26.06.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ನೀವೀಗ ಹೊಗಳಿಕೆ-ತೆಗಳಿಕೆ, ಮಾನ-ಅಪಮಾನ, ಸುಖ ಮತ್ತು ದುಃಖ ಎಲ್ಲವನ್ನೂ ಸಹನೆ ಮಾಡಬೇಕಾಗಿದೆ, ನಿಮ್ಮ ಸುಖದ ದಿನಗಳು ಈಗ ಸಮೀಪ ಬರುತ್ತಿದೆ”

ಪ್ರಶ್ನೆ:
ತಂದೆಯು ತಾವು ಬ್ರಾಹ್ಮಣಮಕ್ಕಳಿಗೆ ಯಾವ ಒಂದು ಎಚ್ಚರಿಕೆ ನೀಡುತ್ತಾರೆ?

ಉತ್ತರ:
ಮಕ್ಕಳೇ, ತಂದೆಯೊಂದಿಗೆ ಮುನಿಸಿಕೊಳ್ಳಬೇಡಿ. ಒಂದುವೇಳೆ ತಂದೆಯೊಂದಿಗೆ ಮುನಿಸಿಕೊಂಡರೆ ಸದ್ಗತಿಯೊಂದಿಗೂ ಮುನಿಸಿಕೊಳ್ಳುವಿರಿ. ತಂದೆಯು ಎಚ್ಚರಿಕೆ ನೀಡುತ್ತಾರೆ- ಮುನಿಸಿಕೊಳ್ಳುವವರೆಗೆ ಬಹಳ ಕಠಿಣ ಶಿಕ್ಷೆಯು ಸಿಗುವುದು. ಪರಸ್ಪರ ಬ್ರಾಹ್ಮಿಣಿಯರೊಂದಿಗೆ ಮುನಿಸಿಕೊಂಡರೂ ಸಹ ಹೂವಾಗುತ್ತಾ-ಆಗುತ್ತಾ ಮುಳ್ಳಾಗಿಬಿಡುವಿರಿ. ಇದರಲ್ಲಿ ಬಹಳ ಎಚ್ಚರಿಕೆಯನ್ನಿಡಿ.

ಗೀತೆ:
ಧೈರ್ಯತಾಳು ಮಾನವನೇ, ಸುಖದ ದಿನಗಳು ಬರಲಿವೆ...............

ಓಂ ಶಾಂತಿ.
ಮಧುರಾತಿ ಮಧುರ ಅಗಲಿಹೋಗಿ ಮರಳಿಸಿಕ್ಕಿರುವ ಮಕ್ಕಳು ಗೀತೆಯನ್ನು ಕೇಳಿದಿರಿ. ನೀವು ಮಕ್ಕಳ ಯಾವುದೆಲ್ಲಾ ಜನ್ಮ-ಜನ್ಮಾಂತರದ ದುಃಖವಿದೆಯೋ ಎಲ್ಲವೂ ದೂರವಾಗಲಿದೆ. ಈ ಗೀತೆಯ ಸಾಲನ್ನು ಕೇಳಿದಿರಿ. ಈಗ ನಮ್ಮ ದುಃಖದ ಪಾತ್ರವು ಮುಕ್ತಾಯವಾಗಿ ಸುಖದ ಪಾತ್ರವು ಆರಂಭವಾಗಲಿದೆ ಎಂದು ನಿಮಗೆ ಅರ್ಥವಾಗಿದೆ. ಯಾರು ಚೆನ್ನಾಗಿ ಅರಿತುಕೊಂಡಿಲ್ಲವೋ ಅವರು ಯಾವುದಾದರೊಂದು ಮಾತಿನಲ್ಲಿ ಅವಶ್ಯವಾಗಿ ದುಃಖವನ್ನನುಭವಿಸುತ್ತಾರೆ. ಇಲ್ಲಿ ತಂದೆಯ ಬಳಿ ಬಂದಾಗಲೂ ಸಹ ಯಾವುದಾದರೊಂದು ಪ್ರಕಾರದ ದುಃಖದ ಅನುಭವವಾಗುವುದು. ಅನೇಕ ಮಕ್ಕಳಿಗೆ ಕಷ್ಟವಾಗುತ್ತಿರಬಹುದು ಎಂಬುದು ತಂದೆಗೆ ಅರ್ಥವಾಗುತ್ತದೆ. ತೀರ್ಥಯಾತ್ರೆಗಳಿಗೆ ಹೋಗುತ್ತಿದ್ದಾಗ ಕೆಲವೊಮ್ಮೆ ಜನಸಂದಣಿಯಿರುತ್ತದೆ, ಇನ್ನೂ ಕೆಲವೊಮ್ಮೆ ಮಳೆ ಬೀಳುತ್ತವೆ, ಬಿರುಗಾಳಿಗಳೂ ಬರುತ್ತವೆ. ಯಾರು ಸತ್ಯಭಕ್ತರಾಗಿರುವರೋ ಅವರು ಏನಾದರೂ ಪರವಾಗಿಲ್ಲ, ಭಗವಂತನ ಬಳಿಗೆ ಹೋಗುತ್ತೇವೆಂದು ಹೇಳುತ್ತಾರೆ. ಭಗವಂತನೆಂದು ತಿಳಿದುಕೊಂಡೇ ಯಾತ್ರೆಗಳಿಗೆ ಹೋಗುತ್ತಾರೆ. ಮನುಷ್ಯರಿಗೆ ಅನೇಕ ಭಗವಂತರಿದ್ದಾರೆ ಅಂದಾಗ ಯಾರು ಒಳ್ಳೆಯ ಶಕ್ತಿಶಾಲಿಗಳಾಗಿರುವರೋ ಅವರು ಏನಾದರೂ ಪರವಾಗಿಲ್ಲ ಒಳ್ಳೆಯ ಕೆಲಸದಲ್ಲಿ ಸದಾ ವಿಘ್ನಗಳು ಬರುತ್ತವೆ ಆದರೆ ನಾವು ಹಿಂತಿರುಗಿ ಹೋಗುವುದಿಲ್ಲವೆಂದು ಹೇಳುತ್ತಾರೆ. ಕೆಲವರಂತೂ ಸಹಿಸದೆ ಹಿಂತಿರುಗುತ್ತಾರೆ. ಕೆಲವೊಮ್ಮೆ ವಿಘ್ನಗಳು ಬರುತ್ತವೆ, ಕೆಲವೊಮ್ಮೆ ಬರುವುದಿಲ್ಲ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನಿಮ್ಮದು ಯಾತ್ರೆಯಾಗಿದೆ. ನಾವು ಬೇಹದ್ದಿನ ತಂದೆಯ ಬಳಿ ಹೋಗುತ್ತೇವೆ, ಆ ತಂದೆಯು ಎಲ್ಲರ ದುಃಖವನ್ನು ದೂರಮಾಡುವವರೆಂದು ನಿಮಗೆ ನಿಶ್ಚಯವಿದೆ. ಈಗಂತೂ ನೋಡಿ, ಮಧುಬನದಲ್ಲಿ ಎಷ್ಟೊಂದು ಜನಸಂದಣಿಯಿದೆ, ಬಹಳ ಮಕ್ಕಳಿಗೆ ತೊಂದರೆಯೂ ಆಗುತ್ತಿರಬಹುದು. ನೆಲದಮೇಲೆ ಮಲಗಬೇಕಾಗುವುದೆಂದು ತಂದೆಗೆ ಚಿಂತೆಯಿರುತ್ತದೆ. ಮಕ್ಕಳನ್ನು ನೆಲದ ಮೇಲೆ ಮಲಗಿಸಲು ತಂದೆಗೇನೂ ಇಷ್ಟವಿಲ್ಲ ಆದರೆ ನಾಟಕದನುಸಾರ ಜನಸಂದಣಿಯಾಗಿಬಿಟ್ಟಿದೆ. ಕಲ್ಪದ ಮೊದಲೂ ಆಗಿತ್ತು, ಈಗ ಪುನಃ ಆಗುವುದಿದೆ. ಇದರಲ್ಲಿ ಯಾವುದೇ ದುಃಖವಾಗಬಾರದು. ಇದೂ ಸಹ ತಿಳಿದಿದೆ- ಓದುವವರು ಕೆಲವರು ರಾಜರಾಗುತ್ತಾರೆ, ಕೆಲವರು ಪ್ರಜೆಗಳೂ ಆಗುತ್ತಾರೆ. ಕೆಲವರು ಶ್ರೇಷ್ಠ ಪದವಿ, ಇನ್ನೂ ಕೆಲವರು ಕನಿಷ್ಠ ಪದವಿ. ಆದರೆ ಅಲ್ಲಿ ಅವಶ್ಯವಾಗಿ ಸುಖವಂತೂ ಇರುವುದು. ಇದೂ ಸಹ ತಂದೆಗೆ ಗೊತ್ತಿದೆ, ಕೆಲವು ಮಕ್ಕಳು ಇನ್ನೂ ಪರಿಪಕ್ವವಾಗಿಲ್ಲ, ಏನನ್ನೂ ಸಹನೆ ಮಾಡುವುದಕ್ಕೆ ಆಗುವುದಿಲ್ಲ. ಅವರಿಗೆ ಸ್ವಲ್ಪ ಕಷ್ಟವಾದರೂ ಸಹ ನಾವೇಕೆ ಬಂದೆವೋ ಎನ್ನುತ್ತಾರೆ ಅಥವಾ ನಮ್ಮನ್ನು ಬ್ರಾಹ್ಮಿಣಿಯರು ಬಲವಂತವಾಗಿ ಕರೆತಂದರೆಂದು ಹೇಳುತ್ತಾರೆ, ಇನ್ನೂ ಕೆಲವರು ಹೀಗೂ ಇರುತ್ತಾರೆ- ಬ್ರಾಹ್ಮಿಣಿಯು ನಮ್ಮನ್ನು ಸಿಲುಕಿಸಿದ್ದಾರೆ ಎಂದು ಹೇಳುತ್ತಾರೆ. ವಿಶ್ವವಿದ್ಯಾಲಯದಲ್ಲಿ ಬಂದಿದ್ದೇವೆ ಎಂಬ ಪೂರ್ಣಪರಿಚಯವೇ ಇರುವುದಿಲ್ಲ. ಈ ಸಮಯದ ವಿದ್ಯೆಯಿಂದ ಕೆಲವರು ರಾಜರೂ ಆಗುತ್ತಾರೆ, ಭವಿಷ್ಯದಲ್ಲಿ ಕೆಲವರು ಪ್ರಜೆಗಳೂ ಆಗುವವರಿದ್ದಾರೆ. ಇಲ್ಲಿನ ರಾಜ ಮತ್ತು ಪ್ರಜೆಗಳಲ್ಲಿಯೂ ಹಾಗೂ ಅಲ್ಲಿನ ರಾಜ ಮತ್ತು ಪ್ರಜೆಗಳಲ್ಲಿಯೂ ರಾತ್ರಿ-ಹಗಲಿನ ಅಂತರವಿರುತ್ತದೆ. ಇಲ್ಲಂತೂ ರಾಜರು ದುಃಖಿಯಾಗಿದ್ದಾರೆ, ಇಲ್ಲಿನ ಪ್ರಜೆಗಳೂ ದುಃಖಿಯಾಗಿದ್ದಾರೆ, ಸತ್ಯಯುಗದಲ್ಲಿ ಇಬ್ಬರೂ ಸುಖಿಯಾಗಿರುತ್ತಾರೆ. ಇದು ಪತಿತ, ವಿಕಾರಿ ಪ್ರಪಂಚವಾಗಿದೆ. ಭಲೆ ಕೆಲವರ ಬಳಿ ಬಹಳಷ್ಟು ಹಣವಿದೆ ಆದರೆ ಈ ಹಣವೆಲ್ಲವೂ ಮಣ್ಣುಪಾಲಾಗಲಿದೆ. ಈಗ ಶರೀರವು ಸಮಾಪ್ತಿಯಾಗುವುದೆಂದು ತಂದೆಯು ತಿಳಿಸುತ್ತಾರೆ. ಆತ್ಮವು ಮಣ್ಣು ಪಾಲಾಗುವುದಿಲ್ಲ. ಎಷ್ಟು ದೊಡ್ಡ-ದೊಡ್ಡ ಸಾಹುಕಾರರಿದ್ದಾರೆ, ಬಿರ್ಲಾದಂತಹವರೂ ಇದ್ದಾರೆ ಆದರೆ ಈಗ ಈ ಹಳೆಯ ಪ್ರಪಂಚವು ಬದಲಾಗುತ್ತಿದೆಯೆಂದು ಅವರಿಗೇನು ಗೊತ್ತು! ಗೊತ್ತಿದ್ದರೆ ತಕ್ಷಣ ಬಂದುಬಿಡುತ್ತಿದ್ದರು. ಇಲ್ಲಿ ಭಗವಂತನು ಬಂದಿದ್ದಾರೆಂದು ಹೇಳುತ್ತಾರೆ ಅಂದಮೇಲೆ ಮತ್ತೆ ಹೋಗುವುದಾದರೂ ಎಲ್ಲಿಗೆ? ತಂದೆಯಿಲ್ಲದೆ ಯಾರಿಗೂ ಸದ್ಗತಿ ಸಿಗಲು ಸಾಧ್ಯವಿಲ್ಲ. ಒಂದುವೇಳೆ ಯಾರಾದರೂ ಮುನಿಸಿಕೊಂಡರೆ ಅವರು ಸದ್ಗತಿಯೊಂದಿಗೆ ಮುನಿಸಿಕೊಂಡರೆಂದು ತಂದೆಯು ಹೇಳುತ್ತಾರೆ. ಹೀಗೆ ಅನೇಕರು ಮುನಿಸಿಕೊಂಡು ಕೆಳಗೆ ಬೀಳುತ್ತಾರೆ. ಆಶ್ಚರ್ಯವೆನಿಸುವಂತೆ ಜ್ಞಾನವನ್ನು ಕೇಳುತ್ತಾರೆ. ನಿಶ್ಚಯವನ್ನಿಡುತ್ತಾರೆ ಆದರೆ ಮಾಯೆಗೆ ವಶರಾಗಿ ಓಡಿಹೋಗುತ್ತಾರೆ, ಇನ್ನೂ ಕೆಲವರಿಗೆ ಅವಶ್ಯವಾಗಿ ಇಂತಹ ಮಾರ್ಗವು ಮತ್ತ್ಯಾವುದೂ ಇಲ್ಲ. ಇದರಿಂದ ಸುಖ ಮತ್ತು ಶಾಂತಿಯ ಆಸ್ತಿಯು ಸಿಗುವುದು. ಇದನ್ನು ಬಿಟ್ಟು ಸುಖ-ಶಾಂತಿ ಸಿಗುವುದು ಅಸಂಭವವೆಂದು ಅರ್ಥವಾಗುತ್ತದೆ. ಯಾವಾಗ ಬಹಳ ಹಣವಿರುವುದೋ ಆಗ ಸುಖ ಸಿಗುವುದು. ಹಣದಲ್ಲಿಯೇ ಸುಖವಿರುತ್ತದೆಯಲ್ಲವೆ. ಮೂಲವತನದಲ್ಲಂತೂ ಆತ್ಮಗಳು ಶಾಂತಿಯಲ್ಲಿ ಕುಳಿತಿರುತ್ತೀರಿ. ತನ್ನಿಂದ ಪಾತ್ರವನ್ನಭಿನಯಿಸಲು ಆಗುವುದಿಲ್ಲ ಆದ್ದರಿಂದ ನಾವು ಸದಾ ಅಲ್ಲಿಯೇ ಇರುತ್ತೇವೆ ಎಂದು ಯಾರೂ ಹೇಳುವಂತಿಲ್ಲ. ಮಕ್ಕಳಿಗೆ ತಿಳಿಸಲಾಗಿದೆ- ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಅನೇಕರು ಯಾವುದಾದರೊಂದು ಸಂಶಯದಲ್ಲಿ ಬಂದು ಬಿಟ್ಟುಬಿಡುತ್ತಾರೆ. ಬ್ರಾಹ್ಮಿಣಿಯರೊಂದಿಗೆ ಅಥವಾ ಪರಸ್ಪರದಲ್ಲಿ ಮುನಿಸಿಕೊಂಡು ವಿದ್ಯೆಯನ್ನೇ ಬಿಡುತ್ತಾರೆ.

ನೀವೀಗ ಇಲ್ಲಿ ಹೂಗಳಾಗಲು ಬಂದಿದ್ದೀರಿ. ಅವಶ್ಯವಾಗಿ ನಾವು ಮುಳ್ಳುಗಳಿಂದ ಹೂವಾಗುತ್ತಿದ್ದೇವೆ ಎಂಬುದನ್ನು ಅನುಭವ ಮಾಡುತ್ತೀರಿ. ಇಲ್ಲಿ ಅವಶ್ಯವಾಗಿ ಹೂಗಳಾಗಬೇಕಾಗಿದೆ. ಕೆಲವರಿಗೆ ಸಂಶಯ ಬರುತ್ತದೆ- ಇಂತಹವರು ಈ ರೀತಿ ಮಾಡುತ್ತಾರೆ, ಈ ರೀತಿಯಿದ್ದಾರೆ ಆದ್ದರಿಂದ ನಾವು ಬರುವುದಿಲ್ಲ ಎಂದು ಹೇಳಿ ಮುನಿಸಿಕೊಂಡು ಮನೆಯಲ್ಲಿ ಕುಳಿತುಬಿಡುತ್ತಾರೆ. ತಂದೆಯು ತಿಳಿಸುತ್ತಾರೆ- ಮತ್ತೆಲ್ಲರಿಂದ ಭಲೆ ಮುನಿಸಿಕೊಳ್ಳಿ ಆದರೆ ತಂದೆಯೊಂದಿಗೆ ಎಂದೂ ಮುನಿಸಿಕೊಳ್ಳಬೇಡಿ. ತಂದೆಯು ಎಚ್ಚರಿಕೆ ನೀಡುತ್ತಾರೆ. ಶಿಕ್ಷೆಗಳು ಬಹಳ ಕಠಿಣವಾಗಿದೆ, ಗರ್ಭದಲ್ಲಿಯೂ ಯಾವ ಶಿಕ್ಷೆಗಳು ಸಿಗುತ್ತವೆ ಎಂಬುದನ್ನು ಸಾಕ್ಷಾತ್ಕಾರ ಮಾಡಿಸಿ ಶಿಕ್ಷೆಯನ್ನು ಕೊಡುತ್ತಾರೆ. ಸಾಕ್ಷಾತ್ಕಾರವಿಲ್ಲದೆ ಶಿಕ್ಷೆಯು ಸಿಗಲು ಸಾಧ್ಯವಿಲ್ಲ. ಇಲ್ಲಿಯದು ಸಾಕ್ಷಾತ್ಕಾರವಾಗುವುದು- ನೀವು ಓದುತ್ತಾ-ಓದುತ್ತಾ ಪರಸ್ಪರ ಹೊಡೆದಾಡಿ-ಜಗಳವಾಡಿ ಮುನಿಸಿಕೊಂಡು ವಿದ್ಯೆಯನ್ನು ಬಿಟ್ಟಿದ್ದೀರಿ, ಈಗ ನೀವು ಮಕ್ಕಳಿಗೆ ತಿಳಿದಿದೆ- ನಾವು ತಂದೆಯಿಂದ ಓದಬೇಕಾಗಿದೆ. ವಿದ್ಯೆಯನ್ನೆಂದೂ ಬಿಡಬಾರದು. ಮನುಷ್ಯರಿಂದ ದೇವತೆಗಳಾಗುವುದಕ್ಕಾಗಿಯೇ ನೀವಿಲ್ಲಿ ಓದುತ್ತಿದ್ದೀರಿ. ಇಂತಹ ಶ್ರೇಷ್ಠಾತಿಶ್ರೇಷ್ಠ ತಂದೆಯ ಬಳಿ ನೀವು ಮಿಲನ ಮಾಡಲು ಬರುತ್ತೀರಿ. ಕೆಲವೊಮ್ಮೆ ಹೆಚ್ಚುಮಂದಿ ಬಂದುಬಿಡುತ್ತಾರೆ. ನಾಟಕದನುಸಾರ ಮಕ್ಕಳಿಗೆ ಸ್ವಲ್ಪ ತೊಂದರೆಯಾಗಲೂಬಹುದು. ಮಕ್ಕಳಿಗೆ ಅನೇಕ ಬಿರುಗಾಳಿಗಳು ಬರುವುದು. ನಮಗೆ ಇಂತಹ ವಸ್ತು ಸಿಗಲಿಲ್ಲ, ಅದು ಸಿಗಲಿಲ್ಲ, ಇದೇನೇನೂ ಇಲ್ಲ. ಯಾವಾಗ ಮೃತ್ಯುವಿನ ಸಮಯವು ಬರುವುದೋ ಆಗ ಅಜ್ಞಾನಿ ಮನುಷ್ಯರು ಹೇಳುತ್ತಾರೆ- ನಾವೇನು ಅಪರಾಧವನ್ನು ಮಾಡಿದ್ದೇವೆಂದು ಇವರು ನಮ್ಮನ್ನು ಹೊಡೆಯುತ್ತಾರೆ. ಆ ಅಂತಿಮ ಸಮಯದ ಪಾತ್ರವನ್ನು ನಿರಪರಾಧಿಗಳ ಕೊಲೆಯ ಆಟವೆಂದು ಹೇಳಲಾಗುತ್ತದೆ. ಆಕಸ್ಮಿಕವಾಗಿ ಬಾಂಬುಗಳು ಬೀಳುತ್ತವೆ, ಅನೇಕರು ಸಾಯುತ್ತಾರೆ, ಇದು ನಿರಪರಾಧಿಗಳ ಕೊಲೆಯಲ್ಲವೆ. ಅಜ್ಞಾನಿ ಮನುಷ್ಯರು ಬಹಳಷ್ಟು ಚೀರಾಡುತ್ತಾರೆ, ನೀವು ಮಕ್ಕಳಂತೂ ಬಹಳ ಖುಷಿಯಲ್ಲಿರುತ್ತೀರಿ ಏಕೆಂದರೆ ನಿಮಗೆ ತಿಳಿದಿದೆ- ಈ ಹಳೆಯ ಪ್ರಪಂಚದ ವಿನಾಶವು ಆಗಲೇಬೇಕಾಗಿದೆ. ಅನೇಕ ಧರ್ಮಗಳ ವಿನಾಶವು ಆಗದಿದ್ದರೆ ಒಂದು ಸದ್ಧರ್ಮದ ಸ್ಥಾಪನೆಯು ಹೇಗಾಗುವುದು! ಸತ್ಯಯುಗದಲ್ಲಿ ಒಂದು ಆದಿಸನಾತನ ದೇವಿ-ದೇವತಾಧರ್ಮವಿತ್ತು. ಸತ್ಯಯುಗದಲ್ಲಿ ಏನಿತ್ತು ಎಂದು ಯಾರಿಗೇನು ಗೊತ್ತು? ಇದು ಪುರುಷೋತ್ತಮ ಸಂಗಮಯುಗವಾಗಿದೆ. ತಂದೆಯು ಎಲ್ಲರನ್ನೂ ಪುರುಷೋತ್ತಮರನ್ನಾಗಿ ಮಾಡಲು ಬಂದಿದ್ದಾರೆ. ಎಲ್ಲರ ತಂದೆಯಲ್ಲವೆ. ನಾಟಕವನ್ನಂತೂ ನೀವು ಅರಿತುಕೊಂಡಿದ್ದೀರಿ. ಎಲ್ಲರೂ ಸತ್ಯಯುಗದಲ್ಲಿ ಬರುವುದಿಲ್ಲ. ಇಷ್ಟು ಕೋಟ್ಯಾಂತರ ಆತ್ಮಗಳು ಸತ್ಯಯುಗದಲ್ಲಿ ಬರುವರೇ? ಇವು ವಿಸ್ತಾರದ ಮಾತುಗಳಾಗಿವೆ. ಬಹಳ ಮಂದಿ ಮಕ್ಕಳು ಏನನ್ನೂ ತಿಳಿದುಕೊಂಡಿಲ್ಲ. ಇನ್ನೂ ಭಕ್ತಿಮಾರ್ಗದಲ್ಲಿಯೇ ಸಿಕ್ಕಿಹಾಕಿಕೊಂಡಿದ್ದಾರೆ, ಜ್ಞಾನವು ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ, ಭಕ್ತಿಯು ಅಭ್ಯಾಸವಾಗಿಬಿಟ್ಟಿದೆ. ಭಗವಂತನು ಏನು ಮಾಡಲು ಸಾಧ್ಯವಿಲ್ಲ. ಸತ್ತಿರುವವರನ್ನು ಬದುಕಿಸಬಲ್ಲರೆಂದು ಹೇಳುತ್ತಾರೆ. ತಂದೆಯ ಬಳಿ ಬರುತ್ತಾರೆ. ಇಂತಹ ಮನುಷ್ಯರು ಸತ್ತಿರುವವರನ್ನು ಬದುಕಿಸಿದರು ಆದರೆ ಭಗವಂತನು ಏನು ಮಾಡಲು ಸಾಧ್ಯವಿಲ್ಲ! ಎಂದು ಹೇಳುತ್ತಾರೆ. ಯಾರಾದರೂ ಒಳ್ಳೆಯ ಕಾರ್ಯ ಮಾಡಿದರೆ ಸಾಕು, ಅವರ ಮಹಿಮೆಯನ್ನೇ ಮಾಡತೊಡಗುತ್ತಾರೆ. ಮತ್ತೆ ಅವರಿಗೆ ಸಾವಿರಾರುಮಂದಿ ಅನುಯಾಯಿಗಳಾಗುತ್ತಾರೆ. ನಿಮ್ಮಬಳಿಯಂತೂ ಕೆಲವರೇ ಬರುತ್ತಾರೆ. ಭಗವಂತನೇ ಓದಿಸುತ್ತಾರೆ ಅಂದಮೇಲೆ ಇಷ್ಟು ಕಡಿಮೆ ಬರುತ್ತಾರೆ- ಏಕೆ? ಹೀಗೆ ಅನೇಕರು ಹೇಳುತ್ತಾರೆ. ಅರೆ! ಇಲ್ಲಂತೂ ಸಾಯಬೇಕಾಗುತ್ತದೆ, ಅಲ್ಲಿ ಕನರಸವಿರುತ್ತದೆ. ಬಹಳ ಆನಂದವಾಗಿ ಕುಳಿತು ಗೀತೆಯನ್ನು ತಿಳಿಸುತ್ತಾರೆ. ಭಕ್ತರು ಕೇಳುತ್ತಾರೆ. ಇಲ್ಲಿ ಆ ಕನರಸದ ಮಾತಿಲ್ಲ. ನಿಮಗೆ ಕೇವಲ ತಂದೆಯನ್ನು ನೆನಪು ಮಾಡಿ ಎಂದು ಹೇಳಲಾಗುತ್ತದೆ. ಗೀತೆಯಲ್ಲಿ ಮನ್ಮನಾಭವ ಎಂಬ ಅಕ್ಷರವಿದೆ. ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುವುದು. ಬ್ರಾಹ್ಮಿಣಿಯರೊಂದಿಗೆ ಅಥವಾ ಸೇವಾಕೇಂದ್ರದೊಂದಿಗೆ ಮುನಿಸಿಕೊಳ್ಳುತ್ತೀರೆಂದರೆ ಈ ಕೆಲಸವನ್ನಾದರೂ ಮಾಡಿ, ಮತ್ತೆಲ್ಲಾ ಸಂಗಗಳನ್ನು ತ್ಯಜಿಸಿ ಒಬ್ಬ ತಂದೆಯನ್ನು ನೆನಪು ಮಾಡಿ. ತಂದೆಯೇ ಪತಿತ-ಪಾವನನಾಗಿದ್ದಾರೆ, ಆ ತಂದೆಯನ್ನು ನೆನಪು ಮಾಡುತ್ತಾ ಇರಿ. ಸ್ವದರ್ಶನದ ಚಕ್ರವನ್ನು ತಿರುಗಿಸುತ್ತಾ ಇರಿ. ಇಷ್ಟು ನೆನಪು ಮಾಡಿದರೂ ಸಹ ಸ್ವರ್ಗದಲ್ಲಿ ಅವಶ್ಯವಾಗಿ ಬರುತ್ತೀರಿ. ಸ್ವರ್ಗದಲ್ಲಿ ಶ್ರೇಷ್ಠಪದವಿಯಂತೂ ಪುರುಷಾರ್ಥದನುಸಾರವಾಗಿಯೇ ಸಿಗುವುದು. ಅದಕ್ಕಾಗಿ ಪ್ರಜೆಗಳನ್ನು ಮಾಡಿಕೊಳ್ಳಿ. ಇಲ್ಲವಾದರೆ ಯಾರಮೇಲೆ ರಾಜ್ಯ ಮಾಡುತ್ತೀರಿ! ಯಾರು ಬಹಳ ಪರಿಶ್ರಮಪಡುವರೋ ಅವರೇ ಶ್ರೇಷ್ಠಪದವಿಯನ್ನು ಪಡೆಯುತ್ತಾರೆ. ಶ್ರೇಷ್ಠಪದವಿಗಾಗಿಯೇ ಎಷ್ಟೊಂದು ತಲೆಕೆಡಿಸಿಕೊಳ್ಳುತ್ತಾರೆ! ಪುರುಷಾರ್ಥವಿಲ್ಲದೆ ಯಾರೂ ಇರಲು ಸಾಧ್ಯವಿಲ್ಲ. ನಿಮಗೆ ತಿಳಿದಿದೆ- ಶ್ರೇಷ್ಠಾತಿಶ್ರೇಷ್ಠ ಪತಿತ-ಪಾವನನು ತಂದೆಯಾಗಿದ್ದಾರೆ. ಮನುಷ್ಯರು ಭಲೆ ಮಹಿಮೆ ಮಾಡುತ್ತಾರೆ ಆದರೆ ಅದರ ಅರ್ಥವನ್ನು ತಿಳಿದುಕೊಂಡಿಲ್ಲ. ಭಾರತವು ಎಷ್ಟೊಂದು ಸಾಹುಕಾರನಾಗಿತ್ತು, ಭಾರತವು ಸ್ವರ್ಗ, ಪ್ರಪಂಚದ ಅದ್ಭುತವಾಗಿದೆ. ಆ 7 ಅದ್ಭುತಗಳು ಮಾಯೆಯದಾಗಿದೆ. ಇಡೀ ಡ್ರಾಮಾದಲ್ಲಿ ಅತಿಶ್ರೇಷ್ಠವಾದುದು ಸ್ವರ್ಗವಾಗಿದೆ. ಅತಿಕನಿಷ್ಠವಾದುದು ನರಕವಾಗಿದೆ. ನೀವೀಗ ತಂದೆಯ ಬಳಿ ಬಂದಿದ್ದೀರಿ, ಆ ಮಧುರತಂದೆಯು ನಮ್ಮನ್ನು ಮೇಲೆ ಕರೆದುಕೊಂಡು ಹೋಗುತ್ತಾರೆಂದು ನಿಮಗೆ ತಿಳಿದಿದೆ ಅಂದಮೇಲೆ ಅವರನ್ನು ಯಾರು ಮರೆಯುತ್ತಾರೆ! ಭಲೆ ಹೊರಗಡೆ ಎಲ್ಲಿಯಾದರೂ ಹೋಗಿ ಆದರೆ ಕೇವಲ ಒಂದುಮಾತನ್ನು ನೆನಪಿಟ್ಟುಕೊಳ್ಳಿ, ತಂದೆಯನ್ನು ನೆನಪು ಮಾಡಿ. ತಂದೆಯೇ ಶ್ರೀಮತವನ್ನು ಕೊಡುತ್ತಾರೆ- ಭಗವಾನುವಾಚ, ಬ್ರಹ್ಮಾ ಭಗವಾನುವಾಚ ಅಲ್ಲ.

