30.06.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ತಂದೆಯು ನಿಮ್ಮನ್ನು ಜ್ಞಾನದಿಂದ ಸುಗಂಧಭರಿತ ಹೂಗಳನ್ನಾಗಿ ಮಾಡಲು ಬಂದಿದ್ದಾರೆ ಅಂದಾಗ ನೀವು ಮುಳ್ಳಾಗಬಾರದು, ಮುಳ್ಳುಗಳನ್ನು ಈ ಸಭೆಯಲ್ಲಿ ಕರೆತರಬಾರದು”

ಪ್ರಶ್ನೆ:
ಯಾವ ಮಕ್ಕಳು ನೆನಪಿನ ಯಾತ್ರೆಯಲ್ಲಿ ಪರಿಶ್ರಮಪಡುವರೋ ಅವರ ಲಕ್ಷಣಗಳೇನು?

ಉತ್ತರ:
ನೆನಪಿನ ಪರಿಶ್ರಮ ಪಡುವ ಮಕ್ಕಳು ಬಹಳ ಖುಷಿಯಲ್ಲಿರುತ್ತಾರೆ. ನಾವೀಗ ಹಿಂತಿರುಗಿ ಮನೆಗೆ ಹೋಗುತ್ತಿದ್ದೇವೆ ನಂತರ ನಾವು ಸುಗಂಧಭರಿತ ಹೂದೋಟದಲ್ಲಿ ಹೋಗುತ್ತೇವೆ ಎಂದು ಬುದ್ಧಿಯಲ್ಲಿರುತ್ತದೆ. ನೀವು ನೆನಪಿನ ಯಾತ್ರೆಯಿಂದ ಸುಗಂಧಭರಿತರಾಗುತ್ತೀರಿ ಮತ್ತು ಅನ್ಯರನ್ನೂ ಮಾಡುತ್ತೀರಿ

ಓಂ ಶಾಂತಿ.
ಹೂದೋಟದ ಮಾಲೀಕನು ಕುಳಿತಿದ್ದಾರೆ, ಮಾಲಿಯೂ ಇದ್ದಾರೆ, ಹೂಗಳೂ ಇದ್ದಾರೆ. ಇದು ಹೊಸ ಮಾತಾಗಿದೆಯಲ್ಲವೆ. ಒಂದುವೇಳೆ ಈಮಾತುಗಳನ್ನು ಹೊಸಬರು ಕೇಳಿಸಿಕೊಂಡರೆ ಇವರೇನು ಹೇಳುತ್ತಾರೆ.ತೋಟದ ಮಾಲೀಕ, ಹೂ ಇದೆಲ್ಲಾ ಏನಾಗಿದೆ? ಎಂದು ಹೇಳುತ್ತಾರೆ ಏಕೆಂದರೆ ಈ ರೀತಿಯ ಮಾತುಗಳನ್ನು ಶಾಸ್ತ್ರಗಳಲ್ಲೆಂದೂ ಕೇಳಿರುವುದಿಲ್ಲ. ನೀವು ಮಕ್ಕಳಿಗೆ ತಿಳಿದಿದೆ- ಹೂದೋಟದ ಮಾಲೀಕ ಅಂಬಿಗನನ್ನು ಎಲ್ಲರೂ ನೆನಪು ಮಾಡುತ್ತಾರೆ. ಈಗ ಇಲ್ಲಿಂದ ನಮ್ಮನ್ನು ಪಾವನ ಮಾಡಲು ತಂದೆಯು ಬಂದಿದ್ದಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ ನೆನಪಿನ ಯಾತ್ರೆಯಲ್ಲಿರಬೇಕಾಗಿದೆ. ತಮ್ಮನ್ನು ತಾವೇ ನೋಡಿಕೊಳ್ಳಿ- ನಾವು ಎಷ್ಟು ದೂರ ಹೋಗುತ್ತಿದ್ದೇವೆ. ನಮ್ಮ ಸತೋಪ್ರಧಾನ ಸ್ಥಿತಿಯನ್ನು ಎಲ್ಲಿಯವರೆಗೆ ತಲುಪಿದ್ದೇವೆ? ಸ್ಥಿತಿಯು ಎಷ್ಟು ಸತೋಪ್ರಧಾನವಾಗುತ್ತಾ ಹೋಗುವುದೋ ಅಷ್ಟು ನಾವೀಗ ಹಿಂತಿರುಗುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳುವಿರಿ. ಎಲ್ಲಿಯವರೆಗೆ ನಾವು ತಲುಪಿದ್ದೇವೆ, ಇದೆಲ್ಲವೂ ನೆನಪಿನ ಯಾತ್ರೆಯ ಮೇಲೆ ಆಧಾರಿತವಾಗಿದೆ. ನೆನಪಿನಿಂದ ಖುಷಿಯೂ ಹೆಚ್ಚುವುದು, ಯಾರೆಷ್ಟು ಪರಿಶ್ರಮ ಪಡುವರೋ ಅಷ್ಟು ಅವರಲ್ಲಿ ಖುಷಿಯು ಬರುವುದು. ಹೇಗೆ ಪರೀಕ್ಷೆಯ ದಿನಗಳು ಹತ್ತಿರ ಬಂದಾಗ ನಾವು ಎಷ್ಟು ತೇರ್ಗಡೆಯಾಗುವೆವೆಂದು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುತ್ತಾರಲ್ಲವೆ. ಇಲ್ಲಿಯೂ ಹಾಗೆಯೇ ಪ್ರತಿಯೊಬ್ಬ ಮಗು ತಮ್ಮನ್ನು ಅರಿತುಕೊಂಡಿದ್ದೀರಿ- ನಾವು ಎಷ್ಟು ಸುಗಂಧಭರಿತ ಹೂವಾಗಿದ್ದೇವೆ? ಮತ್ತೆ ಅನ್ಯರನ್ನೂ ಎಷ್ಟು ಸುಗಂಧಭರಿತ ಹೂವನ್ನಾಗಿ ಮಾಡುತ್ತೇವೆ? ಮುಳ್ಳುಗಳ ಕಾಡೆಂದು ಹೇಳುತ್ತಾರೆ. ಸತ್ಯಯುಗವು ಹೂವಿನ ಉದ್ಯಾನವನವಾಗಿದೆ. ಅಲ್ಲಾನ ಹೂದೋಟವೆಂದು ಮುಸಲ್ಮಾನರೂ ಹೇಳುತ್ತಾರೆ. ಅಲ್ಲಿ ಒಂದು ಹೂದೋಟವಿದೆ, ಅಲ್ಲಿಗೆ ಯಾರು ಹೋಗುವರೋ ಅವರಿಗೆ ಖುದಾ ಹೂಗಳನ್ನು ಕೊಡುತ್ತಾರೆ. ಮನಸ್ಸಿನಲ್ಲಿರುವ ಬಯಕೆಗಳನ್ನು ಈಡೇರಿಸುತ್ತಾರೆಂದು ಅವರು ತಿಳಿಯುತ್ತಾರೆ ಆದರೆ ಈ ರೀತಿಯಾಗಿ ಯಾರೂ ಹೂಗಳನ್ನು ತೆಗೆದುಕೊಡುವುದಿಲ್ಲ. ಯಾರ ಬುದ್ಧಿಯಲ್ಲಿ ಏನಿದೆಯೋ ಅದು ಸಾಕ್ಷಾತ್ಕಾರವಾಗಿಬಿಡುತ್ತದೆ. ಅಲ್ಲಿ ಸಾಕ್ಷಾತ್ಕಾರದ ಮೇಲೆ ಏನ್ನೂ ಇಲ್ಲ. ಭಕ್ತಿಮಾರ್ಗದಲ್ಲಂತೂ ಸಾಕ್ಷಾತ್ಕಾರವಾಗಿ ತಮ್ಮ ತಲೆಯನ್ನೂ ಕತ್ತರಿಸಿಕೊಳ್ಳುತ್ತಾರೆ. ಮೀರಾಗೆ ಸಾಕ್ಷಾತ್ಕಾರವಾಯಿತು, ಅವಳಿಗೆ ಎಷ್ಟೊಂದು ಮಾನ್ಯತೆಯಿದೆ, ಅದು ಭಕ್ತಿಮಾರ್ಗವಾಗಿದೆ. ಅರ್ಧಕಲ್ಪದವರೆಗೆ ಭಕ್ತಿಯು ನಡೆಯಲೇಬೇಕಾಗಿದೆ. ಜ್ಞಾನವೇ ಇರುವುದಿಲ್ಲ. ವೇದ-ಶಾಸ್ತ್ರಗಳಿಗೆ ಎಷ್ಟೊಂದು ಮಾನ್ಯತೆಯಿದೆ. ವೇದವು ನಮ್ಮ ಪ್ರಾಣವಾಗಿದೆಯೆಂದು ಹೇಳುತ್ತಾರೆ, ಈ ವೇದಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗಕ್ಕಾಗಿಯೇ ಇದೆಯೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಭಕ್ತಿಯದು ಎಷ್ಟೊಂದು ವಿಸ್ತಾರವಿದೆ, ಬಹಳ ದೊಡ್ಡ ವೃಕ್ಷವಾಗಿದೆ, ಜ್ಞಾನವು ಬೀಜವಾಗಿದೆ. ಈಗ ಜ್ಞಾನದಿಂದ ನೀವು ಎಷ್ಟು ಶುದ್ಧರಾಗುತ್ತೀರಿ. ಸುಗಂಧಭರಿತ ಹೂಗಳಾಗುತ್ತೀರಿ. ಇದು ನಿಮ್ಮ ಹೂದೋಟವಾಗಿದೆ. ಇಲ್ಲಿ ಯಾರಿಗೂ ಮುಳ್ಳೆಂದು ಹೇಳುವುದಿಲ್ಲ ಏಕೆಂದರೆ ಇಲ್ಲಿ ಯಾರೂ ವಿಕಾರದಲ್ಲಿ ಹೋಗುವುದಿಲ್ಲ. ಆದ್ದರಿಂದ ಈ ಹೂದೋಟದಲ್ಲಿ ಒಂದುಮುಳ್ಳೂ ಇಲ್ಲವೆಂದು ಹೇಳಲಾಗುತ್ತದೆ. ಮುಳ್ಳುಗಳು ಕಲಿಯುಗದಲ್ಲಿದ್ದಾರೆ, ಈಗ ಇದು ಪುರುಷೋತ್ತಮ ಸಂಗಮಯುಗವಾಗಿದೆ. ಇದರಲ್ಲಿ ಮುಳ್ಳುಗಳೆಲ್ಲಿಂದ ಬರುವುದು! ಒಂದುವೇಳೆ ಯಾರಾದರೂ ಮುಳ್ಳಾಗಿರುವವರು ಇಲ್ಲಿ ಕುಳಿತಿದ್ದರೆ ತಮಗೆ ತಾವೇ ನಷ್ಟವನ್ನುಂಟುಮಾಡಿಕೊಳ್ಳುತ್ತಾರೆ ಏಕೆಂದರೆ ಇದು ಇಂದ್ರಪ್ರಸ್ಥವಾಗಿದೆಯಲ್ಲವೆ. ಇದರಲ್ಲಿ ಜ್ಞಾನಫರಿಶ್ತೆಗಳು ಕುಳಿತಿದ್ದಾರೆ. ಇವರು ಜ್ಞಾನದ ನರ್ತನ ಮಾಡುವಂತಹ ಫರಿಶ್ತೆಗಳಾಗಿದ್ದಾರೆ. ಮುಖ್ಯ-ಮುಖ್ಯವಾದವರಿಗೆ ಪುಖರಾಜಪರಿ, ನೀಲಂಪರಿ, ಮುಂತಾದ ಹೆಸರುಗಳಿವೆ. ಅವರೇ ನವರತ್ನಗಳೆಂದು ಗಾಯನಗೊಳ್ಳುತ್ತಾರೆ. ಆದರೆ ಇವರು ಯಾರಾಗಿದ್ದರು ಎಂದು ಯಾರಿಗೂ ತಿಳಿದಿಲ್ಲ. ತಂದೆಯು ಕೇವಲ ಇಷ್ಟನ್ನೇ ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿ. ನೀವು ಮಕ್ಕಳ ಬುದ್ಧಿಯಲ್ಲಿ ಈಗ ತಿಳುವಳಿಕೆಯಿದೆ. 