಭಗವಂತನೆಂದು ಶಿವನಿಗೆ ಹೇಳಲಾಗುತ್ತದೆ. ಭಲೆ
ಭಕ್ತಿಮಾರ್ಗದಲ್ಲಿ ಅವರಿಗೆ ಎಷ್ಟಾದರೂ ಹೆಸರುಗಳನ್ನಿಟ್ಟಿರಬಹುದು, ಅನೇಕ ಹೆಸರುಗಳಿವೆ ಆದ್ದರಿಂದಲೇ
ವಿಸ್ತಾರವಿದೆ. ಸ್ವಯಂ ತಂದೆಯೇ ಬಂದು ತಿಳಿಸುತ್ತಾರೆ - ಹೇ ಮಕ್ಕಳೇ, ನೀವು ತಮ್ಮ ತಂದೆಯಾದ
ಶಿವನನ್ನು ಹೇ ಪತಿತ ಪಾವನ ಎಂದು ನೆನಪು ಮಾಡುತ್ತಾ ಬಂದಿದ್ದೀರಿ. ಹೆಸರಂತೂ ಅವಶ್ಯವಾಗಿ ಒಂದೇ
ಇರುವುದು, ಅನೇಕ ಹೆಸರುಗಳು ನಡೆಯಲು ಸಾಧ್ಯವಿಲ್ಲ. ಶಿವಾಯ ನಮಃ ಎಂದು ಹೇಳುತ್ತಾರೆ ಅಂದಮೇಲೆ ಶಿವ
ಎಂಬುದೊಂದೇ ಹೆಸರಾಯಿತು.
ರಚಯಿತನೂ ಒಬ್ಬರೇ ಆದರು,
ಅನೇಕ ಹೆಸರುಗಳಿಂದ ತಬ್ಬಿಬ್ಬಾಗುವರು. ಹೇಗೆ ನಿಮ್ಮ ಹೆಸರಾಗಿದೆ - ಪುಷ್ಟ ಅದಕ್ಕೆ ಬದಲಾಗಿ ನಿಮಗೆ
ಶೀಲಾ ಎಂದು ಹೇಳಿದರೆ ನೀವು ಪ್ರತ್ಯುತ್ತರ ನೀಡುವಿರಾ? ಇಲ್ಲ. ಮತ್ತಾರನ್ನೋ ಕರೆಯುತ್ತಿದ್ದಾರೆಂದು
ತಿಳಿಯುತ್ತಾರೆ. ಇದೂ ಸಹ ಅದೇ ರೀತಿಯಾಯಿತು. ತಂದೆಯ ಹೆಸರು ಒಂದೇ ಆಗಿದೆ ಆದರೆ ಭಕ್ತಿ
ಮಾರ್ಗವಿರುವ ಕಾರಣ ಬಹಳ ಮಂದಿರಗಳನ್ನು ಕಟ್ಟಿಸುವ ಕಾರಣ ಭಿನ್ನ-ಭಿನ್ನ ಹೆಸರುಗಳನ್ನಿಟ್ಟಿದ್ದಾರೆ.
ಇಲ್ಲವಾದರೆ ಪ್ರತಿಯೊಬ್ಬರಿಗೂ ಒಂದೇ ಹೆಸರಿರುತ್ತದೆ. ಗಂಗಾ ನದಿಗೆ ಜಮುನಾ ನದಿ ಎಂದು
ಹೇಳುವುದಿಲ್ಲ. ಯಾವುದೇ ವಸ್ತುವಿಗೆ ಒಂದು ಹೆಸರು ಪ್ರಸಿದ್ಧವಾಗುತ್ತದೆ. ಈ ಶಿವ ಎಂಬ ಹೆಸರು
ಪ್ರಸಿದ್ಧವಾಗಿದೆ. ಶಿವಾಯ ನಮಃ ಎಂದು ಗಾಯನವಿದೆ. ಬ್ರಹ್ಮ ದೇವತಾಯ ನಮಃ ಎಂದು ಗಾಯನವಿದೆ, ವಿಷ್ಣು
ದೇವತಾಯ ನಮಃ ಎಂದು ಹೇಳಿ ನಂತರ ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ ಏಕೆಂದರೆ ಶಿವನು ಸರ್ವ
ಶ್ರೇಷ್ಠನಾಗಿದ್ದಾರೆ. ಸರ್ವ ಶ್ರೇಷ್ಠನೆಂದು ನಿರಾಕಾರನಿಗೇ ಹೇಳುತ್ತೇವೆಂದು ಮನುಷ್ಯರ
ಬುದ್ದಿಯಲ್ಲಿರುತ್ತದೆ. ಅವರ ಹೆಸರು ಒಂದೇ ಆಗಿದೆ. ಬ್ರಹ್ಮನಿಗೆ ಬ್ರಹ್ಮನೆಂದು, ವಿಷ್ಣುವಿಗೆ
ವಿಷ್ಣುವೆಂದೇ ಹೇಳುತ್ತಾರೆ. ಅನೇಕ ಹೆಸರುಗಳನ್ನಿಟ್ಟಿರುವುದರಿಂದ ತಬ್ಬಿಬ್ಬಾಗುತ್ತಾರೆ.
ಪ್ರತ್ಯುತ್ತರವೇ ಸಿಗುವುದಿಲ್ಲ ಮತ್ತು ಅವರ ರೂಪವನ್ನೂ ತಿಳಿದುಕೊಂಡಿಲ್ಲ. ತಂದೆಯು ಬಂದು
ಮಕ್ಕಳೊಂದಿಗೆ ಮಾತನಾಡುತ್ತಾರೆ ಶಿವಾಯ ನಮಃ ಎಂದು ಹೇಳುತ್ತಾರೆ ಅಂದಾಗ ಒಂದು ಹೆಸರು ಸರಿಯಾಗಿದೆ.
