23.06.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ನಿಮ್ಮ ಮೊಟ್ಟಮೊದಲ ಪಾಠವಾಗಿದೆ- ನಾವು ಆತ್ಮನಾಗಿದ್ದೇನೆ, ಶರೀರವಲ್ಲ, ಆತ್ಮಾಭಿಮಾನಿಯಾಗಿ ಇರಿ ಆಗ ತಂದೆಯ ನೆನಪಿರುವುದು”

ಪ್ರಶ್ನೆ:
ನೀವು ಮಕ್ಕಳಬಳಿ ಯಾವ ಗುಪ್ತಖಜಾನೆಯಿದೆ ಅದು ಮನುಷ್ಯರ ಬಳಿ ಇಲ್ಲ?

ಉತ್ತರ:
ನಿಮಗೆ ಭಗವಂತ ತಂದೆಯು ಓದಿಸುತ್ತಾರೆ, ಆ ವಿದ್ಯೆಯ ಖುಷಿಯ ಗುಪ್ತಖಜಾನೆ ನಿಮ್ಮಬಳಿ ಇದೆ. ನೀವು ತಿಳಿದುಕೊಂಡಿದ್ದೀರಿ- ನಾವು ಭವಿಷ್ಯದ ಅಮರಲೋಕಕ್ಕಾಗಿ ಓದುತ್ತಿದ್ದೇವೆ, ಈ ಮೃತ್ಯುಲೋಕಕ್ಕಾಗಿ ಅಲ್ಲ ಆದ್ದರಿಂದ ತಂದೆಯು ಹೇಳುತ್ತಾರೆ- ಬೆಳಗ್ಗೆ-ಬೆಳಗ್ಗೆ ಎದ್ದು ನಡೆಯುತ್ತಾ-ತಿರುಗಾಡುತ್ತಾ ಕೇವಲ ಮೊಟ್ಟಮೊದಲ ಪಾಠವನ್ನು ನೆನಪು ಮಾಡಿಕೊಳ್ಳಿರಿ ಆಗ ಖುಷಿಯ ಖಜಾನೆಯು ಜಮಾ ಆಗುತ್ತಾ ಹೋಗುವುದು

ಓಂ ಶಾಂತಿ.
ತಂದೆಯು ಮಕ್ಕಳನ್ನು ಕೇಳುತ್ತಾರೆ- ಮಕ್ಕಳೇ, ಆತ್ಮಾಭಿಮಾನಿಯಾಗಿ ಕುಳಿತುಕೊಂಡಿದ್ದೀರಾ? ತಮ್ಮನ್ನು ಆತ್ಮನೆಂದು ತಿಳಿದು ಕುಳಿತಿದ್ದೀರಾ? ನಾವಾತ್ಮರಿಗೆ ಪರಮಾತ್ಮ ತಂದೆಯು ಓದಿಸುತ್ತಿದ್ದಾರೆ. ಮಕ್ಕಳಿಗೆ ಈ ಸ್ಮೃತಿ ಬಂದಿದೆ- ನಾವು ದೇಹವಲ್ಲ, ಆತ್ಮರಾಗಿದ್ದೇವೆ. ಮಕ್ಕಳನ್ನು ಆತ್ಮಾಭಿಮಾನಿಯನ್ನಾಗಿ ಮಾಡುವುದಕ್ಕಾಗಿಯೇ ಶ್ರಮಪಡಬೇಕಾಗುತ್ತದೆ ಏಕೆಂದರೆ ಆತ್ಮಾಭಿಮಾನಿಯಾಗಿ ಇರುವುದಿಲ್ಲ. ಪದೇ-ಪದೇ ದೇಹಾಭಿಮಾನದಲ್ಲಿ ಬಂದುಬಿಡುತ್ತಾರೆ. ಆದ್ದರಿಂದ ತಂದೆಯು ಕೇಳುತ್ತಾರೆ- ಆತ್ಮಾಭಿಮಾನಿಯಾಗಿ ಇರುತ್ತೀರಾ? ಆತ್ಮಾಭಿಮಾನಿಯಾದರೂ ತಂದೆಯ ನೆನಪು ಬರುವುದು. ಒಂದುವೇಳೆ ದೇಹಾಭಿಮಾನಿಯಾದರೆ ಲೌಕಿಕ ಸಂಬಂಧಿಗಳು ನೆನಪಿಗೆ ಬರುವರು. ಮೊಟ್ಟಮೊದಲು ಈ ಶಬ್ಧವನ್ನು ನೆನಪಿಟ್ಟುಕೊಳ್ಳಬೇಕಾಗಿದೆ- ನಾವಾತ್ಮರಾಗಿದ್ದೇವೆ, ಆತ್ಮನಲ್ಲಿಯೇ 84 ಜನ್ಮಗಳ ಪಾತ್ರವು ತುಂಬಿದೆ. ಇದನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ. ಅರ್ಧಕಲ್ಪದಿಂದ ನೀವು ದೇಹಾಭಿಮಾನಿಯಾಗಿದ್ದೀರಿ, ಕೇವಲ ಈ ಸಂಗಮಯುಗದಲ್ಲಿಯೇ ಮಕ್ಕಳನ್ನು ಆತ್ಮಾಭಿಮಾನಿಯನ್ನಾಗಿ ಮಾಡಲಾಗುತ್ತದೆ. ತಮ್ಮನ್ನು ದೇಹವೆಂದು ತಿಳಿದಾಗ ತಂದೆಯ ನೆನಪು ಬರುವುದಿಲ್ಲ ಆದ್ದರಿಂದ ಮೊಟ್ಟಮೊದಲು ಈ ಶಬ್ಧವನ್ನು ಪಕ್ಕಾ ಮಾಡಿಕೊಳ್ಳಿರಿ- ನಾವಾತ್ಮರು ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ, ದೇಹದ ತಂದೆಯನ್ನು ನೆನಪು ಮಾಡುವುದು ಎಂದೂ ಕಲಿಸಲಾಗುವುದಿಲ್ಲ. ಈಗ ತಂದೆಯು ಹೇಳುತ್ತಾರೆ- ಪಾರಲೌಕಿಕ ತಂದೆಯಾದ ನನ್ನನ್ನು ನೆನಪು ಮಾಡಿರಿ, ಆತ್ಮಾಭಿಮಾನಿಯಾಗಿ. ದೇಹಾಭಿಮಾನಿಗಳಾಗುವುದರಿಂದ ದೇಹದ ಸಂಬಂಧವೇ ನೆನಪಿಗೆ ಬರುತ್ತದೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ, ಇದರಲ್ಲಿಯೇ ಶ್ರಮವಿದೆ. ಇದನ್ನು ಯಾರು ತಿಳಿಸುತ್ತಿರುವರು! ನಾವಾತ್ಮರ ತಂದೆ ಯಾರನ್ನು ಎಲ್ಲರೂ ನೆನಪು ಮಾಡುತ್ತಾರೆ, ತಂದೆಯೇ ಬನ್ನಿ, ಬಂದು ಈ ದುಃಖದಿಂದ ಮುಕ್ತಗೊಳಿಸಿ ಎಂದು. ಮಕ್ಕಳಿಗೆ ಗೊತ್ತಿದೆ- ಈ ವಿದ್ಯೆಯಿಂದ ಭವಿಷ್ಯಕ್ಕಾಗಿ ಶ್ರೇಷ್ಠಪದವಿಯನ್ನು ಪಡೆಯುತ್ತೀರಿ.

