30.01.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಇಡೀ
ಕಲ್ಪಕ್ಕೆ ಇದು ಸರ್ವೋತ್ತಮ ಕಲ್ಯಾಣಕಾರಿ ಸಂಗಮ ಯುಗವಾಗಿದೆ, ಇದರಲ್ಲಿ ನೀವು ಮಕ್ಕಳು ನೆನಪಿನ
ಸ್ಯಾಕ್ರೀನ್ನಿಂದ ಸತೋಪ್ರಧಾನರಗುತ್ತೀರಿ”
ಪ್ರಶ್ನೆ:
ಅನೇಕ ಪ್ರಕಾರದ
ಗಳ ಉತ್ಪತ್ತಿಗೆ ಹಾಗೂ ಅದೆಲ್ಲದರ ನಿವಾರಣೆ ಏನಾಗಿದೆ?
ಉತ್ತರ:
ಯಾವಾಗ
ದೇಹಾಭಿಮಾನದಲ್ಲಿ ಬರುತ್ತೀರೋ ಆಗ ಸಂಶಯವು ಹುಟ್ಟುತ್ತದೆ ಮತ್ತು ಸಂಶಯ ಬರುವುದರಿಂದಲೇ ಅನೇಕ
ಪ್ರಶ್ನೆಗಳ ಉತ್ಪತ್ತಿಯಾಗುತ್ತದೆ. ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳಿಗೆ ಪತಿತರಿಂದ
ಪಾವನರಾಗಿ ಮತ್ತು ಅನ್ಯರನ್ನು ಮಾಡಿ ಎಂದು ಯಾವ ಕರ್ತವ್ಯವನ್ನು ಕೊಟ್ಟಿದ್ದೇನೆಯೋ ಈ ಕರ್ತವ್ಯದಲ್ಲಿ
ತೊಡಗಿರಿ ಆಗ ಎಲ್ಲಾ ಪ್ರಶ್ನೆಗಳು ಸಮಾಪ್ತಿಯಾಗುತ್ತವೆ.
ಗೀತೆ:
ನಿಮ್ಮನ್ನು
ಪಡೆದ ನಾನು ಜಗತ್ತನ್ನೇ ಪಡೆದೆನು.............
ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಮಧುರಾತಿ ಮಧುರ ಆತ್ಮಿಕ ಮಕ್ಕಳೇ ಎಂದು
ಯಾರು ಹೇಳಿದರು? ಅವಶ್ಯವಾಗಿ ಆತ್ಮಿಕ ತಂದೆಯೇ ಹೇಳಬಲ್ಲರು. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈಗ
ಸನ್ಮುಖದಲ್ಲಿ ಕುಳಿತಿದ್ದೀರಿ ಮತ್ತು ತಂದೆಯು ಬಹಳ ಪ್ರೀತಿಯಿಂದ ತಿಳಿಸುತ್ತಿದ್ದಾರೆ. ಈಗ ನಿಮಗೆ
ಗೊತ್ತಿದೆ, ಆತ್ಮಿಕ ತಂದೆಯ ವಿನಃ ಸರ್ವರಿಗೆ ಸುಖ-ಶಾಂತಿ ಕೊಡುವವರು ಹಾಗೂ ಸರ್ವರನ್ನೂ ಈ
ದುಃಖದಿಂದ ಮುಕ್ತರನ್ನಾಗಿ ಮಾಡುವವರು ಇಡೀ ಪ್ರಪಂಚದಲ್ಲಿ ಮತ್ತ್ಯಾರೂ ಇರಲು ಸಾಧ್ಯವಿಲ್ಲ
ಆದ್ದರಿಂದ ದುಃಖದಲ್ಲಿ ಎಲ್ಲರೂ ತಂದೆಯನ್ನು ನೆನಪು ಮಾಡುತ್ತಿರುತ್ತಾರೆ. ನೀವು ಮಕ್ಕಳು
ಸನ್ಮುಖದಲ್ಲಿ ಕುಳಿತಿದ್ದೀರಿ. ತಂದೆಯು ನಮ್ಮನ್ನು ಸುಖಧಾಮಕ್ಕೆ ಯೋಗ್ಯರನ್ನಾಗಿ
ಮಾಡುತ್ತಿದ್ದಾರೆಂದು ನಿಮಗೆ ತಿಳಿದಿದೆ. ಸದಾ ಸುಖಧಾಮದ ಮಾಲೀಕರನ್ನಾಗಿ ಮಾಡುವ ತಂದೆಯ
ಸನ್ಮುಖದಲ್ಲಿ ಬಂದಿದ್ದೀರಿ. ಈಗ ತಿಳಿದುಕೊಳ್ಳುತ್ತೀರಿ, ಸನ್ಮುಖ ಕೇಳುವುದರಲ್ಲಿ ಮತ್ತು
ದೂರವಿದ್ದು ಕೇಳುವುದರಲ್ಲಿ ಬಹಳ ಅಂತರವಿರುತ್ತದೆ. ಮಧುಬನಕ್ಕೆ ಸನ್ಮುಖದಲ್ಲಿ ಬರುತ್ತೀರಿ.
