29.04.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ಪತಿತ
ಜಗತ್ತಿನಿಂದ ಸಂಬಂಧವನ್ನು ಬಿಟ್ಟು ಒಬ್ಬ ತಂದೆಯೊಂದಿಗೆ ಬುದ್ಧಿಯೋಗವನ್ನು ಇಡಿ ಆಗ ಮಾಯೆಯಿಂದ
ಸೋಲುಂಟಾಗುವುದಿಲ್ಲ”
ಪ್ರಶ್ನೆ:
ಸಮರ್ಥ ತಂದೆಯು
ಜೊತೆಯಿದ್ದರೂ ಸಹ ಯಜ್ಞದಲ್ಲಿ ಅನೇಕ ವಿಘ್ನಗಳು ಏಕೆ ಬೀಳುತ್ತವೆ - ಕಾರಣವೇನು?
ಉತ್ತರ:
ಡ್ರಾಮಾನುಸಾರ ಈ
ವಿಘ್ನಗಳಂತೂ ಬರಲೇಬೇಕಾಗಿದೆ ಏಕೆಂದರೆ ಯಾವಾಗ ಯಜ್ಞದಲ್ಲಿ ಅಸುರರ ವಿಘ್ನಗಳು ಬೀಳುವುದೋ ಆಗಲೇ ಅವರ
ಪಾಪದ ಕೊಡ ತುಂಬುವುದು. ಇದರಲ್ಲಿ ತಂದೆಯೂ ಸಹ ಏನೂ ಮಾಡಲು ಸಾಧ್ಯವಿಲ್ಲ. ಇದು ಡ್ರಾಮಾದಲ್ಲಿ
ನಿಗಧಿಯಾಗಿದೆ, ವಿಘ್ನಗಳು ಬರಲೇಬೇಕಾಗಿದೆ ಆದರೆ ನೀವು ವಿಘ್ನಗಳಿಗೆ ಗಾಬರಿಯಾಗಬಾರದು.
ಗೀತೆ:
ಯಾರು
ತಂದೆ-ತಾಯಿಯಾಗಿದ್ದಾರೆ !.............
ಓಂ ಶಾಂತಿ.
ಮಕ್ಕಳು ಬೇಹದ್ದಿನ ತಂದೆಯ ಆದೇಶವನ್ನು ಕೇಳಿದಿರಿ. ಈ ಜಗತ್ತಿನ ಯಾವ ತಂದೆ-ತಾಯಿಯಿದ್ದಾರೆ, ಇಲ್ಲಿ
ಯಾವ ನಿಮ್ಮ ಸಂಬಂಧವಿದೆಯೋ ಅದು ದೇಹದ ಜೊತೆಗಿದೆ ಏಕೆಂದರೆ ದೇಹದೊಂದಿಗೆ ಮೊಟ್ಟ ಮೊದಲು ತಾಯಿಯ
ನಂತರ ತಂದೆಯ ಸಂಬಂಧವೇರ್ಪಡುತ್ತದೆ ನಂತರ ಸಹೋದರ-ಸಹೋದರಿ, ಬಂಧುಗಳ ಸಂಬಂಧ ಬೆಳೆಯುತ್ತದೆ. ಅಂದಾಗ
ಬೇಹದ್ದಿನ ತಂದೆಯ ಹೇಳಿಕೆಯೇನೆಂದರೆ ಈ ಜಗತ್ತಿನಲ್ಲಿ ನಿಮಗೆ ಯಾವ ತಂದೆ-ತಾಯಿಯಿದ್ದಾರೆಯೋ
ಅವರೊಂದಿಗೂ ಸಹ ಬುದ್ಧಿಯೋಗವನ್ನು ಇಡಬೇಡಿ. ಈ ಜಗತ್ತಿನೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳಬೇಡಿ
ಏಕೆಂದರೆ ಕಲಿಯುಗೀ ಛೀ ಛೀ ಸಂಬಂಧಗಳಾಗಿವೆ. ಈ ಪತಿತ ಪ್ರಪಂಚದೊಂದಿಗಿನ ಬುದ್ಧಿಯೋಗವನ್ನು ತೆಗೆದು
ನನ್ನೊಬ್ಬನೊಂದಿಗೆ ಜೋಡಿಸಿ ಮತ್ತು ಹೊಸ ಜಗತ್ತಿನೊಂದಿಗೆ ಜೋಡಿಸಿ ಏಕೆಂದರೆ ನೀವೀಗ ನನ್ನ ಬಳಿ
ಬರಬೇಕಾಗಿದೆ. ಕೇವಲ ಸಂಬಂಧವನ್ನು ಜೋಡಿಸುವ ಮಾತಾಗಿದೆ, ಮತ್ತ್ಯಾವುದೇ ಕಷ್ಟವಿಲ್ಲ. ಯಾರಿಗೆ ಸೂಚನೆ
ಸಿಗುವುದೋ ಅವರು ಸಂಬಂಧವನ್ನು ಜೋಡಿಸುತ್ತಾರೆ. ಸತ್ಯಯುಗದಲ್ಲಿ ಮೊದಲು ಸಂಬಂಧವು ಬಹಳ
ಚೆನ್ನಾಗಿರುತ್ತದೆ. ಸತೋಪ್ರಧಾನರೇ ನಂತರ ಕೆಳಗಿಳಿಯ ತೊಡಗುತ್ತಾರೆ ಆಗ ಸುಖದ ಸಂಬಂಧವು
ಕಳೆಯುತ್ತಾ-ಕಳೆಯುತ್ತಾ ಕಡಿಮೆ ಆಗ ತೊಡಗುತ್ತದೆ. ಈಗಂತೂ ಈ ಹಳೆಯ ಪ್ರಪಂಚದಿಂದ ಈಗ
ಬುದ್ಧಿಯೋಗವನ್ನು ಸಂಪೂರ್ಣ ತೆಗೆಯಬೇಕಾಗಿದೆ. ತಂದೆಯು ತಿಳಿಸುತ್ತಾರೆ- ನನ್ನ ಜೊತೆ ಸಂಬಂಧವನ್ನು
ಇಡಿ, ಶ್ರೀಮತದಂತೆ ನಡೆಯಿರಿ ಮತ್ತು ಯಾವುದೆಲ್ಲಾ ದೇಹದ ಸಂಬಂಧಗಳಿವೆಯೋ ಅವೆಲ್ಲವನ್ನೂ ಬಿಟ್ಟು
ಬಿಡಿ. ಇವೆಲ್ಲವೂ ಖಂಡಿತ ವಿನಾಶವಾಗುವವು. ಮಕ್ಕಳಿಗೆ ತಿಳಿದಿದೆ - ಯಾವ ತಂದೆಗೆ ಪರಮಪಿತ
ಪರಮಾತ್ಮನೆಂದು ಹೇಳಲಾಗುತ್ತದೆಯೋ ಅವರೂ ಸಹ ಡ್ರಾಮಾನುಸಾರ ಸರ್ವೀಸ್ ಮಾಡುತ್ತಾರೆ, ಅವರೂ ಸಹ
ಡ್ರಾಮಾದ ಬಂಧನದಲ್ಲಿ ಬಂಧಿತರಾಗಿದ್ದಾರೆ. ಭಗವಂತನು ಸರ್ವ ಶಕ್ತಿವಂತನೆಂದು ಮನುಷ್ಯರು
