24.06.25 Avyakt Bapdada
Kannada
Murli Om Shanti Madhuban
“ಮಾತೇಶ್ವರಿ ಜೀ ಅವರ
ಪುಣ್ಯ ಸ್ಮೃತಿ ದಿವಸದಂದು ನೀನು ಗೊತ್ತಿಲ್ಲ ಪ್ರಾತಃ ಕ್ಲಾಸ್ ನಲ್ಲಿ ಹೇಳುವುದಕ್ಕಾಗಿ ಮಧುರ
ಮಹಾವಾಕ್ಯ”
ಗೀತೆ: ನನ್ನ ಚಿಕ್ಕ ಈ
ಸಂಸಾರವಾಗಿದೆ ನೋಡಿ...
ಈ ಗೀತೆ ಯಾವ ಸಮಯದಲ್ಲಿ,
ಏಕೆಂದರೆ ಈ ಸಂಗಮದ ಸಮಯದಲ್ಲಿ ನಮ್ಮ ಬ್ರಾಹ್ಮಣ ಕುಲದ ಚಿಕ್ಕ ಸಂಸಾರವಾಗಿದೆ. ಇದು ನಮ್ಮ ಯಾವ
ಪರಿವಾರವಾಗಿದೆ, ಇದನ್ನು ನಂಬರ್ವಾರಾಗಿ ಹೇಳುತ್ತಾರೆ. ನಾವು ಪರಮಪಿತ ಪರಮಾತ್ಮ ಶಿವನ ಮೊಮ್ಮಕ್ಕಳು
ಆಗಿದ್ದೇವೆ, ಬ್ರಹ್ಮಾ ಸರಸ್ವತಿ ಅವರ ಮುಖ ಸಂತಾನವಾಗಿ ಇದ್ದೇವೆ ಹಾಗೂ ವಿಷ್ಣು ಶಂಕರ ನಮ್ಮ
ಚಿಕ್ಕಪ್ಪ ಆಗಿದ್ದಾರೆ ಹಾಗೂ ನಾವು ಪರಸ್ಪರ ಎಲ್ಲರೂ ಸಹೋದರ ಸಹೋದರಿಯರು ಆಗಿದ್ದೇವೆ. ಇದಾಗಿದೆ
ನಮ್ಮ ಚಿಕ್ಕ ಸಂಸಾರ. ಇದರ ಮುಂದೆ ಬೇರೆ ಸಂಬಂಧ ಇಲ್ಲವೇ ಇಲ್ಲ. ಈ ಸಮಯದಲ್ಲಿ ಇಷ್ಟೇ ಸಂಬಂಧ ಎಂದು
ಹೇಳುತ್ತೇವೆ. ನೋಡಿ ನಮ್ಮ ಸಂಬಂಧ ಎಷ್ಟು ದೊಡ್ಡ ಅಥಾರಿಟಿಯೊಂದಿಗೆ ಇದೆ. ನಮ್ಮ ಗ್ರಾಂಡ್ ಅಪ್ಪ
ಶಿವ ಆಗಿದ್ದಾರೆ. ಅವರ ಹೆಸರು ಎಷ್ಟು ಭಾರಿ ಆಗಿದೆ, ಅವರು ಇಡೀ ಮನುಷ್ಯ ಸೃಷ್ಟಿಯ ಬೀಜರೂಪ
ಆಗಿದ್ದಾರೆ. ಸರ್ವ ಆತ್ಮಗಳ ಕಲ್ಯಾಣಕಾರಿ ಆಗಿರುವ ಕಾರಣ ಅವರಿಗೆ ಹರ ಹರ ಬೋಲಾ ನಾಥ ಶಿವ ಮಹಾದೇವ
ಎಂದು ಹೇಳಲಾಗುತ್ತದೆ. ಅವರು ಇಡೀ ಸೃಷ್ಟಿಯ ದುಃಖ ಅರ್ಥ, ಸುಖಕರ್ತ ಆಗಿದ್ದಾರೆ, ಅವರ ಮೂಲಕ ನಮಗೆ
ಸುಖ- ಶಾಂತಿ- ಪವಿತ್ರತೆಯ ದೊಡ್ಡ ಅಧಿಕಾರ ಸಿಗುತ್ತದೆ, ಶಾಂತಿಯಲ್ಲಿ ಯಾವುದೇ ಕರ್ಮ ಬಂಧನದ
ಲೆಕ್ಕಾಚಾರ ಇರುವುದಿಲ್ಲ. ಆದರೆ ಈ ಎರಡು ವಸ್ತು ಪವಿತ್ರತೆಯ ಆಧಾರದ ಮೇಲೆ ಇಡಲಾಗುತ್ತದೆ.
ಎಲ್ಲಿಯವರೆಗೂ ತಂದೆಯ ಪಾಲನೆಯ ಸಂಪೂರ್ಣ ಆಸ್ತಿ ತೆಗೆದುಕೊಳ್ಳುತ್ತೇವೆ, ತಂದೆಯಿಂದ ಸರ್ಟಿಫಿಕೇಟ್
ಸಿಕ್ಕಿಲ್ಲ, ಅಲ್ಲಿಯವರೆಗೂ ಆ ಆಸ್ತಿ ಸಿಗಲು ಸಾಧ್ಯವಿಲ್ಲ. ನೋಡಿ ಬ್ರಹ್ಮಾನ ಮೇಲೆ ಎಷ್ಟು ದೊಡ್ಡ
ಕಾರ್ಯ ಇದೆ- ಮೈಲಿಗೆಯಾದ ಅಂತಹ ಐದು ವಿಕಾರಗಳ ಕೊಳಕು ಅಪವಿತ್ರ ಆತ್ಮಗಳನ್ನು ಪವಿತ್ರ ಹೂಗಳಂತೆ
ಮಾಡುತ್ತಾರೆ, ಯಾವ ಅಲೌಕಿಕ ಕಾರ್ಯದ ಸಂಪಾದನೆ ನಂತರ ಸತ್ಯಯುಗದ ಮೊದಲನೆಯ ನಂಬರ್ ಶ್ರೀಕೃಷ್ಣನ ಪದವಿ
ಸಿಗುತ್ತದೆ ಈಗ ನೋಡಿ. ಆ ತಂದೆಯೊಂದಿಗೆ ನಿಮ್ಮ ಸಂಬಂಧ ಹೇಗಿದೆ! ಅಂದಮೇಲೆ ಎಷ್ಟು ನಿಶ್ಚಿಂತ ಖುಷಿ
ಇರಬೇಕು. ಈಗ ಪ್ರತಿಯೊಬ್ಬರು ತಮ್ಮ ಹೃದಯದೊಂದಿಗೆ ಕೇಳಿಕೊಳ್ಳಿ ಸಂಪೂರ್ಣವಾಗಿ ಅವರದ್ದು ಆಗಿದ್ದೇವೆ?
