27.12.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ನಿಮ್ಮ
ದುಃಖದ ದಿನಗಳು ಈಗ ಪೂರ್ಣವಾಗುತ್ತಿದೆ, ನೀವೀಗ ಇಂತಹ ಪ್ರಪಂಚದಲ್ಲಿ ಹೋಗುತ್ತೀರಿ ಎಲ್ಲಿ ಯಾವುದೇ
ಅಪ್ರಾಪ್ತ ವಸ್ತು ಇರುವುದಿಲ್ಲ"
ಪ್ರಶ್ನೆ:
ಯಾವ ಎರಡು
ಶಬ್ಧಗಳು ರಹಸ್ಯವು ನಿಮ್ಮ ಬುದ್ಧಿಯಲ್ಲಿರುವ ಕಾರಣ ಹಳೆಯ ಪ್ರಪಂಚದೊಂದಿಗೆ ಬೇಹದ್ದಿನ
ವೈರಾಗ್ಯವಿರುತ್ತದೆ?
ಉತ್ತರ:
ಇಳಿಯುವ ಕಲೆ
ಮತ್ತು ಏರುವ ಕಲೆಯ ರಹಸ್ಯವು ನಿಮ್ಮ ಬುದ್ಧಿಯಲ್ಲಿದೆ. ನೀವು ತಿಳಿದುಕೊಂಡಿದ್ದೀರಿ – ಅರ್ಧ ಕಲ್ಪ
ನಾವು ಇಳಿಯುತ್ತಾ ಬಂದೆವು, ಈಗ ಏರುವ ಸಮಯವಾಗಿದೆ. ತಂದೆಯು ನರನಿಂದ ನಾರಾಯಣನನ್ನಾಗಿ ಮಾಡುವ ಸತ್ಯ
ಜ್ಞಾನವನ್ನು ಕೊಡಲು ಬಂದಿದ್ದಾರೆ. ನಮಗಾಗಿ ಈಗ ಕಲಿಯುಗವು ಮುಕ್ತಾಯವಾಯಿತು. ಹೊಸ ಪ್ರಪಂಚದಲ್ಲಿ
ಹೋಗಬೇಕಾಗಿದೆ ಆದ್ದರಿಂದ ಈ ಹಳೆಯ ಪ್ರಪಂಚದೊಂದಿಗೆ ವೈರಾಗ್ಯವಿದೆ.
ಗೀತೆ:
ಧೈರ್ಯ ತಾಳು
ಮಾನವನೆ...........
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ, ಆತ್ಮಿಕ ತಂದೆಯು ತಿಳಿಸುತ್ತಾರೆ -
ಇದೊಂದೇ ಪುರುಷೋತ್ತಮ ಸಂಗಮಯುಗವಾಗಿದೆ, ಕಲ್ಪ-ಕಲ್ಪದಲ್ಲಿಯೂ ಇದೇ ಸಮಯದಲ್ಲಿ ತಂದೆಯು ಬಂದು
ಆತ್ಮಿಕ ಮಕ್ಕಳಿಗೆ ಓದಿಸುತ್ತೇನೆ, ರಾಜಯೋಗವನ್ನು ಕಲಿಸುತ್ತೇನೆ. ತಂದೆಯು ಆತ್ಮಿಕ ಮಕ್ಕಳಿಗೆ
ತಿಳಿಸುತ್ತಾರೆ - ಮಾನವ ಅರ್ಥಾತ್ ಹೇ ಆತ್ಮವೇ, ಧೈರ್ಯ ತಾಳು ಎಂದು ತಂದೆಯು ಆತ್ಮಗಳೊಂದಿಗೆ
ಮಾತನಾಡುತ್ತಾರೆ. ಈ ಶರೀರದ ಮಾಲೀಕನು ಆತ್ಮನಾಗಿದೆ, ಆತ್ಮವೇ ಹೇಳುತ್ತದೆ - ನಾನು ಅವಿನಾಶಿ
ಆತ್ಮನಾಗಿದ್ದೇನೆ, ಈ ನನ್ನ ಶರೀರವು ವಿನಾಶಿಯಾಗಿದೆ. ಆತ್ಮಿಕ ತಂದೆಯು ತಿಳಿಸುತ್ತಾರೆ - ನಾನು
ಒಂದೇ ಬಾರಿ ಕಲ್ಪದ ಸಂಗಮಯುಗದಲ್ಲಿ ಬಂದು ನೀವು ಮಕ್ಕಳಿಗೆ ಧೈರ್ಯ ಕೊಡುತ್ತೇನೆ - ಈಗ ಸುಖದ ದಿನಗಳು
ಬರುತ್ತಿವೆ, ಈಗ ನೀವು ದುಃಖಧಾಮ, ರೌರವ ನರಕದಲ್ಲಿದ್ದೀರಿ. ಕೇವಲ ನೀವಷ್ಟೇ ಅಲ್ಲ, ಇಡೀ ಪ್ರಪಂಚವು
ರೌರವ ನರಕದಲ್ಲಿದೆ. ನೀವು ಮಕ್ಕಳು ಯಾರು ನನ್ನವರಾಗಿದ್ದೀರೋ ಅವರೆಲ್ಲರೂ ರೌರವ ನರಕದಿಂದ ಹೊರ ಬಂದು
ಸ್ವರ್ಗದಲ್ಲಿ ಹೋಗುತ್ತಿದ್ದೀರಿ. ಸತ್ಯ, ತ್ರೇತಾ, ದ್ವಾಪರ ಯುಗವು ಕಳೆಯಿತು, ಕಲಿಯುಗವೂ ನಿಮಗಾಗಿ
ಕಳೆದು ಹೋಯಿತು. ನಿಮಗೆ ಇದು ಪುರುಷೋತ್ತಮ ಸಂಗಮಯುಗವಾಗಿದೆ. ನೀವೀಗ ತಮೋಪ್ರಧಾನರಿಂದ
ಸತೋಪ್ರಧಾನರಾಗುತ್ತಿದ್ದೀರಿ, ಆತ್ಮವು ಯಾವಾಗ ಸತೋಪ್ರಧಾನವಾಗಿ ಬಿಡುವುದೋ ಆಗ ಈ ಶರೀರವನ್ನು
ಬಿಟ್ಟು ಬಿಡುವುದು. ಸತೋಪ್ರಧಾನ ಆತ್ಮಕ್ಕೆ ಸತ್ಯಯುಗದಲ್ಲಿ ಹೊಸ ಶರೀರ ಬೇಕು. ಅಲ್ಲಿ ಎಲ್ಲವೂ
ಹೊಸದಾಗಿರುತ್ತದೆ, ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ದುಃಖಧಾಮದಿಂದ ಸುಖಧಾಮದಲ್ಲಿ
