23.09.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ಪ್ರತೀ
ಮಾತಿನಲ್ಲಿ ಯೋಗ ಬಲದಿಂದ ಕೆಲಸವನ್ನು ತೆಗೆದುಕೊಳ್ಳಿ, ತಂದೆಯೊಂದಿಗೆ ಏನನ್ನೂ ಕೇಳುವ ಮಾತಿಲ್ಲ,
ನೀವು ಈಶ್ವರೀಯ ಸಂತಾನರಾಗಿದ್ದೀರಿ ಆದ್ದರಿಂದ ಯಾವುದೇ ಆಸುರೀ ಕಾರ್ಯವನ್ನು ಮಾಡಬೇಡಿ"
ಪ್ರಶ್ನೆ:
ನಿಮ್ಮ ಈ
ಯೋಗಬಲದ ಚಮತ್ಕಾರವೇನು?
ಉತ್ತರ:
ಈ ಯೋಗಬಲದಿಂದಲೇ
ನಿಮ್ಮ ಎಲ್ಲಾ ಕರ್ಮೇಂದ್ರಿಯಗಳು ವಶವಾಗಿ ಬಿಡುತ್ತದೆ. ಯೋಗಬಲವಿಲ್ಲದೆ ನೀವು ಪಾವನರಾಗಲು
ಸಾಧ್ಯವಿಲ್ಲ. ಯೋಗಬಲದಿಂದಲೇ ಇಡೀ ಸೃಷ್ಟಿಯು ಪಾವನವಾಗುತ್ತದೆ ಆದ್ದರಿಂದ ಪಾವನರಾಗಲು ಹಾಗೂ
ಭೋಜನವನ್ನು ಶುದ್ಧ ಮಾಡಿಕೊಳ್ಳಲು ನೆನಪಿನ ಯಾತ್ರೆಯಲ್ಲಿರಿ, ಯುಕ್ತಿಯಿಂದ ನಡೆಯಿರಿ, ನಮ್ರತೆಯಿಂದ
ವ್ಯವಹಾರ ಮಾಡಿ.
ಓಂ ಶಾಂತಿ.
ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಆತ್ಮಿಕ ತಂದೆಯು ಸ್ವರ್ಗದ ಹಾಗೂ ಹೊಸ
ಪ್ರಪಂಚದ ಸ್ಥಾಪನೆಯನ್ನು ಹೇಗೆ ಮಾಡುತ್ತಾರೆಂದು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ನೀವು
ತಂದೆಯಿಂದ ಯಾವುದೇ ಪ್ರಕಾರದ ಬೇಡಿಕೆಯನ್ನಿಡುವುದಿಲ್ಲ. ತಂದೆಯು ಎಲ್ಲವನ್ನೂ ತಿಳಿಸುತ್ತಾರೆ
ಅಂದಮೇಲೆ ಮತ್ತೇನನ್ನೂ ಕೇಳುವ ಅವಶ್ಯಕತೆಯಿರುವುದಿಲ್ಲ, ತಾವಾಗಿಯೇ ತಿಳಿಸುತ್ತಿರುತ್ತಾರೆ. ತಂದೆಯು
ಹೇಳುತ್ತಾರೆ - ಕಲ್ಪ-ಕಲ್ಪವೂ ನಾನು ಈ ಭಾರತ ಖಂಡದಲ್ಲಿ ಬಂದು ಏನು ಮಾಡಬೇಕಾಗಿದೆ ಎಂಬುದು ನನಗೆ
ತಿಳಿದಿದೆ, ನೀವು ತಿಳಿದುಕೊಂಡಿಲ್ಲ. ಪ್ರತಿನಿತ್ಯವೂ ತಿಳಿಸುತ್ತಿರುತ್ತಾರೆ - ಭಲೆ ಯಾರಾದರೂ ಒಂದು
ಶಬ್ಧವನ್ನು ಕೇಳದಿದ್ದರೂ ಸಹ ತಂದೆಯು ತಾವಾಗಿಯೇ ಎಲ್ಲವನ್ನೂ ತಿಳಿಸುತ್ತಾರೆ. ಬಾಬಾ
ಆಹಾರ-ಪಾನೀಯಗಳ ವಿಷಯದಲ್ಲಿ ಕಷ್ಟವಾಗುತ್ತದೆಯೆಂದು ಕೆಲವೊಮ್ಮೆ ಕೇಳುತ್ತಾರೆ. ಇದಂತೂ ತಿಳುವಳಿಕೆಯ
ಮಾತಾಗಿದೆ. ತಂದೆಯು ತಿಳಿಸಿದ್ದಾರೆ - ಪ್ರತೀ ಮಾತಿನಲ್ಲಿ ಯೋಗಬಲದಿಂದ ಕೆಲಸ ತೆಗೆದುಕೊಳ್ಳಿ.
ನೆನಪಿನ ಯಾತ್ರೆಯಿಂದ ಕೆಲಸ ತೆಗೆದುಕೊಳ್ಳಿ, ಮತ್ತೆಲ್ಲಿಗೇ ಹೋದರೂ ಸಹ ಮುಖ್ಯ ಮಾತೇನೆಂದರೆ
ತಂದೆಯನ್ನು ಅವಶ್ಯವಾಗಿ ನೆನಪು ಮಾಡಬೇಕಾಗಿದೆ, ಮತ್ತ್ಯಾವುದೇ ಆಸುರೀ ಕೆಲಸವನ್ನು ಮಾಡಬಾರದು. ನಾವು
ಈಶ್ವರೀಯ ಸಂತಾನರಾಗಿದ್ದೇವೆ, ಅವರು ಎಲ್ಲರ ತಂದೆಯಾಗಿದ್ದಾರೆ. ಎಲ್ಲರಿಗಾಗಿ ಒಂದೇ ಶಿಕ್ಷಣವನ್ನು
ಕೊಡುತ್ತಾರೆ. ಮಕ್ಕಳೇ, ಸ್ವರ್ಗದ ಮಾಲೀಕರಾಗಬೇಕೆಂದು ತಂದೆಯು ಶಿಕ್ಷಣ ಕೊಡುತ್ತಾರೆ.
