30.07.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಮಾಯಾ ಶತ್ರು ನಿಮ್ಮ ಸನ್ಮುಖದಲ್ಲಿದ್ದಾನೆ, ಆದ್ದರಿಂದ ತಮ್ಮ ಬಹಳ-ಬಹಳ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ, ಒಂದುವೇಳೆ ನಡೆಯುತ್ತಾ-ನಡೆಯುತ್ತಾ ಸಿಕ್ಕಿ ಹಾಕಿಕೊಂಡರೂ ತಮ್ಮ ಅದೃಷ್ಟಕ್ಕೆ ಗೆರೆಯನ್ನೆಳೆದುಕೊಳ್ಳುವಿರಿ.”

ಪ್ರಶ್ನೆ:
ನೀವು ರಾಜಯೋಗಿ ಮಕ್ಕಳ ಮುಖ್ಯ ಕರ್ತವ್ಯವೇನಾಗಿದೆ?

ಉತ್ತರ:
ಓದುವುದು ಮತ್ತು ಓದಿಸುವುದೇ ನಿಮ್ಮ ಮುಖ್ಯ ಕರ್ತವ್ಯವಾಗಿದೆ. ನೀವು ಈಶ್ವರೀಯ ಮತದ ಮೇಲಿದ್ದೀರಿ. ನೀವೇನು ಕಾಡಿಗೆ ಹೋಗಬೇಕಾಗಿಲ್ಲ. ಗೃಹಸ್ಥದಲ್ಲಿರುತ್ತಾ ಶಾಂತಿಯಲ್ಲಿ ಕುಳಿತು ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆ ಮತ್ತು ಆಸ್ತಿ - ಇವರಡೇ ಶಬ್ಧಗಳಲ್ಲಿ ನಿಮ್ಮ ವಿದ್ಯೆಯೆಲ್ಲವೂ ಬಂದು ಬಿಡುತ್ತದೆ.

ಓಂ ಶಾಂತಿ.
ಮಕ್ಕಳೇ ಗುಡ್ ಮಾರ್ನಿಂಗ್ ಎಂದು ತಂದೆಯೂ ಸಹ ಬ್ರಹ್ಮಾರವರ ಮೂಲಕ ಹೇಳುತ್ತಾರೆ ಆದರೆ ಮಕ್ಕಳು ಪ್ರತ್ಯುತ್ತರ ನೀಡಬೇಕಾಗಿದೆ. ಇಲ್ಲಿ ತಂದೆ ಮತ್ತು ಮಕ್ಕಳ ಸಂಬಂಧವೇ ಆಗಿದೆ, ಹೊಸಬರು ಎಲ್ಲಿಯವರೆಗೆ ಪಕ್ಕಾ ಆಗುವುದಿಲ್ಲವೋ ಅಲ್ಲಿಯವರೆಗೆ ಏನಾದರೊಂದು ಕೇಳುತ್ತಿರುತ್ತಾರೆ. ಇದು ವಿದ್ಯೆಯಾಗಿದೆ, ಭಗವಾನುವಾಚವೆಂದು ಬರೆಯಲಾಗಿದೆ. ಭಗವಂತನು ನಿರಾಕಾರನಾಗಿದ್ದಾರೆ. ಯಾರಿಗೆ ಬೇಕಾದರೂ ತಿಳಿಸುವುದಕ್ಕಾಗಿ ಇದನ್ನು ತಂದೆಯು ಬಹಳ ಚೆನ್ನಾಗಿ ಪಕ್ಕಾ ಮಾಡಿಸುತ್ತಾರೆ ಏಕೆಂದರೆ ಅಲ್ಲಿ ಮಾಯೆಯ ಪ್ರಭಾವವಿದೆ. ಇಲ್ಲಿ ಆ ಮಾತಿಲ್ಲ. ತಂದೆಯು ತಿಳಿಸುತ್ತಾರೆ - ಯಾರು ಕಲ್ಪದ ಹಿಂದೆ ಆಸ್ತಿಯನ್ನು ತೆಗೆದುಕೊಂಡಿದ್ದಾರೆಯೋ ಅವರು ತಾವಾಗಿಯೇ ಬಂದು ಬಿಡುತ್ತಾರೆ. ಅವರು ಹೋಗದಿರಲೆಂದು ಹಿಡಿದುಕೊಳ್ಳುವುದಲ್ಲ. ಹೋಗುವಂತಿದ್ದರೆ ಹೋಗಲಿ, ಇಲ್ಲಂತೂ ಜೀವಿಸಿದ್ದಂತೆಯೇ ಸಾಯುವ ಮಾತಾಗಿದೆ. ತಂದೆಯು ದತ್ತು ಮಾಡಿಕೊಳ್ಳುತ್ತಾರೆ. ಏನಾದರೂ ಆಸ್ತಿಯನ್ನು ಕೊಡುವುದಕ್ಕಾಗಿಯೇ ದತ್ತು ಮಾಡಿಕೊಳ್ಳಲಾಗುತ್ತದೆ. ಮಕ್ಕಳು ತಂದೆ-ತಾಯಿಯ ಬಳಿ ಆಸ್ತಿಯ ಆಸೆಯಿಂದಲೇ ಬರುತ್ತಾರೆ. ಸಾಹುಕಾರರ ಮಗು ಬಡವರ ಬಳಿ ಎಂದಿಗೂ ದತ್ತಾಗುವುದಿಲ್ಲ. ಇಷ್ಟೊಂದು ಹಣ, ಅಧಿಕಾರ ಎಲ್ಲವನ್ನೂ ಬಿಟ್ಟು ಹೇಗೆ ಹೋಗುತ್ತಾರೆ! ಸಾಹುಕಾರರೇ ದತ್ತು ಮಾಡಿಕೊಳ್ಳುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ - ತಂದೆಯು ನಮಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತಾರೆ ಅಂದಮೇಲೆ ಅವರ ಮಕ್ಕಳೇಕೆ ಆಗಬಾರದು? ಪ್ರತಿಯೊಂದು ಮಾತಿನಲ್ಲಿ ಆಸೆಯಿರುತ್ತದೆ. ಎಷ್ಟು ಹೆಚ್ಚು ಓದುವರೋ ಅಷ್ಟು ಆಕಾಂಕ್ಷೆಯಿರುವುದು. ನೀವೂ ಸಹ ತಿಳಿದುಕೊಳ್ಳುತ್ತೀರಿ - ತಂದೆಯು ನಮಗೆ ಬೇಹದ್ದಿನ ಆಸ್ತಿಯನ್ನು ಕೊಡಲು ದತ್ತು ಮಾಡಿಕೊಂಡಿದ್ದಾರೆ. ತಂದೆಯೂ ಸಹ ತಿಳಿಸುತ್ತಾರೆ - ನಿಮ್ಮೆಲ್ಲರನ್ನೂ ನಾನು ಪುನಃ 5000 ವರ್ಷಗಳ ಹಿಂದಿನ ತರಹ ದತ್ತು ಮಾಡಿಕೊಳ್ಳುತ್ತೇನೆ. ಬಾಬಾ, ನಾವು ನಿಮ್ಮವರಾಗಿದ್ದೇವೆ, 5000 ವರ್ಷಗಳ ಮೊದಲೂ ಸಹ ತಮ್ಮ ಮಕ್ಕಳಾಗಿದ್ದೆವೆಂದು ನೀವೂ ಹೇಳುತ್ತೀರಿ. ನೀವು ಪ್ರತ್ಯಕ್ಷದಲ್ಲಿ ಎಷ್ಟೊಂದು ಮಂದಿ ಬ್ರಹ್ಮಾಕುಮಾರ-ಕುಮಾರಿಯರಿದ್ದೀರಿ. ಪ್ರಜಾಪಿತನೂ ಸಹ ಪ್ರಸಿದ್ಧನಾಗಿದ್ದಾರೆ, ಎಲ್ಲಿಯವರೆಗೆ ಶೂದ್ರರಿಂದ ಬ್ರಾಹ್ಮಣರಾಗುವುದಿಲ್ಲವೋ ಅಲ್ಲಿಯವರೆಗೆ ದೇವತೆಗಳಾಗಲು ಸಾಧ್ಯವಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿ ಈಗ ಈ ಚಕ್ರವು ಸುತ್ತುತ್ತಾ ಇರುತ್ತದೆ - ನಾವು ಶೂದ್ರರಾಗಿದ್ದೆವು, ಈಗ ಬ್ರಾಹ್ಮಣರಾಗಿದ್ದೇವೆ ಮತ್ತೆ ದೇವತೆಗಳಾಗಬೇಕಾಗಿದೆ. ಸತ್ಯಯುಗದಲ್ಲಿ ನಾವು ರಾಜ್ಯ ಮಾಡುತ್ತೇವೆ ಅಂದಮೇಲೆ ಈ ಹಳೆಯ ಪ್ರಪಂಚದ ವಿನಾಶವು ಅವಶ್ಯವಾಗಿ ಆಗಬೇಕಾಗಿದೆ. ಪೂರ್ಣ ನಿಶ್ಚಯವು ಕುಳಿತುಕೊಂಡಿಲ್ಲವೆಂದರೆ ಅವರು ಹೊರಟು ಹೋಗುತ್ತಾರೆ. ಬಹಳಷ್ಟು ಅಪರಿಪಕ್ವವಿರುವವರು ಅವರು ಬಿದ್ದು ಹೋಗುತ್ತಾರೆ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಮಾಯಾ ಶತ್ರು ಸನ್ಮುಖದಲ್ಲಿ ನಿಂತಿದ್ದಾನೆ, ತನ್ನ ಕಡೆ ಸೆಳೆಯುತ್ತಾನೆ. ತಂದೆಯು ಮಕ್ಕಳೇ ಮಾಯೆಗೆ ಸಿಕ್ಕಿ ಹಾಕಿಕೊಳ್ಳಬೇಡಿ ಇಲ್ಲವಾದರೆ ತಮ್ಮ ಅದೃಷ್ಟಕ್ಕೆ ಅಡ್ಡ ಗೆರೆಯನ್ನೆಳೆದುಕೊಳ್ಳುತ್ತೀರಿ ಎಂದು ಮತ್ತೆ-ಮತ್ತೆ ಪಕ್ಕಾ ಮಾಡಿಸುತ್ತಾರೆ. ಮೊದಲು ಎಂದಾದರೂ ಮಿಲನ ಮಾಡಿದ್ದೀರಾ ಎಂದು ತಂದೆಯೇ ಕೇಳುತ್ತಾರೆ, ಮತ್ತ್ಯಾರಿಗೂ ಈ ರೀತಿ ಕೇಳುವ ಬುದ್ಧಿಯು ಬರುವುದೇ ಇಲ್ಲ. ತಂದೆಯು ತಿಳಿಸುತ್ತಾರೆ - ನಾನೂ ಪುನಃ ಗೀತೆಯನ್ನು ತಿಳಿಸಲು ಬರಬೇಕಾಗುತ್ತದೆ, ಬಂದು ನಾನು ರಾವಣನ ಬಂಧನದಿಂದ ಬಿಡಿಸಬೇಕಾಗಿದೆ. ಬೇಹದ್ದಿನ ತಂದೆಯು ಬೇಹದ್ದಿನ ಮಾತುಗಳನ್ನು ತಿಳಿಸುತ್ತಾರೆ. ಈಗ ಇದು ರಾವಣ ರಾಜ್ಯವಾಗಿದೆ, ಪತಿತ ರಾಜ್ಯವಾಗಿದೆ, ಇದು ಅರ್ಧ ಕಲ್ಪದಿಂದ ಆರಂಭವಾಗಿದೆ. ರಾವಣನಿಗೆ 10 