22.06.25 Avyakt Bapdada
Kannada
Murli 15.12.2005 Om Shanti Madhuban
“ಹೊಸ ವರ್ಷದಲ್ಲಿ ಸ್ನೇಹ
ಮತ್ತು ಸಹಯೋಗದ ರೂಪರೇಖೆಯನ್ನು ಸ್ಟೇಜಿನ ಮೇಲೆ ತನ್ನಿ, ಪ್ರತಿಯೊಬ್ಬರಿಗೆ ಗುಣ ಹಾಗೂ ಶಕ್ತಿಗಳ
ಗಿಫ್ಟ್ ಕೊಡಿ”
ಇಂದು ಪರಮಾತ್ಮ ತಂದೆ
ತನ್ನ ನಾಲ್ಕಾರೂ ಕಡೆಯ ಪರಮಾತ್ಮ ಪ್ರೀತಿಗೆ ಅಧಿಕಾರಿ ಮಕ್ಕಳನ್ನು ನೋಡುತ್ತಿದ್ದಾರೆ. ಈ
ಪರಮಾತ್ಮಪ್ರೀತಿಯು ವಿಶ್ವದಲ್ಲಿ ಕೋಟಿಯಲ್ಲಿ ಕೆಲವರಿಗೇ ಪ್ರಾಪ್ತಿಯಾಗುತ್ತದೆ. ಈ
ಪರಮಾತ್ಮಪ್ರೀತಿಯು ನಿಸ್ವಾರ್ಥ ಪ್ರೀತಿಯಾಗಿದೆ ಏಕೆಂದರೆ ಒಬ್ಬ ಪರಮಾತ್ಮ ಪಿತನೇ ನಿರಾಕಾರ,
ನಿರಹಂಕಾರಿಯಾಗಿದ್ದಾರೆ. ಮನುಷ್ಯಾತ್ಮರು ಶರೀರಧಾರಿಗಳಾಗಿರುವ ಕಾರಣ ಯಾವುದಾದರೊಂದು ಸ್ವಾರ್ಥದಲ್ಲಿ
ಬಂದುಬಿಡುತ್ತಾರೆ. ಪರಮಾತ್ಮ ತಂದೆಯೇ ತಮ್ಮ ಮಕ್ಕಳಿಗೆ ಇಂತಹ ನಿಸ್ವಾರ್ಥ ಪ್ರೀತಿಯನ್ನು
ಕೊಡುತ್ತಾರೆ. ಪರಮಾತ್ಮ ಪ್ರೀತಿಯು ಬ್ರಾಹ್ಮಣಜೀವನದ ವಿಶೇಷ ಆಧಾರವಾಗಿದೆ. ಬ್ರಾಹ್ಮಣಜೀವನದ
ಜೀವದಾನವಾಗಿದೆ. ಒಂದುವೇಳೆ ಬ್ರಾಹ್ಮಣ ಜೀವನದಲ್ಲಿ ಪರಮಾತ್ಮ ಪ್ರೀತಿಯ ಅನುಭವವು ಕಡಿಮೆಯಿದೆಯೆಂದರೆ
ಪ್ರೀತಿಯ ವಿನಃ ಜೀವನವು ರಮಣೀಕವೆನಿಸುವುದಿಲ್ಲ, ನೀರಸ ಜೀವನವಾಗಿಬಿಡುತ್ತದೆ. ಪರಮಾತ್ಮಪ್ರೀತಿಯೇ
ಜೀವನದಲ್ಲಿ ಸದಾ ಜೊತೆ ಕೊಡುತ್ತದೆ ಮತ್ತು ಜೊತೆಗಾರನಾಗಿ ಸದಾ ಸಹಯೋಗಿಯಾಗಿರುತ್ತದೆ. ಎಲ್ಲಿ
ಪ್ರೀತಿಯಿದೆಯೋ, ಜೊತೆಯಿದೆಯೋ ಅಲ್ಲಿ ಎಲ್ಲವೂ ಬಹಳ ಸಹಜ ಮತ್ತು ಸರಳವಾಗಿಬಿಡುತ್ತದೆ. ಪರಿಶ್ರಮದ
ಅನುಭವವಾಗುವುದಿಲ್ಲ. ಇಂತಹ ಅನುಭವವಿದೆಯಲ್ಲವೆ! ಪರಮಾತ್ಮಪ್ರಿಯರು ಯಾವುದೇ ವ್ಯಕ್ತಿ ಅಥವಾ
ಸಾಧನಗಳ ಆಕರ್ಷಣೆಯಲ್ಲಿ ಬರಲು ಸಾಧ್ಯವಿಲ್ಲ ಏಕೆಂದರೆ ಪರಮಾತ್ಮನ ಆಕರ್ಷಣೆ, ಪರಮಾತ್ಮನ ಪ್ರೀತಿಯು
ಇಂತಹ ಅನುಭವ ಮಾಡಿಸುತ್ತದೆ ಅವರು ಸದಾ ಪ್ರೀತಿಯಕಾರಣ ಲವಲೀನರಾಗಿರುತ್ತಾರೆ. ಇದಕ್ಕೆ ಮನುಷ್ಯರು
ಪರಮಾತ್ಮನಲ್ಲಿ ಲೀನವಾಗುವುದೆಂದು ತಿಳಿದುಕೊಂಡರು. ಪರಮಾತ್ಮನಲ್ಲಿ ಲೀನವಾಗುವುದಿಲ್ಲ ಆದರೆ
ಪರಮಾತ್ಮ ಪ್ರೀತಿಯಲ್ಲಿ ಲವಲೀನರಾಗಿಬಿಡುತ್ತಾರೆ.
ಬಾಪ್ದಾದಾ ನಾಲ್ಕಾರೂ ಕಡೆಯ ಮಕ್ಕಳನ್ನು ನೋಡುತ್ತಾರೆ - ಎಲ್ಲರೂ ಪರಮಾತ್ಮಪ್ರಿಯರಾಗಿದ್ದಾರೆ ಆದರೆ
ಒಂದನೆಯ ಪ್ರಕಾರದವರು - ಲವ್ಲೀ ಮಕ್ಕಳಾಗಿದ್ದಾರೆ, ಇನ್ನೊಂದು ಪ್ರಕಾರದವರು - ಲವಲೀನ ಮಕ್ಕಳು.
ಅಂದಾಗ ತಮ್ಮೊಂದಿಗೆ ತಾವು ಕೇಳಿಕೊಳ್ಳಿ - ಎಲ್ಲರೂ ಲವಲೀ ಮಕ್ಕಳಂತೂ ಆಗಿದ್ದೀರಿ ಆದರೆ
ಎಲ್ಲಿಯವರೆಗೆ ಲವಲೀನರಾಗಿರುತ್ತೀರಿ? ಲವಲೀನ ಮಕ್ಕಳ ಚಿಹ್ನೆಯೇನೆಂದರೆ - ಅವರು ಸದಾ ಪರಮಾತ್ಮನ
ಆಜ್ಞೆಯನುಸಾರ ಸಹಜವಾಗಿ ನಡೆಯುತ್ತಾರೆ. ಆಜ್ಞೆಯನುಸಾರವೂ ಇರುತ್ತಾರೆ ಮತ್ತು ದೇಹಭಾನದಿಂದ
ಬಲಿಹಾರಿಯಾಗಿರುತ್ತಾರೆ ಏಕೆಂದರೆ ಪ್ರೀತಿಯಲ್ಲಿ ಬಲಿಹಾರಿಯಾಗುವುದು ಪರಿಶ್ರಮವೆನಿಸುವುದಿಲ್ಲ.
ಎಲ್ಲದಕ್ಕಿಂತ ಮೊದಲ ಆಜ್ಞೆಯಾಗಿದೆ - “ಯೋಗಿಭವ-ಪವಿತ್ರಭವ” ತಂದೆಗೆ ಮಕ್ಕಳಜೊತೆ
ಪ್ರೀತಿಯಿರುವಕಾರಣ ತಂದೆಗೆ ಮಕ್ಕಳು ಪರಿಶ್ರಮಪಡುವುದನ್ನು ನೋಡಲು ಆಗುವುದಿಲ್ಲ ಏಕೆಂದರೆ ತಂದೆಗೆ
ಗೊತ್ತಿದೆ, ಮಕ್ಕಳು 63 ಜನ್ಮಗಳಂತೂ ಬಹಳ ಪರಿಶ್ರಮಪಟ್ಟಿರಿ, ಈಗ ಈ ಅಲೌಕಿಕ ಜನ್ಮವು ಪರಿಶ್ರಮದಿಂದ
ಮುಕ್ತರಾಗಿ ಅತೀಂದ್ರಿಯ ಸುಖದ ಮೋಜನ್ನು ಆಚರಿಸುವಂತಹ ಜನ್ಮವಾಗಿದೆ. ಅಂದಾಗ
ಮೋಜನ್ನಾಚರಿಸುತ್ತಿದ್ದೀರೋ ಅಥವಾ ಪರಿಶ್ರಮಪಡಬೇಕಾಗುತ್ತದೆಯೋ? ಪ್ರೀತಿಯಲ್ಲಿ ಆಜ್ಞೆಯನುಸಾರ
ನಡೆಯುವುದು ಪರಿಶ್ರಮವೆನಿಸುವುದಿಲ್ಲ. ಒಂದುವೇಳೆ ಪರಿಶ್ರಮಪಡಬೇಕಾಗುತ್ತದೆ ಎಂದರೆ ಅರ್ಥ -
ಪ್ರೀತಿಯ ಪರ್ಸೆಂಟೇಜ್ ಕಡಿಮೆಯಿದೆ. ಎಲ್ಲಾದರೊಂದುಕಡೆ ಪ್ರೀತಿಯಲ್ಲಿ ಯಾವುದಾದರೊಂದು ಲೀಕೇಜ್ (ಸೋರಿಕೆ)
ಇದೆ. ಎರಡು ಮಾತುಗಳ ಲೀಕೇಜ್ ಪರಿಶ್ರಮ ಪಡುವಂತೆ ಮಾಡುತ್ತದೆ - ಒಂದು ಹಳೆಯ ಸಂಸಾರದ (ಪ್ರಪಂಚದ)
ಆಕರ್ಷಣೆ. ಸಂಸಾರದಲ್ಲಿ ಸಂಬಂಧ-ಪದಾರ್ಥ ಎಲ್ಲವೂ ಬಂದುಬಿಡುತ್ತದೆ ಮತ್ತು ಇನ್ನೊಂದಾಗಿದೆ - ಹಳೆಯ
ಸಂಸ್ಕಾರದ ಆಕರ್ಷಣೆ. ಈ ಹಳೆಯ ಸಂಸಾರ ಮತ್ತು ಹಳೆಯ ಸಂಸ್ಕಾರವು ತನ್ನಕಡೆ ಆಕರ್ಷಿಸಿಬಿಡುತ್ತದೆ
ಆದ್ದರಿಂದ ಪರಮಾತ್ಮ ಪ್ರೀತಿಯಲ್ಲಿ ಪರ್ಸೆಂಟೇಜ್ ಆಗಿಬಿಡುತ್ತದೆ. ಪರಿಶೀಲನೆ ಮಾಡಿಕೊಳ್ಳಿ -
ಇವೆರಡೂ ಲೀಕೇಜ್ನಿಂದ ಮುಕ್ತರಾಗಿದ್ದೀರಾ? ನೆನಪು ಮಾಡಿಕೊಳ್ಳಿ - ತಾವಾತ್ಮರ ಅನಾದಿ ಸಂಸ್ಕಾರ
ಮತ್ತು ಆದಿಸಂಸ್ಕಾರವು ಏನಾಗಿತ್ತು ಮತ್ತು ಈಗ ಅಂತ್ಯದ ಬ್ರಾಹ್ಮಣಜೀವನದ ಸಂಸ್ಕಾರವು ಯಾವುದಾಗಿದೆ?
ಅನಾದಿ-ಆದಿ ಮತ್ತು ಅಂತ್ಯದ ಸಂಸ್ಕಾರವು ಶ್ರೇಷ್ಠಸಂಸ್ಕಾರವಾಗಿದೆ. ಈ ಹಳೆಯ ಸಂಸ್ಕಾರವು ಮಧ್ಯಕಾಲದ
ಸಂಸ್ಕಾರವಾಗಿದೆ. ಇದು ಅನಾದಿಯೂ ಅಲ್ಲ, ಆದಿಯೂ ಅಲ್ಲ, ಅಂತಿಮದ ಸಂಸ್ಕಾರವೂ ಅಲ್ಲ. ಆದರೆ ಎಲ್ಲರ
ಲಕ್ಷ್ಯವು ಏನಾಗಿದೆ? ಯಾವುದೇ ಮಕ್ಕಳನ್ನು ಕೇಳಿದರೂ ಸಹ ಒಂದೇ ಉತ್ತರವನ್ನು ಕೊಡುತ್ತಾರೆ - ತಂದೆಯ
ಸಮಾನರಾಗುವ ಲಕ್ಷ್ಯವಿದೆ ಎಂದು. ಲಕ್ಷ್ಯವು ಇದೇ ಆಗಿದೆಯಲ್ಲವೆ ಅಂದಮೇಲೆ ಕೈಯೆತ್ತಿರಿ. ಇದೇ
ಲಕ್ಷ್ಯವಿದೆಯಲ್ಲವೆ? ಅಥವಾ ಮಧ್ಯ-ಮಧ್ಯದಲ್ಲಿ ಬದಲಾಗಿಬಿಡುತ್ತದೆಯೋ?
ಅಂದಾಗ ತಂದೆಯು ಮಕ್ಕಳೊಂದಿಗೆ ಕೇಳುತ್ತಾರೆ - ತಂದೆ ಮತ್ತು ದಾದಾ ಇಬ್ಬರ ಸಮಾನ ಸಂಸ್ಕಾರವು
ಯಾವುದಾಗಿದೆ? ಸದಾ ತಂದೆಯು ಪ್ರತಿಯೊಂದು ಆತ್ಮನ ಪ್ರತಿ ಉಧಾರಚಿತ್ತರಾಗಿದ್ದರು. ಪ್ರತಿಯೊಂದು
ಆತ್ಮನ ಪ್ರತಿ ಸ್ನೇಹ ಮತ್ತು ಸನ್ಮಾನ ಸ್ವರೂಪದಲ್ಲಿ ಸಹಯೋಗಿಯಾಗಿದ್ದರು. ಅದೇರೀತಿ ತಾವು ಸ್ವಯಂ
ತಮ್ಮನ್ನು ಪ್ರತಿಯೊಂದು ಆತ್ಮನಪ್ರತಿ ಸಹಯೋಗಿ ಎಂಬ ಅನುಭವ ಮಾಡುತ್ತೀರಿ. ಸಹಯೋಗವನ್ನು ಕೊಟ್ಟರೆ
ಸಹಯೋಗಿಯಾಗುವೆನು ಎಂದಲ್ಲ. ಸ್ನೇಹ ಕೊಟ್ಟರೆ ಸ್ನೇಹಿಯಾಗುವೆವು ಎಂದಲ್ಲ. ಹೇಗೆ ಬ್ರಹ್ಮಾತಂದೆಯು
ಪ್ರತಿಯೊಬ್ಬ ಮಗುವಿನ ಪ್ರತಿ ಸಹಯೋಗಿಯಾದರು, ಸ್ನೇಹಿಯಾದರು ಹಾಗೆ0iÉುೀ ಸದಾ ಸರ್ವರ ಸ್ನೇಹಿ ಮತ್ತು
ಸಹಯೋಗಿಗಳಾಗಿ. ಇದಕ್ಕೇ ಸಮಾನರಾಗುವುದು ಎಂದು ಹೇಳಲಾಗುತ್ತದೆ. ಒಂದುವೇಳೆ ಯಾವುದೇ ಮಗುವಿಗೆ
ಸಂಸ್ಕಾರ ಪರಿವರ್ತನೆ ಮಾಡಿಕೊಳ್ಳುವುದರಲ್ಲಿ ಪರಿಶ್ರಮಪಡಬೇಕಾಗುತ್ತದೆ ಎಂದರೆ ಅದಕ್ಕೆ ಕಾರಣವೇನು?
