15.12.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ನೀವೀಗ
ಆತ್ಮಿಕ ತಂದೆಯ ಮೂಲಕ ಆತ್ಮಿಕ ವ್ಯಾಯಾಮವನ್ನು ಕಲಿಯುತ್ತಿದ್ದೀರಿ, ಈ ವ್ಯಾಯಾಮದಿಂದಲೇ ಮುಕ್ತಿಧಾಮ,
ಶಾಂತಿಧಾಮಕ್ಕೆ ಹೊರಟು ಹೋಗುವಿರಿ."
ಪ್ರಶ್ನೆ:
ತಂದೆಯು
ಮಕ್ಕಳಿಗೆ ಪುರುಷಾರ್ಥ ಮಾಡಿಸುತ್ತಿರುತ್ತಾರೆ ಆದರೆ ಮಕ್ಕಳು ಯಾವ ಮಾತಿನಲ್ಲಿ ಬಹಳ ಸ್ಟ್ರಿಕ್ಟ್ (ಕಟ್ಟು
ನಿಟ್ಟಾಗಿ) ಇರಬೇಕಾಗಿದೆ?
ಉತ್ತರ:
ಹಳೆಯ
ಪ್ರಪಂಚಕ್ಕೆ ಬೆಂಕಿ ಬೀಳುವ ಮೊದಲೇ ತಯಾರಾಗಿರಿ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯ
ನೆನಪಿನಲ್ಲಿದ್ದು ತಂದೆಯಿಂದ ಸಂಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುವುದರಲ್ಲಿ ಬಹಳ ಕಟ್ಟು
ನಿಟ್ಟಾಗಿರಬೇಕಾಗಿದೆ. ಅನುತ್ತೀರ್ಣರಾಗಬಾರದು. ಹೇಗೆ ಆ ವಿದ್ಯಾರ್ಥಿಗಳು ಅನುತ್ತೀರ್ಣರಾದರೆ
ಪಶ್ಚಾತ್ತಾಪ ಪಡುತ್ತಾರೆ. ನಮ್ಮದು ಇಡೀ ವರ್ಷ ವ್ಯರ್ಥವಾಗಿ ಹೋಯಿತು ಎಂದು ತಿಳಿಯುತ್ತಾರೆ.
ಕೆಲವರಂತೂ ಓದದಿದ್ದರೆ ಏನು? ಎಂದು ಹೇಳುತ್ತಾರೆ ಆದರೆ ನೀವು ಇದರಲ್ಲಿ ಬಹಳ ಬಿಗಿಯಾಗಿರಬೇಕು.
ಶಿಕ್ಷಕರು ಟೂಲೇಟ್ ಎಂದು ಹೇಳುವಂತಾಗಬಾರದು.
ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ಆತ್ಮಿಕ ಪಾಠಶಾಲೆಯಲ್ಲಿ ಆದೇಶ ನೀಡುತ್ತಾರೆ ಅಥವಾ ಈ ರೀತಿ
ಹೇಳಬಹುದು - ಮಕ್ಕಳಿಗೆ ವ್ಯಾಯಾಮವನ್ನು ಕಲಿಸುತ್ತಾರೆ. ಹೇಗೆ ಶಿಕ್ಷಕರು ಆದೇಶ ನೀಡುತ್ತಾರೆ ಹಾಗೂ
ವ್ಯಾಯಾಮವನ್ನು ಕಲಿಸುತ್ತಾರಲ್ಲವೆ. ಈ ಆತ್ಮಿಕ ತಂದೆಯೂ ಸಹ ಮಕ್ಕಳಿಗೆ ಡೈರೆಕ್ಟ್ ಹೇಳುತ್ತಾರೆ -
ಏನು ಹೇಳುತ್ತಾರೆ? ಮನ್ಮನಾಭವ. ಹೇಗೆ ಅವರು ಅಟೇಂಷನ್ ಪ್ಲೀಜ್ ಎಂದು ಹೇಳುತ್ತಾರೆ. ಹಾಗೆಯೇ ತಂದೆಯು
ಹೇಳುತ್ತಾರೆ - ಮನ್ಮನಾಭವ. ಇದು ಹೇಗೆ ಪ್ರತಿಯೊಬ್ಬರೂ ತಮ್ಮ ಮೇಲೆ ಕೃಪೆ ತೋರಿಸಿಕೊಂಡಂತೆ. ತಂದೆಯು
ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ. ಅಶರೀರಿಯಾಗಿ, ಈ ಆತ್ಮಿಕ
ವ್ಯಾಯಾಮವನ್ನು ಆತ್ಮಗಳಿಗೆ ಆತ್ಮಿಕ ತಂದೆಯೇ ಕಲಿಸುತ್ತಾರೆ. ಅವರು ಪರಮ ಶಿಕ್ಷಕನಾಗಿದ್ದಾರೆ.
ನೀವೆಲ್ಲರೂ ಉಪಾಧ್ಯಾಯರಾಗಿದ್ದೀರಿ. ನೀವೂ ಸಹ ಎಲ್ಲರಿಗೆ ಹೇಳುತ್ತೀರಿ - ನೀವು ತಮ್ಮನ್ನು
ಆತ್ಮನೆಂದು ತಿಳಿಯಿರಿ, ತಂದೆಯನ್ನು ನೆನಪು ಮಾಡಿ - ದೇಹೀ-ಅಭಿಮಾನಿ ಭವ. ಮನ್ಮನಾಭವದ ಅರ್ಥವೂ ಇದೇ
ಆಗಿದೆ. ತಂದೆಯು ಮಕ್ಕಳ ಕಲ್ಯಾಣಕ್ಕಾಗಿ ಸಲಹೆ ಕೊಡುತ್ತಾರೆ. ತಾನು ಯಾರಿಂದಲೂ ಕಲಿತಿಲ್ಲ.
ಮತ್ತೆಲ್ಲಾ ಶಿಕ್ಷಕರು ಸ್ವಯಂ ಕಲಿತು ನಂತರ ಕಲಿಸುತ್ತಾರೆ ಆದರೆ ಈ ಶಿಕ್ಷಕರು ಯಾವುದೇ ಶಾಲೆಯಲ್ಲಿ
ಓದಿ ಕಲಿತಿಲ್ಲ, ಇವರು ಕೇವಲ ಕಲಿಸಿ ಕೊಡುತ್ತಾರೆ. ನಾನು ನೀವಾತ್ಮಗಳಿಗೆ ಆತ್ಮಿಕ ವ್ಯಾಯಾಮವನ್ನು
ಕಲಿಸುತ್ತೇನೆಂದು ಹೇಳುತ್ತಾರೆ. ಅವರೆಲ್ಲರೂ ದೈಹಿಕ ಮಕ್ಕಳಿಗೆ ದೈಹಿಕ ವ್ಯಾಯಾಮವನ್ನು
ಕಲಿಸುತ್ತಾರೆ. ಅವರು ವ್ಯಾಯಾಮವನ್ನು ಶರೀರದಿಂದಲೇ ಮಾಡಲಾಗುತ್ತದೆ. ಇದರಲ್ಲಿ ಶರೀರದ ಮಾತಿಲ್ಲ.