ಯೋಚಿಸಬೇಕು- ಯಾವಾಗ
ಪರಮಾತ್ಮ ತಂದೆ ಬಂದಿದ್ದಾರೆ ಎಂದರೆ ಅವರಿಂದ ನಾವು ಸಂಪೂರ್ಣವಾಗಿ ಆಸ್ತಿಯನ್ನು ಪಡೆದುಕೊಳ್ಳಬೇಕು.
ವಿದ್ಯಾರ್ಥಿಯ ಕೆಲಸವಾಗಿದೆ ಸಂಪೂರ್ಣ ಪುರುಷಾರ್ಥ ಮಾಡಿ ಸ್ಕಾಲರ್ಶಿಪ್ ತೆಗೆದುಕೊಳ್ಳುವುದು,
ಇನ್ಮೇಲೆ ನಾವು ಮೊದಲನೆಯ ನಂಬರ್ ಲಾಟರಿ ಏಕೆ ತೆಗೆದುಕೊಳ್ಳಬಾರದು. ಇದಾಗಿದೆ ವಿಜಯ ಮಾಲೆಯಲ್ಲಿ
ಪೆÇೀಣಿಸಲ್ಪಡುವುದು. ಬಾಕಿ ಯಾರಾದರೂ ಇಂತಹವರು ಇದ್ದಾರೆಯೇ ಯಾರು ಎರಡು ಲಡ್ಡುವನ್ನು ಹಿಡಿದುಕೊಂಡು
ಕುಳಿತಿದ್ದಾರೆ, ಇಲ್ಲಿಯ ಹದ್ದಿನ ಸುಖವನ್ನು ಸಹ ಅನುಭವಿಸುತ್ತೇನೆ ಹಾಗೂ ಅಲ್ಲಿ ವೈಕುಂಠದಲ್ಲಿ ಸಹ
ಯಾವುದಾದರೂ ಸುಖ ಪಡೆದುಕೊಳ್ಳುತ್ತೇನೆ- ಇಂತಹ ವಿಚಾರದವರಿಗೆ ಮಧ್ಯಮ ಪುರುಷಾರ್ಥ ಹಾಗೂ ಕನಿಷ್ಠ
ಪುರುಷಾರ್ಥ ಎಂದು ಹೇಳಲಾಗುತ್ತದೆ, ಸರ್ವೋತ್ತಮ ಪುರುಷಾರ್ಥ ಎಂದು ಹೇಳಲಾಗುವುದಿಲ್ಲ. ಯಾವಾಗ ತಂದೆ
ಕೊಡುವುದರಲ್ಲಿ ಹಿಂದೆ ಮುಂದೆ ನೋಡುವುದಿಲ್ಲ ಅಂದ ಮೇಲೆ ಪಡೆದುಕೊಳ್ಳುವವರು ಏಕೆ ಮಾಡುತ್ತೀರಿ?
ಆದ್ದರಿಂದ ಗುರುನಾನಕ್ ಅವರು ಹೇಳಿದ್ದಾರೆ ಪರಮಾತ್ಮ ಅಂತು ದಾತ ಆಗಿದ್ದಾರೆ, ಸಮರ್ಥರಾಗಿದ್ದಾರೆ
ಆದರೆ ಆತ್ಮಗಳಿಗೆ ತೆಗೆದುಕೊಳ್ಳಲು ಶಕ್ತಿ ಇಲ್ಲ. ಗಾದೆ ಇದೆ- ಕೊಡುವವರು ಕೊಡುತ್ತಿದ್ದಾರೆ,
ತೆಗೆದುಕೊಳ್ಳುವವರು ದಣಿದು ಹೋಗುತ್ತಾರೆ (ಕೊಡುವವರು ಕೊಡುತ್ತಾ ಇರುತ್ತಾರೆ ಆದರೆ
ತೆಗೆದುಕೊಳ್ಳುವವರು ದಣಿದು ಹೋಗುತ್ತಾರೆ) ನಿಮ್ಮ ಹೃದಯದಲ್ಲಿ ಬರುತ್ತಿರಬಹುದು ನಾವು ಏಕೆ ಈ
ಪದವಿಯನ್ನು ಪಡೆದುಕೊಳ್ಳಬಾರದು ಆದರೆ ನೋಡಿ, ಬಾಬಾ ಎಷ್ಟು ಪರಿಶ್ರಮ ಪಡುತ್ತಾರೆ, ಆದರೂ ಸಹ ಮಾಯೆ
ಎಷ್ಟು ವಿಘ್ನ ಹಾಕುತ್ತದೆ ಏಕೆ? ಈಗ ಮಾಯೆಯ ರಾಜ್ಯ ಸಮಾಪ್ತಿ ಯಾಗಲಿದೆ. ಈಗ ಮಾಯೆ ಅತಿರೇಕಕ್ಕೆ
ಏರಿದೆ ಆದ್ದರಿಂದಲೇ ಪರಮಾತ್ಮ ಬಂದಿದ್ದಾರೆ. ಎಲ್ಲಾ ರಸ ಸಮಾವೇಶ ಆಗಿದೆ, ಅವರಿಂದ ಎಲ್ಲಾ ಸಂಬಂಧಗಳ
ರಸ ಸಿಗುತ್ತದೆ ಆದ್ದರಿಂದಲೇ ಅವರನ್ನು ನೀವೇ ಮಾತಾಪಿತ... ಆದಿ ಎಂದು ಮಹಿಮೆ ಮಾಡುತ್ತಾರೆ. ಈ
ಮಹಿಮೆ ಪರಮಾತ್ಮನಿಗಾಗಿ ಹಾಡಲಾಗಿದೆ, ಅಂದಮೇಲೆ ಬಲಿಹಾರಿ ಈ ಸಮಯದಲ್ಲಿ, ಈ ಸಮಯದಲ್ಲಿ
ಪರಮಾತ್ಮನೊಂದಿಗೆ ಈ ಸಂಬಂಧಗಳು ಆಗಿದೆ.
