12.06.25         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ- “ಈಗ ನಿಮಗೆ ಜ್ಞಾನದ ದೃಷ್ಟಿಯು ಸಿಕ್ಕಿದೆ ಆದ್ದರಿಂದ ನಿಮ್ಮ ಅಲೆದಾಟವು ನಿಂತುಹೋಯಿತು, ನೀವು ಶಾಂತಿಧಾಮ-ಸುಖಧಾಮವನ್ನು ನೆನಪು ಮಾಡುತ್ತೀರಿ”

ಪ್ರಶ್ನೆ:
ದೇವತೆಗಳಲ್ಲಿ ಯಾವ ಶಕ್ತಿಯಿದೆ ಮತ್ತು ಆ ಶಕ್ತಿಯು ಯಾವ ವಿಶೇಷತೆಯ ಕಾರಣ ಇದೆ?

ಉತ್ತರ:
ದೇವತೆಗಳಲ್ಲಿ ಇಡೀ ವಿಶ್ವದ ಮೇಲೆ ರಾಜ್ಯಭಾರ ಮಾಡುವ ಶಕ್ತಿಯಿದೆ. ಆ ಶಕ್ತಿಯು ವಿಶೇಷವಾಗಿ ಏಕಮತದ ವಿಶೇಷತೆಯ ಕಾರಣ ಇದೆ. ಅಲ್ಲಿ ಏಕಮತವಿರುವಕಾರಣ ಮಂತ್ರಿಗಳನ್ನಿಟ್ಟುಕೊಳ್ಳುವ ಅವಶ್ಯಕತೆಯಿಲ್ಲ. ದೇವತೆಗಳು ಸಂಗಮದಲ್ಲಿ ತಂದೆಯಿಂದ ಇಂತಹ ಶ್ರೀಮತವನ್ನು ತೆಗೆದುಕೊಂಡಿದ್ದಾರೆ. ಅದರಿಂದ 21 ಜನ್ಮಗಳವರೆಗೆ ರಾಜ್ಯಭಾರ ಮಾಡುತ್ತಾರೆ. ಅಲ್ಲಿ ಒಬ್ಬ ರಾಜನ ಒಂದು ದೈವೀಮತವಿರುತ್ತದೆ. ಅನ್ಯರ ಮತವಿರುವುದಿಲ್ಲ.

ಗೀತೆ:
ನಯನಹೀನನಿಗೆ ದಾರಿತೋರಿಸು ಪ್ರಭು..................

ಓಂ ಶಾಂತಿ.
ಮಕ್ಕಳಿಗೆ ನಯನಗಳು ಸಿಕ್ಕಿವೆ. ಮೊದಲು ನಯನವಿರಲಿಲ್ಲ. ಯಾವ ನಯನ? ಜ್ಞಾನದ ನಯನವಿರಲಿಲ್ಲ. ಅಜ್ಞಾನದ ನಯನಗಳಂತೂ ಇದ್ದವು. ಮಕ್ಕಳಿಗೆ ಗೊತ್ತಿದೆ- ಜ್ಞಾನಸಾಗರನು ಒಬ್ಬರೇ ತಂದೆಯಾಗಿದ್ದಾರೆ, ಈ ಜ್ಞಾನದಿಂದ ಸದ್ಗತಿಯಾಗಲು ಅರ್ಥಾತ್ ಶಾಂತಿಧಾಮ-ಸುಖಧಾಮಕ್ಕೆ ಹೋಗಲು ಈ ಆತ್ಮಿಕ ಜ್ಞಾನವು ಮತ್ತ್ಯಾರಲ್ಲಿಯೂ ಇಲ್ಲ. ಈಗ ನೀವು ಮಕ್ಕಳಿಗೆ ದೃಷ್ಟಿಯು ಸಿಕ್ಕಿದೆ- ಹೇಗೆ ಸುಖಧಾಮವು ಬದಲಾಗಿ ನಂತರ ಮಾಯೆಯ ರಾಜ್ಯ ಅಥವಾ ದುಃಖಧಾಮವಾಗುತ್ತದೆ ಮತ್ತು ನಯನಹೀನನಿಗೆ ದಾರಿ ತೋರಿಸು ಪ್ರಭು ಎಂದು ಕೂಗಲು ತೊಡಗುತ್ತಾರೆ. ಭಕ್ತಿಮಾರ್ಗದ ಯಜ್ಞ, ದಾನ-ಪುಣ್ಯ ಇತ್ಯಾದಿಗಳಿಂದ ಶಾಂತಿಧಾಮ-ಸುಖಧಾಮಕ್ಕೆ ಹೋಗುವ ಮಾರ್ಗ ಸಿಗುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಅಭಿನಯಿಸಲೇಬೇಕಾಗಿದೆ. ತಂದೆಯು ತಿಳಿಸುತ್ತಾರೆ- ನನಗೂ ಪಾತ್ರವು ಸಿಕ್ಕಿದೆ, ಭಕ್ತಿಮಾರ್ಗದಲ್ಲಿ ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸಿ ಎಂದು ಕರೆಯುತ್ತಾರೆ ಅದಕ್ಕೆ ಎಷ್ಟೊಂದು ಯಜ್ಞ, ತಪ, ದಾನ-ಪುಣ್ಯ ಇತ್ಯಾದಿಗಳನ್ನು ಮಾಡುತ್ತಾರೆ, ಎಷ್ಟೊಂದು ಅಲೆದಾಡುತ್ತಾರೆ. ಶಾಂತಿಧಾಮ-ಸುಖಧಾಮದಲ್ಲಿ ಈ ಅಲೆದಾಟವೇ ಇರುವುದಿಲ್ಲ. ಇದನ್ನೂ ನೀವು ತಿಳಿದುಕೊಂಡಿದ್ದೀರಿ. ಅವರಂತೂ ಕೇವಲ ಶಾಸ್ತ್ರಗಳ ವಿದ್ಯೆ ಅಥವಾ ಲೌಕಿಕ ವಿದ್ಯೆಯನ್ನಷ್ಟೇ ತಿಳಿದುಕೊಂಡಿದ್ದಾರೆ. ಈ ಆತ್ಮಿಕ ತಂದೆಯನ್ನು ತಿಳಿದುಕೊಂಡಿಲ್ಲ. ಯಾವಾಗ ಸರ್ವರ ಸದ್ಗತಿಯಾಗಬೇಕಾಗಿದೆಯೋ, ಹಳೆಯ ಪ್ರಪಂಚವು ಬದಲಾಗಬೇಕಾಗಿದೆಯೋ ಆಗಲೇ ತಂದೆಯು ಬಂದು ಜ್ಞಾನವನ್ನು ಕೊಡುತ್ತಾರೆ. ಮನುಷ್ಯರಿಂದ ದೇವತೆಗಳಾದ ಮೇಲೆ ಇಡೀ ಸೃಷ್ಟಿಯಲ್ಲಿ ಒಂದೇ ದೇವಿ-ದೇವತೆಗಳ ರಾಜ್ಯವಿರುತ್ತದೆ. ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ, ಆದಿಸನಾತನ ದೇವಿ-ದೇವತಾಧರ್ಮವು ಭಾರತದಲ್ಲಿಯೇ ಇತ್ತು. ಆ ಸಮಯದಲ್ಲಿ ಮತ್ತ್ಯಾವ ಧರ್ಮವೂ ಇರಲಿಲ್ಲ. ಇದನ್ನು ಭಾರತವಾಸಿಗಳೇ ತಿಳಿದುಕೊಂಡಿದ್ದೀರಿ. ನೀವು ಮಕ್ಕಳಿಗಾಗಿ ಈಗ ಸಂಗಮಯುಗವಾಗಿದೆ, ಉಳಿದೆಲ್ಲರೂ ಕಲಿಯುಗದಲ್ಲಿದ್ದಾರೆ. ನೀವು ಪುರುಷೋತ್ತಮ ಸಂಗಮಯುಗದಲ್ಲಿ ಕುಳಿತಿದ್ದೀರಿ. ಯಾರ್ಯಾರು ತಂದೆಯನ್ನು ನೆನಪು ಮಾಡುವರೋ, ತಂದೆಯ ಶ್ರೀಮತದಂತೆ ನಡೆಯುವರೋ ಅವರು ಸಂಗಮದಲ್ಲಿದ್ದಾರೆ, ಉಳಿದೆಲ್ಲರೂ ಕಲಿಯುಗದಲ್ಲಿದ್ದಾರೆ. ಈಗ ಯಾವುದೇ ರಾಜ್ಯಪದವಿಯಾಗಲಿ, ರಾಜಧಾನಿಯಾಗಲಿ ಇಲ್ಲ. ಈಗ ಅನೇಕ ಮತಗಳಿಂದ ರಾಜ್ಯವು ನಡೆಯುತ್ತದೆ. ಸತ್ಯಯುಗದಲ್ಲಿ ಒಬ್ಬ ಮಹಾರಾಜನ ಮತವೇ ನಡೆಯುತ್ತದೆ, ಮಂತ್ರಿಗಳಿರುವುದಿಲ್ಲ. ಅವರಲ್ಲಿ ಅಷ್ಟೊಂದು ಶಕ್ತಿಯಿರುತ್ತದೆ ನಂತರ ಯಾವಾಗ ಪತಿತರಾಗುವರೋ ಆಗ ಮಂತ್ರಿ ಮೊದಲಾದವರನ್ನು ಇಟ್ಟುಕೊಳ್ಳುತ್ತಾರೆ ಏಕೆಂದರೆ ಆ ಶಕ್ತಿಯಿರುವುದಿಲ್ಲ. ಈಗಂತೂ ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವಿದೆ. ಸತ್ಯಯುಗದಲ್ಲಿ ಏಕಮತ ಇರುವುದರಿಂದ ಶಕ್ತಿಯಿರುತ್ತದೆ. ನೀವೀಗ ಆ ಶಕ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. 21 ಜನ್ಮಗಳವರೆಗೆ ಸ್ವತಂತ್ರರಾಗಿ ರಾಜ್ಯಭಾರ ಮಾಡುತ್ತೀರಿ. ತಮ್ಮದೇ ದೈವೀಪರಿವಾರವಿರುತ್ತದೆ. ಈಗ ನಿಮ್ಮದು ಈಶ್ವರೀಯ ಪರಿವಾರವಾಗಿದೆ. ತಂದೆಯು ತಿಳಿಸುತ್ತಾರೆ- ತಮ್ಮನ್ನು ಆತ್ಮನೆಂದು ತಿಳಿದು ತಂದೆಯ ನೆನಪಿನಲ್ಲಿರುತ್ತೀರೆಂದರೆ ನೀವು ಈಶ್ವರೀಯ ಪರಿವಾರದವರಾಗಿದ್ದೀರಿ ಎಂದರ್ಥ. ಒಂದುವೇಳೆ ದೇಹಾಭಿಮಾನದಲ್ಲಿ ಬಂದು ಮರೆತುಹೋಗುತ್ತೀರೆಂದರೆ ಆಸುರೀ ಪರಿವಾರದವರಾಗುತ್ತೀರಿ. ಒಂದು ಸೆಕೆಂಡಿನಲ್ಲಿ ಈಶ್ವರೀಯ ಸಂಪ್ರದಾಯದವರು ಮತ್ತು ಒಂದು ಸೆಕೆಂಡಿನಲ್ಲಿ ಆಸುರೀ ಸಂಪ್ರದಾಯದವರಾಗುತ್ತೀರಿ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುವುದು ಎಷ್ಟು ಸಹಜವಾಗಿದೆ ಆದರೆ ಮಕ್ಕಳಿಗೆ ಇದು ಕಷ್ಟವೆನಿಸುತ್ತದೆ.

