29.10.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ - ನೀವು
ಒಬ್ಬೊಬ್ಬರನ್ನೂ ಸ್ವರ್ಗವಾಸಿಗಳನ್ನಾಗಿ ಮಾಡಬೇಕಾಗಿದೆ, ನೀವು ಎಲ್ಲರ ಕಲ್ಯಾಣ ಮಾಡುವವರಾಗಿದ್ದೀರಿ,
ಬಡವರನ್ನು ಸಾಹುಕಾರರನ್ನಾಗಿ ಮಾಡುವುದು ನಿಮ್ಮ ಕರ್ತವ್ಯವಾಗಿದೆ"
ಪ್ರಶ್ನೆ:
ತಂದೆಯ ಯಾವ
ಹೆಸರು ಭಲೆ ಸಾಧಾರಣವಾಗಿದೆ ಆದರೆ ಕರ್ತವ್ಯವು ಬಹಳ ಮಹಾನ್ ಆಗಿದೆ?
ಉತ್ತರ:
ತಂದೆಗೆ ಹೂದೋಟದ
ಮಾಲೀಕ, ಅಂಬಿಗನೆಂದು ಹೇಳುತ್ತಾರೆ. ಈ ಹೆಸರು ಎಷ್ಟು ಸಾಧಾರಣವಾಗಿದೆ ಆದರೆ ಮುಳುಗಿ ಹೋಗುವವರನ್ನು
ಪಾರು ಮಾಡುವುದು ಎಷ್ಟು ಮಹಾನ್ ಕರ್ತವ್ಯವಾಗಿದೆ. ಹೇಗೆ ಈಜುವಂತಹ ಈಜುಗಾರರು ಒಬ್ಬರು
ಇನ್ನೊಬ್ಬರನ್ನು ಕೈಹಿಡಿದು ಪಾರುಮಾಡುತ್ತಾರೆ. ಹಾಗೆಯೇ ತಂದೆಯ ಕೈ ಸಿಗುವುದರಿಂದ ನೀವು
ಸ್ವರ್ಗವಾಸಿಗಳಾಗಿ ಬಿಡುತ್ತೀರಿ. ನೀವೀಗ ಮಾ|| ಅಂಬಿಗರಾಗಿದ್ದೀರಿ. ನೀವು ಪ್ರತಿಯೊಬ್ಬರ
ದೋಣಿಯನ್ನು ಪಾರುಮಾಡುವ ಮಾರ್ಗವನ್ನು ತಿಳಿಸುತ್ತಾರೆ.
ಓಂ ಶಾಂತಿ.
ಮಕ್ಕಳು ನೆನಪಿನಲ್ಲಂತೂ ಕುಳಿತಿರುತ್ತೀರಿ, ತನ್ನನ್ನು ಆತ್ಮನೆಂದು ತಿಳಿಯಬೇಕಾಗಿದೆ, ದೇಹವೂ ಇದೆ.
ದೇಹವಿಲ್ಲದೆ ಕುಳಿತಿದ್ದೀರೆಂದಲ್ಲ ಆದರೆ ದೇಹಾಭಿಮಾನವನ್ನು ಬಿಟ್ಟು ದೇಹೀ ಅಭಿಮಾನಿಯಾಗಿ
ಕುಳಿತುಕೊಳ್ಳಿ ಎಂದು ತಂದೆಯು ತಿಳಿಸುತ್ತಾರೆ. ದೇಹೀ-ಅಭಿಮಾನವು ಶುದ್ಧವಾಗಿದೆ, ದೇಹಾಭಿಮಾನವು
ಅಶುದ್ಧವಾಗಿದೆ. ನೀವು ತಿಳಿದುಕೊಂಡಿದ್ದೀರಿ, ದೇಹೀ-ಅಭಿಮಾನಿಗಳಾಗುವುದರಿಂದ ನಾವು ಶುದ್ಧ,
ಪವಿತ್ರರಾಗುತ್ತಿದ್ದೇವೆ. ದೇಹಾಭಿಮಾನಿಗಳಾಗಿದ್ದರಿಂದ ಅಶುದ್ಧ, ಅಪವಿತ್ರರಾಗಿ ಬಿಟ್ಟಿದ್ದಿರಿ.
ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ಪಾವನ ಪ್ರಪಂಚವಿತ್ತು, ಈಗ ಪತಿತವಾಗಿದೆ.
ಪುನಃ ಪಾವನ ಪ್ರಪಂಚವು ಖಂಡಿತ ಆಗುವುದು. ಸೃಷ್ಟಿಚಕ್ರವು ಸುತ್ತುತ್ತದೆ. ಯಾರು ಈ
ಸೃಷ್ಟಿಚಕ್ರವನ್ನು ಅರಿತಿದ್ದಾರೆಯೋ ಅವರಿಗೆ ಸ್ವದರ್ಶನ ಚಕ್ರಧಾರಿಗಳೆಂದು ಕರೆಯಲಾಗುತ್ತದೆ. ನೀವು
ಪ್ರತಿಯೊಬ್ಬರೂ ಸ್ವದರ್ಶನ ಚಕ್ರಧಾರಿಗಳಾಗಿದ್ದೀರಿ. ಸ್ವ ಆತ್ಮಕ್ಕೆ ಸೃಷ್ಟಿಚಕ್ರದ ಜ್ಞಾನವು
ಸಿಕ್ಕಿದೆ. ಜ್ಞಾನವನ್ನು ಯಾರು ಕೊಟ್ಟರು? ಅವಶ್ಯವಾಗಿ ಅವರೂ ಸ್ವದರ್ಶನ ಚಕ್ರಧಾರಿಯಾಗಿರಬೇಕು.
