11.06.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ನೀವೀಗ ಬೇಹದ್ದಿನ ಪವಿತ್ರತೆಯನ್ನು ಧಾರಣೆ ಮಾಡಬೇಕಾಗಿದೆ, ಬೇಹದ್ದಿನ ಪವಿತ್ರತೆಯೆಂದರೆ ಒಬ್ಬ ತಂದೆಯ ವಿನಃ ಮತ್ತ್ಯಾರ ನೆನಪೂ ಬರಬಾರದು”

ಪ್ರಶ್ನೆ:
ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುವುದಕ್ಕೆ ಮೊದಲಿನ ಪುರುಷಾರ್ಥ ಮತ್ತು ಅದರ ನಂತರದ ಸ್ಥಿತಿಯಲ್ಲಿ ಯಾವ ಅಂತರವಾಗುತ್ತದೆ?

ಉತ್ತರ:
ಯಾವಾಗ ನೀವು ತಂದೆಯಿಂದ ಆಸ್ತಿಯನ್ನು ಪಡೆಯುತ್ತೀರೋ ಆಗ ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ಒಬ್ಬ ತಂದೆಯನ್ನು ನೆನಪು ಮಾಡುವ ಪುರುಷಾರ್ಥ ಮಾಡುತ್ತೀರಿ ಮತ್ತು ಆಸ್ತಿಯು ಸಿಕ್ಕಿದ ನಂತರ ತಂದೆಯನ್ನೇ ಮರೆತುಹೋಗುತ್ತೀರಿ. ಈಗ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ ಆದ್ದರಿಂದ ಯಾರೊಂದಿಗೂ ಹೊಸ ಸಂಬಂಧವನ್ನು ಬೆಳೆಸಬೇಡಿ, ಇಲ್ಲವೆಂದರೆ ಅದನ್ನು ಮರೆಯುವುದರಲ್ಲಿ ಕಷ್ಟವಾಗುವುದು. ಎಲ್ಲವನ್ನೂ ಮರೆತು ತಂದೆಯನ್ನು ನೆನಪು ಮಾಡಿದಾಗಲೇ ಆಸ್ತಿಯು ಸಿಗುವುದು.

ಗೀತೆ:
ಈ ಸಮಯವು ಕಳೆಯುತ್ತಿದೆ..........

ಓಂ ಶಾಂತಿ.
ಮಧುರಾತಿ ಮಧುರ ಆತ್ಮೀಯ ಮಕ್ಕಳಪ್ರತಿ ತಂದೆಯು ತಿಳಿಸುತ್ತಾರೆ- ಯಾರ್ಯಾರಿಗೆ ಜ್ಞಾನಿ ಮತ್ತು ಅಜ್ಞಾನಿಗಳೆಂದು ಕರೆಯಲಾಗುತ್ತದೆ ಎಂಬುದನ್ನು ಕೇವಲ ನೀವು ಬ್ರಾಹ್ಮಣರೇ ತಿಳಿದುಕೊಂಡಿದ್ದೀರಿ. ಇದರಿಂದ ನೀವು ನಾವಾತ್ಮರಾಗಿದ್ದೇವೆ, ಅವರು ಪರಮಪಿತನಾಗಿದ್ದಾರೆ ಎಂಬುದನ್ನು ಅರಿತಿದ್ದೀರಿ. ನಿಮ್ಮ ಸ್ಥಾನದಿಂದ ಮಧುಬನಕ್ಕೆ ಬರುತ್ತೀರೆಂದರೆ ಮೊದಲು ಅವಶ್ಯವಾಗಿ ತಮ್ಮನ್ನು ಆತ್ಮನೆಂದು ತಿಳಿಯುತ್ತೀರಿ, ನಾವು ನಮ್ಮ ತಂದೆಯ ಬಳಿ ಹೋಗುತ್ತೇವೆ. ಬಾಬಾ ಎಂದು ಶಿವತಂದೆಗೇ ಹೇಳುತ್ತಾರೆ. ಶಿವತಂದೆಯು ಪ್ರಜಾಪಿತ ಬಹ್ಮಾನ ತನುವಿನಲ್ಲಿದ್ದಾರೆ, ಇವರೂ ತಂದೆಯಾದರು. ನೀವು ಮನೆಯಿಂದ ಹೊರಡುವಾಗ ಬಾಪ್ದಾದಾರವರ ಬಳಿ ಹೋಗುತ್ತೇವೆಂದು ತಿಳಿಯುತ್ತೀರಿ. ಪತ್ರದಲ್ಲಿಯೂ ಬಾಪ್ದಾದಾ ಎಂದು ಬರೆಯುತ್ತೀರಿ, ಶಿವತಂದೆ, ಬ್ರಹ್ಮಾ-ದಾದಾ. ನಾವು ತಂದೆಯ ಬಳಿ ಹೋಗುತ್ತೇವೆ, ತಂದೆಯು ಕಲ್ಪ-ಕಲ್ಪವೂ ನಮ್ಮೊಂದಿಗೆ ಮಿಲನ ಮಾಡುತ್ತಾರೆ, ನಮ್ಮನ್ನು ಬೇಹದ್ದಿನ ಪವಿತ್ರರನ್ನಾಗಿ ಮಾಡಿ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಪವಿತ್ರತೆಯಲ್ಲಿ ಹದ್ದು ಮತ್ತು ಬೇಹದ್ದು ಇದೆ. ನೀವು ಸಂಪೂರ್ಣ ಪವಿತ್ರ ಸತೋಪ್ರಧಾನರಾಗಲು ಪುರುಷಾರ್ಥ ಮಾಡುತ್ತೀರಿ, ನಂಬರ್ವಾರಂತೂ ಇದ್ದೇ ಇರುತ್ತಾರೆ, ಬೇಹದ್ದಿನ ಪವಿತ್ರತೆ ಅರ್ಥಾತ್ ಒಬ್ಬ ಬೇಹದ್ದಿನ ತಂದೆಯ ವಿನಃ ಮತ್ತ್ಯಾರ ನೆನಪೂ ಬರಬಾರದು. ಅವರು ಬಹಳ ಮಧುರ ತಂದೆಯಾಗಿದ್ದಾರೆ. ಸರ್ವಶ್ರೇಷ್ಠ ಭಗವಂತ ಹಾಗೂ ಬೇಹದ್ದಿನ ತಂದೆಯಾಗಿದ್ದಾರೆ, ಅವರನ್ನು ನೀವು ಮಕ್ಕಳೇ ಅರಿತಿದ್ದೀರಿ. ಆ ತಂದೆಯು ಸದಾ ಭಾರತದಲ್ಲಿಯೇ ಬರುತ್ತಾರೆ, ಬಂದು ಬೇಹದ್ದಿನ ಸನ್ಯಾಸ ಮಾಡಿಸುತ್ತಾರೆ ಸನ್ಯಾಸವು ಮುಖ್ಯವಾಗಿದೆಯಲ್ಲವೆ, ಯಾವುದಕ್ಕೆ ವೈರಾಗ್ಯವೆಂದು ಹೇಳಲಾಗುತ್ತದೆ. ತಂದೆಯು ಈಗ ಇಡೀ ಹಳೆಯ ಛೀ ಛೀ ಪ್ರಪಂಚದಿಂದ ವೈರಾಗ್ಯ ತರಿಸುತ್ತಾರೆ- ಮಕ್ಕಳೇ, ಈ ಹಳೆಯ ಪ್ರಪಂಚದಿಂದ ಸಾವನ್ನಪ್ಪಿದಾಗ ಸ್ವರ್ಗವಾಸಿಯಾದರೆಂದು ಹೇಳುತ್ತಾರೆ ಅಂದಮೇಲೆ ಇದುವರೆವಿಗೂ ನರಕದಲ್ಲಿದ್ದರಲ್ಲವೆ ಆದರೆ ಇವರು ಏನೆಲ್ಲವನ್ನು ಹೇಳುವರೋ ಅದು ತಪ್ಪಾಗಿದೆ ಎಂದು ನೀವು ತಿಳಿದಿದ್ದೀರಿ. ತಂದೆಯು ಸ್ವರ್ಗವಾಸಿಗಳಾಗಲು ಸತ್ಯಮಾತನ್ನು ತಿಳಿಸುತ್ತಾರೆ. ಅಂದಾಗ ಈ ಸಮಯದಲ್ಲಿಯೇ ಪುರುಷಾರ್ಥ ಮಾಡಬೇಕಾಗಿದೆ. ಸ್ವರ್ಗವಾಸಿಗಳಾಗಲು ತಂದೆಯ ವಿನಃ ಮತ್ತ್ಯಾರೂ ಪುರುಷಾರ್ಥವನ್ನು ಮಾಡಿಸಲು ಸಾಧ್ಯವಿಲ್ಲ. 21 ಜನ್ಮಗಳಿಗಾಗಿ ಸ್ವರ್ಗವಾಸಿಗಳಾಗಲು ನೀವೀಗ ಪುರುಷಾರ್ಥ ಮಾಡುತ್ತಿದ್ದೀರಿ. ಮಾಡಿಸುವವರು ತಂದೆಯಾಗಿದ್ದಾರೆ, ಅವರಿಗೆ ಸ್ವರ್ಗದ ರಚಯಿತನೆಂದು ಹೇಳಲಾಗುವುದು. ತಾವೇ ಬಂದು ತಿಳಿಸುತ್ತಾರೆ- ಮಕ್ಕಳೇ, ನಾನು ಮೊದಲು ನಿಮ್ಮನ್ನು ಶಾಂತಿಧಾಮಕ್ಕೆ ಕರೆದುಕೊಂಡು ಹೋಗುವೆನು, ಮಾಲೀಕನಲ್ಲವೆ. ಶಾಂತಿಧಾಮಕ್ಕೆ ಹೋಗಿ ನಂತರ ಸುಖಧಾಮದಲ್ಲಿ ಪಾತ್ರವನ್ನಭಿನಯಿಸಲು ಬರುತ್ತೀರಿ. ನಾವು ಶಾಂತಿಧಾಮಕ್ಕೆ ಹೋದಾಗ ಎಲ್ಲಾ ಧರ್ಮದವರೂ ಶಾಂತಿಧಾಮಕ್ಕೆ ಹೋಗುವರು. ಬುದ್ಧಿಯಲ್ಲಿ ಈ ಡ್ರಾಮಾದ ಚಕ್ರವನ್ನು ಇಟ್ಟುಕೊಳ್ಳಬೇಕಾಗಿದೆ. ನಾವೆಲ್ಲರೂ ಶಾಂತಿಧಾಮಕ್ಕೆ ಹೋಗುತ್ತೇವೆ ಮತ್ತು ನಾವೇ ಮೊಟ್ಟಮೊದಲಿಗೆ ಬಂದು ತಂದೆಯಿಂದ ಆಸ್ತಿಯನ್ನು ಪಡೆಯುತ್ತೇವೆ. ಯಾರಿಂದ ಆಸ್ತಿಯನ್ನು ಪಡೆಯುವೆವೋ ಅವರನ್ನು ಅವಶ್ಯವಾಗಿ ನೆನಪು ಮಾಡಬೇಕು. ಆಸ್ತಿಯು ಸಿಕ್ಕಿದ ಮೇಲೆ ಮತ್ತೆ ತಂದೆಯ ನೆನಪೇ ಮರೆತುಹೋಗುವುದು. ಆಸ್ತಿಯು ಬಹಳ ಸಹಜ ರೀತಿಯಿಂದ ಸಿಗುತ್ತದೆ. ತಂದೆಯು ಸನ್ಮುಖದಲ್ಲಿ ತಿಳಿಸುತ್ತಾರೆ- ಮಧುರ ಮಕ್ಕಳೇ, ನಿಮಗೆ ಯಾವುದೆಲ್ಲಾ ದೇಹದ ಸಂಬಂಧಗಳಿವೆಯೋ ಎಲ್ಲವನ್ನೂ ಮರೆಯಿರಿ, ಈಗ ಯಾವುದೇ ಹೊಸ ಸಂಬಂಧವನ್ನು ಬೆಳೆಸಿಕೊಳ್ಳಬಾರದು. ಒಂದುವೇಳೆ ಯಾವುದೇ ಸಂಬಂಧವನ್ನು ಬೆಳೆಸುತ್ತೀರೆಂದರೆ ಮತ್ತೆ ಅವರನ್ನು ಮರೆಯಬೇಕಾಗುವುದು. ತಿಳಿದುಕೊಳ್ಳಿ- ಮಗ ಅಥವಾ ಮಗಳ ಜನ್ಮವಾದರೆ ಅದೂ ಸಹ ಕಷ್ಟವಾಯಿತಲ್ಲವೆ ಏಕೆಂದರೆ ನೆನಪು ಇನ್ನೂ ಹೆಚ್ಚಾಯಿತಲ್ಲವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ- ಎಲ್ಲರನ್ನೂ ಮರೆತು ಒಬ್ಬರನ್ನೇ ನೆನಪು ಮಾಡಿ. ಅವರೇ ನಮ್ಮ ಮಾತಾಪಿತಾ, ಶಿಕ್ಷಕ, ಸದ್ಗುರು, ಎಲ್ಲವೂ ಆಗಿದ್ದಾರೆ. ಆ ಒಬ್ಬ ತಂದೆಯ ಮಕ್ಕಳು ನಾವು ಸಹೋದರ-ಸಹೋದರಿಯರಾಗಿದ್ದೇವೆ. ಚಿಕ್ಕಪ್ಪ, ದೊಡ್ಡಪ್ಪ ಮೊದಲಾದ ಯಾವ ಸಂಬಂಧವೂ ಇಲ್ಲ. ಇದೊಂದೇ ಸಮಯದಲ್ಲಿ ಸಹೋದರ-ಸಹೋದರಿಯರ ಸಂಬಂಧವಿರುತ್ತದೆ. ಬ್ರಾಹ್ಮಣ ಮಕ್ಕಳು ಶಿವತಂದೆಯ ಮಕ್ಕಳಾಗಿದ್ದೀರಿ ಮತ್ತು ಮೊಮ್ಮಕ್ಕಳೂ ಆಗಿದ್ದೀರಿ, ಇದು ಬುದ್ಧಿಯಲ್ಲಿ ಪಕ್ಕಾ ನೆನಪಿರುತ್ತದೆಯಲ್ಲವೆ ಆದರೆ ನಂಬರ್ವಾರ್ ಪುರುಷಾರ್ಥದನುಸಾರ. ನೀವು ಮಕ್ಕಳು ನಡೆದಾಡುತ್ತಾ-ತಿರುಗಾಡುತ್ತಾ ಸ್ವದರ್ಶನಚಕ್ರಧಾರಿಗಳಾಗುತ್ತೀರಿ.