ತಂದೆಯು ತಿಳಿಸುತ್ತಾರೆ- ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ. ದೇಹದ ಮೂಲಕ ಕರ್ಮವನ್ನಂತೂ ಮಾಡಲೇಬೇಕಾಗಿದೆ. ದೇಹವಿಲ್ಲದೆ ನೀವು ಕರ್ಮ ಮಾಡಲು ಸಾಧ್ಯವಿಲ್ಲ. ಪ್ರಯತ್ನಪಡಬೇಕು, ಕೆಲಸಕಾರ್ಯಗಳನ್ನು ಮಾಡುತ್ತಿದ್ದರೂ ಸಹ ನಾವು ತಂದೆಯನ್ನು ನೆನಪು ಮಾಡಬೇಕು. ಆದರೆ ಇಲ್ಲಂತೂ ಕೆಲಸವಿಲ್ಲದಿದ್ದರೂ ಸಹ ನೆನಪು ಮಾಡುವುದಿಲ್ಲ, ಮರೆತುಹೋಗುತ್ತಾರೆ. ಇದೇ ಪರಿಶ್ರಮವಾಗಿದೆ. ಭಕ್ತಿಯಲ್ಲಿ ಇಡೀ ದಿನ ಭಕ್ತಿ ಮಾಡಿ ಎಂದು ಯಾರೂ ಹೇಳುವುದಿಲ್ಲ, ಅದರಲ್ಲಿ ಸಮಯವಿರುತ್ತದೆ. ಬೆಳಗ್ಗೆ-ಸಂಜೆ ಹಾಗೂ ರಾತ್ರಿಯಲ್ಲಿ ಭಕ್ತಿಮಾಡುತ್ತಾರೆ ಮತ್ತು ಮಂತ್ರಗಳು ಬುದ್ಧಿಯಲ್ಲಿರುತ್ತದೆ. ಅನೇಕಾನೇಕ ಶಾಸ್ತ್ರಗಳಿವೆ. ಅವನ್ನು ಭಕ್ತಿಮಾರ್ಗದಲ್ಲಿ ಓದುತ್ತಾರೆ. ನೀವಂತೂ ಯಾವುದೇ ಪುಸ್ತಕ ಇತ್ಯಾದಿಗಳನ್ನು ಓದಬೇಕಾಗಿಲ್ಲ ಅಥವಾ ರಚಿಸಬೇಕಾಗಿಲ್ಲ. ಈ ಮುರುಳಿಯನ್ನೂ ಸಹ ರಿಫ್ರೆಷ್ ಆಗುವುದಕ್ಕಾಗಿಯೇ ಮುದ್ರಣ ಮಾಡಿಸಲಾಗುತ್ತದೆ. ಕೊನೆಯಲ್ಲಿ ಯಾವುದೇ ಪುಸ್ತಕ ಇತ್ಯಾದಿಗಳಿರುವುದಿಲ್ಲ. ಇವೆಲ್ಲವೂ ಸಮಾಪ್ತಿಯಾಗುವವು. ಜ್ಞಾನವಂತೂ ಒಬ್ಬ ತಂದೆಯಲ್ಲಿಯೇ ಇದೆ. ನೋಡಿ, ಜ್ಞಾನ-ವಿಜ್ಞಾನ ಭವನವೆಂದು ಹೆಸರಿಟ್ಟಿದ್ದಾರೆ. ಹೇಗೆ ಅಲ್ಲಿ ಜ್ಞಾನ ಮತ್ತು ಯೋಗವನ್ನು ಕಲಿಸಲಾಗುತ್ತದೆ. ಮನುಷ್ಯರಂತೂ ಅರ್ಥವಿಲ್ಲದೆ ಹೆಸರುಗಳನ್ನಿಟ್ಟುಬಿಡುತ್ತಾರೆ ಆದರೆ ಜ್ಞಾನವೆಂದರೇನು, ವಿಜ್ಞಾನವೆಂದರೇನು ಎಂಬುದು ತಿಳಿದಿರುವುದಿಲ್ಲ. ನೀವೀಗ ಜ್ಞಾನ ಮತ್ತು ವಿಜ್ಞಾನವನ್ನು ತಿಳಿದುಕೊಂಡಿದ್ದೀರಿ. ಯೋಗದಿಂದ ಆರೋಗ್ಯವು ಸಿಗುತ್ತದೆ, ಇದಕ್ಕೆ ವಿಜ್ಞಾನವೆಂದು ಹೇಳಲಾಗುತ್ತದೆ ಮತ್ತು ಇದು ಜ್ಞಾನವಾಗಿದೆ. ಯಾವುದರಲ್ಲಿ ಆರೋಗ್ಯವೂ ಸಿಗುತ್ತದೆ, ಇದಕ್ಕೆ ವಿಜ್ಞಾನವೆಂದು ಹೇಳಲಾಗುತ್ತದೆ ಮತ್ತು ಇದು ಜ್ಞಾನವಾಗಿದೆ ಯಾವುದರಲ್ಲಿ ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿಸಲಾಗುತ್ತದೆ. ವಿಶ್ವದ ಚರಿತ್ರೆ-ಭೂಗೋಳವು ಹೇಗೆ ಪುನರಾವರ್ತನೆಯಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ ಆದರೆ ಆ ವಿದ್ಯೆಯು ಲೌಕಿಕ ವಿದ್ಯೆಯಾಗಿದೆ. ಇಲ್ಲಿ ನಿಮಗೆ ಬೇಹದ್ದಿನ ಭೂಗೋಳ-ಚರಿತ್ರೆಯು ಬುದ್ದಿಯಲ್ಲಿದೆ. ನಾವು ಹೇಗೆ ರಾಜ್ಯವನ್ನು ತೆಗೆದುಕೊಳ್ಳುತ್ತೇವೆ, ಎಷ್ಟು ಸಮಯ ಮತ್ತು ಯಾವಾಗ ರಾಜ್ಯಭಾರ ಮಾಡುತ್ತಿದ್ದೆವು, ರಾಜಧಾನಿಯು ಹೇಗೆ ಸಿಕ್ಕಿತ್ತು- ಈ ಮಾತುಗಳು ಮತ್ತ್ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ತಂದೆಯೇ ಜ್ಞಾನಪೂರ್ಣನಾಗಿದ್ದಾರೆ, ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ತಂದೆಯೇ ತಿಳಿಸುತ್ತಾರೆ. ಮಾಡಿ-ಮಾಡಲ್ಪಟ್ಟ ನಾಟಕವನ್ನು ಅರಿತುಕೊಳ್ಳದಕಾರಣ ಇಂತಹವರು ನಿರ್ವಾಣಗೈದರು, ಇಲ್ಲವೆ ಜ್ಯೋತಿಯಲ್ಲಿ ಜ್ಯೋತಿಯು ಸಮಾವೇಶವಾಯಿತೆಂದು ಮನುಷ್ಯರು ಹೇಳಿಬಿಡುತ್ತಾರೆ.