ತಂದೆಯ ವಿನಃ ಮತ್ತ್ಯಾವ ಮನುಷ್ಯರೂ ಕಲಿಸಿ ಕೊಡಲು ಸಾಧ್ಯವಿಲ್ಲ. ತಂದೆ ಪರಮಾತ್ಮನು ಮಕ್ಕಳಿಗೆ
ಕಲಿಸಿ ಕೊಡುತ್ತಾರೆ. ಮಕ್ಕಳೇ, ನೀವು ದೇಹೀ-ಅಭಿಮಾನಿಯಾಗಿ ಎಂದು ಹೇಳುತ್ತಾರೆ. ಸತ್ಯಯುಗದಲ್ಲಿ ಈ
ಜ್ಞಾನ ಅಥವಾ ಶಿಕ್ಷಣವನ್ನು ಕೊಡುವ ಅವಶ್ಯಕತೆಯಿರುವುದಿಲ್ಲ. ಅಲ್ಲಿ ಭಕ್ತಿಯೂ ಇರುವುದಿಲ್ಲ,
ಜ್ಞಾನದಿಂದ ಆಸ್ತಿಯು ಸಿಗುತ್ತದೆ. ತಂದೆಯು ಶ್ರೀಮತವನ್ನು ಕೊಡುತ್ತಾರೆ, ನೀವು ಹೀಗೆ
ಶ್ರೇಷ್ಠರಾಗುತ್ತೀರಿ. ನಿಮಗೆ ತಿಳಿದಿದೆ - ನಾವು ನರಕವಾಸಿಗಳಾಗಿದ್ದೆವು, ಈಗ ತಂದೆಯು ಶ್ರೇಷ್ಠ
ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ. ಈ ಹಳೆಯ ಪ್ರಪಂಚವೇ ಸ್ಮಶಾನವಾಗಲಿದೆ. ಮೃತ್ಯುಲೋಕಕ್ಕೆ
ಸ್ಮಶಾನವೆಂದೇ ಹೇಳಲಾಗುತ್ತದೆಯಲ್ಲವೆ. ಹೊಸ ಪ್ರಪಂಚಕ್ಕೆ ಸ್ವರ್ಗವೆಂದು ಹೇಳಲಾಗುವುದು. ಡ್ರಾಮಾದ
ರಹಸ್ಯವನ್ನು ತಂದೆಯೇ ತಿಳಿಸುತ್ತಾರೆ. ಇಡೀ ಸೃಷ್ಟಿಗೆ ಬಿದಿರಿನ ಕಾಡು ಎಂದು ಹೇಳಲಾಗುವುದು.
ತಂದೆಯು ತಿಳಿಸಿದ್ದಾರೆ
- ಈ ಸಮಯದಲ್ಲಿ ಇಡೀ ಸೃಷ್ಟಿಯಲ್ಲಿ ರಾವಣನ ರಾಜ್ಯವಿದೆ. ದಸರಾ ಹಬ್ಬವನ್ನೂ ಆಚರಿಸುತ್ತಾರೆ.
ಎಷ್ಟೊಂದು ಖುಷಿಯಾಗುತ್ತಾರೆ. ತಂದೆಯು ತಿಳಿಸುತ್ತಾರೆ - ಎಲ್ಲಾ ಮಕ್ಕಳನ್ನು ದುಃಖದಿಂದ ಬಿಡಿಸಲು
ನಾನೂ ಸಹ ಹಳೆಯ ರಾವಣ ಪ್ರಪಂಚದಲ್ಲಿ ಬರಬೇಕಾಗುತ್ತದೆ. ಒಂದು ಕಥೆಯನ್ನೂ ಹೇಳುತ್ತಾರೆ. ಯಾರೋ
ಕೇಳಿದರು, ನಿಮಗೆ ಮೊದಲು ಸುಖವು ಬೇಕೋ ಅಥವಾ ದುಃಖವೋ? ಅದಕ್ಕೆ ಅವರು ಸುಖವು ಬೇಕೆಂದು ಹೇಳಿದರು.
ಸುಖದಲ್ಲಿ ಹೋದರೆ ಅಲ್ಲಿಗೆ ಯಾವುದೇ ಯಮದೂತರು ಬರಲು ಸಾಧ್ಯವಿಲ್ಲ. ಇದೂ ಒಂದು ಕಥೆಯಿದೆ. ತಂದೆಯು
ತಿಳಿಸುತ್ತಾರೆ - ಸುಖಧಾಮದಲ್ಲಿ ಕಾಲವೆಂದೂ ಬರುವುದಿಲ್ಲ, ಅಮರಪುರಿಯಾಗಿ ಬಿಡುತ್ತದೆ. ನೀವು
ಮೃತ್ಯುವಿನ ಮೇಲೆ ಜಯ ಗಳಿಸುತ್ತೀರಿ. ನೀವು ಎಷ್ಟೊಂದು ಸರ್ವಶಕ್ತಿವಂತರಾಗುತ್ತೀರಿ. ಅಲ್ಲಿ ಎಂದೂ
ಸಹ ಇಂತಹವರು ಸಾವನ್ನಪ್ಪಿದರು ಎಂದು ಹೇಳುವುದಿಲ್ಲ. ಸಾಯುವ ಹೆಸರೇ ಇರುವುದಿಲ್ಲ. ಒಂದು
ವಸ್ತ್ರವನ್ನು ಕಳಚಿ ಇನ್ನೊಂದನ್ನು ತೆಗೆದುಕೊಂಡರು. ಹೇಗೆ ಸರ್ಪವೂ ಸಹ ಪೊರೆಯನ್ನು
ಬದಲಾಯಿಸುತ್ತದೆಯಲ್ಲವೆ ಹಾಗೆಯೇ ನೀವೂ ಕೂಡ ಹಳೆಯ ಪೊರೆಯನ್ನು ಬಿಟ್ಟು ಹೊಸ ಪೊರೆ ಅರ್ಥಾತ್
ಶರೀರದಲ್ಲಿ ಬರುತ್ತೀರಿ. ಅಲ್ಲಿ ಪಂಚತತ್ವಗಳೂ ಸತೋಪ್ರಧಾನವಾಗುತ್ತದೆ. ಎಲ್ಲಾ ವಸ್ತುಗಳು
ಸತೋಪ್ರಧಾನವಾಗಿ ಬಿಡುತ್ತವೆ. ಪ್ರತಿಯೊಂದು ಪಧಾರ್ಥ, ಹಣ್ಣು ಮೊದಲಾದುವುಗಳು ಬಹಳ
ಸುಂದರವಾಗಿರುತ್ತವೆ. ಸತ್ಯಯುಗಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಅಲ್ಲಿ ಬಹಳ ಧನವಂತರಾಗಿದ್ದರು,
ಅವರಂತಹ ಸುಖಿ, ವಿಶ್ವದ ಮಾಲೀಕರು ಮತ್ತ್ಯಾರು ಇರಲು ಸಾಧ್ಯವಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ -
ನಾವೇ ಆ ರೀತಿಯಿದ್ದೆವು, ಅಂದಮೇಲೆ ಎಷ್ಟು ಖುಷಿಯಾಗಬೇಕು! ಒಬ್ಬೊಬ್ಬರನ್ನೂ ಸ್ವರ್ಗವಾಸಿಗಳನ್ನಾಗಿ