ಬೇಹದ್ದಿನ ತಂದೆಯು ಮಕ್ಕಳನ್ನು ಕೇಳುತ್ತಾರೆ- ಮಕ್ಕಳೇ, ನಾನು ನಿಮ್ಮನ್ನು ಎಷ್ಟೊಂದು ಸಾಹುಕಾರರನ್ನಾಗಿ ಮಾಡಿ ಹೋದೆನು, ಮತ್ತೆ ನಿಮ್ಮ ದುರ್ಗತಿಯು ಹೇಗಾಯಿತು? ಆದರೆ ಮಕ್ಕಳು ಈ ರೀತಿ ಕೇಳಿಸಿಕೊಳ್ಳುತ್ತಾರೆ ಹೇಗೆ ಏನೂ ಗೊತ್ತಿಲ್ಲವೆಂಬಂತೆ. ಮಕ್ಕಳಿಗೆ ಸ್ವಲ್ಪ ಕಷ್ಟವೂ ಆಗುತ್ತದೆ. ಸುಖ-ದುಃಖ, ಹೊಗಳಿಕೆ-ತೆಗಳಿಕೆ ಎಲ್ಲವನ್ನೂ ಸಹನೆ ಮಾಡಬೇಕಾಗುತ್ತದೆ. ಇಲ್ಲಿಯ ಮನುಷ್ಯರನ್ನು ನೋಡಿ, ಪ್ರಧಾನಮಂತ್ರಿಗೂ ಕಲ್ಲನ್ನು ಹೊಡೆಯುವುದರಲ್ಲಿ ನಿಧಾನಿಸುವುದಿಲ್ಲ. ಶಾಲೆಯ ಮಕ್ಕಳದು ಬಿಸಿರಕ್ತವೆಂದು ಹೇಳುತ್ತಾರೆ. ಅವರಿಗೆ ಬಹಳ ಮಹಿಮೆ ಮಾಡುತ್ತಾರೆ. ಇವರು ಭವಿಷ್ಯದ ಹೊಸರಕ್ತವೆಂದೂ ಹೇಳುತ್ತಾರೆ. ಆದರೆ ಅದೇ ವಿದ್ಯಾರ್ಥಿಗಳು ದುಃಖವನ್ನೂ ಕೊಡಲು ತೊಡಗುತ್ತಾರೆ. ಕಾಲೇಜುಗಳಿಗೆ ಬೆಂಕಿಯನ್ನಿಡುತ್ತಾರೆ. ಒಬ್ಬರು ಇನ್ನೊಬ್ಬರನ್ನು ನಿಂದನೆ ಮಾಡುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಪ್ರಪಂಚದ ಸ್ಥಿತಿಯು ಏನಾಗಿದೆ? ನಾಟಕದ ಪಾತ್ರಧಾರಿಯಾಗಿಯೂ, ನಾಟಕದ ಆದಿ-ಮಧ್ಯ-ಅಂತ್ಯದ ಮುಖ್ಯಪಾತ್ರಧಾರಿಗಳನ್ನೇ ಅರಿತುಕೊಂಡಿಲ್ಲವೆಂದರೆ ಏನು ಹೇಳುವುದು! ದೊಡ್ಡವರಿಗಿಂತ ದೊಡ್ಡವರು ಯಾರಾಗಿದ್ದಾರೆ? ಅವರ ಚರಿತ್ರೆಯನ್ನಾದರೂ ಅರಿತುಕೊಳ್ಳಬೇಕಲ್ಲವೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಬ್ರಹ್ಮಾ-ವಿಷ್ಣು-ಶಂಕರರ ಪಾತ್ರವೇನು, ಧರ್ಮಸ್ಥಾಪಕರ ಪಾತ್ರವೇನಾಗಿದೆ? ಮನುಷ್ಯರಂತೂ ಅಂಧಶ್ರದ್ಧೆಯಲ್ಲಿ ಬಂದು ಎಲ್ಲರಿಗೆ ಗುರುಗಳೆಂದು ಹೇಳಿಬಿಡುತ್ತಾರೆ. ಸದ್ಗತಿ ಮಾಡುವವರೇ ಗುರುಗಳಾಗಿದ್ದಾರೆ. ಈಗ ಸರ್ವರ ಸದ್ಗತಿದಾತನು ಒಬ್ಬನೇ ಪರಮಪಿತ ಪರಮಾತ್ಮನಾಗಿದ್ದಾರೆ. ಅವರು ಪರಮ ಗುರುವೂ ಆಗಿದ್ದಾರೆ ಮತ್ತು ಜ್ಞಾನವನ್ನು ತಿಳಿಸುತ್ತಾರೆ. ನೀವು ಮಕ್ಕಳಿಗೆ ಓದಿಸುತ್ತಾರೆ. ಅವರ ಪಾತ್ರವು ವಿಚಿತ್ರವಾಗಿದೆ. ಧರ್ಮಸ್ಥಾಪನೆಯನ್ನು ಮಾಡುತ್ತಾರೆ ಮತ್ತು ಎಲ್ಲಾ ಧರ್ಮಗಳ ವಿನಾಶವನ್ನೂ ಮಾಡುತ್ತಾರೆ. ಉಳಿದವರಂತೂ ಕೇವಲ ಧರ್ಮಸ್ಥಾಪನೆ ಮಾಡುತ್ತಾರೆ. ಸ್ಥಾಪನೆ ಮತ್ತು ವಿನಾಶ ಮಾಡುವವರಿಗೇ ಗುರುಗಳೆಂದು ಹೇಳಬಹುದಲ್ಲವೆ. ತಂದೆಯು ತಿಳಿಸುತ್ತಾರೆ- ನಾನು ಕಾಲರಕಾಲನಾಗಿದ್ದೇನೆ, ಒಂದುಧರ್ಮದ ಸ್ಥಾಪನೆ ಉಳಿದೆಲ್ಲಾ ಧರ್ಮಗಳ ನಾಶವಾಗುವುದು ಅರ್ಥಾತ್ ಈ ಜ್ಞಾನಯಜ್ಞದಲ್ಲಿ ಸ್ವಾಹಾ ಆಗಿಬಿಡುತ್ತಾರೆ ನಂತರ ಯಾವುದೇ ಯುದ್ಧವೂ ಆಗುವುದಿಲ್ಲ. ಯಜ್ಞವನ್ನು ರಚಿಸಲಾಗುವುದಿಲ್ಲ. ನೀವು ಇಡೀ ವಿಶ್ವದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ, ಉಳಿದವರೆಲ್ಲರೂ ನೇತಿ-ನೇತಿ (ನಮಗೆ ಗೊತ್ತಿಲ್ಲ) ಎಂದು ಹೇಳಿಬಿಡುತ್ತಾರೆ. ನೀವು ಈ ರೀತಿ ಹೇಳುವುದಿಲ್ಲ. ಇದನ್ನು ತಂದೆಯ ಹೊರತು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ ಅಂದಮೇಲೆ ನೀವು ಮಕ್ಕಳಿಗೆ ಬಹಳ ಖುಷಿಯಾಗಬೇಕು. ಆದರೆ ಮಾಯೆಯ ಹೋರಾಟವು ಈ ರೀತಿ ನಡೆಯುತ್ತದೆ. ಅದು ನೆನಪನ್ನೇ ಕಳೆಯುತ್ತದೆ. ನೀವು ಮಕ್ಕಳು ಸುಖ-ದುಃಖ, ಮಾನ-ಅಪಮಾನ ಎಲ್ಲವನ್ನೂ ಸಹನೆ ಮಾಡಬೇಕಾಗಿದೆ. ಹಾಗೆ ನೋಡಿದರೆ ಇಲ್ಲಿ ಯಾರೂ ಅಪಮಾನ ಮಾಡುವುದಿಲ್ಲ. ಒಂದುವೇಳೆ ಯಾವುದೇ ಮಾತಿದ್ದರೆ ತಂದೆಗೆ ದೂರುಕೊಡಿ. ದೂರುಕೊಡದಿದ್ದರೆ ಬಹಳ ಪಾಪವಾಗುತ್ತದೆ. ತಂದೆಗೆ ತಿಳಿಸುವುದರಿಂದ ಅವರಿಗೆ ಶಿಕ್ಷಣ ಸಿಗುವುದು. ಈ ತಜ್ಞರೊಂದಿಗೆ ಮುಚ್ಚಿಡಬಾರದು. ಇವರು ಬಹಳದೊಡ್ಡ ತಜ್ಞರಾಗಿದ್ದಾರೆ, ಜ್ಞಾನದ ಇಂಜೆಕ್ಷನ್ಗೆ ಅಂಜನವೆಂದು ಹೇಳುತ್ತಾರೆ. ಅಂಜನಕ್ಕೆ ಜ್ಞಾನದ ಕಾಡಿಗೆ ಎಂದು ಹೇಳಲಾಗುತ್ತದೆ. ಇಲ್ಲಿ ಜಾದುವಿನ ಮಾತೇ ಇಲ್ಲ. ತಂದೆಯು ತಿಳಿಸುತ್ತಾರೆ- ನಾನು ನಿಮಗೆ ಪತಿತರಿಂದ ಪಾವನರಾಗುವ ಯುಕ್ತಿಯನ್ನು ತಿಳಿಸಲು ಬಂದಿದ್ದೇನೆ. ಪವಿತ್ರರಾಗದಿದ್ದರೆ ಧಾರಣೆಯೂ ಆಗುವುದಿಲ್ಲ. ಈ ಕಾಮದ ಕಾರಣವೇ ಪಾಪವಾಗುತ್ತದೆ, ಇದರಮೇಲೆ ಜಯಗಳಿಸಬೇಕಾಗಿದೆ. ತಾನೇ ವಿಕಾರದಲ್ಲಿ ಹೋಗಿದ್ದರೆ ಅನ್ಯರಿಗೆ ಹೇಳಲು ಸಾಧ್ಯವಿಲ್ಲ, ಅದಂತೂ ಮಹಾ ಪಾಪವಾಗುವುದು. ತಂದೆಯು ಪಂಡಿತನ ಕಥೆಯನ್ನು ತಿಳಿಸುತ್ತಾರೆ. ಪಂಡಿತನು ರಾಮ, ರಾಮ ಎಂದು ಹೇಳಿದರೆ ನೀವು ಸಾಗರವನ್ನು ಪಾರು ಮಾಡುವಿರಿ ಎಂದು ಹೇಳಿದನು. ಇದಕ್ಕೆ ಮನುಷ್ಯರು ನೀರಿನ ಸಾಗರವೆಂದು ತಿಳಿಯುತ್ತಾರೆ. ಹೇಗೆ ಆಕಾಶಕ್ಕೆ ಅಂತ್ಯವಿಲ್ಲವೋ ಹಾಗೆಯೇ ಸಾಗರದ ಅಂತ್ಯವನ್ನು ಮುಟ್ಟಲು ಸಾಧ್ಯವಿಲ್ಲ. ಬ್ರಹ್ಮ್ಮಹಾತತ್ವಕ್ಕೂ ಅಂತ್ಯವಿಲ್ಲ. ಇಲ್ಲಿ ಮನುಷ್ಯರು ಅಂತ್ಯವನ್ನು ಪಡೆಯುವ ಪುರುಷಾರ್ಥ ಮಾಡುತ್ತಾರೆ. ಅಲ್ಲಿ ಯಾರೂ ಪುರುಷಾರ್ಥ ಮಾಡುವುದಿಲ್ಲ. ಇಲ್ಲಿ ಎಷ್ಟು ದೂರಹೋದರೂ ಮತ್ತೆ ಹಿಂತಿರುಗಿ ಬರುತ್ತಾರೆ. ಪೆಟ್ರೋಲ್ ಇಲ್ಲವೆಂದರೆ ಮತ್ತೆ ಬರುವುದಾದರೂ ಹೇಗೆ? ಇದು ವಿಜ್ಞಾನದವರ ಅತಿಅಹಂಕಾರವಾಗಿದೆ. ಅದರಿಂದ ತಮ್ಮದೇ ವಿನಾಶ ಮಾಡಿಕೊಳ್ಳುತ್ತಾರೆ. ವಿಮಾನದಿಂದ ಸುಖವೂ ಇದೆ, ಮತ್ತೆ ಅದರಿಂದಲೇ ಅತೀ ದುಃಖವೂ ಇದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1) ಯಾವುದೇ ಕಾರಣದಿಂದ ವಿದ್ಯೆಯನ್ನು ಬಿಡಬಾರದು. ಶಿಕ್ಷೆಗಳು ಬಹಳ ಕಠಿಣವಾಗಿದೆ ಅದರಿಂದ ಪಾರಾಗಲು ಮತ್ತೆಲ್ಲಾ ಸಂಗಗಳನ್ನು ಬಿಟ್ಟು ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಮುನಿಸಿಕೊಳ್ಳಬಾರದು.