ತಿಳಿಯುತ್ತಾರೆ. ಹೇಗೆ ಕೃಷ್ಣನನ್ನೂ ಸಹ ಸರ್ವ ಶಕ್ತಿವಂತನೆಂದು ಒಪ್ಪುತ್ತಾರೆ, ಅವರಿಗೆ ಸ್ವದರ್ಶನ
ಚಕ್ರವನ್ನು ತೋರಿಸಿದ್ದಾರೆ. ಅದರಿಂದ ಅಸುರರ ತಲೆ ಕತ್ತರಿಸುತ್ತಾನೆಂದು ತಿಳಿಯುತ್ತಾರೆ ಆದರೆ
ದೇವತೆಗಳು ಹಿಂಸಾಕೃತ್ಯವನ್ನು ಹೇಗೆ ಮಾಡುವರು ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ದೇವತೆಗಳಂತೂ
ಈ ರೀತಿ ಮಾಡಲು ಸಾಧ್ಯವಿಲ್ಲ. ದೇವತೆಗಳಿಗೆ ಹೇಳಲಾಗುತ್ತದೆ - ಅವರದು ಅಹಿಂಸಾ ಪರಮೋ ಧರ್ಮವಾಗಿತ್ತು,
ಅವರಲ್ಲಿ ಹಿಂಸೆಯು ಎಲ್ಲಿಂದ ಬಂದಿತು? ಯಾರಿಗೆ ಏನು ಬಂದಿತೋ ಅದನ್ನು ಕುಳಿತು ಬರೆದು
ಬಿಟ್ಟಿದ್ದಾರೆ. ಎಷ್ಟೊಂದು ಧರ್ಮ ಗ್ಲಾನಿ ಮಾಡಿದ್ದಾರೆ! ತಂದೆಯು ತಿಳಿಸುತ್ತಾರೆ - ಈ
ಶಾಸ್ತ್ರಗಳಲ್ಲಿ ಹಿಟ್ಟಿನಲ್ಲಿ ಉಪ್ಪಿನಷ್ಟು ಸತ್ಯವಿದೆ. ಇದನ್ನೂ ಬರೆದಿದ್ದಾರೆ – ರುದ್ರ ಜ್ಞಾನ
ಯಜ್ಞವನ್ನು ರಚಿಸಿದ್ದರು, ಅದರಲ್ಲಿ ಅಸುರರು ವಿಘ್ನಗಳನ್ನು ಹಾಕುತ್ತಿದ್ದರು, ಅಬಲೆಯರ ಮೇಲೆ
ಅತ್ಯಾಚಾರವಾಗುತ್ತಿತ್ತು. ಇದನ್ನಂತೂ ಸರಿಯಾಗಿ ಬರೆದಿದ್ದಾರೆ. ಶಾಸ್ತ್ರಗಳಲ್ಲಿ ಸತ್ಯವೇನು,
ಅಸತ್ಯವೇನಿದೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಸ್ವಯಂ ಭಗವಂತನೇ ಹೇಳುತ್ತಾರೆ - ಈ
ರುದ್ರ ಜ್ಞಾನ ಯಜ್ಞದಲ್ಲಿ ವಿಘ್ನಗಳು ಖಂಡಿತ ಬೀಳುತ್ತವೆ, ಇದು ಡ್ರಾಮಾದಲ್ಲಿ ನಿಗಧಿಯಾಗಿದೆ.
ಪರಮಾತ್ಮನು ಜೊತೆಯಿರುವ ಕಾರಣ ವಿಘ್ನಗಳನ್ನು ದೂರ ಸರಿಸುತ್ತಾರೆ ಎಂದಲ್ಲ. ಇದರಲ್ಲಿ ತಂದೆಯು ಏನು
ಮಾಡುವರು! ಡ್ರಾಮಾದಲ್ಲಿ ಇದೆಲ್ಲವೂ ಆಗಲೇಬೇಕಾಗಿದೆ. ಇವರೆಲ್ಲರೂ ವಿಘ್ನಗಳನ್ನು ಹಾಕಿದಾಗಲೇ ಪಾಪದ
ಕೊಡ ತುಂಬುವುದಲ್ಲವೆ. ತಂದೆಯು ತಿಳಿಸುತ್ತಾರೆ - ಡ್ರಾಮಾದಲ್ಲಿ ಯಾವುದು ನಿಗಧಿಯಾಗಿದೆಯೋ ಅದೇ
ಆಗುವುದು. ಅಸುರರ ವಿಘ್ನಗಳು ಖಂಡಿತ ಬೀಳುತ್ತವೆ. ತಮ್ಮ ರಾಜಧಾನಿಯು ಸ್ಥಾಪನೆಯಾಗುತ್ತದೆ. ಅರ್ಧ
ಕಲ್ಪ ಮಾಯೆಯ ರಾಜ್ಯದಲ್ಲಿ ಮನುಷ್ಯರು ಎಷ್ಟೊಂದು ತಮೋಪ್ರಧಾನ ಬುದ್ಧಿಯವರು, ಭ್ರಷ್ಟಾಚಾರಿಗಳಾಗಿ
ಬಿಡುತ್ತಾರೆ. ಮತ್ತೆ ಅವರನ್ನು ಶ್ರೇಷ್ಠಾಚಾರಿಗಳನ್ನಾಗಿ ಮಾಡುವುದು ತಂದೆಯ ಕರ್ತವ್ಯವಲ್ಲವೆ.
ಭ್ರಷ್ಟಾಚಾರಿಗಳಾಗುವುದರಲ್ಲಿ ಅರ್ಧಕಲ್ಪ ಹಿಡಿಸುತ್ತದೆ ಮತ್ತೆ ಸೆಕೆಂಡಿನಲ್ಲಿ ತಂದೆಯು
ಶ್ರೇಷ್ಠಾಚಾರಿಗಳನ್ನಾಗಿ ಮಾಡುತ್ತಾರೆ. ನಿಶ್ಚಯವಾಗಲು ಸಮಯ ಹಿಡಿಸುವುದಿಲ್ಲ. ಬಹಳ ಒಳ್ಳೊಳ್ಳೆಯ
ಮಕ್ಕಳಿದ್ದಾರೆ, ಅವರಿಗೆ ಬಹು ಬೇಗನೆ ನಿಶ್ಚಯವಾಗುತ್ತದೆ. ಕೂಡಲೇ ಪ್ರತಿಜ್ಞೆ ಮಾಡುತ್ತಾರೆ ಆದರೆ
ಮಾಯೆಯೂ ಸಹ ಶಕ್ತಿಶಾಲಿಯಲ್ಲವೆ, ಮನಸ್ಸಿನಲ್ಲಿ ಒಂದಲ್ಲ ಒಂದು ಬಿರುಗಾಳಿ ತರುತ್ತದೆ ಆದರೆ
ಪುರುಷಾರ್ಥ ಮಾಡಿ ಅದನ್ನು ಕರ್ಮದಲ್ಲಿ ತರಬಾರದು. ಎಲ್ಲರೂ ಪುರುಷಾರ್ಥ ಮಾಡುತ್ತಿದ್ದಾರೆ,
ಕರ್ಮಾತೀತ ಸ್ಥಿತಿಯಂತೂ ಯಾರದೂ ಆಗಿಲ್ಲ. ಕರ್ಮೇಂದ್ರಿಯಗಳಿಂದ ಒಂದಲ್ಲ ಒಂದು ತಪ್ಪಾಗಿ ಬಿಡುತ್ತದೆ.