ಮಾಡಬೇಕಾಗಿದೆ. ಅನೇಕರ ಕಲ್ಯಾಣ ಮಾಡಬೇಕಾಗಿದೆ. ನೀವು ಬಹಳ ಸಾಹುಕಾರರಾಗುತ್ತೀರಿ, ಅವರೆಲ್ಲರೂ
ಬಡವರಾಗಿದ್ದಾರೆ. ಎಲ್ಲಿಯವರೆಗೆ ನಿಮ್ಮ ಕೈಯಲ್ಲಿ ಕೈ ಕೊಡುವುದಿಲ್ಲವೋ ಅಲ್ಲಿಯವರೆಗೆ
ಸ್ವರ್ಗವಾಸಿಗಳಾಗಲು ಸಾಧ್ಯವಿಲ್ಲ. ತಂದೆಯ ಕೈಯಂತೂ ಎಲ್ಲರಿಗೂ ಸಿಗುವುದಿಲ್ಲ. ನಿಮಗೆ ತಂದೆಯ ಕೈ
ಸಿಗುತ್ತದೆ ಮತ್ತೆ ನಿಮ್ಮ ಕೈ ಅನ್ಯರಿಗೆ ಸಿಗುತ್ತದೆ. ಹೀಗೆ ಒಬ್ಬರು ಇನ್ನೊಬ್ಬರನ್ನು
ಮೇಲೆತ್ತಬೇಕಾಗಿದೆ. ಹೇಗೆ ಈಜುವವರು ಒಬ್ಬೊಬ್ಬರನ್ನೂ ದಡ ಸೇರಿಸುತ್ತಾರೆ, ನೀವೂ ಸಹ ಮಾ||
ಅಂಬಿಗನಾಗಿದ್ದೀರಿ. ಅನೇಕ ಮಂದಿ ಅಂಬಿಗರು ತಯಾರಾಗುತ್ತಿದ್ದೀರಿ. ನಿಮ್ಮ ಕರ್ತವ್ಯವೇ ಇದಾಗಿದೆ.
ನಾವು ಪ್ರತಿಯೊಬ್ಬರ ದೋಣಿಯನ್ನು ಪಾರು ಮಾಡುವ ಮಾರ್ಗವನ್ನು ತಿಳಿಸಬೇಕು. ಅಂಬಿಗನ ಮಕ್ಕಳು
ಅಂಬಿಗರಾಗಬೇಕಾಗಿದೆ. ಹೂದೋಟದ ಮಾಲೀಕ, ಅಂಬಿಗ ಎಂಬ ಹೆಸರು ಎಷ್ಟು ಸರಳವಾಗಿದೆ! ಈಗ ಪ್ರತ್ಯಕ್ಷ
ರೂಪದಲ್ಲಿ ನೀವು ನೋಡುತ್ತೀರಿ, ನೀವು ಸ್ವರ್ಗದ ಸ್ಥಾಪನೆ ಮಾಡುತ್ತಿದ್ದೀರಿ. ನಿಮ್ಮ ನೆನಪಾರ್ಥವು
ಮುಂದೆ ನಿಂತಿದೆ, ಕೆಳಗೆ ರಾಜಯೋಗದ ತಪಸ್ಸು, ಮೇಲೆ ರಾಜಧಾನಿಯನ್ನು ತೋರಿಸಿದ್ದಾರೆ. ದಿಲ್ವಾಡಾ
ಎಂಬ ಹೆಸರು ಬಹಳ ಚೆನ್ನಾಗಿದೆ. ತಂದೆಯು ಎಲ್ಲರ ಹೃದಯವನ್ನು ಗೆಲ್ಲುತ್ತಾರೆ, ಎಲ್ಲರ ಸದ್ಗತಿ
ಮಾಡುತ್ತಾರೆ. ಹೃದಯವನ್ನು ಗೆಲ್ಲುವವರು ಯಾರೆಂಬುದನ್ನು ಯಾರಿಗಾದರೂ ತಿಳಿದಿದೆಯೇ! ಬ್ರಹ್ಮಾನಿಗೂ
ತಂದೆಯು ಶಿವ ತಂದೆಯಾಗಿದ್ದಾರೆ. ಎಲ್ಲರ ಹೃದಯವನ್ನು ಗೆಲ್ಲುವವರು ಬೇಹದ್ದಿನ ತಂದೆಯೇ ಆಗಿರುವರು.
ತತ್ವಗಳು ಮೊದಲಾದ ಎಲ್ಲದರ ಕಲ್ಯಾಣ ಮಾಡುತ್ತಾರೆ. ಇದೂ ಸಹ ಮಕ್ಕಳಿಗೇ ತಿಳಿಸಿದ್ದಾರೆ. ಅನ್ಯ
ಧರ್ಮದವರ ಶಾಸ್ತ್ರಗಳು ಇತ್ಯಾದಿಗಳು ನಿಗಧಿಯಾಗಿವೆ. ನಿಮಗೆ ಈ ಜ್ಞಾನವು ಸಿಗುವುದೇ ಸಂಗಮದಲ್ಲಿ
ನಂತರ ವಿನಾಶವಾದ ಮೇಲೆ ಯಾವುದೇ ಶಾಸ್ತ್ರಗಳಿರುವುದಿಲ್ಲ. ಶಾಸ್ತ್ರವು ಭಕ್ತಿಮಾರ್ಗದ ಸಂಕೇತವಾಗಿದೆ,
ಇದು ಜ್ಞಾನವಾಗಿದೆ. ಅಂತರವನ್ನು ನೋಡಿದಿರಲ್ಲವೆ. ಅಪಾರ ಭಕ್ತಿಯಿದೆ, ದೇವಿಯರು ಮೊದಲಾದವರ
ಪೂಜೆಯಲ್ಲಿ ಎಷ್ಟೊಂದು ಖರ್ಚು ಮಾಡುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ಇದರಿಂದ ಅಲ್ಪಕಾಲದ
ಸುಖವು ಸಿಗುತ್ತದೆ, ಎಂತೆಂತಹ ಭಾವನೆಯಲ್ಲಿರುವರೋ ಅದು ಈಡೇರುತ್ತದೆ. ದೇವಿಯರನ್ನು
ಶೃಂಗರಿಸುತ್ತಾ-ಶೃಂಗರಿಸುತ್ತಾ ಯಾರಿಗಾದರೂ ಸಾಕ್ಷಾತ್ಕಾರವಾದರೆ ಸಾಕು ಬಹಳ ಖುಷಿಯಾಗಿ ಬಿಡುತ್ತದೆ
ಆದರೆ ಲಾಭವೇನೂ ಇಲ್ಲ. ಮೀರಾಳ ಹೆಸರು ಗಾಯನವಿದೆ. ಭಕ್ತ ಮಾಲೆಯಿದೆಯಲ್ಲವೆ. ಸ್ತ್ರೀಯರಲ್ಲಿ ಮೀರಾ,
ಪುರುಷರಲ್ಲಿ ನಾರದನು ಭಕ್ತ ಶಿರೋಮಣಿಯೆಂದು ಮಾನ್ಯತೆಯಿದೆ. ನೀವು ಮಕ್ಕಳಲ್ಲಿಯೂ ನಂಬರ್ವಾರ್
ಇದ್ದಾರೆ. ಮಾಲೆಯ ಮಣಿಗಳಂತೂ ಬಹಳ ಇವೆ. ಮೇಲೆ ತಂದೆಯು ಹೂವಾಗಿದ್ದಾರೆ ನಂತರ ಜೋಡಿ ಮಣಿಗಳಿವೆ.