ಹೋಗಬೇಕಾಗಿದೆ ಅದಕ್ಕಾಗಿ ಪುರುಷಾರ್ಥ ಮಾಡಬೇಕಾಗಿದೆ. ಸುಖಧಾಮದಲ್ಲಿ ಈ ಲಕ್ಷ್ಮೀ-ನಾರಾಯಣರ
ರಾಜ್ಯವಿತ್ತು, ನೀವು ನರನಿಂದ ನಾರಾಯಣನಾಗುವ ಪುರುಷಾರ್ಥ ಮಾಡುತ್ತೀರಿ. ಇದು ನರನಿಂದ
ನಾರಾಯಣನಾಗುವ ಸತ್ಯ ಜ್ಞಾನವಾಗಿದೆ. ಭಕ್ತಿಮಾರ್ಗದಲ್ಲಿ ಪ್ರತೀ ಹುಣ್ಣಿಮೆಯ ದಿನದಂದು ಕಥೆಯನ್ನು
ಕೇಳುತ್ತಾ ಬಂದಿದ್ದೀರಿ ಆದರೆ ಅದು ಭಕ್ತಿಮಾರ್ಗವಾಗಿದೆ, ಅದಕ್ಕೆ ಸತ್ಯ ಮಾರ್ಗವೆಂದು
ಹೇಳುವುದಿಲ್ಲ. ಜ್ಞಾನ ಮಾರ್ಗವು ಸತ್ಯವಾದ ಮಾರ್ಗವಾಗಿದೆ, ನೀವು ಏಣಿಯನ್ನು ಇಳಿಯುತ್ತಾ-ಇಳಿಯುತ್ತಾ
ಅಸತ್ಯ ಖಂಡದಲ್ಲಿ ಬರುತ್ತೀರಿ. ಈಗ ನಿಮಗೆ ತಿಳಿದಿದೆ, ಸತ್ಯ ತಂದೆಯಿಂದ ನಾವು ಈ ಜ್ಞಾನವನ್ನು
ಪಡೆದು 21 ಜನ್ಮಗಳು ದೇವಿ-ದೇವತೆಗಳಾಗುತ್ತೇವೆ. ನಾವೇ ಆಗಿದ್ದೆವು ನಂತರ ಏಣಿಯನ್ನು ಇಳಿಯುತ್ತಾ
ಬಂದೆವು, ಇಳಿಯುವ ಕಲೆ ಮತ್ತು ಏರುವ ಕಲೆಯ ರಹಸ್ಯವು ನಿಮ್ಮ ಬುದ್ಧಿಯಲ್ಲಿದೆ. ಹೇ ತಂದೆಯೇ ಬಂದು
ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ. ತಂದೆಯೊಬ್ಬರೇ ಪಾವನ ಮಾಡುವವರಾಗಿದ್ದಾರೆ. ತಂದೆಯು
ತಿಳಿಸುತ್ತಾರೆ - ಮಕ್ಕಳೇ, ನೀವು ಸತ್ಯಯುಗದಲ್ಲಿ ವಿಶ್ವದ ಮಾಲೀಕರಾಗಿದ್ದಿರಿ, ಬಹಳ ಧನವಂತ, ಬಹಳ
ಸುಖಿಯಾಗಿದ್ದಿರಿ. ಇನ್ನು ಸ್ವಲ್ಪವೇ ಸಮಯವಿದೆ, ಹಳೆಯ ಪ್ರಪಂಚದ ವಿನಾಶವು ಸನ್ಮುಖದಲ್ಲಿ ನಿಂತಿದೆ,
ಹೊಸ ಪ್ರಪಂಚದಲ್ಲಿ ಒಂದು ರಾಜ್ಯ, ಒಂದು ಭಾಷೆಯಿತ್ತು. ಅದಕ್ಕೆ ಅದ್ವೈತ ರಾಜ್ಯವೆಂದು
ಹೇಳಲಾಗುತ್ತದೆ. ಈಗ ಎಷ್ಟೊಂದು ದ್ವೈತವಿದೆ, ಅನೇಕ ಭಾಷೆಗಳಿವೆ. ಹೇಗೆ ಮಾನವ ವಂಶ ವೃಕ್ಷವು
ವೃದ್ಧಿಯಾಗುತ್ತಾ ಹೋಗುತ್ತದೆ ಹಾಗೆಯೇ ಭಾಷೆಗಳ ವೃಕ್ಷವೂ ಸಹ ವೃದ್ಧಿಯಾಗುತ್ತಾ ಹೋಗುತ್ತದೆ ನಂತರ
ಸತ್ಯಯುಗದಲ್ಲಿ ಒಂದೇ ಭಾಷೆಯಿರುತ್ತದೆ. ವಿಶ್ವದ ಇತಿಹಾಸ-ಭೂಗೋಳವೇ ಪುನರಾವರ್ತನೆಯಾಗುತ್ತದೆಯೆಂದು
ಗಾಯನವಿದೆಯಲ್ಲವೆ. ಇದು ಮನುಷ್ಯರ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ತಂದೆಯೇ ದುಃಖದ ಹಳೆಯ
ಪ್ರಪಂಚವನ್ನು ಪರಿವರ್ತನೆ ಮಾಡಿ ಸುಖದ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ. ಪ್ರಜಾಪಿತ
ಬಹ್ಮಾನ ಮೂಲಕ ದೈವೀ ಸಾಮ್ರಾಜ್ಯದ ಸ್ಥಾಪನೆಯೆಂದು ಬರೆಯಲ್ಪಟ್ಟಿದೆ. ಇದು ರಾಜಯೋಗದ ವಿದ್ಯೆಯಾಗಿದೆ.
ತಂದೆಯು ಸನ್ಮುಖದಲ್ಲಿ ಜ್ಞಾನವನ್ನು ತಿಳಿಸಿದರು ಎಂದು ಗೀತೆಯಲ್ಲಿ ಯಾವ ಶಬ್ಧವನ್ನು
ಬರೆಯಲ್ಪಟ್ಟಿದೆಯೋ ಅದನ್ನು ಮನುಷ್ಯರು ಭಕ್ತಿ ಮಾರ್ಗಕ್ಕೆ ಹೋಲಿಸಿ ಬರೆದು ಬಿಟ್ಟಿದ್ದಾರೆ,
ಇದರಿಂದ ನೀವು ಇಳಿಯುತ್ತಾ ಬಂದಿದ್ದೀರಿ. ಈಗ ಭಗವಂತನು ನಿಮಗೆ ಮೇಲೇರಿಸುವುದಕ್ಕಾಗಿ
ಶ್ರೇಷ್ಠರನ್ನಾಗಿ ಮಾಡಲು ಓದಿಸುತ್ತಿದ್ದಾರೆ. ಭಕ್ತಿಗೆ ಇಳಿಯುವ ಕಲೆಯ ಮಾರ್ಗವೆಂದು ಹೇಳಲಾಗುತ್ತದೆ.