ಬ್ರಹ್ಮಾತಂದೆಯು ತಮ್ಮಮೇಲೆ ಗಮನವಿಟ್ಟರು ಆದರೆ ಪರಿಶ್ರಮಪಡಲಿಲ್ಲ. ಸಂಸ್ಕಾರ ಪರಿವರ್ತನೆಯಲ್ಲಿ
ಪರಿಶ್ರಮಕ್ಕೆ ಕಾರಣವಾಗಿದೆ - ಲವಲೀ ಆಗಿದ್ದೀರಿ, ಲವಲೀನರಾಗಿಲ್ಲ.
ಬಾಪ್ದಾದಾರವರಂತೂ ಪ್ರತಿಯೊಬ್ಬ ಮಗುವನ್ನು ಲವಲೀ (ಅತಿಪ್ರಿಯ) ಮಗುವೆಂದು ತಿಳಿಯುತ್ತಾರೆ.
ಗೊತ್ತಿದೆ, ಪ್ರತಿಯೊಬ್ಬ ಮಗುವಿನ ಜನ್ಮಪತ್ರಿಯನ್ನು ತಿಳಿದುಕೊಂಡಿದ್ದಾರೆ ಆದರೂ ಏನು ಹೇಳುತ್ತಾರೆ?
ಲವಲೀ ಮಕ್ಕಳು ಎಂದು. ಬಾಪ್ದಾದಾ ಪ್ರತಿಯೊಬ್ಬ ಮಗುವಿಗೆ ಒಂದೇ ರೀತಿ ಒಂದೇ ಪಾಲನೆ, ಒಂದೇ
ವರದಾನವನ್ನು ಸದಾ ಕೊಡುತ್ತಾರೆ. ಭಲೆ ಅವರು ಕೊನೆಯ ನಂಬರಿನವರೆಂದು ತಿಳಿದಿದ್ದರೂ ಸಹ ಬಾಪ್ದಾದಾ
ಯಾವುದೇ ಮಗುವಿನ ಅವಗುಣ, ನಿರ್ಬಲತೆಯನ್ನು ಸಂಕಲ್ಪದಲ್ಲಿಯೂ ಇಟ್ಟುಕೊಳ್ಳುವುದಿಲ್ಲ. ನನ್ನ
ಮುದ್ದುಮಗುವಾಗಿದ್ದಾರೆ, ಅಗಲಿಹೋಗಿ ಮರಳಿಸಿಕ್ಕಿದ ಮುದ್ದುಮಗುವಾಗಿದ್ದಾರೆ, ಮಧುರಾತಿ ಮಧುರ
ಮಗುವಾಗಿದ್ದಾರೆ...... ಇದೇ ದೃಷ್ಟಿ ಮತ್ತು ವೃತ್ತಿಯಿಂದ ನೋಡುತ್ತಾರೆ ಏಕೆಂದರೆ ಬಾಪ್ದಾದಾರವರಿಗೆ
ಗೊತ್ತಿದೆ, ಇದೇ ವೃತ್ತಿ ಮತ್ತು ಶ್ರೇಷ್ಠದೃಷ್ಟಿಯಿಂದ ನಿರ್ಬಲರೂ ಸಹ ಮಹಾವೀರನಾಗಿಬಿಡುವರು.
ಹಾಗೆಯೇ ತಾವೂ ಸಹ ತಮ್ಮ ಶ್ರೇಷ್ಠವೃತ್ತಿ ಮತ್ತು ಶುಭಭಾವನೆ-ಶುಭಕಾಮನೆಯ ಮೂಲಕ ಯಾರದೇ
ಪರಿವರ್ತನೆಯನ್ನು ಮಾಡಬಲ್ಲಿರಿ. ನಾವು ಪ್ರಕೃತಿಯನ್ನೂ ಸಹ ಪರಿವರ್ತನೆ ಮಾಡಿ ತೋರಿಸುತ್ತೇವೆಂದು
ತಾವು ಚಾಲೆಂಜ್ ಮಾಡಿದ್ದೀರಿ ಅಂದಮೇಲೆ ಆತ್ಮಗಳ ಪರಿವರ್ತನೆ ಮಾಡಲು ಸಾಧ್ಯವಿಲ್ಲವೆ? ನೀವು
ಪ್ರಕೃತಿಜೀತರಾಗುತ್ತೀರಿ ಅಂದಮೇಲೆ ಶ್ರೇಷ್ಠಭಾವನೆಯಿಂದ, ಕಲ್ಯಾಣದ ಭಾವನೆಯಿಂದ ಆತ್ಮನ ಪರಿವರ್ತನೆ
ಮಾಡಲು ಸಾಧ್ಯವಿಲ್ಲವೆ?
ಈಗ ಹೊಸವರ್ಷವು ಆರಂಭವಾಗಲಿದೆಯಲ್ಲವೆ. ಅಂದಾಗ ಹೊಸವರ್ಷದಲ್ಲಿ ಸರ್ವಬೇಹದ್ದಿನ ಸರ್ವಬ್ರಾಹ್ಮಣ
ಪರಿವಾರದ ಮಧ್ಯದಲ್ಲಿ ಪರಸ್ಪರ ಒಬ್ಬರು ಇನ್ನೊಬ್ಬರಪ್ರತಿ ತಮ್ಮ ಶುಭಭಾವನೆ-ಶ್ರೇಷ್ಠಕಾಮನೆಯ ಮೂಲಕ
ಒಬ್ಬರು ಇನ್ನೊಬ್ಬರ ಪರಿವರ್ತನೆ ಮಾಡುವುದರಲ್ಲಿ ಸಹಯೋಗಿಗಳಾಗಿ. ಭಲೆ ನಿರ್ಬಲರಾಗಿರಬಹುದು, ಇವರ
ಸಂಸ್ಕಾರದಲ್ಲಿ ಈ ನಿರ್ಬಲತೆಯಿದೆ ಎಂಬುದು ನಿಮಗೆ ತಿಳಿದಿದೆ ಆದರೂ ಸಹ ತಾವು ಸ್ನೇಹ ಮತ್ತು
ಸಹಯೋಗದ ಶಕ್ತಿಯಿಂದ ಸಹಯೋಗಿಗಳಾಗಿ. ಒಬ್ಬರು ಇನ್ನೊಬ್ಬರಿಗೆ ಸಹಯೋಗದ ಹಸ್ತವನ್ನು ನೀಡಿ. ಈ
ಸಹಯೋಗದ ಹಸ್ತವನ್ನು ಸೇರಿಸುವ ದೃಶ್ಯವು ಈ ರೀತಿಯಾಗಿಬಿಡುತ್ತದೆ - ಹೇಗೆ ಕೈಯಲ್ಲಿ ಸ್ನೇಹದ
ಕೈಯನ್ನು ಕೊಡುವುದು, ಸಹಯೋಗದ ಕೈಯನ್ನು ಜೋಡಿಸುವುದು ಮಾಲೆಯಾಗಿಬಿಡಲಿ. ಶಿಕ್ಷಣ ಕೊಡಬೇಡಿ,
ಸ್ನೇಹದಿಂದ ಕೂಡಿದ ಸಹಯೋಗ ನೀಡಿ. ಅವರಿಂದ ಬೇರೆಯಾಗಬೇಡಿ, ಅಲಿಪ್ತರಾಗಬೇಡಿ, ಆಸರೆಯಾಗಿ ಏಕೆಂದರೆ
ವಿಜಯಮಾಲೆಯು ತಮ್ಮ ನೆನಪಾರ್ಥವಾಗಿದೆ. ಪ್ರತಿಯೊಂದು ಮಣಿಯು ಇನ್ನೊಂದು ಮಣಿಗೆ ಜೊತೆಗಾರ,
ಸಹಯೋಗಿಯಾಗಿದೆ ಆದ್ದರಿಂದಲೇ ಮಾಲೆಯ ಚಿತ್ರವೂ ಮಾಡಲ್ಪಟ್ಟಿದೆ.
ಅಂದಾಗ ಎಲ್ಲರೂ ಬಾಪ್ದಾದಾರವರೊಂದಿಗೆ ಕೇಳುತ್ತಾರೆ – ಹೊಸ ವರ್ಷದಲ್ಲಿ ಏನು ಮಾಡಬೇಕು? ಎಂದು.
ಸಂದೇಶ ಕೊಡುವ ಕಾರ್ಯವನ್ನಂತೂ ಬಹಳ ಮಾಡಿದಿರಿ, ಮಾಡುತ್ತಿದ್ದೀರಿ, ಮಾಡುತ್ತಾ ಇರುತ್ತೀರಿ. ಈಗ
ಸಂದೇಶವಾಹಕರ ಸಹಯೋಗ ಮತ್ತು ಸ್ನೇಹದ ರೂಪರೇಖೆಯನ್ನು ಸ್ಟೇಜಿನ ಮೇಲೆ ತನ್ನಿ. ಮಹಾದಾನಿಗಳಾಗಿ ತಮ್ಮ
ಗುಣಗಳ ಸಹಯೋಗಿಯಾಗಿ ಮತ್ತು ಸಹಯೋಗಿಗಳನ್ನಾಗಿ ಮಾಡಿ. ಹಾಗೆಯೇ ತಮ್ಮ ಗುಣಗಳು ವಾಸ್ತವದಲ್ಲಿ ಇವು
ಪರಮಾತ್ಮನ ಗುಣಗಳಾಗಿವೆ ಆದರೆ ಯಾವ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದೀರೋ ಆ ಗುಣಗಳ
ಶಕ್ತಿಯಿಂದ ಅವರ ನಿರ್ಬಲತೆಯನ್ನೂ ದೂರ ಮಾಡಿ - ಇದನ್ನು ಮಾಡಬಲ್ಲಿರಾ? ಮಾಡಲು ಸಾಧ್ಯವೇ? ಅಥವಾ
ಕಷ್ಟವೆ? ಟೀಚರ್ಸ್ ಹೇಳಿರಿ - ಮಾಡಬಲ್ಲಿರಾ? ಮಾಡಬಲ್ಲಿರಾ ಅಥವಾ ಮಾಡಲೇಬೇಕಾಗಿದೆಯೋ?
ಮಾಡಲೇಬೇಕಲ್ಲವೆ? ಯಾವುದೇ ನಿರ್ಬಲತೆಯಿರಬಾರದು ಏಕೆಂದರೆ ತಾವು ಕೋಟಿಯಲ್ಲಿ ಕೆಲವರಲ್ಲವೆ. ಭಲೆ
ಕೊನೆಯ ಮಣಿಯಾಗಿರಬಹುದು ಆದರೆ ಕೋಟಿಯಲ್ಲಿ ಕೆಲವರಾದ ಆತ್ಮನಲ್ಲವೆ. ತಮ್ಮ ಬಿರುದಾಗಿದೆ - ಮಾ||
ಸರ್ವಶಕ್ತಿವಂತರು ಅಂದಾಗ ಸರ್ವಶಕ್ತಿವಂತರ ಕರ್ತವ್ಯವೇನಾಗಿದೆ? ಶಕ್ತಿಯ ಲೇವಾದೇವಿ (ವ್ಯವಹಾರ)
ಮಾಡುವುದು ತಂದೆಯ ಮೂಲಕ ಸಿಕ್ಕಿರುವ ಗುಣಗಳನ್ನು ಪರಸ್ಪರ ಲೇವಾದೇವಿ ಮಾಡಿ. ಇದೇ ಸಹಯೋಗದ ಗಿಫ್ಟ್
ನ್ನು ಒಬ್ಬರು ಇನ್ನೊಬ್ಬರಿಗೆ ಕೊಡಿ. ಹೊಸ ವರ್ಷದಲ್ಲಿ ಒಬ್ಬರು ಇನ್ನೊಬ್ಬರಿಗೆ ಗಿಫ್ಟ್
ಕೊಡುತ್ತೀರಲ್ಲವೆ. ಅಂದಾಗ ಈ ವರ್ಷದಲ್ಲಿ ಪರಸ್ಪರ ಗುಣಗಳ ಗಿಫ್ಟ್ ಕೊಡಿ. ಒಂದುವೇಳೆ ಕಲ್ಯಾಣದ
ಭಾವನೆಯನ್ನು ಇಡುತ್ತೀರೆಂದರೆ ಹೇಗೆ ಭಾಷಣ ಮಾಡಿ ವಾಣಿಯ ಮೂಲಕ ಸಂದೇಶ ಕೊಡುತ್ತೀರಲ್ಲವೆ.