ರಾಜಧಾನಿಯಲ್ಲಿಯೂ ಪದವಿಗಳಿರುತ್ತವೆಯಲ್ಲವೆ. ಪ್ರತಿಯೊಬ್ಬರ ಪುರುಷಾರ್ಥದನುಸಾರ ಪದವಿಯಿರುತ್ತದೆ.
ಮಕ್ಕಳು ಪುರುಷಾರ್ಥ ಮಾಡಬೇಕು ಮತ್ತು ಪ್ರಾಲಬ್ಧವನ್ನೂ ಸಹ ಮಕ್ಕಳೇ ಪಡೆಯಬೇಕಾಗಿದೆ. ಪುರುಷಾರ್ಥ
ಮಾಡಿಸಲು ತಂದೆಯು ಬರುತ್ತಾರೆ. ತಂದೆಯು ಯಾವಾಗ ಬರುತ್ತಾರೆ, ಬಂದು ಏನು ಮಾಡುತ್ತಾರೆ, ಎಲ್ಲಿಗೆ
ಕರೆದುಕೊಂಡು ಹೋಗುತ್ತಾರೆ ಎಂಬುದೇನೂ ನಿಮಗೆ ತಿಳಿದಿರಲಿಲ್ಲ. ತಂದೆಯೇ ಬಂದು ತಿಳಿಸುತ್ತಾರೆ,
ಡ್ರಾಮಾದ ಪ್ಲಾನನುಸಾರ ನೀವು ಎಲ್ಲಿಂದ ಕೆಳಗಿಳಿದಿದ್ದೀರಿ! ಒಮ್ಮೆಲೆ ತುತ್ತ ತುದಿಯಿಂದ ಕೆಳಗೆ
ಬಿದ್ದಿದ್ದೀರಿ. ನಾವು ಯಾರೆಂಬುದು ಸ್ವಲ್ಪವೂ ಬುದ್ಧಿಯಲ್ಲಿ ಬರುವುದಿಲ್ಲ. ಈಗ ಅನುಭೂತಿ
ಮಾಡುತ್ತೀರಲ್ಲವೆ. ತಂದೆಯು ಬಂದು ಏನು ಮಾಡುತ್ತಾರೆಂದು ನಿಮಗೆ ಸ್ವಪ್ನದಲ್ಲಿಯೂ ಇರಲಿಲ್ಲ. ನೀವು
ಏನನ್ನೂ ತಿಳಿದುಕೊಂಡಿರಲಿಲ್ಲ. ಈಗ ತಂದೆಯು ಸಿಕ್ಕಿದ್ದಾರೆ ಆದ್ದರಿಂದ ಇಂತಹ ತಂದೆಯ ಮೇಲೆ
ಬಲಿಹಾರಿಯಾಗಬೇಕೆಂದು ತಿಳಿಯುತ್ತೀರಿ. ಹೇಗೆ ಪತಿವ್ರತಾ ಸ್ತ್ರೀಯು ತನ್ನ ಪತಿಯ ಮೇಲೆ ಎಷ್ಟೊಂದು
ಬಲಿಹಾರಿಯಾಗುತ್ತಾಳೆ! ತನ್ನ ಪತಿಯ ಚಿತೆಯನ್ನೇರುವುದರಲ್ಲಿಯೂ ಹೆದರುವುದಿಲ್ಲ. ಎಷ್ಟೊಂದು
ಧೈರ್ಯವಿರುತ್ತದೆ! ಹಿಂದೆ ಬಹಳ ಮಂದಿ ಹೀಗೆ ಏರುತ್ತಿದ್ದರು. ಇಲ್ಲಾದರೆ ತಂದೆಯು ಇಂತಹ ಯಾವುದೇ
ಕಷ್ಟವನ್ನು ಕೊಡುವುದಿಲ್ಲ. ಭಲೆ ಇಲ್ಲಿ ಜ್ಞಾನ ಚಿತೆಯೆಂದು ಹೆಸರಿದೆ ಆದರೆ ಯಾವುದೇ ಸುಡುವ
ಮಾತಿಲ್ಲ. ತಂದೆಯು ಹೇಗೆ ಬೆಣ್ಣೆಯಲ್ಲಿ ಕೂದಲು ತೆಗೆದಂತೆ ತಿಳಿಸುತ್ತಾರೆ. ಮಕ್ಕಳಿಗೆ ತಿಳಿದಿದೆ,
ಅವಶ್ಯವಾಗಿ ತಲೆಯ ಮೇಲೆ ಜನ್ಮ-ಜನ್ಮಾಂತರದ ಹೊರೆಯಿದೆ. ಕೇವಲ ಒಬ್ಬರು ಅಜಾಮೀಳರಲ್ಲ, ಪ್ರತಿಯೊಬ್ಬ
ಮನುಷ್ಯನು ಒಬ್ಬರಿಗಿಂತ ಇನ್ನೊಬ್ಬರು ಹೆಚ್ಚು ಅಜಾಮೀಳ, ಪಾಪಿಗಳಾಗಿದ್ದಾರೆ. ಹಿಂದಿನ ಜನ್ಮಗಳಲ್ಲಿ
ಏನೇನು ಮಾಡಿದ್ದೇವೆಂದು ಮನುಷ್ಯರಿಗೇನು ಗೊತ್ತು? ನೀವೀಗ ತಿಳಿದುಕೊಂಡಿದ್ದೀರಿ - ಪಾಪಗಳನ್ನೇ
ಮಾಡಿದ್ದೇವೆ ಎಂದು, ವಾಸ್ತವದಲ್ಲಿ ಯಾರೊಬ್ಬರೂ ಪುಣ್ಯಾತ್ಮನಿಲ್ಲ. ಎಲ್ಲರೂ ಪಾಪಾತ್ಮರಾಗಿದ್ದಾರೆ.