ತಂದೆಯು ತಿಳಿಸುತ್ತಾರೆ - ನನಗೆ ಯಾವುದೇ ಶರೀರವಿಲ್ಲ. ನಾನಂತೂ ವ್ಯಾಯಾಮವನ್ನು ಕಲಿಸುತ್ತೇನೆ,
ಸಲಹೆ ನೀಡುತ್ತೇನೆ. ನನ್ನಲ್ಲಿ ವ್ಯಾಯಾಮವನ್ನು ಕಲಿಸುವ ಪಾತ್ರವು ಡ್ರಾಮಾನುಸಾರ ಅಡಕವಾಗಿದೆ.
ಸರ್ವೀಸ್ ಅಡಕವಾಗಿದೆ. ವ್ಯಾಯಾಮವನ್ನು ಕಲಿಸುವುದಕ್ಕಾಗಿಯೇ ಬರುತ್ತೇನೆ. ನೀವು ತಮೋಪ್ರಧಾನರಿಂದ
ಸತೋಪ್ರಧಾನರಾಗಬೇಕಾಗಿದೆ, ಇದು ಬಹಳ ಸಹಜವಾಗಿದೆ. ಏಣಿಯ ಚಿತ್ರವು ನಿಮ್ಮ ಬುದ್ಧಿಯಲ್ಲಿದೆ - ಹೇಗೆ
84 ಜನ್ಮಗಳ ಚಕ್ರವನ್ನು ಸುತ್ತಿ ಕೆಳಗಿಳಿದಿದ್ದೇವೆ. ನೀವೀಗ ಹಿಂತಿರುಗಿ ಹೋಗಬೇಕೆಂದು ತಂದೆಯು
ತಿಳಿಸುತ್ತಾರೆ. ಈ ರೀತಿ ಮತ್ತ್ಯಾರೂ ತಮ್ಮ ಅನುಯಾಯಿಗಳಿಗೆ ಅಥವಾ ವಿದ್ಯಾರ್ಥಿಗಳಿಗೆ ಹೇ ಆತ್ಮಿಕ
ಮಕ್ಕಳೇ, ಈಗ ಹಿಂತಿರುಗಿ ಹೋಗಬೇಕೆಂಬ ಮಾತನ್ನು ತಿಳಿಸುವುದಿಲ್ಲ. ಆತ್ಮಿಕ ತಂದೆಯ ವಿನಃ ಮತ್ತ್ಯಾರೂ
ಈ ರೀತಿ ತಿಳಿಸಲು ಸಾಧ್ಯವಿಲ್ಲ. ಮಕ್ಕಳಿಗೆ ತಿಳಿದಿದೆ - ನಾವೀಗ ಹಿಂತಿರುಗಿ ಹೋಗಬೇಕಾಗಿದೆ. ಈ
ಪ್ರಪಂಚವೇ ಈಗ ತಮೋಪ್ರಧಾನವಾಗಿದೆ, ನಾವು ಸತೋಪ್ರಧಾನ ಪ್ರಪಂಚದ ಮಾಲೀಕರಾಗಿದ್ದೆವು ನಂತರ 84
ಜನ್ಮಗಳ ಚಕ್ರವನ್ನು ಸುತ್ತಿ ತಮೋಪ್ರಧಾನ ಪ್ರಪಂಚದ ಮಾಲೀಕರಾಗಿದ್ದೇವೆ. ಇಲ್ಲಿ ದುಃಖವೇ ದುಃಖವಿದೆ.
ತಂದೆಗೆ ದುಃಖಹರ್ತ-ಸುಖಕರ್ತನೆಂದು ಹೇಳುತ್ತಾರೆ ಅರ್ಥಾತ್ ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿ
ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಬಹಳ ಸುಖವನ್ನು
ನೋಡಿದ್ದೇವೆ, ಹೇಗೆ ರಾಜ್ಯಭಾರ ಮಾಡಿದೆವು ಎಂಬುದು ನೆನಪಿಲ್ಲ ಆದರೆ ಗುರಿ-ಧ್ಯೇಯವು
ಸನ್ಮುಖದಲ್ಲಿದೆ. ಸ್ವರ್ಗವು ಹೂವಿನ ಉದ್ಯಾನವನವಾಗಿದೆ. ನಾವೀಗ ಮುಳ್ಳುಗಳಿಂದ ಹೂಗಳಾಗುತ್ತಿದ್ದೇವೆ.
ಹೇಗೆ
ನಿಶ್ಚಯವನ್ನಿಡುವುದು ಎಂದು ನೀವು ಹೇಳುವುದಿಲ್ಲ. ಒಂದುವೇಳೆ ಸಂಶಯವಿದ್ದರೆ ವಿನಃಶ್ಯಂತಿಯಾಗುವರು.
ಶಾಲೆಯಿಂದ ಹೆಜ್ಜೆಯನ್ನು ಹೊರ ತೆಗೆದರೆ ವಿದ್ಯಾಭ್ಯಾಸವು ನಿಂತು ಹೋಗುವುದು, ಪದವಿಯೂ
ವಿನಾಶವಾಗುವುದು, ಬಹಳ ನಷ್ಟವಾಗುತ್ತದೆ ಅಂದರೆ ಅವರು ಪ್ರಜೆಗಳಲ್ಲಿಯೂ ಕಡಿಮೆ ಪದವಿಯನ್ನು
ಪಡೆಯುತ್ತಾರೆ. ಮೂಲ ಮಾತು ಸತೋಪ್ರಧಾನ, ಪೂಜ್ಯ ದೇವಿ-ದೇವತೆಗಳಾಗಬೇಕಾಗಿದೆ. ಈಗಂತೂ ದೇವತೆಗಳಲ್ಲ.
ನೀವು ಬ್ರಾಹ್ಮಣರಿಗೆ ತಿಳುವಳಿಕೆ ಬಂದಿದೆ. ಬ್ರಾಹ್ಮಣರೇ ಬಂದು ತಂದೆಯಿಂದ ಈ ಡ್ರಿಲ್ನ್ನು
ಕಲಿಯುತ್ತೀರಿ. ಒಳಗೆ ಖುಷಿಯೂ ಇರುತ್ತದೆ, ಈ ವಿದ್ಯೆಯು ಬಹಳ ಇಷ್ಟವಾಗುತ್ತದೆಯಲ್ಲವೆ.
ಭಗವಾನುವಾಚವಾಗಿದೆ - ಭಲೆ ಅವರು ಕೃಷ್ಣನ ಹೆಸರನ್ನು ಹಾಕಿದ್ದಾರೆ ಆದರೆ ನೀವು ತಿಳಿದುಕೊಂಡಿದ್ದೀರಿ
- ಕೃಷ್ಣನು ಈ ಡ್ರಿಲ್ನ್ನು ಕಲಿಸಲಿಲ್ಲ, ಇದನ್ನು ತಂದೆಯೇ ಕಲಿಸುತ್ತಾರೆ. ಕೃಷ್ಣನ ಆತ್ಮವೂ ಸಹ
ಭಿನ್ನ ನಾಮ-ರೂಪಗಳನ್ನು ಧಾರಣೆ ಮಾಡುತ್ತಾ ಈಗ ತಮೋಪ್ರಧಾನನಾಗಿದೆ. ಆ ಆತ್ಮನಿಗೂ ಸಹ ತಂದೆಯು
ರಾಜಯೋಗವನ್ನು ಕಲಿಸುತ್ತಾರೆ ಆದರೆ ತಂದೆಯು ಯಾರಿಂದಲೂ ಕಲಿಯುವುದಿಲ್ಲ. ಮತ್ತೆಲ್ಲರೂ ಯಾರಿಂದಲಾದರೂ
ಅವಶ್ಯವಾಗಿ ಕಲಿಯುತ್ತಾರೆ ಆದರೆ ಇವರು ಕಲಿಸುವಂತಹ ಆತ್ಮಿಕ ತಂದೆಯಾಗಿದ್ದಾರೆ. ಅವರು ನಿಮಗೆ
ಕಲಿಸುತ್ತಾರೆ ಮತ್ತೆ ನೀವು ಅನ್ಯರಿಗೆ ಕಲಿಸಿ ಕೊಡುತ್ತೀರಿ. ನೀವು 84 ಜನ್ಮಗಳನ್ನು ಪಡೆದು
ಪತಿತರಾಗಿದ್ದೀರಿ, ಈಗ ಮತ್ತೆ ಪಾವನರಾಗಬೇಕಾಗಿದೆ. ಅದಕ್ಕಾಗಿ ಆತ್ಮಿಕ ತಂದೆಯನ್ನು ನೆನಪು ಮಾಡಿ.
ಭಕ್ತಿಮಾರ್ಗದಲ್ಲಿ ನೀವು ಹೇ ಪತಿತ-ಪಾವನ ಎಂದು ಹಾಡುತ್ತಾ ಬಂದಿದ್ದೀರಿ. ಈಗಲೂ ಸಹ ನೀವು
ಎಲ್ಲಿಯಾದರೂ ಹೋಗಿ ನೋಡಿ, ನೀವು ರಾಜಋಷಿಗಳಲ್ಲವೆ! ಎಲ್ಲಿ ಬೇಕಾದರೂ ತಿರುಗಾಡಬಹುದು, ನಿಮಗೆ
ಯಾವುದೇ ಬಂಧನವಿಲ್ಲ. ನಿಮಗೆ ಈ ನಿಶ್ಚಯವಿದೆ, ಬೇಹದ್ದಿನ ತಂದೆಯು ನಮ್ಮ ಸೇವೆಗಾಗಿ ಬಂದಿದ್ದಾರೆ,
ಅಂದಮೇಲೆ ತಂದೆಯು ಮಕ್ಕಳಿಂದ ವಿದ್ಯೆಯ ಶುಲ್ಕವನ್ನು ಹೇಗೆ ತೆಗೆದುಕೊಳ್ಳುವರು! ಹೇಗೆ ಶಿಕ್ಷಕನ
ಮಕ್ಕಳು ಅದೇ ಶಾಲೆಯಲ್ಲಿ ಓದುತ್ತಿದ್ದರೆ ಅವರಿಗೆ ಉಚಿತವಾಗಿ ಓದಿಸುತ್ತಾರಲ್ಲವೆ ಹಾಗೆಯೇ ಈ ತಂದೆಯೂ
ಸಹ ಉಚಿತವಾಗಿ ಓದಿಸುತ್ತಾರೆ ಅಂದಮೇಲೆ ನಾವು ಎಲ್ಲವನ್ನೂ ತಂದೆಗೆ ಕೊಡುತ್ತೇವೆ ಎಂದು ನೀವು
ತಿಳಿಯಬೇಡಿ. ಇದು ಶುಲ್ಕವಲ್ಲ. ವಾಸ್ತವದಲ್ಲಿ ನೀವು ತಂದೆಗೆ ಕೊಡುವುದೇನೂ ಇಲ್ಲ. ಬದಲಾಗಿ ನೀವು
ಇನ್ನೂ ಅವರಿಂದ ಇನ್ನಷ್ಟು ಪಡೆದುಕೊಳ್ಳುತ್ತೀರಿ. ಮನುಷ್ಯರು ದಾನ-ಪುಣ್ಯ ಮಾಡುತ್ತಾರೆ. ಇದರ ಫಲವು
ನಮಗೆ ಇನ್ನೊಂದು ಜನ್ಮದಲ್ಲಿ ಸಿಗುವುದೆಂದು ತಿಳಿಯುತ್ತಾರೆ. ಅವರಿಗೆ ಅಲ್ಪಕಾಲದ ಕ್ಷಣ ಭಂಗುರ
ಸುಖವು ಸಿಗುತ್ತದೆ. ಭಲೆ ಇನ್ನೊಂದು ಜನ್ಮದಲ್ಲಿ ಸಿಗುತ್ತದೆ ಆದರೆ ಅದು ಕೆಳಗಿಳಿಯುವಂತಹ
ಜನ್ಮದಲ್ಲಿಯೇ ಸಿಗುತ್ತದೆ. ಏಣಿಯನ್ನು ಇಳಿಯುತ್ತಲೇ ಬರುತ್ತೀರಲ್ಲವೆ. ಈಗ ನೀವು ಏನೆಲ್ಲವನ್ನೂ
ಮಾಡುತ್ತೀರೋ ಅದು ಏರುವ ಕಲೆಯಲ್ಲಿ ಹೋಗುವುದಕ್ಕಾಗಿ ಮಾಡುತ್ತೀರಿ. ಕರ್ಮದ ಫಲವೆಂದು
ಹೇಳುತ್ತಾರಲ್ಲವೆ. ಆತ್ಮಕ್ಕೆ ಕರ್ಮದ ಫಲ ಸಿಗುತ್ತದೆ. ಈ ಲಕ್ಷ್ಮೀ-ನಾರಾಯಣರಿಗೂ ಸಹ ಕರ್ಮಗಳ ಫಲವೇ
ಸಿಕ್ಕಿದೆಯಲ್ಲವೆ. ಬೇಹದ್ದಿನ ತಂದೆಯಿಂದ ಬೇಹದ್ದಿನ ಫಲವು ಸಿಗುತ್ತದೆ. ಭಕ್ತಿಯಲ್ಲಿ ಇನ್ಡೈರೆಕ್ಟ್
ಫಲವು ಸಿಗುತ್ತದೆ. ಡ್ರಾಮಾದಲ್ಲಿ ನಿಗಧಿಯಾಗಿದೆ. ಇದೂ ಸಹ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ನಿಮಗೆ
ತಿಳಿದಿದೆ - ನಾವು ಕಲ್ಪದ ನಂತರ ಬಂದು ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆಯುತ್ತೇವೆ. ತಂದೆಯು
ನಮಗಾಗಿ ಶಾಲೆಯನ್ನು ಕಟ್ಟಿಸುತ್ತಾರೆ. ಅವೆಲ್ಲವೂ ದೈಹಿಕ ಶಾಲೆಗಳಾಗಿವೆ. ಯಾವುದನ್ನು
ಭಿನ್ನ-ಭಿನ್ನ ಪ್ರಕಾರದಿಂದ ಅರ್ಧಕಲ್ಪ ಓದುತ್ತಾ ಬಂದಿರಿ, ಈಗ ತಂದೆಯು 21 ಜನ್ಮಗಳಿಗಾಗಿ ಎಲ್ಲಾ
ದುಃಖಗಳನ್ನು ದೂರ ಮಾಡಲು ಓದಿಸುತ್ತಾರೆ. ಅಲ್ಲಿ ರಾಜಧಾನಿಯಿರುತ್ತದೆ, ಅದರಲ್ಲಿ ನಂಬರ್ವಾರಂತೂ
ಬಂದೇ ಬರುತ್ತಾರೆ. ಹೇಗೆ ಇಲ್ಲಿಯೂ ಸಹ ರಾಜ-ರಾಣಿ, ಮಂತ್ರಿ, ಪ್ರಜೆ ಮೊದಲಾದವರೆಲ್ಲರೂ ನಂಬರ್ವಾರ್
ಇರುತ್ತಾರೆ. ಇವರು ಹಳೆಯ ಪ್ರಪಂಚದಲ್ಲಿದ್ದಾರೆ ಆದರೆ ಹೊಸ ಪ್ರಪಂಚದಲ್ಲಿ ಬಹಳ ಕಡಿಮೆ
ಜನಸಂಖ್ಯೆಯಿರುತ್ತದೆ, ಬಹಳಷ್ಟು ಸುಖವಿರುತ್ತದೆ. ನೀವು ವಿಶ್ವದ ಮಾಲೀಕರಾಗುತ್ತೀರಿ.