ಜ್ಞಾನವು ಏರುವ ಕಲೆಯ ಮಾರ್ಗವಾಗಿದೆ. ಇದನ್ನು ತಿಳಿಸುವುದರಲ್ಲಿ ನೀವು ಹೆದರಬೇಡಿ. ಈ ಮಾತುಗಳನ್ನು
ತಿಳಿದುಕೊಳ್ಳದ ಕಾರಣ ವಿರೋಧ ಮಾಡುವವರೂ ಇರುತ್ತಾರೆ. ಶಾಸ್ತ್ರವಾದ ಮಾಡುತ್ತಾರೆ ಆದರೆ ನೀವು
ಯಾರೊಂದಿಗೂ ಶಾಸ್ತ್ರವಾದ ಮಾಡುವಂತಿಲ್ಲ. ತಿಳಿಸಿ, ಶಾಸ್ತ್ರ-ವೇದ, ಉಪನಿಷತ್ತು, ಗಂಗಾ ಸ್ನಾನ
ಮಾಡುವುದು, ತೀರ್ಥ ಯಾತ್ರೆಗಳನ್ನು ಮಾಡುವುದು ಭಕ್ತಿ ಕಾಂಡವಾಗಿದೆ. ಭಾರತದಲ್ಲಿ ರಾವಣನು
ಅವಶ್ಯವಾಗಿ ಇದ್ದಾನೆ, ಅವರ ಪ್ರತಿಮೆಯನ್ನು ಸುಡುತ್ತಾರೆ. ಹಾಗೆ ನೋಡಿದರೆ ಶತ್ರುಗಳ ಪ್ರತಿಮೆಯನ್ನು
ಸುಡುತ್ತಾರೆ ಅಲ್ಪಕಾಲಕ್ಕಾಗಿ ಆದರೆ ಈ ಒಬ್ಬ ರಾವಣನ ಪ್ರತಿಮೆಯನ್ನು ಪ್ರತೀ ವರ್ಷವೂ ಸುಡುತ್ತಾ
ಬರುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಸತೋಪ್ರಧಾನ ಬುದ್ಧಿಯವರಿಂದ ತಮೋಪ್ರಧಾನ
ಬುದ್ಧಿಯವರಾಗಿ ಬಿಟ್ಟಿದ್ದೀರಿ. ನೀವು ಎಷ್ಟೊಂದು ಸುಖಿಯಾಗಿದ್ದಿರಿ! ತಂದೆಯು ಸುಖಧಾಮದ ಸ್ಥಾಪನೆ
ಮಾಡುವುದಕ್ಕಾಗಿಯೇ ಬರುತ್ತಾರೆ ನಂತರ ಯಾವಾಗ ಭಕ್ತಿಮಾರ್ಗವು ಆರಂಭವಾಗುತ್ತದೆಯೋ ಆಗ
ದುಃಖಿಯಾಗುತ್ತೀರಿ ನಂತರ ಸುಖ ದಾತನನ್ನು ನೆನಪು ಮಾಡತೊಡಗುತ್ತಾರೆ ಅದೂ ನಾಮಮಾತ್ರ ಏಕೆಂದರೆ
ಅವರನ್ನು ತಿಳಿದುಕೊಂಡಿರುವುದಿಲ್ಲ. ಗೀತೆಯಲ್ಲಿ ಹೆಸರನ್ನೇ ಬದಲಾಯಿಸಿ ಬಿಟ್ಟಿದ್ದಾರೆ. ಮೊಟ್ಟ
ಮೊದಲಿಗೆ ನೀವು ಇದನ್ನು ತಿಳಿಸಿ, ಸರ್ವ ಶ್ರೇಷ್ಠನು ಭಗವಂತ ಒಬ್ಬರೇ ಆಗಿದ್ದಾರೆ, ಅವರನ್ನೇ ನೆನಪು
ಮಾಡಬೇಕು. ಒಬ್ಬರನ್ನು ನೆನಪು ಮಾಡುವುದಕ್ಕೇ ಅವ್ಯಭಿಚಾರಿ ನೆನಪು, ಅವ್ಯಭಿಚಾರಿ ಜ್ಞಾನವೆಂದು
ಹೇಳಲಾಗುತ್ತದೆ. ನೀವೀಗ ಬ್ರಾಹ್ಮಣರಾಗಿದ್ದೀರಿ ಆದ್ದರಿಂದ ಭಕ್ತಿ ಮಾಡುವುದಿಲ್ಲ. ನಿಮಗೆ
ಜ್ಞಾನವಿದೆ, ತಂದೆಯು ಓದಿಸುತ್ತಾರೆ ಅದರಿಂದ ನಾವು ಈ ದೇವತೆಗಳಾಗುತ್ತೇವೆ. ದೈವೀ ಗುಣಗಳನ್ನೂ
ಧಾರಣೆ ಮಾಡಬೇಕಾಗಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ತಮ್ಮ ಚಾರ್ಟ್ ಇಡಿ, ಆಗ ನನ್ನಲ್ಲಿ
ಯಾವುದೇ ಆಸುರೀ ಗುಣವಿಲ್ಲವೆ ಎಂಬುದು ಅರ್ಥವಾಗುತ್ತದೆ. ದೇಹಾಭಿಮಾನವು ಮೊದಲ ಅವಗುಣವಾಗಿದೆ.
ನಂತರದ ಶತ್ರು ಕಾಮ ವಿಕಾರವಾಗಿದೆ, ಕಾಮವನ್ನು ಗೆಲ್ಲುವುದರಿಂದಲೇ ನೀವು ಜಗಜ್ಜೀತರಾಗುವಿರಿ.
ನಿಮ್ಮ ಉದ್ದೇಶವೇ ಇದಾಗಿದೆ. ಈ ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ಅನೇಕ ಧರ್ಮಗಳಿರಲಿಲ್ಲ,
ಸತ್ಯಯುಗದಲ್ಲಿ ದೇವತೆಗಳ ರಾಜ್ಯವೇ ಇರುತ್ತದೆ. ಮನುಷ್ಯರು ಕಲಿಯುಗದಲ್ಲಿರುತ್ತಾರೆ, ಭಲೆ
ಸತ್ಯಯುಗದಲ್ಲಿರುವವರೂ ಮನುಷ್ಯರೇ ಆಗಿದ್ದಾರೆ ಆದರೆ ಅವರು ದೈವೀ ಗುಣವುಳ್ಳವರಾಗಿರುತ್ತಾರೆ. ಈ
ಸಮಯದಲ್ಲಿ ಎಲ್ಲರೂ ಆಸುರೀ ಗುಣವಂತರಾಗಿದ್ದಾರೆ, ಸತ್ಯಯುಗದಲ್ಲಿ ಕಾಮ ಮಹಾಶತ್ರುವಿರುವುದಿಲ್ಲ.
ತಂದೆಯು ತಿಳಿಸುತ್ತಾರೆ - ಈ ಕಾಮ ಮಹಾ ಶತ್ರುವಿನ ಮೇಲೆ ಜಯ ಗಳಿಸಿದರೆ ನೀವು ಜಗಜ್ಜೀತರಾಗುವಿರಿ.