ನಿಮಗೆ ತಿಳಿದಿದೆ- ಎಲ್ಲಾ ಮನುಷ್ಯಮಾತ್ರರು ಸೃಷ್ಟಿಚಕ್ರದಲ್ಲಿ ಬರುತ್ತಾರೆ. ಇದರಿಂದ ಯಾರೊಬ್ಬರೂ ಬಿಡುಗಡೆಯಾಗಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ- ಮನುಷ್ಯಾತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಇದು ಎಷ್ಟು ದೊಡ್ಡನಾಟಕವಾಗಿದೆ. ಎಲ್ಲರಲ್ಲಿಯೂ ಆತ್ಮವಿದೆ, ಆ ಆತ್ಮದಲ್ಲಿ ಅವಿನಾಶಿ ಪಾತ್ರವು ತುಂಬಲ್ಪಟ್ಟಿದೆ. ಇದಕ್ಕೆ ಮಾಡಿ-ಮಾಡಲ್ಪಟ್ಟ ನಾಟಕವೆಂದು ಹೇಳಲಾಗುತ್ತದೆ. ನಾಟಕವೆಂದು ಹೇಳುತ್ತಾರೆಂದರೆ ಅವಶ್ಯವಾಗಿ ಅದಕ್ಕೆ ಕಾಲಾವಧಿಯೂ ಬೇಕು. ಈ ನಾಟಕವು 5000 ವರ್ಷಗಳದ್ದಾಗಿದೆ. ಭಕ್ತಿಮಾರ್ಗದ ಶಾಸ್ತ್ರಗಳಲ್ಲಿ ನಾಟಕವು ಲಕ್ಷಾಂತರ ವರ್ಷಗಳದ್ದಾಗಿದೆ ಎಂದು ಬರೆದಿದ್ದಾರೆ. ಈ ಸಮಯದಲ್ಲಿ ತಂದೆಯು ರಾಜಯೋಗವನ್ನುಕಲಿಸಿದ್ದರು ಮತ್ತು ಕೌರವರು ಘೋರ ಅಂಧಕಾರದಲ್ಲಿದ್ದರು ಹಾಗೂ ಪಾಂಡವರು ಬೆಳಕಿನಲ್ಲಿದ್ದರೆಂದು ಈ ಸಮಯದ್ದೇ ಗಾಯನವಿದೆ. ಇದರಿಂದ ಅವರು ಬಹುಷಃ ಕಲಿಯುಗವು ಇನ್ನೂ 40 ಸಾವಿರ ವರ್ಷಗಳಿದೆಯೆಂದು ತಿಳಿಯುತ್ತಾರೆ ಆದರೆ ಭಗವಂತನು ಈಗಾಗಲೇ ಬಂದಿದ್ದಾರೆ, ಈ ಹಳೆಯ ಪ್ರಪಂಚದ ಮೃತ್ಯುವು ಸನ್ಮುಖದಲ್ಲಿ ನಿಂತಿದೆ ಎಂಬುದು ಅವರಿಗೆ ಅರ್ಥವಾಗುವುದೇ ಇಲ್ಲ. ಎಲ್ಲರೂ ಅಜ್ಞಾನ ನಿದ್ರೆಯಲ್ಲಿ ಮಲಗಿಬಿಟ್ಟಿದ್ದಾರೆ. ಯುದ್ಧವನ್ನು ನೋಡಿದಾಗ ಇದಂತೂ ಮಹಾಭಾರತ ಯುದ್ಧದ ಚಿಹ್ನೆಯಾಗಿದೆ ಎಂದು ಹೇಳುತ್ತಾರೆ. ಇದು ರಿಹರ್ಸಲ್ ಆಗುತ್ತಾ ಇರುವುದು ಮತ್ತು ನಡೆಯುತ್ತಾ-ನಡೆಯುತ್ತಾ ನಿಂತುಹೋಗುತ್ತದೆ. ನೀವು ತಿಳಿದುಕೊಂಡಿದ್ದೀರಿ- ಈಗಿನ್ನೂ ನಮ್ಮದು ಪೂರ್ಣ ಸ್ಥಾಪನೆಯಾಗಿಲ್ಲ. ತಂದೆಯು ಸಹಜ ರಾಜಯೋಗವನ್ನು ಕಲಿಸಿ ಇಲ್ಲಿಯೇ ರಾಜಧಾನಿಯನ್ನು ಸ್ಥಾಪನೆ ಮಾಡಿದರೆಂದು ಗೀತೆಯಲ್ಲಿ ಬರೆದಿಲ್ಲ. ಗೀತೆಯಲ್ಲಂತೂ ಮಹಾಪ್ರಳಯವನ್ನು ತೋರಿಸಿಬಿಟ್ಟಿದ್ದಾರೆ. ಎಲ್ಲರೂ ಸತ್ತುಹೋದರು, 5 ಜನ ಪಾಂಡವರಷ್ಟೇ ಉಳಿದರು, ಅವರೂ ಸಹ ಪರ್ವತದ ಮೇಲೆ ಕರಗಿಹೋದರೆಂದು ತೋರಿಸುತ್ತಾರೆ. ರಾಜಯೋಗದಿಂದ ಏನಾಯಿತೆಂಬುದೇನನ್ನೂ ತಿಳಿದುಕೊಂಡಿಲ್ಲ. ತಂದೆಯು ಪ್ರತಿಯೊಂದು ಮಾತನ್ನೂ ತಿಳಿಸುತ್ತಿರುತ್ತಾರೆ. ಅದು ಹದ್ದಿನ ಮಾತಾಗಿದೆ. ಹದ್ದಿನ ಬ್ರಹ್ಮನ ರಚಿಸುತ್ತಾರೆ. ಪಾಲನೆಯನ್ನೂ ಮಾಡುತ್ತಾರೆ ಬಾಕಿ ಪ್ರಳಯ ಆಗುವುದಿಲ್ಲ. ಸ್ತ್ರೀಯನ್ನು ದತ್ತು ಮಾಡಿಕೊಳ್ಳುತ್ತಾರೆ, ಅದೇ ರೀತಿ ತಂದೆಯು ಬಂದು ದತ್ತು ಮಾಡಿಕೊಳ್ಳುತ್ತಾರೆ. ತಿಳಿಸುತ್ತಾರೆ- ನಾನು ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡಿ ಮಕ್ಕಳಿಗೆ ಜ್ಞಾನವನ್ನು ತಿಳಿಸುತ್ತೇನೆ. ಇವರ ಮೂಲಕ ಮಕ್ಕಳನ್ನು ರಚಿಸುತ್ತೇನೆ. ತಂದೆಯೂ ಇದ್ದಾರೆ, ಪರಿವಾರವೂ ಇದೆ. ಇದು ಬಹಳ ಗುಹ್ಯಮಾತುಗಳಾಗಿವೆ. ಬಹಳ ಗಂಭೀರ ಮಾತುಗಳಾಗಿವೆ. ಕೆಲವರ ಬುದ್ಧಿಯಲ್ಲಿಯೇ ಕುಳಿತುಕೊಳ್ಳುತ್ತದೆ, ಈಗ ತಂದೆಯು ತಿಳಿಸುತ್ತಾರೆ- ಮೊಟ್ಟಮೊದಲು ತಮ್ಮನ್ನು ಆತ್ಮವೆಂದು ತಿಳಿಯಿರಿ, ಆತ್ಮವೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಶರೀರಕ್ಕೆ ಭಿನ್ನ-ಭಿನ್ನ ಹೆಸರುಗಳನ್ನಿಡುತ್ತಾರೆ. ನಾಮ-ರೂಪ, ಮುಖಲಕ್ಷಣ ಎಲ್ಲವೂ ಭಿನ್ನ-ಭಿನ್ನವಾಗಿರುತ್ತದೆ. ಒಬ್ಬರ ರೂಪವು ಇನ್ನೊಬ್ಬರಿಗೆ ಹೋಲುವುದಿಲ್ಲ. ಪ್ರತಿಯೊಂದು ಆತ್ಮರ ಜನ್ಮ-ಜನ್ಮಾಂತರದ ತಮ್ಮ ರೂಪಗಳು ಬೇರೆ-ಬೇರೆಯಾಗಿರುತ್ತವೆ. ತಮ್ಮ ಪಾತ್ರವು ನಾಟಕದಲ್ಲಿ ನಿಗಧಿಯಾಗಿದೆ ಆದ್ದರಿಂದ ಅದಕ್ಕೆ ಮಾಡಿ-ಮಾಡಲ್ಪಟ್ಟ ನಾಟಕವೆಂದು ಹೇಳಲಾಗುತ್ತದೆ. ಈಗ ಬೇಹದ್ದಿನ ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ ಅಂದಮೇಲೆ ನಾವೇಕೆ ತಂದೆಯನ್ನು ನೆನಪು ಮಾಡಬಾರದು! ಇದೇ ಪರಿಶ್ರಮದ ಮಾತಾಗಿದೆ.