ಹೂವಿಗೆ ಎಲ್ಲರೂ ನಮಸ್ತೆ ಮಾಡುತ್ತಾರೆ. ಒಂದೊಂದು ಮಣಿಗೂ ನಮಸ್ಕರಿಸುತ್ತಾರೆ. ರುದ್ರ ಯಜ್ಞವನ್ನು
ರಚಿಸಿದಾಗ ಅದರಲ್ಲಿಯೂ ಹೆಚ್ಚಿನದಾಗಿ ಶಿವನ ಪೂಜೆ ಮಾಡುತ್ತಾರೆ, ಸಾಲಿಗ್ರಾಮಗಳಿಗೆ ಅಷ್ಟು
ಮಾಡುವುದಿಲ್ಲ. ಗಮನವೆಲ್ಲವೂ ಶಿವನ ಕಡೆ ಇರುತ್ತದೆ ಏಕೆಂದರೆ ಶಿವ ತಂದೆಯ ಮೂಲಕವೇ ಸಾಲಿಗ್ರಾಮಗಳು
ಇಷ್ಟು ತೀಕ್ಷ್ಣರಾಗುತ್ತಾರೆ. ಈಗ ನೀವು ಪಾವನರಾಗುತ್ತಿದ್ದೀರಿ. ಪತಿತ-ಪಾವನ ತಂದೆಯ ಮಕ್ಕಳು ನೀವೂ
ಸಹ ಮಾ|| ಪತಿತ-ಪಾವನರಾಗಿದ್ದೀರಿ. ಒಂದುವೇಳೆ ಮಾರ್ಗವನ್ನು ಯಾರಿಗೂ ತಿಳಿಸಲಿಲ್ಲವೆಂದರೆ
ಬಿಡಿಗಾಸಿನ ಪದವಿ ಸಿಗುವುದು ಆದರೂ ತಂದೆಯಿಂದ ಸಿಕ್ಕಿತಲ್ಲವೆ. ಇದೇನು ಕಡಿಮೆಯಲ್ಲ. ಇವರು ಎಲ್ಲರ
ತಂದೆಯಾಗಿದ್ದಾರೆ, ಕೃಷ್ಣನಿಗೆ ಹೀಗೆ ಹೇಳುವುದಿಲ್ಲ. ಕೃಷ್ಣನು ಯಾರ ತಂದೆಯಾದನು? ಕೃಷ್ಣನಿಗೆ
ತಂದೆಯೆಂದು ಹೇಳುವುದಿಲ್ಲ. ಮಕ್ಕಳಿಗೆ ತಂದೆಯೆಂದು ಹೇಳಲು ಸಾಧ್ಯವೆ! ಯಾವಾಗ ಅವರು ದಂಪತಿಗಳಾಗಿ
ಮಕ್ಕಳಿಗೇ ಜನ್ಮ ನೀಡುವರೋ ಆಗ ಅವರ ಮಕ್ಕಳು ಅವರಿಗೆ ತಂದೆಯೆಂದು ಹೇಳುವರು. ಮತ್ತ್ಯಾರೂ ಹೇಳಲು
ಸಾಧ್ಯವಿಲ್ಲ. ಉಳಿದಂತೆ ಯಾವುದೇ ವೃದ್ಧರಿಗೆ ಬಾಪೂಜಿ ಎಂದು ಹೇಳಿ ಬಿಡುತ್ತಾರೆ. ಇವರಂತೂ ಎಲ್ಲರ
ಬಾಪೂಜಿಯಾಗಿದ್ದಾರೆ. ವಿಶ್ವ ಭ್ರಾತೃತ್ವವೆಂದು ಗಾಯನವಿದೆ. ಈಶ್ವರನನ್ನು ಸರ್ವವ್ಯಾಪಿ ಎಂದು
ಹೇಳಿದರೆ ವಿಶ್ವ ಪಿತೃತ್ವವಾಗಿ ಬಿಡುತ್ತದೆ.
ನೀವು ಮಕ್ಕಳು
ದೊಡ್ಡ-ದೊಡ್ಡ ಸಭೆಗಳಲ್ಲಿ ತಿಳಿಸಬೇಕಾಗುವುದು. ಎಲ್ಲಿಯೇ ಭಾಷಣಕ್ಕಾಗಿ ಹೋಗುತ್ತಿರೆಂದರೆ ಯಾವ
ವಿಷಯವನ್ನು ಕುರಿತು ಭಾಷಣ ಮಾಡಬೇಕೆಂದು ವಿಚಾರ ಸಾಗರ ಮಂಥನ ಮಾಡಿ ಬರೆಯಬೇಕು. ತಂದೆಯಂತೂ ವಿಚಾರ
ಸಾಗರ ಮಂಥನ ಮಾಡಬೇಕಾಗಿಲ್ಲ. ಕಲ್ಪದ ಹಿಂದೆ ಏನನ್ನು ತಿಳಿಸಿದ್ದರೋ ಅದನ್ನು ತಿಳಿಸಿ ಹೋಗುತ್ತಾರೆ.