ಅಲ್ಲಿ ರಾವಣನಿರುವುದಿಲ್ಲ, ಇದನ್ನೂ ಸಹ ಮನುಷ್ಯರು ತಿಳಿದುಕೊಳ್ಳುವುದಿಲ್ಲ. ಸತೋಪ್ರಧಾನ
ಬುದ್ಧಿಯವರಿಂದ ಇಳಿಯುತ್ತಾ-ಇಳಿಯುತ್ತಾ ತಮೋಪ್ರಧಾನ ಬುದ್ಧಿಯವರಾಗಿದ್ದೀರಿ, ಈಗ ಮತ್ತೆ
ಸತೋಪ್ರಧಾನರಾಗಬೇಕಾಗಿದೆ ಅದಕ್ಕಾಗಿ ಒಂದೇ ಔಷಧಿ ಸಿಗುತ್ತದೆ - ತಂದೆಯು ತಿಳಿಸುತ್ತಾರೆ -
ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಆಗ ಜನ್ಮ-ಜನ್ಮಾಂತರದ ಪಾಪಗಳು
ಭಸ್ಮವಾಗುತ್ತದೆ. ನೀವು ಪಾಪಗಳನ್ನು ಭಸ್ಮ ಮಾಡಿಕೊಳ್ಳಲು ಕುಳಿತಿದ್ದೀರಿ ಅಂದಮೇಲೆ ಇನ್ನು ಮುಂದೆ
ಪಾಪ ಮಾಡಬಾರದು. ಇಲ್ಲದಿದ್ದರೆ ಅದು ಒಂದಕ್ಕೆ ನೂರು ಪಟ್ಟು ಹೆಚ್ಚಾಗಿ ಬಿಡುವುದು. ವಿಕಾರದಲ್ಲಿ
ಬಿದ್ದರೆ ನೂರುಪಟ್ಟು ಶಿಕ್ಷೆಯಾಗುತ್ತದೆ. ಅವರು ಮತ್ತೆ ಮೇಲೇರಲು ಕಷ್ಟವಾಗುತ್ತದೆ. ಮೊದಲನೇ
ಶತ್ರುವು ಕಾಮ ವಿಕಾರವಾಗಿದೆ. 5ನೇ ಅಂತಸ್ತಿನಿಂದ ಕೆಳಗೆ ಬಿದ್ದರೆ ಮೂಳೆಗಳು ಪುಡಿ ಪುಡಿಯಾಗುತ್ತವೆ,
ಬಹುಷಃ ಸಾಯಲೂಬಹುದು. ಮೇಲಿನಿಂದ ಬಿದ್ದರೆ ಒಮ್ಮೆಲೆ ಪುಡಿಪುಡಿಯಾಗಿ ಬಿಡುತ್ತಾರೆ ಹಾಗೆಯೇ
ತಂದೆಯೊಂದಿಗೆ ಮಾಡಿದ ಪ್ರತಿಜ್ಞೆಯನ್ನು ಮುರಿದು ಮತ್ತೆ ಮುಖ ಕಪ್ಪು ಮಾಡಿಕೊಂಡಿರೆಂದರೆ ಆಸುರೀ
ಪ್ರಪಂಚದಲ್ಲಿ ಹೋದರು, ಇಲ್ಲಿಂದ ಸತ್ತುಹೋದರು. ಅವರಿಗೆ ಬ್ರಾಹ್ಮಣರಲ್ಲ, ಶೂದ್ರರೆಂದು
ಹೇಳಲಾಗುತ್ತದೆ.
ತಂದೆಯು ಎಷ್ಟು ಸಹಜವಾಗಿ
ತಿಳಿಸುತ್ತಾರೆ. ಮೊದಲು ಈ ನಶೆಯಿರಬೇಕಲ್ಲವೆ. ಒಂದುವೇಳೆ ಕೃಷ್ಣ ಭಗವಾನುವಾಚವೆಂದೇ ತಿಳಿಯಿರಿ,
ಅವರೂ ಸಹ ಓದಿಸಿ ತಮ್ಮ ಸಮಾನ ಮಾಡಿಕೊಳ್ಳುತ್ತಾರಲ್ಲವೆ ಆದರೆ ಕೃಷ್ಣನಂತೂ ಭಗವಂತನಾಗಲು
ಸಾಧ್ಯವಿಲ್ಲ. ಕೃಷ್ಣನು ಪುನರ್ಜನ್ಮದಲ್ಲಿ ಬರುತ್ತಾನೆ. ತಂದೆಯು ತಿಳಿಸುತ್ತಾರೆ - ನಾನೇ
ಪುನರ್ಜನ್ಮ ರಹಿತನಾಗಿದ್ದೇನೆ. ರಾಧೆ-ಕೃಷ್ಣ, ಲಕ್ಷ್ಮೀ-ನಾರಾಯಣ, ವಿಷ್ಣು ಎಲ್ಲವೂ ಒಂದೇ ಮಾತಾಗಿದೆ.
ವಿಷ್ಣುವಿನ ಎರಡು ರೂಪಗಳು ಲಕ್ಷ್ಮೀ-ನಾರಾಯಣರಾಗಿದ್ದಾರೆ ಮತ್ತು ಲಕ್ಷ್ಮೀ-ನಾರಾಯಣರ ಬಾಲ್ಯವೇ
ರಾಧೆ-ಕೃಷ್ಣರಾಗಿದ್ದಾರೆ. ಬ್ರಹ್ಮಾನ ರಹಸ್ಯವನ್ನೂ ತಿಳಿಸಿದ್ದಾರೆ. ಬ್ರಹ್ಮಾ-ಸರಸ್ವತಿ ಸೋ
ಲಕ್ಷ್ಮೀ-ನಾರಾಯಣ. ಈಗ ಇವರು ವರ್ಗಾಯಿತರಾಗುತ್ತಾರೆ. ಅಂತಿಮ ಜನ್ಮದ ಹೆಸರು ಇವರಿಗೆ ಬ್ರಹ್ಮಾನೆಂದು
ಕೊಟ್ಟಿದ್ದಾರೆ. ಬಾಕಿ ಈ ಬ್ರಹ್ಮಾನನ್ನು ನೋಡಿ, ಒಮ್ಮೆಲೆ ಕಲಿಯುಗದಲ್ಲಿ ನಿಂತಿದ್ದಾರೆ. ಇವರೇ
ಮತ್ತೆ ತಪಸ್ಸು ಮಾಡಿ ಕೃಷ್ಣ ಅಥವಾ ಶ್ರೀ ನಾರಾಯಣನಾಗುತ್ತಾರೆ. ವಿಷ್ಣುವೆಂದು ಹೇಳಿದಾಗ ಅವರಲ್ಲಿ
ಇಬ್ಬರು ಬಂದು ಬಿಡುತ್ತಾರೆ. ಬ್ರಹ್ಮಾನ ಮಗಳು ಸರಸ್ವತಿಯಾಗಿದ್ದಾರೆ. ಈ ಮಾತುಗಳನ್ನು ಯಾರೂ
ತಿಳಿದುಕೊಳ್ಳಲು ಸಾಧ್ಯವಿಲ್ಲ. ಬ್ರಹ್ಮಾನಿಗೂ ನಾಲ್ಕು ಭುಜಗಳನ್ನು ತೋರಿಸುತ್ತಾರೆ ಏಕೆಂದರೆ
ಪ್ರವೃತ್ತಿ ಮಾರ್ಗವಲ್ಲವೆ. ನಿವೃತ್ತಿ ಮಾರ್ಗದವರು ಈ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ.