ಆದರೆ ಶಿವ - ಶಂಕರನೆಂದು ಹೇಳುವುದೂ ಸಹ ತಪ್ಪಾಗಿ ಬಿಡುತ್ತದೆ. ಶಿವ-ಶಂಕರ ಹೆಸರು
ಬೇರೆ-ಬೇರೆಯಾಗಿದೆ. ಹೇಗೆ ಲಕ್ಷ್ಮಿ - ನಾರಾಯಣ ಎಂಬ ಹೆಸರು ಬೇರೆ - ಬೇರೆಯಾಗಿದೆ. ಹೇಗೆ ಲಕ್ಷ್ಮಿ
- ನಾರಾಯಣ ಎಂಬ ಹೆಸರು ಬೇರೆ-ಬೇರೆಯಾಗಿದೆ. ಅಲ್ಲಿ ನಾರಾಯಣನಿಗೆ ಲಕ್ಷ್ಮಿ-ನಾರಾಯಣ ಎಂದು
ಹೇಳುವುದಿಲ್ಲ. ಇತ್ತೀಚೆಗಂತೂ ತಮಗೆ ಎರಡೆರಡು ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ದೇವತೆಗಳಿಗೆ
ಈ ರೀತಿ ಡಬಲ್ ಹೆಸರುಗಳಿರಲಿಲ್ಲ. ರಾಧೆಯದೇ ಬೇರೆ, ಕೃಷ್ಣನದೇ ಬೇರೆ. ಇಲ್ಲಂತೂ ಒಬ್ಬೊಬ್ಬರಿಗೆ
ರಾಧಾ ಕೃಷ್ಣ, ಲಕ್ಷ್ಮೀ ನಾರಾಯಣ ಎಂದು ಇಟ್ಟುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ರಚಯಿತನು
ಒಬ್ಬರೇ ಆಗಿದ್ದಾರೆ, ಅವರ ಹೆಸರೂ ಒಂದೇ ಆಗಿದೆ, ಅವರನ್ನೇ ಅರಿತುಕೊಳ್ಳಬೇಕಾಗಿದೆ. ಆತ್ಮವು ಒಂದು
ನಕ್ಷತ್ರ ಮಾದರಿಯಾಗಿದೆ. ಭೃಕುಟಿಯ ಮಧ್ಯದಲ್ಲಿ ಹೊಳೆಯುತ್ತದೆ ಎಂದು ಹೇಳುತ್ತಾರೆ. ಮತ್ತೆ ಆತ್ಮವೇ
ಪರಮಾತ್ಮನೆಂದು ಹೇಳಿ ಬಿಡುತ್ತಾರೆ. ಅಂದಾಗ ಪರಮಾತ್ಮನೂ ಸಹ ನಕ್ಷತ್ರವಾದರಲ್ಲವೆ. ಆತ್ಮವು ಚಿಕ್ಕದು,
ದೊಡ್ಡದಾಗಿರುತ್ತದೆ ಎಂದಲ್ಲ. ಬಹಳ ಸಹಜ ಮಾತುಗಳಾಗಿವೆ.
ತಂದೆಯು ತಿಳಿಸುತ್ತಾರೆ
- ಹೇ ಪತಿತ ಪಾವನ ಬನ್ನಿ ಎಂದು ಕರೆಯುತ್ತಿದ್ದಿರಿ, ಆದರೆ ಅವರು ಹೇಗೆ ಪಾವನರನ್ನಾಗಿ ಮಾಡುತ್ತಾರೆ
ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಗಂಗೆಯನ್ನು ಪತಿತ - ಪಾವನಿ ಎಂದು ತಿಳಿದುಕೊಳ್ಳುತ್ತಾರೆ
ಆದರೆ ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಮೊದಲೂ ಸಹ
ಹೇಳಿದ್ದೇನು - ಮನ್ಮನಾಭವ, ನನ್ನೊಬ್ಬನನ್ನೇ ನೆನಪು ಮಾಡಿ. ಕೇವಲ ಹೆಸರನ್ನು ಬದಲಾಯಿಸಿ
ಬಿಟ್ಟಿದ್ದಾರೆ. ಮಕ್ಕಳಿಗೆ ತಿಳಿದಿದೆ - ತಂದೆಯನ್ನು ನೆನಪು ಮಾಡಿದರೆ ಆಸ್ತಿಯು ಇದ್ದೇ ಇದೆ.
ಮನ್ಮನಾಭವ ಎಂದು ಹೇಳುವ ಅವಶ್ಯಕತೆಯೂ ಇಲ್ಲ ಆದರೆ ತಂದೆಯನ್ನು ಮತ್ತು ಆಸ್ತಿಯನ್ನು ಸಂಪೂರ್ಣ ಮರೆತು
ಹೋಗಿದ್ದಾರೆ. ಆದ್ದರಿಂದ ತಂದೆಯಾದ ನನ್ನನ್ನು ಮತ್ತು ಆಸ್ತಿಯನ್ನು ನೆನಪು ಮಾಡಿ ಎಂದು ಹೇಳುತ್ತೇನೆ.
ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ, ಅಂದಮೇಲೆ ಅವಶ್ಯವಾಗಿ ತಂದೆಯನ್ನು ನೆನಪು ಮಾಡುವುದರಿಂದ
ನಮಗೆ ಸ್ವರ್ಗದ ರಾಜ್ಯಭಾಗ್ಯ ಸಿಗುವುದು. ಹೇಗೆ ಮಗನು ಜನ್ಮ ಪಡೆದರೆ ವಾರಸುಧಾರನು ಬಂದನೆಂದು
ತಂದೆಯು ಹೇಳುತ್ತಾರೆ. ಮಗಳಿಗಾಗಿ ಈ ರೀತಿ ಹೇಳುವುದಿಲ್ಲ ಆದರೆ ನೀವಾತ್ಮರೆಲ್ಲರೂ ಮಕ್ಕಳಾಗಿದ್ದೀರಿ.