ಮಧುಬನವು ಪ್ರಸಿದ್ಧವಾಗಿದೆ. ಅವರು ಮಧುಬನದಲ್ಲಿ ಕೃಷ್ಣನ ಚಿತ್ರವನ್ನು ತೋರಿಸಿ ಬಿಟ್ಟಿದ್ದಾರೆ
ಆದರೆ ಕೃಷ್ಣನಂತೂ ಇಲ್ಲ. ನೀವು ಮಕ್ಕಳಿಗೆ ತಿಳಿದಿದೆ - ತಮ್ಮನ್ನು ಪದೇ-ಪದೇ ಆತ್ಮನಿಶ್ಚಯ
ಮಾಡಿಕೊಳ್ಳಬೇಕಾಗಿದೆ, ಇದರಲ್ಲಿಯೇ ಪರಿಶ್ರಮವಾಗುತ್ತದೆ. ನಾನಾತ್ಮನು ತಂದೆಯಿಂದ ಆಸ್ತಿಯನ್ನು
ತೆಗೆದುಕೊಳ್ಳುತ್ತಿದ್ದೇನೆ. ಇಡೀ ಚಕ್ರದಲ್ಲಿ ತಂದೆಯು ಒಂದೇಬಾರಿ ಬರುತ್ತಾರೆ. ಇದು ಕಲ್ಪದ ಬಹಳ
ಸೌಭಾಗ್ಯದ ಸಂಗಮಯುಗವಾಗಿದೆ. ಇದಕ್ಕೆ ಪುರುಷೋತ್ತಮ ಎಂಬ ಹೆಸರನ್ನಿಡಲಾಗಿದೆ. ಈ ಸಂಗಮಯುಗದಲ್ಲಿಯೇ
ಎಲ್ಲಾ ಮನುಷ್ಯ ಮಾತ್ರರೂ ಉತ್ತಮರಾಗುತ್ತಾರೆ. ಈಗಂತೂ ಎಲ್ಲಾ ಮನುಷ್ಯ ಮಾತ್ರರ ಆತ್ಮಗಳು
ತಮೋಪ್ರಧಾನರಾಗಿದ್ದಾರೆ ಮತ್ತೆ ಸತೋಪ್ರಧಾನರಾಗುತ್ತಾರೆ. ಸತೋಪ್ರಧಾನರಾಗಿದ್ದಾಗ
ಉತ್ತಮರಾಗಿರುತ್ತಾರೆ. ತಮೋಪ್ರಧಾನರಾದಾಗ ಮನುಷ್ಯರು ಕನಿಷ್ಟರಾಗುತ್ತಾರೆ. ಆದ್ದರಿಂದ ಈಗ ತಂದೆಯು
ಆತ್ಮಗಳಿಗೆ ಸನ್ಮುಖದಲ್ಲಿ ಕುಳಿತು ತಿಳಿಸಿ ಕೊಡುತ್ತಾರೆ. ಎಲ್ಲಾ ಪಾತ್ರವನ್ನು ಆತ್ಮವೇ
ಅಭಿನಯಿಸುತ್ತದೆ, ಶರೀರವಲ್ಲ. ನಿಮ್ಮ ಬುದ್ಧಿಯಲ್ಲಿ ಬಂದು ಬಿಟ್ಟಿದೆ - ನಾವಾತ್ಮರು ಮೂಲತಃ
ನಿರಾಕಾರಿ ಪ್ರಪಂಚ ಅಥವಾ ಶಾಂತಿಧಾಮದ ನಿವಾಸಿಗಳಾಗಿದ್ದೇವೆ, ಇದು ಯಾರಿಗೂ ತಿಳಿದಿಲ್ಲ ಅಥವಾ
ಯಾರಿಗೂ ತಿಳಿಸುವುದೂ ಇಲ್ಲ. ಈಗ ನಿಮ್ಮ ಬುದ್ಧಿಯ ಬೀಗವು ತೆರೆದಿದೆ. ನೀವು ತಿಳಿದುಕೊಂಡಿದ್ದೀರಿ
- ಅವಶ್ಯವಾಗಿ ಆತ್ಮರು ಪರಮಧಾಮದಲ್ಲಿರುತ್ತಾರೆ. ಅದು ನಿರಾಕಾರಿ ಪ್ರಪಂಚ, ಇದು ಸಾಕಾರಿ
ಪ್ರಪಂಚವಾಗಿದೆ. ಇಲ್ಲಿ ನಾವೆಲ್ಲಾ ಆತ್ಮರು ಪಾತ್ರಧಾರಿಗಳಾಗಿದ್ದೇವೆ. ಮೊಟ್ಟ ಮೊದಲು ನಾವು
ಪಾತ್ರವನ್ನಭಿನಯಿಸಲು ಬರುತ್ತೇವೆ ನಂತರ ನಂಬರ್ವಾರ್ ಬರತೊಡಗುತ್ತಾರೆ. ಎಲ್ಲಾ ಪಾತ್ರಧಾರಿಗಳು
ಒಟ್ಟಿಗೆ ಬಂದು ಬಿಡುವುದಿಲ್ಲ. ಭಿನ್ನ-ಭಿನ್ನ ಪಾತ್ರಧಾರಿಗಳು ಬರತೊಡಗುತ್ತಾರೆ. ಯಾವಾಗ ನಾಟಕವು
ಮುಕ್ತಾಯವಾಗುವುದೋ ಆಗ ಎಲ್ಲರೂ ಒಟ್ಟಿಗೆ ಸೇರುತ್ತಾರೆ. ಈಗ ನಿಮಗೆ ಪರಿಚಯ ಸಿಕ್ಕಿದೆ, ನಾವಾತ್ಮರು
ಮೂಲತಃ ಶಾಂತಿಧಾಮದ ನಿವಾಸಿಗಳಾಗಿದ್ದೇವೆ, ಇಲ್ಲಿಗೆ ಪಾತ್ರವನ್ನಭಿನಯಿಸಲೂ ಬರುತ್ತೇವೆ. ತಂದೆಯು
ಇಡೀ ಸಮಯ ಪಾತ್ರವನ್ನಭಿನಯಿಸಲು ಬರುವುದಿಲ್ಲ, ನಾವೇ ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ
ಸತೋಪ್ರಧಾನರಿಂದ ತಮೋಪ್ರಧಾನರಾಗಿ ಬಿಡುತ್ತೇವೆ. ಈಗ ನೀವು ಮಕ್ಕಳಿಗೆ ಸನ್ಮುಖದಲ್ಲಿ ಕೇಳುವುದರಿಂದ
ಬಹಳ ಆನಂದವಾಗುತ್ತದೆ. ಮುರುಳಿಯನ್ನು ಕೇಳುವುದರಿಂದ ಇಷ್ಟು ಆನಂದವಾಗುವುದಿಲ್ಲ. ಇಲ್ಲಿ
ಸನ್ಮುಖದಲ್ಲಿದ್ದೀರಲ್ಲವೆ!
ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ಭಾರತವು ದೇವಿ-ದೇವತೆಗಳ ಸ್ಥಾನವಾಗಿತ್ತು, ಈಗ ಇಲ್ಲ. ಚಿತ್ರಗಳನ್ನು
ನೋಡುತ್ತೀರಿ - ಅವಶ್ಯವಾಗಿ ಇತ್ತು, ನಾವು ಅಲ್ಲಿನ ನಿವಾಸಿಗಳಾಗಿದ್ದೆವು. ಮೊಟ್ಟ ಮೊದಲು ನಾವೇ
ದೇವತೆಗಳಾಗಿದ್ದೆವು, ತಮ್ಮ ಪಾತ್ರವನ್ನಂತೂ ನೆನಪು ಮಾಡಿಕೊಳ್ಳುತ್ತೀರಲ್ಲವೆ ಅಥವಾ ಮರೆತು
ಹೋಗುತ್ತೀರಾ? ತಂದೆಯು ತಿಳಿಸುತ್ತಾರೆ - ನೀವಿಲ್ಲಿ ಈ ಪಾತ್ರವನ್ನಭಿನಯಿಸಿದಿರಿ, ಇದು ನಾಟಕವಾಗಿದೆ.
