28.03.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಪ್ರತಿಯೊಬ್ಬರ ಪಾಪವನ್ನು ಹೀರುವಂತಹ ಬಹಳ ಒಳ್ಳೆಯ ಬ್ಲಾಟಿಂಗ್ ಪೇಪರ್ ಒಬ್ಬ ಶಿವ ತಂದೆಯಾಗಿದ್ದಾರೆ”
ಪ್ರಶ್ನೆ:
ಆತ್ಮದಲ್ಲಿ
ಎಲ್ಲದಕ್ಕಿಂತ ಆಳವಾದ ಕಲೆಯು ಯಾವುದಾಗಿದೆ, ಅದನ್ನು ಕಳೆಯಲು ಯಾವ ಪರಿಶ್ರಮ ಪಡುತ್ತೀರಿ?
ಉತ್ತರ:
ಆತ್ಮದಲ್ಲಿ
ದೇಹಾಭಿಮಾನದ ಬಹಳ ಆಳವಾದ ಕಲೆಯುಂಟಾಗಿದೆ. ಪದೇ-ಪದೇ ಯಾವುದೇ ದೇಹಧಾರಿಯ ನಾಮ-ರೂಪದಲ್ಲಿ ಸಿಕ್ಕಿ
ಹಾಕಿಕೊಳ್ಳುತ್ತದೆ. ತಂದೆಯನ್ನು ನೆನಪು ಮಾಡದೇ ದೇಹಧಾರಿಗಳನ್ನು ನೆನಪು ಮಾಡುತ್ತಿರುತ್ತದೆ.
ಒಬ್ಬರು ಇನ್ನೊಬ್ಬರ ಮನಸ್ಸಿಗೆ ದುಃಖ ಕೊಡುತ್ತಾರೆ. ಈ ಕಲೆಯನ್ನು ಅಳಿಸಲು ದೇಹಿ-ಅಭಿಮಾನಿಯಾಗುವ
ಪರಿಶ್ರಮ ಪಡಿ.
ಗೀತೆ:
ಮುಖವನ್ನು
ನೋಡಿಕೋ ಪ್ರಾಣಿ......
ಓಂ ಶಾಂತಿ.
ಮಧುರಾತಿ ಮಧುರ ಎಲ್ಲಾ ಸೇವಾಕೇಂದ್ರಗಳ ಮಕ್ಕಳು ಗೀತೆಯನ್ನು ಕೇಳಿದಿರಿ, ಈಗ ತಮ್ಮನ್ನು ನೋಡಿಕೊಳ್ಳಿ
- ಎಷ್ಟು ಪುಣ್ಯವಾಗಿದೆ ಮತ್ತು ಎಷ್ಟು ಪಾಪವು ಕಳೆದಿದೆ? ಇಡೀ ಪ್ರಪಂಚದಲ್ಲಿ ಸಾಧು-ಸಂತ
ಮೊದಲಾದವರೆಲ್ಲರೂ ಹೇ ಪತಿತ-ಪಾವನ ಎಂದು ಕರೆಯುತ್ತಾರೆ. ಒಬ್ಬರೇ ಪತಿತರಿಂದ ಪಾವನರನ್ನಾಗಿ ಮಾಡುವ
ತಂದೆಯಾಗಿದ್ದಾರೆ ಉಳಿದೆಲ್ಲರಲ್ಲಿ ಪಾಪವಿದೆ. ಇದನ್ನಂತೂ ನೀವು ತಿಳಿದುಕೊಂಡಿದ್ದೀರಿ -
ಆತ್ಮದಲ್ಲಿಯೇ ಪಾಪವಿದೆ, ಪುಣ್ಯವೂ ಆತ್ಮದಲ್ಲಿದೆ. ಆತ್ಮವೇ ಪಾವನ, ಆತ್ಮವೇ ಪತಿತವಾಗುತ್ತದೆ.
ಇಲ್ಲಿ ಎಲ್ಲಾ ಆತ್ಮರು ಪತಿತರಾಗಿದ್ದಾರೆ. ಪಾಪಗಳ ಕಲೆಯುಂಟಾಗಿದೆ ಆದ್ದರಿಂದ ಪಾಪಾತ್ಮನೆಂದು
ಹೇಳಲಾಗುತ್ತದೆ. ಈಗ ಪಾಪವು ಕಳೆಯುವುದಾದರೂ ಹೇಗೆ? ಯಾವುದೇ ವಸ್ತುವಿನ ಮೇಲೆ ಶಾಹಿ ಅಥವಾ ತೈಲವು
ಬಿದ್ದರೆ ಅದರ ಮೇಲೆ ಬ್ಲಾಟಿಂಗ್ ಪೇಪರ್ನ್ನು ಇಡುತ್ತಾರೆ. ಅದು ಎಲ್ಲವನ್ನೂ ಹೀರಿಕೊಳ್ಳುತ್ತದೆ.
ಈಗ ಎಲ್ಲಾ ಮನುಷ್ಯರು ಒಬ್ಬರನ್ನು ನೆನಪು ಮಾಡುತ್ತಾರೆ ಏಕೆಂದರೆ ಅವರೇ ಬ್ಲಾಟಿಂಗ್ ಪೇಪರ್
ಆಗಿದ್ದಾರೆ, ಪತಿತ-ಪಾವನನಾಗಿದ್ದಾರೆ. ಅವರೊಬ್ಬರ ವಿನಃ ಮತ್ತ್ಯಾರೂ ಬ್ಯಾಟಿಂಗ್ ಪೇಪರ್ ಅಲ್ಲ.
ಮನುಷ್ಯರಂತೂ ಜನ್ಮ-ಜನ್ಮಾಂತರದಿಂದ ಗಂಗಾ ಸ್ನಾನ ಮಾಡುತ್ತಾ ಇನ್ನೂ ಪತಿತರಾಗಿದ್ದಾರೆ. ಪತಿತರನ್ನು
ಪಾವನ ಮಾಡುವವರು ಒಬ್ಬರೇ ಶಿವ ತಂದೆಯು ಬ್ಲಾಟಿಂಗ್ ಪೇಪರ್ ಆಗಿದ್ದಾರೆ. ಅವರು ಅತೀ ಚಿಕ್ಕ
ಬಿಂದುವಾಗಿದ್ದಾರೆ. ಎಲ್ಲರ ಪಾಪವನ್ನು ನಷ್ಟ ಮಾಡುತ್ತಾರೆ. ಯಾವ ಯುಕ್ತಿಯಿಂದ? ಕೇವಲ ಹೇಳುತ್ತಾರೆ
- ನಾನು ಬ್ಲಾಟಿಂಗ್ ಪೇಪರನ್ನು ನೆನಪು ಮಾಡಿ, ನಾನಂತೂ ಚೈತನ್ಯವಾಗಿದ್ದೇನೆ ಅಲ್ಲವೆ. ನಿಮಗೆ
ಮತ್ತ್ಯಾವುದೇ ಕಷ್ಟವನ್ನು ಕೊಡುವುದಿಲ್ಲ. ನೀವಾತ್ಮರೂ ಬಿಂದು, ತಂದೆಯೂ ಬಿಂದುವಾಗಿದ್ದಾರೆ.