ಈ ಸಮಯದಲ್ಲಿ ನೀವು ಚೈತನ್ಯ ಲೈಟ್ಹೌಸ್ ಆಗಿದ್ದೀರಿ. ನಿಮ್ಮ ಒಂದು ಕಣ್ಣಿನಲ್ಲಿ ಮುಕ್ತಿಧಾಮ, ಇನ್ನೊಂದು ಕಣ್ಣಿನಲ್ಲಿ ಜೀವನ್ಮುಕ್ತಿಧಾಮವಿದೆ. ಆ ಲೈಟ್ಹೌಸ್ ಜಡವಾಗಿರುತ್ತದೆ, ನೀವು ಚೈತನ್ಯವಾಗಿದ್ದೀರಿ. ನಿಮಗೆ ಜ್ಞಾನದ ನೇತ್ರವು ಸಿಕ್ಕಿದೆ, ನೀವು ಜ್ಞಾನವಂತರಾಗಿ ಎಲ್ಲರಿಗೆ ಮಾರ್ಗವನ್ನು ತೋರಿಸುತ್ತೀರಿ. ತಂದೆಯೂ ಸಹ ನಿಮಗೆ ಓದಿಸುತ್ತಿದ್ದಾರೆ. ಇದು ದುಃಖಧಾಮವೆಂದು ನಿಮಗೆ ಅರ್ಥವಾಗಿದೆ. ನಾವೀಗ ಸಂಗಮಯುಗದಲ್ಲಿದ್ದೇವೆ, ಇಡೀ ಪ್ರಪಂಚದವರು ಕಲಿಯುಗದಲ್ಲಿದ್ದಾರೆ. ಸಂಗಮಯುಗದಲ್ಲಿ ತಂದೆಯು ಮಕ್ಕಳ ಜೊತೆಯಲ್ಲಿ ಕುಳಿತು ಮಾತನಾಡುತ್ತಾರೆ ಮತ್ತು ಮಕ್ಕಳೇ ಇಲ್ಲಿ ಬರುತ್ತೀರಿ. ಬಾಬಾ, ಇಂತಹವರನ್ನು ನಾವು ಕರೆದುಕೊಂಡು ಬರುವುದೇ ಎಂದು ಕೆಲವರು ಪತ್ರ ಬರೆಯುತ್ತಾರೆ. ಒಳ್ಳೆಯವರಾಗಿದ್ದಾರೆ, ಬಹುಷಃ ಬಾಣ ನಾಟಬಹುದು ಎಂದು ಹೇಳಿ ತಂದೆಗೂ ದಯೆಬರುತ್ತದೆ. ಅಂತಹವರ ಕಲ್ಯಾಣವಾಗಲೂಬಹುದು. ಇದು ಪುರುಷೋತ್ತಮ ಸಂಗಮಯುಗವಾಗಿದೆ, ಈ ಯುಗದಲ್ಲಿಯೇ ನೀವು ಪುರುಷೋತ್ತಮರಾಗುತ್ತೀರಿ. ಕಲಿಯುಗದಲ್ಲಿ ಎಲ್ಲರೂ ಕನಿಷ್ಠಪುರುಷರಾಗಿದ್ದಾರೆ, ಅವರು ಉತ್ತಮ ಪುರುಷರಾದ ಲಕ್ಷ್ಮೀ-ನಾರಾಯಣರಿಗೆ ನಮಸ್ಕಾರ ಮಾಡುತ್ತಾರೆ. ಸತ್ಯಯುಗದಲ್ಲಿ ಯಾರು ಯಾರಿಗೂ ನಮಸ್ಕರಿಸುವುದಿಲ್ಲ, ಇಲ್ಲಿಯ ಮಾತುಗಳು ಅಲ್ಲಿರುವುದಿಲ್ಲ, ಇದನ್ನೂ ಸಹ ತಂದೆಯು ತಿಳಿಸುತ್ತಾರೆ- ಚೆನ್ನಾಗಿ ತಂದೆಯ ನೆನಪಿನಲ್ಲಿದ್ದು ಸರ್ವೀಸ್ ಮಾಡುತ್ತೀರೆಂದರೆ ಮುಂದೆ ಹೋದಂತೆ ನಿಮಗೆ ಸಾಕ್ಷಾತ್ಕಾರಗಳಾಗುತ್ತವೆ. ನೀವು ಯಾರದೇ ಭಕ್ತಿಯನ್ನು ಮಾಡುವುದಿಲ್ಲ. ತಂದೆಯು ನಿಮಗೆ ಕೇವಲ ಓದಿಸುತ್ತಾರೆ, ಮನೆಯಲ್ಲಿ ಕುಳಿತಿದ್ದಂತೆಯೇ ಸಾಕ್ಷಾತ್ಕಾರವಾಗುತ್ತದೆ. ಅನೇಕರಿಗೆ ಬ್ರಹ್ಮಾನ ಸಾಕ್ಷಾತ್ಕಾರವಾಗುತ್ತದೆ, ಅವರ ಸಾಕ್ಷಾತ್ಕಾರಕ್ಕಾಗಿ ಯಾವುದೇ ಪುರುಷಾರ್ಥ ಮಾಡುವುದಿಲ್ಲ, ಬೇಹದ್ದಿನ ತಂದೆಯು ಇವರ ಮೂಲಕ ಸಾಕ್ಷಾತ್ಕಾರ ಮಾಡಿಸುತ್ತಾರೆ, ಭಕ್ತಿಮಾರ್ಗದಲ್ಲಿ ಯಾರು ಯಾರಲ್ಲಿ ಎಂತಹ ಭಾವನೆಯನ್ನಿಡುವರೋ ಅವರ ಸಾಕ್ಷಾತ್ಕಾರವಾಗುತ್ತದೆ. ಈಗ ನಿಮ್ಮ ಭಾವನೆಯು ಎಲ್ಲರಿಗಿಂತ ಸರ್ವಶ್ರೇಷ್ಠನಾದ ತಂದೆಯಲ್ಲಿದೆ ಆದ್ದರಿಂದ ತಂದೆಯು ಪರಿಶ್ರಮವಿಲ್ಲದೆ ಸಾಕ್ಷಾತ್ಕಾರ ಮಾಡಿಸುತ್ತಿರುತ್ತಾರೆ. ಆರಂಭದಲ್ಲಿ ಎಷ್ಟೊಂದು ಮಂದಿ ಧ್ಯಾನದಲ್ಲಿ ಹೋಗುತ್ತಿದ್ದರು. ತಾವಾಗಿಯೇ ಪರಸ್ಪರದಲ್ಲಿ ಕುಳಿತು ಧ್ಯಾನದಲ್ಲಿ ಹೋಗುತ್ತಿದ್ದರು, ಯಾವುದೇ ಭಕ್ತಿಯನ್ನಂತೂ ಮಾಡಲಿಲ್ಲ. ಇದೊಂದು ಆಟವಾಗಿಬಿಟ್ಟಿತ್ತು. ವೈಕುಂಠಕ್ಕೆ ನಡೆಯೋಣವೆಂದು ಹೇಳಿ ಒಬ್ಬರು ಇನ್ನೊಬ್ಬರನ್ನು ನೋಡುತ್ತಾ ಹೊರಟುಹೋಗುತ್ತಿದ್ದರು. ಏನೆಲ್ಲವೂ ಕಳೆಯಿತೋ ಅದನ್ನು ಮತ್ತೆ ಪುನರಾವರ್ತಿಸುತ್ತೀರಿ. ನಾವೇ ಈ ಧರ್ಮದವರಾಗಿದ್ದೇವೆ ಎಂದು ನಿಮಗೆ ತಿಳಿದಿದೆ. ಸತ್ಯಯುಗದಲ್ಲಿ ಮೊಟ್ಟಮೊದಲಿಗೆ ಈ ಧರ್ಮವಿರುತ್ತದೆ. ಇದರಲ್ಲಿ ಬಹಳ ಸುಖವಿರುತ್ತದೆ ನಂತರ ನಿಧಾನ-ನಿಧಾನವಾಗಿ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಹೊಸ ಮನೆಯಲ್ಲಿರುವ ಸುಖವು ಹಳೆಯ ಮನೆಯಲ್ಲಿ ಇರುವುದಿಲ್ಲ, ಸ್ವಲ್ಪಸಮಯದ ನಂತರ ಆ ಆಡಂಭರವೆಲ್ಲವೂ ಕಡಿಮೆಯಾಗಿಬಿಡುತ್ತದೆ. ಸ್ವರ್ಗ ಮತ್ತು ನರಕದಲ್ಲಂತೂ ಬಹಳ ಅಂತರವಿದೆಯಲ್ಲವೆ. ನರಕವೆಲ್ಲಿ, ಸ್ವರ್ಗವೆಲ್ಲಿ! ನೀವು ಖುಷಿಯಲ್ಲಿರುತ್ತೀರಿ. ತಂದೆಯ ನೆನಪು ಸ್ಥಿರವಾಗಿರುವುದು ಎಂಬುದೂ ಸಹ ನಿಮಗೆ ತಿಳಿದಿದೆ. ನಾವಾತ್ಮರಾಗಿದ್ದೇವೆ ಎಂಬುದನ್ನು ಮರೆತಿರುವ ಕಾರಣ ಮತ್ತೆ ದೇಹಾಭಿಮಾನದಲ್ಲಿ ಬಂದುಬಿಡುತ್ತೀರಿ. ಇಲ್ಲಿ ಕುಳಿತಿರುವಾಗ ತಮ್ಮನ್ನು ಆತ್ಮನಿಶ್ಚಯ ಮಾಡಿಕೊಳ್ಳಿ ಆಗ ತಂದೆಯ ನೆನಪು ಸ್ಥಿರವಾಗಿರುವುದು. ದೇಹದಲ್ಲಿ ಬರುವುದರಿಂದಲೇ ದೇಹದ ಎಲ್ಲಾ ಸಂಬಂಧಗಳು ನೆನಪಿಗೆ ಬರುತ್ತದೆ. ಇದೊಂದು ಕಾಯಿದೆಯಾಗಿದೆ. ನನಗೆ ಒಬ್ಬ ತಂದೆಯ ವಿನಃ ಮತ್ತ್ಯಾರೂ ಇಲ್ಲ. ಬಾಬಾ, ನಾವು ತಮಗೆ ಬಲಿಹಾರಿಯಾಗುತ್ತೇವೆಂದು ಹಾಡುತ್ತೀರಿ. ಅದು ಈ ಸಮಯವಾಗಿದೆ. ಈಗ ಒಬ್ಬರನ್ನೇ ನೆನಪು ಮಾಡಬೇಕಾಗಿದೆ. ಕಣ್ಣುಗಳಿಂದ ಭಲೆ ಯಾರನ್ನಾದರೂ ನೋಡಿರಿ, ನಡೆದಾಡಿ-ತಿರುಗಾಡಿ ಕೇವಲ ಆತ್ಮವು ತಂದೆಯನ್ನು ನೆನಪು ಮಾಡಬೇಕಾಗಿದೆ. ಶರೀರ ನಿರ್ವಹಣಾರ್ಥವಾಗಿ ಕರ್ಮವನ್ನೂ ಮಾಡಬೇಕು. ಆದರೆ ಕೈಕೆಲಸ ಮಾಡುತ್ತಿರಲಿ, ಬುದ್ಧಿಯು ತಂದೆಯ ನೆನಪಿನಲ್ಲಿರಲಿ. ಆತ್ಮವು ತನ್ನ ಪ್ರಿಯತಮನನ್ನೇ ನೆನಪು ಮಾಡಬೇಕಾಗಿದೆ. ಯಾರಿಗಾದರೂ ತನ್ನ ಸಖಿಯೊಂದಿಗೆ ಪ್ರೀತಿಯುಂಟಾದರೆ ಅವರ ನೆನಪೇ ಉಳಿಯುತ್ತದೆ ಮತ್ತೆ ಆ ವ್ಯಾಮೋಹವು ಕಳೆಯುವುದರಲ್ಲಿ ಬಹಳ ಪರಿಶ್ರಮವಾಗುತ್ತದೆ. ಬಾಬಾ, ಇದೇನು ಎಂದು ಕೇಳುತ್ತಾರೆ. ಅರೆ! ನೀವೇಕೆ ನಾಮ-ರೂಪದಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ? ಒಂದನೆಯದಾಗಿ ನೀವು ದೇಹಾಭಿಮಾನಿಗಳಾಗುತ್ತೀರಿ, ಎರಡನೆಯದಾಗಿ ನಿಮ್ಮ ಹಿಂದಿನ ಲೆಕ್ಕಾಚಾರಗಳು ಮೋಸ ಮಾಡುತ್ತವೆ ಆದ್ದರಿಂದ ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಅದರಲ್ಲಿ ಬುದ್ಧಿಯು ಹೋಗದಿರಲಿ. ನಮಗೆ ಶಿವತಂದೆಯು ಓದಿಸುತ್ತಾರೆ ಎಂಬುದಷ್ಟೇ ಬುದ್ಧಿಯಲ್ಲಿರಲಿ. ಇಂತಹವರು ಅನೇಕರಿದ್ದಾರೆ, ಇಲ್ಲಿ ಕುಳಿತಿದ್ದರೂ ಸಹ ತಂದೆಯನ್ನು ನೆನಪು ಮಾಡುವುದಿಲ್ಲ. ಅಂದಾಗ ತಮ್ಮನ್ನು ನೋಡಿಕೊಳ್ಳಿ- ನಾನು ಶಿವತಂದೆಯನ್ನು ಎಷ್ಟು ನೆನಪು ಮಾಡಿದೆನು? ಇಲ್ಲದಿದ್ದರೆ ಸ್ಥಿತಿಯಲ್ಲಿ ಏರುಪೇರಾಗುವುದು.