2) ಜ್ಞಾನದ ಇಂಜೆಕ್ಷನ್ ಅಥವಾ ಅಂಜನವನ್ನು ಕೊಡುವವರು ಒಬ್ಬ ತಂದೆಯಾಗಿದ್ದಾರೆ. ಆ ಅವಿನಾಶಿ ತಜ್ಞರಿಂದ ಯಾವುದೇ ಮಾತನ್ನು ಮುಚ್ಚಿಡಬಾರದು. ತಂದೆಗೆ ತಿಳಿಸುವುದರಿಂದ ತಕ್ಷಣ ಅವರಿಂದ ಸಾವಧಾನ (ಶಿಕ್ಷಣ) ಸಿಗುವುದು.

ವರದಾನ:
ಶರೀರದ ಆರೋಗ್ಯ, ಮನಸ್ಸಿನ ಖುಷಿ ಮತ್ತು ಧನದ ಸಮೃದ್ಧಿಯ ಮುಖಾಂತರ ಶ್ರೇಷ್ಠ ಭಾಗ್ಯವಾನ್ ಭವ

ಸಂಗಮಯುಗದಲ್ಲಿ ಸದಾ ಸ್ವ-ನಲ್ಲಿ ಸ್ಥಿತರಾಗುವುದರಿಂದ ಶರೀರದ ಕರ್ಮಭೋಗ ಶೂಲದಿಂದ ಮುಳ್ಳಾಗಿ ಬಿಡುತ್ತದೆ, ಶರೀರದ ರೋಗ ಯೋಗದಲ್ಲಿ ಪರಿವರ್ತನೆ ಮಾಡಿಬಿಡುವಿರಿ ಆದ್ದರಿಂದ ಸದಾ ಆರೋಗ್ಯವಾಗಿರುವಿರಿ. ಮನ್ಮನಾಭವ ಆಗುವ ಕಾರಣ ಖುಷಿಯ ಗಣಿಯಿಂದ ಸದಾ ಸಂಪನ್ನರಾಗಿರುವಿರಿ ಆದ್ದರಿಂದ ಮನಸ್ಸಿನ ಖುಷಿಯೂ ಸಹ ಪ್ರಾಪ್ತಿಯಾಗುವುದು ಮತ್ತು ಜ್ಞಾನ ಧನ ಎಲ್ಲಾ ಧನಗಳಿಗಿಂತಲೂ ಶ್ರೇಷ್ಠವಾಗಿದೆ. ಜ್ಞಾನಧನ ಉಳ್ಳವರಿಗೆ ಪ್ರಕೃತಿ ಸ್ವತಃ ದಾಸಿಯಾಗಿಬಿಡುತ್ತದೆ ಮತ್ತು ಸರ್ವಸಂಬಂಧವೂ ಸಹ ಒಬ್ಬರ ಜೊತೆ ಇದೆ, ಸಂಪರ್ಕವೂ ಸಹ ಹೋಲಿ ಹಂಸದ ಜೊತೆ ಇದೆ..... ಆದ್ದರಿಂದ ಶ್ರೇಷ್ಠ ಭಾಗ್ಯವಾನ್ನ ವರದಾನ ಸ್ವತಃವಾಗಿ ಪ್ರಾಪ್ತಿಯಾಗುವುದು.

ಸ್ಲೋಗನ್:
ನೆನಪು ಮತ್ತು ಸೇವೆ ಎರಡರ ಬ್ಯಾಲೆನ್ಸ್ ಆಗಿದೆ ಡಬಲ್ ಲಾಕ್.

ಅವ್ಯಕ್ತ ಸೂಚನೆಗಳು- ಆತ್ಮಿಕ ಸ್ಥಿತಿಯಲ್ಲಿರುವಂತಹ ಅಭ್ಯಾಸ ಮಾಡಿ, ಅಂತರ್ಮುಖಿಯಾಗಿರಿ

ಯಾವುದೇ ಬಲಹೀನ ಆತ್ಮಗಳ ಬಲಹೀನತೆಯನ್ನು ನೋಡಬೇಡಿ. ವೆರೈಟಿ ಆತ್ಮಗಳಿದ್ದಾರೆ ಎನ್ನುವ ಮಾತು ಸ್ಮೃತಿಯಲ್ಲಿರಲಿ. ಎಲ್ಲರ ಪ್ರತಿ ಆತ್ಮಿಕ ದೃಷ್ಟಿ ಇರಲಿ. ಆತ್ಮದ ರೂಪದಲ್ಲಿ ಅವರನ್ನು ಸ್ಮೃತಿಯಲ್ಲಿ ತರುವುದರಿಂದ ಅವರಿಗೆ ಶಕ್ತಿಯನ್ನು ಕೊಡುತ್ತೀರಿ. ಆತ್ಮ ಮಾತನಾಡುತ್ತಿವೆ, ಆತ್ಮದಲ್ಲಿ ಈ ಸಂಸ್ಕಾರ ಇದೆ, ಈ ಪಾಠವನ್ನು ಪಕ್ಕ ಮಾಡಿ ಆಗ ಎಲ್ಲರ ಪ್ರತಿ ಸ್ವತಃವಾಗಿ ಶುಭ ಭಾವನೆ ಇರುವುದು.