25.06.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯು ನಿಮಗೆ ಹೊಸ ಪ್ರಪಂಚಕ್ಕಾಗಿ ರಾಜಯೋಗವನ್ನು ಕಲಿಸುತ್ತಿದ್ದಾರೆ ಆದ್ದರಿಂದ ಈ ಹಳೆಯ ಪ್ರಪಂಚದ ವಿನಾಶವು ಅವಶ್ಯವಾಗಿ ಆಗುವುದಿದೆ”

ಪ್ರಶ್ನೆ:
ಮನುಷ್ಯರಲ್ಲಿ ಯಾವ ಒಂದು ಒಳ್ಳೆಯ ಹವ್ಯಾಸವಾಗಿಬಿಟ್ಟಿದೆ ಆದರೆ ಅದರಿಂದಲೂ ಏನೂ ಪ್ರಾಪ್ತಿಯಾಗುವುದಿಲ್ಲ?

ಉತ್ತರ:
ಮನುಷ್ಯರಲ್ಲಿ ಭಗವಂತನನ್ನು ನೆನಪು ಮಾಡುವುದು ಒಂದು ಹವ್ಯಾಸವಾಗಿಬಿಟ್ಟಿದೆ. ಯಾವುದೇ ಮಾತು ಬಂದಾಗ ಹೇ ಭಗವಂತ ಎಂದು ಹೇಳುತ್ತಾರೆ, ಶಿವಲಿಂಗವು ಸಮ್ಮುಖದಲ್ಲಿ ಬಂದುಬಿಡುತ್ತದೆ ಆದರೆ ಯಥಾರ್ಥ ಪರಿಚಯವಿಲ್ಲದಕಾರಣ ಪ್ರಾಪ್ತಿಯೇನೂ ಆಗುವುದಿಲ್ಲ. ಮತ್ತೆ ಸುಖ-ದುಃಖವನ್ನು ಭಗವಂತನೇ ಕೊಡುತ್ತಾರೆಂದು ಹೇಳಿಬಿಡುತ್ತಾರೆ. ನೀವು ಮಕ್ಕಳು ಆ ರೀತಿ ಹೇಳುವುದಿಲ್ಲ.

ಓಂ ಶಾಂತಿ.
ತಂದೆಗೇ ರಚಯಿತನೆಂದು ಹೇಳಲಾಗುತ್ತದೆ. ಯಾವುದರ ರಚಯಿತ? ಹೊಸ ಪ್ರಪಂಚದ ರಚಯಿತ. ಹೊಸಪ್ರಪಂಚಕ್ಕೆ ಸ್ವರ್ಗ ಅಥವಾ ಸುಖಧಾಮವೆಂದು ಹೇಳಲಾಗುತ್ತದೆ. ಹೆಸರನ್ನು ಹೇಳುತ್ತಾರೆ ಆದರೆ ತಿಳಿದುಕೊಂಡಿಲ್ಲ. ಕೃಷ್ಣನ ಮಂದಿರಕ್ಕೂ ಸುಖಧಾಮವೆಂದು ಕರೆಯಲಾಗುತ್ತದೆ ಆದರೆ ಅದು ಚಿಕ್ಕಮಂದಿರವಾಯಿತು. ಕೃಷ್ಣನು ವಿಶ್ವದ ಮಾಲೀಕನಾಗಿದ್ದನು. ಬೇಹದ್ದಿನ ಮಾಲೀಕನನ್ನು ಹೇಗೆ ಹದ್ದಿನ ಮಾಲೀಕನನ್ನಾಗಿ ಮಾಡುತ್ತಾರೆ. ಕೃಷ್ಣನ ಅತಿಚಿಕ್ಕ ಮಂದಿರಕ್ಕೆ ಸುಖಧಾಮವೆಂದು ಹೇಳುತ್ತಾರೆ. ಕೃಷ್ಣನು ವಿಶ್ವದ ಮಾಲೀಕನಾಗಿದ್ದನು, ಭಾರತದಲ್ಲಿಯೇ ಇದ್ದನೆಂದು ಬುದ್ಧಿಯಲ್ಲಿ ಬರುವುದಿಲ್ಲ. ನಿಮಗೂ ಸಹ ಮೊದಲು ತಿಳಿದಿರಲೇ ಇಲ್ಲ. ತಂದೆಗೆ ಎಲ್ಲವೂ ತಿಳಿದಿದೆ, ಅವರು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ಅರಿತಿದ್ದಾರೆ. ಈಗ ನೀವು ಮಕ್ಕಳೂ ತಿಳಿದುಕೊಂಡಿದ್ದೀರಿ- ಬ್ರಹ್ಮಾ, ವಿಷ್ಣು, ಶಂಕರ ಯಾರೆಂಬುದು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಶಿವನಂತೂ ಸರ್ವಶ್ರೇಷ್ಠ ಭಗವಂತನಾಗಿದ್ದಾರೆ. ಒಳ್ಳೆಯದು. ಮತ್ತೆ ಪ್ರಜಾಪಿತ ಬ್ರಹ್ಮನೆಲ್ಲಿಂದ ಬಂದರು? ಅವರೂ ಮನುಷ್ಯನಲ್ಲವೆ. ಪ್ರಜಾಪಿತ ಬ್ರಹ್ಮನಿಂದ ಬ್ರಾಹ್ಮಣರ ಜನ್ಮವಾಗಬೇಕಾದರೆ ಅವರು ಇಲ್ಲಿಯೇ ಬೇಕಲ್ಲವೆ. ಪ್ರಜಾಪಿತನೆಂದರೆ ಮುಖದಿಂದ ದತ್ತು ಮಾಡಿಕೊಳ್ಳುವವರು. ನೀವು ಮುಖವಂಶಾವಳಿಯಾಗಿದ್ದೀರಿ. ಹೇಗೆ ಬ್ರಹ್ಮನನ್ನು ತಂದೆಯು ತನ್ನವರನ್ನಾಗಿ ಮಾಡಿಕೊಂಡು ಮುಖವಂಶಾವಳಿಯನ್ನಾಗಿ ಮಾಡಿಕೊಂಡಿದ್ದಾರೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಇವರಲ್ಲಿ ಪ್ರವೇಶ ಮಾಡಿ ಹೇಳಿದರು- ಇವರು ನನ್ನ ಮಗನೂ ಆಗಿದ್ದಾರೆ. ಬ್ರಹ್ಮನೆಂದು ಹೆಸರು ಹೇಗೆ ಬಂದಿತು? ಹೇಗೆ ಜನ್ಮವಾಯಿತು? ಇದು ನಿಮಗೆ ತಿಳಿದಿದೆ, ಮತ್ತ್ಯಾರೂ ಇದನ್ನು ತಿಳಿದುಕೊಂಡಿಲ್ಲ. ಪರಮಪಿತ ಪರಮಾತ್ಮನು ಶ್ರೇಷ್ಠಾತಿಶ್ರೇಷ್ಠನೆಂದು ಕೇವಲ ಮಹಿಮೆಯನ್ನು ಮಾಡುತ್ತಾರೆ ಆದರೆ ಅವರು ಸರ್ವಶ್ರೇಷ್ಠ ತಂದೆಯಾಗಿದ್ದಾರೆ, ನಾವೆಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ಅವರು ಬಿಂದುರೂಪದಲ್ಲಿದ್ದಾರೆ. ಅವರಲ್ಲಿ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ ಎಂದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ನಿಮಗೀಗ ಈ ಜ್ಞಾನವಿದೆ, ಮೊದಲು ಈ ಜ್ಞಾನವಿರಲಿಲ್ಲ. ಬ್ರಹ್ಮಾ, ವಿಷ್ಣು, ಶಂಕರನೆಂದು ಕೇವಲ ಮನುಷ್ಯರು ಹೇಳುತ್ತಾರೆ ಆದರೆ ಏನನ್ನೂ ಅರಿತುಕೊಂಡಿಲ್ಲ ಆದ್ದರಿಂದ ಅವರಿಗೆ ತಿಳಿಸಿಕೊಡಬೇಕಾಗಿದೆ- ನೀವೀಗ ಬುದ್ಧಿವಂತರಾಗಿದ್ದೀರಿ, ತಂದೆಯು ಜ್ಞಾನಸಾಗರನಾಗಿದ್ದಾರೆ, ಅವರು ನಮಗೆ ಜ್ಞಾನವನ್ನು ತಿಳಿಸುತ್ತಾರೆ, ಓದಿಸುತ್ತಾರೆ ಎಂಬುದು ನಿಮಗೆ ಅರಿವಾಗಿದೆ. ಈ ರಾಜಯೋಗವು ಸತ್ಯಯುಗ ಹೊಸಪ್ರಪಂಚಕ್ಕಾಗಿ ಇದೆ ಅಂದಮೇಲೆ ಅವಶ್ಯವಾಗಿ ಹಳೆಯ ಪ್ರಪಂಚದ ವಿನಾಶವಾಗಬೇಕು. ಅದಕ್ಕಾಗಿ ಈ ಮಹಾಭಾರತ ಯುದ್ಧವಿದೆ. ಅರ್ಧಕಲ್ಪದಿಂದ ನೀವು ಭಕ್ತಿಮಾರ್ಗದ ಶಾಸ್ತ್ರಗಳನ್ನು ಓದುತ್ತಾ ಬಂದಿದ್ದೀರಿ, ಈಗಂತೂ ಡೈರೆಕ್ಟ್ ತಂದೆಯಿಂದ ಕೇಳುತ್ತೀರಿ. ತಂದೆಯು ಕುಳಿತು ಯಾವುದೇ ಶಾಸ್ತ್ರಗಳನ್ನು ಹೇಳುವುದಿಲ್ಲ. ಜಪ, ತಪ ಮಾಡುವುದು, ಶಾಸ್ತ್ರಗಳನ್ನು ಓದುವುದು ಎಲ್ಲವೂ ಭಕ್ತಿಯಾಗಿದೆ. ಈಗ ಭಕ್ತರಿಗೆ ಭಕ್ತಿಯ ಫಲವು ಬೇಕು ಏಕೆಂದರೆ ಅವರು ಭಗವಂತನೊಂದಿಗೆ ಮಿಲನ ಮಾಡುವುದಕ್ಕಾಗಿಯೇ ಇಷ್ಟೊಂದು ಪರಿಶ್ರಮಪಡುತ್ತಾರೆ ಆದರೆ ಜ್ಞಾನದಿಂದಲೇ ಸದ್ಗತಿಯಾಗುವುದು. ಜ್ಞಾನ ಮತ್ತು ಭಕ್ತಿ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ. ಈಗ ಭಕ್ತಿಯ ರಾಜ್ಯವಾಗಿದೆ. ಎಲ್ಲರೂ ಭಕ್ತರಾಗಿದ್ದಾರೆ. ಪ್ರತಿಯೊಬ್ಬರ ಮುಖದಿಂದ ಓ ಭಗವಂತ ಎಂದು ಅವಶ್ಯವಾಗಿ ಹೊರಬರುತ್ತದೆ. ನಿಮಗೆ ತಿಳಿದಿದೆ- ಆ ತಂದೆಯೇ ತನ್ನ ಪರಿಚಯ ನೀಡಿದ್ದಾರೆ, ನಾನು ಚಿಕ್ಕಬಿಂದುವಾಗಿದ್ದೇನೆ, ನನ್ನನ್ನೇ ಜ್ಞಾನಸಾಗರನೆಂದು ಹೇಳುತ್ತಾರೆ. ನಾನು ಬಿಂದುವಿನಲ್ಲಿ ಪೂರ್ಣಜ್ಞಾನವು ಅಡಕವಾಗಿದೆ. ಆತ್ಮದಲ್ಲಿಯೇ ಜ್ಞಾನವಿರುತ್ತದೆ, ಅವರನ್ನೇ ಪರಮಪಿತ ಪರಮಾತ್ಮನೆಂದು ಕರೆಯಲಾಗುತ್ತದೆ. ಅವರು ಪರಮ ಆತ್ಮ ಅರ್ಥಾತ್ ಎಲ್ಲರಿಗಿಂತ ಶ್ರೇಷ್ಠಾತಿಶ್ರೇಷ್ಠ, ಪತಿತ-ಪಾವನ ತಂದೆಯೇ ಸುಪ್ರೀಂ ಆಗಿದ್ದಾರಲ್ಲವೆ. ಮನುಷ್ಯರು ಹೇ ಭಗವಂತ ಎಂದು ಹೇಳಿದಾಗ ಶಿವಲಿಂಗವೇ ನೆನಪಿಗೆ ಬರುವುದು. ಅದು ಯಥಾರ್ಥ ರೀತಿಯಿಂದಲ್ಲ. ಹೇಗೆ ಭಗವಂತನನ್ನು ನಾಮಸ್ಮರಣೆ ಮಾಡುವುದು ಒಂದು ಹವ್ಯಾಸವಾಗಿಬಿಟ್ಟಿದೆ. ಭಗವಂತನೇ ಸುಖ-ದುಃಖವನ್ನು ಕೊಡುತ್ತಾನೆಂದು ಹೇಳುತ್ತಾರೆ ಆದರೆ ನೀವು ಮಕ್ಕಳು ಈ ರೀತಿ ಹೇಳುವುದಿಲ್ಲ. ಏಕೆಂದರೆ ತಂದೆಯು ಸುಖದಾತನೆಂದು ನಿಮಗೆ ತಿಳಿದಿದೆ. ಸತ್ಯಯುಗದಲ್ಲಿ ಸುಖಧಾಮವಿತ್ತು, ಅಲ್ಲಿ ದುಃಖದ ಹೆಸರಿರಲಿಲ್ಲ. ಕಲಿಯುಗದಲ್ಲಿ ದುಃಖವಿದೆ, ಇಲ್ಲಿ ಸುಖದ ಹೆಸರೇ ಇಲ್ಲ. ಶ್ರೇಷ್ಠಾತಿಶ್ರೇಷ್ಠ ಭಗವಂತನೇ ಸರ್ವ ಆತ್ಮಗಳ ತಂದೆಯಾಗಿದ್ದಾರೆ, ಆತ್ಮಗಳಿಗೆ ಒಬ್ಬರು ತಂದೆಯಿದ್ದಾರೆ ಎಂಬುದೂ ಸಹ ಯಾರಿಗೂ ತಿಳಿದಿಲ್ಲ. ನಾವೆಲ್ಲರೂ ಸಹೋದರರೆಂದು ಹೇಳುತ್ತಾರೆಂದಮೇಲೆ ಅವಶ್ಯವಾಗಿ ಎಲ್ಲರೂ ಒಬ್ಬ ತಂದೆಯ ಮಕ್ಕಳಾದರಲ್ಲವೆ. ಅವರು ಸರ್ವವ್ಯಾಪಿಯಾಗಿದ್ದಾರೆ, ನನ್ನಲ್ಲಿಯೂ ಇದ್ದಾರೆ, ನಿನ್ನಲ್ಲಿಯೂ ಇದ್ದಾರೆಂದು ಕೆಲವರು ಹೇಳಿಬಿಟ್ಟಿದ್ದಾರೆ. ಅರೆ! ನೀವಂತೂ ಆತ್ಮರಾಗಿದ್ದೀರಿ, ಇದು ನಿಮ್ಮ ಶರೀರವಾಗಿದೆ, ಮತ್ತೆ ಮೂರನೆಯ ವಸ್ತುವಿರಲು ಹೇಗೆ ಸಾಧ್ಯ! ಅದಕ್ಕೆ ಪರಮಾತ್ಮನೆಂದು ಹೇಳುವಿರೇನು! ಜೀವಾತ್ಮನೆಂದು ಹೇಳಲಾಗುತ್ತದೆ. ಜೀವ ಪರಮಾತ್ಮನೆಂದು ಹೇಳುವುದಿಲ್ಲ ಅಂದಾಗ ಪರಮಾತ್ಮನು ಸರ್ವವ್ಯಾಪಿಯಾಗಲು ಹೇಗೆ ಸಾಧ್ಯ! ತಂದೆಯು ಸರ್ವವ್ಯಾಪಿಯಾಗಿದ್ದರೆ ವಿಶ್ವಪಿತೃತ್ವವಾಗಿಬಿಡುತ್ತದೆ. ಎಲ್ಲರೂ ತಂದೆಯರಾದರೆ, ತಂದೆಯಿಂದ ತಂದೆಗೆ ಆಸ್ತಿಯು ಸಿಗುವುದೇ? ತಂದೆಯಿಂದ ಮಕ್ಕಳಿಗೇ ಆಸ್ತಿಯು ಸಿಗುತ್ತದೆ. ಎಲ್ಲರೂ ತಂದೆಯರಾಗಲು ಹೇಗೆ ಸಾಧ್ಯ! ಇಷ್ಟು ಚಿಕ್ಕಮಾತೂ ಸಹ ಯಾರಿಗೂ ಅರ್ಥವಾಗುವುದಿಲ್ಲ ಆದ್ದರಿಂದಲೇ ತಂದೆಯು ತಿಳಿಸುತ್ತಾರೆ- ಮಕ್ಕಳೇ, ನಾನು ಇಂದಿಗೆ 5000 ವರ್ಷಗಳ ಮೊದಲೂ ಸಹ ನಿಮ್ಮನ್ನು ಎಷ್ಟು ಬುದ್ಧಿವಂತರನ್ನಾಗಿ ಮಾಡಿದ್ದೆನು, ನೀವು ಸದಾ ಆರೋಗ್ಯವಂತರು, ಐಶ್ವರ್ಯವಂತರು ಬುದ್ಧಿವಂತರಾಗಿದ್ದಿರಿ. ಇವರಿಗಿಂತ ಹೆಚ್ಚಿನ ಬುದ್ಧಿವಂತರು ಮತ್ತ್ಯಾರೂ ಇರುವುದಿಲ್ಲ. ನಿಮಗೀಗ ಯಾವ ತಿಳುವಳಿಕೆ ಸಿಗುವುದೋ ಇದು ಮತ್ತೆ ಅಲ್ಲಿರುವುದಿಲ್ಲ. ನಾವು ಪುನಃ ಕೆಳಗಿಳಿಯುತ್ತೇವೆ ಎಂಬುದು ಅಲ್ಲಿ ತಿಳಿದಿರುತ್ತದೆಯೇ! ಒಂದುವೇಳೆ ಇದು ತಿಳಿದಿದ್ದರೆ ಅದು ಸುಖದ ಭಾಸವಾಗುವುದಿಲ್ಲ. ಈ ಜ್ಞಾನವು ನಂತರ ಪ್ರಾಯಃಲೋಪವಾಗಿಬಿಡುತ್ತದೆ. ಈ ನಾಟಕದ ಜ್ಞಾನವು ಕೇವಲ ಈಗಲೇ ನಿಮ್ಮ ಬುದ್ಧಿಯಲ್ಲಿದೆ. ಬ್ರಾಹ್ಮಣರೇ ಅಧಿಕಾರಿಗಳಾಗಿರುತ್ತಾರೆ. ನಾವೀಗ ಬ್ರಾಹ್ಮಣ ವರ್ಣದವರಾಗಿದ್ದೇವೆಂದು ನಿಮಗೆ ತಿಳಿದಿದೆ. ಬ್ರಾಹ್ಮಣರಿಗೆ ತಂದೆಯು ಜ್ಞಾನವನ್ನು ತಿಳಿಸುತ್ತಾರೆ ಮತ್ತೆ ಬ್ರಾಹ್ಮಣರು ಎಲ್ಲರಿಗೂ ತಿಳಿಸುತ್ತಾರೆ. ಗಾಯನವೂ ಇದೆ- ಭಗವಂತನು ಬಂದು ಸ್ವರ್ಗದ ಸ್ಥಾಪನೆ ಮಾಡಿದ್ದರು, ರಾಜಯೋಗವನ್ನು ಕಲಿಸಿದ್ದರು. ನೋಡಿ! ಕೃಷ್ಣಜಯಂತಿಯನ್ನು ಆಚರಿಸುತ್ತಾರೆ. ಕೃಷ್ಣನು ವೈಕುಂಠದ ಮಾಲೀಕನಾಗಿದ್ದಾರೆಂದು ತಿಳಿಯುತ್ತಾರೆ ಆದರೆ ಅವರು ವಿಶ್ವದ ಮಾಲೀಕನಾಗಿದ್ದನೆಂದು ಬುದ್ಧಿಯಲ್ಲಿ ಬರುವುದಿಲ್ಲ. ಕೃಷ್ಣನ ರಾಜ್ಯವಿದ್ದಾಗ ಮತ್ತ್ಯಾವುದೇ ಧರ್ಮವಿರಲಿಲ್ಲ. ಇಡೀ ವಿಶ್ವದ ಮೇಲೆ ಅವರದೇ ರಾಜ್ಯವಿತ್ತು ಮತ್ತು ಜಮುನಾ ನದಿಯ ತೀರವಾಗಿತ್ತು. ನಿಮಗೀಗ ಇದನ್ನು ಯಾರು ತಿಳಿಸುತ್ತಿದ್ದಾರೆ? ಭಗವಾನುವಾಚ. ಬಾಕಿ ಯಾವುದೆಲ್ಲಾ ವೇದ-ಶಾಸ್ತ್ರ ಮೊದಲಾದವುಗಳನ್ನು ತಿಳಿಸುವರೋ ಅವೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಇಲ್ಲಂತೂ ನಿಮಗೆ ಸ್ವಯಂ ಭಗವಂತನೇ ತಿಳಿಸುತ್ತಿದ್ದಾರೆ. ಇದರಿಂದ ನಾವು ಪುರುಷೋತ್ತಮರಾಗುತ್ತಿದ್ದೇವೆಂದು ನಿಮಗೆ ಅರ್ಥವಾಗಿದೆ. ನಾವು ಶಾಂತಿಧಾಮ ನಿವಾಸಿಗಳಾಗಿದ್ದೇವೆ ನಂತರ ನಾವು ಬಂದು 21 ಜನ್ಮಗಳ ಪ್ರಾಲಬ್ಧವನ್ನು ಭೋಗಿಸುತ್ತೇವೆಂದು ನಿಮ್ಮ ಬುದ್ದಿಯಲ್ಲಿಯೇ ಇದೆ.

ನೀವು ಮಕ್ಕಳಿಗೆ ಆಂತರ್ಯದಲ್ಲಿ ಖುಷಿಯಿಂದ ಗದ್ಗದಿತವಾಗಬೇಕಾಗಿದೆ- ಬೇಹದ್ದಿನ ತಂದೆಯಾದ ಶಿವತಂದೆಯು ನಮಗೆ ಓದಿಸುತ್ತಿದ್ದಾರೆ, ಅವರು ಜ್ಞಾನಸಾಗರನೂ ಆಗಿದ್ದಾರೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದಾರೆ. ಇಂತಹ ತಂದೆಯು ನಮಗಾಗಿ ಬಂದಿದ್ದಾರೆಂದರೆ ಖುಷಿಯಲ್ಲಿ ಉತ್ಸಾಹ ಬರುತ್ತದೆ. ತಂದೆಗೆ ಹೇಳುತ್ತಾರೆ- ಬಾಬಾ, ನಾವು ತಮ್ಮನ್ನು ನಮ್ಮ ವಾರಸುಧಾರನನ್ನಾಗಿ ಮಾಡಿಕೊಂಡಿದ್ದೇವೆ. ತಂದೆಯು ಮಕ್ಕಳಮೇಲೆ ಬಲಿಹಾರಿಯಾಗುತ್ತಾರೆ. ಮತ್ತೆ ಮಕ್ಕಳು ಹೇಳುತ್ತೀರಿ- ಬಾಬಾ, ತಾವು ಬರುತ್ತೀರೆಂದರೆ ನಾವು ತಮಗೆ ಬಲಿಹಾರಿಯಾಗುತ್ತೇವೆ ಅರ್ಥಾತ್ ತಮ್ಮನ್ನು ಮಗುವನ್ನಾಗಿ ಮಾಡಿಕೊಳ್ಳುತ್ತೇವೆ. ತಂದೆಯನ್ನು ವಾರಸುಧಾರನನ್ನಾಗಿ ಹೇಗೆ ಮಾಡಿಕೊಳ್ಳುತ್ತೀರಿ? ಇದು ಗುಹ್ಯಮಾತಾಗಿದೆ. ತಮ್ಮ ಸರ್ವಸ್ವವನ್ನು ತಂದೆಗೆ ಸಫಲ ಮಾಡುವುದು ಬುದ್ಧಿಯ ಕೆಲಸವಾಗಿದೆ. ಈ ಕೆಲಸವನ್ನು ಬಡವರು ಬಹಳ ಬೇಗನೆ ಮಾಡುತ್ತಾರೆ. ಸಾಹುಕಾರರು ಪರಿಶ್ರಮದಿಂದ ಮಾಡುತ್ತಾರೆ. ಎಲ್ಲಿಯವರೆಗೆ ಜ್ಞಾನವನ್ನು ಸಂಪೂರ್ಣ ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅಷ್ಟು ಸಾಹಸವನ್ನಿಡುವುದಿಲ್ಲ. ಬಡವರಂತೂ ಬಹುಬೇಗನೆ ಹೇಳುತ್ತಾರೆ- ಬಾಬಾ, ನಾವಂತೂ ನಮ್ಮ ವಾರಸುಧಾರನನ್ನಾಗಿ ಮಾಡಿಕೊಳ್ಳುತ್ತೇವೆ, ನಮ್ಮ ಬಳಿ ಇರುವುದಾದರೂ ಏನು! ವಾರಸುಧಾರನನ್ನಾಗಿ ಮಾಡಿಕೊಂಡಮೇಲೆ ತಮ್ಮ ಶರೀರನಿರ್ವಹಣೆಯನ್ನು ಮಾಡಬೇಕಾಗಿದೆ. ಕೇವಲ ಗೃಹಸ್ಥದಲ್ಲಿ ನಿಮಿತ್ತರೆಂದು ತಿಳಿದು ಇರಬೇಕಾಗಿದೆ. ತಂದೆಯು ಬಹಳಷ್ಟು ಯುಕ್ತಿಗಳನ್ನು ತಿಳಿಸುತ್ತಾರೆ. ತಂದೆಯು ಇಷ್ಟನ್ನೇ ನೋಡುತ್ತಾರೆ- ಯಾವುದೇ ಪಾಪಕರ್ಮಗಳಲ್ಲಿ ಹಣವನ್ನು ವ್ಯರ್ಥಮಾಡುತ್ತಿಲ್ಲವೆ? ಮನುಷ್ಯರನ್ನು ಪುಣ್ಯಾತ್ಮರನ್ನಾಗಿ ಮಾಡುವುದರಲ್ಲಿ ಹಣವನ್ನು ತೊಡಗಿಸುತ್ತಾರೆಯೇ? ನಿಯಮದನುಸಾರವಾಗಿ ಸೇವೆ ಮಾಡುತ್ತಿದ್ದಾರೆಯೇ? ಇದನ್ನು ಪರಿಶೀಲನೆ ಮಾಡಿ ನಂತರ ಎಲ್ಲಾ ಸಲಹೆಗಳನ್ನು ಕೊಡುತ್ತಾರೆ. ಈ ಬ್ರಹ್ಮಾರವರೂ ಸಹ ವ್ಯಾಪಾರದಲ್ಲಿ ಈಶ್ವರಾರ್ಥವಾಗಿ ಹಣವನ್ನು ತೆಗೆಯುತ್ತಿದ್ದರಲ್ಲವೆ. ಅದಂತೂ ಪರೋಕ್ಷವಾಗಿತ್ತು, ಈಗಂತೂ ತಂದೆಯು ಪ್ರತ್ಯಕ್ಷದಲ್ಲಿ ಬಂದಿದ್ದಾರೆ. ನಾವು ಏನೆಲ್ಲವನ್ನು ಮಾಡುತ್ತೇವೆಯೋ ಅದರ ಫಲವನ್ನು ಈಶ್ವರನು ಇನ್ನೊಂದು ಜನ್ಮದಲ್ಲಿ ಕೊಡುವರೆಂದು ಮನುಷ್ಯರು ತಿಳಿಯುತ್ತಾರೆ. ಯಾರಾದರೂ ಬಹಳ ಬಡವರು ದುಃಖಿಯಾಗಿದ್ದರೆ ಇವರು ಅಂತಹ ಕರ್ಮವನ್ನು ಮಾಡಿದ್ದಾರೆ ಎಂದು ತಿಳಿಯುತ್ತಾರೆ. ಒಳ್ಳೆಯ ಕರ್ಮವನ್ನು ಮಾಡಿದ್ದಾರೆ ಆದ್ದರಿಂದ ಸುಖಿಯಾಗಿದ್ದಾರೆಂದು ಹೇಳುತ್ತಾರೆ. ತಂದೆಯು ನೀವು ಮಕ್ಕಳಿಗೆ ಕರ್ಮಗಳ ಗುಹ್ಯಗತಿಯನ್ನು ತಿಳಿಸುತ್ತಾರೆ. ರಾವಣರಾಜ್ಯದಲ್ಲಿ ನಿಮ್ಮ ಎಲ್ಲಾ ಕರ್ಮಗಳು ವಿಕರ್ಮಗಳೇ ಆಗುತ್ತವೆ. ಸತ್ಯಯುಗದಲ್ಲಿ ಮತ್ತು ತ್ರೇತಾಯುಗದಲ್ಲಿ ರಾವಣನೇ ಇರುವುದಿಲ್ಲ ಆದ್ದರಿಂದ ಅಲ್ಲಿ ಯಾವುದೇ ಕರ್ಮವು ವಿಕರ್ಮವಾಗುವುದಿಲ್ಲ. ಇಲ್ಲಿ ಯಾರು ಒಳ್ಳೆಯ ಕರ್ಮ ಮಾಡಿದರೆ ಅವರಿಗೆ ಅಲ್ಪಕಾಲಕ್ಕಾಗಿ ಸುಖವು ಸಿಗುವುದು. ಆದರೂ ಸಹ ಯಾವುದಾದರೊಂದು ರೋಗ, ಏರುಪೇರುಗಳು ಇದ್ದೇ ಇರುತ್ತವೆ. ಏಕೆಂದರೆ ಅಲ್ಪಕಾಲದ ಸುಖವಾಗಿದೆ. ಈಗ ತಂದೆಯು ತಿಳಿಸುತ್ತಾರೆ- ಈ ರಾವಣರಾಜ್ಯವೇ ಸಮಾಪ್ತಿಯಾಗುವುದಿದೆ. ರಾಮರಾಜ್ಯವನ್ನು ತಂದೆಯೇ ಸ್ಥಾಪನೆ ಮಾಡುತ್ತಿದ್ದಾರೆ.