ಅನೇಕರನ್ನು ವಿದೇಶದಿಂದ ಕರೆದುಕೊಂಡು ಬರುತ್ತಾರೆ ನಾವು ಪ್ರಾಚೀನ ರಾಜಯೋಗವನ್ನು ಕಲಿಯೋಣವೆಂದು
ಆದರೆ ಸನ್ಯಾಸಿಗಳು ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಈಗ ಈಶ್ವರನು ಬಂದಿದ್ದಾರೆ, ನೀವೀಗ
ಈಶ್ವರನ ಮಕ್ಕಳು ಈಶ್ವರೀಯ ಸಂಪ್ರದಾಯದವರಾಗಿದ್ದೀರಿ. ಈಶ್ವರನು ನಿಮಗೆ ಓದಿಸಲು ಬಂದಿದ್ದಾರೆ.
ರಾಜಯೋಗವನ್ನು ಕಲಿಸುತ್ತಿದ್ದಾರೆ, ಅವರು ನಿರಾಕಾರನಾಗಿದ್ದಾರೆ. ಬ್ರಹ್ಮಾರವರ ಮೂಲಕ ನಿಮ್ಮನ್ನು
ತನ್ನವರನ್ನಾಗಿ ಮಾಡಿಕೊಂಡಿದ್ದಾರೆ. ನೀವು ಅವರಿಗೆ ಬಾಬಾ, ಬಾಬಾ ಎಂದು ಹೇಳುತ್ತೀರಿ. ಈ
ಬ್ರಹ್ಮಾರವರು ಮಧ್ಯವರ್ತಿಯಾಗಿದ್ದಾರೆ. ಭಾಗ್ಯಶಾಲಿ ರಥವಾಗಿದ್ದಾರೆ, ಇವರ ಮೂಲಕ ತಂದೆಯು ನಿಮಗೆ
ಓದಿಸುತ್ತಾರೆ. ನೀವೂ ಸಹ ಪತಿತರಿಂದ ಪಾವನರಾಗುತ್ತೀರಿ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು
ತಂದೆಯು ಓದಿಸುತ್ತಾರೆ. ಈಗಂತೂ ರಾವಣ ರಾಜ್ಯ, ಆಸುರೀ ಸಂಪ್ರದಾಯವಿದೆಯಲ್ಲವೆ. ನೀವೀಗ ಈಶ್ವರೀಯ
ಸಂಪ್ರದಾಯದವರಾಗಿದ್ದೀರಿ ನಂತರ ದೈವೀ ಸಂಪ್ರದಾಯದವರಾಗುತ್ತೀರಿ. ನೀವೀಗ ಪುರುಷೋತ್ತಮ ಸಂಗಮ
ಯುಗದಲ್ಲಿದ್ದೀರಿ, ಪಾವನರಾಗುತ್ತಿದ್ದೀರಿ. ಆ ಸನ್ಯಾಸಿಗಳಾದರೆ ಮನೆ-ಮಠವನ್ನು ಬಿಟ್ಟು ಹೋಗುತ್ತಾರೆ.
ಇಲ್ಲಿ ತಂದೆಯು ತಿಳಿಸುತ್ತಾರೆ - ಭಲೆ ಸ್ತ್ರೀ-ಪುರುಷರು ಮನೆಯಲ್ಲಿ ಒಟ್ಟಿಗೆ ಇರಿ ಆದರೆ ಸ್ತ್ರೀಯು
ನಾಗಿಣಿಯಾಗಿದ್ದಾಳೆ. ಆದ್ದರಿಂದ ನಾವು ಅವರಿಂದ ಬೇರೆಯಾದರೆ ಮುಕ್ತರಾಗಿ ಬಿಡುತ್ತೇವೆಂದು
ತಿಳಿಯಬೇಡಿ. ನೀವು ಓಡಿಹೋಗುವಂತಿಲ್ಲ. ಅದು ಹದ್ದಿನ ಸನ್ಯಾಸವಾಗಿದೆ ಆದ್ದರಿಂದ ಅವರು ಗೃಹಸ್ಥವನ್ನು
ಬಿಡಿಸುತ್ತಾರೆ. ನೀವು ಇಲ್ಲಿಯೇ ಕುಳಿತಿದ್ದೀರಿ ಆದರೆ ನಿಮಗೆ ಈ ವಿಕಾರೀ ಪ್ರಪಂಚದೊಂದಿಗೆ
ವೈರಾಗ್ಯವಿದೆ. ಇವೆಲ್ಲಾ ಮಾತುಗಳನ್ನು ನೀವು ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕಾಗಿದೆ.
ಬರೆದಿಟ್ಟುಕೊಳ್ಳಬೇಕು ಮತ್ತು ವ್ರತವನ್ನಿಡಬೇಕಾಗಿದೆ. ದೈವೀ ಗುಣಗಳನ್ನು ಧಾರಣೆ
ಮಾಡಿಕೊಳ್ಳಬೇಕಾಗಿದೆ. ಶ್ರೀಕೃಷ್ಣನು ಗುಣಗಾಯನ ಮಾಡುತ್ತಾರಲ್ಲವೆ. ಇದು ನಿಮ್ಮ ಗುರಿ-ಧ್ಯೇಯವಾಗಿದೆ.
ತಂದೆಯೂ ಆ ರೀತಿ ಆಗುವುದಿಲ್ಲ, ನಿಮ್ಮನ್ನು ಮಾಡುತ್ತಾರೆ ಮತ್ತೆ ಅರ್ಧ ಕಲ್ಪದ ನಂತರ ನೀವು
ತಮೋಪ್ರಧಾನರಾಗುತ್ತೀರಿ, ನಾನಾಗುವುದಿಲ್ಲ. ಈ ಬ್ರಹ್ಮಾರವರು ಆಗುತ್ತಾರೆ. 84 ಜನ್ಮಗಳನ್ನೂ ಇವರೇ
ತೆಗೆದುಕೊಂಡಿದ್ದಾರೆ. ಇವರೂ ಸಹ ಈಗ ಸತೋಪ್ರಧಾನರಾಗಬೇಕಾಗಿದೆ. ಇವರೂ ಪುರುಷಾರ್ಥಿಯಾಗಿದ್ದಾರೆ.
