30.04.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯು ನಿಮ್ಮನ್ನು ಪುರುಷೋತ್ತಮರನ್ನಾಗಿ ಮಾಡಲು ಓದಿಸುತ್ತಿದ್ದಾರೆ, ನೀವೀಗ ಕನಿಷ್ಠರಿಂದ ಉತ್ತಮ ಪುರುಷರಾಗುತ್ತೀರಿ, ಎಲ್ಲರಿಗಿಂತ ಉತ್ತಮರು ದೇವತೆಗಳಾಗಿದ್ದಾರೆ”

ಪ್ರಶ್ನೆ:
ಇಲ್ಲಿ ನೀವು ಮಕ್ಕಳು ಯಾವ ಪರಿಶ್ರಮಪಡುತ್ತೀರಿ ಅದು ಸತ್ಯಯುಗದಲ್ಲಿರುವುದಿಲ್ಲ?

ಉತ್ತರ:
ಇಲ್ಲಿ ದೇಹಸಹಿತವಾಗಿ ದೇಹದ ಎಲ್ಲಾ ಸಂಬಂಧಗಳನ್ನು ಮರೆತು ಆತ್ಮಾಭಿಮಾನಿಯಾಗಿ ಶರೀರವನ್ನು ಬಿಡುವುದು ಬಹಳ ಪರಿಶ್ರಮವಾಗುತ್ತದೆ. ಸತ್ಯಯುಗದಲ್ಲಿ ಪರಿಶ್ರಮವಿಲ್ಲದೆ ಕುಳಿತು-ಕುಳಿತಿದ್ದಂತೆಯೇ ಶರೀರವನ್ನು ಬಿಟ್ಟುಬಿಡುತ್ತಾರೆ. ಈಗ ಇದೇ ಪರಿಶ್ರಮ ಹಾಗು ಅಭ್ಯಾಸ ಮಾಡುತ್ತೀರಿ - ನಾವು ಆತ್ಮಗಳಾಗಿದ್ದೇವೆ, ನಾವು ಈ ಹಳೆಯ ಪ್ರಪಂಚವನ್ನು, ಹಳೆಯ ಶರೀರವನ್ನು ಬಿಡಬೇಕಾಗಿದೆ, ಹೊಸದನ್ನು ತೆಗೆದುಕೊಳ್ಳಬೇಕಾಗಿದೆ. ಸತ್ಯಯುಗದಲ್ಲಿ ಈ ಅಭ್ಯಾಸದ ಅವಶ್ಯಕತೆಯಿರುವುದಿಲ್ಲ.

ಗೀತೆ:
ದೂರದೇಶದಲ್ಲಿರುವವರು ಪರದೇಶದಲ್ಲಿ ಬಂದರು...............

ಓಂ ಶಾಂತಿ.
ಮಧುರಾತಿ ಮಧುರ ಆತ್ಮಿಕ ಮಕ್ಕಳು ಪುನಃ ಅಂದರೆ ಕಲ್ಪ-ಕಲ್ಪದ ನಂತರ ಅರಿತುಕೊಂಡಿದ್ದೀರಿ. ಇವರಿಗೆ ದೂರದೇಶದಲ್ಲಿರುವವರು ಪರದೇಶದಲ್ಲಿ ಬಂದಿದ್ದಾರೆಂದು ಹೇಳಲಾಗುತ್ತದೆ. ಇದು ಕೇವಲ ಅವರೊಬ್ಬರಿಗಾಗಿಯೇ ಗಾಯನವಿದೆ, ಅವರನ್ನೇ ಎಲ್ಲರೂ ನೆನಪು ಮಾಡುತ್ತಾರೆ, ಅವರು ವಿಚಿತ್ರನಾಗಿದ್ದಾರೆ. ಅವರಿಗೆ ಯಾವುದೇ ಚಿತ್ರವಿಲ್ಲ(ಶರೀರ) . ಬ್ರಹ್ಮಾ-ವಿಷ್ಣು-ಶಂಕರನಿಗೆ ದೇವತೆಗಳೆಂದು ಕರೆಯಲಾಗುವುದು. ಶಿವಭಗವಾನುವಾಚ ಎಂದು ಹೇಳಲಾಗುತ್ತದೆ, ಶಿವನು ಪರಮಧಾಮದಲ್ಲಿರುತ್ತಾರೆ, ಅವರನ್ನು ದುಃಖಧಾಮದಲ್ಲಿಯೇ ಕರೆಯುತ್ತಾರೆ, ಸುಖಧಾಮದಲ್ಲೆಂದೂ ಕರೆಯುವುದಿಲ್ಲ. ಅವರು ಸಂಗಮಯುಗದಲ್ಲಿಯೇ ಬರುತ್ತಾರೆ. ಇದಂತೂ ಮಕ್ಕಳಿಗೆ ತಿಳಿದಿದೆ - ಸತ್ಯಯುಗದಲ್ಲಿ ಇಡೀ ವಿಶ್ವದಲ್ಲಿ ನೀವು ಪುರುಷೋತ್ತಮರಾಗಿರುತ್ತೀರಿ. ಅಲ್ಲಿ ಮಧ್ಯಮ, ಕನಿಷ್ಟರಿರುವುದಿಲ್ಲ. ಉತ್ತಮರಿಗಿಂತ ಉತ್ತಮ ಪುರುಷರು ಈ ಲಕ್ಷ್ಮೀ-ನಾರಾಯಣರಾಗಿದ್ದ್ದಾರಲ್ಲವೆ. ಇವರನ್ನು ಈ ರೀತಿ ಮಾಡುವವರು ಶ್ರೇಷ್ಠಾತಿಶ್ರೇಷ್ಠ ಶಿವತಂದೆಯೆಂದು ಹೇಳಲಾಗುತ್ತದೆ. ಶ್ರೀ ಶ್ರೀ ಎಂದು ಆ ಶಿವತಂದೆಗೇ ಹೇಳಲಾಗುತ್ತದೆ. ಈಗಂತೂ ಸನ್ಯಾಸಿ ಮೊದಲಾದವರೂ ಸಹ ತಮಗೆ ಶ್ರೀ ಶ್ರೀ ಎಂದು ಹೇಳಿಕೊಳ್ಳುತ್ತಾರೆ. ಅಂದಾಗ ತಂದೆಯೇ ಬಂದು ಈ ಸೃಷ್ಟಿಯನ್ನು ಪುರುಷೋತ್ತಮವನ್ನಾಗಿ ಮಾಡುತ್ತಾರೆ. ಸತ್ಯಯುಗದಲ್ಲಿ ಇಡೀ ಸೃಷ್ಟಿಯಲ್ಲಿ ಉತ್ತಮರಿಗಿಂತ ಉತ್ತಮ ಪುರುಷರಿದ್ದಾರೆ, ಉತ್ತಮರಿಗಿಂತ ಉತ್ತಮರು ಮತ್ತು ಕನಿಷ್ಟರಿಗಿಂತ ಕನಿಷ್ಟರ ಅಂತರವು ಈ ಸಮಯದಲ್ಲಿ ನೀವು ತಿಳಿದುಕೊಂಡಿದ್ದೀರಿ. ಕನಿಷ್ಟ ಮನುಷ್ಯರು ತಮ್ಮ ಕನಿಷ್ಟತೆಯನ್ನು ತೋರಿಸುತ್ತಾರೆ. ಈಗ ನೀವು ತಿಳಿದುಕೊಳ್ಳುತ್ತೀರಿ - ನಾವು ಏನಾಗಿದ್ದೆವು, ಈಗ ಪುನಃ ನಾವು ಸ್ವರ್ಗವಾಸಿ ಪುರುಷೋತ್ತಮರಾಗುತ್ತಿದ್ದೇವೆ. ಇದು ಸಂಗಮಯುಗವಾಗಿದೆ. ನಿಮಗೆ ಈ ಹಳೆಯ ಪ್ರಪಂಚವು ಹೊಸದಾಗಬೇಕೆಂದು ಖಾತರಿ ಇದೆ, ಹಳೆಯದರಿಂದ ಹೊಸದು, ಹೊಸದರಿಂದ ಹಳೆಯದು ಅವಶ್ಯವಾಗಿ ಆಗುತ್ತದೆ. ಹೊಸಪ್ರಪಂಚಕ್ಕೆ ಸತ್ಯಯುಗವೆಂದು ಹಳೆಯದಕ್ಕೆ ಕಲಿಯುಗವೆಂದು ಕರೆಯಲಾಗುತ್ತದೆ. ತಂದೆಯು ಸತ್ಯಚಿನ್ನವಾಗಿದ್ದಾರೆ, ಸತ್ಯವನ್ನು ಹೇಳುವವರಾಗಿದ್ದಾರೆ. ಅವರಿಗೆ ಸತ್ಯವೆಂದು ಹೇಳುತ್ತಾರೆ, ಎಲ್ಲವೂ ಸತ್ಯವನ್ನೇ ತಿಳಿಸುತ್ತಾರೆ. ಈಶ್ವರ ಸರ್ವವ್ಯಾಪಿಯೆಂದು ಯಾವ ಮಾತನ್ನು ಹೇಳುತ್ತಾರೆಯೋ ಇದು ಅಸತ್ಯವಾಗಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಅಸತ್ಯವನ್ನು ಕೇಳಬೇಡಿ. ಹಿಯರ್ ನೋ ಈವಿಲ್, ಸೀ ನೋ ಈವಿಲ್..... ರಾಜವಿದ್ಯೆಯ ಮಾತೇ ಬೇರೆಯಾಗಿದೆ, ಅದಂತೂ ಅಲ್ಪಕಾಲದ ಸುಖಕ್ಕಾಗಿಯೇ ಇದೆ. ಇನ್ನೊಂದು ಜನ್ಮವನ್ನು ತೆಗೆದುಕೊಂಡರೆ ಮತ್ತೆ ಹೊಸದಾಗಿ ಓದಬೇಕಾಗುತ್ತದೆ, ಅದು ಅಲ್ಪಕಾಲದ ಸುಖವಾಗಿದೆ. ಇದು 21 ಜನ್ಮ, 21 ಪೀಳಿಗೆಗಳಿಗಾಗಿ ವಿದ್ಯೆಯಾಗಿದೆ. ಪೀಳಿಗೆಯೆಂದು ವೃದ್ಧಾಪ್ಯಕ್ಕೆ ಹೇಳಲಾಗುತ್ತದೆ. ಅಲ್ಲೆಂದೂ ಅಕಾಲಮೃತ್ಯುವಾಗುವುದಿಲ್ಲ. ಇಲ್ಲಂತೂ ನೋಡಿ, ಹೇಗೆ ಅಕಾಲಮೃತ್ಯುವಾಗುತ್ತಿರುತ್ತದೆ. ಜ್ಞಾನದಲ್ಲಿಯೂ ಸಹ ಸತ್ತು (ಬಿಟ್ಟು) ಹೋಗುತ್ತಾರೆ. ನೀವೀಗ ಮೃತ್ಯುವಿನ ಮೇಲೆ ವಿಜಯವನ್ನು ಪಡೆಯುತ್ತಿದ್ದೀರಿ. ನಿಮಗೆ ತಿಳಿದಿದೆ - ಅದು ಅಮರಲೋಕ, ಇದು ಮೃತ್ಯುಲೋಕವಾಗಿದೆ. ಸತ್ಯಯುಗದಲ್ಲಿ ವೃದ್ಧರಾದಾಗ ನಾನು ಈ ಶರೀರವನ್ನು ಬಿಟ್ಟುಹೋಗಿ ಚಿಕ್ಕಮಗುವಾಗುತ್ತೇನೆಂದು ಸಾಕ್ಷಾತ್ಕಾರವಾಗುತ್ತದೆ. ಆಯಸ್ಸು ಪೂರ್ಣವಾದಾಗ ಶರೀರವನ್ನು ಬಿಟ್ಟುಬಿಡುತ್ತಾರೆ, ಹೊಸಶರೀರವು ಸಿಗುವುದು ಒಳ್ಳೆಯದೆ. ಕುಳಿತು-ಕುಳಿತಿದ್ದಂತೆಯೇ ಖುಷಿಯಿಂದ ಶರೀರವನ್ನು ಬಿಟ್ಟುಬಿಡುತ್ತಾರೆ. ಇಲ್ಲಂತೂ ಆ ಸ್ಥಿತಿಯಲ್ಲಿರುತ್ತಾ ಶರೀರ ಬಿಡುವುದು ಪರಿಶ್ರಮವಾಗುತ್ತದೆ. ಇಲ್ಲಿನ ಪರಿಶ್ರಮವು ಅಲ್ಲಿ ಸಾಧಾರಣ ಮಾತಾಗಿಬಿಡುತ್ತದೆ. ಇಲ್ಲಿ ದೇಹ ಸಹಿತವಾಗಿ ಏನೆಲ್ಲವೂ ಇದೆಯೋ ಎಲ್ಲವನ್ನೂ ಮರೆಯಬೇಕಾಗಿದೆ. ತಮ್ಮನ್ನು ಆತ್ಮವೆಂದು ತಿಳಿಯಬೇಕು ಮತ್ತು ಹಳೆಯ ಪ್ರಪಂಚವನ್ನು ಮರೆಯಬೇಕಾಗಿದೆ. ಹೊಸ ಶರೀರವನ್ನು ಪಡೆಯಬೇಕಾಗಿದೆ. ಆತ್ಮವು ಸತೋಪ್ರಧಾನವಾಗಿದ್ದಾಗ ಸುಂದರ ಶರೀರವು ಸಿಕ್ಕಿತು ಮತ್ತೆ ಕಾಮಚಿತೆಯನ್ನೇರುವುದರಿಂದ ತಮೋಪ್ರಧಾನ, ಕಪ್ಪಾಗಿಬಿಟಿದ್ದೀರಿ ಆದ್ದರಿಂದ ಕಪ್ಪಾದ ಶರೀರವೇ ಸಿಗುತ್ತದೆ. ಸುಂದರನಿಂದ ಶ್ಯಾಮನಾಗಿಬಿಟ್ಟಿರಿ. ಕೃಷ್ಣನ ಹೆಸರಂತೂ ಕೃಷ್ಣನೆಂದೇ ಆಗಿದೆ ಆದರೆ ಮತ್ತೆ ಶ್ಯಾಮಸುಂದರನೆಂದು ಏಕೆ ಹೇಳುತ್ತಾರೆ? ಚಿತ್ರಗಳಲ್ಲಿ ಕೃಷ್ಣನ ಚಿತ್ರವನ್ನು ಕಪ್ಪಾಗಿ ತೋರಿಸುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ಸತೋಪ್ರಧಾನರಾಗಿದ್ದಾಗ ಸುಂದರರಾಗಿದ್ದೆವು, ಈಗ ತಮೋಪ್ರಧಾನ, ಕಪ್ಪಾಗಿಬಿಟ್ಟಿದ್ದೇವೆ. ಸತೋಪ್ರಧಾನರಿಗೆ ಪುರುಷೋತ್ತಮರೆಂತಲೂ, ತಮೋಪ್ರಧಾನರಿಗೆ ಕನಿಷ್ಟರೆಂತಲೂ ಹೇಳುತ್ತಾರೆ. ತಂದೆಯೂ ಸದಾ ಪಾವನನಾಗಿದ್ದಾರೆ, ಅವರು ಎಲ್ಲರನ್ನೂ ಸುಂದರರನ್ನಾಗಿ ಮಾಡುವುದಕ್ಕಾಗಿಯೇ ಬರುತ್ತಾರೆ. ಸುಂದರ ಯಾತ್ರಿಕನಲ್ಲವೆ. ಕಲ್ಪ-ಕಲ್ಪವೂ ಬರುತ್ತಾರೆ, ಇಲ್ಲದಿದ್ದರೆ ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಯಾರು ಮಾಡುತ್ತಾರೆ! ಇದಂತೂ ಪತಿತ, ಛೀ ಛೀ ಪ್ರಪಂಚವಾಗಿದೆ. ಪ್ರಪಂಚದಲ್ಲಿ ಇದನ್ನಂತೂ ಯಾರೂ ತಿಳಿದುಕೊಂಡಿಲ್ಲ. ಈಗ ನಿಮಗೆ ತಿಳಿದಿದೆ - ತಂದೆಯು ನಮ್ಮನ್ನು ಪುರುಷೋತ್ತಮರನ್ನಾಗಿ ಮಾಡಲು ಓದಿಸುತ್ತಿದ್ದಾರೆ. ಪುನಃ ದೇವತೆಗಳಾಗಲು ನಾವೇ ಬ್ರಾಹ್ಮಣರಾಗಿದ್ದೇವೆ. ನೀವು ಸಂಗಮಯುಗೀ ಬ್ರಾಹ್ಮಣರಾಗಿದ್ದೀರಿ. ಈಗ ಸಂಗಮಯುಗವೆಂದು ಪ್ರಪಂಚದವರಿಗೆ ತಿಳಿದಿಲ್ಲ, ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಬರೆದಿರುವುದರಿಂದ ಕಲಿಯುಗವು ಇನ್ನೂ ಮಗುವಾಗಿದೆ ಎಂದು ತಿಳಿಯುತ್ತಾರೆ. ಈಗ ನೀವು ಮನಸ್ಸಿನಲ್ಲಿ ತಿಳಿದುಕೊಳ್ಳುತ್ತೀರಿ - ನಾವಿಲ್ಲಿ ಉತ್ತಮರಿಗಿಂತಲೂ ಉತ್ತಮರು, ಕಲಿಯುಗೀ ಪತಿತರಿಂದ ಸತ್ಯಯುಗೀ ಪಾವನರು, ಮನುಷ್ಯರಿಂದ ದೇವತೆಗಳಾಗಲು ಬಂದಿದ್ದೇವೆ. ಗ್ರಂಥದಲ್ಲಿಯೂ ಕೊಳಕಾದ ವಸ್ತ್ರಗಳನ್ನು ಒಗೆದರೆಂದು ಮಹಿಮೆಯಿದೆ ಆದರೆ ಗ್ರಂಥವನ್ನು ಓದುವವರೂ ಸಹ ಅರ್ಥವನ್ನು ತಿಳಿದುಕೊಂಡಿಲ್ಲ. ಈ ಸಮಯದಲ್ಲಿ ತಂದೆಯು ಬಂದು ಇಡೀ ಪ್ರಪಂಚದ ಮನುಷ್ಯಮಾತ್ರರನ್ನು ಸ್ವಚ್ಚ ಮಾಡುತ್ತಾರೆ. ನೀವು ಆ ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ. ತಂದೆಯೇ ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಈ ರಚಯಿತ ಮತ್ತು ರಚನೆಯ ಜ್ಞಾನವನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ತಂದೆಯೇ ಜ್ಞಾನಸಾಗರನಾಗಿದ್ದಾರೆ, ಅವರು ಸತ್ಯ-ಚೈತನ್ಯ-ಅಮರನಾಗಿದ್ದಾರೆ, ಪುನರ್ಜನ್ಮ ರಹಿತನಾಗಿದ್ದಾರೆ, ಶಾಂತಿಯ ಸಾಗರ, ಸುಖದ ಸಾಗರ, ಪವಿತ್ರತೆಯ ಸಾಗರನಾಗಿದ್ದಾರೆ. ಬಂದು ಈ ಆಸ್ತಿಯನ್ನು ಕೊಡಿ ಎಂದು ಅವರನ್ನೇ ಕರೆಯುತ್ತಾರೆ. ಆ ತಂದೆಯು ನಿಮಗೆ ಈಗ 21 ಜನ್ಮಗಳಿಗಾಗಿ ಆಸ್ತಿಯನ್ನು ಕೊಡುತ್ತಿದ್ದಾರೆ. ಇದು ಅವಿನಾಶಿ ವಿದ್ಯೆಯಾಗಿದೆ. ಓದಿಸುವವರು ಅವಿನಾಶಿ ತಂದೆಯಾಗಿದ್ದಾರೆ. ಅರ್ಧಕಲ್ಪ ನೀವು ರಾಜ್ಯವನ್ನು ಪಡೆಯುತ್ತೀರಿ ನಂತರ ರಾವಣರಾಜ್ಯವಾಗುತ್ತದೆ. ಅರ್ಧಕಲ್ಪ ರಾಮರಾಜ್ಯ, ಇನ್ನರ್ಧಕಲ್ಪ ರಾವಣರಾಜ್ಯವಿರುತ್ತದೆ.