ಪರಮಾತ್ಮನ ಜೊತೆ ಎಲ್ಲಾ
ಸಂಬಂಧಗಳು ಸಂಪೂರ್ಣವಾಗಿ ಜೋಡಣೆ ಮಾಡಬೇಕು ಯಾವುದರಿಂದ 21 ಜನ್ಮಗಳಿಗಾಗಿ ಸುಖ ಪ್ರಾಪ್ತಿಯಾಗುವುದು,
ಇದಾಗಿದೆ ಪುರುಷಾರ್ಥದ ಸಿದ್ಧಿ. ಆದರೆ 21 ಜನ್ಮಗಳ ಹೆಸರನ್ನು ಕೇಳಿ ತಣ್ಣಗಾಗಿ ಹೋಗಬಾರದು. ಹೀಗೆ
ಯೋಚಿಸಬೇಡಿ- 21 ಜನ್ಮ ಗಳಿಗಾಗಿ ಇಷ್ಟೊಂದು ಪುರುಷಾರ್ಥವನ್ನು ಈ ಸಮಯದಲ್ಲಿ ಮಾಡಬೇಕು, ನಂತರ ಮತ್ತೆ
21 ಜನ್ಮಗಳ ನಂತರ ಕೆಳಗೆ ಇಳಿಯಲೇ ಬೇಕು ಇದರಲ್ಲಿ ಯಾವ ಸಿದ್ಧಿ ಇದೆ? ಆದರೆ ಡ್ರಾಮಾದಲ್ಲಿ ಆತ್ಮಗಳ
ಎಷ್ಟು ಸರ್ವೋತ್ತಮ ಸಿದ್ಧಿ ನಿಗಧಿಪಡಿಸಲಾಗಿದೆ ಅದಂತೂ ಸಿಗುತ್ತದೆ ಅಲ್ಲವೇ! ತಂದೆ ಬಂದು ನಮ್ಮನ್ನು
ಸಂಪೂರ್ಣ ಸ್ಟೇಜಿಗೆ ತಲುಪಿಸಿ ಬಿಡುತ್ತಾರೆ, ಆದರೆ ನಾವು ಮಕ್ಕಳು ತಂದೆಯನ್ನು ಮರೆತು ಹೋಗುತ್ತೇವೆ
ಆಗ ಅವಶ್ಯವಾಗಿ ಕೆಳಗೆ ಇಳಿಯುತ್ತೇವೆ, ಇದರಲ್ಲಿ ಬಾಬಾರವರ ಯಾವುದೇ ದೋಷವಿಲ್ಲ. ಇದರಲ್ಲಿ ನಮ್ಮದೇ
ಬಲಹೀನತೆ ಇದೆ, ಸತ್ಯಯುಗ, ತ್ರೇತಾಯುಗದ ಸಂಪೂರ್ಣ ಸುಖ ಈ ಜನ್ಮದ ಪುರುಷಾರ್ಥದ ಮೇಲೆ
ಆಧಾರಿತವಾಗಿರುತ್ತದೆ ಇನ್ಮೇಲೆ ನಾವು ಏಕೆ ಸಂಪೂರ್ಣ ಪುರುಷಾರ್ಥ ಮಾಡಿ ನಮ್ಮ ಸರ್ವೋತ್ತಮ
ಪಾತ್ರವನ್ನು ಅಭಿನಯಿಸಬಾರದು! ಏಕೆ ಪುರುಷಾರ್ಥ ಮಾಡಿ ಆಸ್ತಿಯನ್ನು ತೆಗೆದುಕೊಳ್ಳಬಾರದು. ಮನುಷ್ಯ
ಸದಾ ಸುಖಕ್ಕಾಗಿ ಪುರುಷಾರ್ಥ ಮಾಡುತ್ತಾನೆ, ಸುಖ ದುಃಖದಿಂದ ದೂರವಾಗಲು ಯಾರು ಸಹ ಪುರುಷಾರ್ಥ
ಮಾಡುವುದಿಲ್ಲ, ಡ್ರಾಮಾದ ಅಂತ್ಯದಲ್ಲಿ ಪರಮಾತ್ಮ ಬಂದು ಎಲ್ಲಾ ಆತ್ಮ ಗಳಿಗೂ ಶಿಕ್ಷೆ ಕೊಟ್ಟು,
ಪವಿತ್ರರನ್ನಾಗಿ ಮಾಡಿ ಪಾತ್ರದಿಂದ ಮುಕ್ತರನ್ನಾಗಿ ಮಾಡುತ್ತಾರೆ. ಇದಂತೂ ಪರಮಾತ್ಮನ ಕಾರ್ಯವಾಗಿದೆ.
ಅವರು ತಮ್ಮ ನಿಗಧಿಯಾದ ಸಮಯದಲ್ಲಿ ತಾವಾಗಿಯೇ ಬಂದು ಹೇಳುತ್ತಾರೆ. ಈಗ ಆತ್ಮಗಳು ಮತ್ತೆ ಪಾತ್ರದಲ್ಲಿ
ಬರಲೇಬೇಕು ಅಂದಮೇಲೆ ನಾವು ಏಕೆ ಸರ್ವೋತ್ತಮ ಪಾತ್ರವನ್ನು ಅಭಿನಯಿಸಬಾರದು.
ಮನುಷ್ಯ ಸೃಷ್ಟಿಯನ್ನು
ಸುಖದಾಯಿಯನ್ನಾಗಿ ಮಾಡುವಂತಹ ತಂದೆ ತಿಳಿಸುತ್ತಾರೆ - ಮನುಷ್ಯ ಸೃಷ್ಟಿ ಹೇಗೆ ಸುಖದಾಯಿಯಾಗುವುದು?
ಎಲ್ಲಿಯವರೆಗೂ ಆತ್ಮಗಳು ಸ್ವಚ್ಛವಾಗಿಲ್ಲ ಅಲ್ಲಿಯವರೆಗೂ ಸಂಸಾರ ಸುಖದಾಯಿಯಾಗಲು ಸಾಧ್ಯವಿಲ್ಲ,
ಆದ್ದರಿಂದ ಅವರು ಬಂದು ಮೊಟ್ಟಮೊದಲು ಆತ್ಮಗಳನ್ನೇ ಸ್ವಚ್ಛವನ್ನಾಗಿ ಮಾಡುತ್ತಾರೆ. ಈಗ ಆತ್ಮಗಳಲ್ಲಿ
ಇಂಪ್ಯೂರಿಟಿ (ಅಸ್ವಚ್ಛತೆ ) ತುಂಬಿದೆ. ಮೊದಲು ಆ ಇಂಪ್ಯೂರಿಟಿಯನ್ನು ತೆಗೆಯಬೇಕು, ನಂತರ ಆತ್ಮದ
ಬಲದಿಂದ ಪ್ರತಿಯೊಂದು ವಸ್ತು ತಮೋಪ್ರಧಾನತೆ ಯಿಂದ ಬದಲಾಗಿ ಸತೋಪ್ರಧಾನವಾಗುವುದು, ಇದಕ್ಕೆ
ಎಲ್ಲಾರಿಗೂ ಗೋಲ್ಡನ್ ಏಜ್ನಲ್ಲಿ ಬರುವುದು ಎಂದು ಹೇಳಲಾಗುವುದು, ಅಂದಮೇಲೆ ಈ ತತ್ವಗಳೆಲ್ಲವೂ ಸಹ
ಗೋಲ್ಡನ್ ಏಜ್ನಲ್ಲಿ ಬಂದುಬಿಡುವುದು. ಆದರೆ ಮೊದಲು ಆತ್ಮದ ಸ್ಟೇಜ್ ಬದಲಾಗುವುದು. ಆತ್ಮಗಳನ್ನು
ಬದಲಾಯಿಸುವವರು ಎಂದರೆ ಆತ್ಮಗಳನ್ನು ಪವಿತ್ರವನ್ನಾಗಿ ಮಾಡುವವರು ಅಥಾರಿಟಿ ಅವರಾಗಿದ್ದಾರೆ. ನೀವು
ನೋಡುತ್ತಿರಬಹುದು ಹೇಗೆ ಪ್ರಪಂಚ ಬದಲಾವಣೆಯಾಗುತ್ತಿದೆ. ಯಾವಾಗ ತಮ್ಮನ್ನು ತಾವು
ಬದಲಾಯಿಸಿಕೊಳ್ಳುತ್ತೇವೆ, ಅದರ ಆಧಾರದ ಮೇಲೆ ಪ್ರಪಂಚ ಬದಲಾಗುತ್ತದೆ, ಒಂದುವೇಳೆ ಇಲ್ಲಿಯವರೆಗೂ
ನಮ್ಮಲ್ಲಿ ಯಾವುದೇ ಬದಲಾವಣೆ ಬಂದಿಲ್ಲ, ತಮ್ಮನ್ನು ಪರಿವರ್ತನೆ ಮಾಡಿಕೊಂಡಿಲ್ಲ ಎಂದರೆ ಪ್ರಪಂಚ
ಹೇಗೆ ಬದಲಾಗುವುದು ಆದ್ದರಿಂದ ತಮ್ಮನ್ನು ಪರಿಶೀಲಿಸಿಕೊಳ್ಳಿ. ಹೇಗೆ ಲೆಕ್ಕ ಇಡುವವರು ರಾತ್ರಿ
ತಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳುತ್ತಾರೆ- ಇಂದು ಏನು ಜಮಾ ಆಯಿತು? ಎಲ್ಲಾ ಲೆಕ್ಕಾಚಾರವನ್ನು
ಪರಿಶೀಲಿಸಿಕೊಳ್ಳುತ್ತಾರೆ. ಹಾಗಾದರೆ ತಾವು ಸಹ ತಮ್ಮ ಲೆಕ್ಕಪಟ್ಟಿಯನ್ನು ಇಟ್ಟುಕೊಳ್ಳಿ- ಇಡೀ
ದಿನದಲ್ಲಿ ನಾವು ಎಷ್ಟು ಲಾಭವನ್ನು ಗಳಿಸಿದೆವು, ಎಷ್ಟು ನಷ್ಟವಾಯಿತು? ಒಂದುವೇಳೆ ಜಾಸ್ತಿ
ನಷ್ಟವಾದರೆ, ಮುಂದಿನ ದಿನಕ್ಕಾಗಿ ಎಚ್ಚರಿಕೆಯಿಂದ ಇರಬೇಕು. ಇದೇ ರೀತಿ ತಮ್ಮ ಮೇಲೆ ತಾವು ಗಮನ
ಇಟ್ಟುಕೊಳ್ಳುವುದರಿಂದ ನಾವು ಲಾಭವನ್ನು ಗಳಿಸುತ್ತಾ ಗಳಿಸುತ್ತಾ ನಮ್ಮ ಪದವಿಯನ್ನು
ಪಡೆದುಕೊಳ್ಳುತ್ತಾ ಹೋಗಬೇಕು. ಈ ರೀತಿ ಪರಿಶೀಲನೆ ಮಾಡುತ್ತಾ ಪರಿವರ್ತನೆಯನ್ನು ತಮ್ಮಲ್ಲಿ ತಾವು
ಪರಿವರ್ತನೆ ನೋಡಬಹುದು. ನಾವು ದೇವತೆಗಳಾಗುತ್ತೇವೆ, ಅದಂತು ಮುಂದೆ ಸತ್ಯಯುಗದಲ್ಲಿ ಆಗುತ್ತೇವೆ,
ಈಗ ಹೇಗಿದ್ದೇವೆ ಹಾಗೆಯೇ ಇರೋಣ ಈ ರೀತಿ ಅಲ್ಲ. ಇಲ್ಲ, ಈಗಿನಿಂದಲೇ ಆ ದೈವಿ ಸಂಸ್ಕಾರವನ್ನು
ಮಾಡಿಕೊಳ್ಳಬೇಕು, ಇಲ್ಲಿಯವರೆಗೂ ಯಾವ ಐದು ವಿಕಾರಗಳ ವಶ ಸಂಸ್ಕಾರಗಳು ನಡೆಯುತ್ತಿದ್ದವು, ಈಗ
ನೋಡಬೇಕು ಆ ವಿಕಾರಗಳಿಂದ ನಾವು ಬಿಡುಗಡೆ ಆಗುತ್ತಾ ಇದ್ದೇವೆಯೇ? ನಮ್ಮಲ್ಲಿ ಕ್ರೋಧ ಕಡಿಮೆಯಾಗುತ್ತಾ
ಹೋಗುತ್ತಿದೆಯೇ? ಲೋಭ ಅಥವಾ ಮೋಹ ಇತ್ಯಾದಿ ಏನೆಲ್ಲ ಇತ್ತು ಅದೆಲ್ಲ ವಿಕಾರಿ ಸಂಸ್ಕಾರ ಬದಲಾವಣೆ
ಆಗುತ್ತಿದೆಯೇ? ಒಂದುವೇಳೆ ಬದಲಾವಣೆ ಆಗುತ್ತಾ ಇದೆ, ಬಿಡುಗಡೆ ಆಗುತ್ತಿದ್ದರೆ, ಆಗ ತಿಳಿಯಿರಿ ನಾವು
ಬದಲಾವಣೆ ಆಗುತ್ತಾ ಇದ್ದೇವೆ, . ಒಂದು ವೇಳೆ ವಿಕಾರಗಳು ಬಿಡುತ್ತಿಲ್ಲ ಎಂದರೆ ತಿಳಿಯಿರಿ ನಾವು
ಇನ್ನು ಪರಿವರ್ತನೆ ಆಗಿಲ್ಲ ಎಂದ ಮೇಲೆ ಬದಲಾವಣೆಯ ವ್ಯತ್ಯಾಸ ಅನುಭವವಾಗಬೇಕು. ತಮ್ಮಲ್ಲಿ
ಪರಿವರ್ತನೆ ಬರಬೇಕು. ಇಡೀ ದಿನ ವಿಕಾರಿ ಖಾತೆಯಲ್ಲೇ ನಡೆಯುವುದಲ್ಲ, ಕೇವಲ ಸ್ವಲ್ಪ ಒಳ್ಳೆಯ ದಾನ
ಪುಣ್ಯ ಮಾಡಿದೆವು, ಅಷ್ಟೇ, ಅಲ್ಲ. ನಮ್ಮ ಕರ್ಮದ ಖಾತೆ ಯಾವುದು ನಡೆಯುತ್ತಾ ಇದೆ, ಅದನ್ನು ನಾವು
ಸಂಭಾಲನೆ ಮಾಡಬೇಕು. ನಾವು ಏನೆಲ್ಲಾ ಮಾಡುತ್ತೇವೆ ಅದರಲ್ಲಿ ಯಾವುದೇ ವಿಕಾರದ ವಶರಾಗಿ ನಮ್ಮ