84 ಜನ್ಮಗಳ ಚಕ್ರವೂ ನಿಮ್ಮ ಬುದ್ಧಿಯಲ್ಲಿದೆ. ಶಾಸ್ತ್ರಗಳಲ್ಲಂತೂ 84 ಲಕ್ಷ ಜನ್ಮಗಳೆಂದು ಹೇಳಿಬಿಟ್ಟಿದ್ದಾರೆ. ಮಧುರಾತಿ ಮಧುರ ಅಗಲಿಹೋಗಿ ಮರಳಿಸಿಕ್ಕಿರುವ ಮಕ್ಕಳಿಗೆ ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೀವು 84 ಜನ್ಮಗಳನ್ನು ತೆಗೆದುಕೊಂಡಿರಿ. ಈಗ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ, ಇದು ಎಷ್ಟೊಂದು ಸಹಜವಾಗಿದೆ. ಭಗವಾನುವಾಚ ಮಕ್ಕಳಪ್ರತಿ, ನನ್ನೊಬ್ಬನನ್ನೇ ನೆನಪು ಮಾಡಿ. ನೀವೀಗ ಸುಗಂಧಭರಿತ ಹೂಗಳಾಗಲು ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಮುಳ್ಳುಗಳಾಗಬೇಡಿ. ಇಲ್ಲಿ ಎಲ್ಲರೂ ಮಧುರಾತಿ ಮಧುರ ಹೂಗಳಾಗಿದ್ದೀರಿ, ಮುಳ್ಳುಗಳಿಲ್ಲ. ಹಾ! ಮಾಯೆಯ ಬಿರುಗಾಳಿಗಳಂತೂ ಬರುತ್ತವೆ. ಮಾಯೆಯು ಎಷ್ಟು ಕಠಿಣವಾಗಿದೆ, ಅದು ಬಹುಬೇಗನೆ ಸಿಕ್ಕಿಹಾಕಿಸುತ್ತದೆ. ನಂತರ ನಾವು ಏನು ಮಾಡಿದೆವು, ನಮ್ಮ ಸಂಪಾದನೆಯೆಲ್ಲವೂ ಸಮಾಪ್ತಿಯಾಯಿತೆಂದು ಪಶ್ಚಾತ್ತಾಪಪಡುತ್ತಾರೆ.

ಇದು ಹೂದೋಟವಾಗಿದೆ. ಹೂದೋಟದಲ್ಲಿ ಒಳ್ಳೊಳ್ಳೆಯ ಹೂಗಳೂ ಇರುತ್ತದೆ ಹಾಗೆಯೇ ಈ ಹೂದೋಟದಲ್ಲಿಯೂ ಕೆಲವರು ಬಹಳ ಸುಂದರ ಹೂಗಳಾಗುತ್ತಾ ಹೋಗುತ್ತಾರೆ. ಹೇಗೆ ಮೊಗಲ್ ಗಾರ್ಡನ್ನಲ್ಲಿ ಒಳ್ಳೊಳ್ಳೆಯ ಹೂಗಳಿರುತ್ತವೆ. ಎಲ್ಲರೂ ಅದನ್ನು ನೋಡಲು ಹೋಗುತ್ತಾರೆ, ಇಲ್ಲಿ ನಿಮ್ಮ ಬಳಿಯಂತೂ ಯಾರೂ ನೋಡಲು ಹೋಗುವುದಿಲ್ಲ. ಮುಳ್ಳುಗಳಿಗೆ ನೀವು ಮುಖವನ್ನೇನು ತೋರಿಸುತ್ತೀರಿ! ಕೊಳಕಾದ ವಸ್ತ್ರವನ್ನು ಒಗೆದರೆಂದು ಗಾಯನವೂ ಇದೆ. ತಂದೆಗೆ(ಬ್ರಹ್ಮಾ ತಂದೆಗೆ) ಜಪಸಾಹೇಬ್, ಸುಖ್ಮಣಿ ಮೊದಲಾದವೆಲ್ಲವೂ ನೆನಪಿತ್ತು. ಅಖಂಡ ಪಾಠವನ್ನು ಪಠಣ ಮಾಡುತ್ತಿದ್ದರು, 8 ವರ್ಷದವರಾಗಿದ್ದಾಗ ಪೇಟ ಸುತ್ತುತ್ತಿದ್ದರು, ಮಂದಿರದಲ್ಲಿಯೇ ಇರುತ್ತಿದ್ದರು. ಮಂದಿರದ ಜವಾಬ್ದಾರಿಯೆಲ್ಲವೂ ಇವರ ಮೇಲಿತ್ತು ಅದ್ದರಿಂದ ಕೊಳಕಾದ ವಸ್ತ್ರಗಳನ್ನು ಒಗೆಯುವುದರ ಅರ್ಥವೇನೆಂಬುದನ್ನು ಈಗ ತಿಳಿದುಕೊಂಡಿದ್ದಾರೆ. ಮಹಿಮೆಯೆಲ್ಲವೂ ತಂದೆಯದೇ ಆಗಿದೆ, ತಂದೆಯು ನೀವು ಮಕ್ಕಳಿಗೆ ಈಗ ತಿಳಿಸಿಕೊಡುತ್ತಾರೆ ಮತ್ತು ಮಕ್ಕಳಿಗೆ ಈ ಮಾತನ್ನು ಹೇಳುತ್ತಾರೆ- ಇಲ್ಲಿಗೆ ಒಳ್ಳೊಳ್ಳೆಯ ಹೂಗಳನ್ನು ಕರೆತನ್ನಿ. ಯಾರು ಒಳ್ಳೊಳ್ಳೆಯ ಹೂಗಳನ್ನು ತರುವರೋ ಅವರಿಗೆ ಒಳ್ಳೆಯ ಹೂವೆಂದು ಹೇಳಲಾಗುವುದು. ನಾವು ಶ್ರೀಲಕ್ಷ್ಮೀ-ನಾರಾಯಣರಾಗುತ್ತೇವೆಂದು ಎಲ್ಲರೂ ಹೇಳುತ್ತಾರೆ ಅಂದರೆ ಅರ್ಥ- ಗುಲಾಬಿ ಹೂವಾದರು. ತಂದೆಯು ತಿಳಿಸುತ್ತಾರೆ- ಒಳ್ಳೆಯದು- ನೀವು ಮಕ್ಕಳ ಬಾಯಲ್ಲಿ ಗುಲಾಬ್ ಜಾಮೂನ್. ಈಗ ಪುರುಷಾರ್ಥ ಮಾಡಿ ಸದಾ ಗುಲಾಬಿಗಳಾಗಿ. ಅನೇಕ ಮಂದಿ ಮಕ್ಕಳಿದ್ದಾರೆ. ಪ್ರಜೆಗಳಂತೂ ಬಹಳಷ್ಟುಮಂದಿ ತಯಾರಾಗುತ್ತಿದ್ದಾರೆ. ಸತ್ಯಯುಗದಲ್ಲಿ ಇರುವುದೇ ರಾಜ, ರಾಣಿ ಮತ್ತು ಪ್ರಜೆಗಳು. ಸತ್ಯಯುಗದಲ್ಲಿ ಮಂತ್ರಿಗಳೂ ಇರುವುದಿಲ್ಲ ಏಕೆಂದರೆ ರಾಜನಲ್ಲಿಯೇ ಶಕ್ತಿಯಿರುತ್ತದೆ. ಮಂತ್ರಿಗಳಿಂದ ಸಲಹೆಯನ್ನು ತೆಗೆದುಕೊಳ್ಳುವ ಅವಶ್ಯಕತೆಯಿರುವುದಿಲ್ಲ. ಸಲಹೆ ತೆಗೆದುಕೊಳ್ಳುವಂತಿದ್ದರೆ ಸಲಹೆ ಕೊಡುವವರೇ ದೊಡ್ಡವರಾದರಲ್ಲವೆ. ಅಂದಾಗ ಅಲ್ಲಿ ಭಗವಾನ್-ಭಗವತಿಗೆ (ದೇವತೆಗಳಿಗೆ) ಯಾರ ಸಲಹೆಯ ಅವಶ್ಯಕತೆಯೇ ಇರುವುದಿಲ್ಲ. ಯಾವಾಗ ಪತಿತರಾಗುವರೋ ಆಗ ಮಂತ್ರಿಗಳಿರುತ್ತಾರೆ. ಇದು ಭಾರತದ ಮಾತಾಗಿದೆ, ಮತ್ತ್ಯಾವುದೇ ಖಂಡವಿರುವುದಿಲ್ಲ, ಇಲ್ಲಿ ರಾಜರಿಗೆ ರಾಜರು ತಲೆಬಾಗುತ್ತಾರೆ. ಜ್ಞಾನಮಾರ್ಗದಲ್ಲಿ ಪೂಜ್ಯರು, ಅಜ್ಞಾನಮಾರ್ಗದಲ್ಲಿ ಪೂಜಾರಿಗಳೆಂದು ಇಲ್ಲಿಯೇ ತೋರಿಸುತ್ತಾರೆ. ಪೂಜ್ಯರು ಡಬಲ್ ಕಿರೀಟಧಾರಿಗಳು ಮತ್ತು ಪೂಜಾರಿಗಳು ಸಿಂಗಲ್ ಕಿರೀಟಧಾರಿಗಳು. ಭಾರತದಂತಹ ಪವಿತ್ರವಾದ ಖಂಡವು ಯಾವುದೂ ಇಲ್ಲ. ಭಾರತವೇ ಪ್ಯಾರಡೈಸ್, ಬಹಿಶ್ತ್, ಸ್ವರ್ಗವಾಗಿತ್ತು. ನೀವು ಅದಕ್ಕಾಗಿಯೇ ಓದುತ್ತೀರಿ ಅಂದಮೇಲೆ ನೀವೀಗ ಹೂಗಳಾಗಬೇಕಾಗಿದೆ. ಹೂದೋಟದ ಮಾಲೀಕನೂ ಬಂದಿದ್ದಾರೆ, ಅವರು ಮಾಲಿಯೂ ಆಗಿದ್ದಾರೆ, ಮಾಲಿಗಳು ನಂಬರ್ವಾರ್ ಇರುತ್ತಾರೆ. ಇದು ಹೂದೋಟವಾಗಿದೆ, ಇದರಲ್ಲಿ ಮುಳ್ಳುಗಳಿಲ್ಲ. ಮುಳ್ಳುಗಳು ದುಃಖವನ್ನೇ ಕೊಡುತ್ತದೆ ಎಂದು ಮಕ್ಕಳಿಗೂ ಸಹ ತಿಳಿದಿದೆ. ತಂದೆಯಂತೂ ಯಾರಿಗೂ ದುಃಖವನ್ನು ಕೊಡುವುದಿಲ್ಲ. ಅವರು ದುಃಖಹರ್ತ-ಸುಖಕರ್ತನಾಗಿದ್ದಾರೆ, ಎಷ್ಟು ಮಧುರತಂದೆಯಾಗಿದ್ದಾರೆ.

ನೀವು ಮಕ್ಕಳಿಗೆ ತಂದೆಯ ಪ್ರತಿ ಪ್ರೀತಿಯಿದೆ. ತಂದೆಯೂ ಸಹ ಮಕ್ಕಳನ್ನು ಪ್ರೀತಿ ಮಾಡುತ್ತಾರಲ್ಲವೆ. ಇದು ವಿದ್ಯೆಯಾಗಿದೆ. ನಾನು ನಿಮಗೆ ಈಗ ಪ್ರತ್ಯಕ್ಷದಲ್ಲಿ ಓದಿಸುತ್ತೇನೆ. ಇವರೂ (ಬ್ರಹ್ಮಾ) ಸಹ ಓದುತ್ತಾರೆ. ನೀವು ಓದಿ ಮತ್ತೆ ಅನ್ಯರಿಗೂ ಓದಿಸುತ್ತೀರೆಂದರೆ ಅನ್ಯರೂ ಮುಳ್ಳುಗಳಿಂದ ಹೂಗಳಾಗಲಿ. ಭಾರತವು ಮಹಾದಾನಿಯೆಂದು ಗಾಯನವಿದೆ ಏಕೆಂದರೆ ನೀವು ಮಕ್ಕಳೀಗ ಮಹಾದಾನಿಗಳಾಗಿದ್ದೀರಿ. ಅವಿನಾಶಿ ಜ್ಞಾನರತ್ನಗಳ ದಾನ ಮಾಡುತ್ತೀರಿ. ಆತ್ಮವೇ ರೂಪಭಸಂತನಾಗಿದ್ದಾರೆ. ಅವರಲ್ಲಿ ಸಂಪೂರ್ಣ ಜ್ಞಾನವಿದೆ. ಜ್ಞಾನಸಾಗರ ಪರಮಪಿತ ಪರಮಾತ್ಮನಾಗಿದ್ದಾರೆ, ಅವರು ಅಥಾರಿಟಿಯಲ್ಲವೆ. ಜ್ಞಾನಸಾಗರನು ಒಬ್ಬರೇ ತಂದೆಯಾಗಿದ್ದಾರೆ ಆದ್ದರಿಂದ ಇಡೀ ಸಾಗರವನ್ನು ಶಾಹಿಯನ್ನಾಗಿ ಮಾಡಿ ಬರೆದರೂ ಸಹ ಅವರ ಮಹಿಮೆಯು ಮುಗಿಯುವುದಿಲ್ಲವೆಂದು ಗಾಯನ ಮಾಡಲಾಗುತ್ತದೆ ಮತ್ತು ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿಯ ಗಾಯನವಿದೆ. ನಿಮ್ಮಬಳಿ ಯಾವುದೇ ಶಾಸ್ತ್ರಗಳಿಲ್ಲ. ಅಲ್ಲಿ ಯಾವುದೇ ಪಂಡಿತರ ಬಳಿ ಹೋಗುತ್ತೀರೆಂದರೆ ಈ ಪಂಡಿತರು ಬಹಳ ಓದಿಸುವ ಅಥಾರಿಟಿಯಾಗಿದ್ದಾರೆ, ಇವರು ಎಲ್ಲಾ ವೇದಶಾಸ್ತ್ರಗಳನ್ನು ಕಂಠಪಾಠ ಮಾಡಿದ್ದಾರೆಂದು ತಿಳಿಯುತ್ತಾರೆ. ಅಂತಹವರು