ಹಾಗೆ0iÉುೀ ತಮ್ಮ ಕಲ್ಯಾಣದ ಭಾವನೆಯ ಮೂಲಕ, ಕಲ್ಯಾಣದ ವೃತ್ತಿಯ ಮೂಲಕ, ಕಲ್ಯಾಣದ ವಾಯುಮಂಡಲದ ಮೂಲಕ
ಈ ಗುಣಗಳ ಗಿಫ್ಟ್ ಕೊಡಿ. ಶಕ್ತಿಗಳ, ಗುಣಗಳ ಗಿಫ್ಟ್ ಕೊಡಿ. ನಿರ್ಬಲರಿಗೆ ಸಹಯೋಗ ನೀಡುವುದು - ಇದು
ಸಮಯದಲ್ಲಿ ಗಿಫ್ಟ್ ಕೊಡುವುದಾಗಿದೆ. ಬಿದ್ದಿರುವವರನ್ನು ಬೀಳಿಸಬೇಡಿ, ಮೇಲೆತ್ತಿರಿ,
ಎದ್ದುನಿಲ್ಲಿಸಿ. ಇವರು ಹೀಗಿದ್ದಾರೆ, ಇವರು ಹೀಗಿದ್ದಾರೆ..... ಎಂದಲ್ಲ. ಇವರು ಪ್ರಭುವಿನ
ಪ್ರೀತಿಗೆ ಪಾತ್ರರಾಗಿದ್ದಾರೆ, ಕೋಟಿಯಲ್ಲಿ ಕೆಲವರಾದ ಆತ್ಮನಾಗಿದ್ದಾರೆ, ವಿಶೇಷ ಆತ್ಮನಾಗಿದ್ದಾರೆ,
ವಿಜಯಿಗಳಾಗುವಂತಹ ಆತ್ಮನಾಗಿದ್ದಾರೆ - ಈ ದೃಷ್ಟಿಯನ್ನಿಡಿ. ಈಗ ವೃತ್ತಿ-ದೃಷ್ಟಿ, ವಾಯುಮಂಡಲವನ್ನು
ಪರಿವರ್ತನೆ ಮಾಡಿ. ಏನಾದರೂ ನವೀನತೆ ಮಾಡಬೇಕಲ್ಲವೆ. ನಿರ್ಬಲತೆಯನ್ನು ನೋಡುತ್ತಿದ್ದರೂ ನೋಡದಂತಿರಿ,
ಉಮ್ಮಂಗ ನೀಡಿ, ಸಹಯೋಗ ಕೊಡಿ. ಇಂತಹ ಬ್ರಾಹ್ಮಣ ಸಂಘಟನೆಯನ್ನು ತಯಾರು ಮಾಡಿ ಆಗ ಬಾಪ್ದಾದಾ ವಿಜಯದ
ಚಪ್ಪಾಳೆ ತಟ್ಟುವರು. ತಾವೂ ಸಹ ಪದೇ-ಪದೇ ಚಪ್ಪಾಳೆ ತಟ್ಟುತ್ತೀರಲ್ಲವೆ. ಬಾಪ್ದಾದಾ ಶುಭಾಷಯಗಳು,
ಆಶೀರ್ವಾದಗಳು, ವಂದನೆಗಳು ಇದರ ಚಪ್ಪಾಳೆಯನ್ನು ತಟ್ಟುವರು. ತಾವೂ ಸಹ ಜೊತೆಯಲ್ಲಿ ಚಪ್ಪಾಳೆಯನ್ನು
ತಟ್ಟುತ್ತೀರಲ್ಲವೆ. ಈಗ ಚಪ್ಪಾಳೆ ತಟ್ಟಿದ್ದೀರಿ ಅಂದಾಗ ಎಷ್ಟು ಚೆನ್ನಾಗಿತ್ತು! ಆದರೆ
ವಿಶ್ವದಮುಂದೆ ಚಪ್ಪಾಳೆಯನ್ನು ತಟ್ಟಬೇಕು ಅರ್ಥಾತ್ ಎಲ್ಲರ ಮುಖದಿಂದ ಇದೇ ಕೂಗು ಹೊರಡಲಿ - ನಮ್ಮ
ಇಷ್ಟದೇವತೆಯು ಬಂದುಬಿಟ್ಟರು, ನಮ್ಮ ಪೂಜ್ಯರು ಬಂದುಬಿಟ್ಟರು. ಲಕ್ಷ್ಯವಂತೂ ಪಕ್ಕಾ ಇದೆಯಲ್ಲವೆ.
ಮಾಡಲೇಬೇಕೆಂದು ಲಕ್ಷ್ಯವು ಪಕ್ಕಾ ಇದೆಯೇ? ಅಥವಾ ನೋಡೋಣ, ಪ್ಲಾನ್ ಮಾಡೋಣ ಎನ್ನುತ್ತೀರಾ!
ಮಾಡಲೇಬೇಕಾಗಿದೆ. ಪ್ಲಾನ್ ಅಲ್ಲ, ಮಾಡಲೇಬೇಕು. ಈಗ ಎಲ್ಲರೂ ಕಾಯುತ್ತಿದ್ದಾರೆ, ಈಗ ಅವರ
ಕಾಯುವಿಕೆಯನ್ನು ಸಮಾಪ್ತಿ ಮಾಡಿ, ಪ್ರತ್ಯಕ್ಷವಾಗುವ ಸಿದ್ಧತೆ ಮಾಡಿಕೊಳ್ಳಿ. ನೋಡಿ, ಈಗ ಪ್ರಕೃತಿಯೂ
ಸಹ ಎಷ್ಟೊಂದು ಬೇಸರವಾಗಿದೆ ಅಂದಾಗ ಪ್ರಕೃತಿಯನ್ನೂ ಸಹ ಶಾಂತಗೊಳಿಸಿ. ತಾವು
ಪ್ರತ್ಯಕ್ಷವಾಗುತ್ತೀರೆಂದರೆ ವಿಶ್ವಶಾಂತಿಯು ಸ್ವತಹ ಆಗಿಬಿಡುವುದು. ಒಳ್ಳೆಯದು.
ಈಗಿನ ವಿಶ್ವದಲ್ಲಿ ವಿಶೇಷವಾಗಿ ಎರಡು ಮಾತುಗಳು ನಡೆಯುತ್ತವೆ. ಒಂದು ವ್ಯಾಯಾಮ ಇನ್ನೊಂದು ಭೋಜನದ
ಮೇಲೆ ಗಮನ. ಅಂದಾಗ ತಾವೂ ಸಹ ಈ ಎರಡೂ ಮಾತುಗಳನ್ನು ಮಾಡುತ್ತೀರಾ? ತಮ್ಮ ವ್ಯಾಯಾಮ ಯಾವುದಾಗಿದೆ?
ಶಾರೀರಿಕ ವ್ಯಾಯಾಮವನ್ನಂತೂ ಎಲ್ಲರೂ ಮಾಡುತ್ತಾರೆ, ಮನಸ್ಸಿನ ವ್ಯಾಯಾಮ ಈಗೀಗ ಬ್ರಾಹ್ಮಣ,
ಬ್ರಾಹ್ಮಣರಿಂದ ಫರಿಶ್ತಾ ಮತ್ತು ಫರಿಶ್ತೆಯಿಂದ ದೇವತಾ. ಈ ಮನಸ್ಸಿನ ವ್ಯಾಯಾಮದ ಅಭ್ಯಾಸವನ್ನು ಸದಾ
ಮಾಡುತ್ತಾ ಇರಿ ಮತ್ತು ಶುದ್ಧಭೋಜನವು ಮನಸ್ಸಿನ ಶುದ್ಧ ಸಂಕಲ್ಪಗಳು. ಒಂದುವೇಳೆ ವ್ಯರ್ಥ ಸಂಕಲ್ಪ,
ನಕಾರಾತ್ಮಕ ಸಂಕಲ್ಪಗಳು ನಡೆಯುತ್ತವೆಯೆಂದರೆ ಇವು ಮನಸ್ಸಿನ ಅಶುದ್ಧ ಭೋಜನವಾಗಿದೆ ಅಂದಾಗ
ಮನಸ್ಸಿನಲ್ಲಿ ಸದಾ ಶುದ್ಧಸಂಕಲ್ಪವಿರಲಿ. ಇವೆರಡನ್ನೂ ಮಾಡಲು ಬರುತ್ತದೆಯಲ್ಲವೆ. ಎಷ್ಟು ಸಮಯ ಬೇಕೋ
ಅಷ್ಟು ಸಮಯ ಶುದ್ಧಸಂಕಲ್ಪ ಸ್ವರೂಪರಾಗಿಬಿಡಿ. ಒಳ್ಳೆಯದು.
