21.06.25 Morning Kannada Murli Om Shanti
BapDada Madhuban
ಮಧುರ ಮಕ್ಕಳೇ- ನಿಮಗೆ
ಸ್ಮೃತಿ ಬಂದಿದೆ- ನಾವು 84 ಜನ್ಮಗಳ ಚಕ್ರವನ್ನು ಪೂರ್ಣ ಮಾಡಿದೆವು, ಈಗ ನಮ್ಮ ಮನೆಯಾದ
ಶಾಂತಿಧಾಮಕ್ಕೆ ಹೋಗುತ್ತೇವೆ, ಮನೆಗೆ ಹೋಗಲು ಇನ್ನು ಸ್ವಲ್ಪ ಸಮಯವೇ ಉಳಿದಿದೆ”
ಪ್ರಶ್ನೆ:
ಯಾವ ಮಕ್ಕಳಿಗೆ
ಮನೆಗೆ ಹೋಗುವ ಸ್ಮೃತಿಯಿರುವುದೋ ಅವರ ಲಕ್ಷಣಗಳೇನು?
ಉತ್ತರ:
ಅವರು ಈ ಹಳೆಯ
ಪ್ರಪಂಚವನ್ನು ನೋಡಿಯೂ ನೋಡದಂತಿರುತ್ತಾರೆ. ಅವರಿಗೆ ಬೇಹದ್ದಿನ ವೈರಾಗ್ಯವಿರುವುದು.
ಉದ್ಯೋಗ-ವ್ಯವಹಾರಗಳಲ್ಲಿದ್ದರೂ ಅದರಿಂದ ಹಗುರವಾಗಿರುತ್ತಾರೆ. ಅಲ್ಲಿ-ಇಲ್ಲಿ ಅಲ್ಲಸಲ್ಲದ
ಮಾತುಗಳಲ್ಲಿ ತಮ್ಮ ಸಮಯವನ್ನು ಹಾಳುಮಾಡುವುದಿಲ್ಲ. ತಮ್ಮನ್ನು ಈ ಪ್ರಪಂಚದಲ್ಲಿ ಅತಿಥಿಯೆಂದು
ತಿಳಿಯುತ್ತಾರೆ.
ಓಂ ಶಾಂತಿ.
ನಾವು ಸ್ವಲ್ಪ ಸಮಯಕ್ಕಾಗಿ ಈ ಹಳೆಯ ಪ್ರಪಂಚದ ಅತಿಥಿಗಳಾಗಿದ್ದೇವೆಂದು ಕೇವಲ ನೀವು ಸಂಗಮಯುಗಿ
ಬ್ರಾಹ್ಮಣರೇ ತಿಳಿದುಕೊಂಡಿದ್ದೀರಿ. ನಿಮ್ಮ ಸತ್ಯವಾದ ಮನೆಯು ಶಾಂತಿಧಾಮವಾಗಿದೆ. ಅದನ್ನೇ ಮನುಷ್ಯರು
ಮನಸ್ಸಿಗೆ ಶಾಂತಿ ಸಿಗಲೆಂದು ಬಹಳ ನೆನಪು ಮಾಡುತ್ತಾರೆ ಆದರೆ ಮನಸ್ಸು ಎಂದರೇನು? ಶಾಂತಿ ಎಂದರೇನು,
ನಮಗೆ ಎಲ್ಲಿಂದ ಸಿಗುವುದು? ಎಂಬುದೇನನ್ನೂ ತಿಳಿದುಕೊಂಡಿಲ್ಲ. ಈಗ ಮನೆಗೆ ಹೋಗಲು ಇನ್ನು ಸ್ವಲ್ಪವೇ
ಸಮಯವಿದೆ ಎಂಬುದನ್ನು ತಿಳಿದಿದ್ದೀರಿ. ಇಡೀ ಪ್ರಪಂಚದ ಮನುಷ್ಯರೆಲ್ಲರೂ ನಂಬರ್ವಾರ್ ಆಗಿ ಅಲ್ಲಿಗೆ
ಹೋಗುವರು, ಅದು ಶಾಂತಿಧಾಮ ಇದು ದುಃಖಧಾಮವಾಗಿದೆ. ಇದನ್ನು ನೆನಪು ಮಾಡುವುದು ಸಹಜವಲ್ಲವೆ.
ವೃದ್ಧರಾಗಿರಲಿ, ಯುವಕರಾಗಿರಲಿ, ಇದನ್ನು ನೆನಪು ಮಾಡಬಹುದಲ್ಲವೆ. ಇದರಲ್ಲಿ ಇಡೀ ಸೃಷ್ಟಿಯ ಜ್ಞಾನವು
ಬಂದುಬಿಡುತ್ತದೆ. ಸಂಪೂರ್ಣ ಜ್ಞಾನವು ಬುದ್ಧಿಯಲ್ಲಿ ಬರುತ್ತದೆ. ನೀವೀಗ ಸಂಗಮಯುಗದಲ್ಲಿ
ಕುಳಿತಿದ್ದೀರಿ ಅಂದಾಗ ನಾಟಕದನುಸಾರ ನಾವು ಶಾಂತಿಧಾಮಕ್ಕೆ ಹೋಗುತ್ತಿದ್ದೇವೆ ಎಂದು ಬುದ್ಧಿಯಲ್ಲಿದೆ.
ಇದು ಬುದ್ಧಿಯಲ್ಲಿದ್ದರೆ ನಿಮಗೆ ಬಹಳ ಖುಷಿಯಿರುವುದು, ಸ್ಮೃತಿಯಿರುವುದು. ನಮಗೆ ನಮ್ಮ 84 ಜನ್ಮಗಳ
ಸ್ಮೃತಿ ಬಂದಿದೆ, ಈ ಭಕ್ತಿಮಾರ್ಗವೇ ಬೇರೆಯಾಗಿದೆ, ಇದು ಜ್ಞಾನಮಾರ್ಗದ ಮಾತುಗಳಾಗಿವೆ. ತಂದೆಯು
ತಿಳಿಸುತ್ತಿದ್ದಾರೆ- ಮಧುರ ಮಕ್ಕಳೇ, ಈಗ ತಮ್ಮ ಮನೆಯು ನೆನಪಿಗೆ ಬರುತ್ತಿದೆಯೇ? ಎಷ್ಟೊಂದು
ಕೇಳುತ್ತಿರುತ್ತೀರಿ. ಇಲ್ಲಿ ಅನೇಕ ಮಾತುಗಳನ್ನು ಕೇಳುತ್ತೀರಿ, ಇದೊಂದೇ ಆಗಿದೆ- ನಾವೀಗ
ಶಾಂತಿಧಾಮಕ್ಕೆ ಹೋಗುತ್ತೇವೆ ನಂತರ ಸುಖಧಾಮದಲ್ಲಿ ಬರುತ್ತೇವೆ. ತಂದೆಯು ಪಾವನಪ್ರಪಂಚದಲ್ಲಿ
ಕರೆದುಕೊಂಡು ಹೋಗಲು ಬಂದಿದ್ದಾರೆ. ಸುಖಧಾಮದಲ್ಲಿ ಆತ್ಮಗಳು ಸುಖ ಮತ್ತು ಶಾಂತಿಯಲ್ಲಿರುತ್ತಾರೆ.