ತಿಳಿಸುತ್ತಾರೆ - ಕೇವಲ ನನ್ನನ್ನು ನೆನಪು ಮಾಡಿದರೆ ನಿಮ್ಮ ಎಲ್ಲಾ ಪಾಪಗಳು ಕಳೆಯುತ್ತವೆ. ಈಗ
ಪ್ರತಿಯೊಬ್ಬರೂ ತಮ್ಮ ಹೃದಯದಿಂದ ಕೇಳಿಕೊಳ್ಳಿ - ನೆನಪಿನಿಂದ ಎಷ್ಟು ಪಾಪಗಳು ಕಳೆದಿವೆ? ಮತ್ತು
ಇನ್ನೆಷ್ಟು ಪಾಪವು ಉಳಿದಿದೆ? ಇದು ತಿಳಿಯುವುದು ಹೇಗೆ? ಅನ್ಯರಿಗೂ ಸಹ ಮಾರ್ಗವನ್ನು ತಿಳಿಸುತ್ತಾ
ಇರಿ - ಒಬ್ಬ ಬ್ಲಾಟಿಂಗ್ ಪೇಪರ್ ತಂದೆಯನ್ನು ನೆನಪು ಮಾಡಿ, ಎಲ್ಲರಿಗೆ ಈ ಸಲಹೆಯನ್ನು ಕೊಡುವುದು
ಒಳ್ಳೆಯದಲ್ಲವೆ? ಇದೂ ಸಹ ಆಶ್ಚರ್ಯವಾಗಿದೆ, ಯಾರಿಗೆ ಸಲಹೆ ಕೊಡುತ್ತಾರೆಯೋ ಅವರಂತೂ ತಂದೆಯನ್ನು
ನೆನಪು ಮಾಡುವುದರಲ್ಲಿ ತೊಡಗಿ ಬಿಡುತ್ತಾರೆ ಮತ್ತು ಸಲಹೆಯನ್ನು ಕೊಡುವವರು ನೆನಪು ಮಾಡುವುದಿಲ್ಲ.
ಆದ್ದರಿಂದ ಪಾಪಗಳು ತುಂಡಾಗುವುದಿಲ್ಲ. ಪತಿತ-ಪಾವನನೆಂದು ಒಬ್ಬರಿಗೇ ಹೇಳಲಾಗುತ್ತದೆ. ಅನೇಕ
ಪಾಪಗಳಾಗಿದೆ. ಕಾಮದ ಪಾಪ, ದೇಹಾಭಿಮಾನದ ಪಾಪವಂತೂ ಮೊದಲ ನಂಬರಿನ ಪಾಪವಾಗಿದೆ. ಇದು ಎಲ್ಲದಕ್ಕಿಂತ
ಕೆಟ್ಟದ್ದಾಗಿದೆ ಈಗ ತಂದೆ ತಿಳಿಸುತ್ತಾರೆ - ದೇಹೀ ಅಭಿಮಾನಿಯಾಗಿ. ಎಷ್ಟು ನನ್ನೊಬ್ಬನನ್ನೇ ನೆನಪು
ಮಾಡುತ್ತೀರೋ ಅಷ್ಟು ನಿಮ್ಮಲ್ಲಿ ಹಿಡಿದಿರುವ ತುಕ್ಕು ಭಸ್ಮವಾಗುವುದು. ಆದ್ದರಿಂದ ನೆನಪು ಮಾಡಬೇಕು.
ಅನ್ಯರಿಗೂ ಈ ಮಾರ್ಗವನ್ನು ತಿಳಿಸಬೇಕಾಗಿದೆ. ಎಷ್ಟು ಅನ್ಯರಿಗೆ ತಿಳಿಸುತ್ತೀರೋ ಅಷ್ಟು ನಿಮ್ಮದೂ
ಕಲ್ಯಾಣವಾಗುವುದು. ಈ ಉದ್ಯೋಗದಲ್ಲಿಯೇ ತೊಡಗಿರಿ. ಅನ್ಯರಿಗೂ ಇದನ್ನು ತಿಳಿಸಿ - ತಂದೆಯನ್ನು ನೆನಪು
ಮಾಡಿದರೆ ಪುಣ್ಯಾತ್ಮರಾಗಿ ಬಿಡುತ್ತೀರಿ. ಪತಿತ-ಪಾವನನು ಒಬ್ಬರೇ ಆಗಿದ್ದಾರೆ ಎಂದು ಅನ್ಯರಿಗೂ
ಇದನ್ನು ತಿಳಿಸುವುದು ನಿಮ್ಮ ಕರ್ತವ್ಯವಾಗಿದೆ. ಭಲೆ ನೀವು ಜ್ಞಾನ ನದಿಗಳು ಅನೇಕರಿದ್ದೀರಿ ಆದರೆ
ನೀವು ಎಲ್ಲರಿಗೆ ಹೇಳುತ್ತೀರಿ - ಒಬ್ಬ ತಂದೆಯನ್ನು ನೆನಪು ಮಾಡಿ, ಅವರೊಬ್ಬರೇ
ಪತಿತ-ಪಾವನನಾಗಿದ್ದಾರೆ. ಅವರದು ಬಹಳ ಮಹಿಮೆಯಿದೆ. ಜ್ಞಾನ ಸಾಗರನೂ ಅವರೇ ಆಗಿದ್ದಾರೆ. ಆ ಒಬ್ಬ
ತಂದೆಯನ್ನು ನೆನಪು ಮಾಡುವುದು, ದೇಹೀ-ಅಭಿಮಾನಿಯಾಗಿರುವುದೊಂದೇ ಕಷ್ಟದ ಮಾತಾಗಿದೆ. ತಂದೆಯು ಕೇವಲ
ನಿಮಗಾಗಿ ಹೇಳುವುದಿಲ್ಲ. ತಂದೆಯ ಬುದ್ದಿಯಲ್ಲಿ ಎಲ್ಲಾ ಸೇವಾಕೇಂದ್ರಗಳ ಮಕ್ಕಳಿದ್ದಾರೆ. ತಂದೆಯು
ಎಲ್ಲಾ ಮಕ್ಕಳನ್ನು ನೋಡುತ್ತಾರಲ್ಲವೆ, ಎಲ್ಲಿ ಒಳ್ಳೆಯ ಸೇವಾಧಾರಿ ಮಕ್ಕಳಿರುತ್ತಾರೆ ಅಲ್ಲಿ ತಂದೆಯ
ಗಮನ ಹೋಗುತ್ತದೆ. ಶಿವ ತಂದೆಯ ಹೂದೋಟವಲ್ಲವೇ. ಎಲ್ಲಿ ಒಳ್ಳೆಯ ಹೂ ಇರುವುದೋ ಅವರನ್ನು ತಂದೆಯು
ನೆನಪು ಮಾಡುತ್ತಾರೆ ಸಾಹುಕಾರ ವ್ಯಕ್ತಿಗೆ ನಾಲ್ಕೈದು ಮಂದಿ ಮಕ್ಕಳಿದ್ದರೆ ಯಾರು ಹಿರಿಯ
ಮಗನಾಗಿರುವರೋ ಅವರನ್ನು ನೆನಪು ಮಾಡುತ್ತಾರೆ. ಹೂಗಳಲ್ಲಿಯೂ ಅನೇಕ ಪ್ರಕಾರವಿದೆಯಲ್ಲವೆ. ಅಂದಾಗ
ತಂದೆಯೂ ಸಹ ತಮ್ಮ ದೊಡ್ಡ ಹೂದೋಟಗಳನ್ನು ನೆನಪು ಮಾಡುತ್ತಾರೆ. ಯಾರಿಗಾದರೂ ಈ ಮಾರ್ಗವನ್ನು
ತಿಳಿಸುವುದು ಸಹಜವಾಗಿದೆ - ಒಬ್ಬ ಶಿವ ತಂದೆಯನ್ನು ನೆನಪು ಮಾಡಿ, ಅವರೇ ಪತಿತ ಪಾವನನಾಗಿದ್ದಾರೆ.