ಆತ್ಮವು ಒಂದು ನಕ್ಷತ್ರವಾಗಿದೆ ಎಂದು ಹೇಳುತ್ತಾರೆ ಅಂದಮೇಲೆ ಅದು ಅಂಗುಷ್ಟಾಕಾರವಾಗಿರಲು ಹೇಗೆ
ಸಾಧ್ಯ! ಆತ್ಮವು ಬಹಳ ಸೂಕ್ಷ ವಾಗಿದೆ. ಅದು ಕಣ್ಣುಗಳಿಗೆ ಕಾಣಿಸುವುದಿಲ್ಲ. ಅದನ್ನು ದಿವ್ಯ
ದೃಷ್ಟಿಯಿಂದ ನೋಡಬಹುದು ಏಕೆಂದರೆ ಅವ್ಯಕ್ತ ವಸ್ತುವಾಗಿದೆ. ದಿವ್ಯ ದೃಷ್ಟಿಯಲ್ಲಿ ಚೈತನ್ಯವಾಗಿ
ಕಂಡು ಬರುತ್ತದೆ ಮತ್ತು ಮಾಯವಾಗಿ ಬಿಡುತ್ತದೆ. ಸಿಗುವುದೇನೂ ಇಲ್ಲ. ಕೇವಲ ಖುಷಿಯಾಗಿ ಬಿಡುತ್ತಾರೆ,
ಇದಕ್ಕೆ ಭಕ್ತಿಯ ಅಲ್ಪ ಸುಖವೆಂದು ಹೇಳುತ್ತಾರೆ. ಇದು ಭಕ್ತಿಯ ಫಲವಾಗಿದೆ, ಯಾರು ಬಹಳ ಭಕ್ತಿ
ಮಾಡಿರುವರೋ ಅವರಿಗೆ ಕಾಯಿದೆಯನುಸಾರ ಈ ಜ್ಞಾನದಿಂದ ಫಲ ಸಿಗುತ್ತದೆ. ಬ್ರಹ್ಮಾ ಮತ್ತು ವಿಷ್ಣುವನ್ನು
ಒಟ್ಟಿಗೆ ತೋರಿಸುತ್ತಾರೆ. ಬ್ರಹ್ಮಾ ಸೋ ವಿಷ್ಣು, ಭಕ್ತಿಯ ಫಲವಾಗಿ ರಾಜ್ಯಭಾಗ್ಯವು ವಿಷ್ಣುವಿನ
ರೂಪದಲ್ಲಿ ಸಿಗುತ್ತಿದೆ. ವಿಷ್ಣು ಹಾಗೂ ಕೃಷ್ಣನ ಸಾಕ್ಷಾತ್ಕಾರವನ್ನು ಅನೇಕರು ಮಾಡಿರುವರು. ಆದರೆ
ತಿಳಿಸಲಾಗುತ್ತದೆ - ಭಿನ್ನ-ಭಿನ್ನ ನಾಮ - ರೂಪಗಳಲ್ಲಿ ಭಕ್ತಿ ಮಾಡಿದ್ದಾರೆ, ಸಾಕ್ಷಾತ್ಕಾರಕ್ಕೆ
ಯೋಗ ಅಥವಾ ಜ್ಞಾನವೆಂದು ಹೇಳಲಾಗುವುದಿಲ್ಲ. ನೌಧಾಭಕ್ತಿಯಿಂದ ಸಾಕ್ಷಾತ್ಕಾರವಾಯಿತು, ಈಗ
ಸಾಕ್ಷಾತ್ಕಾರವಾಗದಿದ್ದರೂ ಪರವಾಗಿಲ್ಲ, ಮನುಷ್ಯರಿಂದ ದೇವತೆಗಳಾಗುವುದೇ ಗುರಿ-ಧ್ಯೇಯವಾಗಿದೆ. ನೀವು
ದೇವಿ- ದೇವತಾ ಧರ್ಮದವರಾಗುತ್ತೀರಿ, ಬಾಕಿ ಪುರುಷಾರ್ಥ ಮಾಡಿಸುವುದಕ್ಕಾಗಿ ತಂದೆಯು ಕೇವಲ ಇದನ್ನೇ
ತಿಳಿಸುತ್ತಾರೆ - ಮತ್ತೆಲ್ಲಾ ಸಂಗಗಳಿಂದ ಬುದ್ಧಿಯೋಗವನ್ನು ತೆಗೆದು, ದೇಹದಿಂದಲೂ ತೆಗೆದು
ತಂದೆಯನ್ನು ನೆನಪು ಮಾಡಿ. ಹೇಗೆ ಪ್ರಿಯತಮ, ಪ್ರಿಯತಮೆಯರು ಕೆಲಸವನ್ನೂ ಮಾಡುತ್ತಿರುತ್ತಾರೆ ಆದರೆ
ಮನಸ್ಸು ಪ್ರಿಯತಮನೊಂದಿಗೆ ತೊಡಗಿರುತ್ತದೆ. ತಂದೆಯೂ ಸಹ ಹೇಳುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ
ನೆನಪು ಮಾಡಿ ಎಂದು. ಆದರೂ ಸಹ ಬುದ್ಧಿಯು ಬೇರೆ-ಬೇರೆಯ ಕಡೆ ಓಡುತ್ತದೆ. ನೀವೀಗ
ತಿಳಿದುಕೊಂಡಿದ್ದೀರಿ - ನಾವು ಇಳಿಯುವುದರಲ್ಲಿ ಒಂದು ಕಲ್ಪವು ಹಿಡಿಸಿತು. ಸತ್ಯಯುಗದಿಂದ ಹಿಡಿದು
ಏಣಿಯನ್ನು ಇಳಿಯುತ್ತೇವೆ. ಸಲ್ಪ-ಸ್ವಲ್ಪವೇ ತುಕ್ಕು ಬೀಳುತ್ತಿರುತ್ತದೆ, ಸತೋದಿಂದ ತಮೋ ಆಗಿ
ಬಿಡುತ್ತೀರಿ. ಪುನಃ ಈಗ ತಮೋದಿಂದ ಸತೋ ಆಗುವುದಕ್ಕಾಗಿ ತಂದೆಯು ಜಂಪ್ ಮಾಡಿಸುತ್ತಾರೆ.
ಸೆಕೆಂಡಿನಲ್ಲಿ ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ.
ಅಂದಾಗ ಮಧುರಾತಿ ಮಧುರ
ಮಕ್ಕಳು ಪುರುಷಾರ್ಥ ಮಾಡಬೇಕಾಗಿದೆ, ತಂದೆಯಂತೂ ಶಿಕ್ಷಣವನ್ನು ಕೊಡುತ್ತಲೇ ಇರುತ್ತಾರೆ.
ಒಳ್ಳೊಳ್ಳೆಯ ಬುದ್ಧಿವಂತ ಮಕ್ಕಳೂ ಸಹ ಇದನ್ನು ಅನುಭವ ಮಾಡುತ್ತಾರೆ. ಖಂಡಿತವಾಗಿಯೂ ಬಹಳ
ಪರಿಶ್ರಮವಿದೆ, ಕೆಲವರು ತಿಳಿಸುತ್ತಾರೆ, ಕೆಲವರು ತಿಳಿಸುವುದೇ ಇಲ್ಲ. ತಮ್ಮ ಸ್ಥಿತಿಯ ಬಗ್ಗೆ
ತಿಳಿಸಬೇಕು. ತಂದೆಯನ್ನು ನೆನಪೇ ಮಾಡದಿದ್ದರೆ ಆಸ್ತಿಯು ಹೇಗೆ ಸಿಗುವುದು? ಸರಿಯಾಗಿ ನೆನಪು
ಮಾಡುವುದಿಲ್ಲ, ನಾವಂತೂ ಶಿವ ತಂದೆಯ ಮಕ್ಕಳು ಆಗಿಯೇ ಇದ್ದೇವೆ ಎಂದು ತಿಳಿದುಕೊಳ್ಳುತ್ತಾರೆ. ನೆನಪು
ಮಾಡದೆ ಇರುವುದರಿಂದ ಬಿದ್ದು ಹೋಗುತ್ತಾರೆ. ತಂದೆಯನ್ನು ನಿರಂತರ ನೆನಪು ಮಾಡಿದರೆ ತುಕ್ಕು
ಬಿಡುತ್ತದೆ, ಆದ್ದರಿಂದ ಗಮನ ಕೊಡಬೇಕಾಗುತ್ತದೆ. ಎಲ್ಲಿಯವರೆಗೆ ಈ ಶರೀರವಿದೆಯೋ ಅಲ್ಲಿಯವರೆಗೆ
ಪುರುಷಾರ್ಥವು ನಡೆಯುತ್ತಾ ಇರುವುದು. ಬುದ್ಧಿಯೂ ಸಹ ಹೇಳುತ್ತದೆ - ಪದೇ-ಪದೇ ನೆನಪು ಮರೆತು
ಹೋಗುತ್ತದೆ. ಈ ಯೋಗಬಲದಿಂದ ನೀವು ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಎಲ್ಲರೂ
ಒಂದೇ ತರಹ ಓಟವನ್ನು ಓಡುವುದಿಲ್ಲ. ಇದು ನಿಯಮವಿಲ್ಲ. ಸ್ಪರ್ಧೆಯಲ್ಲಿಯೂ ಸಹ ಸ್ವಲ್ಪವಾದರೂ
ಅಂತರವಾಗುತ್ತದೆ. ನಂಬರ್ವನ್, ಮತ್ತೆ ಪ್ಲಸ್ನಲ್ಲಿ ಬಂದು ಬಿಡುತ್ತಾರೆ. ಇಲ್ಲಿಯೂ ಸಹ ಮಕ್ಕಳದು
ಸ್ಪರ್ಧೆಯಾಗಿದೆ. ನೆನಪು ಮಾಡುವುದು ಮುಖ್ಯ ಮಾತಾಗಿದೆ. ನಾವು ಪಾಪಾತ್ಮರಿಂದ
ಪುಣ್ಯಾತ್ಮರಾಗುತ್ತೇವೆ ಎಂಬುದನ್ನಂತೂ ತಿಳಿದುಕೊಳ್ಳುತ್ತೀರಿ. ತಂದೆಯು ಆದೇಶ ನೀಡಿದ್ದಾರೆ, ಈಗ
ಪಾಪ ಮಾಡಿದರೆ ಅದು ನೂರರಷ್ಟಾಗುವುದು. ಬಹಳ ಮಕ್ಕಳು ಪಾಪ ಮಾಡುತ್ತಾರೆ ಆದರೆ ತಿಳಿಸುವುದಿಲ್ಲ.