ಶಾಂತಿಧಾಮದಲ್ಲಿ ಕೇವಲ ಶಾಂತಿಯಿರುವುದು, ಇಲ್ಲಂತೂ ಬಹಳ ಹೊಡೆದಾಟವಿದೆಯಲ್ಲವೆ. ಇಲ್ಲಿ ಮಧುಬನದಿಂದ
ನೀವು ಹೋಗುತ್ತೀರೆಂದರೆ ತಮ್ಮ ಬುದ್ಧಿಯು ಅಲ್ಲಿ-ಇಲ್ಲಿ, ತಮ್ಮ ಉದ್ಯೋಗ-ವ್ಯವಹಾರಗಳ ಕಡೆಯೇ
ಹೋಗುತ್ತಿರುವುದು ಆದರೆ ಮಧುಬನದಲ್ಲಂತೂ ಜಂಜಾಟವಿರುವುದಿಲ್ಲ ಏಕೆಂದರೆ ನಿಮಗೇ ತಿಳಿದಿದೆ-
ನಾವಾತ್ಮಗಳು ಶಾಂತಿಧಾಮದ ನಿವಾಸಿಗಳಾಗಿದ್ದೇವೆ. ತಂದೆಯು ಬಂದು ನೀವು ಮಕ್ಕಳಿಗೇ ಓದಿಸುತ್ತಾರೆ.
ಕೋಟಿಯಲ್ಲಿ ಕೆಲವರೇ ಓದುತ್ತಾರೆ. ಎಲ್ಲರೂ ಓದುವುದಿಲ್ಲ, ನೀವೀಗ ಎಷ್ಟೊಂದು ಬುದ್ಧಿವಂತರಾಗುತ್ತೀರಿ.
ಮೊದಲು ಬುದ್ಧಿಹೀನರಾಗಿದ್ದಿರಿ. ಈಗಂತೂ ನೋಡಿ, ಎಷ್ಟೊಂದು ಜಗಳ-ಕಲಗಳಿವೆ! ಇದಕ್ಕೆ ಏನು ಹೇಳುವುದು?
ನಾವು ಪರಸ್ಪರ ಸಹೋದರರಾಗಿದ್ದೇವೆ ಎಂಬುದನ್ನೂ ಸಹ ಅವರು ಮರೆತುಹೋಗಿದ್ದಾರೆ.
ಸಹೋದರ-ಸಹೋದರರೆಂದಾದರೂ ಕೊಲೆ ಮಾಡುತ್ತಾರೆಯೇ? ಹಾ! ಒಂದುವೇಳೆ ಕೊಲೆ ಮಾಡಿದರೂ ಸಹ ಕೇವಲ
ಆಸ್ತಿಗಾಗಿ. ನಾವೆಲ್ಲರೂ ಒಬ್ಬ ತಂದೆಯ ಮಕ್ಕಳು ಸಹೋದರ-ಸಹೋದರರಾಗಿದ್ದೇವೆ ಎಂದು ನಿಮಗೆ
ಅರ್ಥವಾಗಿದೆ. ನಾವಾತ್ಮಗಳಿಗೆ ತಂದೆಯು ಬಂದು ಓದಿಸುತ್ತಾರೆ. 5000 ವರ್ಷಗಳ ಹಿಂದಿನತರಹ ನಮಗೆ
ಓದಿಸುತ್ತಾರೆಂದು ನೀವೀಗ ಪ್ರತ್ಯಕ್ಷದಲ್ಲಿ ತಿಳಿದುಕೊಳ್ಳುತ್ತೀರಿ. ಏಕೆಂದರೆ ಅವರು
ಜ್ಞಾನಸಾಗರನಾಗಿದ್ದಾರೆ. ಈ ವಿದ್ಯೆಯನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ತಂದೆಯೇ ಸ್ವರ್ಗದ
ರಚಯಿತನಾಗಿದ್ದಾರೆ. ಸೃಷ್ಟಿಯನ್ನು ರಚಿಸುವವರೆಂದೇ ಹೇಳಲಾಗುತ್ತದೆ. ಅಲ್ಲಿ ಮತ್ತ್ಯಾವುದೇ
ಖಂಡವಿರಲಿಲ್ಲ. ಇಲ್ಲಂತೂ ಬಹಳಷ್ಟು ಖಂಡಗಳಿವೆ. ಒಂದುಸಮಯದಲ್ಲಿ ಯಾವಾಗ ಒಂದೇ ಧರ್ಮವಿತ್ತು, ಒಂದೇ
ಖಂಡವಿತ್ತು. ನಂತರದಲ್ಲಿ ಇವೆಲ್ಲಾ ವಿಭಿನ್ನಧರ್ಮಗಳು ಬಂದಿವೆ.
ವಿಭಿನ್ನ ಧರ್ಮಗಳು ಹೇಗೆ
ಬರುತ್ತವೆ ಎಂಬುದು ಈಗ ನಿಮ್ಮ ಬುದ್ಧಿಯಲ್ಲಿ ಕುಳಿತಿದೆ. ಮೊಟ್ಟಮೊದಲನೆಯದು ಆದಿಸನಾತನ
ದೇವಿ-ದೇವತಾಧರ್ಮವಾಗಿದೆ. ಸನಾತನ ಧರ್ಮವೆಂದು ಇಲ್ಲಿ ಹೇಳುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡೇ
ಇಲ್ಲ. ನೀವೆಲ್ಲರೂ ಆದಿಸನಾತನ ದೇವಿ-ದೇವತಾಧರ್ಮದವರಾಗಿದ್ದೀರಿ, ಈಗ ಪತಿತರಾಗಿಬಿಟ್ಟಿದ್ದೀರಿ.