ಭಗವಂತನು ತಿಳಿಸುತ್ತಾರೆ- ಮಧುರ ಮಕ್ಕಳೇ, ನನ್ನನ್ನು ನೆನಪು ಮಾಡಿ, ತಮ್ಮ ಬಳಿ ಬರೆದಿಟ್ಟುಕೊಳ್ಳಿ. ಯಾವಾಗ ಸಮಯ ಸಿಗುತ್ತದೆಯೋ ಆಗ ನೆನಪಿನಲ್ಲಿ ಕುಳಿತುಕೊಳ್ಳಿ. ಭೋಜನ ಮಾಡಿ, ಸುತ್ತಾಡಿಕೊಂಡು ಬಂದು ಮತ್ತೆ 10-15 ನಿಮಿಷ ಬಂದು ನೆನಪಿನಲ್ಲಿ ಕುಳಿತುಕೊಳ್ಳಿ ಏಕೆಂದರೆ ಇಲ್ಲಿ ಯಾವುದೇ ವ್ಯವಹಾರಗಳಿಲ್ಲ. ಆದರೂ ಸಹ ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಬಂದಿದ್ದೀರಿ ಆದ್ದರಿಂದ ಅದು ಕೆಲಕೆಲವರಿಗೆ ನೆನಪಿಗೆ ಬರುತ್ತಿರುತ್ತದೆ. ಇದು ಬಹಳ ಉನ್ನತ ಗುರಿಯಾಗಿದೆ ಆದ್ದರಿಂದಲೇ ತಂದೆಯು ತಿಳಿಸುತ್ತಾರೆ- ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಿ. ಈ ನಿಮ್ಮ ಸಮಯವು ಬಹಳ ಅತ್ಯಮೂಲ್ಯವಾಗಿದೆ. ಭಕ್ತಿಮಾರ್ಗದಲ್ಲಿ ನೀವು ಎಷ್ಟೊಂದು ಸಮಯವನ್ನು ವ್ಯರ್ಥಮಾಡಿದಿರಿ. ದಿನ-ಪ್ರತಿದಿನ ಕಳೆದಂತೆ ಇಳಿಯುತ್ತಲೇ ಬಂದಿದ್ದೀರಿ. ಕೃಷ್ಣನ ಸಾಕ್ಷಾತ್ಕಾರವಾದರೆ ಬಹಳ ಖುಷಿಯಾಗಿಬಿಡುತ್ತದೆ ಆದರೆ ಸಿಗುವುದೇನೂ ಇಲ್ಲ. ತಂದೆಯ ಆಸ್ತಿಯು ಒಂದೇಬಾರಿ ಸಿಗುತ್ತದೆ ಆದ್ದರಿಂದ ಈಗ ತಂದೆಯು ತಿಳಿಸುತ್ತಾರೆ- ನನ್ನ ನೆನಪಿನಲ್ಲಿರಿ ಆಗ ಜನ್ಮ-ಜನ್ಮಾಂತರದ ಪಾಪಗಳು ಇಳಿಯುವುದು. ಯಾರು ನೆನಪಿನಲ್ಲಿದ್ದು ತಮ್ಮ ವಿಕರ್ಮಗಳನ್ನು ವಿನಾಶ ಮಾಡಿಕೊಂಡು ಕರ್ಮಾತೀತ ಸ್ಥಿತಿಯನ್ನು ಹೊಂದುವರೋ ಅವರಿಗೇ ಸ್ವರ್ಗದ ಪಾಸ್ಪೋರ್ಟ್ ಸಿಗುವುದು. ಇಲ್ಲವೆಂದರೆ ಬಹಳ ಶಿಕ್ಷೆಯನ್ನನುಭವಿಸಬೇಕಾಗುವುದು. ತಂದೆಯು ಇನ್ನೂ ಅನೇಕ ಸಲಹೆಗಳನ್ನು ಕೊಡುತ್ತಾರೆ- ತಮ್ಮ ಕಿರೀಟ ಹಾಗೂ ಸಿಂಹಾಸನದ ಭಾವಚಿತ್ರವನ್ನು ತಮ್ಮ ಜೇಬಿನಲ್ಲಿಟ್ಟುಕೊಳ್ಳಿ ಆಗ ನೆನಪಿರುವುದು. ಇದರಿಂದ ನಾವು ಈ ರೀತಿಯಾಗುತ್ತೇವೆಂದು ಎಷ್ಟು ನೋಡುವಿರೋ ಅಷ್ಟು ನೆನಪು ಮಾಡುತ್ತೀರಿ ಮತ್ತೆ ಅದರಲ್ಲಿಯೇ ಮೋಹವುಂಟಾಗುವುದು. ನಾವು ನರನಿಂದ ನಾರಾಯಣರಾಗುತ್ತೇವೆಂದು ಚಿತ್ರವನ್ನು ನೋಡಿದೊಡನೆಯೇ ಖುಷಿಯಾಗುವುದು, ಶಿವತಂದೆಯ ನೆನಪೂ ಬರುವುದು. ಇವೆಲ್ಲವೂ ಪುರುಷಾರ್ಥದ ಯುಕ್ತಿಗಳಾಗಿವೆ. ಯಾರನ್ನಾದರೂ ನೀವು ಪ್ರಶ್ನೆ ಮಾಡಿ- ಸತ್ಯನಾರಾಯಣನ ಕಥೆಯನ್ನು ಕೇಳುವುದರಿಂದ ಏನು ಸಿಗುವುದು? ನಮ್ಮ ತಂದೆಯಂತೂ ನಮಗೆ ಸತ್ಯನಾರಾಯಣನ ಕಥೆಯನ್ನು ತಿಳಿಸುತ್ತಿದ್ದಾರೆ. ನಾವು ಹೇಗೆ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಎಂಬ ಲೆಕ್ಕವೂ ಬೇಕಲ್ಲವೆ. ಎಲ್ಲರೂ 84 ಜನ್ಮಗಳನ್ನು ಪಡೆಯುವುದಿಲ್ಲ. ಪ್ರಪಂಚದವರಿಗೂ ಇದು ಗೊತ್ತಿಲ್ಲ. ಹಾಗೆಯೇ ಕೇವಲ ಹೇಳಿಬಿಡುತ್ತಾರೆ. ಅವರದು ಥಿಯಾರಿಟಿಕಲ್ ಆಗಿದೆ, ನಿಮ್ಮದು ಪ್ರಾಕ್ಟಿಕಲ್ ಆಗಿದೆ. ಈಗ ಏನೆಲ್ಲವೂ ಆಗುತ್ತಿದೆಯೋ ಅದು ಪುನಃ ಭಕ್ತಿಮಾರ್ಗದಲ್ಲಿ ಪುಸ್ತಕ ಇತ್ಯಾದಿಗಳು ರಚಿಸಲ್ಪಡುತ್ತದೆ. ನೀವು ಸ್ವದರ್ಶನಚಕ್ರಧಾರಿಗಳಾಗಿ ವಿಷ್ಣುಪುರಿಯಲ್ಲಿ ಬರುತ್ತೀರಿ. ಇದು ಹೊಸ ಮಾತಾಗಿದೆ. ರಾವಣರಾಜ್ಯವು ಅಸತ್ಯಖಂಡ ಇದರನಂತರ ರಾಮರಾಜ್ಯವು ಸತ್ಯಖಂಡವಾಗುವುದು. 