ರಾಜ-ಮಹಾರಾಜರು ಇದ್ದು ಹೋಗಿದ್ದಾರೆ. ಅವರು ಎಷ್ಟೊಂದು ಖುಷಿಯನ್ನಾಚರಿಸುತ್ತಾರೆ ಆದರೆ ತಂದೆಯು
ತಿಳಿಸುತ್ತಾರೆ - ಅವರೆಲ್ಲರೂ ಕೆಳಗಿಳಿಯಲೇಬೇಕಾಗಿದೆ. ಎಲ್ಲರೂ ಕೆಳಗಿಳಿಯುತ್ತಾರೆ. ದೇವತೆಗಳ
ಕಲೆಗಳೂ ಸಹ ನಿಧಾನ-ನಿಧಾನವಾಗಿ ಕಡಿಮೆಯಾಗುತ್ತದೆ ಆದರೆ ಅಲ್ಲಿ ರಾವಣ ರಾಜ್ಯವೇ ಇರುವುದಿಲ್ಲ
ಆದ್ದರಿಂದ ಸುಖವೇ ಸುಖವಿರುತ್ತದೆ. ಇಲ್ಲಿ ರಾವಣ ರಾಜ್ಯವಿದೆ, ನೀವು ಹೇಗೆ ಏರುತ್ತೀರೋ ಹಾಗೆಯೇ
ಇಳಿಯುತ್ತೀರಿ. ಆತ್ಮಗಳು ನಾಮ-ರೂಪವನ್ನು ಧಾರಣೆ ಮಾಡುತ್ತಾ-ಮಾಡುತ್ತಾ ಕೆಳಗಿಳಿದು ಬಂದಿದ್ದೀರಿ.
ಡ್ರಾಮಾ ಪ್ಲಾನನುಸಾರ ಕಲ್ಪದ ಹಿಂದಿನ ತರಹ ಕೆಳಗಿಳಿದು ತಮೋಪ್ರಧಾನರಾಗಿ ಬಿಡುತ್ತೀರಿ. ಕಾಮ
ಚಿತೆಯನ್ನು ಏರುವುದರಿಂದಲೇ ದುಃಖವು ಆರಂಭವಾಗುತ್ತದೆ. ಈಗ ಅತಿ ದುಃಖವಿದೆ ಮತ್ತೆ ಸುಖಧಾಮದಲ್ಲಿ
ಅತಿ ಸುಖವಿರುವುದು. ನೀವು ರಾಜಋಷಿಗಳಾಗಿದ್ದೀರಿ, ಆ ಸನ್ಯಾಸಿಗಳದು ಹಠಯೋಗವಾಗಿದೆ. ನೀವು
ಯಾರೊಂದಿಗಾದರೂ ಕೇಳಿ - ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಾ?
ಇದಕ್ಕೆ ಅವರು ಇಲ್ಲವೆಂದು ಹೇಳಿ ಬಿಡುತ್ತಾರೆ ಅಂದಮೇಲೆ ಯಾರು ಕೇಳುವರೋ ಅವರು
ತಿಳಿದುಕೊಂಡಿರುತ್ತಾರೆ. ತಾನೇ ತಿಳಿದುಕೊಂಡಿಲ್ಲವೆಂದರೆ ಅನ್ಯರನ್ನು ಕೇಳಲು ಹೇಗೆ ಸಾಧ್ಯ? ನಿಮಗೆ
ತಿಳಿದಿದೆ - ಋಷಿ-ಮುನಿ ಮೊದಲಾದವರೂ ಸಹ ತ್ರಿಕಾಲದರ್ಶಿಗಳಾಗಿರಲಿಲ್ಲ. ತಂದೆಯು ನಮ್ಮನ್ನು
ತ್ರಿಕಾಲದರ್ಶಿಗಳನ್ನಾಗಿ ಮಾಡುತ್ತಿದ್ದಾರೆ. ಈ ತಂದೆ (ಬ್ರಹ್ಮಾ) ಯಾರು ವಿಶ್ವದ ಮಾಲೀಕನಾಗಿದ್ದರೋ
ಇವರಿಗೂ ಸಹ ಜ್ಞಾನವಿರಲಿಲ್ಲ. ಈ ಜನ್ಮದಲ್ಲಿಯೂ 60 ವರ್ಷಗಳ ತನಕ ಜ್ಞಾನವಿರಲಿಲ್ಲ. ಯಾವಾಗ ಇವರಲ್ಲಿ
ತಂದೆಯು ಪ್ರವೇಶಿಸಿದರೋ ಆಗಿನಿಂದ ನಿಧಾನ-ನಿಧಾನವಾಗಿ ಎಲ್ಲವನ್ನೂ ತಿಳಿಸುತ್ತಾ ಹೋಗುತ್ತಾರೆ. ಭಲೆ
ಕೆಲವರು ನಿಶ್ಚಯ ಬುದ್ಧಿಯವರಾಗುತ್ತಾರೆ ಆದರೂ ಸಹ ಮಾಯೆಯು ಅನೇಕರನ್ನು ಬೀಳಿಸುತ್ತಾ ಇರುತ್ತದೆ.