ಸತೋಪ್ರಧಾನರಿಂದ ಸತೋ, ರಜೋ, ತಮೋ ಆಗುತ್ತಾ ಬಂದಿದ್ದೀರಿ. ಆದಿಸನಾತನ
ದೇವಿ-ದೇವತಾಧರ್ಮದವರಾಗಿದ್ದಾಗ, ನಾವು ಬಹಳ ಪವಿತ್ರರಾಗಿದ್ದೆವು ಈಗ ಪತಿತರಾಗಿದ್ದೇವೆಂದು ನಿಮಗೀಗ
ಅರ್ಥವಾಗಿದೆ. ನೀವೇ ತಂದೆಯಿಂದ ಪವಿತ್ರಪ್ರಪಂಚದ ಮಾಲೀಕರಾಗುವ ಆಸ್ತಿಯನ್ನು ಪಡೆದಿದ್ದಿರಿ. ನಾವು
ಮೊಟ್ಟಮೊದಲು ಪವಿತ್ರ ಗೃಹಸ್ಥ ಧರ್ಮದವರಾಗಿದ್ದೆವು, ಈಗ ನಾಟಕದನುಸಾರ ರಾವಣರಾಜ್ಯದಲ್ಲಿ ನಾವು
ಪತಿತ ಪ್ರವೃತ್ತಿಮಾರ್ಗದವರಾಗಿಬಿಟ್ಟಿದ್ದೇವೆ ಎಂಬುದನ್ನೂ ತಿಳಿದುಕೊಂಡುಬಿಟ್ಟಿದ್ದೇವೆ
ಆದ್ದರಿಂದಲೇ ಹೇ ಪತಿತ-ಪಾವನ, ನಮ್ಮನ್ನು ಸುಖಧಾಮದಲ್ಲಿ ಕರೆದುಕೊಂಡು ಹೋಗಿ ಎಂದು ಕರೆಯುತ್ತಾರೆ.
ಇದು ನೆನ್ನೆಯ ಮಾತಾಗಿದೆ. ನೆನ್ನೆಯ ದಿನ ನೀವು ಪವಿತ್ರರಾಗಿದ್ದಿರಿ, ಇಂದು ಅಪವಿತ್ರರಾಗಿರುವ
ಕಾರಣ ತಂದೆಯನ್ನು ಕರೆಯುತ್ತೀರಿ. ಆತ್ಮವು ಪತಿತವಾಗಿಬಿಟ್ಟಿದೆ. ಬಾಬಾ, ಪುನಃ ನಮ್ಮನ್ನು
ಪಾವನರನ್ನಾಗಿ ಮಾಡಿ ಎಂದು ಆತ್ಮವೇ ಕರೆಯುತ್ತದೆ. ಈಗ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಈ ಅಂತಿಮ
ಜನ್ಮದಲ್ಲಿ ಪವಿತ್ರರಾಗಿರಿ, ಇದರಿಂದ ನೀವು ನಂತರ 21 ಜನ್ಮಗಳಕಾಲ ಬಹಳ ಸುಖಿಯಾಗಿರುತ್ತೀರಿ.
ತಂದೆಯು ಬಹಳ ಒಳ್ಳೆಯ ಮಾತುಗಳನ್ನು ತಿಳಿಸುತ್ತಾರೆ. ಕೆಟ್ಟವಸ್ತುಗಳನ್ನು ಬಿಡಿಸುತ್ತಾರೆ. ನೀವು
ದೇವತೆಗಳಾಗಿದ್ದೀರಲ್ಲವೆ, ಈಗ ಪುನಃ ಆಗಬೇಕಾಗಿದೆ ಆದ್ದರಿಂದ ಪವಿತ್ರರಾಗಿ. ಇದು ಎಷ್ಟು ಸಹಜವಲ್ಲವೆ.
ಬಹಳ ದೊಡ್ಡ ಸಂಪಾದನೆಯಿದೆ. ಶಿವತಂದೆಯು ಬಂದಿದ್ದಾರೆ, ಇವರು ಪ್ರತೀ 5000 ವರ್ಷಗಳ ನಂತರ
ಬರುತ್ತಾರೆ ಎಂದು ನೀವು ಮಕ್ಕಳ ಬುದ್ಧಿಯಲ್ಲಿದೆ. ಹಳೆಯ ಪ್ರಪಂಚದಿಂದ ಹೊಸ ಪ್ರಪಂಚವು ಖಂಡಿತ
ಆಗುವುದು. ಈ ಮಾತನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಶಾಸ್ತ್ರಗಳಲ್ಲಿ ಕಲಿಯುಗದ ಆಯಸ್ಸನ್ನು
ಬಹಳ ಧೀರ್ಘ ಮಾಡಿಬಿಟ್ಟಿದ್ದಾರೆ. ಇದೆಲ್ಲವೂ ನಾಟಕದ ಪೂರ್ವನಿಶ್ಚಿತವಾಗಿದೆ.
ನೀವೀಗ ಪಾಪಗಳಿಂದ
ಮುಕ್ತರಾಗುವ ಪುರುಷಾರ್ಥ ಮಾಡುತ್ತೀರಿ ಅಂದಮೇಲೆ ಗಮನವಿರಲಿ- ನಿಮ್ಮಿಂದ ಯಾವುದೇ ಪಾಪವಾಗಬಾರದು.