ನೀವೀಗ ಪುರುಷೋತ್ತಮ ಸಂಗಮಯುಗದಲ್ಲಿದ್ದೀರಿ, ಈ ಮೃತ್ಯುಲೋಕದಲ್ಲಿ ಈಗ ಇರುವಂತಿಲ್ಲ. ನಮ್ಮ ವಿದ್ಯೆಯಿರುವುದೇ ಭವಿಷ್ಯ 21 ಜನ್ಮಗಳಿಗಾಗಿ. ನಾವು ಸತ್ಯಯುಗ ಅಮರಲೋಕಕ್ಕಾಗಿ ಓದುತ್ತಿದ್ದೇವೆ. ಅಮರತಂದೆಯು ನಮಗೆ ಜ್ಞಾನವನ್ನು ತಿಳಿಸುತ್ತಿದ್ದಾರೆ ಅಂದಮೇಲೆ ಇಲ್ಲಿ ಕುಳಿತುಕೊಂಡಾಗ ಮೊಟ್ಟಮೊದಲು ತಮ್ಮನ್ನು ಆತ್ಮನೆಂದು ತಿಳಿದು ತಂದೆಯ ನೆನಪಿನಲ್ಲಿ ಇರಿ ಆಗಲೇ ವಿಕರ್ಮ ವಿನಾಶವಾಗುವುದು. ನಾವೀಗ ಸಂಗಮಯುಗದಲ್ಲಿದ್ದೇವೆ, ತಂದೆಯು ನಮ್ಮನ್ನು ಪುರುಷೋತ್ತಮರನ್ನಾಗಿ ಮಾಡುತ್ತಿದ್ದಾರೆ. ನನ್ನನ್ನು ನೆನಪು ಮಾಡಿದರೆ ನೀವು ಪುರುಷೋತ್ತಮರಾಗುತ್ತೀರಿ, ನಾನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ಬಂದಿದ್ದೇನೆ, ಸತ್ಯಯುಗದಲ್ಲಿ ನೀವು ದೇವತೆಯಾಗಿದ್ದಿರಿ. ಹೇಗೆ ಏಣಿಯನ್ನು ಇಳಿದಿದ್ದೀರೆಂದು ಈಗ ತಿಳಿದುಕೊಂಡಿದ್ದೀರಿ. ನೀವಾತ್ಮರಲ್ಲಿ 84 ಜನ್ಮಗಳ ಪಾತ್ರವು ನೊಂದಾಯಿಸಲ್ಪಟ್ಟಿದೆ. ಪ್ರಪಂಚದಲ್ಲಿ ಇದನ್ನು ಯಾರೂ ತಿಳಿದುಕೊಂಡಿಲ್ಲ. ಭಕ್ತಿಮಾರ್ಗವೇ ಬೇರೆ, ಜ್ಞಾನಮಾರ್ಗವೇ ಬೇರೆಯಾಗಿದೆ. ಯಾವ ಆತ್ಮರಿಗೆ ತಂದೆಯು ಓದಿಸುವರೋ ಅವರಿಗೇ ಗೊತ್ತಿದೆ, ಮತ್ತ್ಯಾರಿಗೂ ಗೊತ್ತಿಲ್ಲ. ಇದು ಭವಿಷ್ಯಕ್ಕಾಗಿ ಗುಪ್ತಖಜಾನೆಯಾಗಿದೆ. ನೀವು ಅಮರಲೋಕಕ್ಕಾಗಿ ಓದುತ್ತೀರಿ, ಮೃತ್ಯುಲೋಕಕ್ಕಾಗಿ ಅಲ್ಲ. ಬೆಳಗ್ಗೆ ಎದ್ದು ಓಡಾಡುತ್ತಾ ತಿರುಗಾಡುತ್ತಾ ಮೊಟ್ಟಮೊದಲ ಪಾಠವನ್ನು ನೆನಪು ಮಾಡಿಕೊಳ್ಳಿ- ನಾವಾತ್ಮರಾಗಿದ್ದೇವೆ, ಶರೀರವಲ್ಲ. ನಮ್ಮ ಆತ್ಮಿಕ ತಂದೆಯು ನಮಗೆ ಓದಿಸುತ್ತಾರೆ. ಈ ದುಃಖದ ಪ್ರಪಂಚವು ಈಗ ಬದಲಾಗಲಿದೆ. ಸತ್ಯಯುಗವು ಸುಖದ ಪ್ರಪಂಚವಾಗಿದೆ, ಬುದ್ಧಿಯಲ್ಲಿ ಸಂಪೂರ್ಣಜ್ಞಾನವಿದೆ. ಇದೇ ಆಧ್ಯಾತ್ಮಿಕ ಜ್ಞಾನವಾಗಿದೆ. ತಂದೆಯು ಜ್ಞಾನಸಾಗರ, ಆತ್ಮಿಕ ತಂದೆಯಾಗಿದ್ದಾರೆ ಅಂದರೆ ಆತ್ಮದ ತಂದೆಯಾಗಿದ್ದಾರೆ. ಉಳಿದೆಲ್ಲರೂ ದೇಹದ ಸಂಬಂಧಿಗಳಾಗಿದ್ದಾರೆ. ಈಗ ದೇಹದ ಸಂಬಂಧವನ್ನು ಮರೆತು ಒಬ್ಬರೊಂದಿಗೆ ಸಂಬಂಧವನ್ನಿಡಬೇಕಾಗಿದೆ. ನನ್ನವರು ಒಬ್ಬ ತಂದೆಯ ವಿನಃ ಯಾರೂ ಇಲ್ಲವೆಂದು ಹಾಡುತ್ತೀರಿ. ನಾವು ಒಬ್ಬ ತಂದೆಯನ್ನೇ ನೆನಪು ಮಾಡುತ್ತೇವೆ, ದೇಹವನ್ನು ನೆನಪು ಮಾಡುವುದಿಲ್ಲವೆಂದು ಹೇಳುತ್ತೀರಿ. ಈಗ ಈ ಹಳೆಯ ದೇಹವನ್ನು ಬಿಡಬೇಕಾಗಿದೆ. ಇದು ನಿಮಗೆ ಜ್ಞಾನ ಸಿಗುತ್ತದೆ. ಈ ಶರೀರವನ್ನು ಹೇಗೆ ಬಿಡಬೇಕೆಂದರೆ ನೆನಪು ಮಾಡುತ್ತಾ-ಮಾಡುತ್ತಾ ಬಿಟ್ಟುಬಿಡಬೇಕಾಗಿದೆ ಆದ್ದರಿಂದ ತಂದೆಯು ಹೇಳುವುದೇನೆಂದರೆ ದೇಹೀ-ಅಭಿಮಾನಿಯಾಗಿರಿ. ತಮ್ಮೊಳಗಡೆ ಜ್ಞಾನವನ್ನು ಅರೆಯುತ್ತಾ ಇರಿ. ಬೀಜ ಮತ್ತು ವೃಕ್ಷವನ್ನು ನೆನಪು ಮಾಡಬೇಕು. ಶಾಸ್ತ್ರಗಳಲ್ಲಿ ಕಲ್ಪವೃಕ್ಷದ ವೃತ್ತಾಂತವಿದೆ.

