14.03.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಒಬ್ಬ
ತಂದೆಯೇ ನಂಬರ್ ವನ್ ಪಾತ್ರಧಾರಿಯಾಗಿದ್ದಾರೆ, ಅವರು ಪತಿತರನ್ನು ಪಾವನ ಮಾಡುವ ಪಾತ್ರವನ್ನು
ಮಾಡುತ್ತಾರೆ, ತಂದೆಯ ತರಹ ಪಾತ್ರವನ್ನು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ”.
ಪ್ರಶ್ನೆ:
ಸನ್ಯಾಸಿಗಳ
ಯೋಗವು ಶಾರೀರಿಕ ಯೋಗವಾಗಿದೆ, ಆತ್ಮಿಕ ಯೋಗವನ್ನು ತಂದೆಯೇ ಕಲಿಸುತ್ತಾರೆ - ಹೇಗೆ?
ಉತ್ತರ:
ಸನ್ಯಾಸಿಗಳು
ಬ್ರಹ್ಮತತ್ವದೊಂದಿಗೆ ಯೋಗವನ್ನಿಡುವುದನ್ನು ಕಲಿಸುತ್ತಾರೆ. ಅದಂತೂ ಇರುವ ಸ್ಥಾನವಾಗಿದೆ ಅಂದಮೇಲೆ
ಅದು ಶಾರೀರಿಕ ಯೋಗವಾಯಿತು, ತತ್ವಕ್ಕೆ ಭಗವಂತನೆಂದು ಹೇಳಲಾಗುವುದಿಲ್ಲ, ನೀವು ಮಕ್ಕಳು
ಪರಮಾತ್ಮನೊಂದಿಗೆ ಬುದ್ದಿಯೋಗವನ್ನಿಡುತ್ತೀರಿ. ಆದ್ದರಿಂದ ನಿಮ್ಮ ಯೋಗವು ಆತ್ಮಿಕ ಯೋಗವಾಗಿದೆ, ಈ
ಯೋಗವನ್ನು ತಂದೆಯೇ ಕಲಿಸಿ ಕೊಡುತ್ತಾರೆ ಮತ್ತ್ಯಾರೂ ಕಲಿಸಿಕೊಡಲು ಸಾಧ್ಯವಿಲ್ಲ ಏಕೆಂದರೆ ಅವರೇ
ನಿಮ್ಮ ಆತ್ಮೀಕ ತಂದೆಯಾಗಿದ್ದಾರೆ.
ಗೀತೆ:
ನೀವು ಪ್ರೀತಿಯ
ಸಾಗರನಾಗಿದ್ದೀರಿ...........
ಓಂ ಶಾಂತಿ.
ಮಕ್ಕಳು ಅನೇಕರು ಓಂ ಶಾಂತಿ ಎಂದು ಹೇಳುತ್ತಾರೆ ಅರ್ಥಾತ್ ತಮ್ಮ ಆತ್ಮದ ಪರಿಚಯವನ್ನು ಕೊಡುತ್ತಾರೆ
ಆದರೆ ಸ್ವಯಂ ತಿಳಿದುಕೊಂಡಿಲ್ಲ, ಓಂ ಶಾಂತಿ ಎಂಬುದಕ್ಕೆ ಅನೇಕ ಅರ್ಥಗಳನ್ನು ಹೇಳುತ್ತಾರೆ. ಓಂ
ಎಂದರೆ ಭಗವಂತನೆಂದು ಕೆಲವರು ಹೇಳುತ್ತಾರೆ. ಆದರೆ ಇಲ್ಲ, ಓಂ ಶಾಂತಿ ಎಂದು ಆತ್ಮವೇ ಹೇಳುತ್ತದೆ.
ನಾನು ಆತ್ಮನ ಸ್ವಧರ್ಮವೇ ಶಾಂತಿಯಾಗಿದೆ. ಆದ್ದರಿಂದ ನಾನು ಶಾಂತ ಸ್ವರೂಪನಾಗಿದ್ದೇನೆಂದು
ಹೇಳುತ್ತಾರೆ. ಇದು ನನ್ನ ಶರೀರವಾಗಿದೆ ಯಾವುದರ ಮೂಲಕ ನಾವು ಕರ್ಮ ಮಾಡುತ್ತೇವೆ. ಎಷ್ಟು ಸಹಜವಾಗಿದೆ!
ಹಾಗೆಯೇ ತಂದೆಯೂ ಸಹ ಹೇಳುತ್ತಾರೆ – ಓಂ ಶಾಂತಿ ಆದರೆ ನಾನು ಎಲ್ಲರ ತಂದೆಯಾಗಿರುವ ಕಾರಣ, ಬೀಜ
ರೂಪನಾಗಿರುವ ಕಾರಣ ಯಾವ ರಚನಾರೂಪಿ ವೃಕ್ಷವಿದೆಯೋ ಆ ಕಲ್ಪವೃಕ್ಷದ ಆದಿ-ಮಧ್ಯ-ಅಂತ್ಯವನ್ನು
ತಿಳಿದುಕೊಂಡಿದ್ದೇನೆ. ಹೇಗೆ ನೀವು ಯಾವುದೇ ವೃಕ್ಷವನ್ನು ನೋಡಿದಾಗ ಅದರ ಆದಿ-ಮಧ್ಯ-ಅಂತ್ಯವನ್ನು
ತಿಳಿದುಕೊಳ್ಳುತ್ತೀರಿ, ಆ ಬೀಜವಂತೂ ಜಡವಾಗಿದೆ. ತಂದೆಯು ತಿಳಿಸುತ್ತಾರೆ - ಈ ಕಲ್ಪವೃಕ್ಷದ
ಆದಿ-ಮಧ್ಯ-ಅಂತ್ಯವನ್ನು ನೀವು ತಿಳಿದುಕೊಳ್ಳಲು ಸಾಧ್ಯವಿಲ್ಲ. ನಾನು ತಿಳಿದುಕೊಂಡಿದ್ದೇನೆ. ನನಗೇ
ಜ್ಞಾನ ಸಾಗರನೆಂದು ಹೇಳುತ್ತಾರೆ, ನಾನು ನೀವು ಮಕ್ಕಳಿಗೆ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು
ತಿಳಿಸುತ್ತಿದ್ದೇನೆ. ಈ ನಾಟಕಕ್ಕೆ ಡ್ರಾಮಾ ಎಂದು ಹೇಳಲಾಗುತ್ತದೆ. ನೀವು ಇದರಲ್ಲಿ