ಕರ್ಮಾತೀತ ಸ್ಥಿತಿಯನ್ನು ತಲುಪುವುದರಲ್ಲಿ ಮಧ್ಯದಲ್ಲಿ ವಿಘ್ನಗಳು ಖಂಡಿತ ಬರುತ್ತವೆ. ತಂದೆಯು
ತಿಳಿಸಿದ್ದಾರೆ - ಪುರುಷಾರ್ಥ ಮಾಡುತ್ತಾ-ಮಾಡುತ್ತಾ ಅಂತ್ಯದಲ್ಲಿ ಹೋಗಿ ಕರ್ಮಾತೀತ
ಸ್ಥಿತಿಯಾಗುತ್ತದೆ, ಆಗ ಈ ಶರೀರವೇ ಇರುವುದಿಲ್ಲ ಆದ್ದರಿಂದ ಸಮಯ ಹಿಡಿಸುತ್ತದೆ. ಒಂದಲ್ಲ ಒಂದು
ವಿಘ್ನಗಳು ಬೀಳುತ್ತವೆ, ಕೆಲವೊಮ್ಮೆ ಮಾಯೆಯು ಸೋಲಿಸಿ ಬಿಡುತ್ತದೆ, ಮಲ್ಲ ಯುದ್ಧವಲ್ಲವೆ. ತಂದೆಯ
ನೆನಪಿನಲ್ಲಿ ಇರಬೇಕೆಂದು ಬಯಸುತ್ತಾರೆ ಆದರೆ ಇರಲು ಸಾಧ್ಯವಾಗುವುದಿಲ್ಲ. ಇನ್ನೂ ಅಲ್ಪ ಸ್ವಲ್ಪ
ಯಾವ ಸಮಯವು ಉಳಿದಿದೆಯೋ ಅಲ್ಲಿಯವರೆಗೆ ನಿಧಾನ-ನಿಧಾನವಾಗಿ ಆ ಸ್ಥಿತಿಯನ್ನು ಧಾರಣೆ
ಮಾಡಿಕೊಳ್ಳಬೇಕಾಗಿದೆ. ಯಾರೂ ಸಹ ಜನ್ಮ ಪಡೆದ ಕೂಡಲೇ ರಾಜ ಕುಮಾರನಾಗುವುದಿಲ್ಲ. ಚಿಕ್ಕ ಮಗು
ನಿಧಾನ-ನಿಧಾನವಾಗಿ ಬೆಳವಣಿಗೆ ಆಗುತ್ತದೆಯಲ್ಲವೆ. ಇದರಲ್ಲಿಯೂ ಸಮಯ ಹಿಡಿಸುತ್ತದೆ. ಇನ್ನೂ ಸ್ವಲ್ಪ
ಸಮಯ ಉಳಿದಿದೆ. ಎಲ್ಲವೂ ಪುರುಷಾರ್ಥದ ಮೇಲೆ ಆಧಾರಿತವಾಗಿದೆ. ಗಮನ ಕೊಡಬೇಕಾಗಿದೆ, ನಾವು ಹೇಗಾದರೂ
ಮಾಡಿ ತಂದೆಯಿಂದ ಆಸ್ತಿಯನ್ನು ಖಂಡಿತ ತೆಗೆದುಕೊಳ್ಳುತ್ತೇವೆ. ಮಾಯೆಯನ್ನು ಖಂಡಿತ ಎದುರಿಸುತ್ತೇವೆ
ಆದ್ದರಿಂದ ಪ್ರತಿಜ್ಞೆ ಮಾಡುತ್ತೇವೆ. ಮಾಯೆಯೂ ಕಡಿಮೆಯಲ್ಲ, ಬಹಳ ಚಿಕ್ಕ ರೂಪದಲ್ಲಿಯೂ ಬರುತ್ತದೆ.
ಶಕ್ತಿಶಾಲಿಗಳ ಮುಂದೆ ಶಕ್ತಿಶಾಲಿಯಾಗಿಯೂ ಬರುತ್ತದೆ. ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿ ಇಲ್ಲ.
ತಂದೆಯು ತಿಳಿಸುತ್ತಾರೆ - ನೀವು ಮಕ್ಕಳಿಗೆ ಈಗ ತಿಳಿಸುತ್ತೇನೆ. ತಂದೆಯ ಮೂಲಕ ನೀವು ಸದ್ಗತಿಯನ್ನು
ಪಡೆಯುತ್ತೀರಿ ನಂತರ ಈ ಜ್ಞಾನದ ಅವಶ್ಯಕತೆಯೇ ಇರುವುದಿಲ್ಲ, ಜ್ಞಾನದಿಂದ ಸದ್ಗತಿಯಾಗುತ್ತದೆ.
ಸತ್ಯಯುಗಕ್ಕೆ ಸದ್ಗತಿಯೆಂದು ಹೇಳಲಾಗುತ್ತದೆ.