ಹೊಸ ಪ್ರಪಂಚದಿಂದ ಮತ್ತೆ ಖಂಡಿತವಾಗಿ ಹಳೆಯ ಪ್ರಪಂಚವಾಗುತ್ತದೆ. ಮೊಟ್ಟ ಮೊದಲು ಮೇಲಿನಿಂದ ಯಾವ
ಆತ್ಮರು ಬರುತ್ತಾರೆಯೋ ಅವರು ಸತ್ಯಯುಗದಲ್ಲಿ ಬರುತ್ತಾರೆ. ಇವೆಲ್ಲಾ ಮಾತುಗಳು ಈಗ ನಿಮ್ಮ
ಬುದ್ಧಿಯಲ್ಲಿವೆ. ನೀವು ವಿಶ್ವದ ಮಾಲೀಕರು ಮಹಾರಾಜ-ಮಹಾರಾಣಿಯರಾಗಿದ್ದಿರಿ. ನಿಮ್ಮದು
ರಾಜಧಾನಿಯಿತ್ತು, ಈಗಂತೂ ರಾಜಧಾನಿಯಿಲ್ಲ. ನಾವು ಹೇಗೆ ರಾಜ್ಯ ನಡೆಸುತ್ತೇವೆ ಎಂದು ನೀವೀಗ
ಕಲಿಯುತ್ತಿದ್ದೀರಿ. ಅಲ್ಲಿ ಮಂತ್ರಿಗಳಿರುವುದಿಲ್ಲ, ಸಲಹೆ ಕೊಡುವ ಅವಶ್ಯಕತೆಯೇ ಇರುವುದಿಲ್ಲ.
ಅವರಂತೂ ಶ್ರೀಮತದ ಮೂಲಕ ಶ್ರೇಷ್ಠಾತಿ ಶ್ರೇಷ್ಠರಾಗಿ ಬಿಡುತ್ತಾರೆ ಆದ್ದರಿಂದ ನಂತರ ಅವರಿಗೆ ಬೇರೆ
ಯಾರಿಂದಲೂ ಸಲಹೆ ತೆಗೆದುಕೊಳ್ಳುವ ಅವಶ್ಯಕತೆಯಿರುವುದಿಲ್ಲ. ಒಂದುವೇಳೆ ಯಾರಿಂದಲಾದರೂ ಸಲಹೆ
ತೆಗೆದುಕೊಂಡರೆ ಅವರ ಬುದ್ಧಿಯು ಬಲಹೀನವಾಗಿದೆ ಎಂದು ತಿಳಿಯಲಾಗುವುದು. ಈಗ ಯಾವ ಶ್ರೀಮತ
ಸಿಗುತ್ತಿದೆಯೋ ಅದು ಸತ್ಯಯುಗದಲ್ಲಿಯೂ ಸ್ಥಿರವಾಗಿರುತ್ತದೆ. ನೀವೀಗ ತಿಳಿದುಕೊಳ್ಳುತ್ತೀರಿ -
ಮೊಟ್ಟ ಮೊದಲು ಖಂಡಿತವಾಗಿಯೂ ಈ ದೇವಿ-ದೇವತೆಗಳ ಅರ್ಧ ಕಲ್ಪ ರಾಜ್ಯವಿತ್ತು, ಈಗ ನೀವಾತ್ಮರು
ರಿಫ್ರೆಷ್ ಆಗುತ್ತಿದ್ದೀರಿ. ಈ ಜ್ಞಾನವನ್ನು ಪರಮಾತ್ಮನ ಹೊರತು ಬೇರೆ ಯಾರೂ ಆತ್ಮರಿಗೆ ಕೊಡಲು
ಸಾಧ್ಯವಿಲ್ಲ.
ಈಗ ನೀವು ಮಕ್ಕಳು
ಆತ್ಮಾಭಿಮಾನಿಯಾಗಬೇಕಾಗಿದೆ. ಶಾಂತಿಧಾಮದಿಂದ ಇಲ್ಲಿ ನೀವು ಶಬ್ಧದಲ್ಲಿ ಬಂದಿದ್ದೀರಿ. ಶಬ್ಧದಲ್ಲಿ
ಬರದೆ ಕರ್ಮ ನಡೆಯಲು ಸಾಧ್ಯವಿಲ್ಲ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಹೇಗೆ ತಂದೆಯಲ್ಲಿ
ಸಂಪೂರ್ಣ ಜ್ಞಾನವಿದೆಯೋ ಹಾಗೆಯೇ ನೀವಾತ್ಮರಲ್ಲಿಯೂ ಜ್ಞಾನವಿದೆ. ಆತ್ಮವು ಹೇಳುತ್ತದೆ - ನಾನು ಒಂದು
ಶರೀರವನ್ನು ಬಿಟ್ಟು ಸಂಸ್ಕಾರದನುಸಾರ ಮತ್ತೆ ನಾನು ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತೇನೆ,
ಪುನರ್ಜನ್ಮವು ಅವಶ್ಯವಾಗಿ ಆಗುತ್ತದೆ. ಆತ್ಮಕ್ಕೆ ಯಾವುದೆಲ್ಲಾ ಪಾತ್ರ ಸಿಕ್ಕಿದೆಯೋ ಅದನ್ನು
ಅಭಿನಯಿಸುತ್ತಿರುತ್ತದೆ. ಸಂಸ್ಕಾರಗಳನುಸಾರ ಇನ್ನೊಂದು ಜನ್ಮ ತೆಗೆದುಕೊಳ್ಳುತ್ತಿರುತ್ತದೆ.
ದಿನ-ಪ್ರತಿದಿನ ಆತ್ಮದ ಪವಿತ್ರತೆಯ ಮಟ್ಟವು ಕಡಿಮೆಯಾಗುತ್ತಾ ಹೋಗುತ್ತದೆ. ಪತಿತ ಶಬ್ಧವನ್ನು
ದ್ವಾಪರದಿಂದಲೇ ಉಪಯೋಗಿಸುತ್ತಾರೆ, ಆದರೂ ಸಹ ದ್ವಾಪರದಲ್ಲಾದರೂ ಸ್ವಲ್ಪ ಅಂತರವಾಗುತ್ತದೆ. ನೀವು
ಹೊಸ ಮನೆಯನ್ನು ಕಟ್ಟಿರಿ ಅದು ಒಂದು ತಿಂಗಳಿನ ನಂತರ ಸ್ವಲ್ಪವಾದರೂ ವ್ಯತ್ಯಾಸ ಕಂಡು ಬರುವುದು. ಈಗ
ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ - ತಂದೆಯು ನಮಗೆ ಆಸ್ತಿಯನ್ನು ಕೊಡುತ್ತಿದ್ದಾರೆ, ತಂದೆಯು
ತಿಳಿಸುತ್ತಾರೆ - ನಾನು ನೀವು ಮಕ್ಕಳಿಗೆ ಆಸ್ತಿಯನ್ನು ಕೊಡಲು ಬಂದಿದ್ದೇನೆ, ಯಾರೆಷ್ಟು
ಪುರುಷಾರ್ಥ ಮಾಡುವರೋ ಅಷ್ಟು ಪದವಿಯನ್ನು ಪಡೆಯುವರು. ತಂದೆಯ ಬಳಿ ಯಾವುದೇ ಅಂತರವಿಲ್ಲ. ನಾನು
ಆತ್ಮರಿಗೇ ಓದಿಸುತ್ತೇನೆಂದು ತಂದೆಗೆ ಗೊತ್ತಿದೆ. ಆತ್ಮಕ್ಕೆ ತಂದೆಯಿಂದ ಆಸ್ತಿಯನ್ನು ಪಡೆಯುವ
ಹಕ್ಕು ಇದೆ. ಇದರಲ್ಲಿ ಸ್ತ್ರೀ-ಪುರುಷರ ಭೇದವಿರುವುದಿಲ್ಲ. ನೀವೆಲ್ಲರೂ ಮಕ್ಕಳಾಗಿದ್ದೀರಿ,
ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ಎಲ್ಲಾ ಆತ್ಮರು ಸಹೋದರರಾಗಿದ್ದಾರೆ. ಯಾರಿಗೆ
ತಂದೆಯು ಓದಿಸುತ್ತಾರೆ, ಆಸ್ತಿಯನ್ನು ಕೊಡುತ್ತಾರೆ. ತಂದೆಯೇ ಆತ್ಮಿಕ ಮಕ್ಕಳೊಂದಿಗೆ
ಮಾತನಾಡುತ್ತಾರೆ - ಹೇ ಮುದ್ದಾದ ಮಧುರ ಮಕ್ಕಳೇ, ನೀವು ಬಹಳ ಸಮಯ
ಪಾತ್ರವನ್ನಭನಯಿಸುತ್ತಾ-ಅಭಿನಯಿಸುತ್ತಾ ಈಗ ಪುನಃ ತಮ್ಮ ಆಸ್ತಿಯನ್ನು ಪಡೆಯಲು ಬಂದು ಮಿಲನ
ಮಾಡಿದ್ದೀರಿ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಆರಂಭದಿಂದ ಹಿಡಿದು ಪಾತ್ರವು ನಿಗಧಿಯಾಗಿದೆ.