ಪುಣ್ಯ ಮಾಡಿದರೆ ತಾನೆ ಪುಣ್ಯಾತ್ಮರಾಗುವರು. ಸತ್ಯಯುಗದಲ್ಲಿಯೇ ಪುಣ್ಯಾತ್ಮರಿರುತ್ತಾರೆ, ಯಾರಾದರೂ
ಆಸ್ಪತ್ರೆಯನ್ನು ಕಟ್ಟಿಸಬಹುದು ಆದರೆ ಏನಾಯಿತು? ಏಣಿಯನ್ನು ಕೆಳಗೆ ಇಳಿಯುವುದರಿಂದಂತೂ
ಪಾರಾಗುವುದಿಲ್ಲ ಅಲ್ಲವೆ. ಏರುವ ಕಲೆಯಂತೂ ಆಗುವುದಿಲ್ಲ, ಇನ್ನೂ ಇಳಿಯುತ್ತಲೇ ಹೋಗುತ್ತಾರೆ. ಈ
ತಂದೆಯಂತೂ ಇಷ್ಟು ಪ್ರಿಯರಾಗಿದ್ದಾರೆ ಇವರ ಮೇಲೆ ಜೀವಿಸಿದ್ದಂತೆಯೇ ಬಲಿಹಾರಿಯಾಗಬೇಕೆಂದು
ಹೇಳುತ್ತಾರೆ, ಏಕೆಂದರೆ ತಂದೆಯು ಪತಿಯರ ಪತಿ, ತಂದೆಯರ ತಂದೆ, ಎಲ್ಲರಿಗಿಂತ ಶ್ರೇಷ್ಠರಾಗಿದ್ದಾರೆ.
ತಂದೆಯು ಮಕ್ಕಳನ್ನು ಈಗ
ಜಾಗೃತಗೊಳಿಸುತ್ತಿದ್ದಾರೆ. ಇಂತಹ ತಂದೆಯು ಯಾರು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ, ಎಷ್ಟು
ಸಾಧಾರಣರಾಗುತ್ತಾರೆ. ಆರಂಭದಲ್ಲಿ ಮಕ್ಕಳಿಗೆ ಕಾಯಿಲೆ ಬಂದಾಗ ತಂದೆಯೇ ಸ್ವಯಂ ಅವರ ಸೇವೆ
ಮಾಡುತ್ತಿದ್ದರು. ಅಹಂಕಾರವೇನೂ ಇರಲಿಲ್ಲ. ಬಾಪ್ದಾದಾ ಶ್ರೇಷ್ಠಾತಿ ಶ್ರೇಷ್ಠರಾಗಿದ್ದಾರೆ.
ತಿಳಿಸುತ್ತಾರೆ - ಅಂತಹ ಕರ್ಮವನ್ನು ನಾನು ಇವರಿಂದ ಮಾಡಿಸುತ್ತೇನೆ ಇಲ್ಲವೆ ಮಾಡುತ್ತೇನೆ. ಇಬ್ಬರೂ
ಒಂದಾಗಿ ಬಿಡುತ್ತಾರೆ, ತಂದೆಯು ಮಾಡುತ್ತಾರೆಯೇ, ದಾದಾರವರು ಮಾಡುತ್ತಾರೆಯೇ ಎಂದು ತಿಳಿಯುವುದೇ
ಇಲ್ಲ. ಕರ್ಮ, ಅಕರ್ಮ, ವಿಕರ್ಮದ ಗತಿಯನ್ನು ತಂದೆಯೇ ತಿಳಿಸುತ್ತಾರೆ. ತಂದೆಯು ಬಹಳ
ಶ್ರೇಷರಾಗಿದ್ದಾರೆ ಆದರೆ ಮಾಯೆಯದು ಎಷ್ಟೊಂದು ಪ್ರಭಾವವಿದೆ! ಈ ರೀತಿ ಮಾಡಬೇಡಿ ಎಂದು ಈಶ್ವರ
ತಂದೆಯು ತಿಳಿಸುತ್ತಾರೆ ಆದರೂ ಸಹ ಪಾಲಿಸುವುದೇ ಇಲ್ಲ. ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ,
ಈ ಕೆಲಸವನ್ನು ಮಾಡಬೇಡಿ ಆದರೂ ಉಲ್ಟಾ ಕೆಲಸವನ್ನು ಮಾಡಿ ಬಿಡುತ್ತಾರೆ. ಉಲ್ಟಾ ಕೆಲಸ ಮಾಡುವುದನ್ನೇ
ನಿಷೇಧಿಸುತ್ತೇವಲ್ಲವೆ. ಆದರೆ ಮಾಯೆಯೂ ಸಹ ಬಹಳ ಶಕ್ತಿಶಾಲಿಯಾಗಿದೆ, ಎಂದೂ ತಂದೆಯನ್ನು ಮರೆಯಬಾರದು.
ಏನಾದರೂ ಮಾಡಲಿ, ಹೊಡೆಯಲಿ, ಬಡೆಯಲಿ ತಂದೆಯು ಈ ರೀತಿಯೇನೂ ಮಾಡುವುದಿಲ್ಲ ಆದರೆ ಕೇವಲ ಉದಾಹರಣೆಗೆ
ಹೇಳಲಾಗುತ್ತದೆ. ನೀವು ಪ್ರೀತಿಯಾದರೂ ಕೊಡಿ ಅಥವಾ ತಿರಸ್ಕಾರ ಮಾಡಿ ನಾವೆಂದೂ ನಿಮ್ಮ ಧರಣಿಯನ್ನು
ಬಿಟ್ಟು ಹೋಗುವುದಿಲ್ಲವೆಂದು ಗೀತೆಯೂ ಇದೆ. ನಮಗಾಗಿ ಈ ಪ್ರಪಂಚದಲ್ಲಿ ಇರುವುದಾದರೂ ಏನು! ಬುದ್ಧಿಯು
ಹೇಳುತ್ತದೆ - ನೀವು ಹೋಗುವುದಾದರೂ ಎಲ್ಲಿಗೆ? ತಂದೆಯು ರಾಜ್ಯಭಾಗ್ಯವನ್ನು ಕೊಡುತ್ತಾರೆ ಅಂದಮೇಲೆ
ಇದು ಮತ್ತೆಂದಾದರೂ ಸಿಗುತ್ತದೆಯೇ? ಇದು ಇನ್ನೊಂದು ಜನ್ಮದಲ್ಲಿಯೂ ಸಿಗುವುದಿಲ್ಲ. ಇವರು ಪಾರಲೌಕಿಕ
ತಂದೆಯಾಗಿದ್ದಾರೆ. ನಿಮ್ಮನ್ನು ಬೇಹದ್ದಿನ ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಾರೆ. ಮಕ್ಕಳೇ, ದೈವೀ
ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕು. ಅದಕ್ಕಾಗಿ ತಂದೆಯು ಸಲಹೆ ಕೊಡುತ್ತಾರೆ. ತಮ್ಮ ಪೋಲಿಸ್
ಇತ್ಯಾದಿ., ಕೆಲಸವನ್ನೂ ಮಾಡಿ, ಇಲ್ಲವಾದರೆ ಅವರು ನೌಕರಿಯಿಂದ ಪದಚ್ಯುತ ಮಾಡುತ್ತಾರೆ. ಆದ್ದರಿಂದ
ತಮ್ಮ ಕೆಲಸವನ್ನಂತೂ ಮಾಡಲೇಬೇಕಾಗಿದೆ, ಕೆಲವೊಮ್ಮೆ ಕಣ್ಣು ಬಿಡಬೇಕಾಗುವುದು ಆದರೆ ಎಷ್ಟು ಸಾಧ್ಯವೋ
ಅಷ್ಟು ಪ್ರೀತಿಯಿಂದ ಕೆಲಸ ತೆಗೆದುಕೊಳ್ಳಿ ಇಲ್ಲವಾದರೆ ಯುಕ್ತಿಯಿಂದ ಭಯ ಪಡಿಸಿ ಆದರೆ
ಹೊಡೆಯುವಂತಿಲ್ಲ. ತಂದೆಗೆ ಎಷ್ಟೊಂದು ಮಂದಿ ಮಕ್ಕಳಿದ್ದಾರೆ! ತಂದೆಗೂ ಮಕ್ಕಳ ಚಿಂತೆಯಿರುತ್ತದೆ.
ಮೂಲ ಮಾತು ಪವಿತ್ರರಾಗಿರಬೇಕಾಗಿದೆ. ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡಿ ಎಂದು ನೀವು
ಜನ್ಮ-ಜನ್ಮಾಂತರದಿಂದ ಕರೆದಿರಲ್ಲವೆ. ಆದರೆ ಅರ್ಥವೇನನ್ನೂ ತಿಳಿದುಕೊಂಡಿಲ್ಲ. ಕರೆಯುತ್ತೀರಿ
ಅಂದಮೇಲೆ ಪತಿತರಲ್ಲವೆ, ಇಲ್ಲದಿದ್ದರೆ ಕರೆಯುವ ಅವಶ್ಯಕತೆಯೇ ಇಲ್ಲ. ಪೂಜೆಯ ಅವಶ್ಯಕತೆಯು ಇಲ್ಲ.
ತಂದೆಯು ತಿಳಿಸುತ್ತಾರೆ - ಅಬಲೆಯರ ಮೇಲೆ ಎಷ್ಟೊಂದು ಅತ್ಯಾಚಾರಗಳಾಗುತ್ತವೆ, ಸಹನೆ ಮಾಡಲೇಬೇಕಾಗಿದೆ.
ತಂದೆಯು ಯುಕ್ತಿಗಳನ್ನೂ ತಿಳಿಸುತ್ತಾರೆ. ಬಹಳ ನಮ್ರತೆಯಿಂದ ನಡೆದುಕೊಳ್ಳಿ. ತಿಳಿಸಿ, ತಾವಂತೂ
ಭಗವಂತನಾಗಿದ್ದೀರಿ ಅಂದಮೇಲೆ ಏನನ್ನು ಬೇಡುತ್ತೀರಿ? ಮಾಂಗಲ್ಯವನ್ನು ಕಟ್ಟುವ ಸಮಯದಲ್ಲಿ
ಹೇಳುತ್ತಾರೆ - ನಾನು ನಿಮ್ಮ ಪತಿ, ಈಶ್ವರ, ಗುರು, ಸರ್ವಸ್ವವಾಗಿದ್ದೇನೆ. ಈಗ ನಾನು ಪವಿತ್ರವಾಗಿರ
ಬಯಸುತ್ತೇನೆ ಎಂದರೆ ನೀವೇಕೆ ತಡೆಯುತ್ತೀರಿ? ಭಗವಂತನಿಗೆ ಪತಿತ-ಪಾವನನೆಂದು ಕರೆಯಲಾಗುತ್ತದೆಯಲ್ಲವೆ.
ತಾವೇ ಪಾವನರನ್ನಾಗಿ ಮಾಡುವವರಾಗಿ ಬಿಡಿ. ಹೀಗೆ ಪ್ರೀತಿಯಿಂದ, ನಮ್ರತೆಯಿಂದ ಮಾತನಾಡಬೇಕು. ಅವರು
ಕ್ರೋಧ ಮಾಡಿದರೂ ನೀವು ಹೂವಿನ ಮಳೆ ಸುರಿಸಿ. ಭಲೆ ಹೊಡೆಯುತ್ತಾರೆ ನಂತರ ಪಶ್ಚಾತ್ತಾಪ ಪಡುತ್ತಾರೆ.
ಹೇಗೆ ಮಧ್ಯಪಾನ ಸೇವಿಸಿದಾಗ ಬಹಳ ನಶೆಯೇರುತ್ತದೆ, ತಮ್ಮನ್ನು ರಾಜನೆಂದು ತಿಳಿಯುತ್ತಾರೆ ಹಾಗೆಯೇ ಈ
ಪ್ರಪಂಚವೂ ಸಹ ಇಂತಹ ವಸ್ತುವಾಗಿದೆ ಅದರ ಮಾತೇ ಕೇಳಬೇಡಿ. ಪಶ್ಚಾತ್ತಾಪ ಪಡುತ್ತಾರೆ ಆದರೆ
ಹವ್ಯಾಸವಾಗಿರುವುದರಿಂದ ಅದು ಬಿಟ್ಟು ಹೋಗುವುದೇ ಇಲ್ಲ. ಒಂದೆರಡು ಬಾರಿ ವಿಕಾರದಲ್ಲಿ ಹೋಗಿ ನಂತರ
ಅದರ ನಶೆಯೇರಿತೆಂದರೆ ಮತ್ತೆ ಬೀಳುತ್ತಲೇ ಇರುತ್ತಾರೆ. ಹೇಗೆ ನಶೆಯ ಪದಾರ್ಥಗಳು ಖುಷಿಯಲ್ಲಿ
ತರುತ್ತವೆ, ವಿಕಾರವೂ ಹಾಗೆಯೇ. ಇಲ್ಲಿ ಬಹಳ ಪರಿಶ್ರಮವಿದೆ, ಯೋಗಬಲವಿಲ್ಲದೆ ಯಾವುದೇ
ಕರ್ಮೇಂದ್ರಿಯವನ್ನು ವಶ ಪಡಿಸಿಕೊಳ್ಳಲು ಸಾಧ್ಯವಿಲ್ಲ. ಯೋಗಬಲದ್ದೇ ಚಮತ್ಕಾರವಿದೆ, ಆದ್ದರಿಂದ
ಹೆಸರು ಪ್ರಸಿದ್ಧವಾಗಿದೆ. ಇಲ್ಲಿ ಯೋಗವನ್ನು ಕಲಿಯಲು ವಿದೇಶದಿಂದಲೂ ಬರುತ್ತಾರೆ, ಶಾಂತಿಯಲ್ಲಿ
ಕುಳಿತಿರುತ್ತಾರೆ. ಮನೆಯಿಂದ ದೂರವಾಗುತ್ತಾರೆ ಆದರೆ ಅದಂತೂ ಅರ್ಧಕಲ್ಪಕ್ಕಾಗಿ ತಾತ್ಕಾಲಿಕ
ಶಾಂತಿಯಾಯಿತು, ಯಾರಿಗೂ ಸತ್ಯ ಶಾಂತಿಯ ಬಗ್ಗೆ ತಿಳಿದೇ ಇಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ,
ನಿಮ್ಮ ಸ್ವಧರ್ಮವು ಶಾಂತಿಯಾಗಿದೆ, ನೀವು ಶರೀರದಿಂದ ಕರ್ಮ ಮಾಡುತ್ತೀರಿ. ಎಲ್ಲಿಯವರೆಗೆ ನೀವು
ಶರೀರ ಧಾರಣೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಆತ್ಮವು ಶಾಂತವಾಗಿರುತ್ತದೆ ಮತ್ತೆ ಎಲ್ಲಿಗೋ ಹೋಗಿ
ಪ್ರವೇಶ ಮಾಡುತ್ತದೆ. ಇಲ್ಲಂತೂ ಕೆಲಕೆಲವರು ಸೂಕ್ಷ್ಮ ಶರೀರದೊಂದಿಗೆ ಅಲೆಯುತ್ತಿರುತ್ತಾರೆ. ಅವರಿಗೆ
ಛಾಯೆಯ ಶರೀರವಿರುತ್ತದೆ, ಅದರಲ್ಲಿ ಕೆಲವರು ದುಃಖ ಕೊಡುವವರಿರುತ್ತಾರೆ, ಇನ್ನೂ ಕೆಲವರು
ಒಳ್ಳೆಯವರಿರುತ್ತಾರೆ. ಇಲ್ಲಿಯೂ ಕೆಲವರು ಭಲೆ ಮನುಷ್ಯರಾಗಿದ್ದರೂ ಸಹ ಯಾರಿಗೂ ದುಃಖವನ್ನೇ
ಕೊಡುವುದಿಲ್ಲ, ಕೆಲವರು ಬಹಳ ದುಃಖ ಕೊಡುತ್ತಾರೆ. ಹೇಗೆ ಸಾಧು-ಮಹಾತ್ಮರಂತೆ ಇರುತ್ತಾರೆ.
ತಂದೆಯು ತಿಳಿಸುತ್ತಾರೆ
- ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳೇ, ನೀವು 5000 ವರ್ಷಗಳ ನಂತರ ಪುನಃ ಬಂದು
ಮಿಲನ ಮಾಡಿದ್ದೀರಿ. ಏನನ್ನು ಪಡೆಯಲು? ನಿಮಗೆ ಏನು ಸಿಗಲಿದೆ ಎಂಬುದನ್ನು ತಂದೆಯು ತಿಳಿಸಿದ್ದಾರೆ.