ನೀವು ಮಕ್ಕಳು ನೆನಪಿನ ಯಾತ್ರೆಯಲ್ಲಿ ಕುಳಿತುಕೊಂಡಾಗ ಮಾಯೆಯ ಬಿರುಗಾಳಿಗಳು ಬರುತ್ತವೆ, ಯುದ್ಧವು ನಡೆಯುತ್ತದೆ, ಅದರಿಂದ ಗಾಬರಿಯಾಗಬಾರದು. ಮಾಯೆಯು ಪದೇ-ಪದೇ ನೆನಪನ್ನು ತುಂಡರಿಸುತ್ತದೆ. ಎಂತಹ ಸಂಕಲ್ಪ-ವಿಕಲ್ಪಗಳು ಬರುತ್ತವೆ ಅವು ತಲೆಯನ್ನೇ ಕೆಡಿಸಿಬಿಡುತ್ತದೆ. ನೀವು ಪರಿಶ್ರಮಪಡಿ. ಈ ಲಕ್ಷ್ಮೀ-ನಾರಾಯಣರ ಕರ್ಮೇಂದ್ರಿಯಗಳು ಹೇಗೆ ವಶಕ್ಕೆ ಬಂದವು ಎಂಬುದನ್ನು ತಂದೆಯು ತಿಳಿಸುತ್ತಾರೆ. ಇವರು ಸಂಪೂರ್ಣ ನಿರ್ವಿಕಾರಿಗಳಾಗಿದ್ದರು. ಈ ಶಿಕ್ಷಣವು ಅವರಿಗೆ ಎಲ್ಲಿಂದ ಸಿಗುತ್ತದೆ? ಈಗ ನೀವು ಮಕ್ಕಳಿಗೆ ಈ ರೀತಿಯಾಗುವ ಶಿಕ್ಷಣವು ಸಿಗುತ್ತಿದೆ, ಇವರಲ್ಲಿ ಯಾವುದೇ ವಿಕಾರವಿರುವುದಿಲ್ಲ. ಅಲ್ಲಿ ರಾವಣರಾಜ್ಯವೇ ಇಲ್ಲ. ನಂತರ ರಾವಣರಾಜ್ಯವಾಗುತ್ತದೆ. ರಾವಣನೆಂದರೆ ಯಾರೆಂಬುದು ಯಾರಿಗೂ ಗೊತ್ತಿಲ್ಲ. ನಾಟಕದನುಸಾರ ಇದೂ ಸಹ ನಿಗಧಿಯಾಗಿದೆ. ನಾಟಕದ ಆದಿ-ಮಧ್ಯ-ಅಂತ್ಯವನ್ನು ಯಾರೂ ತಿಳಿದುಕೊಂಡಿಲ್ಲ. ಆದ್ದರಿಂದಲೇ ನಮಗೂ ಗೊತ್ತಿಲ್ಲ, ಗೊತ್ತಿಲ್ಲ ಎನ್ನುತ್ತಾ ಬಂದಿದ್ದಾರೆ. ನೀವೀಗ ಸ್ವರ್ಗವಾಸಿಗಳಾಗಲು ಪುರುಷಾರ್ಥ ಮಾಡುತ್ತಿದ್ದೀರಿ. ಈ ಲಕ್ಷ್ಮೀ-ನಾರಾಯಣರು ಸ್ವರ್ಗದ ಮಾಲೀಕರಲ್ಲವೆ. ಇವರ ಮುಂದೆ ತಲೆಬಾಗುವವರು ತಮೋಪ್ರಧಾನ, ಕನಿಷ್ಠ ಪುರುಷರಾಗಿದ್ದಾರೆ. ತಂದೆಯು ತಿಳಿಸುತ್ತಾರೆ- ಮೊಟ್ಟಮೊದಲು ಒಂದುಮಾತನ್ನು ಪಕ್ಕಾ ಮಾಡಿಕೊಳ್ಳಿ- ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಇದರಲ್ಲಿಯೇ ಪರಿಶ್ರಮವಿದೆ. ಹೇಗೆ ಸರ್ಕಾರಿ ನೌಕರಿ 8 ಗಂಟೆಗಳ ಸಮಯ ಇರುತ್ತದೆಯಲ್ಲವೆ. ನೀವೀಗ ಬೇಹದ್ದಿನ ಸರ್ಕಾರದ ಸಹಯೋಗಿಗಳಾಗಿದ್ದೀರಿ. ನೀವು ಕೊನೆಪಕ್ಷ 8 ಗಂಟೆಗಳ ಕಾಲ ಪುರುಷಾರ್ಥ ಮಾಡಿ ನೆನಪಿನಲ್ಲಿರಬೇಕಾಗಿದೆ. ನಿಮ್ಮ ಸ್ಥಿತಿಯು ಈ ರೀತಿ 8 ಗಂಟೆಗಳ ಕಾಲ ಪುರುಷಾರ್ಥ ಮಾಡಿ ನೆನಪಿನಲ್ಲಿರ ಬೇಕಾಗಿದೆ. ಯಾವಾಗ ನಿಮ್ಮ ಸ್ಥಿತಿಯು ಈ ರೀತಿ ಪಕ್ಕಾ ಆಗಿಬಿಡುವುದೋ ಆಗ ಮತ್ತ್ಯಾರ ನೆನಪೂ ಬರುವುದಿಲ್ಲ, ತಂದೆಯ ನೆನಪಿನಲ್ಲಿಯೇ ಶರೀರಬಿಡುತ್ತೀರಿ ಮತ್ತು ಅವರೇ ವಿಜಯಮಾಲೆಯ ಮಣಿಯಾಗುತ್ತೀರಿ. ಒಬ್ಬ ರಾಜನಿಗೆ ಎಷ್ಟೊಂದು ಮಂದಿ ಪ್ರಜೆಗಳಿರುತ್ತಾರೆ! ಇಲ್ಲಿಯೂ ಸಹ ಪ್ರಜೆಗಳು ತಯಾರಾಗಬೇಕಾಗಿದೆ. ನೀವು ವಿಜಯಮಾಲೆಯ ಮಣಿಗಳು ಪೂಜ್ಯನೀಯರಾಗುತ್ತೀರಿ. 16,108ರ ಮಾಲೆಯೂ ಇರುತ್ತದೆ. 