ನಂತರ ಅದು ವೃದ್ಧಿಯಾಗುತ್ತಾ ಹೋಗುತ್ತದೆ ಮತ್ತೆ ಅಂತಿಮದಲ್ಲಿ ಅನುತ್ತೀರ್ಣರಾಗಿ ಬಿಡುತ್ತಾರೆ.
ತಿಳಿಸಲು ಸಂಕೋಚವಾಗುತ್ತದೆ. ಸತ್ಯವನ್ನು ತಿಳಿಸದೇ ಹೋದರೆ ತಮಗೆ ಮೋಸ ಮಾಡಿಕೊಳ್ಳುತ್ತಾರೆ. ತಂದೆಯು
ಈ ಮಾತನ್ನು ಕೇಳಿದರೆ ಏನು ಹೇಳುವರು ಎಂದು ಕೆಲವರಿಗೆ ಭಯವಾಗುತ್ತದೆ. ಇನ್ನೂ ಕೆಲವರು ಚಿಕ್ಕ
ತಪ್ಪನ್ನೂ ಸಹ ತಿಳಿಸಲು ಬಂದು ಬಿಡುತ್ತಾರೆ. ಆದರೆ ತಂದೆ ಅವರಿಗೆ ಹೇಳುತ್ತಾರೆ-ದೊಡ್ಡ ದೊಡ್ಡ
ತಪ್ಪುಗಳನ್ನೂ ಬಹಳ ಒಳ್ಳೆಯ ಮಕ್ಕಳೂ ಮಾಡುತ್ತಾರೆ ಒಳ್ಳೆ ಒಳ್ಳೆ ಮಹಾರಥಿಗಳನ್ನೂ ಸಹ ಮಾಯೆ
ಬಿಡುವುದಿಲ್ಲ, ಮಾಯೆಯು ಪೈಲ್ವಾನರನ್ನೂ ಸಹ ಚಕ್ರದಲ್ಲಿ ತರುತ್ತದೆ. ಇದರಲ್ಲಿ
ಬಹದ್ದೂರರಾಗಬೇಕಾಗಿದೆ. ಇಲ್ಲಿ ಅಸತ್ಯವು ನಡೆಯುವುದಿಲ್ಲ. ಸತ್ಯವನ್ನು ತಿಳಿಸುವುದರಿಂದ
ಹಗುರವಾಗಿಡುತ್ತೀರಿ. ತಂದೆಯು ಎಷ್ಟಾದರೂ ತಿಳಿಸಲಿ ಒಂದಲ್ಲ ಒಂದು ನಡೆಯುತ್ತದೆ. ಅನೇಕ ಪ್ರಕಾರದ
ಮಾತುಗಳಿರುತ್ತವೆ. ಈಗ ತಂದೆಯಿಂದ ರಾಜ್ಯವನ್ನು ಪಡೆಯಬೇಕಾಗಿದೆ ಅಂದಮೇಲೆ ಬುದ್ದಿಯನ್ನು ಮತ್ತೆಲ್ಲಾ
ಕಡೆಯಿಂದ ತೆಗೆಯಿರಿ ಎಂದು ತಂದೆಯು ತಿಳಿಸುತ್ತಾರೆ. ನೀವು ಮಕ್ಕಳಿಗೆ ಈಗ ಜ್ಞಾನ ಸಿಕ್ಕಿದೆ. 5000
ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು, ನೀವು ತಮ್ಮ ಜನ್ಮಗಳನ್ನೂ ಅರಿತುಕೊಂಡಿದ್ದೀರಿ.
ಕೆಲವರದು ಉಲ್ಟ್ಟಾ-ಸುಲ್ಟಾ ಜನ್ಮವಾಗುತ್ತದೆ. ಅದಕ್ಕೆ ಅಂಗವಿಕಲತೆಯೆಂದು ಹೇಳಲಾಗುತ್ತದೆ. ತಮ್ಮ
ಕರ್ಮಗಳನುಸಾರವೇ ಹೀಗಾಗುತ್ತದೆ. ಬಾಕಿ ಮನುಷ್ಯರಂತೂ ಮನುಷ್ಯರೇ ಆಗುತ್ತಾರೆ. ಆದ್ದರಿಂದ ತಂದೆಯು
ತಿಳಿಸುತ್ತಾರೆ - ಮೊದಲನೆಯದಾಗಿ ಪವಿತ್ರರಾಗಿರಬೇಕು. ಎರಡನೆಯದಾಗಿ ಸುಳ್ಳು, ಪಾಪ ಮಾಡಬಾರದು
ಇಲ್ಲದಿದ್ದರೆ ಬಹಳ ನಷ್ಟವುಂಟಾಗುವುದು. ನೋಡಿ, ಒಬ್ಬರಿಂದ ಸ್ವಲ್ಪ ತಪ್ಪಾಯಿತು, ಬಾಬಾ ಕ್ಷಮಿಸಿ
ಇಂತಹ ಕೆಲಸವನ್ನು ಇನ್ನೆಂದೂ ಮಾಡುವುದಿಲ್ಲವೆಂದು ತಂದೆಯ ಬಳಿ ಬಂದರು. ತಂದೆಯು ತಿಳಿಸಿದರು -
ಇಂತಹ ತಪ್ಪುಗಳು ಅನೇಕರಿಂದ ಆಗುವುದು, ನೀವಂತೂ ಸತ್ಯವಾಗಿ ತಿಳಿಸುವಿರಿ, ಕೆಲವರು ತಿಳಿಸುವುದೇ
ಇಲ್ಲ. ಕೆಲಕೆಲವರು ಬಹಳ ಒಳ್ಳೆಯ ಮಕ್ಕಳಿದ್ದಾರೆ. ಅವರ ಬುದ್ಧಿಯು ಎಂದೂ ಎಲ್ಲಿಯೂ ಹೋಗುವುದೇ ಇಲ್ಲ.