ಬಾಬಾ, ತಮ್ಮಿಂದ ಏನು ಸಿಗುತ್ತದೆಯೆಂಬ ಪ್ರಶ್ನೆಯೇ ಇಲ್ಲ. ತಾವಂತೂ ಸ್ವರ್ಗದ ರಚಯಿತನಾಗಿದ್ದೀರಿ
ಅಂದಮೇಲೆ ಅವಶ್ಯವಾಗಿ ತಮ್ಮಿಂದ ಸ್ವರ್ಗದ ರಾಜ್ಯಭಾಗ್ಯವೇ ಸಿಗುವುದು. ತಂದೆಯು ತಿಳಿಸುತ್ತಾರೆ -
ಹೀಗೆ ಸ್ವಲ್ಪ ತಿಳಿದುಕೊಂಡು ಹೋದರೂ ಸಹ ಸ್ವರ್ಗದಲ್ಲಿ ಬರುತ್ತಾರೆ. ನಾನು ಸ್ವರ್ಗದ ಸ್ಥಾಪನೆ
ಮಾಡಲು ಬಂದಿದ್ದೇನೆ. ದೊಡ್ಡವರಿಗಿಂತ ದೊಡ್ಡ ಭಗವಂತ ಮತ್ತು ಪ್ರಜಾಪಿತನಾಗಿದ್ದಾರೆ. ವಿಷ್ಣು
ಯಾರೆಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ ಮತ್ತ್ಯಾರಿಗೂ ತಿಳಿದಿಲ್ಲ. ನಾವು ಇವರ
ಮನೆತನದವರಾಗಿದ್ದೇವೆಂದು ನೀವು ಹೇಳುತ್ತೀರಿ. ಈ ಲಕ್ಷ್ಮೀ-ನಾರಾಯಣರು ಸತ್ಯಯುಗದಲ್ಲಿ ರಾಜ್ಯ
ಮಾಡುತ್ತಾರೆ. ಈ ಚಕ್ರ ಇತ್ಯಾದಿಯನ್ನು ವಾಸ್ತವದಲ್ಲಿ ವಿಷ್ಣುವಿಗಿಲ್ಲ. ಇವು ನಾವು ಬ್ರಾಹ್ಮಣರ
ಅಲಂಕಾರಗಳಾಗಿವೆ. ಈಗ ಈ ಜ್ಞಾನವಿದೆ, ಸತ್ಯಯುಗದಲ್ಲಿ ಇದನ್ನು ತಿಳಿಸುವುದಿಲ್ಲ. ಈ ಮಾತುಗಳನ್ನು
ತಿಳಿಸಲು ಈ ಜ್ಞಾನ ಮತ್ತ್ಯಾರಲ್ಲಿಯೂ ಇಲ್ಲ. ನೀವು ಈ 84 ಜನ್ಮಗಳ ಚಕ್ರವನ್ನು ತಿಳಿದುಕೊಂಡಿದ್ದೀರಿ.
ಇದರ ಅರ್ಥವನ್ನು ತಿಳಿಯಲು ಯಾರಿಗೂ ಸಾಧ್ಯವಿಲ್ಲ. ತಂದೆಯು ಮಕ್ಕಳಿಗೆ ತಿಳಿಸಿದ್ದಾರೆ - ಮಕ್ಕಳು
ತಿಳಿದುಕೊಂಡಿದ್ದೀರಿ, ನಮಗಂತೂ ಈ ಅಲಂಕಾರಗಳು ಶೋಭಿಸುವುದಿಲ್ಲ, ನಾವಿನ್ನೂ ಶಿಕ್ಷಣವನ್ನು
ಪಡೆಯುತ್ತಿದ್ದೇವೆ, ಪುರುಷಾರ್ಥ ಮಾಡುತ್ತಿದ್ದೇವೆ. ನಂತರ ಸ್ವದರ್ಶನಚಕ್ರವನ್ನು
ತಿರುಗಿಸುತ್ತಾ-ತಿರುಗಿಸುತ್ತಾ ನಾವು ದೇವತೆಗಳಾಗಿಬಿಡುತ್ತೇವೆ. ಸ್ವದರ್ಶನಚಕ್ರ ಅರ್ಥಾತ್ ರಚಯಿತ
ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳಬೇಕಾಗಿದೆ. ಸೃಷ್ಟಿಚಕ್ರವು ಹೇಗೆ
ಸುತ್ತುತ್ತದೆ0iÉುಂದು ಇಡೀ ಪ್ರಪಂಚದಲ್ಲಿ ಯಾರೂ ತಿಳಿಸಲು ಸಾಧ್ಯವಿಲ್ಲ. ತಂದೆಯು ಎಷ್ಟು ಸಹಜಮಾಡಿ
ತಿಳಿಸಿಕೊಡುತ್ತಾರೆ - ಈ ಸೃಷ್ಟಿಚಕ್ರದ ಆಯಸ್ಸು ಧೀರ್ಘವಾಗಿರಲು ಸಾಧ್ಯವಿಲ್ಲ. ಇಷ್ಟೊಂದುಮಂದಿ
ಮನುಷ್ಯರಿರುವಕಾರಣ ಮನುಷ್ಯರಿರುವ ಸಮಾಚಾರವನ್ನೇ ತಿಳಿಸಲಾಗುತ್ತದೆ. ಆಮೆಗಳೆಷ್ಟಿದೆ,
ಮೀನುಗಳೆಷ್ಟಿದೆ ಎಂದು ತಿಳಿಸುವುದಿಲ್ಲ, ಮನುಷ್ಯರದೇ ಮಾತಿದೆ. ನಿಮ್ಮಿಂದಲೂ ಪ್ರಶ್ನಿಸುತ್ತಾರೆ,
ಎಲ್ಲವನ್ನೂ ತಂದೆಯು ತಿಳಿಸಿಕೊಡುತ್ತಾರೆ. ಕೇವಲ ಅದರ ಮೇಲೆ ಪೂರ್ಣಗಮನ ಕೊಡಬೇಕಾಗಿದೆ.
ತಂದೆಯು ತಿಳಿಸುತ್ತಾರೆ
- ನೀವು ಯೋಗಬಲದಿಂದ ಜನ್ಮಪಡೆಯುತ್ತೀರಿ ಅಂದಮೇಲೆ ಯೋಗಬಲದಿಂದ ಆಹಾರವು ಶುದ್ಧವಾಗಲು ಸಾಧ್ಯವಿಲ್ಲವೆ?
ಒಳ್ಳೆಯದು, ನೀವಂತೂ ಈ ರೀತಿಯಾಗಿದ್ದೀರಿ ಆದರೆ ಮತ್ತ್ಯಾರನ್ನಾದರೂ ತಮ್ಮ ಸಮಾನ ಮಾಡಿಕೊಳ್ಳುತ್ತೀರಾ?
ನೀವೀಗ ತಿಳಿದುಕೊಂಡಿದ್ದೀರಿ - ತಂದೆಯು ಸ್ವರ್ಗದ ರಾಜ್ಯಭಾಗ್ಯವನ್ನು ಕೊಡಲು ಪುನಃ ಬಂದಿದ್ದಾರೆ,
ಅಂದಮೇಲೆ ಇದನ್ನು ತಿರಸ್ಕರಿಸಬಾರದು. ವಿಶ್ವದ ರಾಜ್ಯಭಾಗ್ಯವನ್ನು ತಿರಸ್ಕರಿಸಿದರೆ ಸಮಾಪ್ತಿ.
ಮತ್ತೆ ಹೋಗಿ ಕಸದ ಬುಟ್ಟಿಯಲ್ಲಿ ಬೀಳಬೇಕಾಗುವುದು. ಇಡೀ ಪ್ರಪಂಚವು ಕೊಳಕಾಗಿದೆ ಅಂದಮೇಲೆ ಇದಕ್ಕೆ
ಕಸವೆಂದೇ ಹೇಳುತ್ತಾರೆ. ಪ್ರಪಂಚದ ಸ್ಥಿತಿ ನೋಡಿ ಏನಾಗಿದೆ! ನೀವಂತೂ ತಿಳಿದುಕೊಂಡಿದ್ದೀರಿ - ನಾವು
ವಿಶ್ವದ ಮಾಲೀಕರಾಗುತ್ತೇವೆಂದು ಆದರೆ ಸತ್ಯಯುಗದಲ್ಲಿ ಒಂದೇ ರಾಜ್ಯವಿತ್ತು ಎಂಬುದನ್ನು ಯಾರೂ
ತಿಳಿದುಕೊಳ್ಳುವುದಿಲ್ಲ. ತಮ್ಮ ಅಭಿಮಾನವಿರುತ್ತದೆ ಆದ್ದರಿಂದ ಏನನ್ನೂ ಕೇಳುವುದಿಲ್ಲ. ಇದೆಲ್ಲವೂ
ತಮ್ಮ ಕಲ್ಪನೆ0iÉುಂದು ಹೇಳಿಬಿಡುತ್ತಾರೆ. ಕಲ್ಪನೆಯಿಂದಲೇ ಈ ಶರೀರವು ರಚನೆಯಾಗಿದೆ ಎಂದು
ಹೇಳುತ್ತಾರೆ, ಅರ್ಥವೇನನ್ನೂ ತಿಳಿದುಕೊಂಡಿಲ್ಲ. ಇದು ಈಶ್ವರನ ಕಲ್ಪನೆಯಾಗಿದೆ. ಈಶ್ವರನು ಏನು ಬೇಕೋ
ಅದನ್ನು ಮಾಡಬಲ್ಲರು, ಇದು ಅವರ ಆಟವಾಗಿದೆ ಎಂದು ಏನೇನೋ ಮಾತನಾಡುತ್ತಾರೆ, ಆ ಮಾತನ್ನೇ ಕೇಳಬೇಡಿ.
ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಬಂದಿದ್ದಾರೆ, ಬಾಬಾ ನಾವು ಪ್ರತೀ 5000
ವರ್ಷಗಳ ನಂತರ ತಮ್ಮಿಂದ ಸ್ವರ್ಗದ ಆಸ್ತಿಯನ್ನು ಪಡೆಯುತ್ತೇವೆಂದು ವೃದ್ಧೆಯರೂ ಸಹ ಹೇಳುತ್ತಾರೆ.
ನಾವೀಗ ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯಲು ಬಂದಿದ್ದೇವೆ. ನಿಮಗೆ ತಿಳಿದಿದೆ, ಎಲ್ಲಾ
ಪಾತ್ರಧಾರಿಗಳದು ತಮ್ಮ ಪಾತ್ರವಿದೆ, ಒಬ್ಬರ ಪಾತ್ರವು ಇನ್ನೊಬ್ಬರಿಗೆ ಹೋಲುವುದಿಲ್ಲ. ನೀವು ಪುನಃ
ಇದೇ ನಾಮ-ರೂಪದಲ್ಲಿ ಬಂದು ಇದೇ ಸಮಯದಲ್ಲಿ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುವ ಪುರುಷಾರ್ಥ
ಮಾಡುತ್ತೀರಿ. ಇದು ಎಷ್ಟು ದೊಡ್ಡ ಸಂಪಾದನೆಯಾಗಿದೆ! ಅರೆ ತಂದೆಯು ಹೇಳುತ್ತಾರೆ - ಸ್ವಲ್ಪ ಜ್ಞಾನ
ಕೇಳಿದರೂ ಸಹ ಸ್ವರ್ಗದಲ್ಲಿ ಬಂದುಬಿಡುತ್ತೀರೆಂದು ಆದರೆ ಪ್ರತಿಯೊಬ್ಬ ಮನುಷ್ಯನು ಶ್ರೇಷ್ಠರಾಗುವ
ಪುರುಷಾರ್ಥವನ್ನೇ ಮಾಡುತ್ತಾರಲ್ಲವೆ ಅಂದಾಗ ಮೊದಲು ಪುರುಷಾರ್ಥವಾಗಿದೆ. ಒಳ್ಳೆಯದು-
ಮಧುರಾತಿ ಮಧುರ ಅಗಲಿಹೋಗಿ
ಮರಳಿಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಹೇಗೆ ತಂದೆಯು
ಮಕ್ಕಳ ಸೇವೆ ಮಾಡುತ್ತಾರೆ, ಯಾವುದೇ ಅಹಂಕಾರವಿಲ್ಲ. ಇದೇ ರೀತಿ ತಂದೆಯನ್ನು ಅನುಸರಿಸಬೇಕಾಗಿದೆ.