ಇದೂ ಸಹ ನೀವು ಮಕ್ಕಳಿಗೇ ಗೊತ್ತಿದೆ- ಜ್ಞಾನಸಾಗರ ತಂದೆಯು ಓದಿಸುತ್ತಾರೆ, ಯಾವುದೇ ಮನುಷ್ಯರು ಓದಿಸುವುದಿಲ್ಲ, ಇದನ್ನು ಪಕ್ಕಾ ಮಾಡಿಕೊಳ್ಳಬೇಕು. ಓದುವುದಂತೂ ಓದಲೇಬೇಕಲ್ಲವೆ. ಸತ್ಯಯುಗದಲ್ಲಿಯೂ ದೇಹಧಾರಿಗಳು ಓದಿಸುತ್ತಾರೆ ಆದರೆ ಈ ತಂದೆಯು ದೇಹಧಾರಿಯಲ್ಲ. ನಾನು ಹಳೆಯ ದೇಹದ ಆಧಾರ ತೆಗೆದುಕೊಂಡು ನಿಮಗೆ ಓದಿಸುತ್ತೇನೆ. ಕಲ್ಪ-ಕಲ್ಪವೂ ಓದಿಸುತ್ತೇನೆ, ಮತ್ತೆ ಕಲ್ಪದ ನಂತರವೂ ಓದಿಸುತ್ತೇನೆ, ಈಗ ನನ್ನನ್ನು ನೆನಪು ಮಾಡಿರಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುವುದು. ನಾನೇ ಪತಿತ-ಪಾವನನಾಗಿದ್ದೇನೆ, ನನ್ನನ್ನೇ ಸರ್ವಶಕ್ತಿವಂತನೆಂದು ಹೇಳುತ್ತಾರೆ ಆದರೆ ಮಾಯೆಯೂ ಕಡಿಮೆಯಿಲ್ಲ. ಅದೂ ಶಕ್ತಿವಂತನಾಗಿದೆ. ನೋಡಿ, ನಿಮ್ಮನ್ನು ಎಲ್ಲಿಂದ ಬೀಳಿಸಿದೆ. ಈಗ ನೆನಪು ಬರುತ್ತಿದೆಯಲ್ಲವೆ. 84 ಜನ್ಮಗಳ ಚಕ್ರದ ಗಾಯನವೂ ಇದೆ. ಇದು ಮನುಷ್ಯರದೇ ಮಾತಾಗಿದೆ. ಪ್ರಾಣಿಗಳೇನಾಗುವುದು ಎಂದು ಅನೇಕರು ಕೇಳುತ್ತಾರೆ. ಅರೆ! ಇಲ್ಲಿ ಪ್ರಾಣಿಯ ಮಾತಿಲ್ಲ, ತಂದೆಯೂ ಸಹ ಮಕ್ಕಳೊಂದಿಗೇ ಮಾತನಾಡುತ್ತಾರೆ. ಹೊರಗಿನವರಂತೂ ತಂದೆಯನ್ನೇ ಅರಿತುಕೊಂಡಿಲ್ಲ ಅಂದಮೇಲೆ ಅವರೇನು ಮಾತನಾಡುವರು! ನಾವು ತಂದೆಯೊಂದಿಗೆ ಮಿಲನ ಮಾಡಬೇಕೆಂದು ಕೆಲವರು ಹೇಳುತ್ತಾರೆ ಆದರೆ ತಂದೆಯನ್ನು ಸ್ವಲ್ಪವೂ ಅರಿತುಕೊಂಡಿಲ್ಲ. ಕುಳಿತು ಉಲ್ಟಾ-ಸುಲ್ಟಾ ಪ್ರಶ್ನೆಗಳನ್ನು ಕೇಳುತ್ತಾರೆ. 7 ದಿನಗಳ ಕೋರ್ಸ್ ಕೇಳಿದನಂತರವೂ ನಮ್ಮ ತಂದೆಯು ಬೇಹದ್ದಿನ ತಂದೆಯಾಗಿದ್ದಾರೆ ಎಂಬುದೇನನ್ನೂ ತಿಳಿದುಕೊಳ್ಳುವುದಿಲ್ಲ. ಯಾರು ಹಳೆಯ ಭಕ್ತರಿದ್ದಾರೆಯೋ, ಯಾರು ಬಹಳ ಭಕ್ತಿಮಾಡಿದ್ದಾರೆಯೋ ಅವರ ಬುದ್ಧಿಯಲ್ಲಿ ಜ್ಞಾನದ ಎಲ್ಲಾ ಮಾತುಗಳು ಕುಳಿತುಕೊಳ್ಳುತ್ತವೆ. ಭಕ್ತಿ ಕಡಿಮೆ ಮಾಡಿದರೆ ಬುದ್ಧಿಯಲ್ಲಿ ಕಡಿಮೆ ಕುಳಿತುಕೊಳ್ಳುವುದು. ನೀವು ಎಲ್ಲರಿಗಿಂತ ಹೆಚ್ಚು ಹಳೆಯ ಭಕ್ತರಾಗಿದ್ದೀರಿ. ಭಗವಂತನು ಭಕ್ತಿಯ ಫಲವನ್ನು ಕೊಡಲು ಬರುತ್ತಾರೆಂದು ಗಾಯನವಿದೆ ಆದರೆ ಯಾರಿಗೆ ಗೊತ್ತಿದೆ! ಜ್ಞಾನಮಾರ್ಗ ಮತ್ತು ಭಕ್ತಿಮಾರ್ಗವು ಸಂಪೂರ್ಣ ಬೇರೆಯಾಗಿದೆ. ಇಡೀ ಪ್ರಪಂಚವು ಭಕ್ತಿಮಾರ್ಗದಲ್ಲಿದೆ. ಕೋಟಿಯಲ್ಲಿ ಕೆಲವರೇ ಬಂದು ಇದನ್ನು ಓದುತ್ತಾರೆ. ರಹಸ್ಯವು ಬಹಳ ಮಧುರವಾಗಿದೆ. 