ವಿಕರ್ಮದ ಖಾತೆಯಂತೂ ಆಗುತ್ತಿಲ್ಲವೇ? ಇದರಲ್ಲಿ ತಮ್ಮನ್ನು ತಾವು ಸಂಭಾಲನೆ ಮಾಡಿಕೊಳ್ಳಬೇಕು. ಇದರ
ಲೆಕ್ಕಪತ್ರವನ್ನು ಇಟ್ಟುಕೊಳ್ಳಬೇಕು ಹಾಗೂ ಮಲಗುವ ಮುನ್ನ 10-15 ನಿಮಿಷ ತಮ್ಮನ್ನು ತಾವು
ನೋಡಿಕೊಳ್ಳಬೇಕು, ನಮ್ಮ ಇಡೀ ದಿನ ಹೇಗೆ ಕಳೆಯಿತು? ಕೆಲವರಂತೂ ನೋಟ್ ಮಾಡಿಕೊಳ್ಳುತ್ತಾರೆ ಏಕೆಂದರೆ
ಹಳೆಯ ಪಾಪಗಳ ತಲೆಯ ಮೇಲೆ ಯಾವ ಹೊರೆ ಇದೆ ಅದನ್ನು ಸಹ ಅಳಿಸಬೇಕು, ಅದಕ್ಕಾಗಿ ತಂದೆಯ ಆದೇಶವಾಗಿದೆ-
ನನ್ನನ್ನು ನೆನಪು ಮಾಡಿ, ತಂದೆಯನ್ನು ನಾವು ಎಷ್ಟು ಸಮಯ ನೆನಪು ಮಾಡಿದೆವು? ಏಕೆಂದರೆ ಈ ಚಾರ್ಟ್
ಇಡುವುದರಿಂದ ಮುಂದಿನ ದಿನಕ್ಕಾಗಿ ನಾವು ಸಾವಧಾನವಾಗಿ ಇರುತ್ತೇವೆ. ಈ ರೀತಿ ಸಾವಧಾನವಾಗಿ ಇರುತ್ತಾ
ಇರುತ್ತಾ ಒಂದು ದಿನ ಸಾವಧಾನವಾಗಿ ಬಿಡುತ್ತೇವೆ ನಂತರ ನಮ್ಮ ಕರ್ಮಗಳು ಒಳ್ಳೆಯದೇ ಆಗುತ್ತಾ ಇರುವುದು,
ನಂತರ ಯಾವುದೇ ಪಾಪ ಆಗುವುದಿಲ್ಲ. ಎಂದ ಮೇಲೆ ಪಾಪಗಳಿಂದಲೇ ನಾವು ಬಚಾವಾಗಬೇಕು. ಒಳ್ಳೆಯದು. ಮಧುರ
ತಾಯಿಯ ಮಧುರ ಮಧುರ ಮಕ್ಕಳ ಪ್ರತಿ ನೆನಪು ಪ್ರೀತಿ ಹಾಗೂ ಗುಡ್ ಮಾನಿರ್ಂಗ್.
ಸಂದೇಶ ತನುವಿನ ಮೂಲಕ
ಸರಸ್ವತಿ ತಾಯಿಯ ಅವ್ಯಕ್ತ ಪ್ರಭು ಮಿಲನದ ಸಂವಾದ:
ಮಗಳು ಶ್ರೀರಾದೆ ನೋಡು,
ನಿನ್ನ ಬಳಿ ಯಾರು ಬಂದು ತಲುಪಿದ್ದಾರೆ? ಎಷ್ಟು ದೊಡ್ಡ ಶಕ್ತಿ ನಿನ್ನೊಂದಿಗೆ ಮಾತನಾಡುತ್ತಿದ್ದಾರೆ.
ನಾನು ಬರುವ ರಹಸ್ಯದಿಂದ ನೀನು ನಿನ್ನನ್ನು ಸಹ ತಿಳಿದುಕೊಳ್ಳಬಹುದು. ಬರುವಂತಹವರ
ಪೆÇಸಿಷನ್ನ(ಸ್ಥಾನಮಾನದ) ಜೊತೆ ಸ್ವಯಂ ನ ಪೆÇೀಸಿಷನ್ ಅಥವಾ ಪದವಿಯನ್ನು ಸಹ ತಿಳಿದುಕೊಳ್ಳಬಹುದು.
ಹೇ ರಾದೆ, ಮಗಳೇ ನೀನು ನನ್ನ ಚಮತ್ಕಾರವನ್ನು ನೋಡಲು ಬಯಸುವೆಯ! ನಾನು ಬಯಸಿದರೆ ಒಂದು ಕ್ಷಣದಲ್ಲಿ
ವಿನಾಶ ಮಾಡಬಲ್ಲೆನು. ಆದರೆ ಮಾಡುವುದಿಲ್ಲ ಏಕೆಂದರೆ ವಿರಾಟ ನಾಟಕದ ಅನುಸಾರ ಯಾವ ಯಾವ ಕರ್ತವ್ಯ
ಯಾರು ಯಾರಿಂದ ನಡೆಯಬೇಕು, ಅದು ಹಾಗೆ ನಡೆಯಬೇಕು. ಅವ್ಯಕ್ತ ಪ್ರಭು ಅನಾದಿ ನಿಯಮ ಕಾನೂನನ್ನು
ತಿಳಿದುಕೊಂಡವರೇ ಅನಾದಿ ನಿಯಮಗಳ ಪರಿಚಯವನ್ನು ಬಂದು ಕೊಡುತ್ತಾರೆ. ಈ ಇಡೀ ಸೃಷ್ಟಿಯ ಅನಾದಿ ಆಟ
ಸ್ಟೇಜ್ನ ಮೇಲೆ ನಡೆಯುತ್ತದೆ, ಪ್ರಾಕ್ಟಿಕಲ್ ನಲ್ಲಿ ನಡೆಯುವುದರಲ್ಲಿ ಸಮಯ ತೆಗೆದುಕೊಳ್ಳುತ್ತದೆ,
ಒಂದುವೇಳೆ ಇಷ್ಟು ವರ್ಷಗಳ ಆಟವನ್ನು ಒಂದು ಕ್ಷಣದಲ್ಲಿ ಪೂರ್ತಿ ಮಾಡಿ ಬಿಟ್ಟರೆ, ಬಾಕಿ ಆಟ ಏನು
ನಡೆಯುವುದು! ಅಂದಮೇಲೆ ಯಾವ ಯಾವ ತೊಂದರೆಯನ್ನು ಹೇಗೆ ಹೇಗೆ ನೋಡಬೇಕು ಅಥವಾ ಸಹನೆ ಮಾಡಬೇಕು, ಅದು
ಅದೇ ರೀತಿ ವಿಚಿತ್ರವಾದ ರಹಸ್ಯ ದೊಂದಿಗೆ ಪುನರಾವರ್ತನೆ ಆಗುತ್ತದೆ. ಇದು ವಿಚಿತ್ರ
ಪುನರಾವರ್ತನೆಯಾಗಿದೆ ಯಾವುದನ್ನು, ಹೇ ಪ್ರಿಯ ಮಮ್ಮಾ ರಾಧೆ, ನಾನು ಹಾಗೂ ನೀನು ನೋಡಿ ಎಷ್ಟು
ಹರ್ಷಿತರಾಗುತ್ತೇವೆ.