ಪಾತ್ರಧಾರಿಗಳಾಗಿದ್ದೀರಿ, ನಾನೂ ಸಹ ಪಾತ್ರಧಾರಿಯಾಗಿದ್ದೇನೆ. ಮಕ್ಕಳು ಹೇಳುತ್ತಾರೆ - ಹೇ ತಂದೆಯೇ,
ಪತಿತ-ಪಾವನನೇ ಪಾತ್ರಧಾರಿಯಾಗಿ ಬನ್ನಿ, ಬಂದು ನಾವು ಪತಿತರನ್ನು ಪಾವನ ಮಾಡಿ ಎಂದು. ಅದಕ್ಕಾಗಿ ಈಗ
ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ನನ್ನ ಪಾತ್ರವನ್ನು ಮಾಡುತ್ತಿದ್ದೇನೆ, ನನ್ನ ಪಾತ್ರವು
ಕೇವಲ ಈ ಸಂಗಮದ ಸಮಯದಲ್ಲಿಯೇ ಇದೆ. ಅದರಲ್ಲಿಯೂ ನನಗೆ ನನ್ನದೇ ಆದ ಶರೀರವಿಲ್ಲ. ನಾನು ಈ ಶರೀರದ
ಮೂಲಕ ಪಾತ್ರ ಮಾಡುತ್ತೇನೆ. ನನ್ನ ಹೆಸರಾಗಿದೆ - ಶಿವ. ಮಕ್ಕಳಿಗೇ ತಿಳಿಸುತ್ತಾರಲ್ಲವೆ. ಯಾವುದೇ
ಕೋತಿಗಳು ಅಥವಾ ಪ್ರಾಣಿಗಳ ಪಾಠಶಾಲೆಯಿರುವುದಿಲ್ಲ, ಆದರೆ ತಂದೆಯು ತಿಳಿಸುತ್ತಾರೆ - ಈ ಪಂಚ
ವಿಕಾರಗಳಿರುವ ಕಾರಣ ಭಲೆ ಚಹರೆಯು ಮನುಷ್ಯನದಾಗಿದೆ, ಕರ್ತವ್ಯವು ಕೋತಿಯಂತಿದೆ. ಮಕ್ಕಳಿಗೆ ತಂದೆಯು
ತಿಳಿಸುತ್ತಾರೆ - ಎಲ್ಲರೂ ತಮ್ಮನ್ನು ಪತಿತರೆಂದು ಕರೆಸಿಕೊಳ್ಳುತ್ತಾರೆ ಆದರೆ ನಮ್ಮನ್ನು ಯಾರು
ಪತಿತರನ್ನಾಗಿ ಮಾಡುತ್ತಾರೆ ಮತ್ತು ಪಾವನರನ್ನಾಗಿ ಯಾರು ಮಾಡುತ್ತಾರೆ? ಪತಿತ-ಪಾವನ ಯಾರೆಂಬುದನ್ನೇ
ತಿಳಿದುಕೊಂಡಿಲ್ಲ. ಯಾರನ್ನು ಕರೆಯುತ್ತೇವೆ ಎಂಬುದೇನೂ ಗೊತ್ತಿಲ್ಲ. ನಾವೆಲ್ಲರೂ
ಪಾತ್ರಧಾರಿಗಳಾಗಿದ್ದೇವೆ, ನಾವಾತ್ಮರು ಈ ಶರೀರವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತೇವೆ
ಎಂಬುದೇನನ್ನೂ ತಿಳಿದುಕೊಂಡಿಲ್ಲ. ಆತ್ಮವು ಪರಮಧಾಮದಿಂದ ಬರುತ್ತದೆ, ಬಂದು
ಪಾತ್ರವನ್ನಭಿನಯಿಸುತ್ತದೆ. ಇಡೀ ಆಟವು ಭಾರತದ ಮೇಲೆ ಮಾಡಲ್ಪಟ್ಟಿದೆ. ಪಾವನ ಭಾರತವನ್ನು ಪತಿತ
ಭಾರತವನ್ನಾಗಿ ಯಾರು ಮಾಡಿದರು? ರಾವಣ. ರಾವಣನು ಲಂಕೆಯಲ್ಲಿ ರಾಜ್ಯ ಮಾಡುತ್ತಿದ್ದನು ಎಂದು
ಹೇಳುತ್ತಾರೆ. ತಂದೆಯು ಈಗ ನಮ್ಮನ್ನು ಬೇಹದ್ದಿನಲ್ಲಿ ಕರೆದುಕೊಂಡು ಹೋಗುತ್ತಾರೆ - ಹೇ ಮಕ್ಕಳೇ,
ಇಡೀ ಸೃಷ್ಟಿಯೇ ಬೇಹದ್ದಿನ ದ್ವೀಪವಾಗಿದೆ ಅದಂತೂ ಹದ್ದಿನ ಲಂಕೆಯಾಗಿದೆ. ಈ ಬೇಹದ್ದಿನ ದ್ವೀಪದಲ್ಲಿ
ರಾವಣ ರಾಜ್ಯವಿದೆ. ಮೊದಲು ರಾಮ ರಾಜ್ಯವಿತ್ತು, ಈಗ ರಾವಣ ರಾಜ್ಯವಾಗಿದೆ. ಬಾಬಾ, ರಾಮ ರಾಜ್ಯವು
ಎಲ್ಲಿತ್ತು ಎಂದು ಮಕ್ಕಳು ಕೇಳುತ್ತಾರೆ, ಇದಕ್ಕೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಅದು
ಇಲ್ಲಿಯೇ ಇತ್ತಲ್ಲವೆ ಯಾವುದನ್ನು ಎಲ್ಲರೂ ಬಯಸುತ್ತಾರೆ.
ನೀವು ಭಾರತವಾಸಿಗಳು ಆದಿ
ಸನಾತನ ದೇವಿ-ದೇವತಾ ಧರ್ಮದವರಾಗಿದ್ದೀರಿ, ಹಿಂದೂ ಧರ್ಮದವರಲ್ಲ. ಮಧುರಾತಿ ಮಧುರ ಅಗಲಿ ಹೋಗಿ ಮರಳಿ
ಸಿಕ್ಕಿದ ಮುದ್ದಾದ ಮಕ್ಕಳೇ, ನೀವೇ ಮೊಟ್ಟ ಮೊದಲು ಭಾರತದಲ್ಲಿದ್ದಿರಿ, ನಿಮಗೆ ಆ ಸತ್ಯಯುಗದ
ರಾಜ್ಯವನ್ನು ಯಾರು ಕೊಟ್ಟಿದ್ದರು? ಅವಶ್ಯವಾಗಿ ಸ್ವರ್ಗದ ರಚಯಿತನೇ ಈ ಆಸ್ತಿಯನ್ನು ಕೊಟ್ಟಿದ್ದರು.