ದೇಹಾಭಿಮಾನದಲ್ಲಿ ಬರುವುದರಿಂದಲೇ ಅನ್ಯವಿಕಾರಗಳು ಬರುತ್ತವೆ ಅದರಿಂದ ಪಾಪವಾಗುತ್ತದೆ ಆದುದರಿಂದ
ಭೂತಗಳನ್ನು ಓಡಿಸಬೇಕಾಗಿದೆ. ಈ ಹಳೆಯ ಪ್ರಪಂಚದ ಯಾವುದೇ ವಸ್ತುವಿನಲ್ಲಿ ವ್ಯಾಮೋಹವು ಬೇಡ. ಈ ಹಳೆಯ
ಪ್ರಪಂಚದಿಂದ ವೈರಾಗ್ಯವಿರಲಿ. ಭಲೆ ನೋಡುತ್ತೀರಿ, ಹಳೆಯ ಮನೆಯಲ್ಲಿಯೇ ಇದ್ದೀರಿ ಆದರೆ ನಿಮ್ಮ
ಬುದ್ಧಿಯು ಹೊಸ ಪ್ರಪಂಚದೆಡೆಗೆ ಇದೆ. ಹೊಸ ಮನೆಗೆ ಹೋಗುತ್ತಾರೆಂದರೆ ಹೊಸದನ್ನೇ ನೋಡುತ್ತಾರೆ. ಈ
ಹಳೆಯ ಪ್ರಪಂಚವು ಸಮಾಪ್ತಿಯಾಗುವವರೆಗೆ ಕಣ್ಣುಗಳಿಂದ ಹಳೆಯ ಪ್ರಪಂಚವನ್ನು ನೋಡುತ್ತಿದ್ದರೂ ಹೊಸ
ಪ್ರಪಂಚವನ್ನು ನೆನಪು ಮಾಡಬೇಕಾಗಿದೆ. ಪಶ್ಚಾತ್ತಾಪ ಪಡುವಂತಹ ಕೆಲಸವನ್ನು ಮಾಡಬೇಡಿ. ಇಂದು
ಯಾರಿಗಾದರೂ ದುಃಖಕೊಟ್ಟಿರಿ, ಪಾಪ ಮಾಡಿದಿರೆಂದರೆ ಬಾಬಾ ಇದು ಪಾಪವೇ ಎಂದು ತಂದೆಯ ಬಳಿ ಬಂದು
ಕೇಳಬಹುದು. ಅಂದಮೇಲೆ ಇದರಲ್ಲಿ ಗುಟುಕರಿಸುವುದೇಕೆ? ನೀವು ತಂದೆಯೊಂದಿಗೆ ಕೇಳಲಿಲ್ಲವೆಂದರೆ
ಗುಟುಕರಿಸುತ್ತಿರುತ್ತೀರಿ. ತಂದೆಯೊಂದಿಗೆ ತಿಳಿಸಿದಾಗ ತಂದೆಯು ತಕ್ಷಣ ಹಗುರ ಮಾಡಿಬಿಡುತ್ತಾರೆ.
ನೀವು ಬಹಳ ಭಾರಿಯಾಗಿದ್ದೀರಿ, ಪಾಪಗಳ ಹೊರೆಯು ಬಹಳ ಭಾರಿಯಾಗಿದೆ. ಈಗ 21 ಜನ್ಮಗಳಿಗಾಗಿ ಪಾಪಗಳಿಂದ
ಹಗುರರಾಗಿಬಿಡುತ್ತೀರಿ. ಜನ್ಮ-ಜನ್ಮಾಂತರದ ಹೊರೆಯು ತಲೆಯಮೇಲಿದೆ, ಎಷ್ಟು ನೆನಪಿನಲ್ಲಿರುತ್ತೀರೋ
ಅಷ್ಟು ಹಗುರರಾಗಿರುವಿರಿ. ತುಕ್ಕುಬಿಡುತ್ತಾ ಹೋಗುವುದು ಮತ್ತು ಖುಷಿಯು ಹೆಚ್ಚುವುದು.
ಸತ್ಯಯುಗದಲ್ಲಿ ನೀವು ಬಹಳ ಖುಷಿಯಲ್ಲಿದ್ದಿರಿ ನಂತರ ಕಡಿಮೆಯಾಗುತ್ತಾ-ಆಗುತ್ತಾ ನಿಮ್ಮ ಇಡೀ ಖುಷಿಯೇ
ಮಾಯವಾಗುತ್ತಾ ಹೋಗಿದೆ. ಸತ್ಯಯುಗದಿಂದ ಹಿಡಿದು ಈ ಕಲಿಯುಗದವರೆಗಿನ ಈ ಪ್ರಯಾಣದಲ್ಲಿ 5000
ವರ್ಷಗಳಾಯಿತು. ನಾವು ಹೇಗೆ ಸ್ವರ್ಗದಿಂದ ನರಕದಲ್ಲಿ ಬಂದಿದ್ದೇವೆಂಬುದು ಈಗ ಅರ್ಥವಾಗಿದೆ. ಈಗ ನೀವು
ಪುನಃ ನರಕದಿಂದ ಸ್ವರ್ಗದಲ್ಲಿ ಹೋಗುತ್ತೀರಿ. ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ. ತಂದೆಯನ್ನು
ಅರಿತುಕೊಂಡಿರಿ, ತಂದೆಯು ಬಂದಿದ್ದಾರೆಂದಮೇಲೆ ಅವಶ್ಯವಾಗಿ ನಮ್ಮನ್ನು ಸ್ವರ್ಗದಲ್ಲಿ ಕರೆದುಕೊಂಡು
ಹೋಗುತ್ತಾರೆ. ಮಗುವಿನ ಜನ್ಮವಾಯಿತೆಂದರೆ ಇಡೀ ಆಸ್ತಿಗೆ ಮಾಲೀಕನಾಯಿತು. ನೀವೀಗ ತಂದೆಯ
ಮಕ್ಕಳಾಗಿದ್ದೀರಿ ಅಂದಮೇಲೆ ನಶೆಯೇರಬೇಕಲ್ಲವೆ ಆದರೆ ಇಳಿಯುವುದೇಕೆ? ನೀವು ದೊಡ್ಡವರಾಗಿದ್ದೀರಲ್ಲವೆ.
ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರೆಂದಮೇಲೆ ಬೇಹದ್ದಿನ ರಾಜಧಾನಿಯಮೇಲೆ ನಿಮ್ಮ ಹಕ್ಕಿದೆ ಆದ್ದರಿಂದ
ಅತೀಂದ್ರಿಯ ಸುಖವನ್ನು ಕೇಳಬೇಕೆಂದರೆ ಗೋಪಿವಲ್ಲಭನ ಗೋಪ-ಗೋಪಿಕೆಯರಿಂದ ಕೇಳಿ ಎಂಬ ಗಾಯನವಿದೆ.