ಹೊಸ ಪ್ರಪಂಚಕ್ಕೆ ಸತೋಪ್ರಧಾನವೆಂದು ಹೇಳುತ್ತಾರೆ. ಪ್ರತಿಯೊಂದು ವಸ್ತು ಮೊದಲು ಸತೋಪ್ರಧಾನ ನಂತರ
ಸತೋ, ರಜೋ, ತಮೋದಲ್ಲಿ ಬರುತ್ತದೆ. ಚಿಕ್ಕ ಮಕ್ಕಳಿಗೂ ಸಹ ಮಹಾತ್ಮರೆಂದು ಹೇಳಲಾಗುತ್ತದೆ ಏಕೆಂದರೆ
ಅವರಲ್ಲಿ ವಿಕಾರವಿರುವುದಿಲ್ಲ ಆದ್ದರಿಂದ ಅವರನ್ನು ಹೂಗಳೆಂದು ಹೇಳಲಾಗುತ್ತದೆ. ಸನ್ಯಾಸಿಗಳಿಗಿಂತಲೂ
ಚಿಕ್ಕ ಮಕ್ಕಳಿಗೇ ಉತ್ತಮರೆಂದು ಹೇಳಲಾಗುತ್ತದೆ ಏಕೆಂದರೆ ಸನ್ಯಾಸಿಗಳಾದರೂ ಗೃಹಸ್ಥದ ಅನುಭವ ಮಾಡಿ
ನಂತರ ಸನ್ಯಾಸ ಮಾಡುತ್ತಾರೆ, ಪಂಚ ವಿಕಾರಗಳ ಅನುಭವವಿದೆ ಆದರೆ ಮಕ್ಕಳಿಗೆ ಏನೂ ತಿಳಿದಿರುವುದಿಲ್ಲ
ಆದ್ದರಿಂದ ಮಕ್ಕಳನ್ನು ನೋಡಿ ಖುಷಿಯಾಗುತ್ತದೆ, ಚೈತನ್ಯ ಹೂಗಳಾಗಿದ್ದಾರೆ. ತಮ್ಮದಂತೂ ಪ್ರವೃತ್ತಿ
ಮಾರ್ಗವಾಗಿದೆ.
ಈಗ ನೀವು ಮಕ್ಕಳು ಈ
ಹಳೆಯ ಪ್ರಪಂಚದಿಂದ ಹೊಸ ಪ್ರಪಂಚದಲ್ಲಿ ಹೋಗಬೇಕಾಗಿದೆ. ಅಮರ ಲೋಕದಲ್ಲಿ ಹೋಗುವುದಕ್ಕಾಗಿ ನೀವೆಲ್ಲರೂ
ಪುರುಷಾರ್ಥ ಮಾಡುತ್ತೀರಿ, ಮೃತ್ಯು ಲೋಕದಿಂದ ವರ್ಗಾವಣೆಯಾಗುತ್ತೀರಿ. ದೇವತೆಯಾಗಬೇಕಾಗಿದೆ ಅಂದಮೇಲೆ
ಅದಕ್ಕಾಗಿ ಈಗ ಪರಿಶ್ರಮ ಪಡಬೇಕಾಗಿದೆ. ಪ್ರಜಾಪಿತ ಬಹ್ಮಾನ ಮಕ್ಕಳು ಸಹೋದರ-ಸಹೋದರಿಯರಾಗಿ
ಬಿಡುತ್ತಾರೆ. ಸಹೋದರ-ಸಹೋದರಿಯರಂತೂ ಆಗಿದ್ದೀರಲ್ಲವೆ. ಪ್ರಜಾಪಿತ ಬ್ರಹ್ಮಾನ ಸಂತಾನರು ಪರಸ್ಪರ
ಏನಾದರು? ಪ್ರಜಾಪಿತ ಬ್ರಹ್ಮಾನ ಗಾಯನವಿದೆ, ಎಲ್ಲಿಯವರೆಗೆ ಪ್ರಜಾಪಿತ ಬ್ರಹ್ಮಾನ
ಮಕ್ಕಳಾಗುವುದಿಲ್ಲವೋ ಅಲ್ಲಿಯವರೆಗೆ ಸೃಷ್ಟಿಯ ರಚನೆ ಹೇಗಾಗುವುದು? ಪ್ರಜಾಪಿತ ಬ್ರಹ್ಮಾನಿಗೆ
ಎಲ್ಲರೂ ಆತ್ಮಿಕ ಮಕ್ಕಳಾಗಿದ್ದೀರಿ. ಆ ಬ್ರಾಹ್ಮಣರು ದೈಹಿಕ ಯಾತ್ರೆ ಮಾಡುವವರಾಗಿದ್ದಾರೆ, ನೀವು
ಆತ್ಮಿಕ ಯಾತ್ರಿಕರಾಗಿದ್ದೀರಿ. ಅವರು ಪತಿತರು, ನೀವು ಪಾವನರಾಗಿದ್ದೀರಿ. ಅವರು ಪ್ರಜಾಪಿತನ
ಸಂತಾನರಲ್ಲ, ಇದನ್ನು ನೀವು ತಿಳಿದುಕೊಂಡಿದ್ದೀರಿ. ಸಹೋದರ-ಸಹೋದರಿಯರೆಂದು ತಿಳಿದಾಗ ವಿಕಾರದಲ್ಲಿ
ಹೋಗುವುದಿಲ್ಲ. ತಂದೆಯೂ ಸಹ ಹೇಳುತ್ತಾರೆ - ಮಕ್ಕಳೇ, ಎಚ್ಚರಿಕೆಯಿಂದಿರಿ. ನನ್ನ ಮಕ್ಕಳಾಗಿಯೂ
ಯಾವುದೇ ಪತಿತ ಕೆಲಸ ಮಾಡಬೇಡಿ. ಇಲ್ಲದಿದ್ದರೆ ಕಲ್ಲು ಬುದ್ಧಿಯವರಾಗಿ ಬಿಡುತ್ತೀರಿ. ಇಂದ್ರ ಸಭೆಯ
ಕಥೆಯೂ ಇದೆ. ಶೂದ್ರರನ್ನು ಕರೆ ತಂದಾಗ ಇಂದ್ರ ಸಭೆಯಲ್ಲಿ ಅವರ ದುರ್ಗಂಧವು ಬರತೊಡಗಿತು ಆಗ
ಪತಿತರನ್ನು ಇಲ್ಲಿಗೆ ಏಕೆ ಕರೆ ತಂದಿದ್ದೀರಿ ಎಂದು ಅವರಿಗೆ ಶಾಪ ಕೊಟ್ಟರು. ವಾಸ್ತವದಲ್ಲಿ ಈ
ಸಭೆಯಲ್ಲಿಯೂ ಯಾರೂ ಪತಿತರು ಬರುವಂತಿಲ್ಲ. ಭಲೆ ತಂದೆಗೆ ತಿಳಿಯಲಿ, ತಿಳಿಯದಿರಲಿ. ಹೀಗೆ ಮಾಡುವವರು
ತಮ್ಮದೇ ನಷ್ಟ ಮಾಡಿಕೊಳ್ಳುತ್ತೀರಿ. ಇನ್ನೂ ನೂರುಪಟ್ಟು ಶಿಕ್ಷೆಯಾಗುತ್ತದೆ. ಪತಿತರಿಗೆ
ಪ್ರವೇಶವಿಲ್ಲ, ಅವರಿಗಾಗಿ ವಿಜಿಟಿಂಗ್ ರೂಂ ಸರಿಯಾಗಿದೆ. ಯಾವಾಗ ಪಾವನರಾಗುವ ಗ್ಯಾರಂಟಿ ಕೊಡುವರೋ,
ದೈವೀ ಗುಣಗಳನ್ನು ಧಾರಣೆ ಮಾಡುವರೋ ಆಗಲೇ ಪ್ರವೇಶವಿದೆ. ದೈವೀ ಗುಣಗಳನ್ನು ಧಾರಣೆ
ಮಾಡಿಕೊಳ್ಳುವುದರಲ್ಲಿ ಸಮಯ ಹಿಡಿಸುತ್ತದೆ. ಪಾವನರಾಗುವ ಒಂದೇ ಪ್ರತಿಜ್ಞೆಯಿದೆ.