ತಂದೆಯು ತಿಳಿಸುತ್ತಾರೆ – ಎಷ್ಟೊಂದು ಮಂದಿ ಅನ್ಯ ಧರ್ಮಗಳಲ್ಲಿ ಹೋಗಿ ಸೇರಿದ್ದಾರೆ. ಮುಸಲ್ಮಾನರ
ರಾಜ್ಯವಿದ್ದಾಗ ಅನೇಕರನ್ನು ಮುಸಲ್ಮಾನರನ್ನಾಗಿ ಮಾಡಿಕೊಂಡರು. ಕ್ರಿಶ್ಚಿಯನ್ನರ ರಾಜ್ಯವಿದ್ದಾಗ
ಅನೇಕರನ್ನು ಕ್ರಿಶ್ಚಿಯನ್ನರನ್ನಾಗಿ ಮಾಡಿಕೊಂಡರು. ಬೌದ್ಧಿಯರ ರಾಜ್ಯವು ಇಲ್ಲಿ ಇರಲಿಲ್ಲ, ಆದರೂ
ಸಹ ಅನೇಕರನ್ನು ಬೌದ್ಧಿಯರನ್ನಾಗಿ ಮಾಡಿಕೊಂಡರು. ತಮ್ಮ ಧರ್ಮದಲ್ಲಿ ಸೇರಿಸಿಕೊಂಡರು. ಆದಿ ಸನಾತನ
ಧರ್ಮವು ಯಾವಾಗ ಪ್ರಾಯಲೋಪವಾಗಿ ಬಿಡುವುದೋ ಆಗಲೇ ಪುನಃ ಆ ಧರ್ಮದ ಸ್ಥಾಪನೆಯಾಗುವುದು. ಅಂದಾಗ
ತಂದೆಯು ನೀವೆಲ್ಲಾ ಭಾರತವಾಸಿಗಳಿಗೆ ತಿಳಿಸುತ್ತಾರೆ – ಮಧುರಾತಿ ಮಧುರ ಮಕ್ಕಳೇ, ನೀವೆಲ್ಲರೂ ಆದಿ
ಸನಾತನ ದೇವಿ-ದೇವತಾ ಧರ್ಮದವರಾಗಿದ್ದಿರಿ, ನೀವು 84 ಜನ್ಮಗಳನ್ನು ತೆಗೆದುಕೊಂಡಿರಿ. ಬ್ರಾಹ್ಮಣ,
ದೇವತಾ, ಕ್ಷತ್ರಿಯ..... ವರ್ಣದಲ್ಲಿ ಬಂದಿರಿ. ಈಗ ಪುನಃ ದೇವತಾ ವರ್ಣದಲ್ಲಿ ಹೋಗುವುದಕ್ಕಾಗಿ
ಬ್ರಾಹ್ಮಣ ವರ್ಣದಲ್ಲಿ ಬಂದಿದ್ದೀರಿ. ಬ್ರಾಹ್ಮಣ ದೇವತಾಯ ನಮಃ ಎಂದು ಹಾಡುತ್ತಾರೆ. ಮೊದಲು
ಬ್ರಾಹ್ಮಣರ ಹೆಸರನ್ನು ತೆಗೆದುಕೊಳ್ಳುತ್ತಾರೆ. ಬ್ರಾಹ್ಮಣರೇ ಭಾರತವನ್ನು ಸ್ವರ್ಗವನ್ನಾಗಿ
ಮಾಡಿದ್ದೀರಿ, ಇದು ಭಾರತದ ಪ್ರಾಚೀನ ಯೋಗವಾಗಿದೆ. ಮೊಟ್ಟ ಮೊದಲು ಯಾವ ರಾಜಯೋಗವಿತ್ತೋ ಅದರ
ವರ್ಣನೆಯು ಗೀತೆಯಲ್ಲಿದೆ. ಗೀತೆಯ ಯೋಗವನ್ನು ಯಾರು ಕಲಿಸಿದ್ದರು? ಇದನ್ನು ಭಾರತವಾಸಿಗಳು ಮರೆತು
ಹೋಗಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಆ ಯೋಗವನ್ನು ನಾನೇ ಕಲಿಸಿದ್ದೆನು, ಇದು
ಆತ್ಮಿಕ ಯೋಗವಾಗಿದೆ. ಉಳಿದೆಲ್ಲವೂ ದೈಹಿಕ ಯೋಗಗಳಾಗಿವೆ, ಸನ್ಯಾಸಿಗಳು ಬ್ರಹ್ಮ್ ತತ್ವದೊಂದಿಗೆ
ಯೋಗವನ್ನಿಡಿ ಎಂದು ದೈಹಿಕ ಯೋಗಗಳನ್ನು ಕಲಿಸುತ್ತಾರೆ ಆದರೆ ಅದು ತಪ್ಪಾಗಿದೆ, ಬ್ರಹ್ಮ್ ತತ್ವವು
ಇರುವ ಸ್ಥಾನವಾಗಿದೆ ಅಂದಮೇಲೆ ಅದು ಪರಮಾತ್ಮನಾಗಲಿಲ್ಲ, ತಂದೆಯನ್ನೇ ಮರೆತು ಹೋಗಿದ್ದಾರೆ. ನೀವೂ
ಸಹ ಮರೆತು ಹೋಗಿದ್ದಿರಿ, ನೀವು ತಮ್ಮ ಧರ್ಮವನ್ನೂ ಮರೆತು ಬಿಟ್ಟಿದ್ದೀರಿ. ಇದು ಡ್ರಾಮಾದಲ್ಲಿ
ನಿಗಧಿಯಾಗಿದೆ. ವಿದೇಶದಲ್ಲಿ ಯೋಗವು ಇರಲೇ ಇಲ್ಲ, ಹಠಯೋಗ ಮತ್ತು ರಾಜಯೋಗವು ಇಲ್ಲಿಯದೇ ಆಗಿದೆ, ಆ
ನಿವೃತ್ತಿ ಮಾರ್ಗದ ಸನ್ಯಾಸಿಗಳು ಎಂದೂ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ, ಯಾರು ಅರಿತಿರುವರೋ
ಅವರೇ ಕಲಿಸುವರು. ಸನ್ಯಾಸಿಗಳಾದರೂ ರಾಜ್ಯವನ್ನೇ ಬಿಟ್ಟು ಹೋಗುತ್ತಾರೆ. ಗೋಪಿ ಚಂದ ರಾಜನ
ಉದಾಹರಣೆಯಿದೆಯಲ್ಲವೆ. ರಾಜ್ಯವನ್ನು ಬಿಟ್ಟು ಕಾಡಿಗೆ ಹೊರಟು ಹೋದರು, ಅವರ ಕಥೆಯಿದೆ.
ಸನ್ಯಾಸಿಗಳಂತೂ ರಾಜ್ಯವನ್ನು ಬಿಡಿಸುವವರಾಗಿದ್ದಾರೆ ಅಂದಮೇಲೆ ಅವರು ರಾಜಯೋಗವನ್ನು ಕಲಿಸಲು ಹೇಗೆ
ಸಾಧ್ಯ? ಈ ಸಮಯದಲ್ಲಿ ಇಡೀ ವೃಕ್ಷವು ಜಡಜಡೀಭೂತವಾಗಿ ಬಿಟ್ಟಿದೆ. ಈಗ ಇದು ಬಿದ್ದಿತೆಂದರೆ ಬಿದ್ದಿತು.