ತಂದೆಯು ಹೆಸರನ್ನು ಹೇಳುವುದಿಲ್ಲ ಏಕೆಂದರೆ ನಿರಾಶವಾಧಿಗಳಾಗಿ ಬಿಡುತ್ತಾರೆ. ಎಲ್ಲರ ಸಮಾಚಾರವಂತೂ
ಬರುತ್ತದೆಯಲ್ಲವೆ. ಕೆಟ್ಟ ಸಂಗವನ್ನು ಸೇರಿದರು ಅಥವಾ ಹೊಸದಾಗಿ ವಿವಾಹ ಆಗಿರುವವರ ಜೊತೆ
ಸಂಗವಾಯಿತೆಂದರೆ ಚಂಚಲವಾಗಿ ಬಿಡುವರು. ನಾವು ವಿವಾಹ ಮಾಡಿಕೊಳ್ಳದೆ ಇರಲು ಆಗುವುದಿಲ್ಲ ಎಂದು
ಹೇಳುತ್ತಾರೆ. ಒಳ್ಳೆಯ ಮಹಾರಥಿಗಳು ಪ್ರತಿನಿತ್ಯವೂ ತರಗತಿಗೆ ಬರುವವರು ಕೆಲವು ಬಾರಿ ಇಲ್ಲಿಗೂ (ಮಧುಬನ)
ಬಂದು ಹೋಗಿದ್ದಾರೆ. ಅಂತಹವರನ್ನೂ ಮಾಯಾ ರೂಪಿ ಮೊಸಳೆಯು ಹಿಡಿದುಕೊಂಡಿದೆ. ಹೀಗೆ ಬಹಳಷ್ಟು
ಪ್ರಕರಣಗಳು ನಡೆಯುತ್ತಿರುತ್ತವೆ. ಇನ್ನೂ ವಿವಾಹ ಮಾಡಿಕೊಂಡಿಲ್ಲ ಆದರೆ ಮಾಯೆಯು ಅವರನ್ನು
ನುಂಗುತ್ತಿದೆ ಅಂದರೆ ಸ್ತ್ರೀ ರೂಪಿ ಮಾಯೆಯು ಸೆಳೆಯುತ್ತಿರುತ್ತದೆ. ಅವರು ಮೊಸಳೆಯ ಬಾಯಲ್ಲಿ
ಸಿಕ್ಕಿ ಹಾಕಿಕೊಂಡಿದ್ದಾರೆ. ಮತ್ತೆ ನಿಧಾನ-ನಿಧಾನವಾಗಿ ಅದು ನುಂಗಿ ಬಿಡುತ್ತದೆ. ಕೆಲವರು
ಹುಡುಗಾಟಿಕೆ ಮಾಡುತ್ತಾರೆ ಅಥವಾ ನೋಡುತ್ತಿದ್ದಂತೆಯೇ ಚಂಚಲವಾಗಿ ಬಿಡುತ್ತಾರೆ. ನಾವು ಮೇಲಿನಿಂದ
ಒಮ್ಮೆಲೆ ಕೆಳಗೆ ಬಿದ್ದು ಹೋಗುತ್ತೇವೆ ಎಂಬುದನ್ನೂ ತಿಳಿದುಕೊಳ್ಳುತ್ತಾರೆ. ತಂದೆಯು ಹೇಳುತ್ತಾರೆ
- ಇವರು ಬಹಳ ಒಳ್ಳೆಯ ಮಗುವಾಗಿದ್ದರು. ಪಾಪ! ಮಾಯೆಗೆ ವಶವಾಗಿ ಬಿಟ್ಟರು. ತಂದೆಯಂತೂ ಮಕ್ಕಳಿಗೆ ಸದಾ
ಇದನ್ನೇ ಬರೆಯುತ್ತಾರೆ - ಮಕ್ಕಳೇ, ಬ್ರಾಹ್ಮಣ ಜೀವನದಲ್ಲಿ ಅಮರವಾಗಿರಿ. ಎಲ್ಲಿಯೂ ಮಾಯೆಯ ಪ್ರಭಾವ
ಬೀರದಿರಲಿ. ಶಾಸ್ತ್ರಗಳಲ್ಲಿಯೂ ಕೆಲವೊಂದು ಮಾತುಗಳಿವೆ. ಈ ಮಾತುಗಳು ನಂತರದಲ್ಲಿ ಗಾಯನ
ಮಾಡಲ್ಪಡುತ್ತವೆ ಅಂದಾಗ ನೀವು ಪುರುಷಾರ್ಥ ಮಾಡಿಸುತ್ತೀರಿ. ಎಲ್ಲಿಯೂ ಮಾಯಾರೂಪಿ ಮೊಸಳೆಯು ನುಂಗಿ
ಹಾಕುವಂತಾಗಬಾರದು. ಮಾಯೆಯು ಭಿನ್ನ-ಭಿನ್ನ ರೂಪದಿಂದ ಹಿಡಿದುಕೊಳ್ಳುತ್ತದೆ. ಮೂಲ ಮಾತು - ಕಾಮ
ಮಹಾಶತ್ರುವಾಗಿದೆ, ಇದರಿಂದ ಬಹಳ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ಪತಿತ ಪ್ರಪಂಚದಿಂದ ಪಾವನ
ಪ್ರಪಂಚವು ಹೇಗಾಗುತ್ತಿದೆ ಎಂಬುದನ್ನು ನೀವು ನೋಡುತ್ತೀರಿ, ಇದರಲ್ಲಿ ತಬ್ಬಿಬ್ಬಾಗುವ ಮಾತೇ ಇಲ್ಲ.