ತಲೆಗಳನ್ನು, ವಿಷ್ಣುವಿಗೆ ನಾಲ್ಕು ಭುಜಗಳನ್ನು ತೋರಿಸುತ್ತಾರೆ. ಈ ರೀತಿಯ ಮನುಷ್ಯರ್ಯಾರೂ ಇರುವುದಿಲ್ಲ ಅಂದರೆ ಪ್ರವೃತ್ತಿ ಮಾರ್ಗವನ್ನು ಈ ರೀತಿಯಾಗಿ ತೋರಿಸಲಾಗುತ್ತದೆ. ವಿಷ್ಣುವಿನ ಮೂಲಕ ಪಾಲನೆ ಇದು ನಿಮ್ಮ ಗುರಿ-ಧ್ಯೇಯವಾಗಿದೆ. ವಿಷ್ಣು ಪುರಿಗೆ ಕೃಷ್ಣ ಪುರಿಯೆಂದೂ ಹೇಳುತ್ತಾರೆ. ಕೃಷ್ಣನಿಗೆ ಎರಡು ಬಾಹುಗಳನ್ನೇ ತೋರಿಸುತ್ತಾರಲ್ಲವೆ. ಮನುಷ್ಯರು ಏನನ್ನೂ ತಿಳಿದುಕೊಳ್ಳುವುದಿಲ್ಲ. ತಂದೆ ಪ್ರತಿಯೊಂದು ಮಾತನ್ನು ತಿಳಿಸುತ್ತಾರೆ. ಇದೆಲ್ಲವೂ ಭಕ್ತಿ ಮಾರ್ಗವಾಗಿದೆ. ಈಗ ನಿಮಗೆ ಜ್ಞಾನವಿದೆ. ನರನಿಂದ ನಾರಾಯಣನಾಗುವುದು ನಿಮ್ಮ ಗುರಿ-ಧ್ಯೇಯವಾಗಿದೆ. ಈ ಗೀತಾ ಪಾಠಶಾಲೆಯು ಜೀವನ್ಮುಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿಯೇ ಇದೆ. ಬ್ರಾಹ್ಮಣರಂತೂ ಅವಶ್ಯವಾಗಿ ಬೇಕು. ಇದು ರುದ್ರ ಜ್ಞಾನ ಯಜ್ಞವಾಗಿದೆ. ಶಿವನಿಗೆ ರುದ್ರನೆಂದೂ ಹೇಳುತ್ತಾರೆ. ಈಗ ತಂದೆಯು ಕೇಳುತ್ತಾರೆ – ಜ್ಞಾನ ಯಜ್ಞನವು ಕೃಷ್ಣನದೋ ಅಥವಾ ಶಿವನದೋ? ಶಿವನಿಗೆ ಪರಮಾತ್ಮನೆಂದೇ ಹೇಳುತ್ತಾರೆ. ಶಂಕರನಿಗೆ ದೇವತೆಯೆಂದು ಹೇಳುತ್ತಾರೆ ಆದರೆ ಅವರು ಶಿವ-ಶಂಕರನನ್ನು ಒಂದೇ ಮಾಡಿ ಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡಿದ್ದೇನೆ. ಬಾಪ್ದಾದಾ ಎಂದು ನೀವು ಮಕ್ಕಳು ಹೇಳುತ್ತೀರಿ. ಶಿವ ಶಂಕರ ಎಂದು ಅವರು ಹೇಳಿ ಬಿಟ್ಟಿದ್ದಾರೆ. ಜ್ಞಾನ ಸಾಗರನಂತೂ ಒಬ್ಬರೇ ಆಗಿದ್ದಾರೆ.

ಈಗ ನೀವು ತಿಳಿದುಕೊಂಡಿದ್ದೀರಿ - ಬ್ರಹ್ಮಾರವರೇ ಈ ಜ್ಞಾನದಿಂದ ವಿಷ್ಣುವಾಗುತ್ತಾರೆ. ವಿಷ್ಣುವಿನ ನಾಭಿಯಿಂದ ಬ್ರಹ್ಮನು ಬಂದನೆಂದು ಚಿತ್ರವನ್ನು ಸರಿಯಾಗಿ ತೋರಿಸುತ್ತಾರೆ. ಇದರ ಅರ್ಥವನ್ನು ತಿಳಿದುಕೊಂಡಿಲ್ಲ. ಬ್ರಹ್ಮನಿಗೆ ಕೈಯಲ್ಲಿ ಶಾಸ್ತ್ರಗಳನ್ನು ತೋರಿಸಿದ್ದಾರೆ. ಶಾಸ್ತ್ರಗಳ ಸಾರವನ್ನು ತಂದೆ ತಿಳಿಸುತ್ತಾರೋ ಅಥವಾ ಬ್ರಹ್ಮನೋ? ಈ ಬ್ರಹ್ಮಾರವರೂ ಸಹ ಮಾll ಜ್ಞಾನ ಸಾಗರನಾಗುತ್ತಾರೆ. ಉಳಿದಂತೆ ಯಾವ ಇಷ್ಟೆಲ್ಲಾ ಚಿತ್ರಗಳನ್ನು ಮಾಡಿದ್ದಾರೆ ಅದು ಯಾವುದೂ ಯಥಾರ್ಥವಾಗಿಲ್ಲ. ಅವೆಲ್ಲವೂ ಭಕ್ತಿಮಾರ್ಗದ್ದಾಗಿದೆ, 8-10 ಭುಜಗಳ ಮನುಷ್ಯರು ಯಾರೂ ಇಲ್ಲ. ಪ್ರವೃತ್ತಿ ಮಾರ್ಗವನ್ನು ಈ ರೀತಿಯಾಗಿ ತೋರಿಸಿದ್ದಾರೆ. ರಾವಣನ ಅರ್ಥವನ್ನೂ ತಿಳಿಸುತ್ತಾರೆ - ಅರ್ಧಕಲ್ಪ ರಾವಣ ರಾಜ್ಯ ರಾತ್ರಿಯಾಗಿದೆ, ಅರ್ಧಕಲ್ಪ ರಾಮ ರಾಜ್ಯ ದಿನವಾಗಿದೆ. ಪ್ರತಿಯೊಂದು ಮಾತನ್ನು