ತಂದೆಯ ಶ್ರೀಮತದಂತೆ ನಡೆದು ವಿಶ್ವದ ರಾಜ್ಯಭಾಗ್ಯವನ್ನು ಪಡೆಯಬೇಕಾಗಿದೆ. ತಿರಸ್ಕಾರ ಮಾಡಬಾರದು.
2. ತಂದೆಯರ ತಂದೆ,
ಪತಿಯರ ಪತಿ, ಯಾರು ಎಲ್ಲರಿಗಿಂತ ಶ್ರೇಷ್ಠ ಪ್ರಿಯರಾಗಿದ್ದಾರೆಯೋ ಅವರ ಮೇಲೆ ಜೀವಿಸಿದ್ದಂತೆ0iÉುೀ
ಬಲಿಹಾರಿಯಾಗಬೇಕಾಗಿದೆ. ಜ್ಞಾನಚಿತೆಯ ಮೇಲೆ ಕುಳಿತುಕೊಳ್ಳಬೇಕು. ಮರೆವಿನಿಂದಲೂ ಸಹ ಎಂದೂ
ತಂದೆಯನ್ನು ಮರೆತು ಉಲ್ಟಾಕರ್ಮ ಮಾಡಬಾರದು.
ವರದಾನ:
ಖುಶಿಗಳ ಅಕೂಟ
ಖಜಾನೆಯಿಂದ ಭರ್ಪೂರ್ ಸದಾ ನಿಶ್ಚಿಂತ ಚಕ್ರವರ್ತಿ ಭವ
ಖುಶಿಗಳ ಸಾಗರನ ಮೂಲಕ
ಪ್ರತಿ ದಿನ ಖುಶಿಯ ಅಕೂಟ ಖಜಾನೆ ಸಿಗುತ್ತಿರುವುದು ಆದ್ದರಿಂದ ಯಾವುದೇ ಪರಿಸ್ಥಿತಿಯಲ್ಲಿ ಖುಶಿ
ಕಳೆದುಹೋಗಲು ಸಾಧ್ಯವಿಲ್ಲ. ಯಾವುದೇ ಮಾತಿನಬಗ್ಗೆ ಚಿಂತೆಯಾಗಲು ಸಾಧ್ಯವಿಲ್ಲ. ಹೀಗಲ್ಲಾ
ಆಸ್ತಿ,ಪಾಸ್ತಿಗೆ ಏನಾಗುವುದು, ಪರಿವಾರ ಏನಾಗುವುದು, ಪರಿವರ್ತನೆ ಆಗುವುದಲ್ಲವೇ. ಹಳೆಯ
ಪ್ರಪಂಚದಲ್ಲಿ ಎಷ್ಟೇ ಶ್ರೇಷ್ಠರಿರಲಿ ಆದರೆ ಎಲ್ಲವೂ ಹಳೆಯದೇ ಆಗಿದೆ ಆದ್ದರಿಂದ ನಿಶ್ಚಿಂತ
ಚಕ್ರವರ್ತಿಯಾದಿರಿ. ಏನಾಗುವುದೋ ಒಳ್ಳೆಯದೇ ಆಗುವುದು. ಬ್ರಾಹ್ಮಣರಿಗೆ ಎಲ್ಲವೂ ಒಳ್ಳೆಯದೇ, ಯಾವುದೂ
ಸಹಾ ಕೆಟ್ಟದ್ದಲ್ಲ. ನಿಮ್ಮ ಬಳಿ ಇಲ್ಲ ಇಂತಹ ಬಾದ್ಷಾಹಿಇದೆ ಅದನ್ನು ಯಾರು ಕಸಿದುಕೊಳ್ಳಲು
ಸಾಧ್ಯವಿಲ್ಲ.
ಸ್ಲೋಗನ್:
ಈ ಸಂಸಾರಕ್ಕೆ
ಒಂದು ಅಲೌಕಿಕ ಆಟ ಮತ್ತು ಪರಿಸ್ಥಿತಿಗಳನ್ನು ಆಟದ ಗೊಂಬೆ ಎಂದು ತಿಳಿದು ನಡೆಯಿರಿ ಆಗ ಎಂದೂ
ನಿರಾಶೆಯಾಗುವುದಿಲ್ಲ.
ಅವ್ಯಕ್ತ ಸೂಚನೆ: - ಈಗ
ಲಗನ್ನಿನ(ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೋಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ
ಲಾಸ್ಟ್ ಸೋ ಫಾಸ್ಟ್
ಪುರುಷಾರ್ಥಾದ ಜ್ವಾಲಾ ರೂಪವೇ ಉಳಿದು ಬಿಟ್ಟಿದೆ. ಪಾಂಡವರ ಕಾರಣ ಯಾದವರು ನಿಂತಿದ್ದಾರೆ. ಪಾಂಡವರ
ಶ್ರೇಷ್ಠ ಪದವಿ, ಆತ್ಮಿಕ ಪದವಿಯ ಸ್ಥಿತಿ ಯಾದವರ ಒತ್ತಡದ ಪರಿಸ್ಥಿತಿಗಳನ್ನು ಸಮಾಪ್ತಿ ಮಾಡುತ್ತದೆ.
ಅಂದಾಗ ತಮ್ಮ ಪದವಿಯಿಂದ ಒತ್ತಡದಲ್ಲಿರುವ ಆತ್ಮಗಳಿಗೆ ಶಾಂತಿ ಹಾಗು ನೆಮ್ಮದಿಯ ವರದಾನವನ್ನು ನೀಡಿ.
ಜ್ವಾಲಾ ಸ್ವರೂಪ ಅರ್ಥಾತ್ ಲೈಟ್ ಹೌಸ್ ಮತ್ತು ಮೈಟ್ ಹೌಸ್ ಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತ ಇದೇ
ಪುರುಷಾರ್ಥದಲ್ಲಿರಿ.