ವಲ್ಲಭನು ತಂದೆಯಾಗಿದ್ದಾರಲ್ಲವೆ, ಅವರಿಂದ ಕೇಳಿರಿ. ನಂಬರ್ವಾರ್ ಪುರುಷಾರ್ಥದನುಸಾರವೇ ಖುಷಿಯ
ನಶೆಯೇರುವುದು. ಕೆಲವರಂತೂ ಬಹುಬೇಗನೆ ಅನ್ಯರನ್ನು ತಮ್ಮ ಸಮಾನ ಮಾಡಿಕೊಳ್ಳುತ್ತಾರೆ, ಎಲ್ಲವನ್ನೂ
ಮರೆಸಿ ತಮ್ಮ ರಾಜಧಾನಿಯ ನೆನಪು ತರಿಸುವುದೇ ನೀವು ಮಕ್ಕಳ ಕರ್ತವ್ಯವಾಗಿದೆ.
ನೀವಂತೂ ಸ್ವರ್ಗದ
ಮಾಲೀಕರಾಗುತ್ತೀರಿ. ಈಗ ಕಲಿಯುಗ ಹಳೆಯ ಪ್ರಪಂಚವಾಗಿದೆ ನಂತರ ಹೊಸಪ್ರಪಂಚವಾಗುತ್ತದೆ. ಪ್ರತೀ 5000
ವರ್ಷಗಳ ನಂತರ ತಂದೆಯು ಭಾರತದಲ್ಲಿಯೇ ಬರುತ್ತಾರೆ. ಅವರ ಜಯಂತಿಯನ್ನೂ ಆಚರಿಸುತ್ತೀರಿ. ತಂದೆಯು
ಬಂದು ನಮಗೆ ರಾಜಧಾನಿಯನ್ನು ಕೊಟ್ಟುಹೋಗುತ್ತಾರೆ. ನಂತರ ನೆನಪು ಮಾಡುವ ಅವಶ್ಯಕತೆಯೇ ಇರುವುದಿಲ್ಲ.
ನಂತರ ಭಕ್ತಿಯು ಆರಂಭವಾದಾಗ ನೆನಪು ಮಾಡುತ್ತಾರೆ, ಇದು ನಿಮಗೆ ತಿಳಿದಿದೆ. ಆತ್ಮವು ರುಚಿ ನೋಡಿದೆ
ಆದ್ದರಿಂದ ಬಾಬಾ ಪುನಃ ಬಂದು ನಮ್ಮನ್ನು ಶಾಂತಿಧಾಮ, ಸುಖಧಾಮದಲ್ಲಿ ಕರೆದುಕೊಂಡು ಹೋಗಿ ಎಂದು ನೆನಪು
ಮಾಡುತ್ತಾರೆ. ನೀವೀಗ ಮಕ್ಕಳು ತಿಳಿದುಕೊಂಡಿದ್ದೀರಿ- ಅವರು ನಮಗೆ ತಂದೆಯೂ ಆಗಿದ್ದಾರೆ, ಶಿಕ್ಷಕನೂ
ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಚಕ್ರ ಮತ್ತು 84 ಜನ್ಮಗಳ
ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ. ಅನೇಕಬಾರಿ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ ಮತ್ತು
ತೆಗೆದುಕೊಳ್ಳುತ್ತಾ ಇರುತ್ತೀರಿ. ಇದಂತೂ ಅಂತ್ಯವಾಗಲು ಸಾಧ್ಯವಿಲ್ಲ. ನಿಮ್ಮ ಬುದ್ಧಿಯಲ್ಲಿ ಈ
ಚಕ್ರವಿದೆ, ಮತ್ತೆ-ಮತ್ತೆ ಸ್ವದರ್ಶನಚಕ್ರವು ನೆನಪಿಗೆ ಬರಬೇಕು, ಇದೇ ಮನ್ಮನಾಭವ ಆಗಿದೆ.
ತಂದೆಯನ್ನು ಎಷ್ಟು ನೆನಪು ಮಾಡುವಿರೋ ಅಷ್ಟು ಪಾಪಗಳು ಭಸ್ಮವಾಗುವವು.
ಯಾವಾಗ ನೀವು ಕರ್ಮಾತೀತ
ಸ್ಥಿತಿಗೆ ಸಮೀಪ ತಲುಪುವಿರೋ ಆಗ ನಿಮ್ಮಿಂದ ಯಾವುದೇ ವಿಕರ್ಮಗಳಾಗುವುದಿಲ್ಲ. ಈಗ ಸ್ವಲ್ಪ-ಸ್ವಲ್ಪ
ವಿಕರ್ಮಗಳಾಗಿಬಿಡುತ್ತವೆ. ಇನ್ನೂ ಸಂಪೂರ್ಣ ಕರ್ಮಾತೀತ ಸ್ಥಿತಿಯಾಗಿಲ್ಲ. ಇವರೂ (ಬ್ರಹ್ಮಾ) ಸಹ
ನಿಮ್ಮ ಜೊತೆ ವಿದ್ಯಾರ್ಥಿಯಾಗಿದ್ದಾರೆ, ಓದಿಸುವವರು ಶಿವತಂದೆಯಾಗಿದ್ದಾರೆ. ಭಲೆ ಇವರಲ್ಲಿ ಪ್ರವೇಶ
ಮಾಡುತ್ತಾರೆ ಆದರೆ ಇವರೂ ಸಹ ವಿದ್ಯಾರ್ಥಿಯಾಗಿದ್ದಾರೆ. ಇವು ಹೊಸ ಮಾತುಗಳಾಗಿವೆ. ಕೇವಲ ನೀವೀಗ
ತಂದೆಯನ್ನೂ, ಸೃಷ್ಟಿಚಕ್ರವನ್ನೂ ನೆನಪು ಮಾಡಿ. ಅದು ಭಕ್ತಿಮಾರ್ಗ, ಇದು ಜ್ಞಾನಮಾರ್ಗವಾಗಿದೆ.