ತಂದೆಯು ತಿಳಿಸುತ್ತಾರೆ. ನೀವೆಲ್ಲರೂ ಒಬ್ಬ ತಂದೆಯ ಮಕ್ಕಳಾಗಿದ್ದೀರಿ. ತಂದೆಯು ಬ್ರಹ್ಮಾರವರ ಮೂಲಕ ವಿಷ್ಣು ಪುರಿಯ ಸ್ಥಾಪನೆ ಮಾಡುತ್ತಾರೆ ಮತ್ತು ನಿಮಗೆ ರಾಜಯೋಗವನ್ನು ಕಲಿಸುತ್ತಾರೆ. ಅವಶ್ಯವಾಗಿ ಸಂಗಮಯುಗದಲ್ಲಿಯೇ ರಾಜಯೋಗವನ್ನು ಕಲಿಸುತ್ತಾರೆ. ದ್ವಾಪರ ಯುಗದಲ್ಲಿ ಗೀತೆಯನ್ನು ತಿಳಿಸಿದರೆಂಬುದು ತಪ್ಪಾಗಿ ಬಿಡುತ್ತದೆ. ತಂದೆಯು ಸತ್ಯವನ್ನು ತಿಳಿಸುತ್ತಾರೆ. ಅನೇಕರಿಗೆ ಬ್ರಹ್ಮಾ ಮತ್ತು ಕೃಷ್ಣನ ಸಾಕ್ಷಾತ್ಕಾರವಾಗುತ್ತದೆ. ಬ್ರಹ್ಮನನ್ನು ಶ್ವೇತ ವಸ್ತ್ರಧಾರಿಯಾಗಿಯೇ ನೋಡುತ್ತಾರೆ. ಶಿವ ತಂದೆಯಂತೂ ಬಿಂದುವಾಗಿದ್ದಾರೆ. ಬಿಂದುವಿನ ಸಾಕ್ಷಾತ್ಕಾರದಿಂದ ಏನನ್ನೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ನಾವು ಆತ್ಮಗಳಾಗಿದ್ದೇವೆಂದು ನೀವು ಹೇಳುತ್ತೀರಿ. ಈಗ ಆತ್ಮವನ್ನು ಯಾರು ನೋಡಿದ್ದಾರೆ? ಯಾರೂ ಇಲ್ಲ. ಅವರು ಬಿಂದುವಾಗಿದ್ದಾರೆ ಎಂಬುದನ್ನು ಅರಿತುಕೊಳ್ಳಬಹುದಲ್ಲವೆ. ಯಾರು ಯಾವ ಭಾವನೆಯಿಂದ ಯಾರ ಪೂಜೆ ಮಾಡುವರೋ ಅವರಿಗೆ ಅದೇ ಸಾಕ್ಷಾತ್ಕಾರವಾಗುವುದು. ಒಂದುವೇಳೆ ಬೇರೆ ರೂಪವನ್ನು ನೋಡಿದರೆ ತಬ್ಬಿಬ್ಬಾಗುತ್ತಾರೆ. ಹನುಮಂತನ ಪೂಜೆ ಮಾಡಿದರೆ ಅವರಿಗೆ ಹನುಮಂತನೇ ಕಾಣಿಸುತ್ತಾರೆ. ಗಣೇಶನ ಪೂಜಾರಿಗೆ ಗಣೇಶನೇ ಕಾಣಿಸುವರು. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಇಷ್ಟು ಧನವಂತರನ್ನಾಗಿ ಮಾಡಿದೆನು, ವಜ್ರ ವೈಡೂರ್ಯಗಳ ಮಹಲಿತ್ತು. ನಿಮಗೆ ಎಣಿಸಲಾರದಷ್ಟು ಹಣವಿತ್ತು, ಅದೆಲ್ಲವನ್ನೂ ನೀವು ಎಲ್ಲಿ ಕಳೆದುಕೊಂಡಿರಿ? ಈಗ ನೀವು ಕಂಗಾಲಾಗಿ ಬಿಟ್ಟಿದ್ದೀರಿ, ಭಿಕ್ಷೆಯನ್ನು ಬೇಡುತ್ತಿದ್ದೀರಿ. ತಂದೆಯು ಈ ರೀತಿ ಹೇಳಬಹುದಲ್ಲವೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಬಂದಿದ್ದಾರೆ, ನಾವು ಪುನಃ ವಿಶ್ವದ ಮಾಲೀಕರಾಗುತ್ತೇವೆ. ಈ ನಾಟಕವು ಅನಾದಿಯಾಗಿ ಮಾಡಲ್ಪಟ್ಟಿದೆ. ಪ್ರತಿಯೊಬ್ಬರೂ ನಾಟಕದಲ್ಲಿ ತಮ್ಮ ಪಾತ್ರವನ್ನಭಿನಯಿಸುತ್ತಿದ್ದಾರೆ. ಒಂದು ಶರೀರವನ್ನು ಬಿಟ್ಟು ಹೋಗಿ ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಇದರಲ್ಲಿ ಅಳುವ ಮಾತೇನಿದೆ! ಸತ್ಯಯುಗದಲ್ಲೆಂದೂ ಅಳುವುದಿಲ್ಲ, ನೀವೀಗ ಮೋಹಜೀತರಾಗುತ್ತಿದ್ದೀರಿ. ಮೋಹಜೀತ ರಾಜರು ಈ ಲಕ್ಷ್ಮಿ-ನಾರಾಯಣ ಮೊದಲಾದವರಾಗಿದ್ದಾರೆ, ಅಲ್ಲಿ ಮೋಹವಿರುವುದಿಲ್ಲ. ತಂದೆಯು ಅನೇಕ ಪ್ರಕಾರದ ಮಾತುಗಳನ್ನು