ನೀವಂತೂ ವಿಷಯದನುಸಾರವಾಗಿ ತಿಳಿಸಬೇಕಾಗಿದೆ. ಮೊದಲು ಬರೆದುಕೊಂಡು ನಂತರ ಓದಬೇಕು. ಭಾಷಣ
ಮಾಡಿದನಂತರ ಇಂತಿಂತಹ ವಿಚಾರಗಳನ್ನು ತಿಳಿಸಲಿಲ್ಲವೆಂದು ಸ್ಮೃತಿಗೆ ಬರುತ್ತದೆ. ಇದನ್ನು
ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ. ಹೀಗೆ ಯಾವುದಾದರೊಂದು ವಿಚಾರಗಳು
ಬರುತ್ತಿರುತ್ತವೆ. ಮೊಟ್ಟ ಮೊದಲಿಗೆ ಹೇಳಬೇಕು - ಸಹೋದರ-ಸಹೋದರಿಯರೇ, ಆತ್ಮಾಭಿಮಾನಿಯಾಗಿ
ಕುಳಿತುಕೊಳ್ಳಿ. ಇದನ್ನೆಂದೂ ಮರೆಯಬಾರದು ಆದರೆ ಈ ರೀತಿಯ ಸಮಾಚಾರಗಳನ್ನು ಯಾರೂ ಬರೆದಿಲ್ಲ,
ಬರೆಯುವುದಿಲ್ಲ. ಮೊಟ್ಟ ಮೊದಲಿಗೆ ಎಲ್ಲರಿಗೆ ಹೇಳಿರಿ - ಆತ್ಮಾಭಿಮಾನಿಯಾಗಿ ಕುಳಿತುಕೊಳ್ಳಿ.
ನೀವಾತ್ಮರು ಅವಿನಾಶಿಯಾಗಿದ್ದೀರಿ, ಈಗ ತಂದೆಯು ಬಂದು ಜ್ಞಾನವನ್ನು ಕೊಡುತ್ತಿದ್ದಾರೆ. ತಂದೆಯು
ತಿಳಿಸುತ್ತಾರೆ - ನನ್ನನ್ನು ನೆನಪು ಮಾಡುವುದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ ಅಂದಮೇಲೆ
ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ, ತನ್ನನ್ನು ಆತ್ಮನೆಂದು ತಿಳಿಯಿರಿ. ನಾವು ಅಲ್ಲಿನ
ನಿವಾಸಿಗಳಾಗಿದ್ದೇವೆ, ನಮ್ಮ ತಂದೆಯು ಕಲ್ಯಾಣಕಾರಿ ಶಿವನಾಗಿದ್ದಾರೆ, ನಾವಾತ್ಮರು ಅವರ
ಮಕ್ಕಳಾಗಿದ್ದೇವೆ. ಆತ್ಮಾಭಿಮಾನಿಯಾಗಿರಿ ಎಂದು ತಂದೆಯು ತಿಳಿಸುತ್ತಾರೆ. ನಾನಾತ್ಮನಾಗಿದ್ದೇನೆ,
ತಂದೆಯ ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಗಂಗಾ ಸ್ನಾನದಿಂದ ವಿಕರ್ಮಗಳು
ವಿನಾಶವಾಗುವುದಿಲ್ಲ. ತಂದೆಯ ಆದೇಶವಾಗಿದೆ, ನೀವು ನನ್ನನ್ನು ನೆನಪು ಮಾಡಿ. ಅವರಂತೂ ಗೀತೆಯನ್ನು
ಓದುತ್ತಾರೆ, ಯಧಾ-ಯಧಾಹಿ ಧರ್ಮಸ್ಯ ಎಂದು ಹೇಳುತ್ತಾರೆ ಆದರೆ ಅರ್ಥವೇನೂ ಗೊತ್ತಿಲ್ಲ ಆದ್ದರಿಂದ
ತಂದೆಯು ಸರ್ವೀಸಿನ ಸಲಹೆ ಕೊಡುತ್ತಾರೆ. ಶಿವ ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು
ತಿಳಿದು ಶಿವ ತಂದೆಯನ್ನು ನೆನಪು ಮಾಡಿ. ಕೃಷ್ಣನು ಹೇಳಿದನೆಂದು ಮನುಷ್ಯರು ತಿಳಿಯುತ್ತಾರೆ ಆದರೆ
ನನ್ನನ್ನು ನೆನಪು ಮಾಡಿ ಎಂದು ನಾವು ಮಕ್ಕಳಿಗೆ ಶಿವ ತಂದೆಯು ತಿಳಿಸುತ್ತಾರೆಂದು ನೀವು ಹೇಳುತ್ತೀರಿ.
ಎಷ್ಟು ನನ್ನನ್ನು ನೆನಪು ಮಾಡುತ್ತೀರಿ ಅಷ್ಟು ಸತೋಪ್ರಧಾನರಾಗಿ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ.
ಗುರಿ-ಧ್ಯೇಯವೂ ಸನ್ಮುಖದಲ್ಲಿದೆ. ಪುರುಷಾರ್ಥದಿಂದ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ಅವರಾದರೂ
ತಮ್ಮ ಧರ್ಮದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ ಆದರೆ ನಾವು ಅನ್ಯ ಧರ್ಮದಲ್ಲಿ
ಹೋಗುವುದಿಲ್ಲ. ಅವರಂತೂ ಕೊನೆಯಲ್ಲಿಯೇ ಬರುತ್ತಾರೆ. ಅವರಿಗೂ ಸಹ ನಮಗಿಂತ ಮೊದಲು ಸ್ವರ್ಗವಿತ್ತು,
ಭಾರತವು ಎಲ್ಲದಕ್ಕಿಂತ ಪ್ರಾಚೀನ ದೇಶವಾಗಿದೆ ಎಂಬುದು ತಿಳಿದಿದೆ ಆದರೆ ಯಾವಾಗ ಇತ್ತೆಂಬುದನ್ನು