5000 ವರ್ಷಗಳ ಮೊದಲೂ ಸಹ ವಿನಾಶವಾಗಿತ್ತು, ಯಾರೆಲ್ಲಾ ವಿಜ್ಞಾನಿಗಳಿದ್ದಾರೆಯೋ ಅವರಿಗೂ ಸಹ ಈ ಸಂಕಲ್ಪವು ಬರುತ್ತದೆ- ನಮಗೆ ಯಾರೋ ಪ್ರೇರಕರಿದ್ದಾರೆ. ಈ ಅಣ್ವಸ್ತ್ರಗಳೆಲ್ಲವನ್ನೂ ಮಾಡಿಸುತ್ತಿರುತ್ತಾರೆ, ನಾವು ಈ ರೀತಿ ಇವುಗಳನ್ನು ಮಾಡಿದರೆ ಇದರಿಂದ ಎಲ್ಲವೂ ಸಮಾಪ್ತಿಯಾಗುವರೆಂಬುದು ಅರ್ಥವೂ ಆಗಿದೆ ಆದರೆ ಪರವಶರಾಗಿದ್ದಾರೆ, ಭಯವಿದೆ. ಮನೆಯಲ್ಲಿ ಕುಳಿತಿದ್ದಂತೆಯೇ ಒಂದು ಬಾಂಬನ್ನು ಹಾಕಿದರೆ ಸಮಾಪ್ತಿ ಮಾಡಿಬಿಡುವರೆಂದು ತಿಳಿಯುತ್ತಾರೆ. ವಿಮಾನ, ಪೆಟ್ರೋಲ್ ಯಾವುದರ ಅವಶ್ಯಕತೆಯೂ ಇರುವುದಿಲ್ಲ. ವಿನಾಶವಂತೂ ಖಂಡಿತವಾಗಿ ಆಗಲೇಬೇಕಾಗಿದೆ. ಹೊಸ ಪ್ರಪಂಚವು ಸತ್ಯಯುಗವಾಗಿತ್ತು, ಕ್ರಿಸ್ತನಿಗೆ 3000 ವರ್ಷಗಳ ಮುಂಚೆ ಸ್ವರ್ಗವಿತ್ತು, ಆ ಸ್ವರ್ಗವು ಈಗ ಪುನಃಸ್ಥಾಪನೆಯಾಗುತ್ತಿದೆ. ಮುಂದೆಹೋದಂತೆ ಇದು ಎಲ್ಲರಿಗೂ ಅರ್ಥವಾಗುವುದು. ಸ್ಥಾಪನೆಯು ಅವಶ್ಯವಾಗಿ ಆಗುವುದಿದೆ ಇದರಲ್ಲಿ ಒಂದುಪೈಸೆಯಷ್ಟೂ ಸಂಶಯವಿಲ್ಲವೆಂಬುದು ನಿಮಗೂ ಅರ್ಥವಾಗಿದೆ.

ಈ ನಾಟಕವು ಕಲ್ಪದ ಹಿಂದಿನಂತೆ ನಡೆಯುತ್ತಿರುತ್ತದೆ. ನಾಟಕವು ಅವಶ್ಯವಾಗಿ ಪುರುಷಾರ್ಥ ಮಾಡಿಸುವುದು ಆದರೆ ನಾಟಕದಲ್ಲಿದ್ದರೆ ಆಗುವುದು ಎಂದಲ್ಲ, ಪುರುಷಾರ್ಥವು ದೊಡ್ಡದೋ ಅಥವಾ ಪ್ರಾಲಬ್ಧವು ದೊಡ್ಡದೋ ಎಂದು ಕೇಳುತ್ತಾರೆ. ಇದರಲ್ಲಿ ಪುರುಷಾರ್ಥವು ದೊಡ್ಡದಾಗಿದೆ ಏಕೆಂದರೆ ಪುರುಷಾರ್ಥದಿಂದಲೇ ಪ್ರಾಲಬ್ಧವಾಗುವುದು. ಪುರುಷಾರ್ಥವಿಲ್ಲದೆ ಎಂದೂ ಯಾರೂ ಇರಲು ಸಾಧ್ಯವಿಲ್ಲ. ನೀವು ಪುರುಷಾರ್ಥ ಮಾಡುತ್ತಿದ್ದೀರಲ್ಲವೆ. ಮಕ್ಕಳು ಎಲ್ಲೆಲ್ಲಿಂದಲೋ ಬರುತ್ತಾರೆ, ಪುರುಷಾರ್ಥ ಮಾಡುತ್ತಾರೆ. ಬಾಬಾ, ನಾನು ನಿಮ್ಮ ನೆನಪನ್ನು ಮರೆತುಬಿಡುತ್ತೇವೆಂದು ಹೇಳುತ್ತಾರೆ. ಅರೆ! ಶಿವತಂದೆಯು ನಿಮಗೆ ಹೇಳುತ್ತಾರೆ- ನನ್ನನ್ನು ನೆನಪು ಮಾಡಿ. ಯಾರಿಗೆ ಹೇಳಿದರು? ನಾನಾತ್ಮನಿಗೆ ಹೇಳಿದರು. ತಂದೆಯು ಆತ್ಮಗಳೊಂದಿಗೆ ಮಾತನಾಡುತ್ತಾರೆ. ಶಿವತಂದೆಯು ಪತಿತ-ಪಾವನನಾಗಿದ್ದಾರೆ, ಈ ಬ್ರಹ್ಮಾರವರ ಆತ್ಮವೂ ಸಹ ತಂದೆಯಿಂದ ಕೇಳುತ್ತದೆ. ನೀವು ಮಕ್ಕಳಿಗೆ ಇದು ಪಕ್ಕಾ ನಿಶ್ಚಯವಿರಬೇಕು- ಬೇಹದ್ದಿನ ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಿದ್ದಾರೆ, ಅವರು ಶ್ರೇಷ್ಠಾತಿಶ್ರೇಷ್ಠ ಪ್ರಿಯಾತಿಪ್ರಿಯ ತಂದೆಯಾಗಿದ್ದಾರೆ. ಭಕ್ತಿಮಾರ್ಗದಲ್ಲಿ ಅವರನ್ನೇ ನೆನಪು ಮಾಡುತ್ತಿದ್ದೆವು, ನಿಮ್ಮ ಗತಿ-ಮತವು ಭಿನ್ನವಾಗಿದೆಯೆಂದು ಹಾಡುತ್ತಿದ್ದೆವು ಅಂದಮೇಲೆ ಅವಶ್ಯವಾಗಿ ಅವರು ಮತ ನೀಡಿದ್ದರು. ಇಷ್ಟೆಲ್ಲಾ ಮನುಷ್ಯಮಾತ್ರರೆಲ್ಲರೂ ಹಿಂತಿರುಗಿ ಮನೆಗೆ ಹೋಗುತ್ತಾರೆ. ವಿಚಾರ ಮಾಡಿ- ಎಷ್ಟೊಂದು ಆತ್ಮಗಳಿದ್ದಾರೆ, ಇದು ಎಲ್ಲರ ವೃಕ್ಷವಾಗಿದೆ. ಎಲ್ಲಾ ಆತ್ಮಗಳು ನಂಬರ್ವಾರ್ ಆಗಿ ಹೋಗಿ ಅಲ್ಲಿ ಕುಳಿತುಕೊಳ್ಳುವರು. ಹೇಗೆ ತರಗತಿಯಿಂದ ವರ್ಗಾಯಿತರಾಗುತ್ತಾರೆಂದರೆ ನಂಬರ್ವಾರ್ ಆಗಿ ಕುಳಿತುಕೊಳ್ಳುತ್ತಾರಲ್ಲವೆ. ನೀವೂ ಸಹ ನಂಬರ್ವಾರ್ ಆಗಿ ಹೋಗುತ್ತೀರಿ. ಅತೀ ಚಿಕ್ಕ ಬಿಂದುವು ನಂಬರ್ವಾರ್ ಹೋಗಿ ಮತ್ತೆ ಪಾತ್ರವನ್ನಭಿನಯಿಸಲು ಬರುತ್ತದೆ. ಇದು ರುದ್ರಮಾಲೆಯಾಗಿದೆ. ತಂದೆಯು ತಿಳಿಸುತ್ತಾರೆ- ಇಷ್ಟು ಕೋಟ್ಯಾಂತರ ಆತ್ಮಗಳು ನನ್ನ ಮಾಲೆಯಾಗಿದೆ. ಮೇಲೆ ನಾನು ಹೂ ಇದ್ದೇನೆ, ನಂತರ ಪಾತ್ರವನ್ನಭಿನಯಿಸಲು ಎಲ್ಲರೂ ಇಲ್ಲಿಯೇ ಬಂದಿದ್ದಾರೆ. ಈ ನಾಟಕವು ಮಾಡಲ್ಪಟ್ಟಿದೆ. ಮಾಡಿ-ಮಾಡಲ್ಪಟ್ಟ ನಾಟಕವೆಂದು ಹೇಳುತ್ತಾರೆ. ಈ ನಾಟಕವು ಹೇಗೆ ನಡೆಯುತ್ತದೆ ಎಂಬುದನ್ನು ನೀವೀಗ ತಿಳಿದಿದ್ದೀರಿ. ಎಲ್ಲರಿಗೆ ಇದನ್ನೇ ತಿಳಿಸಿ- ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿ ಆಗ ವಿಕರ್ಮ ವಿನಾಶವಾಗುತ್ತದೆ ಮತ್ತು ನೀವು ಇಲ್ಲಿಂದ ಹೊರಟುಹೋಗುವಿರಿ. ಇದು ಪರಿಶ್ರಮವಾಗಿದೆ. ಎಲ್ಲರಿಗೆ ಮಾರ್ಗವನ್ನು ತಿಳಿಸುವುದೇ ನಿಮ್ಮ ಕರ್ತವ್ಯವಾಗಿದೆ. ನೀವು ಯಾವುದೇ ದೇಹಧಾರಿಯಲ್ಲಿ ಸಿಲುಕಿಸುವುದಿಲ್ಲ. ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಬೇಕಾಗುವುದು. ಕೇಳುವ ಮಾತೇನಿದೆ! ಹೇಗಾದರೂ ಮಾಡಿ ನೆನಪು ಮಾಡಲೇಬೇಕಾಗಿದೆ, ಇದರಲ್ಲಿ ತಂದೆಯೇನು ಕೃಪೆತೋರುವರು! ನೀವೇ ನೆನಪು ಮಾಡಬೇಕು, ನೀವೇ ಆಸ್ತಿಯನ್ನು ತೆಗೆದುಕೊಳ್ಳಬೇಕು. ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ನಿಮಗೆ ಸ್ವರ್ಗದ ಆಸ್ತಿಯು ಸಿಗುವುದು. ಈಗ ಈ ವೃಕ್ಷವು ಹಳೆಯದಾಗಿಬಿಟ್ಟಿದೆ ಆದ್ದರಿಂದ ಈ ಹಳೆಯ ಪ್ರಪಂಚದಿಂದ ವೈರಾಗ್ಯವಿದೆ, ಇದಕ್ಕೆ ಬೇಹದ್ದಿನ ವೈರಾಗ್ಯವೆಂದು ಹೇಳಲಾಗುತ್ತದೆ. ಆ ಹಠಯೋಗಿಗಳದು ಕ್ಷಣಿಕವಾದ ವೈರಾಗ್ಯವಾಗಿದೆ. ಅವರು ಬೇಹದ್ದಿನ ವೈರಾಗ್ಯವನ್ನು ಕಲಿಸಿಕೊಡಲು ಸಾಧ್ಯವಿಲ್ಲ. ಬೇಹದ್ದಿನ ವೈರಾಗಿಗಳು ಮತ್ತೆ ಹದ್ದಿನ ವೈರಾಗ್ಯವನ್ನು ಹೇಗೆ ಕಲಿಸುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ಬಹಳ ಕಾಲ ಅಗಲಿಹೋಗಿ ಮರಳಿಸಿಕ್ಕಿರುವ ಮಕ್ಕಳೇ, ನೀವೂ ಸಹ ಹೇಳುತ್ತೀರಿ-ಅಗಲಿ ಹೋಗಿ ಮರಳಿ ಸಿಕ್ಕಿರುವ ತಂದೆಯೇ 63 ಜನ್ಮಗಳವರೆಗೆ ತಂದೆಯನ್ನು ನೆನಪು ಮಾಡಿದೆವು. ನಮಗೆ ಒಬ್ಬ ತಂದೆಯ ವಿನಃ ಮತ್ತ್ಯಾರೂ ಇಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1) ಸ್ವರ್ಗದಲ್ಲಿ ಹೋಗುವ ಪಾಸ್ ಪೋರ್ಟ್ ತೆಗೆದುಕೊಳ್ಳಲು ತಂದೆಯ ನೆನಪಿನಿಂದ ವಿಕರ್ಮಗಳನ್ನು ವಿನಾಶ ಮಾಡಿಕೊಂಡು ಕರ್ಮಾತೀತ ಸ್ಥಿತಿಯನ್ನು ಪಡೆಯಬೇಕಾಗಿದೆ. ಶಿಕ್ಷೆಗಳಿಂದ ಮುಕ್ತರಾಗುವ ಪುರುಷಾರ್ಥ ಮಾಡಬೇಕಾಗಿದೆ.