ಮಧುರಾತಿ ಮಧುರ ಮಕ್ಕಳಿಗೆ
ಲಕ್ಷ್ಯವು ಸಿಕ್ಕಿದೆ - ಇದನ್ನೂ ತಿಳಿದುಕೊಂಡಿದ್ದೀರಿ - ಡ್ರಾಮಾನುಸಾರ ವೃಕ್ಷವು
ವೃದ್ಧಿಯಾಗುವುದರಲ್ಲಿ ಸಮಯವಂತೂ ಹಿಡಿಸುತ್ತದೆ, ವಿಘ್ನಗಳು ಬಹಳ ಬರುತ್ತವೆ. ಪರಿವರ್ತನೆ
ಆಗಬೇಕಾಗುತ್ತದೆ, ಕವಡೆಯಿಂದ ವಜ್ರ ಸಮಾನ ಆಗಬೇಕಾಗಿದೆ. ರಾತ್ರಿ-ಹಗಲಿನ ಅಂತರವಿದೆ. ದೇವತೆಗಳ
ಮಂದಿರಗಳನ್ನು ಈಗಲೂ ಕಟ್ಟಿಸುತ್ತಿರುತ್ತಾರೆ, ನೀವು ಬ್ರಾಹ್ಮಣರು ಈಗ ಮಂದಿರಗಳನ್ನು
ಕಟ್ಟಿಸುವುದಿಲ್ಲ ಏಕೆಂದರೆ ಅದು ಭಕ್ತಿ ಮಾರ್ಗವಾಗಿದೆ. ಈಗ ಭಕ್ತಿ ಮಾರ್ಗವು ಸಮಾಪ್ತಿಯಾಗಿ ಜ್ಞಾನ
ಮಾರ್ಗಕ್ಕೆ ಜಯವಾಗಲಿದೆ ಎಂದು ಪ್ರಪಂಚದವರಿಗೆ ಗೊತ್ತೇ ಇಲ್ಲ. ಇದು ಕೇವಲ ನೀವು ಮಕ್ಕಳಿಗೇ
ತಿಳಿದಿದೆ - ಮನುಷ್ಯರಂತೂ ಕಲಿಯುಗವು ಇನ್ನೂ ಮಗುವಾಗಿದೆ ಎಂದು ತಿಳಿಯುತ್ತಾರೆ. ಅವರದೆಲ್ಲವೂ
ಶಾಸ್ತ್ರಗಳ ಮೇಲೆ ಆಧಾರಿತವಾಗಿದೆ. ನೀವು ಮಕ್ಕಳಿಗೆ ತಂದೆಯು ಕುಳಿತು ಎಲ್ಲಾ ವೇದ ಶಾಸ್ತ್ರಗಳ
ರಹಸ್ಯವನ್ನು ತಿಳಿಸುತ್ತಾರೆ. ತಂದೆಯು ಹೇಳುತ್ತಾರೆ - ಇಲ್ಲಿಯವರೆಗೆ ನೀವು ಏನೆಲ್ಲವನ್ನೂ
ಓದಿದ್ದೀರೋ ಅದೆಲ್ಲವನ್ನೂ ಮರೆತು ಹೋಗಿ, ಅದರಿಂದ ಯಾರದೇ ಸದ್ಗತಿಯಾಗುವುದಿಲ್ಲ. ಭಲೆ ಅಲ್ಪಕಾಲದ
ಸುಖ ಸಿಗುತ್ತಾ ಬಂದಿದೆ. ಸದಾ ಸುಖವೇ ಸುಖ ಸಿಗಲು ಸಾಧ್ಯವಿಲ್ಲ. ಇದು ಕ್ಷಣ ಭಂಗುರ ಸುಖವಾಗಿದೆ.
ಮನುಷ್ಯರು ದುಃಖದಲ್ಲಿರುತ್ತಾರೆ, ಸತ್ಯಯುಗದಲ್ಲಿ ದುಃಖದ ಹೆಸರೇ ಇರುವುದಿಲ್ಲ ಎಂಬುದು ಮನುಷ್ಯರಿಗೆ
ಗೊತ್ತಿಲ್ಲ. ಅವರು ಅಲ್ಲಿಯೂ ಸಹ ಇಂತಹ ಮಾತುಗಳನ್ನು ತಿಳಿಸಿದ್ದಾರೆ – ಕೃಷ್ಣ ಪುರಿಯಲ್ಲಿ
ಕಂಸನಿದ್ದನು... ಕೃಷ್ಣನು ಜೈಲಿನಲ್ಲಿ ಜನ್ಮ ಪಡೆದನು.... ಹೀಗೆ ಅನೇಕ ಮಾತುಗಳನ್ನು ಬರೆದಿದ್ದಾರೆ.
ಶ್ರೀಕೃಷ್ಣನು ಸ್ವರ್ಗದ ಮೊದಲ ರಾಜಕುಮಾರ, ಅಂದಮೇಲೆ ಕೃಷ್ಣನು ಏನು ಪಾಪ ಮಾಡಿದನು? ಇವು ದಂತ
ಕಥೆಗಳಾಗಿವೆ. ಇದನ್ನೂ ಸಹ ತಂದೆಯು ಬಂದು ಸತ್ಯವನ್ನು ತಿಳಿಸಿರುವ ಕಾರಣ ನೀವೀಗ
ತಿಳಿದುಕೊಂಡಿದ್ದೀರಿ, ತಂದೆಯೇ ಬಂದು ಸತ್ಯ ಖಂಡವನ್ನು ಸ್ಥಾಪನೆ ಮಾಡುತ್ತಾರೆ. ಸತ್ಯ ಖಂಡದಲ್ಲಿ
ಎಷ್ಟೊಂದು ಸುಖವಿತ್ತು, ಅಸತ್ಯ ಖಂಡದಲ್ಲಿ ಎಷ್ಟೊಂದು ದುಃಖವಿದೆ, ಇದನ್ನು ಎಲ್ಲರೂ ಮರೆತು
ಹೋಗಿದ್ದಾರೆ. ನೀವು ತಿಳಿದುಕೊಂಡಿದ್ದೀರಿ - ನಾವು ಶ್ರೀ ಮತದಂತೆ ಸತ್ಯ ಖಂಡವನ್ನು ಸ್ಥಾಪನೆ ಮಾಡಿ
ಅದರ ಮಾಲೀಕರಾಗುತ್ತೇವೆ.
ತಂದೆಯು ತಿಳಿಸುತ್ತಾರೆ
- ಹೀಗೆ ಶ್ರೀಮತದನುಸಾರ ನಡೆಯುವುದರಿಂದ ನೀವು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಮಕ್ಕಳಿಗೆ ಇದು
ತಿಳಿದಿದೆ - ನಾವು ಈ ವಿದ್ಯೆಯನ್ನು ಓದಿ ಸೂರ್ಯವಂಶಿ ಮಹಾರಾಜ-ಮಹಾರಾಣಿ ಆಗಬೇಕಾಗಿದೆ. ಶ್ರೇಷ್ಠ
ಪದವಿಯನ್ನು ಪಡೆಯಲು ಎಲ್ಲರಿಗೂ ಮನಸ್ಸಾಗುತ್ತದೆ. ಎಲ್ಲರ ಪುರುಷಾರ್ಥವು ನಡೆಯುತ್ತದೆ, ಯಾರು ಪಕ್ಕಾ
ಭಕ್ತರಿರುವರೋ ಅವರು ಚಿತ್ರವನ್ನು ಜೊತೆಯಿಟ್ಟುಕೊಳ್ಳುತ್ತಾರೆ. ಅದರಿಂದ ಪದೇ-ಪದೇ ಅವರ ನೆನಪು
ಬರುತ್ತಿರುವುದು. ಹಾಗೆಯೇ ತಂದೆಯೂ ಸಹ ಹೇಳುತ್ತಾರೆ - ತ್ರಿಮೂರ್ತಿಯ ಚಿತ್ರವನ್ನು
ಜೊತೆಯಿಟ್ಟುಕೊಳ್ಳಿ ಆಗ ಪದೇ-ಪದೇ ನೆನಪು ಬರುವುದು - ತಂದೆಯನ್ನು ನೆನಪು ಮಾಡುವುದರಿಂದ ನಾವು
ಸೂರ್ಯವಂಶಿ ಮನೆತನದಲ್ಲಿ ಬರುತ್ತೇವೆ ಎಂದು. ಕೋಣೆಯಲ್ಲಿ ತ್ರಿಮೂರ್ತಿ ಚಿತ್ರವನ್ನು ಹಾಕಿರಿ ಆಗ
ಅದರ ಕಡೆ ಪದೇ-ಪದೇ ದೃಷ್ಟಿಯು ಹೋಗುವುದು, ತಂದೆಯ ಮೂಲಕ ನಾವು ಈ ಸೂರ್ಯವಂಶಿ ಮನೆತನದಲ್ಲಿ
ಬರುತ್ತೇವೆ. ಮುಂಜಾನೆ ಏಳುತ್ತಿದ್ದಂತೆಯೇ ದೃಷ್ಟಿಯು ಅದರ ಕಡೆ ಹೋಗುವುದು, ಇದೂ ಸಹ
ಪುರುಷಾರ್ಥವಾಗಿದೆ. ತಂದೆಯು ಸಲಹೆ ನೀಡುತ್ತಾರೆ - ಒಳ್ಳೊಳ್ಳೆಯ ಭಕ್ತರು ಬಹಳ ಪುರುಷಾರ್ಥ
ಮಾಡುತ್ತಾರೆ. ಕಣ್ಣು ತೆರೆಯುತ್ತಿದ್ದಂತೆಯೇ ಕೃಷ್ಣನ ನೆನಪು ಬರಲಿ ಎಂದು ಕೃಷ್ಣನ ಚಿತ್ರವನ್ನು
ಮುಂದಿಟ್ಟುಕೊಳ್ಳುತ್ತಾರೆ. ನಿಮಗೋಸ್ಕರವಂತೂ ಇನ್ನೂ ಸಹಜವಾಗಿದೆ. ಒಂದುವೇಳೆ ಸಹಜವಾಗಿ ನೆನಪು
ಬರುವುದಿಲ್ಲ, ಮಾಯೆಯು ಸತಾಯಿಸುತ್ತದೆ ಎಂದರೆ ಆ ಸಮಯದಲ್ಲಿ ಈ ಚಿತ್ರಗಳು ಸಹಯೋಗ ನೀಡುತ್ತವೆ. ಶಿವ
ತಂದೆಯು ನಮ್ಮನ್ನು ಬ್ರಹ್ಮಾರವರ ಮೂಲಕ ವಿಷ್ಣು ಪುರಿಯ ಮಾಲೀಕರನ್ನಾಗಿ ಮಾಡುತ್ತಾರೆ. ನಾವು
ತಂದೆಯಿಂದ ವಿಶ್ವದ ಮಾಲೀಕರಾಗುತ್ತಿದ್ದೇವೆ. ಈ ಸ್ಮರಣೆಯಿಂದ ಇರುವುದರಿಂದಲೂ ಬಹಳ ಸಹಯೋಗ ಸಿಗುವುದು.
ಬಾಬಾ, ಪದೇ-ಪದೇ ನೆನಪು ಮರೆತು ಹೋಗುತ್ತದೆ ಎಂದು ಹೇಳುವ ಮಕ್ಕಳಿಗೆ ತಂದೆಯು ಸಲಹೆ ನೀಡುತ್ತಾರೆ,
ಚಿತ್ರವನ್ನು ಸನ್ಮುಖದಲ್ಲಿಟ್ಟುಕೊಳ್ಳಿ ಆಗ ತಂದೆ ಹಾಗೂ ಆಸ್ತಿಯ ನೆನಪು ಬರುವುದು ಆದರೆ
ಬ್ರಹ್ಮಾರವರನ್ನು ನೆನಪು ಮಾಡಬಾರದು. ನಿಶ್ಚಿತಾರ್ಥವಾದಾಗ ದಲ್ಲಾಳಿಯ ನೆನಪು ಬರುತ್ತದೆಯೇ! ನೀವು
ತಂದೆಯನ್ನು ಚೆನ್ನಾಗಿ ನೆನಪು ಮಾಡಿ ಆಗ ತಂದೆಯೂ ಸಹ ನಿಮ್ಮನ್ನು ನೆನಪು ಮಾಡುವರು. ನೆನಪಿನಿಂದಲೇ
ನೆನಪು ಸಿಗುತ್ತದೆ. ಈಗ ಪ್ರಿಯತಮನ ಬಗ್ಗೆ ನಿಮಗೆ ತಿಳಿದಿದೆ - ಶಿವನಿಗೆ ಎಷ್ಟೊಂದು ಮಂದಿ
ಭಕ್ತರಿರುತ್ತಾರೆ, ಶಿವ-ಶಿವ ಎಂದು ಹೇಳುತ್ತಿರುತ್ತಾರೆ. ಆದರೆ ಅದು ತಪ್ಪಾಗಿದೆ. ಶಿವ ಕಾಶಿ
ವಿಶ್ವನಾಥ ಎಂದು ಹೇಳಿ ಮತ್ತೆ ಗಂಗೆಯೆಂದು ಹೇಳಿ ಬಿಡುತ್ತಾರೆ. ನದಿಯ ತೀರದಲ್ಲಿ ಹೋಗಿ
ಕುಳಿತುಕೊಳ್ಳುತ್ತಾರೆ. ಜ್ಞಾನ ಸಾಗರನು ತಂದೆಯಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದಿಲ್ಲ.