ಸ್ವಯಂ ಹೇಳುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಇಡೀ
ಪ್ರಪಂಚಕ್ಕಾಗಿ ಎಷ್ಟು ಒಳ್ಳೆಯ ಬ್ಲಾಟಿಂಗ್ ಪೇಪರ್ ಆಗಿದ್ದಾರೆ. ಎಲ್ಲರೂ ಅವರನ್ನೇ ನೆನಪು
ಮಾಡುತ್ತಾರೆ. ಶಿವ ತಂದೆಯನ್ನು ನೆನಪು ಮಾಡಿ ಎಂದು ಯಾರಿಗಾದರೂ ಈ ಮಾರ್ಗವನ್ನು ತಿಳಿಸುವುದು ಬಹಳ
ಸಹಜವಾಗಿದೆ.
ತಂದೆಯು ಯುಕ್ತಿಯನ್ನು
ತಿಳಿಸಿದ್ದಾರೆ - ನನ್ನನ್ನು ನೆನಪು ಮಾಡಿದರೆ ನಿಮ್ಮಲ್ಲಿರುವ ದೇಹಾಭಿಮಾನದ ಕಲೆಗಳು ಮಾಯವಾಗುತ್ತವೆ.
ದೇಹೀ-ಅಭಿಮಾನಿಯಾಗುವುದು ಪರಿಶ್ರಮವಿದೆ, ತಂದೆಗೆ ಯಾರೂ ಸತ್ಯವನ್ನು ತಿಳಿಸುವುದಿಲ್ಲ. ಕೆಲ ಕೆಲವರು
ಚಾರ್ಟ್ ಬರೆದು ಕಳುಹಿಸುತ್ತಾರೆ ಮತ್ತೆ ಸುಸ್ತಾಗಿ ಬಿಡುತ್ತಾರೆ. ಇದು ಉನ್ನತ ಗುರಿಯಾಗಿದೆ.
ಮಾಯೆಯು ಒಮ್ಮೆಲೆ ನಶೆಯನ್ನು ಹಾರಿಸಿ ಬಿಡುತ್ತದೆ ಆಗ ಬರೆಯುವುದನ್ನೇ ಬಿಟ್ಟು ಬಿಡುತ್ತಾರೆ.
ಅರ್ಧಕಲ್ಪದ ದೇಹಾಭಿಮಾನವಿದೆ, ಅದು ಕಳೆಯುವುದೇ ಇಲ್ಲ. ತಂದೆಯು ತಿಳಿಸುತ್ತಾರೆ - ಕೇವಲ ಇದೇ
ವ್ಯಾಪಾರವನ್ನು ಮಾಡುತ್ತಾ ಇರಿ. ತಂದೆಯನ್ನು ನೆನಪು ಮಾಡಿ ಮತ್ತು ಅನ್ಯರಿಗೂ ಮಾಡಿಸಿ.
ಎಲ್ಲದಕ್ಕಿಂತ ಶ್ರೇಷ್ಠ ವ್ಯಾಪಾರವು ಇದಾಗಿದೆ. ಯಾರು ಸ್ವಯಂ ನೆನಪು ಮಾಡುವುದಿಲ್ಲವೋ ಅವರು ಈ
ವ್ಯಾಪಾರವನ್ನೂ ಮಾಡುವುದಿಲ್ಲ. ತಂದೆಯ ನೆನಪು ಯೋಗ ಅಗ್ನಿಯಾಗಿದೆ, ಇದರಿಂದಲೇ ಪಾಪಗಳು
ಭಸ್ಮವಾಗುತ್ತವೆ. ಆದ್ದರಿಂದಲೇ ತಂದೆಯು ಕೇಳುತ್ತಾರೆ - ಪಾಪವು ಎಲ್ಲಿಯವರೆಗೆ ಭಸ್ಮವಾಗಿದೆ?
ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಖುಷಿಯ ನಶೆಯೇರಿರುವುದು. ಪ್ರತಿಯೊಬ್ಬರ ಮನಸ್ಸನ್ನು
ಅರಿತುಕೊಳ್ಳಬಹುದು. ಅನ್ಯರನ್ನೂ ಸಹ ಅವರ ಸೇವೆಯಿಂದಲೇ ಅರಿತುಕೊಳ್ಳಬಹುದು. ಅನ್ಯರಿಗೂ ಮಾರ್ಗವನ್ನು
ತಿಳಿಸುತ್ತಾರೆ - ತಂದೆಯನ್ನು ನೆನಪು ಮಾಡಿ, ಅವರು ಪತಿತ - ಪಾವನನಾಗಿದ್ದಾರೆ. ಇಲ್ಲಿ ಇದಂತೂ
ಪತಿತ, ತಮೋಪ್ರಧಾನ ಪ್ರಪಂಚವಾಗಿದೆ. ಎಲ್ಲಾ ಆತ್ಮರು ಮತ್ತು ಶರೀರ ತಮೋಪ್ರಧಾನವಾಗಿದೆ. ಈಗ
ಹಿಂತಿರುಗಿ ಹೋಗಬೇಕಾಗಿದೆ. ಅಲ್ಲಿ ಎಲ್ಲಾ ಆತ್ಮರು ಪವಿತ್ರರಾಗಿರುತ್ತಾರೆ. ಯಾವಾಗ
ಪವಿತ್ರರಾಗುವಿರೋ ಆಗಲೇ ಮನೆಗೆ ಹೋಗುವಿರಿ, ಅನ್ಯರಿಗೂ ಸಹ ಇದೇ ಮಾರ್ಗವನ್ನು ತೋರಿಸಬೇಕು.
ತಂದೆಯಂತೂ ಬಹಳ ಸಹಜ ಯುಕ್ತಿಗಳನ್ನು ತಿಳಿಸುತ್ತಾರೆ. ಶಿವ ತಂದೆಯನ್ನು ನೆನಪು ಮಾಡಿ, ಇದೇ
ಬ್ಲಾಟಿಂಗ್ ಪೇಪರನ್ನು ಇಟ್ಟುಕೊಳ್ಳಿ ಆಗ ಎಲ್ಲಾ ಪಾಪಗಳನ್ನು ಹೀರಿ ಬಿಡುತ್ತದೆ. ನಿಮ್ಮ ವಿಕರ್ಮಗಳು
ವಿನಾಶವಾಗುತ್ತವೆ. ಪಾವನರಾಗುವುದು ಮೂಲ ಮಾತಾಗಿದೆ. ಮನುಷ್ಯರು ಪತಿತರಾಗಿದ್ದಾರೆ ಆದ್ದರಿಂದಲೇ ಹೇ
ಪತಿತ-ಪಾವನ ಬಂದು ಎಲ್ಲರನ್ನೂ ಪಾವನ ಮಾಡಿ ಜೊತೆ ಕರೆದುಕೊಂಡು ಹೋಗಿ ಎಂದು ಕರೆಯುತ್ತಾರೆ. ಎಲ್ಲಾ
ಆತ್ಮರನ್ನೂ ಪಾವನ ಮಾಡಿ ಕರೆದುಕೊಂಡು ಹೋಗುತ್ತಾರೆಂದು ಬರೆಯಲ್ಪಟ್ಟಿದೆ ನಂತರ ಯಾವುದೇ ಪತಿತ
ಆತ್ಮನು ಇರುವುದಿಲ್ಲ. ತಂದೆಯು ಇದನ್ನೂ ತಿಳಿಸಿದ್ದಾರೆ – ಮೊಟ್ಟ ಮೊದಲಿಗೆ ಸ್ವರ್ಗವಾಸಿಗಳೇ
ಬರುತ್ತಾರೆ. ತಂದೆಯು ಎಲ್ಲರಿಗಾಗಿ ಔಷಧಿಯನ್ನು ಕೊಡುತ್ತಾರೆ. ಯಾರು ಸಿಕ್ಕಿದರೂ ಅವರಿಗೆ ಇದೇ
ಔಷಧಿಯನ್ನು ಕೊಡಿ. ನೀವು ತಂದೆಯ ಬಳಿ ಹೋಗಲು ಬಯಸುತ್ತೀರಿ ಆದರೆ ಆತ್ಮವು ಪತಿತನಾಗಿದೆ ಆದ್ದರಿಂದ
ಹೋಗಲು ಸಾಧ್ಯವಿಲ್ಲ. ಪಾವನರಾಗಿ ಆಗ ಮನೆಗೆ ಹೋಗುವಿರಿ. ಹೇ ಆತ್ಮರೇ, ನನ್ನನ್ನು ನೆನಪು ಮಾಡಿರಿ
ಆಗ ನಾನು ಕರೆದುಕೊಂಡು ಹೋಗುತ್ತೇನೆ ಮತ್ತೆ ಅಲ್ಲಿಂದ ನಿಮ್ಮನ್ನು ಸುಖದಲ್ಲಿ ಕಳುಹಿಸುತ್ತೇನೆ
ನಂತರ ಯಾವಾಗ ಹಳೆಯ ಪ್ರಪಂಚವಾಗುವುದೋ ಆಗ ನೀವು ದುಃಖವನ್ನು ಪಡೆಯುತ್ತೀರಿ. ನಾನು ಯಾರಿಗೂ
ದುಃಖವನ್ನು ಕೊಡುವುದಿಲ್ಲ. ಪ್ರತಿಯೊಬ್ಬರೂ ತಮ್ಮನ್ನು ನೋಡಿಕೊಳ್ಳಿ, ನಾನು ನೆನಪು ಮಾಡುತ್ತೇನೆಯೇ?
ಎಷ್ಟು ನೆನಪು ಮಾಡುತ್ತೀರೋ ಅಷ್ಟು ಖುಷಿಯ ನಶೆಯಿರುವುದು. ಇದು ಎಷ್ಟು ಸಹಜ ಔಷಧಿಯಾಗಿದೆ! ಇದನ್ನು
ಯಾವುದೇ ಸಾಧು-ಸಂತ ಮೊದಲಾದವರು ತಿಳಿದುಕೊಂಡಿಲ್ಲ. ಇದು ಎಲ್ಲಿಯೂ ಬರೆಯಲ್ಪಟ್ಟಿಲ್ಲ. ಸಂಪೂರ್ಣ
ಹೊಸ ಮಾತಾಗಿದೆ. ಪಾಪಗಳ ಖಾತೆಯು ಶರೀರದಲ್ಲಿ ಅಂಟಿಲ್ಲ. ಇಷ್ಟು ಚಿಕ್ಕ ಆತ್ಮ ಬಿಂದುವಿನಲ್ಲಿಯೇ
ಎಲ್ಲಾ ಪಾತ್ರವು ಅಡಕವಾಗಿದೆ. ಆತ್ಮವು ಪತಿತವಾದಾಗ ಅದು ಶರೀರದ ಮೇಲೂ ಪ್ರಭಾವ ಬೀರುತ್ತದೆ. ಆತ್ಮವು
ಪಾವನವಾಗಿ ಬಿಟ್ಟರೆ ಶರೀರವೂ ಪವಿತ್ರವಾಗಿರುವುದೇ ಸಿಗುತ್ತದೆ. ಆತ್ಮವೇ ದುಃಖ, ಸುಖಿಯಾಗುತ್ತದೆ.
ಶರೀರಕ್ಕೆ ಪೆಟ್ಟು ಬಿದ್ದರೆ ಆತ್ಮಕ್ಕೆ ದುಃಖದ ಅನುಭೂತಿಯಾಗುತ್ತದೆ. ಇವರು ದುಃಖಿ ಆತ್ಮ, ಇವರು
ಸುಖಿ ಆತ್ಮ ಎಂದು ಹೇಳಲಾಗುತ್ತದೆ. ಇಷ್ಟು ಚಿಕ್ಕ ಆತ್ಮವು ಎಷ್ಟೊಂದು
ಪಾತ್ರವನ್ನಭಿನಯಿಸುತ್ತದೆಯಲ್ಲವೆ. ಆಶ್ಚರ್ಯವಲ್ಲವೆ, ತಂದೆಯೇ ಸುಖ ಕೊಡುವವರಾಗಿದ್ದಾರೆ ಆದ್ದರಿಂದ
ನೆನಪು ಮಾಡುತ್ತಾರೆ. ದುಃಖ ಕೊಡುವವರು ರಾವಣನಾಗಿದ್ದಾರೆ. ಎಲ್ಲದಕ್ಕಿಂತ ಮೊದಲು ದೇಹಾಭಿಮಾನವು
ಬರುತ್ತದೆ. ಈಗ ತಂದೆಯು ತಿಳಿಸುತ್ತಾರೆ - ನೀವು ಆತ್ಮಾಭಿಮಾನಿಯಾಗಬೇಕಾಗಿದೆ. ಇದರಲ್ಲಿ ಬಹಳ
ಪರಿಶ್ರಮವಿದೆ. ತಂದೆಗೆ ಗೊತ್ತಿದೆ, ಸತ್ಯ ಹೃದಯದಿಂದ ಯಾವ ಯುಕ್ತಿಯಿಂದ ನೆನಪು ಮಾಡಬೇಕೋ ಹಾಗೆಯೇ
ನೆನಪು ಮಾಡುವವರು ಬಹಳ ವಿರಳ. ಇಲ್ಲಿಯೇ ಇದ್ದರೂ ಸಹ ಬಹಳ ಮರೆತು ಹೋಗುತ್ತಾರೆ. ಒಂದುವೇಳೆ
ದೇಹೀ-ಅಭಿಮಾನಿಯಾಗಿದ್ದರೆ ಯಾವುದೇ ಪಾಪ ಮಾಡುವುದಿಲ್ಲ. ಕೆಟ್ಟದ್ದನ್ನು ಕೇಳಬೇಡಿ..... ಇದು
ತಂದೆಯ ಆದೇಶವಾಗಿದೆ. ಇದು ಕೋತಿಗಳಿಗಾಗಿ ಅಲ್ಲ, ಮನುಷ್ಯರಿಗೆ ಸಲ್ಲುತ್ತದೆ. ಮನುಷ್ಯರು
ಮಂಗನಂತಾಗಿದ್ದಾರೆ ಆದ್ದರಿಂದ ಕೋತಿಯ ಚಿತ್ರವನ್ನು ತೋರಿಸಿದ್ದಾರೆ. ಇಂತಹವರು ಅನೇಕರಿದ್ದಾರೆ ಇಡೀ
ದಿನ ಪರಚಿಂತನೆ ಮಾಡುತ್ತಾರೆ. ಆದ್ದರಿಂದ ತಂದೆಯು ತಿಳುವಳಿಕೆ ನೀಡುತ್ತಾರೆ - ಕೆಲವು
ಸೇವಾಕೇಂದ್ರಗಳಲ್ಲಿ ಈ ರೀತಿ ಇರುತ್ತಾರೆ ಒಬ್ಬರು ಇನ್ನೊಬ್ಬರಿಗೆ ದುಃಖವನ್ನೇ ಕೊಡುತ್ತಿರುತ್ತಾರೆ.
ಕೆಲವರು ಒಳ್ಳೆಯವರೂ ಇದ್ದಾರೆ, ತಂದೆಯ ನೆನಪಿನಲ್ಲಿರುತ್ತಾರೆ. ತಿಳಿದುಕೊಳ್ಳುತ್ತಾರೆ, ಮನಸ್ಸಾ
ವಾಚಾ-ಕರ್ಮಣಾ ಯಾರಿಗೂ ದುಃಖವನ್ನು ಕೊಡಬಾರದು. ವಾಚಾದಿಂದಲೂ ಯಾರಿಗಾದರೂ ದುಃಖ ಕೊಟ್ಟರೆ
ದುಃಖಿಯಾಗಿ ಸಾಯುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಮಕ್ಕಳು ಎಲ್ಲರಿಗೆ ಸುಖ ಕೊಡಬೇಕಾಗಿದೆ.
ಎಲ್ಲರಿಗೆ ಹೇಳಿರಿ - ಆತ್ಮಾಭಿಮಾನಿಯಾಗಿ ತಂದೆಯನ್ನು ನೆನಪು ಮಾಡಿ ಮತ್ತ್ಯಾವುದೇ ಹಣದ ಲೇವಾದೇವಿಯ
ಮಾತಿಲ್ಲ. ಕೇವಲ ಪ್ರಿಯ ತಂದೆಯನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ಭಸ್ಮವಾಗುತ್ತವೆ. ನೀವು
ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ಭಗವಾನುವಾಚ - ಮನ್ಮನಾಭವ, ಒಬ್ಬ ತಂದೆಯನ್ನು ಹಾಗೂ ಆಸ್ತಿಯನ್ನು
ನೆನಪು ಮಾಡಿ. ಪರಸ್ಪರ ಮತ್ತೇನನ್ನೂ ಮಾತನಾಡಬೇಡಿ, ಕೇವಲ ತಂದೆಯನ್ನು ನೆನಪು ಮಾಡಿ, ಅನ್ಯರ
ಕಲ್ಯಾಣ ಮಾಡಿ. ನಿಮ್ಮ ಸ್ಥಿತಿಯು ಈ ರೀತಿ ಮಧುರವಾಗಿರಲಿ ಯಾರೇ ಬಂದು ನೋಡಿದರೂ ಸಹ ತಂದೆಯೂ ಮಕ್ಕಳು
ಬ್ಲಾಟಿಂಗ್ ಪೇಪರ್ ಆಗಿದ್ದಾರೆಂದು ಹೇಳುವಂತಿರಲಿ. ಇನ್ನೂ ಆ ಸ್ಥಿತಿಯಿಲ್ಲ. ತಂದೆಯೊಂದಿಗೆ
ಯಾರಾದರೂ ಕೇಳಿದರೆ ಹೇಳಬಲ್ಲರು - ಬ್ಲಾಟಿಂಗ್ ಪೇಪರ್ ಏನು! ಇನ್ನೂ ಕಾಗದವೇ ಆಗಿಲ್ಲ. ತಂದೆಯು
ಎಲ್ಲಾ ಸೇವಾಕೇಂದ್ರಗಳ ಮಕ್ಕಳಿಗೆ ತಿಳಿಸುತ್ತಾರೆ - ಬಾಂಬೆ, ಕಲ್ಕತ್ತಾ, ದೆಹಲಿ.... ಎಲ್ಲಾ
ಜಾಗಗಳಲ್ಲಿ ಮಕ್ಕಳಿದ್ದಾರಲ್ಲವೆ. ಬಾಬಾ, ಇಂತಹವರು ಬಹಳ ತೊಂದರೆ ಕೊಡುತ್ತಾರೆಂದು ದೂರು ಬರುತ್ತದೆ.