84 ಜನ್ಮಗಳ ಚಕ್ರವನ್ನು ಮನುಷ್ಯರೇ ತಿಳಿದುಕೊಳ್ಳುವರಲ್ಲವೆ. ನಿಮಗೆ ಮೊದಲು ಏನೂ ಗೊತ್ತಿರಲಿಲ್ಲ, ಶಿವನನ್ನೂ ಅರಿತುಕೊಂಡಿರಲಿಲ್ಲ. ಎಷ್ಟೊಂದು ಶಿವನ ಮಂದಿರಗಳಿವೆ. ಶಿವನಿಗೆ ಪೂಜೆ ಮಾಡುತ್ತಾರೆ, ನೀರೆರೆಯುತ್ತಾರೆ, ಶಿವಾಯನಮಃ ಎಂದು ಹೇಳುತ್ತಾರೆ. ಏಕೆ ಪೂಜಿಸುತ್ತೇವೆಂದು ಗೊತ್ತಿಲ್ಲ. ಲಕ್ಷ್ಮೀ-ನಾರಾಯಣರ ಪೂಜೆಯನ್ನೇಕೆ ಮಾಡುತ್ತಾರೆ? ಅವರು ಎಲ್ಲಿ ಹೋದರು? ಏನೂ ಗೊತ್ತಿಲ್ಲ. ಭಾರತವಾಸಿಗಳು ಮಾತ್ರವೇ ತಮ್ಮ ಪೂಜ್ಯರನ್ನು ತಿಳಿದುಕೊಂಡಿಲ್ಲ. ಕ್ರಿಶ್ಚಿಯನ್ನರಿಗೆ ತಮ್ಮ ಧರ್ಮದ ಬಗ್ಗೆ ಗೊತ್ತಿದೆ. ಕ್ರೈಸ್ಟ್ ಯಾವಾಗ ಬಂದರು? ಬಂದು ಹೇಗೆ ಸ್ಥಾಪನೆ ಮಾಡಿದರು? ಎಂಬುದು ಸ್ಪಷ್ಟವಾಗಿದೆ. ಶಿವತಂದೆಯನ್ನು ಯಾರೂ ತಿಳಿದುಕೊಂಡಿಲ್ಲ. ಪತಿತ-ಪಾವನನೆಂದು ಶಿವನಿಗೇ ಹೇಳುತ್ತಾರೆ, ಅವರೇ ಶ್ರೇಷ್ಠಾತಿಶ್ರೇಷ್ಠನಲ್ಲವೆ. ಅವರದೇ ಎಲ್ಲರಿಗಿಂತ ಹೆಚ್ಚು ಸೇವೆ ಮಾಡುತ್ತಾರೆ ಏಕೆಂದರೆ ಸರ್ವರ ಸದ್ಗತಿದಾತನಾಗಿದ್ದಾರೆ. ನೋಡಿ ನಿಮಗೆ ಹೇಗೆ ಓದಿಸುತ್ತಾರೆ! ಬಂದು ಪಾವನ ಮಾಡಿ ಎಂದು ತಂದೆಯನ್ನೇ ಕರೆಯುತ್ತಾರೆ, ಮಂದಿರದಲ್ಲಿ ಎಷ್ಟೊಂದು ಪೂಜೆ ಮಾಡುತ್ತಾರೆ. ಎಷ್ಟು ವಿಜೃಂಭಣೆಯಿಂದ ಎಷ್ಟೊಂದು ಖರ್ಚು ಮಾಡುತ್ತಾರೆ, ಶ್ರೀನಾಥ ಮಂದಿರ ಹಾಗೂ ಜಗನ್ನಾಥ ಮಂದಿರಕ್ಕೆ ಹೋಗಿ ನೋಡಿ, ಇಬ್ಬರೂ ಒಂದೇ ಆದರೆ ಜಗನ್ನಾಥನ ಮಂದಿರದಲ್ಲಿ ಕೇವಲ ಅನ್ನದ ನೈವೇದ್ಯವನ್ನಿಡುತ್ತಾರೆ, ಶ್ರೀನಾಥನಿಗಂತೂ ಅನೇಕಪ್ರಕಾರದ ಪದಾರ್ಥಗಳನ್ನು ನೈವೇದ್ಯಕ್ಕೆ ಇಡುತ್ತಾರೆ. ಇಷ್ಟು ವ್ಯತ್ಯಾಸವೇಕೆ ಆಗುತ್ತದೆ? ಕಾರಣ ಬೇಕಲ್ಲವೆ. ಶ್ರೀನಾಥ ಮತ್ತು ಜಗನ್ನಾಥ ಇಬ್ಬರನ್ನೂ ಕಪ್ಪಾಗಿ ತೋರಿಸುತ್ತಾರೆ. ಕಾರಣವನ್ನು ತಿಳಿದುಕೊಂಡಿಲ್ಲ. ಜಗನ್ನಾಥ ಎಂದು ಲಕ್ಷ್ಮೀ-ನಾರಾಯಣರಿಗೆ ಹೇಳುವರೋ ಅಥವಾ ರಾಧೆ-ಕೃಷ್ಣರಿಗೋ? ರಾಧೆ-ಕೃಷ್ಣ, ಲಕ್ಷ್ಮೀ-ನಾರಾಯಣರ ನಡುವೆ ಸಂಬಂಧವೇನೆಂದು ಯಾರೂ ತಿಳಿದುಕೊಂಡಿಲ್ಲ. ಈಗ ನೀವು ಮಕ್ಕಳಿಗೆ ಅರ್ಥವಾಗಿದೆ- ನಾವು ಪೂಜ್ಯ ದೇವತೆಗಳಾಗಿದ್ದೆವು, ಈಗ ಪೂಜಾರಿಯಾಗಿದ್ದೇವೆ. ಚಕ್ರವನ್ನು ಸುತ್ತಿ ಬಂದೆವು, ಈಗ ಪುನಃ ದೇವತೆಗಳಾಗಲು