ಮತ್ತೆ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತಾರೆಂದರೆ ಇನ್ನೊಂದು ಜನ್ಮದಲ್ಲಿ ಬಾಲ್ಯದಲ್ಲಿಯೇ ಅದನ್ನು ಅಧ್ಯಯನ ಮಾಡಿಬಿಡುತ್ತಾರೆ. ನೀವು ಸಂಸ್ಕಾರವನ್ನು ತೆಗೆದುಕೊಂಡು ಹೋಗುವುದಿಲ್ಲ. ನೀವು ವಿದ್ಯೆಯ ಫಲಿತಾಂಶವನ್ನು ತೆಗೆದುಕೊಂಡು ಹೋಗುತ್ತೀರಿ. ನಿಮ್ಮ ವಿದ್ಯೆಯು ಪೂರ್ಣವಾಗಿ ನಂತರ ಫಲಿತಾಂಶವು ಬರುವುದು ಮತ್ತು ಆ ಪದವಿಯನ್ನು ಪಡೆಯುತ್ತೀರಿ. ಅಲ್ಲಿ ಅನ್ಯರಿಗೆ ತಿಳಿಸಲು ಜ್ಞಾನದ ಸಂಸ್ಕಾರವೇನೂ ನೀವು ತೆಗೆದುಕೊಂಡು ಹೋಗುವುದಿಲ್ಲ. ಇಲ್ಲಂತೂ ನಿಮ್ಮದು ವಿದ್ಯೆಯಾಗಿದೆ. ಇಲ್ಲಿನ ಪ್ರಾಲಬ್ಧವು ಹೊಸ ಪ್ರಪಂಚದಲ್ಲಿ ಸಿಗುವುದು. ನೀವು ಮಕ್ಕಳಿಗೆ ತಂದೆಯು ತಿಳಿಸಿದ್ದಾರೆ- ಮಾಯೆಯು ಕಡಿಮೆ ಶಕ್ತಿವಂತನಲ್ಲ. ಮಾಯೆಗೆ ಎಲ್ಲರನ್ನು ದುರ್ಗತಿಯಲ್ಲಿ ಕರೆದುಕೊಂಡು ಹೋಗುವ ಶಕ್ತಿಯಿದೆ ಆದರೆ ಅದಕ್ಕೇನು ಮಹಿಮೆ ಮಾಡುವುದಿಲ್ಲ. ಆ ಮಾಯೆಯು ದುಃಖ ಕೊಡುವುದರಲ್ಲಿ ಶಕ್ತಿವಂತನಲ್ಲವೆ. ತಂದೆಯು ಸುಖವನ್ನು ಕೊಡುವುದರಲ್ಲಿ ಶಕ್ತಿವಂತನಾಗಿದ್ದಾರೆ ಆದ್ದರಿಂದ ಅವರ ಗಾಯನವಿದೆ. ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. ನೀವು ಸುಖವನ್ನೂ ಪಡೆಯುತ್ತೀರಿ ಮತ್ತು ದುಃಖವನ್ನೂ ಪಡೆಯುತ್ತೀರಿ. ಸೋಲು ಮತ್ತು ಗೆಲುವು ಯಾರದೆಂದೂ ಸಹ ನಿಮಗೆ ತಿಳಿದಿರಬೇಕಲ್ಲವೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ, ಅವರ ಜಯಂತಿಯನ್ನು ಭಾರತದಲ್ಲಿಯೇ ಆಚರಿಸಲಾಗುತ್ತದೆ ಆದರೆ ಶಿವತಂದೆಯು ಯಾವಾಗ ಬಂದರು, ಬಂದು ಏನು ಮಾಡಿದರೆಂದು ಯಾರಿಗೂ ತಿಳಿದಿಲ್ಲ. ಹೆಸರು-ಗುರುತುಗಳನ್ನೇ ಮರೆಮಾಡಿಬಿಟ್ಟಿದ್ದಾರೆ. ಮಗನಾದ ಕೃಷ್ಣನ ಹೆಸರನ್ನು ಕೊಟ್ಟುಬಿಟ್ಟಿದ್ದಾರೆ. ವಾಸ್ತವದಲ್ಲಿ ಪ್ರಿಯಾತಿಪ್ರಿಯ ತಂದೆಯ ಮಹಿಮೆಯೇ ಬೇರೆ, ಕೃಷ್ಣನ ಮಹಿಮೆಯೇ ಬೇರೆಯಾಗಿದೆ. ಅವರು ನಿರಾಕಾರ, ಇವರು ಸಾಕಾರಿಯಾಗಿದ್ದಾರೆ. ಸರ್ವಗುಣ ಸಂಪನ್ನ, 16 ಕಲಾಸಂಪೂರ್ಣ........ ಇದು ಕೃಷ್ಣನ ಮಹಿಮೆಯಾಗಿದೆ. ಶಿವತಂದೆಗೆ ಈ ಮಹಿಮೆ ಮಾಡುವುದಿಲ್ಲ. ಯಾರಲ್ಲಿ ಗುಣಗಳಿವೆಯೋ ಅವರಲ್ಲಿ ಅವಗುಣಗಳೂ ಇರುತ್ತವೆ ಆದ್ದರಿಂದ ತಂದೆಯ ಮಹಿಮೆಯೇ ಬೇರೆಯಾಗಿದೆ. ತಂದೆಗೆ ಅಕಾಲಮೂರ್ತಿಯೆಂದು ಹೇಳುತ್ತಾರಲ್ಲವೆ. ನಾವೂ ಸಹ ಅಕಾಲಮೂರ್ತಿಗಳಾಗಿದ್ದೇವೆ. ಆತ್ಮವನ್ನು ಕಾಲವು ಕಬಳಿಸಲು ಸಾಧ್ಯವಿಲ್ಲ. ಅಕಾಲಮೂರ್ತಿ ಆತ್ಮನಿಗೆ ಈ ಭೃಕುಟಿಯು ಸಿಂಹಾಸನವಾಗಿದೆ, ನಮ್ಮ ತಂದೆಯು ಅಕಾಲಮೂರ್ತಿಯಾಗಿದ್ದಾರೆ. ಕಾಲ (ಮೃತ್ಯು) ವು ಶರೀರವನ್ನೇ ತಿನ್ನುತ್ತದೆ. ಇಲ್ಲಿ ಅಕಾಲಮೂರ್ತಿಯನ್ನು ಕರೆಯುತ್ತಾರೆ, ಸತ್ಯಯುಗದಲ್ಲಿ ಈ ರೀತಿ ಕರೆಯುವುದಿಲ್ಲ ಏಕೆಂದರೆ ಅಲ್ಲಿ ಸುಖವೇ ಸುಖವಿರುತ್ತದೆ ಆದ್ದರಿಂದ ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುವರು, ಸುಖದಲ್ಲಿ ಯಾರೂ ನೆನಪು ಮಾಡುವುದಿಲ್ಲವೆಂದು ಗಾಯನವಿದೆ. ಈಗ ರಾವಣರಾಜ್ಯದಲ್ಲಿ ಎಷ್ಟೊಂದು ದುಃಖವಿದೆ, ತಂದೆಯು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ ನಂತರ ಅಲ್ಲಿ ಅರ್ಧಕಲ್ಪದವರೆಗೆ ಯಾರೂ ಕರೆಯುವುದಿಲ್ಲ. ಹೇಗೆ ಲೌಕಿಕತಂದೆಯು ಮಕ್ಕಳಿಗೆ ಶೃಂಗಾರ ಮಾಡುತ್ತಾರೆ, ಆಸ್ತಿಯನ್ನು ಕೊಟ್ಟು ತಾನು ವಾನಪ್ರಸ್ಥಸ್ಥಿತಿಯನ್ನು ಸ್ವೀಕರಿಸುತ್ತಾರೆ. ಎಲ್ಲವನ್ನೂ ಮಕ್ಕಳಿಗೆ ಕೊಟ್ಟು ನಾನೀಗ ಸತ್ಸಂಗಕ್ಕೆ ಹೋಗುತ್ತೇನೆ, ತಿನ್ನುವುದಕ್ಕೆ ಏನಾದರೂ ಕಳುಹಿಸಿಕೊಡುತ್ತಾ ಇರು ಎಂದು ಹೇಳುತ್ತಾರೆ. ಈ ತಂದೆಯಂತೂ ಹಾಗೆ ಹೇಳುವುದಿಲ್ಲವಲ್ಲವೆ, ಇವರು ಹೇಳುತ್ತಾರೆ- ಮಧುರಾತಿ ಮಧುರ ಮಕ್ಕಳೇ, ನಾನು ನಿಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಟ್ಟು ವಾನಪ್ರಸ್ಥದಲ್ಲಿ ಹೋಗುತ್ತೇನೆ, ನನಗೆ ತಿನ್ನುವುದಕ್ಕಾಗಿ ಕಳುಹಿಸಿ ಎಂದು ಹೇಳುವುದಿಲ್ಲ. ಲೌಕಿಕ ಮಕ್ಕಳ ಕರ್ತವ್ಯವೇ ಆಗಿದೆ- ತಂದೆಯನ್ನು ಸಂಭಾಲನೆ ಮಾಡುವುದು. ಇಲ್ಲದಿದ್ದರೆ ಅವರು ತಿನ್ನುವುದಾದರೂ ಹೇಗೆ! ಈ ತಂದೆಯಂತೂ ನಾನು ನಿಷ್ಕಾಮ ಸೇವಾಧಾರಿಯೆಂದು ಹೇಳುತ್ತಾರೆ. ಯಾವ ಮನುಷ್ಯರೂ ನಿಷ್ಕಾಮಿಗಳಾಗಿರಲು ಸಾಧ್ಯವಿಲ್ಲ. ನಿಷ್ಕಾಮಿಯಾದರೆ ಹಸಿವಿನಿಂದ ಸಾಯಬೇಕಾಗುವುದು. ನಾನೇನು ಹಸಿವಿನಿಂದ ಇರುತ್ತೇನೆಯೇ? ನಾನು ಅಭೋಕ್ತನಾಗಿದ್ದೇನೆ, ನೀವು ಮಕ್ಕಳಿಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಟ್ಟು ನಾನು ಹೋಗಿ ವಿಶ್ರಾಂತಿ ಪಡೆಯುತ್ತೇನೆ. ಮತ್ತು ನನ್ನ ಪಾತ್ರವು ಮುಕ್ತಾಯವಾಗುವುದು. ನಂತರ ಭಕ್ತಿಮಾರ್ಗದಲ್ಲಿ ಆರಂಭವಾಗುತ್ತದೆ. ಈ ಅನಾದಿನಾಟಕವು ಮಾಡಲ್ಪಟ್ಟಿದೆ. ಈ ರಹಸ್ಯವನ್ನು ತಂದೆಯು ತಿಳಿಸುತ್ತಾರೆ. ವಾಸ್ತವದಲ್ಲಿ ನಿಮ್ಮ ಪಾತ್ರವು ಎಲ್ಲರಿಗಿಂತ ಹೆಚ್ಚಿನದಾಗಿದೆ ಏಕೆಂದರೆ ನಿಮಗೆ ಬಳುವಳಿಯೂ ಸಿಗಬೇಕು. ನಾನು ವಿಶ್ರಾಂತಿ ಪಡೆಯುತ್ತೇನೆ ಆಗ ನೀವು ಬ್ರಹ್ಮಾಂಡದ ಮಾಲೀಕರು, ವಿಶ್ವದ ಮಾಲೀಕರಾಗುತ್ತೀರಿ. ನಿಮ್ಮ ಹೆಸರು ಪ್ರಖ್ಯಾತವಾಗುತ್ತದೆ. ನೀವು ಡ್ರಾಮಾದ ರಹ್ಯಸವನ್ನೂ ತಿಳಿದುಕೊಂಡಿದ್ದೀರಿ. ನೀವು ಜ್ಞಾನದ ಹೂಗಳಾಗಿದ್ದೀರಿ. ಪ್ರಪಂಚದಲ್ಲಿ ಒಬ್ಬರೂ ಹೂಗಳಿಲ್ಲ. ರಾತ್ರಿ-ಹಗಲಿನ ಅಂತರವಿದೆ. ಅವರು ರಾತ್ರಿಯಲ್ಲಿದ್ದಾರೆ, ನೀವು ದಿನದಲ್ಲಿ ಹೋಗುತ್ತೀರಿ. ಇತ್ತೀಚೆಗೆ ನೋಡಿ, ವನಮಹೋತ್ಸವವನ್ನು ಮಾಡುತ್ತಿರುತ್ತಾರೆ. ಈಗ ಭಗವಂತನು ಮನುಷ್ಯರ ವನಮಹೋತ್ಸವವನ್ನು ಮಾಡುತ್ತಿದ್ದಾರೆ.