ಪ್ರಾಣಕ್ಕಿಂತಲೂ ಪ್ರಿಯ ಒಬ್ಬರೇ ತಂದೆಯಾಗಿದ್ದಾರೆ ಏಕೆಂದರೆ ಅವರೇ ನೀವು ಮಕ್ಕಳನ್ನು ಎಲ್ಲಾ ದುಃಖಗಳಿಂದ ಬಿಡಿಸಿ ಅಪಾರ ಸುಖದಲ್ಲಿ ಕರೆದುಕೊಂಡು ಹೋಗುತ್ತಾರೆ. ಅವರು ನಮ್ಮ ಪ್ರಾಣಪ್ರಿಯ ಪಾರಲೌಕಿಕ ತಂದೆಯಾಗಿದ್ದಾರೆಂದು ನೀವು ನಿಶ್ಚಯದಿಂದ ಹೇಳುತ್ತೀರಿ. ಆತ್ಮಕ್ಕೆ ಪ್ರಾಣವೆಂದು ಹೇಳಲಾಗುತ್ತದೆ. ಎಲ್ಲಾ ಮನುಷ್ಯಾತ್ಮರು ಅವರನ್ನು ನೆನಪು ಮಾಡುತ್ತಾರೆ ಏಕೆಂದರೆ ಅರ್ಧಕಲ್ಪಕ್ಕಾಗಿ ದುಃಖದಿಂದ ಬಿಡಿಸಿ ಶಾಂತಿ ಮತ್ತು ಸುಖ ಕೊಡುವವರು ಅವರೇ ಆಗಿದ್ದಾರೆ ಅಂದಮೇಲೆ ಪ್ರಾಣಪ್ರಿಯರಾದರಲ್ಲವೆ. ನಿಮಗೆ ತಿಳಿದಿದೆ - ಸತ್ಯಯುಗದಲ್ಲಿ ನಾವು ಸದಾ ಸುಖಿಯಾಗಿರುತ್ತೇವೆ ಉಳಿದೆಲ್ಲಾ ಆತ್ಮಗಳು ಶಾಂತಿಧಾಮಕ್ಕೆ ಹೊರಟುಹೋಗುತ್ತಾರೆ. ಮತ್ತೆ ರಾವಣರಾಜ್ಯದಲ್ಲಿ ದುಃಖವು ಆರಂಭವಾಗುತ್ತದೆ. ದುಃಖ ಮತ್ತು ಸುಖದ ಆಟವಾಗಿದೆ. ಇಲ್ಲಿಯೇ ಈಗೀಗ ಸುಖವಿದೆ, ಈಗೀಗ ದುಃಖವಿದೆಯೆಂದು ಮನುಷ್ಯರು ತಿಳಿಯುತ್ತಾರೆ ಆದರೆ ಇಲ್ಲ, ನಿಮಗೆ ತಿಳಿದಿದೆ - ಸ್ವರ್ಗವೇ ಬೇರೆ, ನರಕವೇ ಬೇರೆಯಾಗಿದೆ. ಸ್ವರ್ಗದ ಸ್ಥಾಪನೆಯನ್ನು ತಂದೆ ಹೃದಯರಾಮನು ಮಾಡುತ್ತಾರೆ. ರಾವಣನು ನರಕದ ಸ್ಥಾಪನೆ ಮಾಡುತ್ತಾನೆ, ಯಾರನ್ನು ವರ್ಷ-ವರ್ಷವು ಸುಡುತ್ತಾರೆ ಆದರೆ ಏಕೆ ಸುಡುತ್ತಾರೆ? ರಾವಣನು ಯಾರು? ಏನನ್ನೂ ತಿಳಿದುಕೊಂಡಿಲ್ಲ. ಎಷ್ಟೊಂದು ಖರ್ಚನ್ನು ಮಾಡುತ್ತಾರೆ! ರಾಮನ ಸೀತೆ ಭಗವತಿಯನ್ನು ರಾವಣನು ಅಪಹರಿಸಿಕೊಂಡು ಹೋದನೆಂದು ಎಷ್ಟೊಂದು ಕಥೆಗಳನ್ನು ಹೇಳುತ್ತಾರೆ. ಮನುಷ್ಯರು ಸಹ ಈ ರೀತಿಯಾಗಿರಬೇಕು ಎಂದು ತಿಳಿಯುತ್ತಾರೆ.

ಈಗ ನೀವು ಎಲ್ಲರ ಪರಿಚಯವನ್ನು ತಿಳಿದುಕೊಂಡಿದ್ದೀರಿ. ನಿಮ್ಮ ಬುದ್ಧಿಯಲ್ಲಿ ಈ ಜ್ಞಾನವಿದೆ, ಇಡೀ ವಿಶ್ವದ ಚರಿತ್ರೆ-ಭೂಗೋಳವನ್ನು ಯಾವುದೇ ಮನುಷ್ಯರು ತಿಳಿದುಕೊಂಡಿರುವುದಿಲ್ಲ. ತಂದೆಗೇ ಗೊತ್ತಿದೆ. ಅವರಿಗೆ ವಿಶ್ವದ ರಚಯಿತನೆಂದು ಹೇಳುವುದಿಲ್ಲ, ವಿಶ್ವವು ಯಾವಾಗಲೂ ಇದ್ದೇ ಇದೆ, ತಂದೆಯು ಕೇವಲ ಬಂದು ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆಯೆಂದು ಜ್ಞಾನವನ್ನು ಕೊಡುತ್ತಾರೆ. ಭಾರತದಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು ನಂತರ ಏನಾಯಿತು? ದೇವತೆಗಳು ಯಾರೊಂದಿಗಾದರೂ ಯುದ್ಧ ಮಾಡಿದರೆ? ಏನೂ ಇಲ್ಲ. ಅರ್ಧಕಲ್ಪದ ನಂತರ ರಾವಣರಾಜ್ಯವು ಪ್ರಾರಂಭವಾಗುವುದರಿಂದ ದೇವತೆಗಳು ವಾಮಮಾರ್ಗದಲ್ಲಿ ಹೊರಟುಹೋಗುತ್ತಾರೆ ಆದರೆ ಯುದ್ಧದಲ್ಲಿ ಯಾರಾದರೂ ಸೋಲಿಸಿದರೆಂದಲ್ಲ. ಇಲ್ಲಿ ಯಾವುದೇ ಸೈನ್ಯದ ಮಾತಿಲ್ಲ ಅಥವಾ ಯುದ್ಧದಿಂದ ರಾಜ್ಯಪಡೆಯುವುದಾಗಲಿ, ಕಳೆದುಕೊಳ್ಳುವುದಾಗಲಿ ಇಲ್ಲ. ಇಲ್ಲಿ ಯೋಗದಲ್ಲಿದ್ದು ಪವಿತ್ರರಾಗಿ, ನೀವು ಪವಿತ್ರರಾಜ್ಯವನ್ನು ಸ್ಥಾಪನೆ ಮಾಡುತ್ತೀರಿ ಬಾಕಿ ಕೈಯಲ್ಲಿ ಯಾವುದೇ ಆಯುಧವಿಲ್ಲ. ಇದು ಡಬಲ್ ಅಹಿಂಸೆಯಾಗಿದೆ. ಒಂದನೆಯದು - ಪವಿತ್ರತೆಯ ಅಹಿಂಸೆ, ಎರಡನೆಯದಾಗಿ - ನೀವು ಯಾರಿಗೂ ದುಃಖವನ್ನು ಕೊಡುವುದಿಲ್ಲ. ಎಲ್ಲದಕ್ಕಿಂತ ಕಠಿಣ ಹಿಂಸೆಯು ಕಾಮದ ಹಿಂಸೆಯಾಗಿದೆ, ಇದೇ ಆದಿ-ಮಧ್ಯ-ಅಂತ್ಯ ದುಃಖವನ್ನು ಕೊಡುತ್ತದೆ. ರಾವಣರಾಜ್ಯದಲ್ಲಿಯೇ ದುಃಖವು ಆರಂಭವಾಗುತ್ತದೆ. ಖಾಯಿಲೆಗಳೂ ಪ್ರಾರಂಭವಾಗುತ್ತವೆ. ಎಷ್ಟೊಂದು ರೋಗಗಳಿವೆ! ಅನೇಕ ಪ್ರಕಾರದ ಔಷಧಿಗಳನ್ನು ಕಂಡುಹಿಡಿಯುತ್ತಿರುತ್ತಾರೆ. ಎಲ್ಲರೂ ರೋಗಿಗಳಾಗಿಬಿಟ್ಟಿದ್ದಾರಲ್ಲವೆ. ನೀವು ಯೋಗಬಲದಿಂದ 21 ಜನ್ಮಗಳಿಗಾಗಿ ನಿರೋಗಿಯಾಗುತ್ತೀರಿ. ಅಲ್ಲಿ ದುಃಖ ಅಥವಾ ರೋಗದ ಹೆಸರು-ಚಿಹ್ನೆಯೂ ಇರುವುದಿಲ್ಲ ಅದಕ್ಕಾಗಿ ಓದುತ್ತಿದ್ದೀರಿ. ಮಕ್ಕಳಿಗೆ ತಿಳಿದಿದೆ - ಭಗವಂತನು ನಮಗೆ ಓದಿಸಿ ಭಗವಾನ್-ಭಗವತಿಯನ್ನಾಗಿ ಮಾಡುತ್ತಿದ್ದಾರೆ. ವಿದ್ಯೆಯು ಎಷ್ಟು ಸಹಜವಾಗಿದೆ! ಅರ್ಧ-ಮುಕ್ಕಾಲುಗಂಟೆಯಲ್ಲಿಯೇ ಇಡೀ ಚಕ್ರದ ಜ್ಞಾನವನ್ನು ತಿಳಿಸಿಬಿಡುತ್ತಾರೆ. 84 ಜನ್ಮಗಳನ್ನೂ ಸಹ ಯಾರ್ಯಾರು ತೆಗೆದುಕೊಳ್ಳುತ್ತಾರೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ.

ಭಗವಂತನು ನಮಗೆ ಓದಿಸುತ್ತಾರೆ, ಅವರು ನಿರಾಕಾರನಾಗಿದ್ದಾರೆ. ಅವರ ಸತ್ಯ-ಸತ್ಯವಾದ ಹೆಸರು ಶಿವನೆಂದಾಗಿದೆ. ಕಲ್ಯಾಣಕಾರಿಯಲ್ಲವೆ. ಸರ್ವರ ಕಲ್ಯಾಣಕಾರಿ, ಸರ್ವರ ಸದ್ಗತಿದಾತನು ಶ್ರೇಷ್ಠಾತಿಶ್ರೇಷ್ಠ ತಂದೆಯಾಗಿದ್ದಾರೆ. ಮನುಷ್ಯರನ್ನು ಶ್ರೇಷ್ಠಾತಿಶ್ರೇಷ್ಠರನ್ನಾಗಿ ಮಾಡುತ್ತಾರೆ. ತಂದೆಯು ಓದಿಸಿ ಬುದ್ಧಿವಂತರನ್ನಾಗಿ ಮಾಡಿ ನಂತರ ಹೋಗಿ ಅನ್ಯರಿಗೂ ಓದಿಸಿ ಎಂದು ಹೇಳುತ್ತಾರೆ. ಬ್ರಹ್ಮಾಕುಮಾರ-ಕುಮಾರಿಯರಿಗೆ ಓದಿಸುವವರು ಶಿವತಂದೆಯಾಗಿದ್ದಾರೆ. ಬ್ರಹ್ಮಾರವರ ಮೂಲಕ ನಿಮ್ಮನ್ನು ದತ್ತುಮಾಡಿಕೊಂಡಿದ್ದಾರೆ. ಅಂದಾಗ ಪ್ರಜಾಪಿತ ಬ್ರಹ್ಮಾ ಎಲ್ಲಿಂದ ಬಂದರು? ಈ ಮಾತಿನಲ್ಲಿಯೇ ಮನುಷ್ಯರು ತಬ್ಬಿಬ್ಬಾಗುತ್ತಾರೆ. ಇವರನ್ನು ದತ್ತು ಮಾಡಿಕೊಂಡರು, ಬಹಳ ಜನ್ಮಗಳ ಅಂತಿಮದಲ್ಲಿ ನಾನು ಬರುತ್ತೇನೆಂದು ತಂದೆಯು ಹೇಳುತ್ತಾರೆ ಅಂದಾಗ ಬಹಳ ಜನ್ಮಗಳನ್ನು ಯಾರು ತೆಗೆದುಕೊಂಡರು? ಈ ಲಕ್ಷ್ಮೀ-ನಾರಾಯಣರೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆ ಆದ್ದರಿಂದ ಕೃಷ್ಣನಿಗೆ ಶ್ಯಾಮಸುಂದರನೆಂದು ಹೇಳುತ್ತಾರೆ. ನಾವೇ ಸುಂದರರಾಗಿದ್ದೆವು, ನಂತರ ಎರಡು ಕಲೆಗಳು ಕಡಿಮೆಯಾಯಿತು. ಕಡಿಮೆಯಾಗುತ್ತಾ-ಆಗುತ್ತಾ ಕಲಾಹೀನರಾಗಿಬಿಟ್ಟಿದ್ದೇವೆ. ಈಗ ಮತ್ತೆ ತಮೋಪ್ರಧಾನರಿಂದ ಸತೋಪ್ರಧಾನರಾಗುವುದು ಹೇಗೆ? ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ ಆಗ ನೀವು ಪಾವನರಾಗಿಬಿಡುತ್ತೀರಿ. ಇದೂ ನಿಮಗೆ ತಿಳಿದಿದೆ - ಇದು ರುದ್ರಜ್ಞಾನಯಜ್ಞವಾಗಿದೆ. ಈ ಯಜ್ಞದಲ್ಲಿ ಬ್ರಾಹ್ಮಣರು ಬೇಕು. ಸತ್ಯಗೀತೆಯನ್ನು ತಿಳಿಸುವಂತಹ ನೀವು ಸತ್ಯ ಬ್ರಾಹ್ಮಣರಾಗಿದ್ದೀರಿ. ಆದ್ದರಿಂದ ಸತ್ಯ ಗೀತಾಪಾಠಶಾಲೆ ಎಂದು ಬರೆಯುತ್ತೀರಿ. ಆ ಗೀತೆಯಲ್ಲಂತೂ ಹೆಸರೇ ಬದಲಾಗಿಬಿಟ್ಟಿದೆ. ಹಾ! ಯಾರು ಕಲ್ಪದ ಹಿಂದೆ ಹೇಗೆ ಆಸ್ತಿಯನ್ನು ಪಡೆದಿದ್ದರೋ ಅವರೇ ಬಂದು ಪಡೆಯುತ್ತಾರೆ ಅಂದಮೇಲೆ ತಮ್ಮನ್ನು ಕೇಳಿಕೊಳ್ಳಿ - ನಾವು ಪೂರ್ಣ ಆಸ್ತಿಯನ್ನು ಪಡೆಯುತ್ತೇವೆಯೇ? ಮನುಷ್ಯರು ಶರೀರವನ್ನು ಬಿಡುವಾಗ ಖಾಲಿ ಕೈಯಲ್ಲಿ ಹೋಗುತ್ತಾರೆ, ಆ ವಿನಾಶಿ ಸಂಪಾದನೆಯಂತೂ ಜೊತೆ ಬರುವುದಿಲ್ಲ. ನೀವು ಶರೀರ ಬಿಡುತ್ತೀರೆಂದರೆ ಕೈತುಂಬಿಕೊಂಡು ಹೋಗುತ್ತೀರಿ ಏಕೆಂದರೆ 21 ಜನ್ಮಗಳಿಗಾಗಿ ನೀವು ತಮ್ಮ ಸಂಪಾದನೆಯನ್ನು ಜಮಾ ಮಾಡಿಕೊಳ್ಳುತ್ತಿದ್ದೀರಿ. ಮನುಷ್ಯರ ಸಂಪಾದನೆಯಂತೂ ಮಣ್ಣುಪಾಲಾಗಿಬಿಡುವುದು. ಇದಕ್ಕಿಂತಲೂ ನಾವು ತಂದೆಗೆ ಏಕೆ ಕೊಡಬಾರದು! ಯಾರು ಬಹಳ ದಾನ ಮಾಡುವರೋ ಅವರು ಇನ್ನೊಂದು ಜನ್ಮದಲ್ಲಿ ಸಾಹುಕಾರರಾಗುತ್ತಾರೆ, ಧನವನ್ನು ವರ್ಗಾವಣೆ ಮಾಡುತ್ತಾರಲ್ಲವೆ. ನೀವೀಗ 21 ಜನ್ಮಗಳಿಗಾಗಿ ಹೊಸಪ್ರಪಂಚಕ್ಕೆ ವರ್ಗಾವಣೆ ಮಾಡುತ್ತೀರಿ ಅದಕ್ಕೆ ಪ್ರತಿಫಲವಾಗಿ ನಿಮಗೆ 21 ಜನ್ಮಗಳಿಗಾಗಿ ಸಿಗುತ್ತದೆ. ಅವರಂತೂ ಅಲ್ಪಕಾಲಕ್ಕಾಗಿ ವರ್ಗಾವಣೆ ಮಾಡುತ್ತಾರೆ. ನೀವು 21 ಜನ್ಮಗಳಿಗಾಗಿ ಮಾಡುತ್ತೀರಿ, ತಂದೆಯು ದಾತನಾಗಿದ್ದಾರೆ. ಇದು ನಾಟಕದಲ್ಲಿ ನಿಗಧಿಯಾಗಿದೆ, ಯಾರೆಷ್ಟು ಮಾಡುವರೋ ಅವರು ಪಡೆಯುತ್ತಾರೆ. ಅವರು ಪರೋಕ್ಷವಾಗಿ ದಾನಪುಣ್ಯ ಮಾಡುತ್ತಾರೆಂದರೆ ಅಲ್ಪಕಾಲಕ್ಕಾಗಿ ಫಲವು ಸಿಗುತ್ತದೆ. ಇದಂತೂ ಪ್ರತ್ಯಕ್ಷವಾಗಿದೆ. ಈಗ ಇದೆಲ್ಲವನ್ನೂ ಹೊಸ ಪ್ರಪಂಚಕ್ಕೆ ವರ್ಗಾವಣೆ ಮಾಡಬೇಕಾಗಿದೆ. ಈ ಬ್ರಹ್ಮಾರವರನ್ನು ನೋಡಿದ್ದೀರಿ, ಎಷ್ಟೊಂದು ಸಾಹಸ ಮಾಡಿದರು. ಎಲ್ಲವನ್ನೂ ಈಶ್ವರನೇ ಕೊಟ್ಟಿದ್ದಾರೆಂದು ನೀವು ಹೇಳುತ್ತೀರಿ, ಅಂದಮೇಲೆ ಈಗ ತಂದೆಯು ತಿಳಿಸುತ್ತಾರೆ - ಈಗ ಎಲ್ಲವನ್ನೂ ನನಗೆ ಕೊಡಿ, ನಾನು ನಿಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತೇನೆ. ಬ್ರಹ್ಮಾತಂದೆಯಂತೂ ತಕ್ಷಣ ಕೊಟ್ಟುಬಿಟ್ಟರು, ಯೋಚಿಸಲೇ ಇಲ್ಲ. ತಮ್ಮ ಪೂರ್ಣ ಅಧಿಕಾರವನ್ನು ಕೊಟ್ಟುಬಿಟ್ಟರು. ನನಗೆ ವಿಶ್ವದ ರಾಜ್ಯಭಾಗ್ಯವು ಸಿಗುತ್ತದಯೆಂಬ ನಶೆಯೇರಿಬಿಟ್ಟಿತು, ಮಕ್ಕಳು ಮೊದಲಾದವರ ವಿಚಾರವನ್ನೂ ಮಾಡಲಿಲ್ಲ, ನೀಡುವವರು ಈಶ್ವರನಾಗಿದ್ದಾರೆ ಅಂದಮೇಲೆ ಇನ್ನ್ಯಾವುದರ ಜವಾಬ್ದಾರಿಯಿದೆ, 21 ಜನ್ಮಗಳಿಗಾಗಿ ಹೇಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಈ ತಂದೆಯನ್ನು ನೋಡಿ, ಇವರನ್ನು ಅನುಸರಿಸಿ. ಪ್ರಜಾಪಿತ ಬ್ರಹ್ಮನು ಮಾಡಿದರಲ್ಲವೆ. ಈಶ್ವರನಂತೂ ದಾತನಾಗಿದ್ದಾರೆ, ಅವರು ಇವರಿಂದ (ಬ್ರಹ್ಮಾ) ಮಾಡಿಸಿದರು. ನೀವೂ ಸಹ ತಿಳಿದುಕೊಳ್ಳುತ್ತೀರಿ - ನಾವು ತಂದೆಯಿಂದ ರಾಜ್ಯಭಾಗ್ಯವನ್ನು ಪಡೆಯಲು ಬಂದಿದ್ದೇವೆ. ದಿನ-ಪ್ರತಿದಿನ ಸಮಯವು ಕಡಿಮೆಯಾಗುತ್ತಾ ಹೋಗುತ್ತದೆ. ಅಂತಹ ಆಪತ್ತುಗಳು ಬರುತ್ತವೆ, ಅದನ್ನು ಕೇಳಲೇಬೇಡಿ. ವ್ಯಾಪಾರಿಗಳ ಶ್ವಾಸವಂತೂ ಮುಷ್ಟಿಯಲ್ಲಿರುತ್ತದೆ. ಯಾವುದೇ ಯಮದೂತರು ಬಾರದಿರಲಿ, ಸಿಪಾಯಿಗಳ ಮುಖವನ್ನು ನೋಡುತ್ತಿದ್ದಂತೆಯೇ ಮನುಷ್ಯರು ಮೂರ್ಛಿತರಾಗಿಬಿಡುತ್ತಾರೆ. ಮುಂದೆ ಹೋದಂತೆ ಬಹಳಷ್ಟು ತೊಂದರೆ ಕೊಡುತ್ತಾರೆ, ಚಿನ್ನ ಇತ್ಯಾದಿಯೇನನ್ನೂ ಇಟ್ಟುಕೊಳ್ಳಲು ಬಿಡುವುದಿಲ್ಲ. ಆದರೆ ನಿಮ್ಮ ಬಳಿ ಏನಿರುವುದು! ಏನನ್ನಾದರೂ ಖರೀದಿ ಮಾಡಲು ಹಣವೇ ಇರುವುದಿಲ್ಲ, ನೋಟುಗಳೂ ಸಹ ಚಲಾವಣೆಯಲ್ಲಿರುವುದಿಲ್ಲ. ರಾಜ್ಯವು ಬದಲಾಗಿಬಿಡುತ್ತದೆ, ಕೊನೆಯಲ್ಲಿ ಬಹಳ ದುಃಖಿಯಾಗಿ ಸಾಯುತ್ತಾರೆ. ಬಹಳ ದುಃಖದ ನಂತರ ಮತ್ತೆ ಸುಖವಾಗುವುದು. ಇದು ರಕ್ತಪಾತದ ಆಟವಾಗಿದೆ. ಪ್ರಾಕೃತಿಕ ವಿಕೋಪಗಳೂ ಆಗುತ್ತವೆ. ಇದಕ್ಕಿಂತಲೂ ಮೊದಲೇ ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆಯಬೇಕು. ಭಲೆ ಓಡಾಡಿ, ತಿರುಗಾಡಿ ಕೇವಲ ತಂದೆಯನ್ನು ನೆನಪು ಮಾಡುತ್ತಾ ಇರಿ ಆಗ ಪಾವನರಾಗಿಬಿಡುತ್ತೀರಿ. ಆದರೆ ಆಪತ್ತುಗಳಂತೂ ಬಹಳ ಬರುತ್ತದೆ. ಬಹಳ ಅಯ್ಯೋ ಅಯ್ಯೋ ಎನ್ನುತ್ತಿರುತ್ತಾರೆ. ನೀವು ಮಕ್ಕಳೀಗ ಇಂತಹ ಅಭ್ಯಾಸ ಮಾಡಬೇಕಾಗಿದೆ ಅಂತಿಮದಲ್ಲಿ ಒಬ್ಬ ಶಿವತಂದೆಯ ನೆನಪೇ ಇರಲಿ. ಅವರ ನೆನಪಿನಲ್ಲಿಯೇ ಇದ್ದು ಶರೀರವನ್ನು ಬಿಡಬೇಕು, ಮತ್ತ್ಯಾವುದೇ ಮಿತ್ರಸಂಬಂಧಿ ಮೊದಲಾದವರ ನೆನಪು ಬರಬಾರದು - ಈ ಅಭ್ಯಾಸ ಮಾಡಬೇಕಾಗಿದೆ. ತಂದೆಯನ್ನೇ ನೆನಪು ಮಾಡಬೇಕು, ನಾರಾಯಣನಾಗಬೇಕಾಗಿದೆ. ಈ ಅಭ್ಯಾಸವನ್ನು ಬಹಳ ಮಾಡಬೇಕಾಗುತ್ತದೆ ಇಲ್ಲವಾದರೆ ಬಹಳ ಪಶ್ಚಾತ್ತಾಪ ಪಡಬೇಕಾಗುವುದು. ಮತ್ತ್ಯಾರ ನೆನಪು ಬಂದಿತೆಂದರೆ ಅನುತ್ತೀರ್ಣರಾದರು. ಯಾರು ಉತ್ತೀರ್ಣರಾಗುವರೋ ಅವರೇ ವಿಜಯಮಾಲೆಯಲ್ಲಿ ಪೋಣಿಸಲ್ಪಡುತ್ತಾರೆ ಅಂದಾಗ ತಮ್ಮನ್ನು ಕೇಳಿಕೊಳ್ಳಬೇಕು - ತಂದೆಯನ್ನು ಎಷ್ಟು ನೆನಪು ಮಾಡುತ್ತೇವೆ? ಏನೇ ಕೈಯಲ್ಲಿದ್ದರೂ ಸಹ ಅದು ಅಂತ್ಯಕಾಲದಲ್ಲಿ ನೆನಪು ಬರುವುದು. ಕೈಯಲ್ಲಿ ಇಲ್ಲದಿದ್ದರೆ ನೆನಪು ಬರುವುದಿಲ್ಲ. ತಂದೆಯು ತಿಳಿಸುತ್ತಾರೆ - ನನ್ನ ಬಳಿ ಏನೂ ಇಲ್ಲ, ಇದು ನನ್ನ ವಸ್ತುವಲ್ಲ. ಆ ಜ್ಞಾನಕ್ಕೆ ಬದಲು ಇದನ್ನು ತೆಗೆದುಕೊಳ್ಳಿ, ಇದರಿಂದ 21 ಜನ್ಮಗಳಿಗಾಗಿ ಆಸ್ತಿಯು ಸಿಗುವುದು ಇಲ್ಲದಿದ್ದರೆ ಸ್ವರ್ಗದ ರಾಜ್ಯಭಾಗ್ಯವನ್ನು ಕಳೆದುಕೊಳ್ಳುತ್ತೀರಿ. ತಂದೆಯಿಂದ ಆಸ್ತಿಯನ್ನು ಪಡೆಯುವುದಕ್ಕಾಗಿಯೇ ನೀವಿಲ್ಲಿ ಬರುತ್ತೀರಿ ಅಂದಾಗ ಅವಶ್ಯವಾಗಿ ಪಾವನರಾಗಬೇಕಾಗುತ್ತದೆ. ಇಲ್ಲವಾದರೆ ಶಿಕ್ಷೆಗಳನ್ನನುಭವಿಸಿ ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿ ಹೋಗುತ್ತೀರಿ. ಪದವಿಯೇನೂ ಸಿಗುವುದಿಲ್ಲ. ಶ್ರೀಮತದಂತೆ ನಡೆಯುತ್ತೀರೆಂದರೆ ಕೃಷ್ಣನನ್ನು ಮಡಿಲಿಗೆ ತೆಗೆದುಕೊಳ್ಳುತ್ತೀರಿ. ಕೃಷ್ಣನಂತಹ ಪತಿ ಸಿಗಲಿ, ಕೃಷ್ಣನಂತಹ ಮಗುವಾಗಲಿ ಎಂದು ಹೇಳುತ್ತಾರಲ್ಲವೆ. ಕೆಲವರು ಒಳ್ಳೆಯ ರೀತಿಯಲ್ಲಿ ಅರಿತುಕೊಳ್ಳುತ್ತಾರೆ, ಇನ್ನು ಕೆಲವರು ಉಲ್ಟಾ-ಸುಲ್ಟಾ ಮಾತನಾಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಹೇಗೆ ಬ್ರಹ್ಮಾತಂದೆಯು ತನ್ನ ಸರ್ವಸ್ವವನ್ನೂ ವರ್ಗಾವಣೆ ಮಾಡಿ ಪೂರ್ಣ ಅಧಿಕಾರವನ್ನು ತಂದೆಗೆ ಕೊಟ್ಟುಬಿಟ್ಟರು, ಯೋಚಿಸಲಿಲ್ಲ ಹಾಗೆಯೇ ತಂದೆಯನ್ನು ಅನುಸರಿಸಿ 21 ಜನ್ಮಗಳ ಪ್ರಾಲಬ್ಧವನ್ನು ಜಮಾ ಮಾಡಿಕೊಳ್ಳಬೇಕಾಗಿದೆ.