ನಾವು ಓದುತ್ತೇವೆ. ಇಲ್ಲಿ ಯಾವುದೇ ಮನುಷ್ಯರು ಓದಿಸುತ್ತಿಲ್ಲ. ಭಗವಾನುವಾಚ ಆಗಿದೆ, ಜ್ಞಾನಸಾಗರನೆಂದು ಭಗವಂತನಿಗೇ ಹೇಳಲಾಗುವುದು. ಇಲ್ಲಂತೂ ಭಕ್ತಿಯ ಸಾಗರರು ಅನೇಕರಿದ್ದಾರೆ, ಪತಿತ-ಪಾವನ, ಜ್ಞಾನಸಾಗರ ತಂದೆಯನ್ನು ನೆನಪು ಮಾಡುತ್ತಾರೆ. ನೀವು ಪತಿತರಾದಿರಿ, ಈಗ ಪುನಃ ಅವಶ್ಯವಾಗಿ ಪಾವನರಾಗಬೇಕಾಗಿದೆ. ಇದು ಪತಿತ ಪ್ರಪಂಚವಾಗಿದೆ, ಸ್ವರ್ಗವಲ್ಲ. ವೈಕುಂಠವೆಲ್ಲಿದೆ ಎಂಬುದೂ ಸಹ ಯಾರಿಗೂ ತಿಳಿದಿಲ್ಲ. ವೈಕುಂಠಕ್ಕೆ ಹೋದರೆಂದು ಹೇಳುತ್ತಾರೆ. ಅಂದಮೇಲೆ ಮತ್ತೆ ಅವರಿಗೆ ನರಕದ ಭೋಜನವನ್ನೇಕೆ ತಿನ್ನಿಸುತ್ತೀರಿ? ಸತ್ಯಯುಗದಲ್ಲಂತೂ ಬಹಳ ಫಲಪುಷ್ಫಗಳಿರುತ್ತವೆ. ಇಲ್ಲೇನಿದೆ? ಇದು ನರಕವಾಗಿದೆ. ಈಗ ನೀವು ತಿಳಿದುಕೊಂಡಿದ್ದೀರಿ- ತಂದೆಯ ಮೂಲಕ ನಾವು ಸ್ವರ್ಗವಾಸಿಗಳಾಗುವ ಪುರುಷಾರ್ಥ ಮಾಡುತ್ತಿದ್ದೇವೆ, ಪತಿತರಿಂದ ಪಾವನರಾಗಬೇಕಾಗಿದೆ. ತಂದೆಯು ಯುಕ್ತಿಯನ್ನಂತೂ ತಿಳಿಸಿದ್ದಾರೆ. ಕಲ್ಪ-ಕಲ್ಪವೂ ಯುಕ್ತಿಯನ್ನು ತಿಳಿಸಿಕೊಡುತ್ತಾರೆ- ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮ ವಿನಾಶವಾಗುವುದು, ನಾವು ಸಂಗಮಯುಗದಲ್ಲಿದ್ದೇವೆ ಎಂದು ನಿಮಗೆ ತಿಳಿದಿದೆ. ನೀವೇ ಹೇಳುತ್ತೀರಿ- ಬಾಬಾ, ನಾವು 5000 ವರ್ಷಗಳ ಮೊದಲೂ ಸಹ ಈ ರೀತಿ ಆಗಿದ್ದೆವು, ಕಲ್ಪ-ಕಲ್ಪವೂ ಈ ಅಮರಕಥೆಯನ್ನು ತಂದೆಯಿಂದ ಕೇಳುತ್ತೇವೆ ಎಂಬುದನ್ನು ನೀವೇ ಕೇಳುತ್ತೀರಿ. ಶಿವತಂದೆಯೇ ಅಮರನಾಥನಾಗಿದ್ದಾರೆ. ಉಳಿದಂತೆ ಈ ರೀತಿಯಲ್ಲ- ಕುಳಿತು ಪಾರ್ವತಿಗೆ ಕಥೆಯನ್ನು ತಿಳಿಸಿದರು ಎಂಬಂತೆ. ಅದು ಭಕ್ತಿಯಾಗಿದೆ. ಜ್ಞಾನ ಮತ್ತು ಭಕ್ತಿಯನ್ನು ನೀವು ತಿಳಿದುಕೊಂಡಿದ್ದೀರಿ. ಬ್ರಾಹ್ಮಣರ ಹಗಲು ಮತ್ತು ನಂತರ ಬ್ರಾಹ್ಮಣರ ರಾತ್ರಿಯಾಗಿದೆ. ತಂದೆಯು ತಿಳಿಸುತ್ತಾರೆ- ನೀವು ಬ್ರಾಹ್ಮಣರಲ್ಲವೆ. ಆದಿದೇವನೂ ಬ್ರಾಹ್ಮಣನೇ ಆಗಿದ್ದನು, ದೇವತೆ ಎಂದು ಹೇಳುವುದಿಲ್ಲ. ಆದಿದೇವನಬಳಿಯೂ ಹೋಗುತ್ತಾರೆ, ದೇವಿಯರದೂ ಸಹ ಎಷ್ಟೊಂದು ಹೆಸರುಗಳಿವೆ. ತಾವು ಸೇವೆ ಮಾಡಿದ್ದೀರಿ ಆದ್ದರಿಂದಲೇ ನಿಮ್ಮ ಗಾಯನವಿದೆ. ಯಾವ ಭಾರತವು ನಿರ್ವಿಕಾರಿಯಾಗಿದೆ ಅದು ನಂತರ ವಿಕಾರಿಯಾಗಿಬಿಡುತ್ತದೆ. ಈಗ ರಾವಣರಾಜ್ಯವಲ್ಲವೆ.