ನಾಲ್ಕಾರೂ ಕಡೆಯ ಪರಮಾತ್ಮ ಪ್ರೀತಿಗೆ ಅಧಿಕಾರಿ ವಿಶೇಷ ಆತ್ಮಗಳಿಗೆ, ಸದಾ ಒಬ್ಬರು ಇನ್ನೊಬ್ಬರ
ಸಹಯೋಗಿಗಳಾಗುವಂತಹ ತಂದೆಯ ಸ್ನೇಹಿ ಮತ್ತು ಸಹಯೋಗಿ ಆತ್ಮರಿಗೆ, ಸದಾ ವಿಜಯಿಗಳಾಗಿದ್ದೇವೆ ಮತ್ತು
ವಿಶ್ವದಲ್ಲಿ ವಿಜಯದ ಧ್ವಜವನ್ನು ಹಾರಿಸಬೇಕಾಗಿದೆ - ಈ ಲಕ್ಷ್ಯವನ್ನು ಪ್ರತ್ಯಕ್ಷದಲ್ಲಿ ತರುವಂತಹ
ವಿಜಯೀ ಮಕ್ಕಳಿಗೆ, ಸದಾ ಈ ಹಳೆಯ ಸಂಸ್ಕಾರ ಮತ್ತು ಸಂಸಾರದ ಆಕರ್ಷಣೆಯಿಂದ ದೂರವಿರುವಂತಹ ತಂದೆಯ
ಸಮಾನ ಮಕ್ಕಳಿಗೆ ಹೃದಯರಾಮ ತಂದೆಯ ಹೃದಯಪೂರ್ವಕ ನೆನಪು, ಪ್ರೀತಿ ಹಾಗೂ ನಮಸ್ತೆ.
ದಾದೀಜಿಯವರೊಂದಿಗೆ:- ಬಹಳ ಚೆನ್ನಾಗಿ ಪಾತ್ರವನ್ನಭಿನಯಿಸುತ್ತಿದ್ದೀರಿ. ತಮ್ಮನ್ನು ನೋಡಿ ಎಲ್ಲರಿಗೆ
ಫರಿಶ್ತಾಜೀವನವು ನೆನಪು ಬರುತ್ತದೆ. ಭಿನ್ನ ಮತ್ತು ಪ್ರಿಯ.
ಗುಜರಾತಿನ ಮುಖ್ಯ 13 ಮಂದಿ ಸಹೋದರಿಯವರೊಂದಿಗೆ:- ಒಳ್ಳೊಳ್ಳೆಯ ಮಹಾವೀರರಿದ್ದೀರಿ, ಮಹಾವೀರರ
ಕೆಲಸವಾಗಿದೆ - ವಿಜಯಿಗಳಾಗಿ ವಿಜಯಿಗಳನ್ನಾಗಿ ಮಾಡುವುದು ಅಂದಾಗ ಎಲ್ಲರೂ ಒಳ್ಳೆಯ ಸೇವೆ
ಮಾಡುತ್ತಿದ್ದೀರಿ ಮತ್ತು ಮುಂದೆಯೂ ಸೇವೆಯಾಗುತ್ತಾ ಇರುವುದು. ಬಾಪ್ದಾದಾರವರಿಗೆ ಮಕ್ಕಳ
ಉಮ್ಮಂಗ-ಉತ್ಸಾಹವನ್ನು ನೋಡಿ ಖುಷಿಯಾಗುತ್ತದೆ. ಬಾಪ್ದಾದಾರವರಿಗೂ ಸಹ ಎಲ್ಲಾ ಮಕ್ಕಳು ಆಶಾದೀಪಗಳಂತೆ
ಕಾಣುತ್ತಿದ್ದೀರಿ. ಒಳ್ಳೆಯದು- ಸಂಘಟನೆಯು ಚೆನ್ನಾಗಿದೆ. ಒಬ್ಬೊಬ್ಬರ ವಿಶೇಷತೆಯಿದೆ. ಖುಷಿಯನ್ನು
ಖುಷಿಯಿಂದ ಹಂಚುವವರು. (ಸರಳ ದೀದಿಯವರು ಕೇಳುತ್ತಿದ್ದಾರೆ, ದಾದೀಜಿಯವರು ಮಾಲೆಯಲ್ಲಿ ಯಾರನ್ನು
ಇಟ್ಟಿದ್ದಾರೆ) ತಾವೇನು ತಿಳಿಯುತ್ತೀರಿ? ನಾವಂತೂ ಇರುತ್ತೇವೆ ಅಲ್ಲವೆ, ಎಂದು ತಿಳಿಯುತ್ತೀರಾ?
ಒಬ್ಬರು ಇನ್ನೊಬ್ಬರಿಗೆ ಸಹಾಯ ಕೊಡಿ ಆಗ ಮತ್ತೇನೆಲ್ಲವೂ ಇದೆಯೋ ಅದು ಸಮಾಪ್ತಿಯಾಗುವುದು. ಎಲ್ಲರೂ
ತಂದೆಯ ಸಮಾನರಾಗುವವರೇ ಆಗಿದ್ದೀರಿ. (ಏನು ನವೀನತೆ ಮಾಡುವುದು?) ತಿಳಿಸಿದೆವಲ್ಲವೆ - ಒಂದೊಂದು
ಸೇವಾಕೇಂದ್ರದವರು ಕೊನೆಪಕ್ಷ ಒಬ್ಬ ವಾರಸುಧಾರರನ್ನು ತಯಾರು ಮಾಡಿ. ಈ ವರ್ಷ ಅವರನ್ನು ಕರೆತನ್ನಿ.
21 ಮಂದಿ ವಾರಸುಧಾರರನ್ನು ಕರೆದುಕೊಂಡು ಬನ್ನಿ. ಈಗ ಆರಂಭಿಸಿ. ಮೊದಲ ನಂಬರಿನಲ್ಲಿ ಬನ್ನಿ. ಹೌದು
ಎನ್ನುತ್ತಿದ್ದಾರೆ. ವಾರಸುಧಾರನ ಕ್ವಾಲಿಫಿಕೇಷನ್ (ಅರ್ಹತೆ) ತಿಳಿದುಕೊಂಡಿದ್ದೀರಲ್ಲವೆ.
ಇವರೆಲ್ಲರನ್ನೂ ತಂದೆಯವರನ್ನಾಗಿ0iÉುೀ ಮಾಡುತ್ತೀರಲ್ಲವೆ, ತನ್ನವರನ್ನಾಗಿ ಅಲ್ಲ. ಒಳ್ಳೆಯದು.
ಗುಜರಾತಿನದೇ ಸೇವೆಯಾಗಿದೆ, ಗುಜರಾತಿನವರೇ ಮಿಲನ ಮಾಡಲು ಬಂದಿದ್ದಾರೆ:- ಗುಜರಾತಿನವರು ಯಾರೆಲ್ಲರೂ
ಇದ್ದೀರೋ, ಬಂದಿದ್ದೀರೋ ಅಥವಾ ಸೇವೆಗಾಗಿ ಬಂದಿದ್ದೀರೋ ಎಲ್ಲರೂ ಕೈ0iÉುತ್ತಿರಿ. ಬಹಳಮಂದಿ ಇದ್ದಾರೆ.