ಪುಣ್ಯಾತ್ಮರನ್ನಾಗಿ ಮಾಡುವ ಬದಲು ಇನ್ನೂ ಪಾಪಾತ್ಮರನ್ನಾಗಿ ಮಾಡಿ ಬಿಡುತ್ತಾರೆ. ತಂದೆಯೊಂದಿಗೆ
ಕೇಳಿದರೆ ಕೂಡಲೆ ತಿಳಿಸಬಲ್ಲರು. ಶಿವ ತಂದೆಯಂತೂ ಎಲ್ಲವನ್ನೂ ತಿಳಿದುಕೊಂಡಿದ್ದಾರೆ, ಅವರ ಬಳಿ
ಎಲ್ಲರ ಎಲ್ಲಾ ಲೆಕ್ಕಾಚಾರವಿದೆ. ಈ ತಂದೆಯೂ ಸಹ ತಿಳಿಸಬಲ್ಲರು, ಎಲ್ಲವೂ ಚಹರೆಯಿಂದಲೇ
ಅರ್ಥವಾಗುತ್ತದೆ. ಇವರು ತಂದೆಯ ನೆನಪಿನಲ್ಲಿ ಮಸ್ತರಾಗಿದ್ದಾರೆ, ಇವರ ಚಹರೆಯೇ ಖುಷಿಯಿಂದ ದೇವತೆಗಳ
ತರಹವಿದೆ. ಆತ್ಮವು ಖುಷಿಯಾಗಿದ್ದರೆ ಶರೀರವೂ ಸಹ ಖುಷಿಯಾಗಿ ಕಾಣುತ್ತದೆ. ಶರೀರಕ್ಕೆ ದುಃಖವಾದರೆ
ಆತ್ಮಕ್ಕೂ ದುಃಖದ ಅನುಭವವಾಗುತ್ತದೆ. ಒಂದು ಮಾತನ್ನು ಎಲ್ಲರಿಗೂ ತಿಳಿಸುತ್ತಾ ಇರಿ – ಶಿವ ತಂದೆಯು
ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪಗಳು ವಿನಾಶವಾಗುತ್ತವೆ. ಅವರು ಕೃಷ್ಣ
ಭಗವಾನುವಾಚ ಎಂದು ಬರೆದಿದ್ದಾರೆ, ಕೃಷ್ಣನನ್ನಂತೂ ಅನೇಕರು ನೆನಪು ಮಾಡುತ್ತಾರೆ ಆದರೆ ಪಾಪವಂತೂ
ಕಳೆಯುವುದೇ ಇಲ್ಲ, ಇನ್ನೂ ಪತಿತರಾಗಿ ಬಿಟ್ಟಿದ್ದಾರೆ. ಯಾರನ್ನು ನೆನಪು ಮಾಡಬೇಕು. ಪರಮಾತ್ಮನ
ರೂಪವೇನೆಂದು ಅವರಿಗೆ ತಿಳಿದೇ ಇಲ್ಲ. ಒಂದುವೇಳೆ ಸರ್ವವ್ಯಾಪಿ ಎಂದು ಹೇಳಿದರೂ ಸಹ ಹೇಗೆ ಆತ್ಮವು
ನಕ್ಷತ್ರವಾಗಿದೆಯೋ ಹಾಗೆಯೇ ಪರಮಾತ್ಮನೂ ಸಹ ನಕ್ಷತ್ರ ಸಮಾನವಾಗಿದ್ದಾರೆ ಏಕೆಂದರೆ ಆತ್ಮವೇ
ಪರಮಾತ್ಮನೆಂದು ಹೇಳಿ ಬಿಡುತ್ತಾರೆ ಅಂದಮೇಲೆ ಈ ಲೆಕ್ಕದಿಂದಲೂ ಸಹ ತಂದೆಯು ಬಿಂದುವಾದರು. ಚಿಕ್ಕ
ಬಿಂದುವು ಪ್ರವೇಶ ಮಾಡುತ್ತದೆ. ಎಲ್ಲಾ ಬಿಂದುಗಳಿಗೆ ಹೇಳುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ
ನೆನಪು ಮಾಡಿ, ಕರ್ಮೇಂದ್ರಿಯಗಳ ಮೂಲಕ ಮಾತನಾಡುತ್ತಾರೆ. ಆತ್ಮವು ಕರ್ಮೇಂದ್ರಿಯಗಳಿಲ್ಲದೆ ಶಬ್ದ
ಮಾಡಲು ಸಾಧ್ಯವಿಲ್ಲ. ನೀವು ಇದನ್ನು ಹೇಳಬಲ್ಲಿರಿ - ಆತ್ಮ, ಪರಮಾತ್ಮನ ರೂಪವು ಒಂದೇ ಆಗಿದೆಯಲ್ಲವೆ.