ಯಾವುದೇ ವೃಕ್ಷವು ಅಂತಿಮ ಸ್ಥಿತಿಯನ್ನು ತಲುಪಿದಾಗ ಅಂತ್ಯದಲ್ಲಿ ಅದನ್ನು ಬೀಳಿಸಲಾಗುತ್ತದೆ ಹಾಗೆಯೇ
ಈ ಮನುಷ್ಯ ಸೃಷ್ಟಿರೂಪಿ ವೃಕ್ಷವೂ ಸಹ ತಮೋಪ್ರಧಾನವಾಗಿದೆ, ಇದರಲ್ಲಿ ಏನೂ ಸಾರವಿಲ್ಲ, ಇದರ ವಿನಾಶವು
ಖಂಡಿತ ಆಗುವುದು. ಅದಕ್ಕೆ ಮೊದಲೇ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯನ್ನು ಇಲ್ಲಿ
ಮಾಡಬೇಕಾಗುವುದು. ಸತ್ಯಯುಗದಲ್ಲಿ ಯಾರೂ ದುರ್ಗತಿಯಲ್ಲಿರುವುದಿಲ್ಲ. ಇವರು ವಿದೇಶದಲ್ಲಿ ಹೋಗಿ
ಯೋಗವನ್ನು ಕಲಿಸುತ್ತಾರೆ ಆದರೆ ಅವರದು ಅನೇಕ ಪ್ರಕಾರದ ಹಠಯೋಗಗಳಾಗಿವೆ, ಇದು ರಾಜಯೋಗವಾಗಿದೆ.
ಇದಕ್ಕೆ ಆತ್ಮಿಕ ಯೋಗವೆಂದು ಹೇಳಲಾಗುತ್ತದೆ. ಅವೆಲ್ಲವೂ ದೈಹಿಕ ಯೋಗಗಳಾಗಿವೆ. ಮನುಷ್ಯರೇ
ಮನುಷ್ಯರಿಗೆ ಕಲಿಸುತ್ತಾರೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ನಾನು ನಿಮಗೆ ಒಂದೇ ಬಾರಿ ಈ
ರಾಜಯೋಗವನ್ನು ಕಲಿಸುತ್ತೇನೆ. ಖಡಾಖಂಡಿತವಾಗಿ ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ. ಆತ್ಮಿಕ ತಂದೆಯು
ಆತ್ಮಿಕ ಮಕ್ಕಳಿಗೆ ಕಲಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮೆಲ್ಲಾ ಪಾಪಗಳು
ಕಳೆಯುತ್ತವೆ. ಹಠಯೋಗಿಗಳೆಂದೂ ಈ ರೀತಿ ಹೇಳಲು ಸಾಧ್ಯವಿಲ್ಲ. ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ.
ಇದು ಹೊಸ ಮಾತಾಗಿದೆ. ತಂದೆಯೇ ಈಗ ನಿಮ್ಮನ್ನು ದೇಹೀ-ಅಭಿಮಾನಿಗಳನ್ನಾಗಿ ಮಾಡುತ್ತಿದ್ದಾರೆ. ತಂದೆಗೆ
ದೇಹವಿಲ್ಲ, ಇವರ ತನುವಿನಲ್ಲಿ ಬರುತ್ತಾರೆ, ಬಂದು ಇವರ ಹೆಸರನ್ನು ಬದಲಾಯಿಸುತ್ತಾರೆ ಏಕೆಂದರೆ ಇವರು
(ಬ್ರಹ್ಮಾ) ಮರುಜೀವಿಯಾಗಿದ್ದಾರೆ. ಹೇಗೆ ಗೃಹಸ್ಥಿಗಳು ಸನ್ಯಾಸಿಯಾದಾಗ ಮರುಜೀವಿಯಾದರು.
ಗೃಹಸ್ಥಾಶ್ರಮವನ್ನು ಬಿಟ್ಟು ನಿವೃತ್ತಿ ಮಾರ್ಗವನ್ನು ತೆಗೆದುಕೊಂಡರು ಎಂದರ್ಥ. ನೀವೂ ಸಹ
ಮರುಜೀವಿಗಳಾಗುವುದರಿಂದ ಹೆಸರು ಬದಲಾಗುತ್ತದೆ. ಯಜ್ಞದ ಆದಿಯಲ್ಲಿ ಎಲ್ಲರಿಗೆ ಅಲೌಕಿಕ
ಹೆಸರುಗಳನ್ನಿಡಲಾಗಿತ್ತು ನಂತರ ಕೆಲವರು ಜ್ಞಾನವನ್ನು ಬಿಟ್ಟು ಹೋದರು ಆದ್ದರಿಂದ ಹೆಸರಿಡುವುದನ್ನು
ನಿಲ್ಲಿಸಲಾಯಿತು. ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾನು ಹೆಸರನ್ನಿಟ್ಟ ನಂತರ ಮತ್ತೆ ಓಡಿ
ಹೋದರೆ ಅದು ವ್ಯರ್ಥವಾಗಿ ಬಿಡುತ್ತದೆ. ಮೊದಲು ಬಂದವರಿಗೆ ಇಟ್ಟಿದ್ದ ಹೆಸರುಗಳು ಬಹಳ
ರಮಣೀಕವಾಗಿತ್ತು, ಈಗ ಯಾರಿಗೂ ಇಡುವುದಿಲ್ಲ. ಯಾರು ಸದಾ ನನ್ನ ಮಗುವಾಗಿರುವರೋ ಅವರಿಗೇ
ಹೆಸರನ್ನಿಡಲಾಗುವುದು. ಅನೇಕರಿಗೆ ಹೆಸರುಗಳನ್ನಿಟ್ಟೆವು ಆದರೆ ಮತ್ತೆ ತಂದೆಗೆ ವಿಚ್ಛೇದನ ನೀಡಿ
ಹೊರಟು ಹೋದರು. ಆದ್ದರಿಂದ ಈಗ ಹೆಸರುಗಳನ್ನು ಬದಲಾಯಿಸುವುದಿಲ್ಲ. ತಂದೆಯು ತಿಳಿಸುತ್ತಾರೆ - ಈ
ಜ್ಞಾನವು ಕ್ರಿಶ್ಚಿಯನ್ನರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದು. ಇಷ್ಟಾದರೂ ತಿಳಿದುಕೊಳ್ಳುತ್ತಾರೆ
- ಭಾರತದ ಯೋಗವನ್ನು ನಿರಾಕಾರ ತಂದೆಯೇ ಬಂದು ಕಲಿಸಿದ್ದರು, ತಂದೆಯನ್ನು ನೆನಪು ಮಾಡುವುದರಿಂದಲೇ
ಪಾಪಗಳು ಭಸ್ಮವಾಗುತ್ತವೆ ಮತ್ತು ನಾವು ನಮ್ಮ ಮನೆಗೆ ಹೊರಟು ಹೋಗುತ್ತೇವೆ. ಯಾರು ಈ ಧರ್ಮದವರು
ಅನ್ಯ ಧರ್ಮಗಳಲ್ಲಿ ಹೋಗಿ ಸೇರಿದ್ದಾರೆಯೋ ಅವರೇ ಮತ್ತೆ ಹಿಂತಿರುಗಿ ಬರುವರು. ನಿಮಗೆ ತಿಳಿದಿದೆ -
ಮನುಷ್ಯರು ಯಾರೂ ಮನುಷ್ಯರ ಸದ್ಗತಿ ಮಾಡಲು ಸಾಧ್ಯವಿಲ್ಲ. ಈ ದಾದಾರವರೂ ಸಹ ಮನುಷ್ಯನಾಗಿದ್ದಾರೆ,
ಇವರೂ ಸಹ ಹೇಳುತ್ತಾರೆ - ನಾನು ಯಾರದೇ ಸದ್ಗತಿ ಮಾಡಲು ಸಾಧ್ಯವಿಲ್ಲ. ಈ ತಂದೆಯು (ಶಿವ ತಂದೆ) ನಮಗೆ
ಕಲಿಸುತ್ತಾರೆ - ನಿನ್ನ ಸದ್ಗತಿಯೂ ಸಹ ನೆನಪಿನಿಂದಲೇ ಆಗುವುದು ಎಂದು. ತಂದೆಯು ತಿಳಿಸುತ್ತಾರೆ -
ಮಕ್ಕಳೇ, ಹೇ ಆತ್ಮಗಳೇ, ನನ್ನೊಂದಿಗೇ ಯೋಗವನ್ನಿಡಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ನೀವು
ಮೊದಲು ಸತೋಪ್ರಧಾನ ಪವಿತ್ರರಾಗಿದ್ದಿರಿ ನಂತರ ತುಕ್ಕು ಸೇರ್ಪಡೆಯಾಗಿದೆ. ನೀವು ಮೊದಲು
ದೇವಿ-ದೇವತೆಗಳು ಅಂದರೆ 24 ಕ್ಯಾರೇಟ್ ಚಿನ್ನವಾಗಿದ್ದಿರಿ, ಈಗ ಸಂಪೂರ್ಣ ಕಬ್ಬಿಣದಂತೆ ಆಗಿ
ಬಿಟ್ಟಿದ್ದೀರಿ. ಈ ಯೋಗವನ್ನು ಕಲ್ಪ-ಕಲ್ಪವೂ ನೀವು ಕಲಿಯಬೇಕಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ,
ನಿಮ್ಮಲ್ಲಿಯೂ ಕೆಲವರು ಪೂರ್ಣ ತಿಳಿದುಕೊಂಡಿಲ್ಲ. ಕೆಲವರು ಅಲ್ಪಸ್ವಲ್ಪ ತಿಳಿದುಕೊಂಡಿದ್ದಾರೆ.
ಇನ್ನು ಕೆಲವರಂತೂ ಕೇವಲ ಇಲ್ಲಿ ಏನು ಕಲಿಸುತ್ತಾರೆಂದು ನೋಡಲು ಬರುತ್ತಾರೆ.
ಬ್ರಹ್ಮಾಕುಮಾರ-ಕುಮಾರಿಯರಂತೂ ಅನೇಕರಿದ್ದಾರೆ ಅಂದಮೇಲೆ ಅವಶ್ಯವಾಗಿ ಪ್ರಜಾಪಿತ ಬ್ರಹ್ಮನೂ
ಇರಬೇಕಲ್ಲವೆ. ಅವರಿಗೆ ಇಷ್ಟೊಂದು ಮಂದಿ ಬಂದು ಮಕ್ಕಳಾಗಿದ್ದೀರಿ ಅಂದಮೇಲೆ ಅವಶ್ಯವಾಗಿ ಏನೋ ಇರಬೇಕು
ಎಂದು ಹೋಗಿ ಅಲ್ಲಿ ಕೇಳಬೇಕು. ನಿಮಗೆ ಪ್ರಜಾಪಿತ ಬ್ರಹ್ಮನಿಂದ ಏನು ಸಿಗುತ್ತದೆ ಎಂದು ಕೇಳಬೇಕಲ್ಲವೆ
ಆದರೆ ಮನುಷ್ಯರಿಗೆ ಇಷ್ಟಾದರೂ ಬುದ್ಧಿಯಿಲ್ಲ. ವಿಶೇಷವಾಗಿ ಭಾರತಕ್ಕಾಗಿಯೇ ಹೇಳುತ್ತಾರೆ. ಕಲ್ಲು
ಬುದ್ಧಿಯವರಿಂದ ಪಾರಸ ಬುದ್ಧಿಯವರು, ಪಾರಸ ಬುದ್ಧಿಯವರಿಂದ ಕಲ್ಲು ಬುದ್ಧಿಯವರೆಂದು ಗಾಯನವಿದೆ.
ಸತ್ಯ-ತ್ರೇತಾಯುಗದಲ್ಲಿ ಪಾರಸ ಬುದ್ಧಿಯವರಾಗಿದ್ದಿರಿ ನಂತರ ಬೆಳ್ಳಿಯ ಸಮಾನರಾದಿರಿ ಆಗ ಎರಡು ಕಲೆಯು
ಕಡಿಮೆಯಾಯಿತು ಆದ್ದರಿಂದ ಚಂದ್ರವಂಶಿಯರೆಂದು ಹೆಸರು ಬಂದಿತು ಏಕೆಂದರೆ ಅನುತ್ತೀರ್ಣರಾದರು. ಇದೂ
ಸಹ ಪಾಠಶಾಲೆಯಾಗಿದೆ, 33 ಅಂಕಗಳಿಗಿಂತ ಯಾರು ಕೆಳಗಿರುವರೋ ಅವರು ಅನುತ್ತೀರ್ಣರಾಗುತ್ತಾರೆ.
ರಾಮ-ಸೀತೆ ಮತ್ತು ಅವರ ರಾಜ್ಯದಲ್ಲಿರುವವರು ಸಂಪೂರ್ಣರಲ್ಲ, ಆದ್ದರಿಂದ ಸೂರ್ಯವಂಶಿಯರಾಗಲು
ಸಾಧ್ಯವಿಲ್ಲ. ಇಷ್ಟು ದೊಡ್ಡ ಪರೀಕ್ಷೆಯಿದೆ ಅಂದಮೇಲೆ ಯಾರಾದರೂ ಅನುತ್ತೀರ್ಣರಾಗಿಯೇ
ಆಗುತ್ತಾರಲ್ಲವೇ. ಮೊದಲು ಐ.ಸಿ.ಎಸ್.,ನ ಪರೀಕ್ಷೆಯು ಬಹಳ ಕಷ್ಟವಾಗಿರುತ್ತಿತ್ತು, ಎಲ್ಲರೂ ಓದಲು
ಸಾಧ್ಯವಾಗುತ್ತಿರಲಿಲ್ಲ, ಕೆಲವರೇ ತೇರ್ಗಡೆಯಾಗುತ್ತಿದ್ದರು. ನಾವು ಸೂರ್ಯವಂಶಿ
ಮಹಾರಾಜ-ಮಹಾರಾಣಿಯಾಗಬೇಕೆಂದು ಯಾರಾದರೂ ಬಯಸುವುದಾದರೆ ಅದರಲ್ಲಿಯೂ ಬಹಳ ಪರಿಶ್ರಮಬೇಕು.