ಈ ವಿರಾಟ ಡ್ರಾಮಾದಲ್ಲಿ
ಎಲ್ಲರೂ ಪಾತ್ರ ಅಭಿನಯಿಸುವವರಾಗಿದ್ದಾರೆ. ಈ ಆಟವನ್ನು ಆಡಿಸುವವರು ಬಯಸಿದರೆ ಒಂದು ಸೆಕೆಂಡಿನಲ್ಲಿ
ಈ ಡ್ರಾಮಾ ಅನ್ನು ನಿಲ್ಲಿಸಿ ಹೊಸದಾಗಿ ಶುರು ಮಾಡಬಹುದು, ಆದರೆ ಮಾಡುವುದಿಲ್ಲ ಏಕೆಂದರೆ ಈಶ್ವರನು
ಸಹ ಈ ರೀತಿ ಸಾಧಾರಣ ರೀತಿಯಲ್ಲಿ ಕರ್ತವ್ಯ ನಡೆಸಬೇಕಾಗುತ್ತದೆ. ಸ್ವಯಂ ಸರ್ವ ಶಕ್ತಿವಂತ ನಿರಾಕಾರ
ಈಶ್ವರ ಸಾಕಾರದಲ್ಲಿ ಬಂದಿದ್ದಾರೆ ಆದರೆ ಸಾಧಾರಣ ವೇಷದಲ್ಲಿ! ಇದು ಜಟಿಲ ಆಟವಾಗಿದೆ, ಯಾವುದನ್ನು
ಯಾರು ತಿಳಿದುಕೊಳ್ಳುತ್ತಾರೆ ಅವರೇ ಎಲ್ಲವನ್ನು ತಿಳಿದುಕೊಳ್ಳುವವರಾಗಿದ್ದಾರೆ.
ಮಗಳು ಶ್ರೀರಾದೆ, ಪ್ರಿಯ
ಮಕ್ಕಳು ಇದನ್ನು ಸಹನೆ ಮಾಡುವ ಮಾರ್ಗವನ್ನು ಅವಶ್ಯವಾಗಿ ನಿರ್ಣಯ ಮಾಡಬೇಕಾಗಿದೆ. ಒಂದುವೇಳೆ ನಾನು
ಬಯಸಿದರೆ ನನ್ನ ಮಕ್ಕಳಿಗಾಗಿ ಇದನ್ನು ಸಹಜ ಮಾರ್ಗವನ್ನಾಗಿ ಮಾಡಬಲ್ಲೆನು ಏಕೆಂದರೆ ಸಾಕ್ಷಾತ್ಕಾರ
ಮಾಡಿಸುವಂತಹ ಬೀಗದ ಕೈ ನನ್ನ ಕೈಯಲ್ಲಿದೆ. ಒಂದು ವೇಳೆ ಯಾವುದೇ ಧನವಂತ ಭಕ್ತನಿಗೆ ಯಾವುದೇ ದೇವತೆಯ
ಸಾಕ್ಷಾತ್ಕಾರ ಮಾಡಿಸಿಬಿಟ್ಟರೆ, ಅವರು ಬಂದು ತನ್ನ ಎಲ್ಲಾ ದನವನ್ನು ತೆಗೆದುಕೊಂಡು ಬಂದು
ಯಜ್ಞದಲ್ಲಿ ಸ್ವಾಹಮಾಡಿಬಿಡುವನು, ಏಕೆಂದರೆ ಈಶ್ವರನಂತು ಎಲ್ಲಾ ಧನವಂತರಿಗೂ ಧನವಂತನಾಗಿದ್ದಾನೆ.
ಆದರೆ ನಿನ್ನ ತಂದೆ ಬಯಸುತ್ತಾರೆ- ನಾನು ನನ್ನ ಬೆಗ್ಗರ್ಸ್(ಬಿಕ್ಷುಕ) ಪ್ರಿಯ ಮಕ್ಕಳು ಪ್ರಿನ್ಸ್ (ರಾಜ
ಕುಮಾರ) ಹಾಗೂ ಪ್ರಿನ್ಸೆಸ್ (ರಾಜಕುಮಾರಿ) ಮಾಡಬೇಕು. ಆದ್ದರಿಂದ ನೀನು ಇದೆಲ್ಲವನ್ನು ಸಹನೆ ಮಾಡಿದ
ನಂತರವೇ ಹೋಗಿ ಪ್ರಿನ್ಸ್ ಹಾಗೂ ಪ್ರಿನ್ಸೆನ್ಸ್ ಆಗುತ್ತೀರಿ. ತಂದೆ ತಿಳಿಸಿದ್ದಾರೆ ಮಕ್ಕಳಿಗೆ
ಇದನ್ನು ಸಹನೆ ಮಾಡುವ ಮಾರ್ಗವನ್ನು ಅವಶ್ಯವಾಗಿ ನಿರ್ಧಾರ ಮಾಡಬೇಕು ಏಕೆಂದರೆ ಸಹನೆ ಮಾಡುವುದು, ಇದು
ಈಶ್ವರಿಯ ಹಾಗೂ ದೈವಿ ಗುಣವಾಗಿದೆ, ಇದರಲ್ಲಿಯೇ ಖುಷಿ ಸಮಾವೇಶವಾಗಿದೆ. ಈ ಗುಣದಿಂದಲೇ ಈಶ್ವರೀಯ
ಸುಖ ಅನುಭವವಾಗುತ್ತದೆ. ಸಹನೆ ಮಾಡುತ್ತಿದ್ದರು ಸಹ ನೀವು ಎಷ್ಟು ಮೋಜು ಆಚರಿಸುತ್ತೀರಿ, ಇದು
ಗೋಪನೀಯ ಜ್ಞಾನವಾಗಿದೆ. ಇಂತಹ ಅನಾಸಕ್ತ ಯೋಗಿಯೆ ಶಾಶ್ವತ ಪ್ರಾಪ್ತಿಯನ್ನು ಮಾಡಿಕೊಳ್ಳುತ್ತಾರೆ.