ರಾತ್ರಿ-ಹಗಲಿನ ಅಂತರವಿದೆ. ಅಲ್ಲಿ ಎಷ್ಟೊಂದು ಗಂಟೆ, ಜಾಗಟೆ ಇತ್ಯಾದಿಗಳನ್ನು ಭಾರಿಸುತ್ತಾರೆ,
ಆದರೆ ಇಲ್ಲಿ ಕೇವಲ ನೆನಪಿನಲ್ಲಿರಬೇಕಷ್ಟೇ. ಆತ್ಮವು ಅಮರನಾಗಿದೆ, ಅಕಾಲ ಸಿಂಹಾಸನವೂ ಇದೆ. ತಂದೆಯೇ
ಅಕಾಲಮೂರ್ತಿ ಎಂದಲ್ಲ. ನೀವೂ ಸಹ ಅಕಾಲಮೂರ್ತಿಗಳಾಗಿದ್ದೀರಿ. ಅಕಾಲಮೂರ್ತಿ ಆತ್ಮನಿಗೆ ಈ ಭೃಕುಟಿಯು
ಸಿಂಹಾಸನವಾಗಿದೆ. ಅವಶ್ಯವಾಗಿ ಭೃಕುಟಿಯಲ್ಲಿಯೇ ಕುಳಿತುಕೊಳ್ಳುತ್ತೀರಿ, ಹೊಟ್ಟೆಯಲ್ಲಿ
ಕುಳಿತುಕೊಳ್ಳುತ್ತೀರೇನು! ನಿಮಗೀಗ ತಿಳಿದಿದೆ- ನಾವು ಅಕಾಲಮೂರ್ತಿ ಆತ್ಮನಿಗೆ ಸಿಂಹಾಸನವೆಲ್ಲಿದೆ.
ಈ ಭೃಕುಟಿಯ ಮಧ್ಯದಲ್ಲಿ ನಮ್ಮ ಸಿಂಹಾಸನವಿದೆ, ಅಮೃತಸರದಲ್ಲಿಯೂ ಅಕಾಲಸಿಂಹಾಸನವಿದೆಯಲ್ಲವೆ.
ಅರ್ಥವೇನನ್ನೂ ತಿಳಿದುಕೊಂಡಿಲ್ಲ. ಅಕಾಲಮೂರ್ತಿಯೆಂದು ಮಹಿಮೆ ಮಾಡುತ್ತಾರೆ, ಅವರ ಅಕಾಲ ಸಿಂಹಾಸನದ
ಬಗ್ಗೆ ಯಾರಿಗೂ ತಿಳಿದಿಲ್ಲ. ನಿಮಗೀಗ ಅರ್ಥವಾಗಿದೆ- ಸಿಂಹಾಸನವು ಇದೇ ಆಗಿದೆ ಯಾವುದರಲ್ಲಿ ತಂದೆಯು
ಕುಳಿತು ತಿಳಿಸುತ್ತಾರೆ. ಅಂದಾಗ ಆತ್ಮವು ಅವಿನಾಶಿ, ಶರೀರವು ವಿನಾಶಿಯಾಗಿದೆ. ಆತ್ಮನಿಗೆ ಇದು
ಅಕಾಲ ಸಿಂಹಾಸನವಾಗಿದೆ. ಇದನ್ನು ಅವರು ಸ್ಥೂಲವಾಗಿ ಸಿಂಹಾಸನ ಮಾಡಿ ಅದಕ್ಕೆ ಹೆಸರಿಟ್ಟಿದ್ದಾರೆ.
ವಾಸ್ತವದಲ್ಲಿ ಅಕಾಲ ಆತ್ಮವು ಇಲ್ಲಿ ಕುಳಿತಿದೆ. ನೀವು ಮಕ್ಕಳ ಬುದ್ಧಿಯಲ್ಲಿ ಅರ್ಥವಿದೆ- ಏಕ
ಓಂಕಾರ್...... ಇದರ ಅರ್ಥವನ್ನೂ ನೀವು ತಿಳಿದುಕೊಂಡಿದ್ದೀರಿ. ಮನುಷ್ಯರು ಮಂದಿರಗಳಲ್ಲಿ ಹೋಗಿ
ಅಚ್ಯುತಂ, ಕೇಶವಂ.......... ಎಂದು ಹಾಡುತ್ತಾರೆ. ಅರ್ಥವೇನೂ ಇಲ್ಲ. ಹಾಗೆಯೇ ಕೇವಲ ಸ್ತುತಿ
ಮಾಡುತ್ತಿರುತ್ತಾರೆ. ಅಚ್ಯುತಂ, ಕೇಶವಂ, ಶ್ರೀರಾಮಾನಾರಾಯಣಂ... ಈಗ ರಾಮನೆಲ್ಲಿ, ಆ ನಾರಾಯಣನೆಲ್ಲಿ!
ಅದೆಲ್ಲವೂ ಭಕ್ತಿಮಾರ್ಗವೆಂದು ತಂದೆಯು ತಿಳಿಸುತ್ತಾರೆ. ಜ್ಞಾನವು ಬಹಳ ಸರಳವಾಗಿದೆ. ಯಾವುದೇ
ಅನ್ಯಮಾತನ್ನು ಕೇಳುವುದಕ್ಕೆ ಮೊದಲು ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ ಆದರೆ ಇದನ್ನು
ಯಾರೂ ಮಾಡುತ್ತಿಲ್ಲ, ಬೇಗನೆ ಮರೆತುಹೋಗುತ್ತಾರೆ. ಮಾಯೆಯು ಈ ರೀತಿ ಮಾಡುತ್ತದೆ, ಭಗವಂತನು ಈ ರೀತಿ
ಮಾಡುತ್ತಾರೆಂದು ಒಂದು ನಾಟಕವೂ ಇದೆ. ನೀವು ತಂದೆಯನ್ನು ನೆನಪು ಮಾಡುತ್ತೀರಿ, ಮಾಯೆಯು ನಿಮ್ಮನ್ನು
ಇನ್ನೂ ಬಿರುಗಾಳಿಗಳಲ್ಲಿ ತೆಗೆದುಕೊಂಡು ಹೋಗುತ್ತದೆ. ಶಕ್ತಿಶಾಲಿಯೊಂದಿಗೆ ಶಕ್ತಿಶಾಲಿಯಾಗಿ ಹೋರಾಡಿ
ಎಂಬುದು ತಂದೆಯ ಆದೇಶವಾಗಿದೆ. ನೀವೆಲ್ಲರೂ ಯುದ್ಧದ ಮೈದಾನದಲ್ಲಿದ್ದೀರಿ, ಇದರಲ್ಲಿ ಯಾವ-ಯಾವ
ಪ್ರಕಾರಾದ ಯೋಧರಿದ್ದಾರೆಂದು ನಿಮಗೆ ತಿಳಿದಿದೆ. ಕೆಲವರು ಬಹಳ ಬಲಹೀನರಾಗಿದ್ದಾರೆ, ಕೆಲವರು
ಮಧ್ಯಮದವರಾಗಿದ್ದಾರೆ. ಇನ್ನೂ ಕೆಲವರು ಬಹಳ ತೀಕ್ಷ್ಣವಾಗಿದ್ದಾರೆ. ಎಲ್ಲರೂ ಮಾಯೆಯೊಂದಿಗೆ ಯುದ್ಧ
ಮಾಡುವವರೇ ಆಗಿದ್ದಾರೆ. ಗುಪ್ತವೇ ಗುಪ್ತವಾಗಿ ಅಂಡರ್ಗ್ರೌಂಡ್ನಲ್ಲಿ ಮಾಡುವ ಯುದ್ಧವು ಇದಾಗಿದೆ.