8ರ ಮಾಲೆಯೂ ಇದೆ, 108ರ ಮಾಲೆಯೂ ಇದೆ. ಕೊನೆಯಲ್ಲಿ ಮತ್ತೆ 16108ರ ಮಾಲೆಯೂ ಆಗುತ್ತದೆ. ನೀವು ಮಕ್ಕಳೇ ತಂದೆಯಿಂದ ರಾಜಯೋಗವನ್ನು ಕಲಿತು ಇಡೀ ವಿಶ್ವವನ್ನು ಸ್ವರ್ಗವನ್ನಾಗಿ ಮಾಡುತ್ತೀರಿ ಆದ್ದರಿಂದ ನಿಮಗೆ ಪೂಜೆಯೂ ನಡೆಯುತ್ತದೆ. ನೀವೇ ಪೂಜ್ಯರಾಗಿದ್ದಿರಿ ನಂತರ ಪೂಜಾರಿಗಳಾಗಿದ್ದೀರಿ. ಈ ದಾದಾರವರೂ ಹೇಳುತ್ತಾರೆ- ನಾನೇ ಸ್ವಯಂ ಮಾಲೆಯನ್ನು ಜಪಿಸಿದ್ದೇನೆ. ವಾಸ್ತವದಲ್ಲಿ ಲಕ್ಷ್ಮೀ-ನಾರಾಯಣರ ಮಂದಿರದಲ್ಲಿ ರುದ್ರಮಾಲೆಯಿರಬೇಕು. ನೀವು ಮೊದಲು ರುದ್ರಮಾಲೆ ನಂತರ ರುಂಡಮಾಲೆಯಲ್ಲಿ ಬರುತ್ತೀರಿ. ಮೊದಲ ನಂಬರಿನಲ್ಲಿ ರುದ್ರಮಾಲೆ, ಅದರಲ್ಲಿ ಶಿವನೂ ಇರುತ್ತಾರೆ, ರುಂಡಮಾಲೆಯಲ್ಲಿ ಶಿವನೆಲ್ಲಿಂದ ಬರುವರು! ಅದು ವಿಷ್ಣುವಿನ ಮಾಲೆಯಾಗಿದೆ, ಈ ಮಾತುಗಳನ್ನೂ ಸಹ ಯಾರೂ ತಿಳಿದುಕೊಳ್ಳುವುದಿಲ್ಲ. ನಾವು ಶಿವತಂದೆಯ ಕೊರಳಿನ ಹಾರವಾಗುತ್ತೇವೆಂದು ನೀವು ಹೇಳುತ್ತೀರಿ. ಬ್ರಾಹ್ಮಣರ ಮಾಲೆಯೇ ತಯಾರಾಗುವುದಿಲ್ಲ. ನೀವು ಎಷ್ಟು ನೆನಪಿನಲ್ಲಿರುತ್ತೀರೋ ಅಷ್ಟು ಸತ್ಯಯುಗದಲ್ಲಿಯೂ ಸಮೀಪದಲ್ಲಿಯೇ ಬಂದು ರಾಜ್ಯಭಾರ ಮಾಡುತ್ತೀರಿ. ಇಲ್ಲಿನ ಈ ವಿದ್ಯೆಯು ಮತ್ತೆಲ್ಲಿಯೂ ಸಿಗಲು ಸಾಧ್ಯವಿಲ್ಲ. ನೀವೀಗ ಈ ಹಳೆಯ ಶರೀರವನ್ನು ಬಿಟ್ಟು ಸ್ವರ್ಗವಾಸಿಗಳಾಗುತ್ತೀರಿ. ಇಡೀ ಭಾರತವೇ ಸ್ವರ್ಗವಾಸಿಯಾಗುವುದು. ವಿಶೇಷವಾಗಿ ಭಾರತವು ಸ್ವರ್ಗವಾಸಿಯಾಗಿತ್ತು, ಇದು 5000 ವರ್ಷಗಳ ಮಾತಾಗಿದೆ. ಲಕ್ಷಾಂತರ ವರ್ಷಗಳ ಮಾತಿರಲು ಸಾಧ್ಯವಿಲ್ಲ. ದೇವತೆಗಳಿಗೆ 5000 ವರ್ಷವಾಯಿತು, ಮನುಷ್ಯರು ಸ್ವರ್ಗವನ್ನು ಮರೆತುಬಿಟ್ಟಿದ್ದಾರೆ ಆದ್ದರಿಂದ ಲಕ್ಷಾಂತರ ವರ್ಷಗಳೆಂದು ಹೇಳಿಬಿಡುತ್ತಾರೆ. ಆದರೆ ಏನೂ ಇಲ್ಲ. ಇಷ್ಟೊಂದು ವರ್ಷಗಳಿರಲು ಸಾಧ್ಯವಿಲ್ಲ. ಸೂರ್ಯವಂಶಿ, ಚಂದ್ರವಂಶಿಯರೇ ಇರುತ್ತಾರೆ ನಂತರ ಅನ್ಯವಂಶಿಯರು ಬರುತ್ತಾರೆ. ಹಳೆಯ ವಸ್ತುಗಳು ಏನು ಕೆಲಸಕ್ಕೆ ಬರುತ್ತವೆ! ಆದರೆ ಎಷ್ಟೊಂದು ಖರೀದಿ ಮಾಡುತ್ತಾರೆ. ಹಳೆಯ ವಸ್ತುವಿಗೆ ಎಷ್ಟೊಂದು ಬೆಲೆಕಟ್ಟುತ್ತಾರೆ. ಎಲ್ಲದಕ್ಕಿಂತ ಅತ್ಯಮೂಲ್ಯವಾದುದು ಶಿವತಂದೆಯಾಗಿದ್ದಾರೆ. ಎಷ್ಟೊಂದು ಶಿವಲಿಂಗಗಳನ್ನು ಮಾಡಿಸುತ್ತಾರೆ! ಆತ್ಮವು ಇಷ್ಟು ಚಿಕ್ಕಬಿಂದುವಾಗಿದೆ! ಇದು ಯಾರಿಗೂ ಅರ್ಥವಾಗುವುದಿಲ್ಲ, ಅತೀ ಸೂಕ್ಷ್ಮರೂಪವಾಗಿದೆ. ತಂದೆಯೇ ತಿಳಿಸುತ್ತಾರೆ- ಇಷ್ಟು ಚಿಕ್ಕಬಿಂದುವಿನಲ್ಲಿ ಎಷ್ಟೊಂದು ಪಾತ್ರವು ನಿಗಧಿಯಾಗಿದೆ! ಈ ನಾಟಕವು ಪುನರಾವರ್ತನೆಯಾಗುತ್ತಾ ಇರುತ್ತದೆ. ಸತ್ಯಯುಗದಲ್ಲಿ ನಿಮಗೆ ಈ ಜ್ಞಾನವಿರುವುದಿಲ್ಲ, ಪ್ರಾಯಾಲೋಪವಾಗಿಬಿಡುತ್ತದೆ. ಅಂದಮೇಲೆ ಮತ್ತ್ಯಾರಾದರು ಸಹಜ ರಾಜಯೋಗವನ್ನು ಕಲಿಸಲು ಹೇಗೆ ಸಾಧ್ಯ. ಇದೆಲ್ಲವೂ ಭಕ್ತಿಮಾರ್ಗಕ್ಕಾಗಿ ಕುಳಿತು ರಚಿಸಿದ್ದಾರೆ. ಈಗ ಮಕ್ಕಳು ತಿಳಿದುಕೊಂಡಿದ್ದೀರಿ- ತಂದೆಯ ಮೂಲಕ ಭವಿಷ್ಯ ಹೊಸ ಪ್ರಪಂಚಕ್ಕಾಗಿ ಬ್ರಾಹ್ಮಣ, ದೇವತಾ, ಕ್ಷತ್ರಿಯ- ಮೂರು ಧರ್ಮಗಳು ಸ್ಥಾಪನೆಯಾಗುತ್ತಿದೆ. ಯಾವ ಲೌಕಿಕ ವಿದ್ಯೆಯನ್ನು ನೀವು ಓದುತ್ತೀರೋ ಅದು ಈ ಒಂದುಜನ್ಮಕ್ಕಾಗಿ ಇದೆ ಆದರೆ ಇಲ್ಲಿ ಓದುವ ವಿದ್ಯೆಯ ಪ್ರಾಲಬ್ಧವು ನಿಮಗೆ ಹೊಸ ಪ್ರಪಂಚದಲ್ಲಿ ಸಿಗುತ್ತದೆ. ಈ ವಿದ್ಯಾಭ್ಯಾಸವು ಸಂಗಮಯುಗದಲ್ಲಿಯೇ ನಡೆಯುತ್ತದೆ. ಇದು ಪುರುಷೋತ್ತಮ ಸಂಗಮಯುಗವಾಗಿದೆ. ಅವಶ್ಯವಾಗಿ ದೇವತೆಗಳಾಗುವ ಪುರುಷಾರ್ಥವು ಸಂಗಮಯುಗದಲ್ಲಿಯೇ ಮಾಡಿದ್ದಿರಿ, ತಂದೆಯು ಮಕ್ಕಳಿಗೆ ಎಲ್ಲಾ ರಹಸ್ಯವನ್ನು ತಿಳಿಸುತ್ತಾರೆ. ಇದೂ ಸಹ ತಂದೆಗೆ ಗೊತ್ತಿದೆ, ನೀವು ಇಡೀ ದಿನ ಈ ನೆನಪಿನಲ್ಲಿರಲು ಸಾಧ್ಯವಿಲ್ಲ ಅಸಂಭವವಾಗಿದೆ ಆದ್ದರಿಂದ ಚಾರ್ಟ್ ಇಟ್ಟುಕೊಳ್ಳಿ. ನಾನು ಎಲ್ಲಿಯವರೆಗೆ ತಂದೆಯ ನೆನಪಿನಲ್ಲಿರುತ್ತೇನೆಂದು ನೋಡಿಕೊಳ್ಳಿ. ದೇಹಾಭಿಮಾನವಿದ್ದರೆ ನೆನಪು ಹೇಗೆ ಇರುತ್ತದೆ! ಪಾಪಗಳ ಹೊರೆಯು ತಲೆಯ ಮೇಲೆ ಬಹಳಷ್ಟಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ನೆನಪಿನಲ್ಲಿರಿ, ತ್ರಿಮೂರ್ತಿಯ ಚಿತ್ರವನ್ನೂ ಜೇಬಿನಲ್ಲಿಟ್ಟುಕೊಳ್ಳಿ ಆದರೆ ನೀವು ಪದೇ-ಪದೇ ಮರೆತುಹೋಗುತ್ತೀರಿ. ತಂದೆಯನ್ನು ನೆನಪು ಮಾಡುವುದರಿಂದ ಆಸ್ತಿಯೆಲ್ಲವೂ ನೆನಪಿಗೆ ಬಂದುಬಿಡುತ್ತದೆ. ಸದಾ ಬ್ಯಾಡ್ಜನ್ನು ಹಾಕಿಕೊಂಡಿರಿ. ಪುಸ್ತಕಗಳೂ ಇರಲಿ, ಯಾರಾದರೂ ಒಳ್ಳೆಯ ವ್ಯಕ್ತಿಯು ಸಿಕ್ಕಿದರೆ ಅವರಿಗೆ ಕೊಡಬೇಕು. ಒಳ್ಳೆಯ ವ್ಯಕ್ತಿಗಳೆಂದೂ ಉಚಿತವಾಗಿ ತೆಗೆದುಕೊಳ್ಳುವುದಿಲ್ಲ. ಇದರ ಬೆಲೆ ಎಷ್ಟೆಂದು ಕೇಳಿದರೆ ಹೇಳಿ, ಬಡವರಿಗಂತೂ ಇದನ್ನು ಉಚಿತವಾಗಿ ಕೊಡಲಾಗುತ್ತದೆ. ಬಾಕಿ ಯಾರೆಷ್ಟಾದರೂ ಕೊಡಬಹುದು, ಘನತೆಯಿರಬೇಕು. ನಿಮ್ಮ ರೀತಿಪದ್ಧತಿಗಳು ಪ್ರಪಂಚದವರಿಗಿಂತ ಬಹಳ ಭಿನ್ನವಾಗಿರಬೇಕು. ಹಿರಿಯವ್ಯಕ್ತಿಗಳು ತಾವಾಗಿಯೇ ಕೊಟ್ಟುಬಿಡುತ್ತಾರೆ. ನಿಮ್ಮ ಖರ್ಚನ್ನು ನೀವೇ ಮಾಡಿಕೊಳ್ಳುತ್ತೀರಲ್ಲವೆ. ಹೇಳಿ- ನಾವು ನಮ್ಮ ತನು, ಮನ, ಧನವನ್ನು ಭಾರತದ ಸೇವೆಯಲ್ಲಿ ತೊಡಗಿಸುತ್ತೇವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1) ಈ ಬೇಹದ್ದಿನ ಸರ್ಕಾರಕ್ಕೆ ಸಹಯೋಗವನ್ನು ಕೊಡಲು ಕೊನೆಪಕ್ಷ 8 ಗಂಟೆಗಳಾದರೂ ನೆನಪು ಮಾಡುವ ಪುರುಷಾರ್ಥ ಮಾಡಬೇಕಾಗಿದೆ. ನೆನಪಿನಲ್ಲಿ ಮಾಯೆಯ ಯಾವ ವಿಘ್ನಗಳು ಬರುತ್ತವೆಯೋ ಅದರಿಂದ ಗಾಬರಿಯಾಗಬಾರದು.