ನೀವು ಪಾತ್ರಧಾರಿಗಳು ಪಾತ್ರವನ್ನು ಅಭಿನಯಿಸುತ್ತಾ, ಪಾತ್ರ ಮಾಡುತ್ತಿರುತ್ತೀರಿ. ಆತ್ಮವು
ಅವಿನಾಶಿಯಾಗಿದೆ ಇದರಲ್ಲಿ ಅವಿನಾಶಿ ಪಾತ್ರವು ನಿಗಧಿಯಾಗಿದೆ. ಶರೀರವಂತೂ ಬದಲಾಗುತ್ತಿರುತ್ತದೆ,
ಬಾಕಿ ಆತ್ಮವು ಕೇವಲ ಪವಿತ್ರವಾದುದು ಅಪವಿತ್ರವಾಗುತ್ತದೆ, ಪತಿತನಾಗುತ್ತದೆ, ಸತ್ಯಯುಗದಲ್ಲಿ
ಪಾವನವಾಗಿರುತ್ತದೆ. ಇದಕ್ಕೆ ಪತಿತ ಪ್ರಪಂಚವೆಂದು ಹೇಳಲಾಗುತ್ತದೆ. ಯಾವಾಗ ದೇವತೆಗಳ ರಾಜ್ಯವಿತ್ತೋ
ಆಗ ನಿರ್ವಿಕಾರಿ ಪ್ರಪಂಚವಿತ್ತು, ಈಗ ಇಲ್ಲ. ಇದು ಆಟವಲ್ಲವೆ. ಹೊಸ ಪ್ರಪಂಚದಿಂದ ಹಳೆಯ ಪ್ರಪಂಚ,
ಹಳೆಯ ಪ್ರಪಂಚದಿಂದ ಮತ್ತೆ ಹೊಸ ಪ್ರಪಂಚವಾಗುತ್ತದೆ. ಈಗ ಸುಖಧಾಮದ ಸ್ಥಾಪನೆಯಾಗುತ್ತದೆ, ಉಳಿದೆಲ್ಲಾ
ಆತ್ಮರು ಮುಕ್ತಿಧಾಮದಲ್ಲಿರುತ್ತಾರೆ. ಈಗ ಈ ಬೇಹದ್ದಿನ ನಾಟಕವು ಈಗ ಪೂರ್ಣವಾಗಿದೆ. ಎಲ್ಲಾ ಆತ್ಮರು
ಸೊಳ್ಳೆಗಳೋಪಾದಿಯಲ್ಲಿ ಹಿಂತಿರುಗಿ ಹೋಗುವರು. ಈ ಸಮಯದಲ್ಲಿ ಯಾವುದೇ ಆತ್ಮನು ಪರಮಧಾಮದಿಂದ ಬಂದರೆ
ಪತಿತ ಪ್ರಪಂಚದಲ್ಲಿ ಅವರಿಗೇನು ಬೆಲೆಯಿರುತ್ತದೆ? ಯಾರು ಮೊಟ್ಟ ಮೊದಲು ಹೊಸ ಪ್ರಪಂಚದಲ್ಲಿ ಬರುವರೋ
ಅವರಿಗೇ ಬೆಲೆಯಿರುತ್ತದೆ. ನಿಮಗೆ ತಿಳಿದಿದೆ - ಯಾವ ಹೊಸ ಪ್ರಪಂಚವಿತ್ತೋ ಅದು ಈಗ ಹಳೆಯದಾಗಿದೆ.
ಹೊಸ ಪ್ರಪಂಚದಲ್ಲಿ ನಾವು ದೇವಿ-ದೇವತೆಗಳಾಗಿದ್ದೆವು, ಅಲ್ಲಿ ದುಃಖದ ಹೆಸರಿರಲಿಲ್ಲ. ಇಲ್ಲಂತೂ
ಅಪಾರ ದುಃಖವಿದೆ, ತಂದೆಯು ಬಂದು ದುಃಖದ ಪ್ರಪಂಚದಿಂದ ಮುಕ್ತಗೊಳಿಸುತ್ತಾರೆ. ಈ ಹಳೆಯ ಪ್ರಪಂಚವು
ಖಂಡಿತ ಬದಲಾಗುವುದು. ನೀವು ತಿಳಿದುಕೊಂಡಿದ್ದೀರಿ - ನಾವೇ ಸತ್ಯಯುಗದ ಮಾಲೀಕರಾಗಿದ್ದೆವು ನಂತರ 84
ಜನ್ಮಗಳನ್ನು ತೆಗೆದುಕೊಂಡು ಈ ರೀತಿಯಾಗಿದ್ದೇವೆ. ಈಗ ಪುನಃ ತಂದೆಯು ತಿಳಿಸುತ್ತಾರೆ - ನನ್ನನ್ನು
ನೆನಪು ಮಾಡಿದರೆ ಸ್ವರ್ಗದ ಮಾಲೀಕರಾಗುತ್ತೇವೆ ಅಂದಮೇಲೆ ನಾವೇಕೆ ನಮ್ಮನ್ನು ಆತ್ಮನಿಶ್ಚಯ
ಮಾಡಿಕೊಂಡು ತಂದೆಯನ್ನು ನೆನಪು ಮಾಡಬಾರದು? ಸ್ವಲ್ಪವಾದರೂ ಪರಿಶ್ರಮ ಪಡಬೇಕಾಗುವುದಲ್ಲವೆ. ರಾಜ್ಯ
ಪದವಿಯನ್ನು ಪಡೆಯುವುದು ಸಹಜವೇನಲ್ಲ. ತಂದೆಯನ್ನು ನೆನಪು ಮಾಡಬೇಕಾಗಿದೆ. ಇದು ಮಾಯೆಯ
ಅದ್ಭುತವಾಗಿದೆ, ಪದೇ-ಪದೇ ಮರೆಸಿ ಬಿಡುತ್ತದೆ. ಅದಕ್ಕಾಗಿ ಉಪಾಯ ರಚಿಸಬೇಕು ನನ್ನ ಮಕ್ಕಳಾದ ಕೂಡಲೆ
ನೆನಪು ಸ್ಥಿರವಾಗಿ ಕುಳಿತು ಬಿಡುತ್ತದೆ ಎಂದಲ್ಲ. ಆ ರೀತಿಯಿದ್ದಿದ್ದೇ ಆದರೆ ಇನ್ನೇನು ಪುರುಷಾರ್ಥ
ಮಾಡುವಿರಿ! ಎಲ್ಲಿಯವರೆಗೆ ಜೀವಿಸಬೇಕಾಗಿದೆಯೋ ಅಲ್ಲಿಯವರೆಗೆ ಪುರುಷಾರ್ಥ ಮಾಡಬೇಕಾಗಿದೆ.