ತಿಳಿಸುತ್ತಿರುತ್ತಾರೆ. ತಂದೆಯು ನಿರಾಕಾರನಾಗಿದ್ದಾರೆ, ಅವರನ್ನು ಮನುಷ್ಯರು ನಾಮ-ರೂಪದಿಂದ ಭಿನ್ನವೆಂದು ಹೇಳಿ ಬಿಡುತ್ತಾರೆ. ಆದರೆ ಯಾವುದೇ ವಸ್ತು ನಾಮ-ರೂಪದಿಂದ ಭಿನ್ನವಾಗಿರುವುದಿಲ್ಲ. ಹೇ ಭಗವಂತ, ಪರಮಪಿತ ಎಂದು ಹೇಳುತ್ತಾರಲ್ಲವೆ. ಅಂದಮೇಲೆ ನಾಮ-ರೂಪವಾಯಿತಲ್ಲವೆ. ಲಿಂಗಕ್ಕೆ ಶಿವ ಪರಮಾತ್ಮ, ಶಿವ ತಂದೆಯೆಂದೂ ಹೇಳುತ್ತಾರೆ. ತಂದೆಯಂತೂ ಅವಶ್ಯವಾಗಿ ಆಗಿದ್ದಾರಲ್ಲವೆ. ತಂದೆಗೆ ಅವಶ್ಯವಾಗಿ ಮಕ್ಕಳೂ ಇರುತ್ತಾರೆ. ನಿರಾಕಾರನನ್ನು ನಿರಾಕಾರ ಆತ್ಮವೇ ಬಾಬಾ ಎಂದು ಹೇಳುತ್ತದೆ. ಮಂದಿರಗಳಲ್ಲಿ ಹೋದಾಗ ಶಿವ ತಂದೆ ಎಂದು ಹೇಳುತ್ತಾರೆ ಮತ್ತೆ ಮನೆಗೆ ಬಂದು ಲೌಕಿಕ ತಂದೆಯನ್ನೂ ಸಹ ಬಾಬಾ ಎಂದು ಹೇಳುತ್ತಾರೆ, ಅರ್ಥವನ್ನಂತೂ ತಿಳಿದುಕೊಂಡಿಲ್ಲ. ಆದರೆ ಶಿವ ತಂದೆಯೆಂದು ಏಕೆ ಹೇಳುತ್ತೇವೆ ಎಂಬ ಅರ್ಥವನ್ನು ತಿಳಿದುಕೊಂಡಿಲ್ಲ. ತಂದೆಯು ಅತಿ ದೊಡ್ಡ ವಿದ್ಯೆಯನ್ನು ಕೇವಲ ಎರಡು ಶಬ್ಧಗಳಲ್ಲಿ ಓದಿಸುತ್ತಾರೆ - ತಂದೆ ಮತ್ತು ಆಸ್ತಿ. ತಂದೆಯನ್ನು ನೆನಪು ಮಾಡಿದರೆ ಆಸ್ತಿಯು ನಿಮ್ಮದಾಗುತ್ತದೆ. ಇದು ಬಹಳ ದೊಡ್ಡ ಪರೀಕ್ಷೆಯಾಗಿದೆ. ಮನುಷ್ಯರು ದೊಡ್ಡ ಪರೀಕ್ಷೆಯನ್ನು ತೇರ್ಗಡೆ ಮಾಡಿದರೆ ಮೊದಲಿನ ವಿದ್ಯೆಯೇನೂ ನೆನಪಿರುವುದಿಲ್ಲ. ಓದುತ್ತಾ-ಓದುತ್ತಾ ಕೊನೆಗೆ ಸಾರವು ಬುದ್ಧಿಯಲ್ಲಿ ಬಂದು ಬಿಡುತ್ತದೆ. ಇದೂ ಸಹ ಹಾಗೆಯೇ. ನೀವು ಓದುತ್ತಾ ಬಂದಿದ್ದೀರಿ, ಅಂತಿಮದಲ್ಲಿ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮನ್ಮನಾಭವ ಇದರಿಂದ ದೇಹಾಭಿಮಾನವು ಬಿಟ್ಟು ಹೋಗುವುದು. ಈ ಮನ್ಮನಾಭವದ ಹವ್ಯಾಸವಿದ್ದರೆ ಕೊನೆಯಲ್ಲಿಯೂ ಸಹ ತಂದೆ ಮತ್ತು ಆಸ್ತಿಯ ನೆನಪಿರುವುದು. ಮುಖ್ಯವಾದುದೇ ಇದಾಗಿದೆ, ಎಷ್ಟು ಸಹಜವಾಗಿದೆ. ಆ ವಿದ್ಯೆಯಲ್ಲಿಯೂ ಸಹ ಏನೇನೋ ಓದುತ್ತಾರೆ. ಯಾವ ರಾಜರೋ ಹಾಗೆ ತಮ್ಮ ಪದ್ಧತಿಯನ್ನು ನಡೆಸುತ್ತಾರೆ. ಮೊದಲು ಮಣ, ಸೇರು, ಪಾವಿನ ಲೆಕ್ಕವು ನಡೆಯುತ್ತಿತ್ತು ಈಗ ಕಿಲೋ ಗ್ರಾಂ, ಏನೇನೋ ಬಂದು ಬಿಟ್ಟಿದೆ. ಎಷ್ಟೊಂದು ಬೇರೆ-ಬೇರೆ ಪ್ರಾಂತ್ಯಗಳಾಗಿ ಬಿಟ್ಟಿದೆ. ದೆಹಲಿಯಲ್ಲಿ ಯಾವ ವಸ್ತುವು ರೂಪಾಯಿಗೆ ಒಂದು ಸೇರು ಸಿಗುವುದೋ ಅದು ಬಾಂಬೆಯಲ್ಲಿ ಎರಡು ರೂಪಾಯಿಗಳು. ಏಕೆಂದರೆ ಪ್ರಾಂತ್ಯವು ಬೇರೆ-ಬೇರೆಯಾಗಿದೆ. ನಾವು ನಮ್ಮ ಪ್ರಾಂತ್ಯವನ್ನು ಹಸಿವಿನಿಂದ ಇರಿಸಲು ಸಾಧ್ಯವೇ ಎಂದು ಪ್ರತಿಯೊಬ್ಬರೂ ತಿಳಿಯುತ್ತಾರೆ. ಎಷ್ಟೊಂದು ಕೋಲಾಹಲಗಳಾಗುತ್ತವೆ.