ಹೇಗೆ ಬಾಂಬೆಯಲ್ಲಿ ಡಾ|| ನಿರ್ಮಲ, ನಂ.1 ಸಂಪೂರ್ಣ ಸ್ವಚ್ಛ ಹೃದಯಿ ಆಗಿದ್ದಾರೆ, ಎಂದೂ
ಮನಸ್ಸಿನಲ್ಲಿ ಉಲ್ಟಾ ಸಂಕಲ್ಪವು ಬರುವುದಿಲ್ಲ. ಆದ್ದರಿಂದ ಹೃದಯವನ್ನೇರಿದ್ದಾರೆ. ಹೀಗೆ ಇನ್ನೂ
ಅನೇಕ ಮಕ್ಕಳಿದ್ದಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಕೇವಲ ಸತ್ಯ ಹೃದಯದಿಂದ ತಂದೆಯನ್ನು
ನೆನಪು ಮಾಡಿ, ಕರ್ಮವನ್ನಂತೂ ಮಾಡಲೇಬೇಕಾಗಿದೆ. ಬುದ್ಧಿಯೋಗವು ತಂದೆಯೊಂದಿಗಿರಲಿ, ಕೈ ಕೆಲಸದ ಕಡೆ,
ಬುದ್ಧಿಯು ತಂದೆಯ ಕಡೆ ಇರಲಿ. ಈ ಸ್ಥಿತಿಯು ಅಂತಿಮದ್ದಾಗಿದೆ. ಅದಕ್ಕಾಗಿಯೇ ಅತೀಂದ್ರಿಯ ಸುಖವನ್ನು
ಗೋಪ - ಗೋಪಿಯರಿಂದ ಕೇಳಿ, ಯಾರು ಈ ಸ್ಥಿತಿಯನ್ನು ಹೊಂದುತ್ತಾರೆಂದು ಹಾಡುತ್ತಾರೆ. ಯಾರು ಪಾಪ
ಕರ್ಮ ಮಾಡುವರೋ ಅವರದು ಈ ಸ್ಥಿತಿಯಾಗುವುದಿಲ್ಲ. ತಂದೆಯು ಚೆನ್ನಾಗಿ ತಿಳಿದುಕೊಂಡಿದ್ದಾರೆ.
ಆದ್ದರಿಂದಲೇ ಭಕ್ತಿ ಮಾರ್ಗದಲ್ಲಿಯೂ ಸಹ ಒಳ್ಳೆಯ ಅಥವಾ ಕೆಟ್ಟ ಕರ್ಮಕ್ಕೆ ಫಲ ಸಿಗುತ್ತದೆ.
ಕೊಡುವವರಂತೂ ತಂದೆಯಲ್ಲವೆ. ಯಾರು ಅನ್ಯರಿಗೆ ದುಃಖ ಕೊಡುವರು ಅವರು ಅವಶ್ಯವಾಗಿ ದುಃಖವನ್ನು
ಅನುಭವಿಸುವರು. ಎಂತಹ ಕರ್ಮ ಮಾಡುವರೋ ಅದರಂತೆ ಅನುಭವಿಸಲೇಬೇಕಾಗುವುದು. ಇಲ್ಲಂತೂ ತಂದೆಯು
ಪ್ರತ್ಯಕ್ಷವಾಗಿದ್ದಾರೆ. ತಿಳಿಸುತ್ತಿದ್ದಾರೆ - ಮಕ್ಕಳೇ, ಧರ್ಮರಾಜನೂ ನನ್ನ ಜೊತೆ ಇದ್ದಾರೆ. ಈ
ಸಮಯದಲ್ಲಿ ನನ್ನೊಂದಿಗೆ ಏನನ್ನೂ ಮುಚ್ಚಿಡಬೇಡಿ. ತಂದೆಗೆ ಎಲ್ಲವೂ ಗೊತ್ತಿದೆ, ನಾವು ಶಿವ
ತಂದೆಯೊಂದಿಗೆ ಆಂತರ್ಯದಲ್ಲಿ ಕ್ಷಮೆ ಕೇಳುತ್ತೇವೆ ಎಂದಲ್ಲ. ಏನೂ ಕ್ಷಮೆಯಾಗುವುದಿಲ್ಲ. ಯಾರದೇ
ಪಾಪವು ಮುಚ್ಚಿಡಲ್ಪಡುವುದಿಲ್ಲ. ಪಾಪ ಮಾಡುವುದರಿಂದ ದಿನ-ಪ್ರತಿದಿನ ಪಾಪಾತ್ಮರಾಗುತ್ತಾ
ಹೋಗುತ್ತೀರಿ. ಅದೃಷ್ಟದಲ್ಲಿಲ್ಲದಿದ್ದರೆ ಇದೇ ರೀತಿಯಾಗುತ್ತದೆ. ರಿಜಿಸ್ಟರ್ ಹಾಳಾಗಿ ಬಿಡುತ್ತದೆ.
ಒಂದು ಬಾರಿ ಸುಳ್ಳು ಹೇಳುತ್ತಾರೆ, ಸತ್ಯವನ್ನು ತಿಳಿಸಲಿಲ್ಲವೆಂದರೆ ಇವರು ಇದೇರೀತಿ ಕೆಲಸ
ಮಾಡುತ್ತಿರುತ್ತಾರೆ ಎಂದು ತಿಳಿಯಲಾಗುತ್ತದೆ. ಅಸತ್ಯವನ್ನೆಂದೂ ಮುಚ್ಚಿಡಲು ಸಾಧ್ಯವಿಲ್ಲ. ತಂದೆಯು
ಮತ್ತೆ ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳನೆಂದು
ಹೇಳಲಾಗುತ್ತದೆ. ಆದ್ದರಿಂದ ಬಾಬಾ, ನಮ್ಮಿಂದ ಈ ದೋಷವಾಯಿತೆಂದು ಹೇಳಬೇಕಲ್ಲವೆ. ತಂದೆಯು ಕೇಳಿದಾಗ
ಬಾಬಾ, ತಪ್ಪಾಯಿತು ಎಂದು ಹೇಳುತ್ತಾರೆ. ತಾವಾಗಿಯೇ ಏಕೆ ತಿಳಿಸುವುದಿಲ್ಲ? ತಂದೆಗೆ ತಿಳಿದಿದೆ.