ಜ್ಞಾನಾಮೃತವನ್ನು ಕುಡಿಯುತ್ತಾ ಇರಬೇಕಾಗಿದೆ. ಇದನ್ನೂ ಸಹ ತಿಳಿದುಕೊಂಡಿದ್ದೀರಿ - ನಮ್ಮದು ಇದು
ಅಂತಿಮ ಜನ್ಮವಾಗಿದೆ. ಈ ಶರೀರದ ಅಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಬೇಕಾಗಿದೆ. ಗೃಹಸ್ಥ
ವ್ಯವಹಾರದಲ್ಲಿಯೂ ಇರಬೇಕಾಗಿದೆ. ಪುರುಷಾರ್ಥವನ್ನೂ ಅವಶ್ಯವಾಗಿ ಮಾಡಬೇಕು. ಕೇವಲ ತನ್ನನ್ನು ಆತ್ಮ
ನಿಶ್ಚಯ ಮಾಡಿಕೊಂಡು ತಂದೆಯನ್ನು ನೆನಪು ಮಾಡಿ. ತ್ವಮೇವ ಮಾತಾಶ್ಚ ಪಿತಾ.... ಇದೆಲ್ಲವೂ
ಭಕ್ತಿಮಾರ್ಗದ ಮಾತಾಗಿದೆ. ನೀವು ಕೇವಲ ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಅವರೊಬ್ಬರೇ ಮಧುರ
ಸ್ಯಾಕ್ರೀನ್ ಆಗಿದ್ದಾರೆ. ಮತ್ತೆಲ್ಲಾ ಮಾತುಗಳನ್ನು ಬಿಟ್ಟು ಒಬ್ಬ ಸ್ಯಾಕ್ರೀನ್ (ತಂದೆ) ನ್ನು
ನೆನಪು ಮಾಡಿ. ಈಗ ನಿಮ್ಮ ಆತ್ಮವು ತಮೋಪ್ರಧಾನವಾಗಿದೆ, ಅದನ್ನು ಸತೋಪ್ರಧಾನ ಮಾಡಿಕೊಳ್ಳಲು ನೆನಪಿನ
ಯಾತ್ರೆಯಲ್ಲಿರಿ. ಎಲ್ಲರಿಗೂ ಇದನ್ನೇ ತಿಳಿಸಿ - ತಂದೆಯಿಂದ ಸುಖದ ಆಸ್ತಿಯನ್ನು ತೆಗೆದುಕೊಳ್ಳಿ.
ಸತ್ಯಯುಗದಲ್ಲಿಯೇ ಸುಖವಿರುತ್ತದೆ, ಸುಖಧಾಮವನ್ನು ಸ್ಥಾಪನೆ ಮಾಡುವವರು ತಂದೆಯಾಗಿದ್ದಾರೆ.
ತಂದೆಯನ್ನು ಬಹಳ ಸಹಜವಾಗಿ ನೆನಪು ಮಾಡಬೇಕಾಗಿದೆ ಆದರೆ ಮಾಯೆಯ ವಿರೋಧವು ಬಹಳಷ್ಟಿದೆ ಆದ್ದರಿಂದ
ಪ್ರಯತ್ನ ಪಟ್ಟು ತಂದೆಯಾದ ನನ್ನನ್ನು ನೆನಪು ಮಾಡಿ ಆಗ ತುಕ್ಕು ಬಿಟ್ಟು ಹೋಗುವುದು. ಸೆಕೆಂಡಿನಲ್ಲಿ
ಜೀವನ್ಮುಕ್ತಿಯ ಗಾಯನವಿದೆ. ನಾವಾತ್ಮರು ಆತ್ಮಿಕ ತಂದೆಯ ಮಕ್ಕಳಾಗಿದ್ದೇವೆ, ಅಲ್ಲಿನ
ನಿವಾಸಿಗಳಾಗಿದ್ದೇವೆ. ಮತ್ತೆ ನಾವು ನಮ್ಮ ಪಾತ್ರವನ್ನು ಪುನರಾವರ್ತಿಸಬೇಕಾಗಿದೆ. ಈ ಡ್ರಾಮಾದಲ್ಲಿ
ಎಲ್ಲರಿಗಿಂತ ಹೆಚ್ಚು ಪಾತ್ರವು ನಮ್ಮದಾಗಿದೆ. ಸುಖವೂ ಎಲ್ಲರಿಗಿಂತ ಹೆಚ್ಚಿನದಾಗಿ ನಮಗೇ ಸಿಗುವುದು.