ಭಾರತವು ಎಷ್ಟೊಂದು ಸಾಹುಕಾರನಾಗಿತ್ತು, ನಂತರ 84ರ ಚಕ್ರವನ್ನು ಸುತ್ತುತ್ತಾ ಬಡ ಭಾರತವಾಗಿ ಬಿಟ್ಟಿದೆ. ವಜ್ರ ಸಮಾನ ಜನ್ಮವನ್ನು ಕವಡೆಗಾಗಿ ಏಕೆ ಕಳೆದುಕೊಳ್ಳುತ್ತೀರೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನೀವು ಕವಡೆಗಳ ಹಿಂದೆ ಏಕೆ ಸಾಯುತ್ತೀರಿ, ಈಗಂತೂ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಿ, ಪಾವನರಾಗಿ. ಹೇ ಪತಿತ-ಪಾವನ ಬನ್ನಿ, ಬಂದು ಪಾವನ ಮಾಡಿ ಎಂದು ಕರೆಯುತ್ತಾರೆ ಅಂದಮೇಲೆ ಪಾವನರಿದ್ದರು ಈಗ ಇಲ್ಲವೆಂದು ಇದರಿಂದಲೇ ಸಿದ್ಧವಾಗುತ್ತದೆ. ಈಗ ಇರುವುದೇ ಕಲಿಯುಗ, ತಂದೆಯು ತಿಳಿಸುತ್ತಾರೆ - ನಾನು ಪಾವನ ಪ್ರಪಂಚವನ್ನಾಗಿ ಮಾಡುತ್ತೇನೆ ಅಂದಾಗ ಪತಿತ ಪ್ರಪಂಚದ ವಿನಾಶವು ಅವಶ್ಯವಾಗಿ ಆಗುವುದು. ಆದ್ದರಿಂದಲೇ ಈ ಮಹಾಭಾರತ ಯುದ್ಧವಿದೆ. ಇದು ಈ ರುದ್ರ ಜ್ಞಾನ ಯಜ್ಞದಿಂದ ಪ್ರಜ್ವಲಿತವಾಗಿದೆ. ನಾಟಕದಲ್ಲಿ ಈ ವಿನಾಶವಾಗುವುದೂ ಸಹ ನಿಗದಿಯಾಗಿದೆ. ಮೊಟ್ಟ ಮೊದಲಂತೂ ಬಾಬಾರವರಿಗೆ ಸಾಕ್ಷಾತ್ಕಾರವಾಯಿತು. ಅದನ್ನು ನೋಡಿ ಇಷ್ಟು ದೊಡ್ಡ ರಾಜ್ಯಭಾಗ್ಯವು ಸಿಗುತ್ತದೆ ಎಂದು ಖುಷಿಯಾಗತೊಡಗಿತು. ಮತ್ತೆ ವಿನಾಶದ ಸಾಕ್ಷಾತ್ಕಾರವನ್ನು ಮಾಡಿಸಿದರು ಮನ್ಮನಾಭವ, ಮಧ್ಯಾಜೀಭವ. ಇದು ಗೀತೆಯ ಅಕ್ಷರವಾಗಿದೆ. ಗೀತೆಯ ಕೆಲವು ಶಬ್ಧಗಳು ಸರಿಯಾಗಿದೆ. ತಂದೆಯೂ ಸಹ ತಿಳಿಸುತ್ತಾರೆ - ನಿಮಗೆ ಈ ಜ್ಞಾನವನ್ನು ತಿಳಿಸುತ್ತೇನೆ, ಇದು ಮತ್ತೆ ಪ್ರಾಯಃಲೋಪವಾಗಿ ಬಿಡುತ್ತದೆ. ಲಕ್ಷ್ಮಿ-ನಾರಾಯಣರ ರಾಜ್ಯವಿದ್ದಾಗ ಮತ್ತ್ಯಾವ ರಾಜ್ಯವು ಇರಲಿಲ್ಲವೆಂಬುದು ಯಾರಿಗೂ ತಿಳಿದಿಲ್ಲ. ಆ ಸಮಯದಲ್ಲಿ ಎಷ್ಟು ಕಡಿಮೆ ಜನಸಂಖ್ಯೆಯಿರುವುದು, ಈಗ ಎಷ್ಟೊಂದಾಗಿದೆ ಅಂದಮೇಲೆ ಇದು ಪರಿವರ್ತನೆಯಾಗಬೇಕು. ಅವಶ್ಯವಾಗಿ ವಿನಾಶವೂ ಆಗಬೇಕು. ಮಹಾಭಾರತ ಯುದ್ಧವೂ ಇದೆ ಅವಶ್ಯವಾಗಿ ಭಗವಂತನೂ ಇರಬೇಕು. ಶಿವ ಜಯಂತಿಯನ್ನಾಚರಿಸುತ್ತಾರೆಂದಮೇಲೆ ಶಿವ ತಂದೆಯು ಬಂದು ಏನು ಮಾಡಿದರು? ಅದನ್ನೂ ಸಹ ತಿಳಿದುಕೊಂಡಿಲ್ಲ. ಈಗ ತಂದೆಯು ತಿಳಿಸುತ್ತಾರೆ - ಗೀತೆಯಿಂದ ಕೃಷ್ಣನ ಆತ್ಮಕ್ಕೆ ರಾಜ್ಯಭಾಗ್ಯವು ಸಿಕ್ಕಿತು, ಗೀತೆಗೆ ಮಾತಾಪಿತಾ ಎಂದು ಹೇಳುತ್ತಾರೆ, ಇದರಿಂದ ನೀವು ಪುನಃ ದೇವತೆಗಳಾಗುತ್ತೀರಿ. ಆದ್ದರಿಂದ ಚಿತ್ರದಲ್ಲಿಯೂ ತೋರಿಸಿದ್ದಾರೆ, ಕೃಷ್ಣನು ಗೀತೆಯನ್ನು ತಿಳಿಸಲಿಲ್ಲ. ಕೃಷ್ಣನು ಗೀತಾ ಜ್ಞಾನದಿಂದ ರಾಜಯೋಗವನ್ನು ಕಲಿತು ಈ ರೀತಿಯಾದರು. ನಾಳೆ ಮತ್ತೆ ಕೃಷ್ಣನಾಗುವರು. ಅವರು ಶಿವ ತಂದೆಯ ಬದಲು ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಇದನ್ನು ತಮ್ಮಲ್ಲಿ ಪಕ್ಕಾ ನಿಶ್ಚಯ ಮಾಡಿಕೊಳ್ಳಿ. ಯಾರು ಉಲ್ಟಾ-ಸುಲ್ಟಾ ಮಾತುಗಳನ್ನು ತಿಳಿಸಿ ನಿಮ್ಮನ್ನು ಬೀಳಿಸದಿರಲಿ. ವಿಕಾರವಿಲ್ಲದೆ ಸೃಷ್ಟಿಯು ಹೇಗೆ ನಡೆಯುತ್ತದೆ? ಇದು ಹೇಗೆ ಸಾಧ್ಯವೆಂದು ಅನೇಕ ಮಾತುಗಳನ್ನು ಕೇಳುತ್ತಾರೆ. ಅರೆ! ಇದು ನಿರ್ವಿಕಾರಿ ಪ್ರಪಂಚವಾಗಿತ್ತೆಂದು ನೀವೇ ಹೇಳುತ್ತೀರಿ. ಸಂಪೂರ್ಣ ನಿರ್ವಿಕಾರಿಗಳೆಂದು ಹೇಳುತ್ತೀರಲ್ಲವೆ ಅಂದಮೇಲೆ ಅಲ್ಲಿ ವಿಕಾರದ ಮಾತಿರಲು ಹೇಗೆ ಸಾಧ್ಯ? ಈಗ ನೀವು ತಿಳಿದುಕೊಂಡಿದ್ದೀರಿ - ಬೇಹದ್ದಿನ ತಂದೆಯಿಂದ ಬೇಹದ್ದಿನ ರಾಜ್ಯಭಾಗ್ಯವು ಸಿಗುತ್ತದೆ. ಅಂದಮೇಲೆ ಇಂತಹ ತಂದೆಯನ್ನೇಕೆ ನೆನಪು ಮಾಡುವುದಿಲ್ಲ! ಇದು ಪತಿತ ಪ್ರಪಂಚವಾಗಿದೆ, ಕುಂಭಮೇಳದಲ್ಲಿ ಲಕ್ಷಾಂತರ ಮಂದಿ ಹೋಗುತ್ತಾರೆ. ಅಲ್ಲಿ ಒಂದು ನದಿಯು ಗುಪ್ತವಾಗಿದೆ ಎಂದು ಹೇಳುತ್ತಾರೆ. ನದಿಯು ಗುಪ್ತವಾಗಿರಲು ಸಾಧ್ಯವೇ? ಇಲ್ಲಿಯೂ ಸಹ ಗೋಮುಖ ಮಾಡಿದ್ದಾರೆ. ಇಲ್ಲಿ ಗಂಗೆಯು ಬರುತ್ತದೆಯೆಂದು ಹೇಳುತ್ತಾರೆ. ಅರೆ! ಗಂಗೆಯು ತನ್ನ ಮಾರ್ಗವನ್ನು ಹಿಡಿದು ಸಮುದ್ರದಲ್ಲಿ ಹೋಗುವುದೋ ಅಥವಾ ಇಲ್ಲಿ ನಿಮ್ಮ ಬಳಿ ಪರ್ವತದಲ್ಲಿ ಬರುವುದೋ? ಭಕ್ತಿಮಾರ್ಗದಲ್ಲಿ ಎಷ್ಟೊಂದು ಅಂಧಶ್ರದ್ದೆಯಿದೆ. ಜ್ಞಾನ, ಭಕ್ತಿ ನಂತರ ವೈರಾಗ್ಯ. ಒಂದು ಹದ್ದಿನ ವೈರಾಗ್ಯವಾಗಿದೆ, ಇನ್ನೊಂದು ಬೇಹದ್ದಿನ ವೈರಾಗ್ಯವಾಗಿದೆ. ಸನ್ಯಾಸಿಗಳು ಗೃಹಸ್ಥವನ್ನು ಬಿಟ್ಟು ಕಾಡಿನಲ್ಲಿರುತ್ತಾರೆ, ಇಲ್ಲಂತೂ ಆ ರೀತಿಯಿಲ್ಲ. ನೀವು ಬುದ್ಧಿಯಿಂದ ಇಡೀ ಹಳೆಯ ಪ್ರಪಂಚದ ಸನ್ಯಾಸ ಮಾಡುತ್ತೀರಿ. ನೀವು ರಾಜಯೋಗಿ ಮಕ್ಕಳ ಮುಖ್ಯ ಕರ್ತವ್ಯವೇ ಓದುವುದು ಮತ್ತು ಓದಿಸುವುದಾಗಿದೆ. ರಾಜಯೋಗವನ್ನು ಕಾಡಿನಲ್ಲಿ ಕಲಿಸಲಾಗುತ್ತದೆಯೇ! ಇದು ಶಾಲೆಯಾಗಿದೆ. ಸೇವಾಕೇಂದ್ರಗಳು ತೆರೆಯುತ್ತಾ ಹೋಗುತ್ತವೆ. ನೀವು ಮಕ್ಕಳು ರಾಜಯೋಗವನ್ನು ಕಲಿಯುತ್ತಿದ್ದೀರಿ. ಶಿವ ತಂದೆಯಿಂದ ಓದಿರುವುದನ್ನು ಬ್ರಾಹ್ಮಣ-ಬ್ರಾಹ್ಮಿಣಿಯರು ಕಲಿಸುತ್ತಾರೆ. ಒಬ್ಬ ಶಿವ ತಂದೆಯು ಕುಳಿತು ಎಲ್ಲರಿಗೆ ಕಲಿಸಿಕೊಡಲು ಆಗುತ್ತದೆಯೇ. ಇದು ಪಾಂಡವ ಸರ್ಕಾರವಾಗಿದೆ. ನೀವು ಈಶ್ವರೀಯ ಮತದ ಮೇಲಿದ್ದೀರಿ, ಇಲ್ಲಿ ನೀವು ಎಷ್ಟೊಂದು ಶಾಂತಿಯನ್ನು ಕಲಿತುಕೊಳ್ಳುತ್ತೀರಿ. ಹೊರಗಡೆ ಅನೇಕ ಜಗಳ ಏರುಪೇರುಗಳಿವೆ. ತಂದೆಯು ತಿಳಿಸುತ್ತಾರೆ – ಪಂಚ ವಿಕಾರಗಳ ದಾನ ಮಾಡಿ ಆಗ ಗ್ರಹಣವು ಬಿಟ್ಟು ಹೋಗುವುದು. ನನ್ನವರಾಗಿ ನಾನು ನಿಮ್ಮ ಎಲ್ಲಾ ಮನೋಕಾಮನೆಗಳನ್ನು ಪೂರ್ಣ ಮಾಡುತ್ತೇನೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈಗ ನಾವು ಸುಖಧಾಮದಲ್ಲಿ ಹೋಗುತ್ತೇವೆ, ದುಃಖಧಾಮಕ್ಕೆ ಬೆಂಕಿ ಬೀಳಲಿದೆ. ಮಕ್ಕಳಿಗೆ ವಿನಾಶದ ಸಾಕ್ಷಾತ್ಕಾರವೂ ಆಗಿದೆ. ಮಕ್ಕಳೇ, ಈಗ ಸಮಯವು ಕಡಿಮೆಯಿದೆ ಆದ್ದರಿಂದ ನೆನಪಿನ ಯಾತ್ರೆಯಲ್ಲಿ ತೊಡಗಿ ಆಗ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯ ಆಸ್ತಿಯ ಪೂರ್ಣ ಅಧಿಕಾರವನ್ನು ಪಡೆಯಲು ಜೀವಿಸಿದ್ದಂತೆಯೇ ಸಾಯಬೇಕಾಗಿದೆ. ತಂದೆಗೆ ದತ್ತು ಮಗುವಾಗಬೇಕಾಗಿದೆ. ಎಂದೂ ತಮ್ಮ ಶ್ರೇಷ್ಠ ಅದೃಷ್ಟಕ್ಕೆ ಗೆರೆಯನ್ನೆಳೆದುಕೊಳ್ಳಬಾರದು.