ಸಂಗಮಯುಗದಲ್ಲಿ ನೀವು ಮಕ್ಕಳು ಈಗ ಪುರುಷೋತ್ತಮರಾಗುತ್ತೀರಿ, ನಿಮ್ಮಮೇಲೆ ಬೃಹಸ್ಪತಿಯ ಅವಿನಾಶಿ ದೆಶೆಯು ಕುಳಿತುಕೊಳ್ಳುತ್ತದೆ ಆದ್ದರಿಂದ ನೀವು ಅಮರಪುರಿಗೆ ಮಾಲೀಕರಾಗುತ್ತೀರಿ. ತಂದೆಯು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವುದಕ್ಕಾಗಿ ಓದಿಸುತ್ತಾರೆ, ಸ್ವರ್ಗದ ಮಾಲೀಕರಾಗುವುದಕ್ಕೆ ಬೃಹಸ್ಪತಿ ದೆಶೆಯೆಂದು ಹೇಳಲಾಗುತ್ತದೆ. ನೀವು ಸ್ವರ್ಗ ಅಮರಪುರಿಗೆ ಅವಶ್ಯವಾಗಿ ಹೋಗುತ್ತೀರಿ, ಬಾಕಿ ವಿದ್ಯೆಯಲ್ಲಿ ದೆಶೆಗಳಂತೂ ಬದಲಾವಣೆಯಾಗುತ್ತಿರುತ್ತದೆ. ನೆನಪೇ ಮರೆತುಹೋಗುತ್ತದೆ. ತಂದೆಯು ಹೇಳಿದ್ದಾರೆ- ನನ್ನನ್ನು ನೆನಪು ಮಾಡಿರಿ. ಗೀತೆಯಲ್ಲಿಯೂ ಇದೆ, ಭಗವಾನುವಾಚ- ಕಾಮಮಹಾಶತ್ರು ಎಂದು. ಈ ಅಕ್ಷರವನ್ನೂ ಓದುತ್ತಾರೆ ಆದರೆ ವಿಕಾರವನ್ನು ಗೆಲ್ಲುತ್ತಾರೆಯೇ? ಭಗವಂತ ಯಾವಾಗ ಹೇಳಿದರು? 5000 ವರ್ಷಗಳಾಯಿತು. ಈಗ ಪುನಃ ಹೇಳುತ್ತಿದ್ದಾರೆ- ಮಕ್ಕಳೇ, ಕಾಮ ಮಹಾಶತ್ರುವಾಗಿದೆ. ಇದನ್ನು ಜಯಿಸಿರಿ. ಇದು ಆದಿ-ಮಧ್ಯ-ಅಂತ್ಯ ದುಃಖ ಕೊಡುವಂತಹದ್ದಾಗಿದೆ. ಮುಖ್ಯವಾದುದು ಕಾಮದ ಮಾತಾಗಿದೆ. ಇದಕ್ಕಾಗಿಯೇ ಪತಿತರೆಂದು ಹೇಳಲಾಗುತ್ತದೆ. ಈ ಚಕ್ರವು ಹೇಗೆ ಸುತ್ತುತ್ತದೆ? ನಾವು ಪತಿತರಾದಾಗ ಡ್ರಾಮಾನುಸಾರ ತಂದೆಯು ಮತ್ತೆ ಪಾವನರನ್ನಾಗಿ ಮಾಡುತ್ತಾರೆಂಬುದು ಈಗ ಅರ್ಥವಾಗಿದೆ. ತಂದೆಯು ಪದೇ-ಪದೇ ಹೇಳುತ್ತಾರೆ- ಮೊಟ್ಟಮೊದಲು ತಂದೆಯನ್ನು ನೆನಪು ಮಾಡಿರಿ. ಶ್ರೀಮತದಂತೆ ನಡೆದಾಗಲೇ ನೀವು ಶ್ರೇಷ್ಠರಾಗುವಿರಿ. ಮೊದಲು ನಾವು ಶ್ರೇಷ್ಠರಾಗಿದ್ದೆವು, ನಂತರ ಭ್ರಷ್ಟರಾದೆವೆಂದೂ ತಿಳಿದುಕೊಂಡಿದ್ದೀರಿ. ಈಗ ಮತ್ತೆ ಶ್ರೇಷ್ಠರಾಗುವ ಪುರುಷಾರ್ಥ ಮಾಡುತ್ತಿದ್ದೀರಿ. ದೈವೀಗುಣಗಳನ್ನು ಧಾರಣೆ ಮಾಡಿಕೊಳ್ಳಿ. ಯಾರಿಗೂ ದುಃಖ ಕೊಡಬೇಡಿ, ಎಲ್ಲರಿಗೆ ಮಾರ್ಗ ತಿಳಿಸುತ್ತಾ ಹೋಗಿ. ತಂದೆಯು ಹೇಳುತ್ತಾರೆ- ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪವು ಕಳೆಯುವುದು. ಪತಿತ-ಪಾವನನೆಂದು ನೀವು ನನಗೇ ಹೇಳುತ್ತೀರಲ್ಲವೆ. ಆದರೆ ಪತಿತ-ಪಾವನ ತಂದೆಯು ಹೇಗೆ ಬಂದು ಪಾವನರನ್ನಾಗಿ ಮಾಡುತ್ತಾರೆಂಬುದು ಯಾರಿಗೂ ತಿಳಿದಿಲ್ಲ. ಕಲ್ಪದ ಮೊದಲೂ ಸಹ ತಂದೆಯು ಹೇಳಿದ್ದರು- ನನ್ನೊಬ್ಬನನ್ನೇ ನೆನಪು ಮಾಡಿರಿ, ಇದು ಯೋಗಾಗ್ನಿಯಾಗಿದೆ. ಇದರಿಂದ ಪಾಪವು ನಾಶವಾಗುತ್ತದೆ, ತುಕ್ಕುಕಳೆದಾಗ ಆತ್ಮವು ಪವಿತ್ರವಾಗುತ್ತದೆ. ಚಿನ್ನದಲ್ಲಿಯೇ ಲೋಹವನ್ನು ಬೆರೆಸುತ್ತಾರೆ ಆಗ ಅಂತದ್ದೇ ಆಭರಣವು ತಯಾರಾಗುತ್ತದೆ. ಆತ್ಮದಲ್ಲಿ ಹೇಗೆ ತುಕ್ಕುಹಿಡಿದಿದೆ, ಅದನ್ನು ಹೇಗೆ ತೆಗೆಯಬೇಕೆಂದು ಈಗ ತಂದೆಯು ತಿಳಿಸಿದ್ದಾರೆ. ತಂದೆಯದೂ ಡ್ರಾಮಾದಲ್ಲಿ ಪಾತ್ರವಿದೆ, ಅವರು ಬಂದು ಮಕ್ಕಳನ್ನು ಆತ್ಮಾಭಿಮಾನಿಯನ್ನಾಗಿ ಮಾಡುತ್ತಾರೆ. ಜೊತೆಗೆ ಪವಿತ್ರರಾಗಲೂಬೇಕಾಗಿದೆ. ನೀವು ತಿಳಿದುಕೊಂಡಿದ್ದೀರಿ- ಸತ್ಯಯುಗದಲ್ಲಿ ವೈಷ್ಣವರಾಗಿದ್ದೆವು, ಪವಿತ್ರ ಗೃಹಸ್ಥ ಆಶ್ರಮವಾಗಿತ್ತು, ನಾವೀಗ ಪವಿತ್ರರಾಗಿ ವಿಷ್ಣುಪುರಿಗೆ ಮಾಲೀಕರಾಗುತ್ತೇವೆ. ಸತ್ಯ-ಸತ್ಯವಾದ ವೈಷ್ಣವರು ನೀವು ಮಕ್ಕಳಾಗಿದ್ದೀರಿ. ಡಬಲ್ ವೈಷ್ಣವರಾಗುತ್ತೀರಿ, ಅವರು ವಿಕಾರಿ ವೈಷ್ಣವಧರ್ಮದವರಾಗಿದ್ದಾರೆ, ನೀವು ನಿರ್ವಿಕಾರಿ ವೈಷ್ಣವ ಧರ್ಮದವರಾಗುತ್ತೀರಿ. ಈಗ ಮೊದಲನೆಯದಾಗಿ ತಂದೆಯನ್ನು ನೆನಪು ಮಾಡುತ್ತೀರಿ ಮತ್ತು ತಂದೆಯಲ್ಲಿರುವ ಜ್ಞಾನವನ್ನೂ ಸಹ ಧಾರಣೆ ಮಾಡಿಕೊಳ್ಳುತ್ತೀರಿ. ಇದರಿಂದಲೇ ನೀವು ರಾಜರಿಗೂ ರಾಜರಾಗುತ್ತೀರಿ, ಅವರು ಒಂದು ಜನ್ಮಕ್ಕಾಗಿ ಅಲ್ಪಕಾಲದ ರಾಜರಾಗುತ್ತಾರೆ. ನಿಮ್ಮ ರಾಜ್ಯವು 21 ಪೀಳಿಗೆ ಅರ್ಥಾತ್ ಪೂರ್ಣಸಮಯ ರಾಜ್ಯಭಾರ ಮಾಡುತ್ತೀರಿ. ಅಲ್ಲೆಂದೂ ಅಕಾಲಮೃತ್ಯುವಾಗುವುದಿಲ್ಲ. ನೀವು ಕಾಲದ ಮೇಲೆ ಜಯಗಳಿಸುತ್ತೀರಿ. ಸಮಯವು ಮುಗಿದಾಗ ಈಗ ಈ ಹಳೆಯ ಪೆÇರೆಯನ್ನು ಬಿಟ್ಟು ಹೊಸದನ್ನು ಪಡೆಯಬೇಕೆಂದು ತಿಳಿಯುತ್ತೀರಿ. ನಿಮಗೆ ಸಾಕ್ಷಾತ್ಕಾರವಾಗಲಿದೆ. ಖುಷಿಯ ವಾದ್ಯಗಳು ಮೊಳಗುತ್ತಿರುತ್ತವೆ. ತಮೋಪ್ರಧಾನ ಶರೀರವನ್ನು ಬಿಟ್ಟು ಸತೋಪ್ರಧಾನ ಶರೀರವನ್ನು ತೆಗೆದುಕೊಳ್ಳುವುದು ಖುಷಿಯ ಮಾತಲ್ಲವೆ. ಅಲ್ಲಿ 150 ವರ್ಷ ಆಯಸ್ಸಿರುತ್ತದೆ. ಇಲ್ಲಿ ಅಕಾಲಮೃತ್ಯುವಾಗುತ್ತಿರುತ್ತದೆ ಏಕೆಂದರೆ ಭೋಗಿಗಳಾಗಿದ್ದಾರೆ. ಯಾವ ಮಕ್ಕಳ ಯೋಗವು ಯಥಾರ್ಥವಾಗಿದೆಯೋ ಅವರ ಸರ್ವಕರ್ಮೇಂದ್ರಿಯಗಳು ಯೋಗಬಲದಿಂದ ವಶದಲ್ಲಿರುತ್ತವೆ. ಪೂರ್ಣ ಯೋಗದಲ್ಲಿದ್ದಾಗ ಕರ್ಮೇಂದ್ರಿಯಗಳು ಶೀತಲವಾಗುತ್ತವೆ. ಸತ್ಯಯುಗದಲ್ಲಿ ನಿಮಗೆ ಯಾವುದೇ ಕರ್ಮೇಂದ್ರಿಯಗಳು ಮೋಸ ಮಾಡುವುದಿಲ್ಲ. ಕರ್ಮೇಂದ್ರಿಯಗಳು ವಶದಲ್ಲಿಲ್ಲ ಎಂದು ಎಂದೂ ಹೇಳುವುದಿಲ್ಲ, ನೀವು ಬಹಳ ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ಇದನ್ನೇ ಬೃಹಸ್ಪತಿ ಅವಿನಾಶಿ ದೆಶೆಯೆಂದು ಹೇಳಲಾಗುತ್ತದೆ. ವೃಕ್ಷಪತಿ ಮನುಷ್ಯಸೃಷ್ಟಿಯ ಬೀಜರೂಪ ತಂದೆಯಾಗಿದ್ದಾರೆ. ಬೀಜ ಮೇಲಿದ್ದಾರೆ, ಎಲ್ಲರೂ ಅವರನ್ನು ಮೇಲೆ ನೆನಪು ಮಾಡುತ್ತಾರೆ. ಆತ್ಮವು ತನ್ನ ತಂದೆಯನ್ನು ನೆನಪು ಮಾಡುತ್ತದೆ. ನೀವು ಮಕ್ಕಳಿಗೇ ಗೊತ್ತಿದೆ- ಬೇಹದ್ದಿನ ತಂದೆಯು ನಮಗೆ ಓದಿಸುತ್ತಾರೆ. ಅವರು ಒಂದೇಬಾರಿ ಅಮರಕಥೆಯನ್ನು ತಿಳಿಸಲು ಬರುತ್ತಾರೆ. ಅಮರಕಥೆಯೆಂದಾದರೂ ಹೇಳಿ, ಸತ್ಯನಾರಾಯಣನ ಕಥೆಯೆಂದಾದರೂ ಹೇಳಿ, ಇದರ ಅರ್ಥವೂ ಮನುಷ್ಯರಿಗೆ ಗೊತ್ತಿಲ್ಲ. ಸತ್ಯನಾರಾಯಣನ ಕಥೆಯಿಂದ ನರನಿಂದ ನಾರಾಯಣನಾಗುತ್ತೀರಿ. ಅಮರಕಥೆಯಿಂದ ಅಮರರಾಗುತ್ತೀರಿ. ತಂದೆಯು ಪ್ರತಿಯೊಂದು ಮಾತನ್ನು ಸ್ಪಷ್ಟಮಾಡಿ ತಿಳಿಸುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1) ಯೋಗಬಲದಿಂದ ತಮ್ಮ ಸರ್ವ ಕರ್ಮೇಂದ್ರಿಯಗಳನ್ನು ವಶದಲ್ಲಿಟ್ಟುಕೊಳ್ಳಬೇಕು. ಒಬ್ಬ ವೃಕ್ಷಪತಿ ತಂದೆಯ ನೆನಪಿನಲ್ಲಿರಬೇಕಾಗಿದೆ. ಸತ್ಯವೈಷ್ಣವರು ಅರ್ಥಾತ್ ಪವಿತ್ರರಾಗಬೇಕಾಗಿದೆ.