ತಂದೆಯು ತಿಳಿಸುತ್ತಾರೆ - ನಿಮ್ಮ ದೇವಿ-ದೇವತಾ ಧರ್ಮವು ಬಹಳ ಸುಖ ಕೊಡುವಂತದ್ದಾಗಿದೆ. ಉಳಿದೆಲ್ಲರೂ
ಶಾಂತಿಧಾಮಕ್ಕೆ ತಮ್ಮ ಲೆಕ್ಕಾಚಾರಗಳನ್ನು ಮುಗಿಸಿಕೊಂಡು ತಾವಾಗಿಯೇ ಹೊರಟು ಹೋಗುತ್ತಾರೆ. ಹೆಚ್ಚು
ವಿಸ್ತಾರದಲ್ಲಿ ನಾವು ಹೋಗುವುದೇಕೆ? ತಂದೆಯು ಬರುವುದೇ ಎಲ್ಲರನ್ನೂ ಹಿಂತಿರುಗಿ ಕರೆದುಕೊಂಡು
ಹೋಗುವುದಕ್ಕಾಗಿ. ಎಲ್ಲರನ್ನೂ ಸೊಳ್ಳೆಗಳೋಪಾದಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಸತ್ಯಯುಗದಲ್ಲಿ
ಬಹಳ ಕೆಲವರೇ ಇರುತ್ತಾರೆ, ಇದೆಲ್ಲವೂ ಡ್ರಾಮಾದಲ್ಲಿ ನಿಗಧಿಯಾಗಿದೆ, ಶರೀರಗಳು ಸಮಾಪ್ತಿಯಾಗುತ್ತವೆ.
ಯಾವ ಅವಿನಾಶಿ ಆತ್ಮವಿದೆಯೋ ಅದು ಎಲ್ಲಾ ಲೆಕ್ಕಾಚಾರಗಳನ್ನು ಮುಗಿಸಿ ಹೊರಟು ಹೋಗುವುದು. ಆತ್ಮವು
ಬೆಂಕಿಯಲ್ಲಿದ್ದು ಪವಿತ್ರವಾಗುವುದೆಂದಲ್ಲ. ಆತ್ಮವು ನೆನಪು ಎಂಬ ಯೋಗಾಗ್ನಿಯಿಂದಲೇ
ಪವಿತ್ರವಾಗಬೇಕಾಗಿದೆ. ಇದು ಯೋಗದ ಅಗ್ನಿಯಾಗಿದೆ. ಇದನ್ನು ಅವರು ನಾಟಕವಾಗಿ ಬರೆದು ಬಿಟ್ಟಿದ್ದಾರೆ
- ಸೀತೆಯು ಬೆಂಕಿಯಿಂದ ಪಾರಾದಳು ಎಂದು. ಬೆಂಕಿಯಿಂದ ಯಾರೂ ಪಾವನರಾಗುವುದಿಲ್ಲ. ತಂದೆಯು
ತಿಳಿಸುತ್ತಾರೆ - ನೀವೆಲ್ಲಾ ಸೀತೆಯರು ಈ ಸಮಯದಲ್ಲಿ ಪತಿತರಾಗಿದ್ದೀರಿ, ರಾವಣನ ರಾಜ್ಯದಲ್ಲಿದ್ದೀರಿ.
ಈಗ ಒಬ್ಬ ತಂದೆಯ ನೆನಪಿನಿಂದ ನೀವು ಪಾವನರಾಗಬೇಕಾಗಿದೆ. ರಾಮನು ಒಬ್ಬರೇ ಆಗಿದ್ದಾರೆ. ಅಗ್ನಿ
ಶಬ್ಧವನ್ನು ಕೇಳುವುದರಿಂದ ಬೆಂಕಿಯಿಂದ ಪಾರಾದಳು ಎಂದು ತಿಳಿಯುತ್ತಾರೆ. ಯೋಗಾಗ್ನಿಯೆಲ್ಲಿ! ಆ
ಅಗ್ನಿಯೆಲ್ಲಿ! ಆತ್ಮವು ಪರಮಪಿತ ಪರಮಾತ್ಮನೊಂದಿಗೆ ಯೋಗವನ್ನಿಡುವುದರಿಂದಲೇ ಪತಿತನಿಂದ
ಪಾವನವಾಗುವುದು. ರಾತ್ರಿ-ಹಗಲಿನ ಅಂತರವಿದೆ. ನರಕದಲ್ಲಿ ಎಲ್ಲಾ ಸೀತೆಯರು ರಾವಣನ ಜೈಲಿನಲ್ಲಿ
ಶೋಕವಾಟಿಕೆಯಲ್ಲಿದ್ದಾರೆ, ಇಲ್ಲಿನ ಸುಖವಂತೂ ಕಾಗವಿಷ್ಟ ಸಮಾನವಾಗಿದೆ, ಹೋಲಿಕೆ ಮಾಡಲಾಗುತ್ತದೆ.
ಸ್ವರ್ಗದ ಸುಖವಂತೂ ಅಪಾರವಾಗಿರುತ್ತದೆ.
ಈಗ ಶಿವ ಪ್ರಿಯತಮನ ಜೊತೆ
ನೀವಾತ್ಮರ ನಿಶ್ಚಿತಾರ್ಥವಾಗಿದೆ ಅಂದಾಗ ಆತ್ಮವು ಸ್ತ್ರೀಯಾಯಿತಲ್ಲವೆ. ಶಿವ ತಂದೆಯು ತಿಳಿಸುತ್ತಾರೆ
- ಕೇವಲ ನನ್ನನ್ನು ನೆನಪು ಮಾಡಿ, ಆಗ ನೀವು ಪಾವನರಾಗಿ ಬಿಡುತ್ತೀರಿ. ಶಾಂತಿಧಾಮಕ್ಕೆ ಹೋಗಿ ಮತ್ತೆ
ಸುಖಧಾಮದಲ್ಲಿ ಬರುತ್ತೀರಿ ಅಂದಾಗ ಮಕ್ಕಳು ಜ್ಞಾನ ರತ್ನಗಳಿಂದ ಜೋಳಿಗೆಯನ್ನು ತುಂಬಿಸಿಕೊಳ್ಳಬೇಕು,
ಯಾವುದೇ ಪ್ರಕಾರದ ಸಂಶಯವನ್ನು ತರಬಾರದು. ದೇಹಾಭಿಮಾನದಲ್ಲಿ ಬರುವುದರಿಂದಲೇ ಅನೇಕ ಪ್ರಕಾರದ
ಪ್ರಶ್ನೆಗಳು ಏಳುತ್ತವೆ ಆಗ ತಂದೆಯು ಯಾವ ಕರ್ತವ್ಯ ಕೊಡುತ್ತಾರೆಯೋ ಅದನ್ನು ಮಾಡುವುದಿಲ್ಲ. ಮೂಲ
ಮಾತೇನೆಂದರೆ ನಾವು ಪತಿತರಿಂದ ಪಾವನರಾಗಬೇಕಾಗಿದೆ, ಅನ್ಯ ಮಾತುಗಳನ್ನು ಬಿಟ್ಟು ಬಿಡಬೇಕು. ಆ
ರಾಜಧಾನಿಯಲ್ಲಿ ಎಂತಹ ರೀತಿ ಪದ್ಧತಿಗಳು ಇರುವವೋ ಅವೇ ನಡೆಯುವವು. ಹೇಗೆ ಮಹಲುಗಳನ್ನು ಕಟ್ಟಿದ್ದರೋ
ಹಾಗೆಯೇ ಕಟ್ಟುತ್ತಾರೆ. ಮೂಲ ಮಾತು ಪವಿತ್ರರಾಗುವುದಾಗಿದೆ. ಹೇ ಪತಿತ-ಪಾವನ...... ಎಂದು
ಕರೆಯುತ್ತಾರೆ. ಪಾವನರಾದಾಗಲೇ ಸುಖಿಯಾಗುತ್ತೀರಿ. ಎಲ್ಲರಿಗಿಂತ ಪಾವನರು ದೇವಿ-ದೇವತೆಗಳಾಗಿದ್ದಾರೆ.