ಈಗಂತೂ ಪರೀಕ್ಷೆಗಳ ಸಮಯ
ಹತ್ತಿರ ತಲುಪಿದೆ, ಪ್ರತಿಯೊಬ್ಬ ವತ್ಸ ಬರುವಂತಹ ಪರೀಕ್ಷೆಗಳನ್ನು ಇನ್ನ ಅಡ್ವಾನ್ಸ್(
ಮುಂಚಿತವಾಗಿಯೇ) ಸಮ್ಮುಖದಲ್ಲಿ ಇಟ್ಟುಕೊಂಡು ಅದೇ ಅಭ್ಯಾಸದಲ್ಲಿ ನಡೆಯುತ್ತಾ ಹೋಗಬೇಕು. ಬಲೆ
ಯಾವುದೇ ವತ್ಸನಿಗೆ ಊಟ- ನೀರು ಇತ್ಯಾದಿ ಸಿಗದೇ ಇರಬಹುದು, ಆದರೆ ಸ್ವಯಂ ನಿಶ್ಚಿಂತ ಚಕ್ರವರ್ತಿಯಾಗಿ
ಉಪಸ್ಥಿತರಾಗಿರಬೇಕು. ಇಂತಹ ತಮ್ಮ ಸುಂದರ ಸ್ಥಿತಿಯನ್ನು ಬಹಳ ಸಮಯದಿಂದ ಧಾರಣೆ ಮಾಡಿರಬೇಕು. ಒಂದು
ವೇಳೆ ಅಂತಹ ಸಮಯದಲ್ಲಿ ನಾನು ಸ್ವತಃವಾಗಿ ಆ ರೀತಿ ನಡೆಯುತ್ತೇನೆ ಎಂದು ಯಾರಾದರೂ ತಿಳಿದುಕೊಂಡರೆ,
ಇದು ತಮ್ಮನ್ನು ತಾವು ಮೋಸ ಮಾಡಿಕೊಳ್ಳುವುದಾಗಿದೆ. ಆದ್ದರಿಂದ ಮುಂಚಿತವಾಗಿಯೇ ಎಚ್ಚರಿಕೆಯಿಂದಿರಿ.
ನನ್ನ ಅತಿಪ್ರಿಯ ವತ್ಸರು
ನೆನಪಿನಲ್ಲಂತೂ ಕುಳಿತುಕೊಳ್ಳುತ್ತಾರೆ ಆದರೆ ಇದುವರೆಗೂ ಆ ಲೈಟ್ನ ಪ್ರಕಾಶ ನನ್ನ ವತನದವರೆಗೂ
ತಲುಪಿಲ್ಲ. ಪ್ರತಿಯೊಬ್ಬರು ಯಾವಾಗ ಲೈಟ್ ಸ್ವರೂಪದಲ್ಲಿ ಉಪಸ್ಥಿತರಾಗಿರುತ್ತಾರೆ ಆಗ ಅವರ ಯೋಗದ
ತೇಜಸ್ಸು ನನ್ನ ವತನದಲ್ಲಿ ಬರುವುದು ಆಗಲೇ ಎಲ್ಲರ ಸಂಪೂರ್ಣ ಲೈಟ್ ಅವರಲ್ಲಿ ಪ್ರವೇಶವಾಗುವುದು. ಆ
ಸಮಯವೇ ಶಕ್ತಿಯರ ಮಹಿಮೆ ಹೊರಬರುವುದು. ಪ್ರತಿಯೊಬ್ಬರೂ ಸಹ ತಮ್ಮ ನಿಶ್ಚಯದಲ್ಲಿ ಪಕ್ಕಾ ಆಗಿ
ನಿಲ್ಲಬೇಕು, ನಾನು ಬಂದು ಅಲುಗಾಡಿಸಿದರೂ ಸಹ ಅಲುಗಾಡಬಾರದು.
ಹೇ ಶಿರೋಮಣಿ ಶಕ್ತಿ ರಾಧೆ,
ಶಕ್ತಿಗಳನ್ನು ಜ್ಞಾನ ಯೋಗ ಬಲದಲ್ಲಿ ಹಾಗೂ ಮುಖದಿಂದ ಜ್ಞಾನ ಮುರಳಿ ನುಡಿಸಲು ತಯಾರಾಗಿರಬೇಕು. ನೀನು
ತನ್ನ ಏಕ ರಸ ಈಶ್ವರೀಯ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ಮುಕ್ತಿ ಜೀವನ್ ಮುಕ್ತಿಯನ್ನು ಕೊಟ್ಟು
ತಮ್ಮ ಮಧುರ ವಾಣಿಯಿಂದ ಪರಿಚಯವನ್ನು ಕೊಡಬೇಕು- ನಾನು ಯಾರಾಗಿದ್ದೇನೆ, ನನ್ನ ತಂದೆ ಯಾರಾಗಿದ್ದಾರೆ!
ಹೇಗೆ ಬ್ರಹ್ಮಾನಲ್ಲಿ ಭಗವಂತ ಪ್ರತ್ಯಕ್ಷನಾದನು,. ಈ ಅಂತಿಮ ಸಮಯದಲ್ಲಿ ಡೆವಿಲ್ ವಲ್ರ್ಡ್ (ಕಲಿಯುಗ
ಪ್ರಪಂಚ) ಸಮಾಪ್ತಿ ಮಾಡಿ ತಮ್ಮ ನಿಜ ದೇಶ ಡಯಟಿ ವಲ್ರ್ಡ್(ದೆೃವಿ ಪ್ರಪಂಚ) ದಲ್ಲಿ ಕರೆದುಕೊಂಡು
ಹೋಗುತ್ತಿದ್ದಾರೆ.
ಹೇ ರಾಧೆ ಮಗಳೇ, ಯಾವಾಗ
ಪ್ರತಿಯೊಬ್ಬರ ಸ್ಥಿತಿ ದೀಪಕದ ದೀಪದ ಸದೃಶ ದೃಢವಾಗಿರುವುದು ಆಗ ಸೂಕ್ಷ್ಮ ಅಂತಹ ಪ್ರೇರಣೆಗಳನ್ನು
ಹಿಡಿದುಕೊಂಡು ತನ್ನ ಕಾರ್ಯ ಸಂಪೂರ್ಣ ರೀತಿಯಲ್ಲಿ ಸಿದ್ಧ ಮಾಡಬಹುದು ಎಷ್ಟು ಜ್ಞಾನ ಅನುಸಾರ ಸ್ಥಿತಿ
ಇರುವುದು, ಅಷ್ಟೇ ಪ್ರೇರಣೆಯನ್ನು ಕ್ಯಾಚ್ ಮಾಡಲು ಸಾಧ್ಯ. ಎಷ್ಟು ಆ ಸ್ಥಿತಿಯಲ್ಲಿ ನಿರಂತರವಾಗಿ
ಇರುವಿರಿ ಅಷ್ಟು ಸಂಪೂರ್ಣ ಪ್ರೇರಣೆಗಳು ಟಚ್ ಆಗುವುದು.