ಈ ಚಕ್ರವು ಹೇಗೆ ಸುತ್ತುತ್ತದೆಯೆಂಬುದು ನಿಮಗೆ ತಿಳಿದಿದೆ. ಭಾರತವೇ ಮತ್ತೆ ಬಡರಾಷ್ಟ್ರವಾಗುತ್ತದೆ. ಭಾರತವು ಇಂದಿಗೆ 5000 ವರ್ಷಗಳ ಮೊದಲು ಸ್ವರ್ಗವಾಗಿತ್ತು, ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಮೊದಲು ಇವರ ರಾಜ್ಯಭಾರವು ನಡೆಯಿತು, ರಾಜಕುಮಾರನಾದ ಶ್ರೀಕೃಷ್ಣನು ಸ್ವಯಂವರದ ನಂತರ ರಾಜನಾದನು. ನಾರಾಯಣನೆಂದು ಹೆಸರು ಬಂದಿತು, ಇದನ್ನು ನೀವೀಗ ತಿಳಿದುಕೊಂಡಿದ್ದೀರಿ ಆದ್ದರಿಂದ ನಿಮಗೆ ಆಶ್ಚರ್ಯವೆನಿಸುತ್ತದೆ. ಬಾಬಾ, ತಾವು ಇಡೀ ರಚಯಿತ ಮತ್ತು ರಚನೆಯ ಜ್ಞಾನವನ್ನು ತಿಳಿಸುತ್ತೀರಿ. ತಾವು ನಮಗೆ ಎಷ್ಟು ಶ್ರೇಷ್ಠ ವಿದ್ಯೆಯನ್ನು ಓದಿಸುತ್ತೀರಿ! ನಾನು ನಿಮಗೆ ಬಲಿಹಾರಿಯಾಗುವೆನು. ನಾವಂತೂ ಒಬ್ಬ ತಂದೆಯ ವಿನಃ ಮತ್ತ್ಯಾರನ್ನೂ ನೆನಪು ಮಾಡುವುದಿಲ್ಲ. ಅಂತ್ಯದವರೆಗೂ ಓದಬೇಕಾಗಿದೆ. ಅಂದಮೇಲೆ ಶಿಕ್ಷಕನನ್ನು ನೆನಪು ಮಾಡಬೇಕಾಗಿದೆ. ಶಾಲೆಯಲ್ಲಿ ಶಿಕ್ಷಕರನ್ನು ನೆನಪು ಮಾಡುತ್ತಾರಲ್ಲವೆ. ಆ ಶಾಲೆಗಳಲ್ಲಾದರೆ ಎಷ್ಟೊಂದು ಮಂದಿ ಶಿಕ್ಷಕರಿರುತ್ತಾರೆ. ಪ್ರತಿಯೊಂದು ದರ್ಜೆಯ ಶಿಕ್ಷಕರು ಬೇರೆ-ಬೇರೆ ಇರುತ್ತಾರೆ, ಇಲ್ಲಂತೂ ಒಬ್ಬರೇ ಶಿಕ್ಷಕನಾಗಿದ್ದಾರೆ. ಎಷ್ಟೊಂದು ಪ್ರಿಯವಾದ ಶಿಕ್ಷಕನಾಗಿದ್ದಾರೆ, ಪ್ರಿಯವಾದ ತಂದೆಯಾಗಿದ್ದಾರೆ..... ಮೊದಲು ಭಕ್ತಿಮಾರ್ಗದಲ್ಲಿ ಅಂಧಶ್ರದ್ಧೆಯಿಂದ ನೆನಪು ಮಾಡುತ್ತಿದ್ದೆವು. ಈಗಂತೂ ಡೈರೆಕ್ಟ್ ತಂದೆಯೇ ಓದಿಸುತ್ತಾರೆ ಅಂದಮೇಲೆ ಎಷ್ಟೊಂದು ಖುಷಿಯಿರಬೇಕು! ಆದರೆ ಬಾಬಾ, ಮರೆತುಹೋಗುತ್ತೇವೆ ಎಂದು ಹೇಳುತ್ತಾರೆ. ಆಗ ನಮ್ಮ ಬುದ್ಧಿಯು ತಮ್ಮನ್ನು ಏಕೆ ನೆನಪು ಮಾಡುವುದಿಲ್ಲವೋ ಗೊತ್ತಿಲ್ಲ. ಈಶ್ವರನ ಗತಿ-ಮತವು ಭಿನ್ನವೆಂದು ಹಾಡುತ್ತಾರೆ. ಬಾಬಾ ತಮ್ಮ ಗತಿ ಮತ್ತು ಸದ್ಗತಿಯ ಮತವು ಬಹಳ ವಿಚಿತ್ರವಾಗಿದೆ. ಇಂತಹ ತಂದೆಯನ್ನು ನೆನಪು ಮಾಡಬೇಕಲ್ಲವೆ. ಸ್ತ್ರೀಯು ತನ್ನ ಪತಿಯನ್ನು ಗುಣಗಾನ ಮಾಡುತ್ತಾಳಲ್ಲವೆ- ನನ್ನ ಪತಿಯು ಬಹಳ ಒಳ್ಳೆಯವರು, ಅವರದು ಇಷ್ಟೊಂದು ಸಂಪತ್ತಿದೆ ಎಂದು ಹೇಳಿ ಒಳಗೆ ಖುಷಿಯಿರುತ್ತದೆಯಲ್ಲವೆ. ಇಲ್ಲಂತೂ ತಂದೆಯು ಪತಿಯರಿಗೂ ಪತಿ, ತಂದೆಯರ ತಂದೆಯಾಗಿದ್ದಾರೆ. ಇವರಿಂದ ನಮಗೆ ಎಷ್ಟೊಂದು ಸುಖವು ಸಿಗುತ್ತದೆ ಏಕೆಂದರೆ ವಿದ್ಯೆಯಿಂದ ಸಂಪಾದನೆಯಾಗುತ್ತದೆ. ವಾನಪ್ರಸ್ಥದಲ್ಲಿಯೂ ಗುರುಗಳನ್ನು ಮಾಡಿಕೊಳ್ಳಲಾಗುತ್ತದೆ. ತಂದೆಯೂ ಸಹ ಹೇಳುತ್ತಾರೆ- ನಾನು ವಾನಪ್ರಸ್ಥದಲ್ಲಿ ಬಂದಿದ್ದೇನೆ, ಇವರೂ ವಾನಪ್ರಸ್ಥಿ, ನಾನೂ ವಾನಪ್ರಸ್ಥಿಯಾಗಿದ್ದೇನೆ. ನನ್ನ ಮಕ್ಕಳೆಲ್ಲರೂ ವಾನಪ್ರಸ್ಥಿಗಳಾಗಿದ್ದಾರೆ. ತಂದೆ, ಶಿಕ್ಷಕ, ಗುರು ಮೂವರೂ ಒಟ್ಟಿಗೆ ಇದ್ದಾರೆ. ತಂದೆಯು ಶಿಕ್ಷಕನೂ ಆಗುತ್ತಾರೆ. ಮತ್ತೆ ಗುರುವಾಗಿ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಆ ಒಬ್ಬ ತಂದೆಯದೇ ಮಹಿಮೆಯಾಗಿದೆ, ಈ ಮಾತುಗಳು ಮತ್ತ್ಯಾವುದೇ ಶಾಸ್ತ್ರಗಳಲಿಲ್ಲ. ತಂದೆಯು ಪ್ರತಿಯೊಂದು ಮಾತನ್ನು ಚೆನ್ನಾಗಿ ತಿಳಿಸಿಕೊಡುತ್ತಾರೆ. ಇದಕ್ಕಿಂತ ಶ್ರೇಷ್ಠಜ್ಞಾನವು ಮತ್ತ್ಯಾವುದೂ ಇಲ್ಲ ಮತ್ತು ಅದನ್ನು ತಿಳಿದುಕೊಳ್ಳುವ ಅವಶ್ಯಕತೆಯೂ ಇರುವುದಿಲ್ಲ. ನಾವು ಎಲ್ಲವನ್ನರಿತು ವಿಶ್ವದ ಮಾಲೀಕರಾಗುತ್ತೇವೆ. ಮತ್ತೇನನ್ನು ಮಾಡುತ್ತೇವೆ! ಇದು ಮಕ್ಕಳ ಬುದ್ಧಿಯಲ್ಲಿರಲಿ. ಆಗ ಖುಷಿ ಮತ್ತು ಅದೇ ನೆನಪಿನಲ್ಲಿರುತ್ತೀರಿ. ಪುಣ್ಯಾತ್ಮರಾಗಲು ಖಂಡಿತವಾಗಿ ನೆನಪಿನಲ್ಲಿರಬೇಕು. ನಿಮ್ಮ ಯೋಗವನ್ನು ಕತ್ತರಿಸುವುದು ಮಾಯೆಯ ಧರ್ಮವಾಗಿದೆ. ಯೋಗದಲ್ಲಿಯೇ ಮಾಯೆಯು ವಿಘ್ನಗಳನ್ನು ಹಾಕುತ್ತದೆ, ಆಗ ನೀವು ಮರೆತುಹೋಗುತ್ತೀರಿ. ಮಾಯೆಯ ಬಹಳಷ್ಟು ಬಿರುಗಾಳಿಗಳು ಬರುತ್ತವೆ, ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಎಲ್ಲರಿಗಿಂತ ಮೊದಲು ಇವರು (ಬ್ರಹ್ಮಾ) ಇದ್ದಾರೆ ಆದ್ದರಿಂದ ಮೊದಲು ಈ ಮಾಯೆಯ ಬಿರುಗಾಳಿಗಳು ಬಹಳಷ್ಟು ಬರುತ್ತವೆ, ಬ್ರಹ್ಮನಿಗೂ ಬರುತ್ತವೆ, ನಿಮಗೂ ಬರುತ್ತವೆ. ಮಾಯೆಯ ಬಿರುಗಾಳಿಗಳೇ ಬರಲಿಲ್ಲ, ನಿರಂತರ ಯೋಗದಲ್ಲಿಯೇ ಇರುತ್ತೀರೆಂದರೆ ಕರ್ಮಾತೀತ ಸ್ಥಿತಿಯಾಗಿಬಿಡುವುದು ಮತ್ತೆ ನಾವು ಇಲ್ಲಿರಲು ಸಾಧ್ಯವಿಲ್ಲ. ಕರ್ಮಾತೀತ ಸ್ಥಿತಿಯಾಗಿಬಿಟ್ಟರೆ ಎಲ್ಲರೂ ಹೊರಟುಹೋಗುತ್ತೇವೆ. ಶಿವನ ಮೆರವಣಿಗೆಯ ಗಾಯನವಿದೆಯಲ್ಲವೆ. ಶಿವತಂದೆಯು ಬಂದಾಗ ನಾವೆಲ್ಲಾ ಆತ್ಮಗಳು ಅವರ ಜೊತೆಯಲ್ಲಿ ಹೋಗುವೆವು, ಶಿವತಂದೆಯು ಎಲ್ಲರನ್ನೂ ಕರೆದುಕೊಂಡು ಹೋಗುವುದಕ್ಕಾಗಿಯೇ ಬರುತ್ತಾರೆ. ಸತ್ಯಯುಗದಲ್ಲಿ ಇಷ್ಟೆಲ್ಲಾ ಆತ್ಮಗಳಿರುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1) ಶಿವತಂದೆಯನ್ನು ತಮ್ಮ ವಾರಸುಧಾರನನ್ನಾಗಿ ಮಾಡಿಕೊಂಡು ತಮ್ಮದೆಲ್ಲವನ್ನೂ ವರ್ಗಾವಣೆ (ಸಫಲ) ಮಾಡಬೇಕಾಗಿದೆ. ವಾರಸುಧಾರನನ್ನಾಗಿ ಮಾಡಿಕೊಂಡನಂತರ ಶರೀರನಿರ್ವಹಣೆಯನ್ನು ಮಾಡಬೇಕಾಗಿದೆ. ಆದ್ದರಿಂದ ನಿಮಿತ್ತರೆಂದು ತಿಳಿದು ಇರಬೇಕಾಗಿದೆ. ಹಣವನ್ನು ಯಾವುದೇ ಪಾಪಕರ್ಮದಲ್ಲಿ ತೊಡಗಿಸಬಾರದು.