2) ಬೆಳಗ್ಗೆ ಎದ್ದು ಮೊದಲ ಪಾಠವನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ- ನಾನಾತ್ಮನಾಗಿದ್ದೇನೆ, ಶರೀರವಲ್ಲ. ನಮ್ಮ ಆತ್ಮಿಕ ತಂದೆಯು ನಮಗೆ ಓದಿಸುತ್ತಾರೆ. ಈ ದುಃಖದ ಪ್ರಪಂಚವು ಈಗ ಬದಲಾಗಲಿದೆ.... ಹೀಗೆ ಬುದ್ಧಿಯಲ್ಲಿ ಇಡೀ ಜ್ಞಾನದ ಸ್ಮರಣೆ ನಡೆಯುತ್ತಿರಲಿ.

ವರದಾನ:
ಪ್ರತಿ ಖಜಾನೆಯನ್ನು ಕಾರ್ಯದಲ್ಲಿ ತೊಡಗಿಸಿ ಪದಮದಷ್ಟು ಸಂಪಾದನೆ ಜಮಾ ಮಾಡುವಂತಹ ಪದಮಾಪದಮ ಭಾಗ್ಯಶಾಲಿ ಭವ

ಪ್ರತಿಯೊಂದು ಸೆಕೆಂಡ್ ಪದಮದಷ್ಟು ಸಂಪಾದನೆ ಜಾಮಾ ಮಾಡಿಕೊಳ್ಳುವ ವರದಾನ ಡ್ರಾಮದಲ್ಲಿ ಸಂಗಮದ ಸಮಯಕ್ಕೆ ಸಿಕ್ಕಿದೆ. ಈ ರೀತಿಯ ವರದಾನವನ್ನು ಸ್ವಯಂ ಪ್ರತಿ ಜಮಾ ಮಾಡಿಕೊಳ್ಳಿ, ಹಾಗೆಯೇ ಸಂಕಲ್ಪದ ಖಜಾನೆಯನ್ನು, ಜ್ಞಾನದ ಖಜಾನೆಯನ್ನು, ಸ್ಥೂಲ ಧನ ರೂಪಿ ಖಜಾನೆಯನ್ನು ಕಾರ್ಯದಲ್ಲಿ ತೊಡಗಿಸಿ ಪದಮದಷ್ಟು ಸಂಪಾದನೆಯನ್ನು ಜಮಾ ಮಾಡಿ ಏಕೆಂದರೆ ಈ ಸಮಯದಲ್ಲಿ ಸ್ಥೂಲ ಧನವೂ ಸಹ ಈಶ್ವರಾರ್ಥವಾಗಿ ಸಮರ್ಪಣೆ ಮಾಡುವುದರಿಂದ ಒಂದು ನಯಾಪೈಸೆಯೂ ರತ್ನದ ಸಮಾನ ಬೆಲೆಯುಳ್ಳದ್ದಾಗಿಬಿಡುತ್ತದೆ-ಆದ್ದರಿಂದ ಎಲ್ಲಾ ಖಜಾನೆಗಳನ್ನು ಸ್ವಯಂನ ಪ್ರತಿ ಅಥವಾ ಸೇವೆಯ ಪ್ರತಿ ಕಾರ್ಯದಲ್ಲಿ ತೊಡಗಿಸಿದಾಗ ಪದಮಾಪದಮ ಭಾಗ್ಯಶಾಲಿಗಳಾಗಿಬಿಡುವಿರಿ.

ಸ್ಲೋಗನ್:
ಎಲ್ಲಿ ಹೃದಯದ ಸ್ನೇಹ ಇದೆ ಅಲ್ಲಿ ಎಲ್ಲರ ಸಹಯೋಗ ಸಹಜವಾಗಿ ಪ್ರಾಪ್ತಿಯಗುವುದು.

ಅವ್ಯಕ್ತ ಸೂಚನೆಗಳು- ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ

ಈಗ ಈ ರೀತಿ ಪಾರದರ್ಶಕ ಆಗಿಬಿಡಿ- ಹೇಗೆ ನಿಮ್ಮ ಶರೀರದಲ್ಲಿ ಆತ್ಮ ವಿರಾಜಮಾನವಾಗಿದೆ, ಅದು ಸ್ಪಷ್ಟವಾಗಿ ಎಲ್ಲರಿಗೂ ಕಾಣಿಸಲಿ. ನಿಮ್ಮ ಆತ್ಮಿಕ ಸ್ವರೂಪ ಅವರಿಗೆ ತಮ್ಮ ಆತ್ಮಿಕ ಸ್ವರೂಪದ ಸಾಕ್ಷಾತ್ಕಾರ ಮಾಡಿಸಲಿ, ಇದಕ್ಕೆ ಹೇಳಲಾಗುತ್ತದೆ ಅವ್ಯಕ್ತ ಅಥವಾ ಆತ್ಮಿಕ ಸ್ಥಿತಿಯ ಅನುಭವ ಮಾಡಿಸುವುದು.