ಕಾಶಿಯನ್ನು ನೋಡುವುದಕ್ಕಾಗಿ ಎಷ್ಟೊಂದು ಮಂದಿ ವಿದೇಶಿಯರು ಹೋಗುತ್ತಾರೆ. ದೊಡ್ಡ-ದೊಡ್ಡ
ಕಲ್ಯಾಣಿಗಳಿವೆ, ಆದರೂ ಸಹ ತಂದೆಯ ಮಂದಿರವು ಎಲ್ಲರನ್ನೂ ಸೆಳೆಯುತ್ತದೆ. ಶಿವ ತಂದೆಯೂ
ಸೆಳೆಯುತ್ತಾರೆ, ನಂಬರ್ವನ್ ಶಿವ ತಂದೆಯಾಗಿದ್ದಾರೆ ನಂತರ ಬ್ರಹ್ಮಾ-ಸರಸ್ವತಿ ಸೋ ವಿಷ್ಣು, ವಿಷ್ಣು
ಸೋ ಬ್ರಹ್ಮಾ. ಬ್ರಾಹ್ಮಣರಿಂದ ವಿಷ್ಣು ಪುರಿಯ ದೇವತೆಗಳು, ವಿಷ್ಣು ಪುರಿಯ ದೇವತೆಗಳಿಂದ ಮತ್ತೆ
ಬ್ರಾಹ್ಮಣರು. ಈಗ ನಿಮ್ಮದು ಇದೇ ವ್ಯವಹಾರವಾಯಿತು, ನಾವೇ ದೇವತೆಗಳಾಗುತ್ತಿದ್ದೇವೆ ಅಂದಮೇಲೆ
ಅನ್ಯರಿಗೂ ಮಾರ್ಗವನ್ನು ತಿಳಿಸಬೇಕಾಗಿದೆ. ಮತ್ತೆಲ್ಲರೂ ಕಾಡಿಗೆ ಕರೆದುಕೊಂಡು ಹೋಗುವವರಾಗಿದ್ದಾರೆ,
ನೀವೆಲ್ಲರೂ ಕಾಡಿನಿಂದ ಉದ್ಯಾನವನಕ್ಕೆ ಕರೆದುಕೊಂಡು ಹೋಗುತ್ತೀರಿ. ಶಿವ ತಂದೆಯು ಬಂದು
ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆ, ನೀವೂ ಸಹ ಇದೇ ಕಾರ್ಯವನ್ನು ಮಾಡುತ್ತೀರಿ. ಈ
ಮಾತುಗಳನ್ನು ನೀವೇ ತಿಳಿದುಕೊಂಡಿದ್ದೀರಿ. ಈಗಂತೂ ಅವರಿಗೆ ತಿಳಿಸಿ ಕೊಡಲು ಯಾವುದೇ
ರಾಜ-ರಾಣಿಯಿಲ್ಲ. ಪಾಂಡವರಿಗೆ ಮೂರು ಹೆಜ್ಜೆಗಳಷ್ಟು ಭೂಮಿಯೂ ಸಿಗುತ್ತಿರಲಿಲ್ಲ. ತಂದೆಯು
ಸಮರ್ಥನಾಗಿದ್ದರು ಆದ್ದರಿಂದ ಅವರಿಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಟ್ಟರೆಂದು ಗಾಯನವಿದೆ. ಈಗಲೂ
ಅದೇ ಪಾತ್ರವು ನಡೆಯುತ್ತದೆಯಲ್ಲವೆ. ತಂದೆಯು ಗುಪ್ತವಾಗಿದ್ದಾರೆ, ಕೃಷ್ಣನಿಗಂತೂ ಯಾವುದೇ ವಿಘ್ನ
ಬೀಳಲು ಸಾಧ್ಯವಿಲ್ಲ. ಈಗ ತಂದೆಯು ಬಂದಿದ್ದಾರೆ, ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ.
ಇದಕ್ಕಾಗಿ ಪರಿಶ್ರಮ ಪಡಬೇಕಾಗಿದೆ. ದಿನ-ಪ್ರತಿ ದಿನ ಒಳ್ಳೊಳ್ಳೆಯ ವಿಚಾರಗಳು ಸಿಗುತ್ತಿರುತ್ತವೆ.
ತಿಳಿಸುವುದರಿಂದಲೇ ಬಹಳ ಪ್ರಭಾವ ಬೀರುತ್ತದೆ. ಪ್ರದರ್ಶನಿಯು ಒಳ್ಳೆಯದೋ ಅಥವಾ ಪ್ರೊಜೆಕ್ಟರ್
ಒಳ್ಳೆಯದೋ? ಬುದ್ಧಿಗೆ ಕೆಲಸ ಕೊಡಬೇಕಾಗಿದೆ. ಪ್ರದರ್ಶನಿಯಿಂದ ಚೆನ್ನಾಗಿ ಸೇವೆಯಾಗುತ್ತದೆ,
ಪ್ರದರ್ಶನಿಯಲ್ಲಿ ತಿಳಿಸುವಾಗ ಚಹರೆಯನ್ನು ನೋಡಿ ತಿಳಿಸಲಾಗುತ್ತದೆ. ಗೀತೆಯ ಭಗವಂತನು
ತಂದೆಯಾಗಿದ್ದಾರೆ ಎಂಬುದನ್ನು ತಿಳಿದುಕೊಂಡಿದ್ದೀರಿ ಅಂದಮೇಲೆ ತಂದೆಯಿಂದ ಆಸ್ತಿಯನ್ನು
ತೆಗೆದುಕೊಳ್ಳುವ ಪುರುಷಾರ್ಥ ಮಾಡಬೇಕಾಗಿದೆ. ಏಳು ದಿನಗಳ ಸಮಯ ಕೊಡಬೇಕಾಗಿದೆ, ಬರೆದುಕೊಡಿ.
ಇಲ್ಲದಿದ್ದರೆ ಹೊರಗೆ ಹೋಗುತ್ತಿದ್ದಂತೆಯೇ ಮಾಯೆಯು ಮರೆಸಿ ಬಿಡುತ್ತದೆ. ನಿಮ್ಮ ಬುದ್ಧಿಯಲ್ಲಿ ಬಂದು
ಬಿಟ್ಟಿತು - ನಾವು 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆ, ಈಗ ಹೋಗಬೇಕಾಗಿದೆ. ತಮೋಪ್ರಧಾನರಿಂದ
ಸತೋಪ್ರಧಾನರಾಗಬೇಕಾಗಿದೆ. ಈ ಚಿತ್ರವಂತೂ ಜೊತೆಯಲ್ಲಿಯೇ ಇರಬೇಕಾಗಿದೆ. ಬಹಳ ಚೆನ್ನಾಗಿದೆ, ಈ
ಲಕ್ಷ್ಮೀ-ನಾರಾಯಣರು ರಾಜ್ಯಭಾಗ್ಯವನ್ನು ಯಾವಾಗ ಮತ್ತು ಹೇಗೆ ಪಡೆದರು ಎಂಬುದನ್ನು ಬಿರ್ಲಾದವರೂ ಸಹ
ತಿಳಿದುಕೊಂಡಿಲ್ಲ. ನೀವು ತಿಳಿದುಕೊಂಡಿದ್ದೀರಿ ಅಂದಮೇಲೆ ನಿಮಗೆ ಬಹಳ ಖುಷಿಯಿರಬೇಕು.
ಲಕ್ಷ್ಮೀ-ನಾರಾಯಣರ ಚಿತ್ರವನ್ನು ತೆಗೆದುಕೊಂಡು ಯಾರಿಗಾದರೂ ತಿಳಿಸಿ ಕೊಡಿ - ಅವರು ಈ ಪದವಿಯನ್ನು
ಹೇಗೆ ಪಡೆದರು? ಈ ಮಾತುಗಳು ಬುದ್ದಿಯಿಂದ ತಿಳಿದುಕೊಳ್ಳುವ ಹಾಗೂ ತಿಳಿಸುವಂತದ್ದಾಗಿದೆ. ಗುರಿಯು
ಉನ್ನತವಾಗಿದೆ. ಯಾರು ಎಂತಹ ಶಿಕ್ಷಕರೋ ಅವರು ಅದೇ ರೀತಿ ಸರ್ವೀಸ್ ಮಾಡುತ್ತಾರೆ. ನೋಡುತ್ತೇವೆ -
ಯಾರು ಯಾರು ತಮ್ಮ ಸ್ಥಿತಿಯನುಸಾರ ಸೇವಾಕೇಂದ್ರಗಳನ್ನು ಸಂಭಾಲನೆ ಮಾಡುತ್ತಿದ್ದಾರೆ, ನಶೆಯಂತೂ
ಎಲ್ಲರಿಗೂ ಇದೆ ಆದರೆ ವಿವೇಕವು ಹೇಳುತ್ತದೆ - ತಿಳಿಸುವವರು ಎಷ್ಟು ಬುದ್ಧಿವಂತರಾಗಿರುವರೋ ಅಷ್ಟು
ಚೆನ್ನಾಗಿ ಸರ್ವೀಸ್ ಆಗುವುದು. ಎಲ್ಲರೂ ಬುದ್ಧಿವಂತರಾಗಿರಲು ಸಾಧ್ಯವಿಲ್ಲ. ಎಲ್ಲರಿಗೆ ಒಂದೇ
ರೀತಿಯ ಶಿಕ್ಷಕರು ಸಿಗಲು ಸಾಧ್ಯವಿಲ್ಲ. ಕಲ್ಪದ ಮೊದಲು ಹೇಗೆ ನಡೆಯುತ್ತಿತ್ತೋ ಹಾಗೆಯೇ
ನಡೆಯುತ್ತಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ತಮ್ಮ ಸ್ಥಿತಿಯನ್ನು ಶಕ್ತಿಶಾಲಿ
ಮಾಡಿಕೊಳ್ಳುತ್ತಾ ಇರಿ. ಇದು ಕಲ್ಪ-ಕಲ್ಪದ ಆಟವಾಗಿದೆ. ಕಲ್ಪದ ಹಿಂದಿನ ತರಹ ಪ್ರತಿಯೊಬ್ಬರ
ಪುರುಷಾರ್ಥವು ನಡೆಯುತ್ತಿದೆ. ಏನೆಲ್ಲವೂ ಆಗುತ್ತದೆಯೋ ಕಲ್ಪದ ಮೊದಲೂ ಸಹ ಇದೇ ರೀತಿಯಾಗಿತ್ತು ಎಂದು
ನಾವು ಹೇಳುತ್ತೇವೆ. ಆಗ ಖುಷಿಯೂ ಇರುತ್ತದೆ, ಶಾಂತಿಯೂ ಇರುತ್ತದೆ. ತಂದೆಯು ತಿಳಿಸುತ್ತಾರೆ –
ಕರ್ಮ ಮಾಡುತ್ತಾ ತಂದೆಯನ್ನು ನೆನಪು ಮಾಡಿ. ಬುದ್ಧಿ ಯೋಗವು ಅಲ್ಲಿಯೇ ತಗುಲಿ ಹಾಕಿಕೊಂಡಿರಲಿ ಆಗ
ಅನೇಕರ ಕಲ್ಯಾಣವಾಗುವುದು. ಯಾರು ಮಾಡುವರೋ ಅವರು ಪಡೆಯುವರು. ಒಳ್ಳೆಯದನ್ನು ಮಾಡಿದರೆ ಒಳ್ಳೆಯದನ್ನೇ
ಪಡೆಯುವರು. ಮಾಯೆಯ ಮತದಂತೆ ಎಲ್ಲರೂ ಕೆಟ್ಟದ್ದನ್ನೇ ಮಾಡುತ್ತಾ ಬಂದಿದ್ದಾರೆ, ಈಗ ಶ್ರೀಮತವು
ಸಿಗುತ್ತದೆ, ಒಳ್ಳೆಯದನ್ನು ಮಾಡಿದರೆ ಒಳ್ಳೆಯದೇ ಆಗುವುದು. ಪ್ರತಿಯೊಬ್ಬರೂ ತನಗಾಗಿ ಪರಿಶ್ರಮ
ಪಡುತ್ತಾರೆ. ಹೇಗೆ ಮಾಡುವರೋ ಹಾಗೆಯೇ ಪಡೆಯುವರು. ನಾವೇಕೆ ಯೋಗವನ್ನಿಡುತ್ತಾ ಸರ್ವೀಸ್ ಮಾಡಬಾರದು!
ಯೋಗದಿಂದ ಆಯಸ್ಸು ಹೆಚ್ಚುವುದು. ನೆನಪಿನ ಯಾತ್ರೆಯಿಂದ ನಿರೋಗಿಗಳಾಗಬೇಕಾಗಿದೆ ಅಂದಮೇಲೆ ನಾವೇಕೆ
ತಂದೆಯ ನೆನಪಿನಲ್ಲಿ ಇರಬಾರದು! ಯಥಾರ್ಥ ಮಾತಾಗಿದೆ ಅಂದಮೇಲೆ ನಾವೇಕೆ ಪ್ರಯತ್ನ ಪಡಬಾರದು! ಜ್ಞಾನವು
ಬಹಳ ಸಹಜವಾಗಿದೆ, ಚಿಕ್ಕ ಮಕ್ಕಳೂ ಸಹ ತಿಳಿದುಕೊಳ್ಳುತ್ತಾರೆ ಮತ್ತು ತಿಳಿಸುತ್ತಾರೆ ಆದರೆ ಅವರು
ಯೋಗಿಗಳಾಗಲಿಲ್ಲ. ಇದನ್ನು ಪಕ್ಕಾ ಮಾಡಿಸಬೇಕಾಗಿದೆ- ತಂದೆಯನ್ನು ನೆನಪು ಮಾಡಿ. ಪದೇ-ಪದೇ ಮರೆತು
ಹೋಗುತ್ತದೆ ಎಂದು ಯಾರು ತಿಳಿಯುವರೋ ಅವರು ಚಿತ್ರಗಳನ್ನಿಟ್ಟುಕೊಳ್ಳಿ. ಇದೂ ಒಳ್ಳೆಯದೇ ಆಗಿದೆ.