ಇದನ್ನೂ ತಿಳಿಸಿದ್ದಾರೆ,
ದೇವತೆಗಳು ಮತ್ತು ಪರಮಾತ್ಮನ ಮಹಿಮೆಯು ಬೇರೆ-ಬೇರೆಯಾಗಿದೆ. ಪತಿತ-ಪಾವನ, ಮುಕ್ತಿದಾತ,
ಮಾರ್ಗದರ್ಶಕನು ತಂದೆಯೇ ಆಗಿದ್ದಾರೆ. ಎಲ್ಲರನ್ನೂ ಮುಕ್ತಗೊಳಿಸಿ ತಮ್ಮ ಶಾಂತಿಧಾಮಕ್ಕೆ ಕರೆದುಕೊಂಡು
ಹೋಗುತ್ತಾರೆ. ಶಾಂತಿಧಾಮ, ಸುಖಧಾಮ ಮತ್ತು ದುಃಖಧಾಮ - ಇದೂ ಸಹ ಚಕ್ರವಾಗಿದೆ. ಈಗ ದುಃಖಧಾಮವನ್ನು
ಮರೆತು ಬಿಡಬೇಕಾಗಿದೆ. ಶಾಂತಿಧಾಮದಿಂದ ಸುಖಧಾಮದಲ್ಲಿ ಯಾರು ನಂಬರ್ವನ್ ತೇರ್ಗಡೆಯಾಗುವರೋ ಅವರೇ
ಬರುತ್ತಾರೆ, ಬರುತ್ತಿರುತ್ತಾರೆ. ಈ ಚಕ್ರವು ಸುತ್ತುತ್ತಿರುತ್ತದೆ. ಅನೇಕಾನೇಕ ಆತ್ಮಗಳಿದ್ದಾರೆ
ಎಲ್ಲರ ಪಾತ್ರವು ನಂಬರ್ವಾರ್ ಆಗಿದೆ. ಎಲ್ಲರೂ ನಂಬರ್ವಾರ್ ಆಗಿಯೇ ಹೋಗುವರು. ಅದಕ್ಕೆ ಶಿವ ತಂದೆಯ
ವಂಶಾವಳಿ ಅಥವಾ ರುದ್ರ ಮಾಲೆಯೆಂದು ಹೇಳಲಾಗುತ್ತದೆ. ನಂಬರ್ವಾರ್ ಹೋಗುತ್ತಾರೆ ಮತ್ತೆ ನಂಬರ್ವಾರ್
ಆಗಿ ಬರುತ್ತಾರೆ. ಅನ್ಯ ಧರ್ಮದವರದೂ ಇದೇ ರೀತಿಯಾಗುತ್ತದೆ. ಮಕ್ಕಳಿಗೆ ಪ್ರತಿನಿತ್ಯವೂ
ತಿಳಿಸಲಾಗುತ್ತದೆ, ಶಾಲೆಯಲ್ಲಿ ನಿತ್ಯವೂ ಓದುವುದಿಲ್ಲ. ಮುರುಳಿ ಕೇಳುವುದಿಲ್ಲವೆಂದರೆ ಗೈರು
ಹಾಜರಿಯಾಗಿಬಿಡುತ್ತದೆ. ವಿದ್ಯೆಯ ಲಿಫ್ಟ್ಂತೂ ಅವಶ್ಯವಾಗಿ ಬೇಕು. ಈಶ್ವರೀಯ ವಿಶ್ವವಿದ್ಯಾಲಯದಲ್ಲಿ
ಗೈರು ಹಾಜರಿಯಾಗಬಾರದು. ವಿದ್ಯೆಯು ಎಷ್ಟು ಶ್ರೇಷ್ಠವಾಗಿದೆ! ಇದರಿಂದ ನೀವು ಸುಖಧಾಮದ
ಮಾಲೀಕರಾಗುತ್ತೀರಿ. ಅಲ್ಲಂತೂ ದವಸ-ಧಾನ್ಯಗಳೆಲ್ಲವೂ ಯಥೇಚ್ಛವಾಗಿರುತ್ತದೆ, ಯಾವುದಕ್ಕೂ ಹಣ
ತೊಡಗಿಸಬೇಕಾಗಿಲ್ಲ. ಈಗಂತೂ ಎಷ್ಟೊಂದು ಬೆಲೆಯೇರಿದೆ! 100 ವರ್ಷಗಳಲ್ಲಿ ಎಲ್ಲದರ ಬೆಲೆಯು ಎಷ್ಟೊಂದು
ಏರಿ ಹೋಗಿದೆ. ಯಾವುದೇ ವಸ್ತುವನ್ನು ಪಡೆಯುವುದಕ್ಕಾಗಿ ಕಷ್ಟ ಪಡಲು ಅಲ್ಲಿ ಯಾವುದೇ ಅಪ್ರಾಪ್ತ
ವಸ್ತುವಿರುವುದಿಲ್ಲ. ಅದು ಸುಖಧಾಮವಾಗಿದೆ! ನೀವೀಗ ಅಲ್ಲಿಗೆ ಹೋಗಲು ತಯಾರು
ಮಾಡಿಕೊಳ್ಳುತ್ತಿದ್ದೀರಿ. ನೀವು ಭಿಕ್ಷುಕರಿಂದ ರಾಜಕುಮಾರರಾಗುತ್ತೀರಿ, ಸಾಹುಕಾರರು ತಮ್ಮನ್ನು
ಭಿಕ್ಷುಕರೆಂದು ತಿಳಿಯುವುದಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಂದೆಯೊಂದಿಗೆ
ಯಾವ ಸಂಪೂರ್ಣ ಪಾವನರಾಗುವ ಪ್ರತಿಜ್ಞೆಯನ್ನು ಮಾಡಿದ್ದೀರಿ ಅದನ್ನು ಎಂದೂ ಮುರಿಯಬಾರದು. ಬಹಳ-ಬಹಳ
ವ್ರತವನ್ನಿಟ್ಟುಕೊಳ್ಳಬೇಕಾಗಿದೆ. ತಮ್ಮ ಚಾರ್ಟನ್ನು ನೋಡಿಕೊಳ್ಳಬೇಕು - ನನ್ನಲ್ಲಿ ಯಾವುದೇ
ಅವಗುಣವಿಲ್ಲವೆ?