ಅನೇಕ ಮಕ್ಕಳು ಮುಚ್ಚಿಡುತ್ತಾರೆ. ತಂದೆಗೆ ತಿಳಿಸುವುದರಿಂದ ಅವರಿಂದ ಶ್ರೀಮತ ಸಿಗುವುದು. ಕೆಲವೊಂದು
ಕಡೆಯಿಂದ ಪತ್ರಗಳು ಬರುತ್ತವೆ, ಅವಕ್ಕೆ ಏನು ಉತ್ತರ ನೀಡಬೇಕು ಎಂದು ಕೇಳಿರಿ. ನೀವು
ತಿಳಿಸುವುದರಿಂದ ಶ್ರೀಮತವು ಸಿಗುವುದು. ಅನೇಕರಿಗೆ ಕೆಟ್ಟ ಹವ್ಯಾಸವಿದೆ. ಅದನ್ನು ಮಚ್ಚಿಡುತ್ತಾರೆ,
ಕೆಲವರಿಗೆ ಲೌಕಿಕ ಮನೆಯಿಂದ ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ಭಲೆ ಧರಿಸಿ, ಆದರೆ
ಜವಾಬ್ದಾರನು ತಂದೆಯಾದರು. ಸ್ಥಿತಿಯನ್ನು ನೋಡಿ ಕೆಲವರಿಗೆ ತಿಳಿಸುತ್ತೇನೆ - ಮಕ್ಕಳೇ, ನೀವು
ಯಜ್ಞದಲ್ಲಿ ಕಳುಹಿಸಿ ನೀವು ಮನೆಯಿಂದ ಕೊಟ್ಟಿರುವ ವಸ್ತುವನ್ನು ಅದಲು-ಬದಲು ಮಾಡಿಕೊಂಡರೆ ಒಳ್ಳೆಯದು
ಇಲ್ಲದಿದ್ದರೆ ಅದೇ ನೆನಪಿಗೆ ಬರುವುದು. ತಂದೆಯು ಬಹಳ ಎಚ್ಚರ ವಹಿಸುತ್ತಾರೆ. ಮಾರ್ಗವು ಬಹಳ
ಉನ್ನತವಾಗಿದೆ. ಹೆಜ್ಜೆ-ಹೆಜ್ಜೆಯಲ್ಲಿ ಸರ್ಜನ್ನ ಸಲಹೆಯನ್ನು ತೆಗೆದುಕೊಳ್ಳಬೇಕಾಗಿದೆ. ತಂದೆಯು
ಶಿಕ್ಷಣವನ್ನೇ ಕೊಡುತ್ತಾರೆ- ಮಕ್ಕಳೇ, ಹೀಗೀಗೆ ಪತ್ರ ಬರೆದರೆ ಬಾಣವು ನಾಟುತ್ತದೆ ಆದರೆ ಅನೇಕರಲ್ಲಿ
ದೇಹಾಭಿಮಾನವಿದೆ. ಶ್ರೀಮತದಂತೆ ನಡೆಯದೇ ಇದ್ದರೆ ತಮ್ಮ ಖಾತೆಯನ್ನೇ ಕೆಡಿಸಿಕೊಳ್ಳುತ್ತಾರೆ.
ಶ್ರೀಮತದಂತೆ ನಡೆಯುವುದರಿಂದ ಪ್ರತೀ ಮಾತಿನಲ್ಲಿ ಲಾಭವಿದೆ. ಮಾರ್ಗವು ಎಷ್ಟು ಸಹಜವಾಗಿದೆ! ಕೇವಲ
ನೆನಪಿನಿಂದ ನೀವು ವಿಶ್ವದ ಮಾಲೀಕರಾಗುತ್ತೀರಿ. ವೃದ್ಧರಿಗಾಗಿ ತಂದೆಯು ತಿಳಿಸುತ್ತಾರೆ - ಕೇವಲ
ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ಪ್ರಜೆಗಳನ್ನು ಮಾಡಿಕೊಳ್ಳದಿದ್ದರೆ
ರಾಜ-ರಾಣಿಯಾಗುವುದಕ್ಕೂ ಸಾಧ್ಯವಿಲ್ಲ. ಆದರೂ ಸಹ ಯಾರು ತಪ್ಪು ಮಾಡಿ ಮುಚ್ಚಿಡುವರೋ ಅವರಿಗಿಂತಲೂ
ಶ್ರೇಷ್ಠ ಪದವಿಯನ್ನು ಪಡೆಯಬಹುದು. ತಿಳಿಸುವುದು ತಂದೆಯ ಕರ್ತವ್ಯವಾಗಿದೆ ನಂತರ ನಮಗೆ
ತಿಳಿದಿರಲಿಲ್ಲವೆಂದು ಹೇಳುವಂತಾಗಬಾರದು. ಆದ್ದರಿಂದ ತಂದೆಯು ಎಲ್ಲವನ್ನೂ ತಿಳಿಸುತ್ತಾರೆ,
ತಪ್ಪನ್ನು ಕೂಡಲೇ ತಿಳಿಸಬೇಕು. ತಪ್ಪಾದರೂ ಪರವಾಗಿಲ್ಲ ಮತ್ತೆ ಮಾಡಬಾರದು. ಇದರಲ್ಲಿ ಹೆದರುವ
ಮಾತಿಲ್ಲ. ಪ್ರೀತಿಯಿಂದ ತಿಳಿಸಲಾಗುತ್ತದೆ, ತಂದೆಗೆ ತಿಳಿಸುವುದರಲ್ಲಿ ಕಲ್ಯಾಣವಿದೆ. ತಂದೆಯು
ಮುದ್ದು ಮಾಡಿ ಪ್ರೀತಿಯಿಂದ ತಿಳಿಸುತ್ತಾರೆ. ಇಲ್ಲದಿದ್ದರೆ ಒಮ್ಮೆಲೆ ಹೃದಯದಿಂದ ಬಿದ್ದು
ಹೋಗುತ್ತಾರೆ. ಇವರ ಹೃದಯದಿಂದ ಬಿದ್ದರೆ ಶಿವ ತಂದೆ ಹೃದಯದಿಂದಲೂ ಬಿದ್ದರು. ನಾವು ಡೈರೆಕ್ಟ್ ಶಿವ
ತಂದೆಯಿಂದ ತೆಗೆದುಕೊಳ್ಳುತ್ತೇವೆ ಎಂದಲ್ಲ, ಏನೂ ಸಾಧ್ಯವಿಲ್ಲ. ತಂದೆಯನ್ನು ನೆನಪು ಮಾಡಿ ಎಂದು
ಎಷ್ಟು ತಿಳಿಸಿದರೆ ಅಷ್ಟು ಬುದ್ಧಿಯು ಇನ್ನೂ ಹೊರಗಡೆ ಅಲೆಯುತ್ತಿರುತ್ತದೆ. ಇವೆಲ್ಲಾ ಮಾತುಗಳನ್ನು
ಡೈರೆಕ್ಟ್ ತಂದೆಯು ತಿಳಿಸುತ್ತಾರೆ ನಂತರದಲ್ಲಿ ಇದರ ಶಾಸ್ತ್ರಗಳಾಗುತ್ತವೆ. ಇದರಲ್ಲಿ ಗೀತೆಯೇ
ಸರ್ವೋತ್ತಮ ಶಾಸ್ತ್ರವಾಗಿದೆ. ಸರ್ವಶಾಸ್ತಮಯಿ ಶಿರೋಮಣಿ ಗೀತೆಯೆಂದು ಗಾಯನವಿದೆ, ಅದನ್ನು ಭಗವಂತನು
ಹಾಡಿದ್ದಾರೆ. ಉಳಿದೆಲ್ಲಾ ಧರ್ಮಗಳು ನಂತರದಲ್ಲಿ ಬರುತ್ತವೆ. ಗೀತೆಯು ಮಾತಾಪಿತಾ ಉಳಿದೆಲ್ಲರೂ
ಮಕ್ಕಳಾದರು. ಗೀತೆಯಲ್ಲಿಯೇ ಭಗವಾನುವಾಚವಿದೆ. ಕೃಷ್ಣನಿಗೆ ದೈವೀ ಸಂಪ್ರದಾಯದವನೆಂದು ಹೇಳುತ್ತಾರೆ.