ಮಮ್ಮಾ-ಬಾಬಾರವರೂ ಸಹ ಶ್ರೀಮತದಂತೆ ಓದುತ್ತಿದ್ದಾರೆ. ಅವರು ಮೊದಲ ನಂಬರಿನಲ್ಲಿ ಓದುತ್ತಾರೆ ಮತ್ತೆ
ಯಾರು ಆ ಮಾತಾ ಪಿತರನ್ನು ಫಾಲೋ ಮಾಡುವರೋ ಅವರೇ ಮಾತಾಪಿತರ ಸಿಂಹಾಸನದಲ್ಲಿ ಕುಳಿತುಕೊಳ್ಳುತ್ತಾರೆ.
ಸೂರ್ಯವಂಶಿಯರದು 8 ಪೀಳಿಗೆಗಳು ನಡೆಯುತ್ತವೆ. ಹೇಗೆ ಎಡ್ವರ್ಡ್ ದಿ ಫಸ್ಟ್, ಸೆಕೆಂಡ್, ರಾಜಧಾನಿಯು
ನಡೆಯುತ್ತದೆಯಲ್ಲವೆ. ಈ ಕ್ರಿಶ್ಚಿಯನ್ನರೊಂದಿಗೆ ನಿಮ್ಮದು ಹೆಚ್ಚು ಸಂಬಂಧವಿದೆ. ಕ್ರಿಶ್ಚಿಯನ್
ಮನೆತನದವರೇ ಭಾರತದ ರಾಜ್ಯವನ್ನು ಕಸಿದುಕೊಂಡರು. ಭಾರತದ ಅಪಾರ ಧನವನ್ನು ತೆಗೆದುಕೊಂಡು ಹೋದರು
ಅಂದಮೇಲೆ ವಿಚಾರ ಮಾಡಿ - ಸತ್ಯಯುಗದಲ್ಲಿ ಇನ್ನೆಷ್ಟು ಹಣವಿರಬಹುದು, ಅದರ ಹೋಲಿಕೆಯಲ್ಲಿ ಇಲ್ಲಿ ಏನೂ
ಇಲ್ಲ. ಸತ್ಯಯುಗದಲ್ಲಿ ಎಲ್ಲಾ ಗಣಿಗಳು ಸಂಪನ್ನವಾಗಿ ಬಿಡುತ್ತವೆ. ಈಗಂತೂ ಪ್ರತಿಯೊಂದು ವಸ್ತುವಿನ
ಗಣಿಗಳು ಖಾಲಿಯಾಗ ತೊಡಗುತ್ತಿವೆ ಮತ್ತೆ ಚಕ್ರವು ಪುನರಾವರ್ತನೆಯಾದಾಗ ಎಲ್ಲಾ ಗಣಿಗಳು ಸಂಪನ್ನವಾಗಿ
ಬಿಡುತ್ತವೆ.
ಮಧುರಾತಿ ಮಧುರ ಮಕ್ಕಳೇ,
ನೀವೀಗ ರಾವಣನ ಮೇಲೆ ಜಯ ಗಳಿಸಿ ರಾಜ್ಯವನ್ನು ಪಡೆಯುತ್ತಿದ್ದೀರಿ, ಮತ್ತೆ ಅರ್ಧಕಲ್ಪದ ನಂತರ ಈ
ರಾವಣನು ಬರುವನು ಹಾಗೂ ಪುನಃ ನೀವು ರಾಜ್ಯವನ್ನು ಕಳೆದುಕೊಂಡು ಕುಳಿತುಕೊಳ್ಳುತ್ತೀರಿ. ಈಗ ನೀವು
ಭಾರತವಾಸಿಗಳು ಕವಡೆಯಂತೆ ಆಗಿ ಬಿಟ್ಟಿದ್ದೀರಿ, ನಾನು ನಿಮ್ಮನ್ನು ವಜ್ರ ಸಮಾನರನ್ನಾಗಿ ಮಾಡಿದೆನು,
ಮತ್ತೆ ರಾವಣನು ಕವಡೆಯಂತೆ ಮಾಡಿ ಬಿಟ್ಟಿದ್ದಾನೆ. ಈ ರಾವಣನು ಯಾವಾಗ ಬಂದನು, ನಾವೇಕೆ ಅವನನ್ನು
ಸುಡುತ್ತೇವೆ? ಎಂಬುದನ್ನು ತಿಳಿದುಕೊಂಡಿಲ್ಲ. ಈ ರಾವಣನು ಪರಂಪರೆಯಿಂದಲೂ ಇದ್ದಾನೆಂದು ಹೇಳುತ್ತಾರೆ.
ತಂದೆಯು ತಿಳಿಸುತ್ತಾರೆ – ಅರ್ಧ ಕಲ್ಪದ ನಂತರ ಈ ರಾವಣ ರಾಜ್ಯವು ಆರಂಭವಾಗುತ್ತದೆ, ವಿಕಾರಿಗಳಾಗುವ
ಕಾರಣ ತಮ್ಮನ್ನು ದೇವಿ-ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ವಾಸ್ತವದಲ್ಲಿ ನೀವು
ದೇವಿ-ದೇವತಾ ಧರ್ಮದವರಾಗಿದ್ದಿರಿ, ನೀವು ನೋಡುವಷ್ಟು ಸುಖವನ್ನು ಮತ್ತ್ಯಾರೂ ನೋಡಲು ಸಾಧ್ಯವಿಲ್ಲ.
ಎಲ್ಲರಿಗಿಂತ ತೀರಾ ಬಡವರೂ ಸಹ ನೀವೇ ಆಗಿದ್ದೀರಿ. ಅನ್ಯ ಧರ್ಮದವರು ನಂತರದಲ್ಲಿ ವೃದ್ಧಿ
ಹೊಂದುತ್ತಾರೆ. ಕ್ರೈಸ್ಟ್ ಬಂದಾಗ ಮೊದಲು ಬಹಳ ಕಡಿಮೆ ಸಂಖ್ಯೆಯಲ್ಲಿದ್ದರು, ಯಾವಾಗ ಅನೇಕರಾಗಿ
ಬಿಡುವರೋ ಆಗ ರಾಜ್ಯಭಾರ ಮಾಡುವರು. ನಿಮಗಂತೂ ಮೊಟ್ಟ ಮೊದಲು ರಾಜ್ಯವು ಸಿಗುತ್ತದೆ, ಇವೆಲ್ಲವೂ
ಜ್ಞಾನದ ಮಾತುಗಳಾಗಿವೆ. ತಂದೆಯು ತಿಳಿಸುತ್ತಾರೆ - ಹೇ ಆತ್ಮಗಳೇ, ತಂದೆಯಾದ ನನ್ನನ್ನು ನೆನಪು ಮಾಡಿ,
ಅರ್ಧಕಲ್ಪ ನೀವು ದೇಹಾಭಿಮಾನಿಯಾಗಿದ್ದೀರಿ, ಈಗ ದೇಹಿ-ಅಭಿಮಾನಿಯಾಗಿ. ಪದೇ-ಪದೇ ಇದನ್ನು ಮರೆತು
ಬಿಡುತ್ತೀರಿ ಏಕೆಂದರೆ ಅರ್ಧ ಕಲ್ಪದಿಂದ ಆತ್ಮದಲ್ಲಿ ತುಕ್ಕು ಏರಿದೆ. ಈ ಸಮಯದಲ್ಲಿ ನೀವು
ಬ್ರಾಹ್ಮಣರು ಶಿಖೆಯಾಗಿದ್ದೀರಿ, ನೀವು ಎಲ್ಲರಿಗಿಂತ ಉತ್ತಮರಾಗಿದ್ದೀರಿ. ಸನ್ಯಾಸಿಗಳು ಬ್ರಹ್ಮ
ತತ್ವದೊಂದಿಗೆ ಯೋಗವನ್ನಿಡುತ್ತಾರೆ. ಅದರಿಂದ ವಿಕರ್ಮಗಳು ವಿನಾಶವಾಗುವುದಿಲ್ಲ. ಪ್ರತಿಯೊಬ್ಬರೂ ಸತೋ,
ರಜೋ, ತಮೋದಲ್ಲಿ ಖಂಡಿತ ಬರಬೇಕಾಗಿದೆ. ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಯಾವಾಗ ಎಲ್ಲರೂ
ತಮೋಪ್ರಧಾನರಾಗಿ ಬಿಡುವರೋ ಆಗ ತಂದೆಯು ಬಂದು ಎಲ್ಲರನ್ನೂ ಸತೋಪ್ರಧಾನರನ್ನಾಗಿ ಮಾಡುತ್ತಾರೆ
ಅರ್ಥಾತ್ ಎಲ್ಲರ ಜ್ಯೋತಿಯು ಜಾಗೃತವಾಗುತ್ತದೆ. ಪ್ರತಿಯೊಂದು ಆತ್ಮನಿಗೆ ತನ್ನ ತನ್ನದೇ ಆದ ಪಾತ್ರವು
ಸಿಕ್ಕಿದೆ. ನೀವು ಹೀರೋ ಪಾತ್ರಧಾರಿಗಳಾಗಿದ್ದೀರಿ. ನೀವು ಭಾರತವಾಸಿಗಳು ಎಲ್ಲರಿಗಿಂತ
ಶ್ರೇಷ್ಠರಾಗಿದ್ದೀರಿ, ನೀವೇ ರಾಜ್ಯವನ್ನು ಪಡೆಯುತ್ತೀರಿ ಮತ್ತು ಕಳೆದುಕೊಳ್ಳುತ್ತೀರಿ, ಮತ್ತ್ಯಾರೂ
ರಾಜ್ಯವನ್ನು ಪಡೆಯುವುದಿಲ್ಲ. ಅವರಂತೂ ಬಾಹುಬಲದಿಂದ ರಾಜ್ಯ ತೆಗೆದುಕೊಳ್ಳುತ್ತಾರೆ. ತಂದೆಯು
ತಿಳಿಸುತ್ತಾರೆ - ಯಾರು ವಿಶ್ವದ ಮಾಲೀಕರಾಗಿದ್ದರೋ ಅವರೇ ಆಗುವರು ಆದ್ದರಿಂದ ಸತ್ಯವಾದ
ರಾಜಯೋಗವನ್ನು ತಂದೆಯ ವಿನಃ ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ. ಏನೆಲ್ಲವನ್ನು ಕಲಿಸುತ್ತಾರೆಯೋ
ಅವೆಲ್ಲವೂ ಆಯಥಾರ್ಥ ಯೋಗಗಳಾಗಿವೆ, ಅದರಿಂದ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಈಗ
ಅಂತ್ಯವಾಗಿದೆ, ಎಲ್ಲರೂ ದುಃಖದಿಂದ ಮುಕ್ತರಾಗುತ್ತಾರೆ. ಮತ್ತೆ ನಂಬರ್ವಾರ್ ಬರಬೇಕಾಗಿದೆ. ಮೊದಲು
ಸುಖವನ್ನು ನೋಡುವರು ನಂತರ ದುಃಖವನ್ನು ನೋಡುವರು. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಕೈ
ಕೆಲಸ ಮಾಡುತ್ತಿರಲಿ, ಬುದ್ದಿಯು ನೆನಪು ಮಾಡುತ್ತಿರಲಿ ಎಂದು ಹೇಳಲಾಗುತ್ತದೆ. ಕೈಗಳಿಂದ ಕೆಲಸ
ಕಾರ್ಯಗಳನ್ನು ಮಾಡುತ್ತಾ ಇರಿ ಆದರೆ ಬುದ್ಧಿಯು ಮಾತ್ರ ತಂದೆಯೊಂದಿಗಿರಲಿ.
ನೀವಾತ್ಮರು ಒಬ್ಬ
ಪ್ರಿಯತಮನ ಪ್ರಿಯತಮೆಯರಾಗಿದ್ದೀರಿ, ಆ ಪ್ರಿಯತಮನು ಈಗ ಬಂದಿದ್ದಾರೆ. ಎಲ್ಲಾ ಪ್ರಿಯತಮೆಯರನ್ನು ಹೂ
(ಪವಿತ್ರ) ಗಳನ್ನಾಗಿ ಮಾಡಿ ಕರೆದುಕೊಂಡು ಹೋಗುತ್ತಾರೆ. ಬೇಹದ್ದಿನ ಪ್ರಿಯತಮನಿಗೆ ಎಲ್ಲರೂ
ಬೇಹದ್ದಿನ ಪ್ರಿಯತಮೆಯರಾಗಿದ್ದೀರಿ. ನಾನು ಎಲ್ಲರನ್ನೂ ಕರೆದುಕೊಂಡು ಹೋಗುತ್ತೇನೆ ಎಂದು ತಂದೆಯು
ತಿಳಿಸುತ್ತಾರೆ ನಂತರ ನಂಬರ್ ವಾರ್ ಪುರುಷಾರ್ಥದನುಸಾರ ಹೋಗಿ ಪದವಿಯನ್ನು ಪಡೆಯುತ್ತೀರಿ. ಭಲೆ
ಗೃಹಸ್ಥ ವ್ಯವಹಾರದಲ್ಲಿರಿ, ಮಕ್ಕಳನ್ನೂ ಸಂಭಾಲನೆ ಮಾಡಿ, ಹೇ ಆತ್ಮ ನಿನ್ನ ಮನಸ್ಸು ತಂದೆಯ
ಕಡೆಯಿರಲಿ. ಇದೇ ನೆನಪಿನ ಅಭ್ಯಾಸ ಮಾಡುತ್ತಾ ಇರಿ. ಮಕ್ಕಳಿಗೆ ತಿಳಿದಿದೆ - ನಾವೀಗ ತಂದೆಯನ್ನು
ನೆನಪು ಮಾಡುವುದರಿಂದ ಸ್ವರ್ಗವಾಸಿಗಳಾಗುತ್ತೇವೆ. ವಿದ್ಯಾರ್ಥಿಗಳಂತೂ ಬಹಳ ಖುಷಿಯಲ್ಲಿರಬೇಕು. ಇದು
ಬಹಳ ಸಹಜವಾಗಿದೆ. ಡ್ರಾಮಾನುಸಾರ ಎಲ್ಲರಿಗೆ ಮಾರ್ಗವನ್ನು ತಿಳಿಸಬೇಕಾಗಿದೆ. ಯಾರೊಂದಿಗೂ
ವಾದ-ವಿವಾದ ಮಾಡುವ ಅವಶ್ಯಕತೆಯಿಲ್ಲ. ಬುದ್ಧಿಯಲ್ಲಿ ಈ ಸಂಪೂರ್ಣ ಜ್ಞಾನ ಬಂದು ಬಿಟ್ಟಿದೆ.