2) ಜ್ಞಾನವಂತರಾಗಿ ಎಲ್ಲರಿಗೂ ಮಾರ್ಗವನ್ನು ತಿಳಿಸಬೇಕಾಗಿದೆ, ಚೈತನ್ಯ ಲೈಟ್ಹೌಸ್ ಆಗಬೇಕಾಗಿದೆ. ಒಂದು ಕಣ್ಣಿನಲ್ಲಿ ಶಾಂತಿಧಾಮ, ಇನ್ನೊಂದು ಕಣ್ಣಿನಲ್ಲಿ ಸುಖಧಾಮವಿರಲಿ. ಈ ದುಃಖಧಾಮವನ್ನು ಮರೆಯಬೇಕಾಗಿದೆ.

ವರದಾನ:
ಎಲ್ಲಾ ಆತ್ಮರನ್ನೂ ಮೇಲೆತ್ತ ಬೇಕು ಎನ್ನುವ ಭಾವನೆಯಿಂದ ಗೌರವ ಕೊಡುವಂತಹ ಶುಭಚಿಂತಕ ಭವ

ಎಲ್ಲಾ ಆತ್ಮರ ಪ್ರತಿ ಶ್ರೇಷ್ಠ ಭಾವನೆ ಅರ್ಥಾತ್ ಮೇಲೆ ಎತ್ತುವ ಅಥವಾ ಮುಂದುವರೆಸುವ ಭಾವನೆ ಇಡುವುದು ಅರ್ಥಾತ್ ಶುಭಚಿಂತಕರಾಗುವುದು. ತಮ್ಮ ಶುಭ ವೃತ್ತಿಯಿಂದ, ಶುಭ ಚಿಂತಕ ಸ್ಥಿತಿಯಿಂದ ಅನ್ಯರ ಅವಗುಣಗಳನ್ನೂ ಸಹ ಪರಿವರ್ತನೆ ಮಾಡಬೇಕು, ಯಾರದೇ ಬಲಹೀನತೆ ಅಥವಾ ಅವಗುಣವನ್ನೂ ಸಹ ತನ್ನ ಬಲಹೀನತೆ ಎಂದು ತಿಳಿದು ವರ್ಣನೆ ಮಾಡುವ ಬದಲು ಅಥವಾ ಹರಡುವ ಬದಲು ಅಳವಡಿಸಿಕೊಳ್ಳಬೇಕು ಮತ್ತು ಪರಿವರ್ತನೆ ಮಾಡಬೇಕು ಇದಾಗಿದೆ ಗೌರವ ಕೊಡುವುದು. ದೊಡ್ಡ ಮಾತನ್ನು ಚಿಕ್ಕದನ್ನಾಗಿ ಮಾಡುವುದು, ಭರವಸಾಹೀನರನ್ನು ಶಕ್ತಿಶಾಲಿಗಳನ್ನಾಗಿ ಮಾಡುವುದು, ಅವರ ಸಂಗದ ರಂಗಿನಲ್ಲಿ ಬರಬಾರದು, ಸದಾ ಅವರನ್ನೂ ಸಹ ಉಲ್ಲಾಸ ಉತ್ಸಾಹದಲ್ಲಿ ತರುವುದು-ಇದಾಗಿದೆ ಗೌರವ ಕೊಡುವುದು. ಈ ರೀತಿಯಲ್ಲಿ ಗೌರವ ಕೊಡುವವರೇ ಶುಭಚಿಂತಕರಾಗಿದ್ದಾರೆ.

ಸ್ಲೋಗನ್:
ತ್ಯಾಗದ ಭಾಗ್ಯ ಸಮಾಪ್ತಿ ಮಾಡುವುದು ಹಳೆಯ ಸ್ವಭಾವ-ಸಂಸ್ಕಾರವಾಗಿದೆ, ಆದ್ದರಿಂದ ಇದನ್ನೂ ಸಹ ತ್ಯಾಗ ಮಾಡಿ

ಅವ್ಯಕ್ತ ಸೂಚನೆಗಳು- ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ

ಹೇಗೆ ಬ್ರಹ್ಮ ತಂದೆ ಏಕಾಂತ ಪ್ರಿಯರಾಗಿರುವ ಕಾರಣ ಸದಾ ಅಂತರ್ಮುಖಿಯಾಗಿ ಇದ್ದರು, ನಾನು ಆತ್ಮನಾಗಿದ್ದೇನೆ, ನಾನು ಆತ್ಮನಾಗಿದ್ದೇನೆ... ಈ ಪಾಠವನ್ನು ಪಕ್ಕ ಮಾಡಿಕೊಂಡರು, ಇದರ ಕಾರಣ ಅವರು ಸ್ವಯಂ ಸಹ ಸದಾ ಶಾಂತಿ ಹಾಗೂ ಸುಖದ ಸಾಗರನಲ್ಲಿ ಸಮಾವೇಶವಾಗಿದ್ದರು ಹಾಗೂ ಅನ್ಯ ಆತ್ಮಗಳನ್ನು ಸಹ ತನ್ನ ಶುದ್ಧ ಸಂಕಲ್ಪ ಹಾಗೂ ಪ್ರಕಂಪನಗಳ ಮೂಲಕ ವೃತ್ತಿ ಹಾಗೂ ಮಾತಿನ ಮೂಲಕ, ಸಂಪರ್ಕದ ಮೂಲಕ ಶಾಂತಿ ಹಾಗೂ ಸುಖದ ಅನುಭವವನ್ನು ಮಾಡಿಸುತ್ತಾ ಇದ್ದರು, ಇದೇ ರೀತಿ ಫಾಲೋ ಫಾದರ್ ಮಾಡಿ