ನೀವೀಗ 21 ಜನ್ಮಗಳಿಗಾಗಿ
ಸರ್ವೋತ್ತಮ ಪಾವನರಾಗುತ್ತೀರಿ. ಅವರಿಗೆ ಸಂಪೂರ್ಣ ನಿರ್ವಿಕಾರಿ ಪಾವನರೆಂದು ಹೇಳಲಾಗುತ್ತದೆ.
ತಂದೆಯು ಯಾವ ಶ್ರೀಮತವನ್ನು ಕೊಡುತ್ತಾರೆಯೋ ಅದರಂತೆ ನಡೆಯಬೇಕು. ಯಾವುದೇ ಸಂಕಲ್ಪವನ್ನು ತರುವ
ಅವಶ್ಯಕತೆಯಿಲ್ಲ. ಮೊದಲು ನಾವು ಪತಿತರಿಂದ ಪಾವನರಾಗಬೇಕು. ಹೇ ಪತಿತ-ಪಾವನ.... ಎಂದು ಕರೆಯುತ್ತಾರೆ
ಆದರೆ ತಿಳಿದುಕೊಳ್ಳುವುದೇನೂ ಇಲ್ಲ. ಪತಿತ-ಪಾವನ ಯಾರೆಂಬುದನ್ನೂ ಸಹ ತಿಳಿದುಕೊಂಡಿಲ್ಲ. ಇದು ಪತಿತ
ಪ್ರಪಂಚ, ಅದು ಪಾವನ ಪ್ರಪಂಚವಾಗಿದೆ. ಮುಖ್ಯ ಮಾತು ಪಾವನರಾಗುವುದಾಗಿದೆ. ಪಾವನರನ್ನಾಗಿ ಯಾರು
ಮಾಡುತ್ತಾರೆ? ಇದೇನನ್ನೂ ತಿಳಿದುಕೊಂಡಿಲ್ಲ. ಪತಿತ-ಪಾವನನೆಂದು ಹೇಳಿ ಕರೆಯುತ್ತಾರೆ ಆದರೆ ನೀವು
ಪತಿತರಾಗಿದ್ದೀರಿ ಎಂದು ಹೇಳಿದ್ದೇ ಆದರೆ ಕೋಪಿಸಿಕೊಳ್ಳುತ್ತಾರೆ. ತನ್ನನ್ನು ಯಾರೂ ವಿಕಾರಿಯೆಂದು
ತಿಳಿದುಕೊಳ್ಳುವುದಿಲ್ಲ. ಗೃಹಸ್ಥದಲ್ಲಂತೂ ಎಲ್ಲರೂ ಇದ್ದರು, ರಾಧೆ-ಕೃಷ್ಣ, ಲಕ್ಷ್ಮೀ-ನಾರಾಯಣರಿಗೂ
ಸಹ ಮಕ್ಕಳಿದ್ದರು ಎಂದು ಹೇಳುತ್ತಾರೆ. ಅಲ್ಲಿ ಯೋಗಬಲದಿಂದ ಮಕ್ಕಳು ಜನ್ಮ ಪಡೆಯುತ್ತಾರೆಂದು ಮರೆತು
ಹೋಗಿದ್ದಾರೆ, ಅದಕ್ಕೆ ನಿರ್ವಿಕಾರಿ ಪ್ರಪಂಚ ಸ್ವರ್ಗವೆಂದು ಹೇಳಲಾಗುತ್ತದೆ. ಅದು ಶಿವಾಲಯವಾಗಿದೆ,
ತಂದೆಯು ತಿಳಿಸುತ್ತಾರೆ - ಪತಿತ ಪ್ರಪಂಚದಲ್ಲಿ ಯಾರೊಬ್ಬರೂ ಪಾವನರಿರುವುದಿಲ್ಲ. ಈ ತಂದೆಯಂತೂ ತಂದೆ,
ಶಿಕ್ಷಕ ಮತ್ತು ಸದ್ಗುರುವಾಗಿದ್ದಾರೆ, ಎಲ್ಲರಿಗೆ ಸದ್ಗತಿ ನೀಡುತ್ತಾರೆ. ಅವರಾದರೆ ಒಬ್ಬ ಗುರು
ಹೊರಟು ಹೋದರೆ ಮತ್ತೆ ಮಕ್ಕಳಿಗೆ ಸಿಂಹಾಸನ ಕೊಡುತ್ತಾರೆ ಅಂದಮೇಲೆ ಅವರು ಹೇಗೆ ಸದ್ಗತಿಯಲ್ಲಿ
ಕರೆದುಕೊಂಡು ಹೋಗುವರು. ಸರ್ವರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ. ಸತ್ಯಯುಗದಲ್ಲಿ ಕೇವಲ
ದೇವಿ-ದೇವತೆಗಳಿರುತ್ತಾರೆ ಬಾಕಿ ಇಷ್ಟೆಲ್ಲಾ ಆತ್ಮಗಳು ಶಾಂತಿಧಾಮಕ್ಕೆ ಹೊರಟು ಹೋಗುವರು. ರಾವಣ
ರಾಜ್ಯದಿಂದ ಮುಕ್ತರಾಗುತ್ತಾರೆ. ತಂದೆಯು ಎಲ್ಲರನ್ನೂ ಪವಿತ್ರರನ್ನಾಗಿ ಮಾಡಿ ಕರೆದುಕೊಂಡು
ಹೋಗುತ್ತಾರೆ. ಪಾವನರಿಂದ ಕೂಡಲೇ ಯಾರೂ ಪತಿತರಾಗುವುದಿಲ್ಲ, ಕ್ರಮೇಣವಾಗಿ ಇಳಿಯುತ್ತಾರೆ.
ಸತೋಪ್ರಧಾನರಿಂದ ಸತೋ, ರಜೋ, ತಮೋ.... ನಿಮ್ಮ ಬುದ್ಧಿಯಲ್ಲಿ 84 ಜನ್ಮಗಳ ಚಕ್ರವು ಕುಳಿತಿದೆ.