ಕೇವಲ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುವುದರಿಂದ ಎಲ್ಲಾ ದುಃಖಗಳು ದೂರವಾಗಿ
ಬಿಡುತ್ತದೆ. ತಂದೆಯೇ ಪತಿತ ಪಾವನ ಆಗಿದ್ದಾರೆ. ಇದು ಯೋಗಬಲವಾಗಿದೆ, ಭಾರತದ ಪ್ರಾಚೀನ ರಾಜಯೋಗವು
ಬಹಳ ಪ್ರಸಿದ್ಧವಾಗಿದೆ. ಕ್ರಿಸ್ತನಿಗೆ 3000 ವರ್ಷಗಳ ಮೊದಲು ಸ್ವರ್ಗವಿತ್ತೆಂದು ಹೇಳುತ್ತಾರೆ
ಅಂದಮೇಲೆ ಅವಶ್ಯವಾಗಿ ಮತ್ತ್ಯಾವುದೇ ಧರ್ಮವಿರುವುದಿಲ್ಲ, ಎಷ್ಟು ಸಹಜ ಮಾತಾಗಿದೆ ಆದರೆ
ತಿಳಿದುಕೊಂಡಿಲ್ಲ. ನೀವೀಗ ತಿಳಿದಿದ್ದೀರಿ - ಆ ರಾಜ್ಯವನ್ನು ಪುನಃ ಸ್ಥಾಪನೆ ಮಾಡುವ ತಂದೆಯು
ಬಂದಿದ್ದಾರೆ. 5000 ವರ್ಷಗಳ ಮೊದಲೂ ಸಹ ಶಿವ ತಂದೆಯು ಬಂದಿದ್ದರು, ಅವಶ್ಯವಾಗಿ ಹೇಗೆ ಈಗ
ಜ್ಞಾನವನ್ನು ಕೊಡುತ್ತಿದ್ದಾರೆಯೋ ಇದೇ ಜ್ಞಾನವನ್ನು ಕಲ್ಪದ ಹಿಂದೆಯೂ ಕೊಟ್ಟಿದ್ದರು. ಸ್ವಯಂ
ತಂದೆಯೇ ಹೇಳುತ್ತಾರೆ - ನಾನು ಕಲ್ಪ-ಕಲ್ಪವೂ ಸಂಗಮದಲ್ಲಿ ಸಾಧಾರಣ ತನುವಿನಲ್ಲಿ ಬಂದು ರಾಜಯೋಗವನ್ನು
ಕಲಿಸುತ್ತೇನೆ. ನೀವು ರಾಜ ಋಷಿಗಳಾಗಿದ್ದೀರಿ, ಮೊದಲು ಆಗಿರಲಿಲ್ಲ. ಈಗ ತಂದೆಯು ಬಂದಿದ್ದಾರೆ
ಆದ್ದರಿಂದ ನೀವು ತಂದೆಯ ಬಳಿ ಇದ್ದೀರಿ. ಓದುತ್ತೀರಿ, ಸ್ಥೂಲ-ಸೂಕ್ಷ್ಮ ಸೇವೆಯನ್ನೂ ಮಾಡುತ್ತೀರಿ.
ಭಕ್ತಿ ಮಾರ್ಗದಲ್ಲಿಯೂ ಸರ್ವೀಸ್ ಮಾಡುತ್ತಾರೆ ಮತ್ತು ಗೃಹಸ್ಥವನ್ನೂ ಸಂಭಾಲನೆ ಮಾಡುತ್ತಾರೆ.
ತಂದೆಯು ತಿಳಿಸುತ್ತಾರೆ - ಈಗ ಭಕ್ತಿಯು ಮುಕ್ತಾಯವಾಯಿತು, ಜ್ಞಾನವು ಆರಂಭವಾಗುತ್ತದೆ. ನಾನು
ಜ್ಞಾನದಿಂದ ಸದ್ಗತಿ ಕೊಡಲು ಬರುತ್ತೇನೆ. ತಂದೆಯು ನಮ್ಮನ್ನು ಪಾವನರನ್ನಾಗಿ ಮಾಡುತ್ತಿದ್ದಾರೆಂಬುದೂ
ಸಹ ನಿಮ್ಮ ಬುದ್ಧಿಯಲ್ಲಿದೆ. ತಂದೆಯು ಹೇಳುತ್ತಾರೆ - ಡ್ರಾಮಾನುಸಾರ ನಿಮಗೆ ಮಾರ್ಗವನ್ನು ತಿಳಿಸಲು
ಬಂದಿದ್ದೇನೆ. ಶಿಕ್ಷಕರು ಓದಿಸುತ್ತಾರೆ, ಗುರಿ-ಧ್ಯೇಯವೂ ಸನ್ಮುಖದಲ್ಲಿದೆ. ಇದು ಸರ್ವ ಶ್ರೇಷ್ಠ
ವಿದ್ಯೆಯಾಗಿದೆ. ಹೇಗೆ ಕಲ್ಪದ ಹಿಂದೆಯೂ ತಿಳಿಸಿದ್ದರು ಅದನ್ನೇ ತಿಳಿಸುತ್ತಿರುತ್ತಾರೆ. ಈ
ಸೃಷ್ಟಿಚಕ್ರವು ಟಿಕ್ ಟಿಕ್ ಎಂದು ನಡೆಯುತ್ತಿರುತ್ತದೆ. ಕ್ಷಣ-ಪ್ರತಿಕ್ಷಣ ಯಾವುದು ಕಳೆದು ಹೋಯಿತೋ
ಅದು ಮತ್ತೆ 5000 ವರ್ಷಗಳ ನಂತರ ಪುನರಾವರ್ತನೆಯಾಗುವುದು. ದಿನಗಳು ಕಳೆಯುತ್ತಾ ಹೋಗುತ್ತವೆ. ಈ
ವಿಚಾರವು ಮತ್ತ್ಯಾರ ಬುದ್ಧಿಯಲ್ಲಿಯೂ ಇಲ್ಲ. ಸತ್ಯ-ತ್ರೇತಾ, ದ್ವಾಪರ-ಕಲಿಯುಗವು ಕಳೆದು ಹೋಯಿತು.
ಅದು ಮತ್ತೆ ಪುನರಾವರ್ತನೆಯಾಗುವುದು. ಈಗ ಯಾವುದು ಕಳೆಯಿತೆಂದರೆ ಕಲ್ಪದ ಹಿಂದೆ ಏನು ಕಳೆದಿತ್ತೊ
ಅದೇ ಕಳೆಯಿತು. ಇನ್ನು ಕೆಲವೇ ದಿನಗಳಿವೆ, ಮನುಷ್ಯರು ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ. ಅವರ
ಹೋಲಿಕೆಯಲ್ಲಿ ನೀವು ಹೇಳುತ್ತೀರಿ, ಇನ್ನು ಕೆಲವೇ ಘಂಟೆಗಳು ಉಳಿದಿವೆ. ಇದೂ ಸಹ ಡ್ರಾಮಾದಲ್ಲಿ
ನಿಗಧಿಯಾಗಿದೆ. ಯಾವಾಗ ಹಳೆಯ ಪ್ರಪಂಚಕ್ಕೆ ಬೆಂಕಿ ಬೀಳುವುದೋ ಆಗ ಜಾಗೃತರಾಗುತ್ತಾರೆ ಆದರೆ ಟೂಲೇಟ್
ಆಗಿ ಬಿಡುತ್ತದೆ. ಆದ್ದರಿಂದ ತಂದೆಯು ಪುರುಷಾರ್ಥ ಮಾಡಿಸುತ್ತಿರುತ್ತಾರೆ - ಮಕ್ಕಳೇ, ತಯಾರಾಗಿ