ಬಹಳ ಒಳ್ಳೆಯದು- ಒಳ್ಳೆಯ ಅವಕಾಶವನ್ನು ತೆಗೆದುಕೊಂಡಿದ್ದೀರಿ. ಬಾಪ್ದಾದಾ ಗುಜರಾತಿಗೆ ಹೇಳುತ್ತಾರೆ
- ಸಿಂಧಿಭಾಷೆಯಲ್ಲಿ ಒಂದು ಗಾದೆಯಿದೆ - ಜೋ ಚುಲ್ ಪರ್ ಹೈ, ವೊ ದಿಲ್ ಪರ್ ಹೈ (ಯಾರು ಸಮೀಪವಿರುವರೋ
ಅವರು ಹೃದಯದಲ್ಲಿರುವರು) ಅಂದಾಗ ಎಲ್ಲದಕ್ಕಿಂತ ಸಮೀಪಕ್ಕಿಂತ ಸಮೀಪ ಗುಜರಾತ್ ಇದೆ. ಯಾರು ಸಮೀಪ
ಇರುತ್ತಾರೆಯೋ ಅವರಿಗೆ ಬಹಳ ಕೊನೆಯಲ್ಲಿದ್ದಾರೆ ಅಂದರೆ ಕರೆದತಕ್ಷಣ ಬಂದುಬಿಡುವರು ಎಂದು
ಹೇಳುತ್ತಾರೆ ಅಂದಾಗ ಗುಜರಾತಿನವರು ಈ ರೀತಿ ಎವರೆಡಿಯಿದ್ದೀರಲ್ಲವೆ. ಯಾವಾಗ ಕರೆದರೂ ಸಹ
ಬಂದುಬಿಡುತ್ತೀರಿ. ಬರುತ್ತೀರಲ್ಲವೆ? ಪರಿವಾರವನ್ನು ನೋಡುತ್ತೀರೋ ಅಥವಾ ಬಂದುಬಿಡುತ್ತೀರೋ?
ಎವರೆಡಿಯಾಗಿದ್ದೀರಿ. ಒಳ್ಳೆಯದು. ಸಾಕಾರ ಬ್ರಹ್ಮಾತಂದೆಯ ಪ್ರೇರಣೆಯಿಂದ ಗುಜರಾತ್ ಸ್ಥಾಪನೆಯಾಗಿದೆ.
ಗುಜರಾತಿನವರು ಗುಜರಾತಿಗೆ ನಿಮಂತ್ರಣ ಕೊಡಲಿಲ್ಲ. ಬ್ರಹ್ಮಾತಂದೆಯೇ ಗುಜರಾತಿನಲ್ಲಿ ಸೇವೆ
ಮಾಡಿದ್ದಾರೆ ಅಂದಾಗ ಗುಜರಾತಿನ ಮೇಲೆ ವಿಶೇಷವಾಗಿ ಬ್ರಹ್ಮಾತಂದೆಯ ದೃಷ್ಟಿಯು ಬಿದ್ದಿದೆ ಮತ್ತು
ಗುಜರಾತಿನವರು ಪುರುಷಾರ್ಥವನ್ನೂ ಮಾಡಿದ್ದೀರಿ. ಸೇವಾಕೇಂದ್ರಗಳನ್ನು ತೆರೆದಿದ್ದೀರಿ. ಎಷ್ಟು
ಸೇವಾಕೇಂದ್ರಗಳಿವೆ - 300 ಸೇವಾಕೇಂದ್ರಗಳು, ಉಪಸೇವಾಕೇಂದ್ರಗಳಿವೆ. ಮತ್ತು 3000 ಗೀತಾಪಾಠಶಾಲೆಗಳು
ಇವೆ. ಒಳ್ಳೆಯದು. ಎಲ್ಲದಕ್ಕಿಂತ ಹೆಚ್ಚು ಸೇವಾಕೇಂದ್ರಗಳು ಯಾವ ಜೋನ್ದಾಗಿದೆ? (ಬಾಂಬೆ-ಮಹಾರಾಷ್ಟ್ರ)
ಒಳ್ಳೆಯದು. ಮಹಾರಾಷ್ಟ್ರದವರು ಬಂದಿದ್ದೀರಾ? (ಇಂದು ಬಂದಿಲ್ಲ) ಎಲ್ಲದಕ್ಕಿಂತ ಹೆಚ್ಚು
ಸೇವಾಕೇಂದ್ರಗಳು ಮಹಾರಾಷ್ಟ್ರದ್ದಾಗಿದೆ. ಗುಜರಾತಿನವರು ಸೇವೆಯನ್ನಂತೂ ಚೆನ್ನಾಗಿ ಮಾಡುತ್ತಿದ್ದೀರಿ.
ಗುಜರಾತಿನ ವಿಸ್ತಾರವಂತೂ ಚೆನ್ನಾಗಿದೆ. ಈಗ ಏನು ಮಾಡಬೇಕಾಗಿದೆ? ವಿಸ್ತಾರವೂ ಇದೆ, ಚೆನ್ನಾಗಿ
ವಿಸ್ತಾರ ಮಾಡಿದ್ದೀರಿ. ಈಗ ಗುಜರಾತಿನವರು ನಂಬರ್ವನ್ ವಾರಸುಧಾರರನ್ನು ತಯಾರು ಮಾಡಿ. ಕೊನೆಪಕ್ಷ
ಯಾವ ದೊಡ್ಡ ಸೇವಾಕೇಂದ್ರಗಳಿವೆಯೋ, ಯಾರು ಹಳೆಯ ವಾರಸುಧಾರರಿದ್ದೀರೋ ಅವರಂತೂ ಅವಶ್ಯವಾಗಿ ಇದ್ದೀರಿ
ಆದರೆ ಹೊಸವಾರಸುಧಾರರನ್ನು ತಯಾರು ಮಾಡಿ. ಒಬ್ಬೊಬ್ಬರು-ಒಬ್ಬೊಬ್ಬರನ್ನಾದರೂ ತಯಾರು ಮಾಡಿ ಏಕೆಂದರೆ
ಯಾರು ವಾರಸುಧಾರರಾಗುವರೋ ಅವರೇ ಮಾಲೆಯ ಮಣಿಯಾಗುತ್ತಾರೆ ಅಂದಾಗ ಮಾಲೆಯನ್ನು ತಯಾರು ಮಾಡಬೇಕಲ್ಲವೆ.
16,108ರ ಮಾಲೆಯು ತಯಾರಾಗಿದೆ. ಈಗ ಒಂದುವೇಳೆ 108ರ ಮಾಲೆಯನ್ನು ತಯಾರು ಮಾಡಿ ಎಂದು ಬಾಪ್ದಾದಾ
ಹೇಳಿದರೆ ಮಾಡಬಲ್ಲಿರಾ? ಸಾಧ್ಯವೆ? ದಾದಿಯರು ಹೇಳಿರಿ - 108ರ ಮಾಲೆಯು ತಯಾರಾಗಿದೆಯೇ? (ಹೌದು ಬಾಬಾ
ಆಗುತ್ತದೆ ಎಂದು ದಾದೀಜಿಯು ಹೇಳಿದರು) ತಯಾರಾಗಿದೆಯೇ? 108ರ ಮಾಲೆಯು ತಯಾರಾಗಿಬಿಟ್ಟಿದೆಯೇ? (ಹೌದು
ಬಾಬಾ ತಯಾರಾಗಿದೆ) ಒಳ್ಳೆಯದು. ಬರೆದು ತೋರಿಸಿ. ತಯಾರಾಗಿದ್ದರೆ ಬಹಳ ಒಳ್ಳೆಯದು. ಶುಭಾಷಯಗಳು.
16,000ದ ಮಾಲೆಯು ಅರ್ಧವಾದರೂ ತಯಾರಾಗಿದೆಯೇ? (ಅರ್ಧವೇನು, ಅದಕ್ಕಿಂತಲೂ ಹೆಚ್ಚು ತಯಾರಾಗಿದೆ)
ಒಳ್ಳೆಯದಲ್ಲವೆ. ನೋಡಿ, ಗುಪ್ತರೂಪದಲ್ಲಿ ಆಗಿದೆ ಮತ್ತು ತಮ್ಮ ದಾದೀಜಿಯವರು ಹೇಳಿದ್ದಾರೆ.
ಒಳ್ಳೆಯದು- ಈಗ ತಮ್ಮೊಂದಿಗೆ ಎಲ್ಲರೂ ಕೇಳುತ್ತಾರೆ - ಮಾಲೆಯಲ್ಲಿ ನನ್ನ ಹೆಸರಿದೆಯೇ? ಎಂದು.