2. ಯಾವುದೇ ಉಲ್ಟಾ-ಸುಲ್ಟಾ ಮಾತನ್ನು ಕೇಳಿ ಸಂಶಯದಲ್ಲಿ ಬರಬಾರದು. ನಿಶ್ಚಯವು ಸ್ವಲ್ಪವೂ ಅಲುಗಾಡದಿರಲಿ. ಈ ದುಃಖಧಾಮಕ್ಕೆ ಬೆಂಕಿ ಬೀಳಲಿದೆ ಆದ್ದರಿಂದ ಇದರಿಂದ ತಮ್ಮ ಬುದ್ಧಿಯೋಗವನ್ನು ತೆಗೆಯಬೇಕಾಗಿದೆ.

ವರದಾನ:
ವಿಶೇಷತಾ ರೂಪಿ ಸಂಜೀವನಿ ಭೂಟಿಯ ಮೂಲಕ ಮೂರ್ಚಿತರನ್ನು ಸೂರ್ಜಿತರನ್ನಾಗಿ ಮಾಡುವಂತಹ ವಿಶೇಷ ಆತ್ಮ ಭವ.

ಪ್ರತಿಯೊಬ್ಬ ಆತ್ಮನಿಗೆ ಶ್ರೇಷ್ಠ ಸ್ಮತಿಯ, ವಿಶೇಷತೆಗಳ ಸ್ಮತಿರೂಪಿ ಸಂಜೀವನಿ ಭೂಟಿಯನ್ನು ತಿನ್ನಿಸಿದಾಗ ಅವರು ಮೂರ್ಚಿತರಿಂದ ಸುರ್ಜಿತರಾಗಿ ಬಿಡುವರು. ವಿಶೇಷತೆಗಳ ಸ್ವರೂಪದ ದರ್ಪಣವನ್ನು ಅವರ ಎದುರಿಗೆ ಇಡಿ. ಬೇರೆಯವರಿಗೆ ಸ್ಮತಿ ತರಿಸುವುದರಿಂದ ನೀವು ವಿಶೇಷ ಆತ್ಮ ಆಗಿ ಬಿಡುವಿರಿ. ಒಂದು ವೇಳೆ ನೀವು ಯಾರಿಗಾದರೂ ಅವರ ಬಲಹೀನತೆಯನ್ನು ತಿಳಿಸಿದಾಗ ಅವರು ಮುಚ್ಚಿಡುತ್ತಾರೆ, ತಳ್ಳಿ ಹಾಕುತ್ತಾರೆ, ನೀವು ವಿಶೇಷತೆಯನ್ನು ತಿಳಿಸಿದಾಗ ಅವರು ಸ್ವಯಂ ಅವರ ಬಲಹೀನತೆಗಳನ್ನು ಸ್ಪಷ್ಠವಾಗಿ ಅನುಭವ ಮಾಡುತ್ತಾರೆ. ಇದೇ ಸಂಜೀವನಿ ಭೂಟಿಯಿಂದ ಮೂರ್ಚಿತರನ್ನು ಸೂರ್ಜಿತರನ್ನಾಗಿ ಮಾಡಿ ಹಾರುತ್ತಾ ಮತ್ತು ಹಾರಿಸುತ್ತಾ ಹೋಗಿ.

ಸ್ಲೋಗನ್:
(ನಾಮ್-ಮಾನ್-ಷಾನ್) ಹೆಸರು-ಮಾನ್ಯತೆ-ಘನತೆ ಹಾಗೂ ಸಂಬಂಧಗಳನ್ನು ಸಂಕಲ್ಪದಲ್ಲಿ ಸಹಾ ತ್ಯಾಗ ಮಾಡುವುದೆ ಮಹಾನ್ ತ್ಯಾಗವಾಗಿದೆ.

ಅವ್ಯಕ್ತ ಸೂಚನೆ: ಸಂಕಲ್ಪ ಶಕ್ತಿಯನ್ನು ಜಮಾ ಮಾಡಿ ಶ್ರೇಷ್ಠ ಸೇವೆಗೆ ನಿಮಿತ್ತರಾಗಿ.

ನಿಮಿತ್ತವಾಗಿ ಇರುವ ಮಕ್ಕಳಿಗೆ ವಿಶೇಷ ತಮ್ಮ ಪ್ರತಿಯೊಂದು ಸಂಕಲ್ಪಗಳ ಮೇಲೆ ಗಮನ ಕೊಡಬೇಕಾಗಿದೆ, ಯಾವಾಗ ತಾವು ನಿರ್ವಿಕಲ್ಪ ಸಂಕಲ್ಪದಲ್ಲಿ ಇರುತ್ತೀರಿ ಆಗ ಬುದ್ಧಿ ಸರಿಯಾದ ನಿರ್ಣಯ ಮಾಡುತ್ತದೆ, ನಿರ್ಣಯ ಸರಿಯಾಗಿದ್ದರೆ ನಿವಾರಣೆಯು ಸಹ ಮಾಡಿ ಬಿಡುವಿರಿ. ನಿವಾರಣೆ ಮಾಡುವ ಬದಲಾಗಿ ಒಂದುವೇಳೆ ತಾವೇ ಕಾರಣ ಕಾರಣ ಎಂದು ಹೇಳುತ್ತೀರಿ ಎಂದರೆ ಹಿಂದಿನವರು ಪ್ರತಿಯೊಂದು ಮಾತಿನಲ್ಲಿ ಕಾರಣವನ್ನು ಹೇಳುತ್ತಾ ಇರುವರು.