ಮುಂಜಾನೆ ಚಿತ್ರವನ್ನು ನೋಡಿದಕೂಡಲೇ ನೆನಪಿಗೆ ಬಂದು ಬಿಡುತ್ತದೆ – ಶಿವ ತಂದೆಯಿಂದ ನಾವು ವಿಷ್ಣು
ಪುರಿಯ ಆಸ್ತಿಯನ್ನು ಪಡೆಯುತ್ತಿದ್ದೇವೆ. ಈ ತ್ರಿಮೂರ್ತಿಯ ಚಿತ್ರವೇ ಮುಖ್ಯವಾಗಿದೆ. ಇದರ
ಅರ್ಥವನ್ನು ನೀವೀಗ ತಿಳಿದುಕೊಂಡಿದ್ದೀರಿ. ಪ್ರಪಂಚದಲ್ಲಿ ಇಂತಹ ತ್ರಿಮೂರ್ತಿ ಚಿತ್ರವು ಮತ್ತ್ಯಾರ
ಬಳಿಯೂ ಇಲ್ಲ. ನಾವು ಬರೆಯಲಿ, ಬರೆಯದೇ ಇರಲಿ ಇದಂತೂ ಎಲ್ಲರಿಗೂ ಗೊತ್ತಿದೆ. ಬ್ರಹ್ಮನ ಮೂಲಕ
ಸ್ಥಾಪನೆ, ವಿಷ್ಣುವಿನ ಮೂಲಕ ಪಾಲನೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಮಾಯೆಯ
ಬಾಕ್ಸಿಂಗ್ನಲ್ಲಿ ಎಂದೂ ಸೋಲುಂಟಾಗಬಾರದು ಇದರ ಮೇಲೆ ಗಮನ ಇಡಬೇಕಾಗಿದೆ. ಕಲ್ಪದ ಮೊದಲಿನ
ಸ್ಮೃತಿಯಿಂದ ತಮ್ಮ ಸ್ಥಿತಿಯನ್ನು ಶಕ್ತಿಶಾಲಿ ಮಾಡಿಕೊಳ್ಳಬೇಕಾಗಿದೆ. ಖುಷಿ ಮತ್ತು
ಶಾಂತಿಯಲ್ಲಿರಬೇಕಾಗಿದೆ.
2. ತಮ್ಮ ಉನ್ನತಿ
ಮಾಡಿಕೊಳ್ಳುವುದಕ್ಕಾಗಿ ಶ್ರೀಮತದಂತೆ ನಡೆಯಬೇಕಾಗಿದೆ. ಈ ಹಳೆಯ ಪ್ರಪಂಚದೊಂದಿಗಿನ ಸಂಬಂಧವನ್ನು
ತೆಗೆಯಬೇಕಾಗಿದೆ. ಮಾಯೆಯ ಬಿರುಗಾಳಿಗಳಿಂದ ಪಾರಾಗಲು ಚಿತ್ರಗಳನ್ನು ಸನ್ಮುಖದಲ್ಲಿಟ್ಟುಕೊಂಡು ತಂದೆ
ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ.
ವರದಾನ:
ಮನನದ ಮೂಲಕ
ತಂದೆಯ ಆಸ್ತಿಯನ್ನು ತಮ್ಮ ಆಸ್ತಿಯನ್ನಾಗಿ ಮಾಡಿಕೊಳ್ಳುವಂತಹ ದಿವ್ಯ ಬುದ್ಧಿವಂತ ಭವ.
ತಂದೆಯ ಮೂಲಕ ಯಾವುದೆಲ್ಲಾ
ಖಜಾನೆಗಳು ಸಿಗುತ್ತವೆಯೋ ಅದನ್ನು ಮನನ ಮಾಡುತ್ತೀರೆಂದರೆ, ಆಂತರ್ಯದಲ್ಲಿ ಸಮಾವೇಶವಾಗುತ್ತದೆ.
ಆಸ್ತಿಯಂತು ಸರ್ವರಿಗೂ ಒಂದೇ ರೀತಿ ಸಿಕ್ಕಿರುತ್ತದೆ ಆದರೆ ಅದರ ಬಗ್ಗೆ ಯಾರು ಮನನ ಮಾಡಿ
ತನ್ನದನ್ನಾಗಿ ಮಾಡಿಕೊಳ್ಳುತ್ತಾರೆಯೋ ಅವರಿಗೆ ಅದರ ನಶೆ ಮತ್ತು ಖುಷಿಯಿರುತ್ತದೆ ಆದ್ದರಿಂದ
ಹೇಳಲಾಗುತ್ತದೆ - ಮನನ ಚಿಂತನೆಯಿಂದ ನಶೆಯೇರುವುದು. ಯಾರು ಸದಾ ಮನನದ ಮಸ್ತಿಯಲ್ಲಿ ಇರುತ್ತಾರೆಯೋ
ಅವರಿಗೆ ಪ್ರಪಂಚದ ಯಾವುದೇ ವಸ್ತು, ಗೊಂದಲಗಳೂ ಸಹ ಆಕರ್ಷಿಸಲು ಸಾಧ್ಯವಿಲ್ಲ. ಅವರಿಗೆ ಸ್ವತಹವಾಗಿಯೇ
ದಿವ್ಯ ಬುದ್ಧಿಯ ವರದಾನವು ಪ್ರಾಪ್ತಿಯಾಗಿ ಬಿಡುತ್ತದೆ.
ಸ್ಲೋಗನ್:
ಮನಸ್ಸಿನ
ತೊಡಕುಗಳನ್ನು ಸಮಾಪ್ತಿ ಮಾಡುವುದಕ್ಕಾಗಿ ನಿರ್ಣಯ ಶಕ್ತಿಯನ್ನು ವೃದ್ಧಿ ಮಾಡಿಕೊಳ್ಳಿರಿ.
ಅವ್ಯಕ್ತ ಸೂಚನೆ:–
“ಮಹಾನರಾಗಲು ಮಧುರತೆ ಮತ್ತು ನಮ್ರತೆಯ ಗುಣ ಧಾರಣೆ ಮಾಡಿ”
ಈ ರೀತಿ
ತಿಳಿದುಕೊಳ್ಳಬೇಡಿ ನಾವಂತು ಸದಾ ಬಾಗುತ್ತಿರುತ್ತೇವೆ ಆದರೆ ನಮ್ಮದು ಯಾವುದೇ ಮಹತ್ವವಿಲ್ಲ, ಯಾರು
ಬಾಗುವುದಿಲ್ಲ ಅಥವಾ ಸುಳ್ಳು ಹೇಳುತ್ತಾರೆ ಅವರದೇ ಮಹತ್ವವಿದೆ. ಇದು ಅಲ್ಪಕಾಲದ್ದಾಗಿದೆ, ಆದರೆ
ನೀವು ದೂರಾದೇಶಿ ಬುದ್ಧಿಯನ್ನಿಟ್ಟುಕೊಳ್ಳಿ, ಇಲ್ಲಿ ಎಷ್ಟು ಜನರ ಮುಂದೆ ಬಾಗುವಿರಿ ಅರ್ಥಾತ್
ನಮ್ರತೆಯ ಗುಣದ ಧಾರಣೆ ಮಾಡುವಿರಿ, ಆಗ ಇಡೀ ಕಲ್ಪವೇ ಸರ್ವ ಆತ್ಮರು ಮುಂದೆ-ಮುಂದೆ ನಮನ ಮಾಡುವರು.
ಸತ್ಯಯುಗ-ತ್ರೇತಾದಲ್ಲಿ ರಾಜರ ಗೌರವದಲ್ಲಿ ಕತ್ತನ್ನು ಅಲ್ಲ, ಆದರೆ ಮನಸ್ಸಿಂದ ಬಾಗುವರು ಮತ್ತು
ದ್ವಾಪರ ಕಲಿಯುಗದಲ್ಲಿ ಕತ್ತನ್ನು, ತಲೆಯನ್ನು ಬಾಗಿಸುವರು.