2) ಸ್ವಯಂ ಜ್ಞಾನಸಾಗರ ತಂದೆಯೇ ನಮಗೆ ಓದಿಸುತ್ತಿದ್ದಾರೆಂದು ಒಳಗೆ ಖುಷಿಯಲ್ಲಿ ಗದ್ಗದಿತವಾಗುತ್ತಿರಲಿ. ಪುಣ್ಯಾತ್ಮರಾಗಲು ನೆನಪಿನಲ್ಲಿರಬೇಕಾಗಿದೆ. ಮಾಯೆಯ ಬಿರುಗಾಳಿಗಳಿಗೆ ಹೆದರಬಾರದು.

ವರದಾನ:
ಸತ್ಯತೆಯ ಆಧಾರದ ಮೇಲೆ ಒಬ್ಬ ತಂದೆಯನ್ನು ಪ್ರತ್ಯಕ್ಷ ಮಾಡುವಂತಹ, ನಿರ್ಭಯ ಅಧಿಕಾರ ಸ್ವರೂಪ ಭವ

ಸತ್ಯತೆಯೇ ಪ್ರತ್ಯಕ್ಷತೆಯ ಆಧಾರವಾಗಿದೆ ತಂದೆಯನ್ನು ಪ್ರತ್ಯಕ್ಷ ಮಾಡುವುದಕ್ಕಾಗಿ ನಿರ್ಭಯ ಮತ್ತು ಅಧಿಕಾರಿ ಸ್ವರೂಪರಾಗಿ ಹೇಳಿ, ಸಂಕೋಚದಿಂದ ಅಲ್ಲ. ಯಾವಾಗ ಅನೇಕ ಮತ ಉಳ್ಳವರು ಕೇವಲ ಒಂದು ಮಾತನ್ನು ಒಪ್ಪಿಕೊಳ್ಳುತ್ತಾರೆ ನಮ್ಮೆಲ್ಲರ ತಂದೆ ಒಬ್ಬರಾಗಿದ್ದಾರೆ ಮತ್ತು ಅವರೇ ಈಗ ಕಾರ್ಯ ಮಾಡುತ್ತಿದ್ದಾರೆ, ನಾವೆಲ್ಲರೂ ಒಬ್ಬರ ಸಂತಾನರು ನಾವೆಲ್ಲಾ ಒಂದೇ ಆಗಿದ್ದೇವೆ ಮತ್ತು ಇದೊಂದೇ ಯಥಾರ್ಥವಾಗಿದೆ......ಆದ್ದರಿಂದ ವಿಜಯದ ಬಾವುಟ ಹಾರಾಡುವುದು. ಇದೇ ಸಂಕಲ್ಪದಿಂದ ಮುಕ್ತಿಧಾಮಕ್ಕೆ ಹೋಗುವಿರಿ ಮತ್ತು ನಂತರ ಯಾವಾಗ ತಮ್ಮ-ತಮ್ಮ ಪಾತ್ರ ಅಭಿನಯಿಸಲು ಬಂದಾಗ ಮೊದಲು ಇದೇ ಸಂಸ್ಕಾರ ಇಮರ್ಜ್ ಆಗುವುದು ದೇವರು ಒಬ್ಬರೇ. ಇದೇ ಸತ್ಯಯುಗದ ಸ್ಮೃತಿಯಾಗಿದೆ.

ಸ್ಲೋಗನ್:
ಸಹನೆ ಮಾಡುವುದೇ ಸ್ವಯಂನ ಶಕ್ತಿ ರೂಪವನ್ನು ಪ್ರತ್ಯಕ್ಷ ಮಾಡುವುದಾಗಿದೆ.

ಅವ್ಯಕ್ತ ಸೂಚನೆಗಳು- ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ

ಹೇಗೆ ಈ ಶರೀರ ಸ್ಪಷ್ಟವಾಗಿ ಕಾಣಿಸುತ್ತದೆ ಅದೇ ರೀತಿ ತಮ್ಮ ಆತ್ಮದ ಸ್ವರೂಪ ಸ್ಪಷ್ಟವಾಗಿ ಕಾಣಿಸಲಿ. ಅಂದರೆ ಅನುಭವದಲ್ಲಿ ಬರಲಿ. ಮಸ್ತಕ ಅರ್ಥಾತ್ ಬುದ್ಧಿಯ ಸ್ಮೃತಿ ಹಾಗೂ ದೃಷ್ಟಿಯಿಂದ ಆತ್ಮಿಕ ಸ್ವರೂಪದ ಹೊರತು ಮತ್ತೇನೂ ಸಹ ಕಾಣಿಸಬಾರದು ಅಥವಾ ಸ್ಮೃತಿಯಲ್ಲಿ ಬರಬಾರದು. ಈ ರೀತಿ ನಿರಂತರ ತಪಸ್ವಿಯಾಗಿ. ಆಗ ಪ್ರತಿ ಆತ್ಮದ ಪ್ರತಿ ಕಲ್ಯಾಣದ ಶುಭ ಸಂಕಲ್ಪ ಉತ್ಪನ್ನ ವಾಗುವುದು. ಬಲೆ ಯಾರಾದರೂ ತಮ್ಮ ಸ್ವಭಾವ ಸಂಸ್ಕಾರದ ವಶ ನಿಮ್ಮ ಪುರುಷಾರ್ಥದಲ್ಲಿ ಪರೀಕ್ಷೆಯ ನಿಮಿತ್ತವಾಗಿ ಇರಬಹುದು, ಅವರ ಪ್ರತಿಯು ಸಹ ಸದಾ ಕಲ್ಯಾಣದ ಸಂಕಲ್ಪ ಉತ್ಪನ್ನವಾಗಲಿ.