ಕುಳಿತುಕೊಳ್ಳಿ. ಶಿಕ್ಷಕರು ಟೂಲೇಟ್ ಎಂದು ಹೇಳುವಂತಾಗಬಾರದು. ಅನುತ್ತೀರ್ಣರಾಗುವವರು ಬಹಳ
ಪಶ್ಚಾತ್ತಾಪ ಪಡುತ್ತಾರೆ, ನಮ್ಮದು ಇಡೀ ವರ್ಷ ವ್ಯರ್ಥವಾಗಿ ಹೋಯಿತೆಂದು ತಿಳಿಯುತ್ತಾರೆ. ಇನ್ನೂ
ಕೆಲವರು ಓದದಿದ್ದರೆ ಏನಾಗುವುದು! ನೀವು ಮಕ್ಕಳಂತೂ ಇದರಲ್ಲಿ ಬಹಳ ಸ್ಟ್ರಿಕ್ಟ್ ಆಗಿರಬೇಕು. ನಾವಂತೂ
ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು
ನೆನಪು ಮಾಡಬೇಕಾಗಿದೆ. ಇದರಲ್ಲಿ ಯಾವುದೇ ಕಷ್ಟವಿದ್ದರೆ ತಂದೆಯೊಂದಿಗೆ ಕೇಳಬಹುದು - ಇದೇ ಮುಖ್ಯ
ಮಾತಾಗಿದೆ. ತಂದೆಯು ಇಂದಿಗೆ 5000 ವರ್ಷಗಳ ಮೊದಲೂ ಸಹ ತಿಳಿಸಿದ್ದರು - ಮಕ್ಕಳೇ, ನನ್ನೊಬ್ಬನನ್ನೇ
ನೆನಪು ಮಾಡಿ. ಪತಿತ-ಪಾವನನು ನಾನಾಗಿದ್ದೇನೆ. ಕೃಷ್ಣನು ಎಲ್ಲರ ತಂದೆಯಲ್ಲ. ನೀವು ಶಿವ ಮತ್ತು
ಕೃಷ್ಣನ ಪೂಜಾರಿಗಳಿಗೆ ಈ ಜ್ಞಾನವನ್ನು ತಿಳಿಸಿ. ಆತ್ಮವು ಪೂಜ್ಯನಾಗಿರಲಿಲ್ಲವೆಂದರೆ ಎಷ್ಟಾದರೂ ತಲೆ
ಕೆಡಿಸಿಕೊಳ್ಳಿ ಅವರಿಗೆ ಅರ್ಥವಾಗುವುದಿಲ್ಲ. ಈಗ ನಾಸ್ತಿಕರಾಗುತ್ತಾರೆ, ಬಹುಷಃ ಮುಂದೆ ಹೋದಂತೆ
ಆಸ್ತಿಕರಾಗಲೂಬಹುದು. ತಿಳಿದುಕೊಳ್ಳಿ, ಯಾರಾದರೂ ವಿವಾಹ ಮಾಡಿಕೊಂಡು ಕೆಳಗೆ ಬೀಳುತ್ತಾರೆಂದರೆ ಅವರು
ಮತ್ತೆ ಬಂದು ಜ್ಞಾನವನ್ನು ತೆಗೆದುಕೊಂಡು ಮುಂದುವರೆಯಬಹುದು ಆದರೆ ಆಸ್ತಿಯು ಬಹಳ ಕಡಿಮೆಯಾಗುವುದು
ಏಕೆಂದರೆ ಬುದ್ಧಿಯಲ್ಲಿ ಅನ್ಯರ ನೆನಪು ಕುಳಿತುಕೊಂಡಿತು. ಅದನ್ನು ತೆಗೆಯುವುದರಲ್ಲಿ ಬಹಳ
ಕಷ್ಟವಾಗುತ್ತದೆ. ಮೊದಲು ಸ್ತ್ರೀಯ ನೆನಪು ನಂತರ ಮಕ್ಕಳ ನೆನಪು ಬರುತ್ತದೆ. ಮಕ್ಕಳಿಗಿಂತಲೂ
ಸ್ತ್ರೀಯ ನೆನಪು ಬಹಳ ಸೆಳೆಯುತ್ತದೆ ಏಕೆಂದರೆ ಬಹಳ ಸಮಯದ ನೆನಪಲ್ಲವೆ. ಮಕ್ಕಳಂತೂ ನಂತರದಲ್ಲಿ
ಆಗುತ್ತಾರೆ ಮತ್ತೆ ಮಿತ್ರ ಸಂಬಂಧಿ, ಮಾವನ ಮನೆಯ ನೆನಪು ಬರುತ್ತದೆ. ಅದಕ್ಕಿಂತ ಮೊದಲು ಸ್ತ್ರೀ
ಯಾರು ಬಹಳ ಸಮಯ ಜೊತೆ ನೀಡಿದ್ದಾರೆಯೋ ಅವರ ನೆನಪಿರುತ್ತದೆ. ಅದೇರೀತಿ ನಾವು ದೇವತೆಗಳ ಜೊತೆ ಬಹಳ
ಸಮಯ ಇದ್ದೆವೆಂದು ನೀವು ಹೇಳುತ್ತೀರಿ. ಶಿವ ತಂದೆಯ ಜೊತೆ ಬಹಳ ಸಮಯದಿಂದ ಪ್ರೀತಿಯಿದೆ ಎಂದು
ಹೇಳುವುದಿಲ್ಲ. ಯಾವ ತಂದೆಯು 5000 ವರ್ಷಗಳ ಮೊದಲೂ ಸಹ ನಮ್ಮನ್ನು ಪಾವನರನ್ನಾಗಿ ಮಾಡಿದರು,
ಕಲ್ಪ-ಕಲ್ಪವೂ ಬಂದು ನಮ್ಮ ರಕ್ಷಣೆ ಮಾಡುತ್ತಾರೆ ಆದ್ದರಿಂದಲೇ ಅವರಿಗೆ ದುಃಖಹರ್ತ-ಸುಖಕರ್ತನೆಂದು
ಹೇಳುತ್ತಾರೆ. ನಿಮ್ಮ ಬುದ್ಧಿಯೋಗವು ಬಹಳ ಸ್ಪಷ್ಟವಾಗಿರಬೇಕು. ತಂದೆಯು ತಿಳಿಸುತ್ತಾರೆ - ನೀವು ಈ
ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಅದೆಲ್ಲವೂ ಸ್ಮಶಾನವಾಗಲಿದೆ. ನೀವೀಗ ಸಂಗಮದಲ್ಲಿದ್ದೀರಿ,
ಅಮರಲೋಕವು ಬರಲಿದೆ. ನಾವೀಗ ಪುರುಷೋತ್ತಮರಾಗಲು ಪುರುಷಾರ್ಥ ಮಾಡುತ್ತಿದ್ದೇವೆ. ಇದು ಕಲ್ಯಾಣಕಾರಿ
ಪುರುಷೋತ್ತಮ ಸಂಗಮಯುಗವಾಗಿದೆ. ಪ್ರಪಂಚದಲ್ಲಿ ಏನೇನಾಗುತ್ತಿದೆ ಎಂಬುದನ್ನು ನೀವು
ನೋಡುತ್ತಿರುತ್ತೀರಿ. ಈಗ ತಂದೆಯು ಬಂದಿದ್ದಾರೆ ಆದ್ದರಿಂದ ಹಳೆಯ ಪ್ರಪಂಚವು ಸಮಾಪ್ತಿಯಾಗುವುದು.