2) ಈ ಪುರುಷೋತ್ತಮ ಸಂಗಮಯುಗದಲ್ಲಿ ಈಶ್ವರೀಯ ಸಂಪ್ರದಾಯದವರಾಗಿ ಈಶ್ವರನ ಮತದಂತೆ ನಡೆಯಬೇಕಾಗಿದೆ. ಕರ್ಮವನ್ನು ಮಾಡುತ್ತಾ ಒಬ್ಬ ತಂದೆಯ ನೆನಪಿನಲ್ಲಿರುವ ಅಭ್ಯಾಸ ಮಾಡಬೇಕಾಗಿದೆ.

ವರದಾನ:
ಅಂತರ್ಮುಖತೆಯ ಗುಹೆಯಲ್ಲಿರುವಂತಹ ದೇಹದಿಂದ ನ್ಯಾರಾ ದೇಹೀ ಭವ

ಪಾಂಡವರ ಗುಹೆಗಳನ್ನು ಏನು ತೋರಿಸುತ್ತಾರೆ-ಅದು ಇದೇ ಅಂತರ್ಮುಖತೆಯ ಗುಹೆಯಾಗಿದೆ, ಎಷ್ಟು-ದೇಹದಿಂದ ನ್ಯಾರ, ಆತ್ಮ ರೂಪದಲ್ಲಿ ಸ್ಥಿತರಾಗುವ ಗುಹೆಯಲ್ಲಿರುವಿರೋ ಅಷ್ಟು ಜಗತ್ತಿನ ವಾತಾವರಣದಿಂದ ದೂರ ಹೋಗಿಬಿಡುವಿರಿ, ವಾತಾವರಣದ ಪ್ರಭಾವದಲ್ಲಿ ಬರುವುದಿಲ್ಲ. ಹೇಗೆ ಗುಹೆಯ ಒಳಗೆ ಇರುವುದರಿಂದ ಹೊರಗಿನ ವಾತಾವರಣದಿಂದ ದೂರವಾಗಿರುತ್ತಾರೆ ಹಾಗೆಯೆ ಇಲ್ಲಿ ಅಂತರ್ಮುಖತೆಯ ಗುಹೆ ಸಹ ಎಲ್ಲದರಿಂದ ಅತೀತವಾಗಿ ತಂದೆಗೆ ಪ್ರಿಯರನ್ನಾಗಿ ಮಾಡಿಬಿಡುತ್ತದೆ. ನಂತರ ಯಾರು ತಂದೆಗೆ ಪ್ರಿಯರಾಗಿದ್ದಾರೆ ಅವರು ಸ್ವತಃ ಎಲ್ಲರಿಂದ ಅತೀತರಾಗಿಬಿಡುತ್ತಾರೆ.

ಸ್ಲೋಗನ್:
ಸಾಧನೆ ಬೀಜವಾಗಿದೆ ಮತ್ತು ಸಾಧನ ಅದರ ವಿಸ್ತಾರವಾಗಿದೆ. ವಿಸ್ತಾರದಲ್ಲಿ ಸಾಧನೆಯನ್ನು ಮುಚ್ಚಿ ಬಿಡಬಾರದು.

ಅವ್ಯಕ್ತ ಸೂಚನೆಗಳು- ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ

ಅಂತರ್ಮುಖಿಯ ಚಿಹ್ನೆಯಾಗಿದೆ ಸದಾ ಸಾಗರನ ಆಳದಲ್ಲಿ ಕಳೆದುಹೋಗಿ ಗಂಭೀರತಾ ಮೂರ್ತಿ ಆಗಿರುವುದು. ಚಹರೆಯ ಮೂಲಕ ಆತ್ಮಿಕ ಸ್ಥಿತಿಯ ಚಿನ್ಹೆ ಕಾಣಿಸುವುದು. ಇನ್ನೊಂದು ಕಡೆ ಮನನ ಚಿಂತನ ಮಾಡುತ್ತಿರುವ ಚಹರೆ ಹಾಗೂ ರಮಣಿಕ ಅರ್ಥಾತ್ ಮುಗುಳ್ನಗುತ್ತಿರುವ ಚಹರೆ, ಎರಡು ಲಕ್ಷಣಗಳು ಮುಖದಿಂದ ಪ್ರತ್ಯಕ್ಷ ವಾಗುವುದು. ಅಂತರ್ಮುಖಿ ಸದಾ ಹರ್ಷಿತ ಮುಖ ಆಗಿ ಕಾಣಿಸುವರು ಏಕೆಂದರೆ ಮಾಯೆ ಎದುರಿಸುವುದು ಸಮಾಪ್ತಿಯಾಗಿ ಬಿಡುವುದು