ದೇವತೆಗಳಂತೂ ಕೇವಲ ಬ್ರಹ್ಮಾ, ವಿಷ್ಣು, ಶಂಕರನಾಗಿದ್ದಾರೆ. ಭಗವಂತನು ದೇವತೆಗಳಿಗಿಂತಲೂ
ಶ್ರೇಷ್ಠರಾದರು. ಬ್ರಹ್ಮಾ- ವಿಷ್ಣು -ಶಂಕರ ಮೂವರನ್ನೂ ರಚಿಸುವವರು ಶಿವನಾದರು, ಬಹಳ ಸ್ಪಷ್ಟವಾಗಿದೆ.
ಬ್ರಹ್ಮನ ಮೂಲಕ ಸ್ಥಾಪನೆ, ಕೃಷ್ಣನ ಮೂಲಕ ಸ್ಥಾಪನೆಯೆಂದು ಎಂದಿಗೂ ಹೇಳುವುದಿಲ್ಲ, ಬ್ರಹ್ಮನ
ರೂಪವನ್ನು ತೋರಿಸಿದ್ದಾರೆ ಅಂದಾಗ ಯಾವುದರ ಸ್ಥಾಪನೆ? ವಿ ವಿಷ್ಣು, ಪುರಿಯ ಸ್ಥಾಪನೆ. ಈ ಚಿತ್ರವು
ಹೃದಯದಲ್ಲಿ ಮುದ್ರಿತವಾಗಿ ಬಿಡಬೇಕು. ನಾವು ಶಿವ ತಂದೆಯಿಂದ ಇವರ ಮೂಲಕ ಆಸ್ತಿಯನ್ನು
ತೆಗೆದುಕೊಳ್ಳುತ್ತೇವೆ. ತಂದೆಯಿಲ್ಲದೆ ತಾತನ ಆಸ್ತಿಯು ಸಿಗಲು ಸಾಧ್ಯವಿಲ್ಲ. ಯಾರಾದರೂ ಸಿಗಲಿ
ಅವರಿಗೆ ಇದನ್ನು ತಿಳಿಸಿ - ತಂದೆಯು ತಿಳಿಸುತ್ತಾರೆ, ನನ್ನೊಬ್ಬನನ್ನೇ ನೆನಪು ಮಾಡಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ ದಾದಾ ರವರ ನೆನಪು, ಪ್ರೀತಿ ಹಾಗೂ
ಸುಪ್ರಭಾತ, ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಗುರಿಯು ಬಹಳ
ಉನ್ನತವಾಗಿದೆ ಆದ್ದರಿಂದ ಹೆಜ್ಜೆ - ಹೆಜ್ಜೆಯಲ್ಲಿ ಸರ್ಜನ್ನಿಂದ ಸಲಹೆ ತೆಗೆದುಕೊಳ್ಳಬೇಕಾಗಿದೆ.
ಶ್ರೀಮತದಂತೆ ನಡೆಯುವುದರಲ್ಲಿಯೇ ಲಾಭವಿದೆ. ತಂದೆಯೊಂದಿಗೆ ಏನನ್ನೂ ಮುಚ್ಚಿಡಬಾರದು.
2. ದೇಹ ಮತ್ತು
ದೇಹಧಾರಿಗಳಿಂದ ಬುದ್ಧಿಯೋಗವನ್ನು ತೆಗೆದು ಒಬ್ಬ ತಂದೆಯೊಂದಿಗೆ ಇಡ ಬೇಕಾಗಿದೆ. ಕರ್ಮ ಮಾಡುತ್ತಲೂ
ಒಬ್ಬ ತಂದೆಯ ನೆನಪಿನಲ್ಲಿರುವ ಪುರುಷಾರ್ಥ ಮಾಡಬೇಕಾಗಿದೆ.
ವರದಾನ:
ಸದಾ ಏಕರಸ
ಸಂಪನ್ನ ಸ್ಥಿತಿಯಲ್ಲಿ ಇರುವಂತಹ ಪುರುಷಾರ್ಥಿಯಿಂದ ಪ್ರಾಲಬ್ಧ ಸ್ವರೂಪ ಭವ.