ಮುಂದೆ ಹೋದಂತೆ ಅನೇಕರಿಗೆ ಇದು ಗಮನಕ್ಕೆ ಬರುವುದು - ಅವಶ್ಯವಾಗಿ ಯಾರೋ ಗುಪ್ತ ರೂಪದಲ್ಲಿ
ಬಂದಿದ್ದಾರೆ ಪ್ರಪಂಚವನ್ನು ಪರಿವರ್ತನೆ ಮಾಡುತ್ತಿದ್ದಾರೆ, ಇದು ಅದೇ ಮಹಾಭಾರತ ಯುದ್ಧವಾಗಿದೆ.
ನೀವೂ ಸಹ ಎಷ್ಟೊಂದು ಬುದ್ಧಿವಂತರಾಗಿದ್ದೀರಿ, ಇವು ಬಹಳ ಮಂಥನ ಮಾಡುವ ಮಾತುಗಳಾಗಿವೆ. ತಮ್ಮ
ಶ್ವಾಸವೂ ಸಹ ವ್ಯರ್ಥವಾಗಿ ಕಳೆಯಬಾರದು ಏಕೆಂದರೆ ನಿಮಗೆ ತಿಳಿದಿದೆ - ಶ್ವಾಸವು ಜ್ಞಾನದಿಂದಲೇ
ಸಫಲವಾಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಮಾಯೆಯಿಂದ
ಪಾರಾಗಲು ಸಂಗ ದೋಷದಿಂದ ತಮ್ಮನ್ನು ಬಹಳ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ತನ್ನ ಬುದ್ಧಿಯೋಗವನ್ನು
ಸ್ಪಷ್ಟವಾಗಿಟ್ಟುಕೊಳ್ಳಬೇಕು. ಶ್ವಾಸವನ್ನೂ ವ್ಯರ್ಥವಾಗಿ ಕಳೆಯಬಾರದು. ಜ್ಞಾನದಿಂದ ಸಫಲ
ಮಾಡಿಕೊಳ್ಳಬೇಕಾಗಿದೆ.
2. ಸಮಯ ಸಿಕ್ಕಿದರೆ ಸಾಕು
ಯೋಗ ಬಲವನ್ನು ಜಮಾ ಮಾಡಿಕೊಳ್ಳಲು ಆತ್ಮಿಕ ಡ್ರಿಲ್ನ ಅಭ್ಯಾಸ ಮಾಡಬೇಕು. ಈಗ ಯಾವುದೇ ಹೊಸ
ಬಂಧನವನ್ನು ಮಾಡಿಕೊಳ್ಳಬಾರದು.
ವರದಾನ:
ತಂದೆಯ
ಛತ್ರಛಾಯೆಯ ಅನುಭವದ ಮೂಲಕ ವಿಘ್ನ ವಿನಾಶಕನ ಡಿಗ್ರಿಯನ್ನು ತೆಗೆದುಕೊಳ್ಳುವ ಅನುಭವೀ ಮೂರ್ತಿ ಭವ.
ಎಲ್ಲಿ ತಂದೆಯ ಜೊತೆ ಇದೆ,
ಅಲ್ಲಿ ಯಾರೇನೂ ಮಾಡಲು ಸಾಧ್ಯವಿಲ್ಲ. ಈ ಜೊತೆಯ ಅನುಭವವೇ ಛತ್ರಛಾಯೆ ಆಗಿ ಬಿಡುತ್ತದೆ.
ಬಾಪ್ದಾದಾರವರು ಸದಾ ಮಕ್ಕಳ ರಕ್ಷಣೆ ಮಾಡಿಯೇ ಮಾಡುತ್ತಾರೆ. ಪರೀಕ್ಷೆಗಳು ಬರುತ್ತವೆ, ತಾವುಗಳು
ಅನುಭವಿಯಾಗುವುದಕ್ಕಾಗಿ. ಆದ್ದರಿಂದ ಸದಾ ತಿಳಿದುಕೊಳ್ಳಬೇಕು - ಈ ಪರೀಕ್ಷೆಯು ಮುಂದಿನ ಕ್ಲಾಸ್ಗೆ
ಹೋಗುವುದಕ್ಕಾಗಿ ಬರುತ್ತಿದೆ. ಇದರಿಂದಲೇ ಸದಾಕಾಲಕ್ಕಾಗಿ ವಿಘ್ನ ವಿನಾಶಕನ ಡಿಗ್ರಿ ಮತ್ತು ಅನುಭವಿ
ಮೂರ್ತಿಯಾಗುವ ವರದಾನವು ಸಿಕ್ಕಿ ಬಿಡುತ್ತದೆ. ಒಂದುವೇಳೆ ಈಗೇನಾದರೂ ಸ್ವಲ್ಪ ವಿಘ್ನವನ್ನು
ಹಾಕುತ್ತಾರೆಂದರೆ, ನಿಧಾನ-ನಿಧಾನವಾಗಿ ತಣ್ಣಗಾಗಿ ಬಿಡುತ್ತಾರೆ.
ಸ್ಲೋಗನ್:
ಯಾರು ಸಮಯದಲ್ಲಿ
ಸಹಯೋಗಿಯಾಗುತ್ತಾರೆ, ಅವರಿಗೆ ಒಂದಕ್ಕೆ ಪದಮದಷ್ಟು ಫಲ ಸಿಕ್ಕಿ ಬಿಡುತ್ತದೆ.
ಅವ್ಯಕ್ತ ಸೂಚನೆ:- ಈಗ
ಸಂಪನ್ನ ಅಥವಾ ಕರ್ಮಾತೀತರಾಗುವುದರಲ್ಲಿ ತತ್ಪರರಾಗಿರಿ.
ಹೇಗೆ ನೋಡುವುದು,
ಕೇಳುವುದು, ಹೇಳುವುದು – ಈ ವಿಶೇಷ ಕರ್ಮ ಸಹಜ ಅಭ್ಯಾಸದಲ್ಲಿ ಬಂದಿದೆ, ಹಾಗೆಯೇ ಕರ್ಮಾತೀತರಾಗುವ
ಸ್ಟೇಜ್ ಅರ್ಥಾತ್ ಕರ್ಮಗಳನ್ನು ಸಂಕ್ಷಿಪ್ತಗೊಳಿಸುವ ಶಕ್ತಿಯಿಂದ ಕರ್ಮಾತೀತರಾಗಿ ಬಿಡಿ. ಒಂದಾಗಿದೆ
ಕರ್ಮ- ಅಧೀನ ಸ್ಟೇಜ್, ಇನ್ನೊಂದಾಗಿದೆ ಕರ್ಮಾತೀತ ಅರ್ಥಾತ್ ಕರ್ಮ- ಅಧಿಕಾರಿ ಸ್ಟೇಜ್. ಚೆಕ್
ಮಾಡಿಕೊಳ್ಳಿರಿ ನನ್ನ ಕರ್ಮೇಂದ್ರಿಯಜೀತ್, ಸ್ವರಾಜ್ಯಾಧಿಕಾರಿ ರಾಜರ ರಾಜ್ಯ ಕಾರೋಬಾರ್ ಸರಿಯಾಗಿ
ನಡೆಯುತ್ತಿದೆಯೇ?