ಪರಮಾತ್ಮನಿಗೆ ದೊಡ್ಡ ರೂಪವೆಂದು ಹೇಳಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನಾನೂ ಸಹ
ಬಿಂದುವಾಗಿದ್ದೇನೆ ಆದರೆ ನಾನು ಪತಿತ - ಪಾವನನಾಗಿದ್ದೇನೆ ಮತ್ತು ನೀವೆಲ್ಲಾ ಆತ್ಮರು
ಪತಿತರಾಗಿದ್ದೀರಿ. ಇದು ನೇರ ಮಾತಾಗಿದೆ. ಈಗ ದೇಹಿ-ಅಭಿಮಾನಿಯಾಗಿ ತಂದೆಯಾದ ನನ್ನನ್ನು ನೆನಪು ಮಾಡಿ,
ಅನ್ಯರಿಗೂ ಮಾರ್ಗವನ್ನು ತಿಳಿಸಿ. ನಾನು ಎರಡೇ ಶಬ್ದಗಳನ್ನು ಹೇಳುತ್ತೇನೆ - ಮನ್ಮನಾಭವ, ನಂತರ
ಸ್ವಲ್ಪ ವಿಸ್ತಾರದಲ್ಲಿ ತಿಳಿಸುತ್ತೇನೆ - ಇವು ರೆಂಬೆ-ಕೊಂಬೆಗಳಾಗಿವೆ. ಮೊದಲು ಸತೋಪ್ರಧಾನ, ಸತೋ,
ರಜೋ, ತಮೋ.... ದಲ್ಲಿ ಬರುತ್ತೀರಿ, ಪಾಪಾತ್ಮರಾಗುವುದರಿಂದ ಎಷ್ಟೊಂದು ಕಲೆಗಳುಂಟಾಗುತ್ತವೆ. ಆ
ಕಲೆಗಳನ್ನು ಅಳಿಸುವುದಾದರೂ ಹೇಗೆ? ಗಂಗಾ ಸ್ನಾನ ಮಾಡಿದರೆ ಪಾಪವು ಕಳೆಯುವುದೆಂದು ಅವರು
ತಿಳಿದುಕೊಳ್ಳುತ್ತಾರೆ. ಆದರೆ ಅದು ಶಾರೀರಿಕ ಸ್ನಾನವಾಗಿದೆ. ಆತ್ಮವು ತಂದೆಯನ್ನು ನೆನಪು
ಮಾಡುವುದರಿಂದಲೇ ಪಾವನವಾಗಲು ಸಾಧ್ಯ. ಇದಕ್ಕೆ ನೆನಪಿನ ಯಾತ್ರೆಯೆಂದು ಹೇಳಲಾಗುತ್ತದೆ. ಎಷ್ಟು ಸಹಜ
ಮಾತಾಗಿದೆ! ಇದನ್ನು ತಂದೆಯು ಪ್ರತಿನಿತ್ಯವೂ ತಿಳಿಸುತ್ತಿರುತ್ತಾರೆ. ಗೀತೆಯಲ್ಲಿಯೂ ಸಹ ಇದನ್ನೇ
ಒತ್ತುಕೊಟ್ಟು ಹೇಳಿದ್ದಾರೆ - ಮನ್ಮನಾಭವ, ಆಸ್ತಿಯಂತೂ ಸಿಕ್ಕೇ ಸಿಗುವುದು. ಕೇವಲ ನನ್ನನ್ನು ನೆನಪು
ಮಾಡಿರಿ ಆಗ ಪಾಪಗಳು ಕಳೆಯುವವು. ತಂದೆಯು ಅವಿನಾಶಿ ಬ್ಲಾಟಿಂಗ್ ಪೇಪರ್ ಅಲ್ಲವೆ. ತಂದೆಯು
ತಿಳಿಸುತ್ತಾರೆ - ನನ್ನನ್ನು ನೆನಪು ಮಾಡುವುದರಿಂದ ನೀವು ಪಾವನರಾಗಿ ಬಿಡುತ್ತೀರಿ ಮತ್ತು ರಾವಣನು
ಪತಿತರನ್ನಾಗಿ ಮಾಡುತ್ತಾನೆ ಅಂದಾಗ ಇಂತಹ ತಂದೆಯನ್ನು ನೆನಪು ಮಾಡಬೇಕಲ್ಲವೆ. ಇಂತಹವರೂ ಇದ್ದಾರೆ
ಯಾರು ನೆನಪು ಮಾಡುವುದೇ ಇಲ್ಲ ಅವರ ಗತಿಯೇನಾಗುವುದು! ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ,
ಮತ್ತೆಲ್ಲಾ ಮಾತುಗಳನ್ನು ಬಿಟ್ಟು ಬಿಡಿ ಕೇವಲ ಒಂದು ಮಾತೇನೆಂದರೆ ಆತ್ಮಾಭಿಮಾನಿಯಾಗಿ, ನನ್ನನ್ನು
ನೆನಪು ಮಾಡಿ ಸಾಕು. ಇದಂತೂ ನಿಮಗೆ ತಿಳಿದಿದೆ - ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು
ತೆಗೆದುಕೊಳ್ಳುತ್ತದೆ. ಆತ್ಮವೇ ಸುಖ-ದುಃಖವನ್ನು ಅನುಭವಿಸುತ್ತದೆ. ಎಂದೂ ಸಹ ಒಬ್ಬರು ಇನ್ನೊಬ್ಬರ
ಮನಸ್ಸನ್ನು ದುಃಖಿಯನ್ನಾಗಿ ಮಾಡಬಾರದು, ಒಬ್ಬರು ಇನ್ನೊಬ್ಬರಿಗೆ ಸುಖ ಕೊಡಬೇಕು - ಇದೇ ನಿಮ್ಮ
ವ್ಯಾಪಾರವಾಗಿದೆ. ಅನೇಕರು ಒಬ್ಬರು ಇನ್ನೊಬ್ಬರಿಗೆ ದುಃಖವನ್ನೇ ಕೊಡುತ್ತಿರುತ್ತಾರೆ. ಒಬ್ಬರು
ಇನ್ನೊಬ್ಬರ ದೇಹದಲ್ಲಿ ಸಿಲುಕಿರುತ್ತಾರೆ. ಇಡೀ ದಿನ ಒಬ್ಬರು ಇನ್ನೊಬ್ಬರನ್ನು ನೆನಪು
ಮಾಡುತ್ತಿರುತ್ತಾರೆ. ಮಾಯೆಯೂ ಸಹ ತೀಕ್ಷ್ಣವಾಗಿದೆ. ತಂದೆಯ ಹೆಸರನ್ನು ತೆಗೆದುಕೊಳ್ಳುವುದಿಲ್ಲ.
ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ದೇಹೀ-ಅಭಿಮಾನಿ ಭವ, ಜ್ಞಾನವು ಬಹಳ ಸಹಜವಾಗಿದೆ,
ನೆನಪೇ ಬಹಳ ಕಷ್ಟವಾಗಿದೆ. ಆ ಜ್ಞಾನವಾದರೆ 15-20 ವರ್ಷಗಳವರೆಗೆ ಓದುತ್ತಾರೆ. ಎಷ್ಟೊಂದು
ವಿಷಯಗಳಿರುತ್ತವೆ. ಈ ಜ್ಞಾನವು ಬಹಳ ಸಹಜವಾಗಿದೆ. ನಾಟಕದ ಬಗ್ಗೆ ಅರಿತುಕೊಳ್ಳುವುದು ಒಂದು
ಕಥೆಯಾಗಿದೆ. ಮುರುಳಿಯನ್ನು ಓದಿ ಹೇಳುವುದು ದೊಡ್ಡ ಮಾತಲ್ಲ, ನೆನಪಿನದೇ ಬಹಳ ಪರಿಶ್ರಮವಾಗಿದೆ.