ಯಾರೂ ತಿಳಿದುಕೊಂಡಿಲ್ಲ. ಅವರಿಗೆ ಭಗವಾನ್-ಭಗವತಿಯೆಂದು ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ
- ಭಗವಂತನು ನಾನೊಬ್ಬನೇ ಆಗಿದ್ದೇನೆ, ಯಾರಿಗೂ ಭಗವಾನ್-ಭಗವತಿಯೆಂದು ಹೇಳಲು ಸಾಧ್ಯವಿಲ್ಲ. ನೀವು
ಬ್ರಾಹ್ಮಣರಾಗಿದ್ದೀರಿ, ತಂದೆಗೆ ಬ್ರಾಹ್ಮಣನೆಂದು ಹೇಳುವುದಿಲ್ಲ. ಅವರು ಸರ್ವ ಶ್ರೇಷ್ಠ
ಭಗವಂತನಾಗಿದ್ದಾರೆ, ಅವರ ಶರೀರದ ಹೆಸರಿಲ್ಲ. ನಿಮ್ಮೆಲ್ಲಾ ಶರೀರಗಳಿಗೂ ಹೆಸರುಗಳಿರುತ್ತವೆ ಆದರೆ
ಆತ್ಮವು ಆತ್ಮವೇ ಆಗಿದೆ. ತಂದೆಯು ಪರಮ ಆತ್ಮನಾಗಿದ್ದಾರೆ, ಅವರ ಹೆಸರು ಶಿವನೆಂದಾಗಿದೆ. ಅವರು
ನಿರಾಕಾರನಾಗಿದ್ದಾರೆ. ಸೂಕ್ಷ್ಮ ಶರೀರವಾಗಲಿ, ಸ್ಥೂಲ ಶರೀರವಾಗಲಿ ಇಲ್ಲ. ಹಾಗೆಂದರೆ ಅವರಿಗೆ
ಆಕಾರವೇ ಇಲ್ಲವೆಂದಲ್ಲ. ಯಾರಿಗೆ ಹೆಸರಿದೆಯೋ ಅವರಿಗೆ ಆಕಾರವು ಅವಶ್ಯವಾಗಿ ಇದೆ. ನಾಮ-ರೂಪವಿಲ್ಲದ
ಯಾವುದೇ ವಸ್ತುವಿಲ್ಲ. ಪರಮಾತ್ಮ ತಂದೆಯನ್ನು ನಾಮ-ರೂಪದಿಂದ ಭಿನ್ನವೆಂದು ಹೇಳುವುದು ಎಷ್ಟು ದೊಡ್ಡ
ಅಜ್ಞಾನವಾಗಿದೆ. ತಂದೆಯೂ ಸಹ ನಾಮ-ರೂಪದಿಂದ ಭಿನ್ನ, ಮಕ್ಕಳೂ ನಾಮ-ರೂಪದಿಂದ ಭಿನ್ನವಾಗಿದ್ದೇ ಆದರೆ
ಈ ಸೃಷ್ಟಿಯೇ ಇರುತ್ತಿರಲಿಲ್ಲ. ನೀವೀಗ ಚೆನ್ನಾಗಿ ತಿಳಿಸಬಹುದು. ಗುರುಗಳಂತೂ ಕೊನೆಯಲ್ಲಿಯೇ ಅರ್ಥ
ಮಾಡಿಕೊಳ್ಳುತ್ತಾರೆ. ಈಗ ಅವರ ರಾಜಧಾನಿಯು ನಡೆಯುತ್ತಿದೆ.
ನೀವೀಗ ಡಬಲ್
ಅಹಿಂಸಕರಾಗುತ್ತೀರಿ. ಅಹಿಂಸಾ ಪರಮೋ ದೇವಿ-ದೇವತಾ ಧರ್ಮವು ಡಬಲ್ ಅಹಿಂಸಕವೆಂದು ಗಾಯನವಿದೆ.
ಅನ್ಯರನ್ನು ಹೊಡೆಯುವುದು, ದುಃಖ ಕೊಡುವುದೂ ಸಹ ಹಿಂಸೆಯಾಯಿತು. ತಂದೆಯು ಪ್ರತಿನಿತ್ಯವೂ
ತಿಳಿಸುತ್ತಾರೆ - ಮಕ್ಕಳೇ, ಮನಸ್ಸಾ-ವಾಚಾ-ಕರ್ಮಣಾ ಯಾರಿಗೂ ದುಃಖವನ್ನು ಕೊಡಬೇಡಿ. ಮನಸ್ಸಿನಲ್ಲಂತೂ
ಸಂಕಲ್ಪವು ಅವಶ್ಯವಾಗಿ ಬರುವುದು. ಸತ್ಯಯುಗದಲ್ಲಿ ದುಃಖ ಕೊಡುವ ಸಂಕಲ್ಪವೂ ಬರುವುದಿಲ್ಲ. ಇಲ್ಲಂತೂ
ಮನಸ್ಸಾ-ವಾಚಾ-ಕರ್ಮಣದಲ್ಲಿ ಬಂದು ಬಿಡುತ್ತದೆ. ಈ ಶಬ್ಧವನ್ನು ನೀವು ಅಲ್ಲಿ ಕೇಳುವುದೂ ಇಲ್ಲ.
ಅಲ್ಲಿ ಯಾವುದೇ ಸತ್ಸಂಗಗಳೂ ಇರುವುದಿಲ್ಲ. ಸತ್ಯ ತಂದೆಯ ಮೂಲಕ ಸತ್ಯವಂತರಾಗುವುದಕ್ಕಾಗಿಯೇ
ಸತ್ಸಂಗವಿರುತ್ತದೆ. ಸತ್ಯವು ಒಬ್ಬರೇ ತಂದೆಯಾಗಿದ್ದಾರೆ, ತಂದೆಯು ಕುಳಿತು ನರನಿಂದ ನಾರಾಯಣರಾಗುವ
ಕಥೆಯನ್ನು ತಿಳಿಸುತ್ತಾರೆ. ಇದರಿಂದ ನೀವು ನಾರಾಯಣರಾಗುತ್ತೀರಿ ಮತ್ತೆ ಭಕ್ತಿಮಾರ್ಗದಲ್ಲಿ ಸತ್ಯ
ನಾರಾಯಣನ ಕಥೆಯನ್ನು ಕೇಳುತ್ತಾರೆ. ನಿಮ್ಮ ನೆನಪಾರ್ಥ ದಿಲ್ವಾಡಾ ಮಂದಿರವನ್ನು ನೋಡಿ, ಎಷ್ಟು
ಸುಂದರವಾಗಿದೆ! ಅವಶ್ಯವಾಗಿ ಸಂಗಮಯುಗದಲ್ಲಿಯೇ ಹೃದಯವನ್ನು ಗೆದ್ದಿರಬೇಕಲ್ಲವೆ. ಆದಿ ದೇವ, ಆದಿ
ದೇವಿ ಮತ್ತು ಮಕ್ಕಳು ಕುಳಿತಿದ್ದೀರಿ. ಇದು ನಿಮ್ಮ ರಿಯಲ್ ನೆನಪಾರ್ಥವಾಗಿದೆ. ನಿಮ್ಮ ವಿನಃ ಅವರ
ಚರಿತ್ರೆ-ಭೂಗೋಳವನ್ನು ಯಾರೂ ತಿಳಿದುಕೊಂಡಿಲ್ಲ. ನಿಮ್ಮದೇ ನೆನಪಾರ್ಥವಾಗಿದೆ. ಅದು ಅದ್ಭುತವಾಗಿದೆ.