2. ಈಶ್ವರೀಯ ವಿಶ್ವ
ವಿದ್ಯಾಲಯದಲ್ಲಿ ಎಂದೂ ಗೈರು ಹಾಜರಿಯಾಗಬಾರದು. ಸುಖಧಾಮದ ಮಾಲೀಕರಾಗುವ ಶೇಷ್ಠ ವಿದ್ಯೆಯನ್ನು ಒಂದು
ದಿನವೂ ತಪ್ಪಿಸಬಾರದು. ಪ್ರತಿ ನಿತ್ಯವೂ ಮುರುಳಿಯನ್ನು ಅವಶ್ಯವಾಗಿ ಕೇಳಬೇಕಾಗಿದೆ.
ವರದಾನ:
ಪ್ರತೀ ಸೆಕೆಂಡ್
ಪ್ರತೀ ಸಂಕಲ್ಪದ ಮಹತ್ವವನ್ನು ತಿಳಿದು ಪುಣ್ಯದ ಖಾತೆಯನ್ನು ಜಮಾ ಮಾಡಿಕೊಳ್ಳುವ ಪದಮಾಪದಮಪತಿ ಭವ.
ತಾವು ಪುಣ್ಯಾತ್ಮರ
ಸಂಕಲ್ಪದಲ್ಲಿ ಇಷ್ಟೂ ವಿಶೇಷ ಶಕ್ತಿಯಿದೆ, ಆ ಶಕ್ತಿಯ ಮೂಲಕ ಅಸಂಭವವನ್ನು ಸಂಭವ ಮಾಡಬಹುದು. ಹೇಗೆ
ಇತ್ತೀಚಿನ ಯಂತ್ರಗಳ ಮೂಲಕ ಬಂಜರು ಭೂಮಿಯನ್ನೂ ಹಚ್ಚ ಹಸಿರನ್ನಾಗಿ ಮಾಡಿ ಬಿಡುತ್ತಾರೆ, ಬೆಟ್ಟಗಳ
ಮೇಲೂ ಹೂ ಅರಳಿಸಿ ಬಿಡುತ್ತಾರೆ, ಹಾಗೆಯೇ ತಾವೂ ತಮ್ಮ ಶ್ರೇಷ್ಠ ಸಂಕಲ್ಪಗಳ ಮೂಲಕ
ಭರವಸೆಯಿಲ್ಲದಿರುವವರಿಗೆ ಭರವಸೆಯನ್ನು ಉತ್ಪನ್ನ ಮಾಡಬಹುದು. ಅದಕ್ಕಾಗಿ ಕೇವಲ ಪ್ರತೀ ಸೆಕೆಂಡ್
ಪ್ರತೀ ಸಂಕಲ್ಪದ ಮೌಲ್ಯವನ್ನು ತಿಳಿದು, ಸಂಕಲ್ಪ ಮತ್ತು ಸೆಕೆಂಡನ್ನು ಉಪಯೋಗಿಸುತ್ತಾ ಪುಣ್ಯದ
ಖಾತೆಯನ್ನು ಜಮಾ ಮಾಡಿರಿ. ತಮ್ಮ ಸಂಕಲ್ಪದ ಶಕ್ತಿಯು ಇಷ್ಟೂ ಶ್ರೇಷ್ಠವಾಗಿದೆ, ಆ ಒಂದು ಸಂಕಲ್ಪವೂ
ಸಹ ಪದಮಾ ಪದಮಪತಿಯನ್ನಾಗಿ ಮಾಡಿ ಬಿಡುತ್ತದೆ.
ಸ್ಲೋಗನ್:
ಪ್ರತಿಯೊಂದು
ಕರ್ಮವನ್ನು ಅಧಿಕಾರಿಯೆನ್ನುವ ನಿಶ್ಚಯ ಮತ್ತು ನಶೆಯಿಂದ ಮಾಡುತ್ತೀರೆಂದರೆ ಪರಿಶ್ರಮವು
ಸಮಾಪ್ತಿಯಾಗಿ ಬಿಡುತ್ತದೆ.
ಅವ್ಯಕ್ತ ಸೂಚನೆ:- ಈಗ
ಸಂಪನ್ನ ಅಥವಾ ಕರ್ಮಾತೀತರಾಗುವುದರಲ್ಲಿ ತತ್ಪರರಾಗಿರಿ.
ಕರ್ಮಾತೀತ ಸ್ಥಿತಿಯನ್ನು
ಪಡೆಯಲು ವಿಶೇಷ ಸ್ವಯಂನಲ್ಲಿ ಸಂಕ್ಷಿಪ್ತಗೊಳಿಸುವ ಮತ್ತು ಸಮಾವೇಶಿಸುವ ಶಕ್ತಿ ಧಾರಣೆ ಮಾಡುವುದು
ಅವಶ್ಯಕವಾಗಿದೆ. ಕರ್ಮ ಬಂಧನ ಆತ್ಮರು ಎಲ್ಲಿದಾರೆ ಅಲ್ಲಿಯೇ ಕಾರ್ಯ ಮಾಡಬಹುದು ಮತ್ತು ಕರ್ಮಾತೀತ
ಆತ್ಮರು ಒಂದೇ ಸಮಯದಲ್ಲಿ ನಾಲ್ಕಾರು ಕಡೆ ತಮ್ಮ ಸೇವೆಯ ಪಾತ್ರ ಅಭಿನಯಿಸಬಹುದು ಏಕೆಂದರೆ
ಕರ್ಮಾತೀತರಾಗಿದ್ದಾರೆ. ಅವರ ಗತಿ ಬಹಳ ತೀವ್ರವಾಗಿರುತ್ತದೆ, ಸೆಕೆಂಡಿನಲ್ಲಿ ಎಲ್ಲಿ ಬೇಕೋ ಅಲ್ಲಿ
ತಲುಪಬಹುದು, ಅಂದಾಗ ಈ ಅನುಭೂತಿಯನ್ನು ಹೆಚ್ಚಿಸಿ.