ವಿಜ್ಞಾನಿಗಳೂ ಸಹ ಅಂಡರ್ಗ್ರೌಂಡ್ ಬಾಂಬುಗಳ ಪ್ರಯೋಗ ಮಾಡುತ್ತಾರೆ. ಇದನ್ನೂ ಸಹ ನೀವು ಮಕ್ಕಳು
ತಿಳಿದುಕೊಂಡಿದ್ದೀರಿ- ತಮ್ಮ ಮೃತ್ಯುವಿಗಾಗಿ ಎಲ್ಲವನ್ನೂ ಮಾಡಿಕೊಳ್ಳುತ್ತಿದ್ದಾರೆ. ನೀವು
ಸಂಪೂರ್ಣ ಶಾಂತಿಯಲ್ಲಿ ಕುಳಿತಿದ್ದೀರಿ. ಅವರದು ವೈಜ್ಞಾನಿಕ ಬಲವಾಗಿದೆ. ಪ್ರಾಕೃತಿಕ ಆಪತ್ತುಗಳು
ಬಹಳಷ್ಟಿವೆ. ಕೃತಕ ಮಳೆಬಿದ್ದು ದವಸ-ಧಾನ್ಯಗಳು ಹೆಚ್ಚಾಗಲೆಂದು ತಿಳಿಯುತ್ತಾರೆ. ಎಷ್ಟೇ
ಮಳೆಬಿದ್ದರೂ ಸಹ ಪ್ರಾಕೃತಿಕ ವಿಕೋಪಗಳಂತೂ ಅವಶ್ಯವಾಗಿ ಆಗುವುದು. ಬೆಂಕಿಯ ಮಳೆ ಬಿದ್ದಾಗ ಏನು
ಮಾಡಲು ಸಾಧ್ಯ. ಇದಕ್ಕೆ ಪ್ರಾಕೃತಿಕ ವಿಕೋಪಗಳೆಂದು ಹೇಳಲಾಗುವುದು. ಸತ್ಯಯುಗದಲ್ಲಿ ಇವೆಲ್ಲವೂ
ಆಗುವುದಿಲ್ಲ. ಇಲ್ಲಿಯೇ ಆಗುತ್ತದೆ. ಇವು ಮತ್ತೆ ವಿನಾಶದ ಸಮಯದಲ್ಲಿ ಸಹಯೋಗ ನೀಡುತ್ತದೆ.
ನಿಮ್ಮ ಬುದ್ಧಿಯಲ್ಲಿದೆ-
ನಾವು ಸತ್ಯಯುಗದಲ್ಲಿ ಇದ್ದಾಗ ಜಮುನಾನದಿಯ ತೀರದಲ್ಲಿ ಚಿನ್ನದ ಮಹಲುಗಳಿರುತ್ತವೆ. ನಾವು ಕೆಲವರೇ
ಅಲ್ಲಿರುತ್ತೇವೆ. ಕಲ್ಪ-ಕಲ್ಪವೂ ಅದೇರೀತಿ ನಡೆಯುತ್ತದೆ. ಮೊದಲು ಕೆಲವರೇ ಇರುತ್ತಾರೆ, ನಂತರ
ವೃಕ್ಷವು ವೃದ್ಧಿಯಾಗುತ್ತದೆ. ಅಲ್ಲಿ ಯಾವುದೇ ಕೊಳಕು ವಸ್ತುಗಳಿರುವುದೇ ಇಲ್ಲ. ಇಲ್ಲಂತೂ ನೋಡಿ,
ಪಕ್ಷಿಗಳೂ ಸಹ ಕೊಳಕು ಮಾಡುತ್ತಿರುತ್ತವೆ. ಅಲ್ಲಿ ಕೊಳಕಿನ ಮಾತೇ ಇಲ್ಲ. ಆಂತರ್ಯದಲ್ಲಿ ಎಷ್ಟೊಂದು
ಖುಷಿಯಿರಬೇಕು. ಮಾಯಾರೂಪಿ ಜಿನ್ ನಿಂದ ಪಾರಾಗಲು ತಂದೆಯು ಹೇಳುತ್ತಾರೆ- ನೀವು ಮಕ್ಕಳು ಈ ಆತ್ಮಿಕ
ಸೇವೆಯಲ್ಲಿ ತೊಡಗಿರಿ. ಮನ್ಮನಾಭವ, ಇದರಲ್ಲಿಯೇ ಜಿನ್ ಆಗಿಬಿಡಿ. ಜಿನ್ ನ ದೃಷ್ಟಾಂತವಿದೆಯಲ್ಲವೆ.
ನನಗೆ ಕೆಲಸ ಕೊಡಿ ಇಲ್ಲದಿದ್ದರೆ ನಾನು ನಿಮ್ಮನ್ನೇ ತಿಂದುಬಿಡುವೆನೆಂದು ಹೇಳಿದನೆಂದು
ತೋರಿಸುತ್ತಾರೆ. ಅಂದಾಗ ತಂದೆಯೂ ಸಹ ಕೆಲಸವನ್ನು ಕೊಡುತ್ತಾರೆ. ಇಲ್ಲದಿದ್ದರೆ ಮಾಯೆಯು
ತಿಂದುಬಿಡುವುದು. ತಂದೆಗೆ ಪೂರ್ಣ ಸಹಯೋಗಿಗಳಾಗಬೇಕಾಗಿದೆ. ತಂದೆಯೊಬ್ಬರೇ ಮಾಡಲು ಸಾಧ್ಯವಿಲ್ಲ.