ಒಳ್ಳೆಯದು. ಇಂತಹ ಶುಭಭಾವನೆ-ಶುಭಭರವಸೆಯೇ ತಯಾರು ಮಾಡಿಬಿಡುತ್ತದೆ. ಈಗ ಎಲ್ಲರೂ ಕೇಳಿದಿರಲ್ಲವೆ?
ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಿ - ನಾನು ಆ ಮಾಲೆಯಲ್ಲಿ ಎವರೆಡಿಯಾಗಿದ್ದೇನೆಯೇ? ಒಳ್ಳೆಯದು.
ಮತ್ತೇನು ಮಾಡಬೇಕಾಗಿದೆ?
ಕ್ಯಾಡ್ ಗ್ರೂಪ್: ಒಳ್ಳೆಯದು. ಸಂದೇಶವನ್ನು ಹರಡುವ ಈ ಸಾಧನವು ಬಹಳ ಚೆನ್ನಾಗಿದೆ ಏಕೆಂದರೆ
ಪ್ರತ್ಯಕ್ಷಪ್ರಮಾಣವನ್ನು ನೋಡುತ್ತಾರಲ್ಲವೆ ಮತ್ತು ಖರ್ಚಿಲ್ಲದೆ ರಾಜಯೋಗದ ಮೂಲಕ ಗುಣಹೊಂದುವುದು (ವಾಸಿಯಾಗುವುದು)
ಎಲ್ಲರಿಗೆ ಬಹಳ ಇಷ್ಟವಾಗುತ್ತದೆ. ಇನ್ನೂ ಇದನ್ನು ನಿಧಾನ-ನಿಧಾನವಾಗಿ ವೃದ್ಧಿಮಾಡುತ್ತಾ ಹೋಗಿ.
ತಿಳಿಸುತ್ತಿದ್ದೀರಿ, ಮಾಡುತ್ತಿದ್ದೀರಿ ಮತ್ತು ಸಫಲತೆಯು ಸಿಗುವುದು, ಇನ್ನೂ ಸಿಗುತ್ತಾ ಇರುವುದು.
ಬಾಕಿ ಬಾಪ್ದಾದಾ ಈ ಕಾರ್ಯಕ್ಕಾಗಿ ನಿಮಿತ್ತರಾದವರಿಗೆ ಶುಭಾಷಯಗಳನ್ನು ತಿಳಿಸುತ್ತಿದ್ದೇವೆ. ಇದು
ಸರ್ಕಾರದವರೆಗೂ ತಲುಪುತ್ತಿದೆ. ಇನ್ನೂ ಹರಡುತ್ತಾ ಹೋಗುತ್ತೀರೆಂದರೆ ಈ ಧ್ಯಾನದ ಮಹತ್ವಿಕೆಯು
ಹೆಚ್ಚುತ್ತಾಹೋಗುವುದು. ಬಾಕಿ ಬಾಪ್ದಾದಾರವರಿಗೆ ಈ ವಿಧಾನವು ಇಷ್ಟವಾಗಿದೆ. ಒಳ್ಳೆಯದು
ವರದಾನ:
ವರದಾನ:
ಮನಸ್ಸಿನ ಮೌನದಿಂದ ಸೇವೆಯ ಹೊಸ ಅನ್ವೇಷಣೆಯನ್ನು ಮಾಡುವಂತಹ ಸಿದ್ಧಿಸ್ವರೂಪ ಭವ
ಮೊದಮೊದಲು ಆರಂಭದ
ಸಮಯದಲ್ಲಿ ಯಾವರೀತಿ ಮೌನವ್ರತವನ್ನಿಟ್ಟಿದ್ದಿರಿ ಆಗೆಲ್ಲರೂ ಫ್ರೀ ಆಗಿದ್ದಿರಿ, ಸಮಯದ
ಉಳಿತಾಯವಾಗುತ್ತಿತ್ತು. ಅದೇರೀತಿ ಈಗಲೂ ಮನಸ್ಸಿನ ಮೌನವನ್ನಿಡಿ, ಹೀಗೆ ಮಾಡುವುದರಿಂದ ಮನಸ್ಸಿನಲ್ಲಿ
ವ್ಯರ್ಥ ಸಂಕಲ್ಪಗಳು ಬರಲೇಬಾರದು. ಹೇಗೆ ಮೌನದಲ್ಲಿ ಮುಖದಿಂದ ಧ್ವನಿಯೇ ಹೊರಡುವುದಿಲ್ಲ, ಹಾಗೆಯೇ
ವ್ಯರ್ಥ ಸಂಕಲ್ಪವೂ ಬರಬಾರದು- ಇದು ಮನಸ್ಸಿನ ಮೌನವಾಗಿದೆ. ಇದರಿಂದ ಸಮಯ ಉಳಿತಾಯವಾಗುತ್ತದೆ. ಈ
ಮನಸ್ಸಿನ ಮೌನದಿಂದ ಸೇವೆಯ ಹೊಸ ಅನ್ವೇಷಣೆಯು ಹೊರಬರುತ್ತದೆ, ಅದರಿಂದ ಸಾಧನೆಯು ಕಡಿಮೆ ಮತ್ತು
ಸಿದ್ಧಿಯು ಹೆಚ್ಚಿನದಾಗಿ ಪ್ರಾಪ್ತಿಯಾಗುತ್ತದೆ. ಹೇಗೆ ವಿಜ್ಞಾನದ ಸಾಧನಗಳು ಸೆಕೆಂಡಿನಲ್ಲಿಯೇ
ವಿಧಿಯನ್ನು ಪ್ರಾಪ್ತಿ ಮಾಡಿಸುತ್ತದೆಯೋ ಹಾಗೆಯೇ ಈ ಸೈಲೆನ್ಸ್ ನ ಸಾಧನದ ಮೂಲಕ ಸೆಕೆಂಡಿನಲ್ಲಿಯೇ
ವಿಧಿಯು ಪ್ರಾಪ್ತಿಯಾಗುವುದು.
ಸ್ಲೋಗನ್:
ಸ್ವಯಂ ಯಾರು
ಸಮರ್ಪಿತ ಸ್ಥಿತಿಯಲ್ಲಿ ಇರುತ್ತಾರೆಯೋ, ಅವರಮುಂದೆ ಸರ್ವರ ಸಹಯೋಗವೂ ಸಮರ್ಪಿತವಾಗುತ್ತದೆ.
ಅವ್ಯಕ್ತ ಸೂಚನೆಗಳು-
ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ
ಅನೇಕ ಪ್ರಕಾರದ ವ್ಯಕ್ತಿ,
ವೈಭವ ಅಥವಾ ಅನೇಕ ಪ್ರಕಾರದ ವಸ್ತುಗಳ ಸಂಪರ್ಕದಲ್ಲಿ ಬರುತ್ತಾ ಆತ್ಮಿಕ ಭಾವ ಹಾಗೂ ಅನಾಸಕ್ತ ಭಾವ
ಧಾರಣೆ ಮಾಡಿ. ಈ ವೈಭವ ಹಾಗೂ ವಸ್ತುಗಳು ಅನಾಸಕ್ತರ ಮುಂದೆ ದಾಸಿಯ ರೂಪದಲ್ಲಿ ಇರುತ್ತದೆ ಹಾಗೂ
ಆಸಕ್ತ ಭಾವದವರ ಮುಂದೆ ಆಯಸ್ಕಾಂತದ ತರಹ ಸಿಲುಕಿ ಹಾಕಿಸುವಂತೆ ಇರುತ್ತದೆ.