ತಂದೆಯನ್ನು ನೋಡಿ ಎಷ್ಟು ಕಮಾಲ್ ಮಾಡುತ್ತಾರೆ- ಬಡವರನ್ನು ದೇವತೆ, ಪ್ರಜೆಯನ್ನು ರಾಜನನ್ನಾಗಿ ಮಾಡುತ್ತಾರೆ. ಈಗ ಬೇಹದ್ದಿನ ತಂದೆಯಿಂದ ವ್ಯಾಪಾರ ಮಾಡಲು ನೀವು ಬಂದಿದ್ದೀರಿ. ಬಾಬಾ, ನಮ್ಮನ್ನು ಗುಲಾಮನಿಂದ ರಾಜನನ್ನಾಗಿ ಮಾಡಿ ಎಂದು ಹೇಳುತ್ತೀರಿ. ಇವರಂತೂ ಬಹಳ ಒಳ್ಳೆಯ ಗ್ರಾಹಕನಾಗಿದ್ದಾರೆ. ದುಃಖಹರ್ತ-ಸುಖಕರ್ತನೆಂದು ಅವರಿಗೆ ಹೇಳುತ್ತೀರಿ. ಇದರಂತಹ ಜ್ಞಾನವು ಮತ್ತ್ಯಾವುದೂ ಇಲ್ಲ. ಅವರು ಸುಖ ಕೊಡುವವರಾಗಿದ್ದಾರೆ. ಭಕ್ತಿಮಾರ್ಗದಲ್ಲಿಯೂ ನಾನು ನಿಮಗೆ ಕೊಡುತ್ತೇನೆಂದು ತಂದೆಯು ನಿಮಗೆ ತಿಳಿಸುತ್ತಾರೆ. ಡ್ರಾಮಾದಲ್ಲಿ ಸಾಕ್ಷಾತ್ಕಾರ ಇತ್ಯಾದಿಯೆಲ್ಲವೂ ನಿಗಧಿತವಾಗಿದೆ. ಈಗ ತಂದೆಯು ತಿಳಿಸುತ್ತಾರೆ- ನಾನು ಏನೇನು ಮಾಡುತ್ತೇನೆ, ಮುಂದೆಹೋದಂತೆ ಇನ್ನೂ ತಿಳಿಸುತ್ತಾ ಇರುತ್ತೇನೆ. ಕೊನೆಗೆ ಅಂತಿಮದಲ್ಲಿ ನೀವು ನಂಬರ್ವಾರ್ ಕರ್ಮಾತೀತ ಸ್ಥಿತಿಯನ್ನು ಹೊಂದುತ್ತೀರಿ. ಇದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ. ಆದರೂ ಸಹ ತಂದೆಯನ್ನು ನೆನಪು ಮಾಡಿ ಎಂದು ಮಕ್ಕಳಿಂದ ಪುರುಷಾರ್ಥ ಮಾಡಿಸಲಾಗುತ್ತದೆ. ಅವಶ್ಯವಾಗಿ ಈ ಮಹಾಭಾರತ ಯುದ್ಧವೂ ಇದೆ. ಎಲ್ಲರೂ ಸಮಾಪ್ತಿಯಾಗುತ್ತಾರೆ ಬಾಕಿ ಭಾರತವಾಸಿಗಳೇ ಉಳಿಯುತ್ತೀರಿ ನಂತರ ನೀವು ವಿಶ್ವದ ಮೇಲೆ ರಾಜ್ಯ ಮಾಡುತ್ತೀರಿ. ಈಗ ತಂದೆಯು ನಿಮಗೆ ಓದಿಸಲು ಬಂದಿದ್ದಾರೆ. ಅವರೇ ಜ್ಞಾನಸಾಗರನಾಗಿದ್ದಾರೆ. ಇದೂ ಸಹ ಆಟವಾಗಿದೆ, ಇದರಲ್ಲಿ ತಬ್ಬಿಬ್ಬಾಗುವ ಮಾತಿಲ್ಲ. ಮಾಯೆಯು ಬಿರುಗಾಳಿಗಳನ್ನು ತರುತ್ತದೆ. ತಂದೆಯು ತಿಳಿಸುತ್ತಾರೆ- ಇದರಲ್ಲಿಯೂ ಭಯಪಡಬೇಡಿ. ಯಾವಾಗ ತಂದೆಯ ಮಡಿಲನ್ನು ತೆಗೆದುಕೊಳ್ಳುತ್ತೀರಿ ಆಗ ಬಹಳ ಕೆಟ್ಟಸಂಕಲ್ಪಗಳು ಬರುತ್ತವೆ. ಮಡಿಲನ್ನು ತೆಗೆದುಕೊಳ್ಳುವುದಕ್ಕೆ ಮುಂಚೆ ಇಷ್ಟೊಂದು ಮಾಯೆಯ ಯುದ್ಧವಾಗುತ್ತಿರಲಿಲ್ಲ, ಮಡಿಲನ್ನು ಪಡೆದನಂತರವೇ ಬಿರುಗಾಳಿಗಳು ಬರುತ್ತವೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ಬಹಳ ಎಚ್ಚರಿಕೆಯಿಂದ ಮಡಿಲನ್ನು ತೆಗೆದುಕೊಳ್ಳಿ. ನಿರ್ಬಲರಾದರೆ ಮತ್ತೆ ಪ್ರಜೆಗಳಲ್ಲಿ ಬರಬೇಕಾಗುವುದು. ರಾಜ್ಯಪದವಿಯನ್ನು ಪಡೆಯುವುದು ಒಳ್ಳೆಯದಾಗಿದೆ. ಇಲ್ಲದಿದ್ದರೆ ದಾಸ-ದಾಸಿಗಳಾಗಬೇಕಾಗುವುದು. ಸೂರ್ಯವಂಶಿ-ಚಂದ್ರವಂಶಿ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1) ರೂಪಭಸಂತರಾಗಿ ಅವಿನಾಶಿ ಜ್ಞಾನರತ್ನಗಳ ದಾನ ಮಾಡಿ ಮಹಾದಾನಿಗಳಾಗಬೇಕಾಗಿದೆ. ಯಾವ ವಿದ್ಯೆಯನ್ನು ಓದುವಿರೋ ಅದನ್ನು ಅನ್ಯರಿಗೂ ಓದಿಸಬೇಕಾಗಿದೆ.