2. ಇದೇ ಅಭ್ಯಾಸ ಮಾಡಬೇಕು - ಅಂತ್ಯಕಾಲದಲ್ಲಿ ಒಬ್ಬ ತಂದೆಯ ವಿನಃ ಮತ್ತ್ಯಾವುದೇ ವಸ್ತು ನೆನಪಿಗೆ ಬರಬಾರದು. ನಮ್ಮದೇನೂ ಇಲ್ಲ, ಎಲ್ಲವೂ ತಂದೆಯದೇ ಆಗಿದೆ. ತಂದೆ ಮತ್ತು ಆಸ್ತಿ - ಇದೇ ಸ್ಮೃತಿಯಿಂದ ತೇರ್ಗಡೆಯಾಗಿ ವಿಜಯಮಾಲೆಯಲ್ಲಿ ಬರಬೇಕಾಗಿದೆ.

ವರದಾನ:
ಮನಸ್ಸಿನ ಮೇಲೆ ಪೂರ್ತಿ ಗಮನ ಕೊಡುವಂತಹವರು ಏರುವ ಕಲೆಯ ಅನುಭವಿ ವಿಶ್ವ ಪರಿವರ್ತಕ ಭವ

ಈಗ ಅಂತಿಮ ಸಮಯದಲ್ಲಿ ಮನಸಾ ಮೂಲಕವೇ ವಿಶ್ವ ಪರಿವರ್ತನೆಗೆ ನಿಮಿತ್ತರಾಗಬೇಕು ಆದ್ದರಿಂದ ಈಗ ಮನಸ್ಸಿನ ಒಂದು ಸಂಕಲ್ಪವೂ ಸಹ ವ್ಯರ್ಥವಾದರೆ ಬಹಳಷ್ಟು ಕಳೆದುಕೊಂಡ ಹಾಗೆ, ಒಂದು ಸಂಕಲ್ಪ ಕೂಡ ಸಾಧಾರಣ ಮಾತೆಂದು ತಿಳಿಯಬೇಡಿ, ವರ್ತಮಾನ ಸಮಯ ಸಂಕಲ್ಪದ ಹಲ್ ಚಲ್ ಕೂಡ ದೊಡ್ಡ ಹಲ್ ಚಲ್ ಎಂದು ಎಣಿಸಲಾಗುತ್ತದೆ ಏಕೆಂದರೆ ಈಗ ಸಮಯ ಬದಲಾಗಿದೆ, ಪುರುಷಾರ್ಥದ ಗತಿಯೂ ಸಹ ಬದಲಾಗಿದೆ ಅಂದಾಗ ಸಂಕಲ್ಪದಲ್ಲಿಯೂ ಫುಲ್ ಸ್ಟಾಪ್ ಇಡಬೇಕಾಗಿದೆ. ಯಾವಾಗ ಮನಸ್ಸಿನ ಮೇಲೆ ಇಷ್ಟು ಗಮನ ಇರಲಿ ಆಗ ಏರುವ ಕಲೆಯ ಮೂಲಕ ವಿಶ್ವ ಪರಿವರ್ತಕರಾಗಿಬಿಡುವಿರಿ.

ಸ್ಲೋಗನ್:
ಕರ್ಮದಲ್ಲಿ ಯೋಗದ ಅನುಭವವಿರುವುದು ಅರ್ಥಾತ್ ಕರ್ಮಯೋಗಿಗಳಾಗುವುದು.

ಅವ್ಯಕ್ತ ಸೂಚನೆ: ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ

“ತಾವು ಮತ್ತು ತಂದೆ”- ಈ ಕಂಬೈಂಡ್ ರೂಪದ ಅನುಭವ ಮಾಡುತ್ತಾ, ಸದಾ ಶುಭ ಭಾವನೆ, ಶ್ರೇಷ್ಠ ಕಾಮನೆ, ಶ್ರೇಷ್ಠ ವಾಣಿ, ಶ್ರೇಷ್ಠ ದೃಷ್ಟಿ, ಶ್ರೇಷ್ಠ ಕರ್ಮದ ಮೂಲಕ ವಿಶ್ವ ಕಲ್ಯಾಣಕಾರಿ ಸ್ವರೂಪದ ಅನುಭವ ಮಾಡಿ ಅಂದಾಗ ಸೆಕೆಂಡಿನಲ್ಲಿ ಸರ್ವ ಸಮಸ್ಯೆಗಳ ಸಮಾಧಾನ ಮಾಡಬಹುದು. ಸದಾ ಒಂದು ಸ್ಲೋಗನ್ ನೆನಪಿಟ್ಟುಕೊಳ್ಳಿ – ”ಸಮಸ್ಯೆಯಾಗುವುದಿಲ್ಲ, ಸಮಸ್ಯೆಯಿಂದ ಗಾಬರಿಯಾಗುವುದಿಲ್ಲ, ಸ್ವಯಂ ಸಮಾಧಾನ ಸ್ವರೂಪರಾಗಿರುತ್ತೇವೆ ಮತ್ತು ಅನ್ಯರಿಗೂ ಸಮಾಧಾನ ಕೊಡುವೆವು” ಈ ಸ್ಮೃತಿ ಸಫಲತಾ ಸ್ವರೂಪರನ್ನಾಗಿ ಮಾಡಿಬಿಡುತ್ತದೆ.