ಬಾಪ್ದಾದಾರವರು ವತನದಿಂದ
ನೋಡುತ್ತಾರೆ - ಹಲವು ಮಕ್ಕಳ ಸ್ಥಿತಿಯು ಬಹಳ ಬದಲಾಗುತ್ತದೆ, ಕೆಲವೊಮ್ಮೆ ಆಶ್ಚರ್ಯ ಪಡುವ ಮೂಡ್,
ಕೆಲವೊಮ್ಮೆ ಪ್ರಶ್ನಾರ್ಥಕ ಚಿಹ್ನೆಯ ಮೂಡ್, ಕೆಲವೊಮ್ಮೆ ತಬ್ಬಿಬ್ಬಾಗುವ ಮೂಡ್, ಕೆಲವೊಮ್ಮೆ ಒತ್ತಡ,
ಕೆಲವೊಮ್ಮೆ ಗಮನದ ಉಯ್ಯಾಲೆಯಲ್ಲಿ.... ಆದರೆ ಸಂಗಮಯುಗವು ಪ್ರಾಲಬ್ಧದ ಯುಗವಾಗಿದೆಯೇ ಹೊರತು
ಪುರುಷಾರ್ಥಿಯಾಗಿ ಇರುವುದಲ್ಲ ಆದ್ದರಿಂದ ತಂದೆಯ ಗುಣವೇನಿದೆಯೋ ಅದು ಮಕ್ಕಳದು, ತಂದೆಯ
ಸ್ಥಿತಿಯೇನಾಗಿದೆಯೋ ಅದೇ ಮಕ್ಕಳಾಗಿದೆ - ಇದೇ ಸಂಗಮಯುಗದ ಪ್ರಾಲಬ್ಧವಾಗಿದೆ. ಅಂದಮೇಲೆ ಸದಾ ಏಕರಸ
ಒಂದೇ ಸಂಪನ್ನ ಸ್ಥಿತಿಯಲ್ಲಿ ಇರುತ್ತೀರೆಂದರೆ ತಂದೆಯ ಸಮಾನರೆಂದು ಹೇಳಲಾಗುತ್ತದೆ ಅರ್ಥಾತ್
ಪ್ರಾಲಬ್ಧ ಸ್ವರೂಪರೆಂದು ಹೇಳಲಾಗುತ್ತದೆ.
ಸ್ಲೋಗನ್:
ಬಾಪ್ದಾದಾರವರ
ಕೈಯಲ್ಲಿ ಬುದ್ಧಿಯೆಂಬ ಕೈಯಿರಲಿ, ಹೀಗಿದ್ದಾಗ ಪರೀಕ್ಷೆಗಳೆಂಬ ಸಾಗರದಲ್ಲಿ ಅಲುಗಾಡುವುದಿಲ್ಲ (ಏರುಪೇರಾಗುವುದಿಲ್ಲ).
ಅವ್ಯಕ್ತ ಸೂಚನೆ:-
“ನಿಶ್ಚಯದ ಫೌಂಡೇಷನ್ (ತಳಪಾಯವನ್ನು) ಬಲಗೊಳಿಸಿ ಸದಾ ನಿರ್ಭಯ ಮತ್ತು ನಿಶ್ಚಿಂತರಾಗಿರಿ”
ನಂಬಿಗಸ್ತರ ಮೊದಲನೇ
ಲಕ್ಷಣವಾಗಿದೆ - ಪ್ರತಿ ಸೆಕೆಂಡ್ ಪ್ರತಿ ಹೆಜ್ಜೆ ಶ್ರೀಮತದಂತೆ ಅಕ್ಯುರೇಟಾಗಿ ನೆಡೆಯುವುದು.
ನಿಖರವಾದ (ಅಕ್ಯುರೇಟ್) ಮೂರ್ತಿಯಾಗುವುದು ಅರ್ಥಾತ್ ಸುತ್ತಿಗೆಯಿಂದ ಬಡಿಯಬೇಕು. ಸುತ್ತಿಗೆಯಿಂದಲೇ
ಅದನ್ನು ಬಡಿದು-ಬಡಿದು ಸರಿ ಮಾಡುತ್ತಾರೆ. ನೀವಂತು ಸುತ್ತಿಗೆಯ ಏಟು ತಿನ್ನುವ ಅನುಭವಿಯಾಗಿದ್ದೀರಿ,
ಯಾವುದು ಹೊಸದಲ್ಲ. ಆಟವೆನಿಸುತ್ತದೆಯಲ್ಲವೇ. ನೋಡುತ್ತಿರುತ್ತೀರಿ ಮತ್ತು ಮುಗುಳ್ನಗುತ್ತಿರುತ್ತೀರಿ.
ಹೀರೋ (ನಾಯಕ) ಪಾತ್ರಧಾರಿ ಅರ್ಥಾತ್ ಸರಿಯಾದ (ಅಕ್ಯುರೇಟ್) ಪಾತ್ರ ಅಭಿನಯಿಸುವವರು, ನಿಶ್ಚಯಬುದ್ಧಿ
ನಿಶ್ಚಿಂತ ಆತ್ಮ.
ಸೂಚನೆ: ಇಂದು
ನಮ್ಮೆಲ್ಲರ ಅತೀಪ್ರಿಯ ಬಾಪ್ದಾದಾರವರ ಕಣ್ಮಣೀ, ತಮ್ಮ ಹೃದಯದಲ್ಲಿ ಬಾಪ್ದಾದಾರವರನ್ನು
ಇಟ್ಟುಕೊಳ್ಳುವಂತಹ ಮಧುರ ದಾದಿ ಗುಲ್ಜಾರ್ ಜೀಯವರ ಪುಣ್ಯ ಸ್ಮೃತಿ ದಿವಸದಂದು ನಾವೆಲ್ಲರು
ಬ್ರಾಹ್ಮಣ ಕುಲ ಭೂಷಣ ಸಹೋದರ-ಸಹೋದರಿಯರು ಅವರ ಮೂಲಕ ಪ್ರಿಯ ಅವ್ಯಕ್ತ ಬಾಪ್ದಾದಾರವರ ಪಾಲನೆ ಏನು
ಸಿಕ್ಕಿದೆ, ಆ ಪಾಲನೆಯ ರಿಟರ್ನ್ ಕೊಡುವುದರ ಶುಭ ಸಂಕಲ್ಪ ಮಾಡಿ. ಹೇಗೆ ದಾದಿಜೀಯವರ ಪ್ರತಿ ಹೆಜ್ಜೆ
ಶ್ರೀಮತದಂತೆ ಸರಿಯಾಗಿ ನಡೆದು, ಸದಾ ತಮ್ಮ ಮುಗುಳ್ನಗುವ ಮುಖದಿಂದ ಎಲ್ಲರಿಗೆ ಆಶೀರ್ವಾದ ಕೊಟ್ಟರು
ಮತ್ತು ಆಶೀರ್ವಾದ ತೆಗೆದುಕೊಂಡರು, ಅಕ್ಯುರೇಟ್ ಪಾತ್ರ ಅಭಿನಯಿಸಿದರು. ಹ್ಹಗೆಯೇ ನಾವೆಲ್ಲರು ಅವರ
ಹೆಜ್ಜೆಗಳ ಗುರುತಿನ ಮೇಲೆ ನಡೆದು ಅವರಿಗೆ ತಮ್ಮ ಸ್ನೇಹ ಸುಮನ ಅರ್ಪಿತ ಮಾಡೋಣ, ಇದೇ ಅವರ ಪ್ರತಿ
ಸತ್ಯ ಶ್ರದ್ಧಾಂಜಲಿಯಾಗಿದೆ. ಓಂ ಶಾಂತಿ.