ಲಕ್ಷ್ಮೀ-ನಾರಾಯಣರ ಮಂದಿರದಲ್ಲಿ ಹೋದಾಗ ನಾವೇ ಹೀಗಾಗುತ್ತಿದ್ದೇವೆ ಎಂದು ನೀವು ಹೇಳುತ್ತೀರಿ.
ಕ್ರಿಸ್ತನು ಇಲ್ಲಿದ್ದಾರೆ, ಕ್ರಿಸ್ತನು ಭಿಕಾರಿಯ ರೂಪದಲ್ಲಿದ್ದಾರೆಂದು ಅನೇಕರು ಹೇಳುತ್ತಾರೆ.
ತಮೋಪ್ರಧಾನರಾದರೆಂದರೆ ಭಿಕಾರಿಯಾದರಲ್ಲವೆ. ಪುನರ್ಜನ್ಮವನ್ನು ಅವಶ್ಯವಾಗಿ
ತೆಗೆದುಕೊಳ್ಳುತ್ತಾರಲ್ಲವೆ. ರಾಜಕುಮಾರ ಶ್ರೀಕೃಷ್ಣನೂ ಸಹ ಈಗ ಭಿಕಾರಿಯಾಗಿದ್ದಾನೆ, ಶ್ಯಾಮ ಮತ್ತು
ಸುಂದರ. ಭಾರತವು ಹೇಗಿತ್ತು, ಈಗ ಏನಾಗಿದೆ ಎಂಬುದನ್ನು ನೀವೂ ತಿಳಿದುಕೊಂಡಿದ್ದೀರಿ. ತಂದೆಯು ಬಡವರ
ಬಂಧುವಾಗಿದ್ದಾರೆ. ಮನುಷ್ಯರು ಈಶ್ವರಾರ್ಥವಾಗಿ ದಾನ-ಪುಣ್ಯಗಳನ್ನು ಬಡವರಿಗೇ ಮಾಡುತ್ತಾರೆ.
ಅನೇಕರಿಗೆ ಆಹಾರ-ಧಾನ್ಯಗಳು ಸಿಗುವುದಿಲ್ಲ. ಮುಂದೆ ಹೋದಂತೆ ನೀವು ನೋಡುವಿರಿ, ದೊಡ್ಡ-ದೊಡ್ಡ
ಸಾಹುಕಾರರಿಗೂ ಸಹ ಆಹಾರ-ಧಾನ್ಯಗಳು ಸಿಗುವುದಿಲ್ಲ. ಹಳ್ಳಿಗಳಲ್ಲಿಯೂ ಸಹ ಸಾಹುಕಾರರಿರುತ್ತಾರಲ್ಲವೆ
ಅಂತಹವರನ್ನು ಕಳ್ಳರು ಲೂಟಿ ಮಾಡಿಕೊಂಡು ಹೋಗುತ್ತಾರೆ. ಪದವಿಯಲ್ಲಿ ಅಂತರವಂತೂ ಇರುತ್ತದೆಯಲ್ಲವೆ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಂಬರ್ವನ್ನಲ್ಲಿ ಬರುವಂತಹ ಪುರುಷಾರ್ಥ ಮಾಡಿ. ಎಚ್ಚರಿಕೆ
ನೀಡುವುದು ಶಿಕ್ಷಕರ ಕೆಲಸವಾಗಿದೆ, ಪಾಸ್-ವಿತ್-ಆನರ್ ಆಗಬೇಕಾಗಿದೆ. ಇದು ಬೇಹದ್ದಿನ
ಪಾಠಶಾಲೆಯಾಗಿದೆ. ರಾಜಧಾನಿಯನ್ನು ಸ್ಥಾಪನೆ ಮಾಡುವುದಕ್ಕಾಗಿ ಈ ರಾಜಯೋಗವಿದೆ. ಈ ಹಳೆಯ ಪ್ರಪಂಚದ
ವಿನಾಶವಾಗಬೇಕು ಇಲ್ಲವಾದರೆ ರಾಜ್ಯಭಾರ ಎಲ್ಲಿ ಮಾಡುತ್ತೀರಿ? ಇದಂತೂ ಪತಿತ ಧರಣಿಯಾಗಿದೆ.
ಗಂಗೆಯು
ಪತಿತ-ಪಾವನಿಯೆಂದು ಮನುಷ್ಯರು ಹೇಳುತ್ತಾರೆ - ತಂದೆಯು ತಿಳಿಸುತ್ತಾರೆ, ಈ ಸಮಯದಲ್ಲಿ
ಪಂಚತತ್ವಗಳೆಲ್ಲವೂ ತಮೋಪ್ರಧಾನ, ಪತಿತವಾಗಿದೆ. ಪೂರ್ಣ ಕೊಳಕೆಲ್ಲವೂ ಹೋಗಿ ನದಿಯನ್ನು ಸೇರುತ್ತವೆ.