ಮನುಷ್ಯರು ಖಾಯಿಲೆಯಿಂದ ಮುಕ್ತರಾದಾಗ ಅಭಿನಂದನೆಗಳನ್ನು ತಿಳಿಸುತ್ತಾರೆ. ಇಲ್ಲಂತೂ ಇಡೀ ಪ್ರಪಂಚವೇ
ರೋಗಿಯಾಗಿದೆ. ಸ್ವಲ್ಪ ಸಮಯದಲ್ಲಿಯೇ ಎಲ್ಲರೂ ರೋಗಗಳಿಂದ ಮುಕ್ತರಾಗಿ ಬಿಡುತ್ತೀರಿ, ಆಗ ಜಯ-ಜಯಕಾರ
ಆಗಿ ಬಿಡುವುದು, ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಸತ್ಯ-ಸತ್ಯವಾದ ಪ್ರಿಯತಮೆಯರಾಗಿ ಕೈಗಳಿಂದ ಕೆಲಸ ಮಾಡುತ್ತಾ ಬುದ್ಧಿಯಿಂದ ಪ್ರಿಯತಮನನ್ನು ನೆನಪು
ಮಾಡುವ ಅಭ್ಯಾಸ ಮಾಡಬೇಕಾಗಿದೆ. ತಂದೆಯ ನೆನಪಿನಿಂದ ನಾವು ಸ್ವರ್ಗವಾಸಿಗಳಾಗುತ್ತಿದ್ದೇವೆ ಎಂಬ
ಖುಷಿಯಲ್ಲಿರಬೇಕಾಗಿದೆ.
2. ಸೂರ್ಯವಂಶಿ
ರಾಜಧಾನಿಯಲ್ಲಿ ಸಿಂಹಾಸನಾಧಿಕಾರಿಗಳಾಗಲು ಮಾತಾಪಿತರನ್ನು ಸಂಪೂರ್ಣ ಫಾಲೋ ಮಾಡಬೇಕಾಗಿದೆ. ತಂದೆಯ
ಸಮಾನ ಜ್ಞಾನಪೂರ್ಣರಾಗಿ ಎಲ್ಲರಿಗೆ ಮಾರ್ಗವನ್ನು ತಿಳಿಸಬೇಕಾಗಿದೆ.
ವರದಾನ:
ಕಿರೀಟ ಹಾಗೂ
ತಿಲಕವನ್ನು ಧಾರಣೆ ಮಾಡಿಕೊಂಡು ಬಾಪ್ದಾದಾರವರ ಸಹಯೋಗಿಯಾಗುವ ಹೃದಯ ಸಿಂಹಾಸನಾಧಾರಿ ಭವ.
ಯಾವಾಗ ಯಾರೇ ಸಿಂಹಾಸನದ
ಮೇಲೆ ಕುಳಿತುಕೊಳ್ಳುತ್ತಾರೆಂದರೆ, ಅವರ ಚಿಹ್ನೆಯಾಗಿ ತಿಲಕ ಹಾಗೂ ಕಿರೀಟವಿರುತ್ತದೆ. ಹಾಗೆಯೇ ಯಾರು
ಹೃದಯ ಸಿಂಹಾಸನಾಧಿಕಾರಿ ಆಗಿದ್ದಾರೆಯೋ ಅವರ ಮಸ್ತಕದಲ್ಲಿ ಸದಾ ಅವಿನಾಶಿ ಆತ್ಮನ ಸ್ಥಿತಿಯ ತಿಲಕವು
ದೂರದಿಂದಲೇ ಹೊಳೆಯುತ್ತಿರುವಂತೆ ಕಂಡು ಬರುತ್ತದೆ. ಸರ್ವ ಆತ್ಮರ ಕಲ್ಯಾಣದ ಶುಭ ಭಾವನೆಯು, ಅವರ
ಕಣ್ಣುಗಳಿಂದ ಅಥವಾ ಮುಖದಿಂದ ಕಾಣಿಸುತ್ತದೆ. ಅವರ ಪ್ರತೀ ಸಂಕಲ್ಪ, ವಚನ ಹಾಗೂ ಕರ್ಮವು ತಂದೆಯ
ಸಮಾನವಾಗಿ ಇರುತ್ತದೆ.
ಸ್ಲೋಗನ್:
ಸರಳ ನೆನಪಿಗಾಗಿ
ಸರಳತೆಯ ಗುಣವನ್ನು ಧಾರಣೆ ಮಾಡಿಕೊಳ್ಳಿರಿ, ಸಂಸ್ಕಾರಗಳನ್ನು ಸರಳ ಮಾಡಿಕೊಳ್ಳಿರಿ.
ಅವ್ಯಕ್ತ ಸೂಚನೆ:-
“ನಿಶ್ಚಯದ ಫೌಂಡೇಷನ್ (ತಳಪಾಯವನ್ನು) ಬಲಗೊಳಿಸಿ ಸದಾ ನಿರ್ಭಯ ಮತ್ತು ನಿಶ್ಚಿಂತರಾಗಿರಿ”.
ವಿಜಯಿಯಾಗುವುದಕ್ಕೆ
ಫೌಂಡೇಷನ್ ಆಗಿದೆ “ನಿಶ್ಚಯ”, ಫೌಂಡೇಷನ್ ಒಂದುವೇಳೆ ಪಕ್ಕಾ ಇದ್ದರೆ ಕಟ್ಟಡವು ಅಲುಗಾಡುವುದಿಲ್ಲ,
ನಿಶ್ಚಿಂತರಾಗಿರುವಿರಿ. ಆದರೆ ಕೇವಲ ತಂದೆಯಲ್ಲಿ ನಿಶ್ಚಯವಿಲ್ಲ, ತಮ್ಮಲ್ಲಿ ತಮಗೆ ನಿಶ್ಚಯ ಮತ್ತು
ಡ್ರಾಮಾದಲ್ಲಿಯೂ ನಿಶ್ಚಯ. ವಾಹ್ ಡ್ರಾಮಾ ವಾಹ್! ಒಂದುವೇಳೆ ಡ್ರಾಮಾದಲ್ಲಿ ನಿಶ್ಚಯವಿದ್ದರೆ
ಅಕಲ್ಯಾಣದ ಮಾತು ಸಹ ಕಲ್ಯಾಣದಲ್ಲಿ ಬದಲಾಗಿ ಬಿಡುತ್ತದೆ.