2) ಯಾವುದೇ ಮಾತಿನಲ್ಲಿ ತಬ್ಬಿಬ್ಬಾಗಬಾರದು ಅಥವಾ ಭಯಪಡಬಾರದು, ತಮ್ಮ ಸಂಭಾಲನೆ ಮಾಡಬೇಕಾಗಿದೆ, ತಮ್ಮೊಂದಿಗೆ ತಾವು ಕೇಳಿಕೊಳ್ಳಬೇಕು- ನಾನು ಯಾವ ಪ್ರಕಾರದ ಹೂವಾಗಿದ್ದೇನೆ. ನನ್ನಲ್ಲಿ ಯಾವುದೇ ದುರ್ಗಂಧವಿಲ್ಲವೆ?

ವರದಾನ:
ದೃಢ ಸಂಕಲ್ಪದ ಮುಖಾಂತರ ಬಲಹೀನತೆ ರೂಪಿ ಕಲಿಯುಗಿ ಪರ್ವತವನ್ನು ಸಮಾಪ್ತಿ ಮಾಡುವಂತಹ ಸಮರ್ಥಿ ಸ್ವರೂಪ ಭವ

ಹೃದಯ ವಿಧೀರ್ಣರಾಗುವುದು ಎಂದರೆ ಯಾವುದೇ ಸಂಸ್ಕಾರ ಅಥವಾ ಪರಿಸ್ಥಿತಿಗೆ ವಶೀಭೂತರಾಗುವುದು, ವ್ಯಕ್ತಿ ಅಥವಾ ವೈಭವದ ಕಡೆ ಆಕರ್ಷಿತರಾಗುವುದು-ಈ ಎಲ್ಲಾ ಬಲಹೀನತೆ ರೂಪಿ ಕಲಿಯುಗಿ ಪರ್ವತವನ್ನು ದೃಢ ಸಂಕಲ್ಪದ ಕಿರುಬೆರಳನ್ನು ಕೊಟ್ಟು ಸದಾಕಾಲಕ್ಕಾಗಿ ಸಮಾಪ್ತಿ ಮಾಡಿ ಅರ್ಥಾತ್ ವಿಜಯಿಗಳಾಗಿ.ವಿಜಯ ನಮ್ಮ ಕೊರಳಿನಹಾರವಾಗಿದೆ-ಸದಾ ಈ ಸ್ಮೃತಿಯಿಂದ ಸಮರ್ಥಿ ಸ್ವರೂಪರಾಗಿ. ಇದೇ ಸ್ನೇಹದ ಪ್ರತಿಫಲವಾಗಿದೆ. ಹೇಗೆ ಸಾಕಾರ ತಂದೆಯು ಸ್ಥಿತಿಯ ಸ್ಥಂಭವಾಗಿ ತೋರಿಸಿದರು ಹಾಗೆಯೇ ಫಾಲೋಫಾದರ್ ಮಾಡಿ ಸರ್ವಗುಣಗಳ ಸ್ಥಂಭವಾಗಿ.

ಸ್ಲೋಗನ್:
ಸಾಧನಗಳು ಸೇವೆಗಾಗಿ ಇವೆ, ಆರಾಮವಾಗಿ (ಆರಾಮ್ಪಸಂದ್)ಇರುವುದಕ್ಕಾಗಿ ಅಲ್ಲ.

ಅವ್ಯಕ್ತ ಸೂಚನೆಗಳು- ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ

ಹೇಗೆ ಆಟಂ ಬಾಂಬ್ ಒಂದು ಸ್ಥಾನದಲ್ಲಿ ಬಿಟ್ಟರೂ ಸಹ ನಾಲ್ಕಾರು ಕಡೆ ಅದರ ಅಂಶವನ್ನು ಹರಡಿಸುತ್ತದೆ. ಅದು ಆಟಂ ಬಾಂಬ್ ಆಗಿದೆ ಹಾಗೂ ಇದು ಆತ್ಮಿಕ ಬಾಂಬ್ ಆಗಿದೆ. ಇದರ ಪ್ರಭಾವ ಅನೇಕ ಆತ್ಮಗಳನ್ನು ಆಕರ್ಷಣೆ ಮಾಡುತ್ತದೆ ಹಾಗೂ ಸಹಜವಾಗಿ ಪ್ರಜೆಗಳ ವೃದ್ಧಿಯಾಗುತ್ತದೆ ಆದ್ದರಿಂದ ಸಂಘಟಿತ ರೂಪದಲ್ಲಿ ಆತ್ಮಿಕ ಸ್ವರೂಪದ ಅಭ್ಯಾಸವನ್ನು ವೃದ್ಧಿ ಮಾಡಿ, ಸ್ಮೃತಿ ಸ್ವರೂಪರಾಗಿ ಆಗ ವಾಯುಮಂಡಲ ಶಕ್ತಿಶಾಲಿ ಆಗುವುದು.