ತಂದೆಯು ಹೇಳುತ್ತಾರೆ - ಡ್ರಾಮಾ. ಆದರೂ ಪುರುಷಾರ್ಥ ಮಾಡುತ್ತಾ ಇರಿ, ತಂದೆಯನ್ನು ನೆನಪು ಮಾಡಿರಿ
ಆಗ ಯೋಗಾಗ್ನಿಯಿಂದ ನಿಮ್ಮ ಪಾಪಗಳು ಭಸ್ಮವಾಗುತ್ತದೆ. ಒಳ್ಕೊಳ್ಳೆಯ ಮಕ್ಕಳು ಇದರಲ್ಲಿ
ಅನುತ್ತೀರ್ಣರಾಗುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ,
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಎಂದೂ ಯಾರದೇ
ಮನಸ್ಸನ್ನು ದುಃಖಿಯನ್ನಾಗಿ ಮಾಡಬಾರದು. ಎಲ್ಲರಿಗೆ ಸುಖ ಕೊಡಬೇಕಾಗಿದೆ. ಒಬ್ಬ ತಂದೆಯ
ನೆನಪಿನಲ್ಲಿದ್ದು ಅನ್ಯರಿಗೂ ನೆನಪು ತರಿಸಬೇಕಾಗಿದೆ.
2. ಪಾಪಗಳ ಕಲೆಗಳನ್ನು
ಅಳಿಸಲು ದೇಹೀ-ಅಭಿಮಾನಿಯಾಗಿ, ಅವಿನಾಶಿ ಬ್ಲಾಟಿಂಗ್ ಪೇಪರ್ ತಂದೆಯನ್ನು ನೆನಪು ಮಾಡಬೇಕಾಗಿದೆ.
ಎಲ್ಲರ ಕಲ್ಯಾಣವಾಗುತ್ತಿರಲಿ - ಇಂತಹ ಮಧುರ ಸ್ಥಿತಿಯನ್ನು ಮಾಡಿಕೊಳ್ಳಬೇಕಾಗಿದೆ.
ವರದಾನ:
ತಮ್ಮ
ಶ್ರೇಷ್ಠತೆಯ ಮೂಲಕ ನವೀನತೆಯ ಧ್ವಜಾರೋಹಣ ಮಾಡುವಂತಹ ಶಕ್ತಿ ಸ್ವರೂಪ ಭವ.
ಈಗ ಸಮಯದನುಸಾರ,
ಸಮೀಪತೆಯನುಸಾರ ಶಕ್ತಿ ರೂಪದ ಪ್ರಭಾವವನ್ನು ಅನ್ಯರ ಮೇಲೆ ಯಾವಾಗ ಪ್ರಭಾವ ಬೀರುತ್ತೀರಿ, ಆಗ ಅಂತಿಮ
ಪ್ರತ್ಯಕ್ಷತೆಯನ್ನು ಸಮೀಪಕ್ಕೆ ತರಬಹುದು. ಹೇಗೆ ಸ್ನೇಹ ಹಾಗೂ ಸಹಯೋಗವನ್ನು ಪ್ರತ್ಯಕ್ಷಗೊಳಿಸಿದಿರಿ
ಹಾಗೆಯೇ ಇಂತಹ ಸೇವೆಯ ದರ್ಪಣದಲ್ಲಿ ಶಕ್ತಿ ರೂಪದ ಅನುಭವ ಮಾಡಿಸಿರಿ. ಯಾವಾಗ ತಮ್ಮ ಶ್ರೇಷ್ಠತೆಯ
ಮೂಲಕ ಶಕ್ತಿ ರೂಪದ ನವೀನತೆಯ ಧ್ವಜಾರೋಹಣ ಮಾಡಿದಾಗಲೇ ಪ್ರತ್ಯಕ್ಷತೆಯಾಗುವುದು.ತಮ್ಮ ಶಕ್ತಿ
ಸ್ವರೂಪದಿಂದ ಸರ್ವಶಕ್ತಿವಂತ ತಂದೆಯ ಸಾಕ್ಷಾತ್ಕಾರ ಮಾಡಿಸಿರಿ.
ಸ್ಲೋಗನ್:
ಮನಸ್ಸಿನಿಂದ
ಶಕ್ತಿಗಳನ್ನು ಹಾಗೂ ಕರ್ಮದ ಮೂಲಕ ಗುಣಗಳ ದಾನ ಕೊಡುವುದೇ ಮಹಾದಾನವಾಗಿದೆ.
ಅವ್ಯಕ್ತ ಸೂಚನೆ:-
“ನಿಶ್ಚಯದ ಫೌಂಡೇಷನ್ (ತಳಪಾಯವನ್ನು) ಬಲಗೊಳಿಸಿ ಸದಾ ನಿರ್ಭಯ ಮತ್ತು ನಿಶ್ಚಿಂತರಾಗಿರಿ”.
ತಂದೆಗೆ ಮಕ್ಕಳಲ್ಲಿ
ಪೂರ್ಣ ವಿಶ್ವಾಸವಿದೆ ಈ ನನ್ನ ಮಕ್ಕಳು ವಿಘ್ನ-ವಿನಾಶಕ ಆತ್ಮರಾಗಿದ್ದಾರೆ, ಪೂಜ್ಯ ಆತ್ಮರಾಗಿದ್ದಾರೆ,
ಈ ಮಕ್ಕಳು ತಂದೆಗಿಂತಲ್ಲೂ ಮುಂದೆ ಇದ್ದಾರೆ. ನಿಮಿತ್ತರಾಗಿರುವವರು ಸದಾ ತಂದೆಯನ್ನು ಸಹ
ನಿಶ್ಚಿಂತರನ್ನಾಗಿ ಮಾಡುವವರಾಗಿದ್ದಾರೆ, ಸದಾ ಖುಶಿಯ ಸಮಾಚಾರವನ್ನು ತಿಳಿಸುವಂತಹವರು
ಪ್ರತಿಯೊಬ್ಬರು ವಿಶೇಷವಾಗಿದ್ದಾರೆ. ಸ್ವಯಂನಲ್ಲಿಯೂ ಇಂತಹ ವಿಶ್ವಾಸವಿಟ್ಟುಕೊಂಡು ಇದೇ ಸ್ಮೃತಿ
ಸ್ವರೂಪದಲ್ಲಿದ್ದಾಗ ವಿಜಯಿಯಾಗಿ ಬಿಡುವಿರಿ.