ತಂದೆಯಂತೂ ರಾಜ್ಯಭಾರವನ್ನೂ ಮಾಡುವುದಿಲ್ಲ. ನೀವೇ ಸರ್ವೀಸ್ ಮಾಡುತ್ತೀರಿ, ರಾಜ್ಯವೂ ನಿಮಗಾಗಿಯೇ
ಇದೆ. ತಂದೆಯು ತಿಳಿಸುತ್ತಾರೆ- ನಾನೂ ಸಹ ಮಗಧದೇಶದಲ್ಲಿ ಬರುತ್ತೇನೆ, ಮಾಯೆಯೂ ಸಹ ದೊಡ್ಡ
ಮೊಸಳೆಯಾಗಿದೆ, ಎಷ್ಟೊಂದು ಮಹಾರಥಿಗಳನ್ನು ನುಂಗಿಬಿಡುತ್ತದೆ. ಇವೆಲ್ಲವೂ ಶತ್ರುಗಳಾಗಿವೆ. ಹೇಗೆ
ಸರ್ಪವು ಕಪ್ಪೆಗೆ ಶತ್ರುವಾಗಿರುತ್ತದೆಯಲ್ಲವೆ. ನಿಮಗೆ ತಿಳಿದಿದೆ- ಅದೇರೀತಿ ನಿಮ್ಮ ಶತ್ರು
ಮಾಯೆಯಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1) ಸ್ವಯಂನ್ನು
ಪಾಪಗಳಿಂದ ಮುಕ್ತರನ್ನಾಗಿ ಮಾಡಿಕೊಳ್ಳುವ ಪುರುಷಾರ್ಥ ಮಾಡಬೇಕು. ದೇಹಾಭಿಮಾನದಲ್ಲೆಂದೂ ಬರಬಾರದು.
ಈ ಹಳೆಯ ಪ್ರಪಂಚದ ಯಾವುದೇ ವಸ್ತುಗಳಲ್ಲಿ ಮೋಹವನ್ನಿಡಬಾರದು.
2) ಮಾಯಾ ರೂಪಿ
ಜಿನ್ನಿಂದ ಪಾರಾಗಲು ಬುದ್ಧಿಯನ್ನು ಆತ್ಮಿಕ ಸೇವೆಯಲ್ಲಿ ಬ್ಯುಸಿಯಾಗಿಟ್ಟುಕೊಳ್ಳಬೇಕಾಗಿದೆ. ತಂದೆಗೆ
ಸಂಪೂರ್ಣ ಸಹಯೋಗಿಗಳಾಗಬೇಕಾಗಿದೆ.
ವರದಾನ:
ಸರ್ವ
ಖಜಾನೆಗಳನ್ನು ಸಮಯದಲ್ಲಿ ಉಪಯೋಗಿಸಿ ನಿರಂತರ ಖುಷಿಯ ಅನುಭವ ಮಾಡುವಂತಹ ಅದೃಷ್ಟಶಾಲಿ ಆತ್ಮ ಭವ
ಬಾಪ್ದಾದಾರವರ ಮುಖಾಂತರ
ಬ್ರಾಹ್ಮಣ ಜನ್ಮವಾದೊಡನೆ ಇಡೀ ದಿನಕ್ಕಾಗಿ ಅನೇಕ ಶ್ರೇಷ್ಟ ಖುಷಿಯ ಖಜಾನೆ ಪ್ರಾಪ್ತಿಯಾಗುವುದು.
ಆದ್ದರಿಂದ ನಿಮ್ಮ ಹೆಸರಲ್ಲಿಯೇ ಇಲ್ಲಿಯವರೆಗೆ ಅನೇಕ ಭಕ್ತರು ಅಲ್ಪಕಾಲದ ಖುಷಿಯಲ್ಲಿ
ಬಂದುಬಿಡುತ್ತಾರೆ, ನಿಮ್ಮ ಜಡ ಚಿತ್ರಗಳನ್ನು ನೋಡಿ ಖುಷಿಯಿಂದ ನಾಟ್ಯವಾಡಲು ತೊಡಗುತ್ತಾರೆ. ಈ ರೀತಿ
ನೀವೆಲ್ಲರೂ ಅದೃಷ್ಟಶಾಲಿಗಳಾಗಿರುವಿರಿ, ಬಹಳ ಖಜಾನೆ ಸಿಕ್ಕಿದೆ ಆದರೆ ಕೇವಲ ಸಮಯದಲ್ಲಿ ಉಪಯೋಗಿಸಿ.
ಬೀಗದ ಕೈಯನ್ನು ಸದಾ ಎದುರಿನಲ್ಲಿಟ್ಟುಕೊಳ್ಳಿ ಅರ್ಥಾತ್ ಸದಾ ಸ್ಮøತಿಯಲ್ಲಿಟ್ಟುಕೊಳ್ಳಿ ಮತ್ತು
ಸ್ಮøತಿಯನ್ನು ಸ್ವರೂಪದಲ್ಲಿ ತನ್ನಿ ಆಗ ನಿರಂತರ ಖುಶಿಯ ಅನುಭವ ಆಗುತ್ತಿರುತ್ತದೆ.
ಸ್ಲೋಗನ್:
ತಂದೆಯ ಶ್ರೇಷ್ಠ
ಆಸೆಗಳದೀಪವನ್ನು ಬೆಳಗಿಸುವಂತಹವರೇ ಕುಲ ದೀಪಕರಾಗಿರುವಿರಿ.
ಅವ್ಯಕ್ತ ಸೂಚನೆಗಳು-
ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ
ಆತ್ಮಿಕ ಸ್ಥಿತಿಯಲ್ಲಿ
ಇದ್ದು ಬಾಹರ್ ಮುಖತೆಯನ್ನು ಬಿಟ್ಟರೆ ಪರಿಶ್ರಮದಿಂದ ಮುಕ್ತರಾಗಿ ಬಿಡುವಿರಿ ಹಾಗೂ ಅನುಭವಗಳ
ಸಾಗರನಲ್ಲಿ ಸಮಾವೇಶವಾಗಿ ಬಿಡುವಿರಿ. ಒಂದೆರಡು ಅನುಭವವಲ್ಲ ಬಹಳಷ್ಟು ಅನುಭವಗಳಿವೆ. ಒಂದೆರಡು
ಅನುಭವ ಮಾಡಿ ಅನುಭವಗಳ ಸರೋವರದಲ್ಲಿ ಸ್ನಾನ ಮಾಡಬೇಡಿ. ಸಾಗರನ ಮಕ್ಕಳು ಅನುಭವಗಳ ಸಾಗರದಲ್ಲಿ
ಸಮಾವೇಶವಾಗಿ ಬಿಡಿ.