ಅಹೋ! ಮಗಳು ರಾಧೆ, ನನ್ನ
ಸ್ವರೂಪವನ್ನು ನೋಡು, ನನ್ನ ಸ್ವರೂಪವನ್ನು ವತ್ಸರು ನೋಡಲು ಸಾಧ್ಯವಿಲ್ಲವೇ?- ಅಖಂಡ ಜ್ಯೋತಿ
ತತ್ವದಿಂದ ನಾನು ಬಂದು ಸಾಕ್ಷಾತ್ ಪ್ರವೇಶ ಆಗಿ ಮಾತನಾಡುತ್ತೇನೆ, ನನ್ನ ಮೂಲಕವೇ ಈ ಎಲ್ಲಾ
ಸಾಕ್ಷಾತ್ಕಾರಗಳು ಆಗುತ್ತದೆ ಏಕೆಂದರೆ ನಾನೇ ಎಲ್ಲರ ಮೂಲ ಸಮೂಹ ಆಗಿದ್ದೇನೆ. ನೋಡು, ಪ್ರಕೃತಿಯ
ಮಧ್ಯದಲ್ಲಿ ಜ್ಞಾನದ ಬೆಳಕು ಹೊಳೆಯುತ್ತದೆ. ವತ್ಸರು ಕೇವಲ ಇದನ್ನು ವಿಚಾರ ಮಾಡಿ, ಆಹಾ! ಯಾರನ್ನು
ಇಡಿ ಸೃಷ್ಟಿ ಕರೆಯುತ್ತಿದೆ, ಅವರು ಸ್ವಯಂ ಸರ್ವ ಶಕ್ತಿವಂತ ಈಶ್ವರ ಯಜ್ಞದಲ್ಲಿ ನಮ್ಮೆಲ್ಲರ
ಸಮ್ಮುಖ ಬಂದಿದ್ದಾರೆ. ಅವರ ಶೀತಲ ಮಡಿಲಿನಲ್ಲಿ ಕುಳಿತುಕೊಳ್ಳುವುದರಿಂದ ಹೃದಯ ಶಾಂತವಾಗಿ
ಹೋಗುತ್ತದೆ. ಒಂದು ವೇಳೆ ರಚನೆಗೆ ರಚಿಸುವವರು ಸಿಕ್ಕಿಬಿಡುತ್ತಾರೆ ಎಂದರೆ, ಅದನ್ನು ಬಿಟ್ಟು ಅವರ
ರಚನೆಯಲ್ಲಿ ಏಕೆ ಹೋಗಬೇಕು! ಶ್ರೇಷ್ಠಾತಿ ಶ್ರೇಷ್ಠ ಅಥಾರಿಟಿ ಸರ್ವ ಶಕ್ತಿಯ ಮಾಲಿಕ ಯಾರಿಂದ
ಶಕ್ತಿಗಳು ಪ್ರಕಟವಾಗಿದೆ, ಅವರ ಪರಿಚಯ ಸಿಕ್ಕಿತು ಎಂದ ಮೇಲೆ ಅವರ ಮಡಿಲನ್ನು ಬಿಡುವುದು
ಅಸಂಭವವಾಗಿದೆ. ಯಾವಾಗ ರಚೆೃತನ ಪರಿಚಯ ಸಿಕ್ಕಿತು ಆಗಲೇ ತಿಳಿದುಕೊಳ್ಳುತ್ತಾರೆ ಇವರು
ಯಾರಾಗಿದ್ದಾರೆ! ತಿಳಿಯಿತೆ, ಶಿರೋಮಣಿ ರಾಧೆ. ಒಳ್ಳೆಯದು.
ವರದಾನ:
ಸದಾ ಅತೀಂದ್ರೀಯ
ಸುಖದ ಉಯ್ಯಾಲೆಯಲ್ಲಿ ತೂಗಾಡುವಂತಹ ಸಂಗಮಯುಗದ ಸರ್ವ ಅಲೌಕಿಕ ಪ್ರಾಪ್ತಿಗಳಿಂದ ಸಂಪನ್ನ ಭವ
ಯಾವ ಮಕ್ಕಳು ಅಲೌಕಿಕ
ಪ್ರಾಪ್ತಿಗಳಿಂದ ಸದಾ ಸಂಪನ್ನರಾಗಿದ್ದಾರೆ ಅವರು ಅತೀಂದ್ರಿಯ ಸುಖದ ಉಯ್ಯಾಲೆಯಲ್ಲಿ
ತೂಗಾಡುತ್ತಿರುತ್ತಾರೆ. ಹೇಗೆ ಮುದ್ಧಾದ ಮಕ್ಕಳನ್ನು ಉಯ್ಯಾಲೆಯಲ್ಲಿ ತೂಗಾಡಿಸುತ್ತಾರೆ. ಅದೇ ರೀತಿ
ಸರ್ವ ಪ್ರಾಪ್ತಿ ಸಂಪನ್ನ ಬ್ರಾಹ್ಮಣರ ಉಯ್ಯಾಲೆ ಅತೀಂದ್ರಿಯ ಸುಖದ ಉಯ್ಯಾಲೆಯಾಗಿದೆ, ಈ
ಉಯ್ಯಾಲೆಯಲ್ಲಿ ಸದಾ ತೂಗಾಡುತ್ತಿರಿ. ಎಂದೂ ಸಹ ದೇಹಾಭಿಮಾನದಲ್ಲಿ ಬರಬೇಡಿ. ಯಾರು ಉಯ್ಯಾಲೆಯಿಂದ
ಇಳಿದು ಧರಣಿಯ ಮೇಲೆ ಕಾಲನ್ನಿಡುತ್ತಾರೆ ಅವರು ಮೈಲಿಗೆಯಾಗಿಬಿಡುತ್ತಾರೆ. ಶ್ರೇಷ್ಠಾತಿಶ್ರೇಷ್ಠ
ತಂದೆಯ ಸ್ವಚ್ಛ ಮಕ್ಕಳು ಸದಾ ಅತೀಂದ್ರೀಯ ಸುಖದ ಉಯ್ಯಾಲೆಯಲ್ಲಿ ತೂಗಾಡುತ್ತಾರೆ, ಮಣ್ಣಿನಲ್ಲಿ
ಕಾಲನ್ನಿಡಲು ಸಾಧ್ಯವಿಲ್ಲ.
ಸ್ಲೋಗನ್:
“ನಾನು
ತ್ಯಾಗಿಯಾಗಿದ್ದೇನೆ” ಈ ಅಭಿಮಾನದ ತ್ಯಾಗವೇ ಸತ್ಯ ತ್ಯಾಗವಾಗಿದೆ.
ಅವ್ಯಕ್ತ ಸೂಚನೆಗಳು-
ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ
ಯಾವಾಗ ಸ್ವಯಂ ಅನ್ನು
ಅಕಾಲಮೂರ್ತಿ ಆತ್ಮ ಎಂದು ತಿಳಿದುಕೊಳ್ಳುತ್ತೀರಿ ಆಗ ಅಕಾಲ ಮೃತ್ಯುವಿನಿಂದ, ಅಕಾಲದಿಂದ, ಸರ್ವ
ಸಮಸ್ಯೆಗಳಿಂದ ಬಚಾವಾಗುವಿರಿ. ಮಾನಸಿಕ ಚಿಂತೆಗಳು, ಮಾನಸಿಕ ಪರಿಸ್ಥಿತಿಗಳನ್ನು ಸಮಾಪ್ತಿ ಮಾಡುವ
ಒಂದೇ ಸಾಧನವಾಗಿದೆ- ತಮ್ಮ ಈ ಹಳೆಯ ಶರೀರದ ಬಾನವನ್ನು ಸಮಾಪ್ತಿ ಮಾಡುವುದು. ದೇಹ ಅಭಿಮಾನವನ್ನು
ಸಮಾಪ್ತಿ ಮಾಡುವುದರಿಂದ ಸರ್ವ ಪರಿಸ್ಥಿತಿಗಳು ಸಮಾಪ್ತಿಯಾಗುವುದು.