ನೀವೀಗ ಲೈಟ್ಹೌಸ್ ಆಗಿದ್ದೀರಿ. ಜ್ಞಾನದಿಂದ ಈ ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು
ಅರಿತುಕೊಂಡಿದ್ದೀರಿ. ಈಗ ನೀವು ಮಕ್ಕಳು ಮತ್ತೆಲ್ಲರಿಗೆ ಮಾರ್ಗವನ್ನು ತಿಳಿಸಬೇಕಾಗಿದೆ. ಎಲ್ಲರೂ
ದೋಣಿಗಳಾಗಿದ್ದಾರೆ, ನೀವು ಮಾರ್ಗವನ್ನು ತಿಳಿಸುವ ಅಂಬಿಗನಾಗಿದ್ದೀರಿ. ಎಲ್ಲರಿಗೆ ತಿಳಿಸಿ - ತಾವು
ಶಾಂತಿಧಾಮವನ್ನು, ಸುಖಧಾಮವನ್ನು ನೆನಪು ಮಾಡಿ, ಕಲಿಯುಗ-ದುಃಖಧಾಮವನ್ನು ಮರೆತು ಬಿಡಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಎಲ್ಲಿಯವರೆಗೆ
ಜೀವಿಸಬೇಕಾಗಿದೆಯೋ ಅಲ್ಲಿಯವರೆಗೆ ಜ್ಞಾನಾಮೃತವನ್ನು ಕುಡಿಯುತ್ತಿರಬೇಕಾಗಿದೆ. ಜ್ಞಾನ ರತ್ನಗಳಿಂದ
ತಮ್ಮ ಜೋಳಿಗೆಯನ್ನು ತುಂಬಿಸಿಕೊಳ್ಳಬೇಕು. ಸಂಶಯದಲ್ಲಿ ಬಂದು ಯಾವುದೇ ಪ್ರಶ್ನೆಗಳನ್ನು ತರಬಾರದು.
2. ಯೋಗಾಗ್ನಿಯಿಂದ
ಆತ್ಮರೂಪಿ ಸೀತೆಯನ್ನು ಪಾವನ ಮಾಡಿಕೊಳ್ಳಬೇಕಾಗಿದೆ. ಯಾವುದೇ ಮಾತಿನ ಹೆಚ್ಚು ವಿಸ್ತಾರದಲ್ಲಿ ಹೋಗದೇ
ದೇಹೀ-ಅಭಿಮಾನಿಯಾಗುವ ಪರಿಶ್ರಮ ಪಡಬೇಕಾಗಿದೆ. ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು
ಮಾಡಬೇಕಾಗಿದೆ.
ವರದಾನ:
ಸದಾ ಮನನದ ಮೂಲಕ
ಮಗ್ನಾವಸ್ಥೆಯ ಸಾಗರನಲ್ಲಿ ಸಮಾವೇಶವಾಗುವ ಅನುಭವ ಮಾಡುವಂತಹ ಅನುಭವಿ ಮೂರ್ತಿ ಭವ.
ಅನುಭವಗಳನ್ನು ವೃದ್ಧಿ
ಮಾಡಿಕೊಳ್ಳುವ ಆಧಾರವಾಗಿದೆ - ಮನನ ಶಕ್ತಿ. ಮನನ ಮಾಡುವವರು ಸ್ವತಹವಾಗಿಯೇ ಮಗ್ನವಾಗಿರುತ್ತಾರೆ.
ಮಗ್ನಾ ಅವಸ್ಥೆಯಲ್ಲಿ ಯೋಗವನ್ನು ಇಡಬೇಕಾಗಿರುವುದಿಲ್ಲ ಆದರೆ ನಿರಂತರ ಜೋಡಣೆಯಾಗಿರುತ್ತದೆ,
ಅದಕ್ಕಾಗಿ ಪರಿಶ್ರಮ ಪಡಬೇಕಾಗಿರುವುದಿಲ್ಲ. ಮಗ್ನ ಅರ್ಥಾತ್ ಪ್ರೀತಿಯ ಸಾಗನರಲ್ಲಿ
ಸಮಾವೇಶವಾಗಿರುವುದು, ಈ ರೀತಿ ಸಮಾವೇಶ ಆಗಿರುವವರನ್ನೆಂದಿಗೂ ಯಾರೂ ಬೇರೆ ಮಾಡಲು ಸಾಧ್ಯವಿಲ್ಲ.
ಹಾಗಾದರೆ ಪರಿಶ್ರಮದಿಂದ ಮುಕ್ತರಾಗಿರಿ, ಸಾಗರನ ಮಕ್ಕಳಾಗಿದ್ದೀರಿ ಅಂದಾಗ ಅನುಭವಗಳ ಬಾವಿಗಳಲ್ಲಿ
ಜಳಕ ಮಾಡಬಾರದು ಆದರೆ ಸಾಗರನಲ್ಲಿಯೇ ಸಮಾವೇಶವಾಗಿರಿ, ಆಗ ಅನುಭವಿ ಮೂರ್ತಿ ಎಂದು ಹೇಳಲಾಗುವುದು.
ಸ್ಲೋಗನ್:
ಯಾರ ಪ್ರತೀ
ಸಂಕಲ್ಪ, ಪ್ರತೀ ಸೆಕೆಂಡ್ ಸಮರ್ಥವಾಗಿರುವುದೋ ಅವರೇ ಜ್ಞಾನ ಸ್ವರೂಪ ಆತ್ಮರಾಗಿದ್ದಾರೆ.
ಅವ್ಯಕ್ತ ಸೂಚನೆಗಳು:- ಈ
ಅವ್ಯಕ್ತ ಮಾಸದಲ್ಲಿ ಬಂಧನ ಮುಕ್ತರಾಗಿ ಜೀವನ ಮುಕ್ತ ಸ್ಥಿತಿಯ ಅನುಭವ ಮಾಡಿರಿ.
ಯಾವುದೇ ಸ್ವಭಾವ,
ಸಂಸ್ಕಾರ, ವ್ಯಕ್ತಿ ಅಥವಾ ವೈಭವ ನಿಮ್ಮನ್ನು ಆಕರ್ಷಿಸುತ್ತಿದ್ದರೆ, ತಂದೆಯ ಸ್ಮರಣೆ ಸ್ಥಿರವಾಗಲು
ಸಾಧ್ಯವಿಲ್ಲ. ಕರ್ಮಾತೀತ ಸ್ಥಿತಿ ಎಂದರೆ ಎಲ್ಲ ಕರ್ಮ ಬಂಧನಗಳಿಂದ ಮುಕ್ತವಾಗಿ, ಭಿನ್ನ ಆಗಿ,
ಪ್ರಕೃತಿಯನ್ನು ನಿಮಿತ್ತ ಮಾತ್ರವಾಗಿ ಬಳಸಿ ಕರ್ಮ ಮಾಡುವುದು. ಈ ಭಿನ್ನ ಸ್ಥಿತಿಯ ಪುರುಷಾರ್ಥವನ್ನು
ಮತ್ತೆ ಮತ್ತೆ ಮಾಡಿರಿ. ಸಹಜವಾಗಿ ಅನುಭವವಾಗಲಿ “ಕರ್ಮ ಮಾಡಿಸುವವನು ಬೇರೆ; ಈ ಕಮೇರ್ಂದ್ರಿಯಗಳು
ಬೇರೆ.”