ಮೀನು ಇತ್ಯಾದಿಗಳು ನೀರಿನಲ್ಲಿರುತ್ತವೆ. ನೀರಿನದೂ ಸಹ ಒಂದು ಪ್ರಪಂಚವಾಗಿದೆ. ನೀರಿನಲ್ಲಿ
ಎಷ್ಟೊಂದು ಜೀವ ಜಂತುಗಳಿರುತ್ತವೆ, ದೊಡ್ಡ-ದೊಡ್ಡ ಸಾಗರದಿಂದಲೂ ಎಷ್ಟೊಂದು ಭೋಜನವು ಸಿಗುತ್ತದೆ
ಅಂದಮೇಲೆ ಅದೊಂದು ಊರಾಯಿತಲ್ಲವೆ. ಊರಿಗೆ ಪತಿತ-ಪಾವನಿಯೆಂದು ಹೇಗೆ ಹೇಳುವುದು! ಆದ್ದರಿಂದ ತಂದೆಯು
ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ, ನಿಮ್ಮ
ಆತ್ಮ ಮತ್ತು ಶರೀರವೆರಡೂ ಪತಿತವಾಗಿದೆ. ಈಗ ನನ್ನನ್ನು ನೆನಪು ಮಾಡಿದರೆ ಪಾವನರಾಗುತ್ತೀರಿ. ನೀವು
ವಿಶ್ವದ ಮಾಲೀಕರು ಸುಂದರರಾಗಿ ಬಿಡುತ್ತೀರಿ. ಅಲ್ಲಿ ಮತ್ತ್ಯಾವುದೇ ಖಂಡವಿರುವುದಿಲ್ಲ. ಭಾರತದ್ದೇ
ಆಲ್ರೌಂಡ್ ಪಾತ್ರವಿದೆ. ನೀವೆಲ್ಲರೂ ಆಲ್ರೌಂಡ್ ಪಾತ್ರಧಾರಿಗಳಾಗಿದ್ದೀರಿ. ನಾಟಕದಲ್ಲಿ
ಪಾತ್ರಧಾರಿಗಳು ನಂಬರ್ವಾರ್ ಬಂದು ಹೋಗುತ್ತಾರೆ ಇದು ಹಾಗೆಯೇ. ತಂದೆಯು ತಿಳಿಸುತ್ತಾರೆ - ಭಗವಂತನು
ನಮಗೆ ಓದಿಸುತ್ತಾರೆಂದು ತಿಳಿಯಿರಿ. ನಾವು ಪತಿತ ಪಾವನ ತಂದೆಯ ವಿದ್ಯಾರ್ಥಿಗಳಾಗಿದ್ದೇವೆ
ಎಂಬುದರಲ್ಲಿ ಎಲ್ಲವೂ ಬಂದು ಬಿಟ್ಟಿತು. ಪತಿತ ಪಾವನನೂ ಆದರು, ಗುರು-ಶಿಕ್ಷಕನೂ ಆದರು, ತಂದೆಯೂ
ಆದರು. ಆದರೂ ತಂದೆಯು ನಿರಾಕಾರನಾಗಿದ್ದಾರೆ. ಇದು ನಿರಾಕಾರ ಪರಮಪಿತ ಪರಮಾತ್ಮನ ಈಶ್ವರೀಯ ವಿಶ್ವ
ವಿದ್ಯಾಲಯವಾಗಿದೆ. ಎಷ್ಟು ಒಳ್ಳೆಯ ಹೆಸರಾಗಿದೆ. ಈಶ್ವರನಿಗೆ ಎಷ್ಟೊಂದು ಮಹಿಮೆ ಮಾಡುತ್ತಾರೆ.
ಯಾವಾಗ ಅವರು ಬಿಂದುವಾಗಿದ್ದಾರೆಂದು ಕೇಳಿದಾಗ ಆಶ್ಚರ್ಯವಾಗುತ್ತದೆ. ಈಶ್ವರನಿಗೆ ಇಷ್ಟೊಂದು ಮಹಿಮೆ
ಮಾಡುತ್ತೇವೆ ಆದರೆ ಅವರು ಇಷ್ಟು ಚಿಕ್ಕ ಬಿಂದುವೆಂದು ಆಶ್ಚರ್ಯವಾಗುತ್ತದೆ. ಅವರಲ್ಲಿ ಎಷ್ಟೊಂದು
ಪಾತ್ರವು ಅಡಕವಾಗಿದೆ. ಈಗ ತಂದೆಯು ಹೇಳುತ್ತಾರೆ – ದೇಹವಿದ್ದರೂ, ಗೃಹಸ್ಥ ವ್ಯವಹಾರದಲ್ಲಿದ್ದರೂ
ಸಹ ನನ್ನೊಬ್ಬನನ್ನೇ ನೆನಪು ಮಾಡಿ. ಭಕ್ತಿಮಾರ್ಗದಲ್ಲಿ ಯಾರು ನೌಧಾಭಕ್ತಿ ಮಾಡುವರೋ ಅದಕ್ಕೆ
ಸತೋಪ್ರಧಾನ, ನೌಧಾಭಕ್ತಿಯೆಂದು ಹೇಳಲಾಗುತ್ತದೆ. ಎಷ್ಟು ಗಾಡ ಭಕ್ತಿ ಮಾಡುತ್ತಾರೆ! ಈಗ ಅದಕ್ಕಿಂತಲೂ
ನೆನಪಿನ ತೀವ್ರತೆಯು ಹೆಚ್ಚಾಗಬೇಕು. ತೀವ್ರ ನೆನಪು ಮಾಡುವವರದೇ ಹೆಸರು ಪ್ರಸಿದ್ಧವಾಗುವುದು. ವಿಜಯ
ಮಾಲೆಯ ಮಣಿಯಾಗುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ನರನಿಂದ
ನಾರಾಯಣನಾಗಲು ನಿತ್ಯವೂ ಸತ್ಯತಂದೆಯಿಂದ ಕೇಳಬೇಕಾಗಿದೆ, ಸತ್ಸಂಗ ಮಾಡಬೇಕಾಗಿದೆ.
ಮನಸ್ಸಾ-ವಾಚಾ-ಕರ್ಮಣಾ ಎಂದೂ ಯಾರಿಗೂ ದುಃಖವನ್ನು ಕೊಡಬಾರದು.
2. ವಿಜಯ ಮಾಲೆಯ
ಮಣಿಯಾಗಲು ಅಥವಾ ಪಾಸ್-ವಿತ್-ಆನರ್ ಆಗಲು ನೆನಪಿನ ತೀವ್ರತೆಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ.
ಮಾ|| ಪತಿತ-ಪಾವನರಾಗಿ ಎಲ್ಲರನ್ನು ಪಾವನ ಮಾಡುವ ಸೇವೆ ಮಾಡಬೇಕಾಗಿದೆ.
ವರದಾನ:
ಪರಮಾತ್ಮನ
ನೆನಪಿನ ಮಡಿಲಿನಲ್ಲಿ ಸಮಾವೇಶವಾಗುವಂತಹ ಸಂಗಮಯುಗಿ ಶ್ರೇಷ್ಠ ಭಾಗ್ಯವಾನ್ ಆತ್ಮ ಭವ.
ಸಂಗಮಯುಗ ಸತ್ಯಯುಗೀ
ಸ್ವರ್ಗಕ್ಕಿಂತಲೂ ಶ್ರೇಷ್ಠ ಏಕೆಂದರೆ ಈಗಿನ ಗಾಯನವಾಗಿದೆ ಅಪ್ರಾಪ್ತವಾದ ಯಾವುದೂ ವಸ್ತು
ಬ್ರಾಹ್ಮಣರ ಸಂಸಾರದಲ್ಲಿ ಇಲ್ಲ. ಒಬ್ಬ ತಂದೆ ಸಿಕ್ಕಿದರೆಂದರೆ ಎಲ್ಲವೂ ಸಿಕ್ಕಿದ ಹಾಗೆ. ಈಗ ತಾವು
ಮಕ್ಕಳು ಎಂದೂ ಅತೀಂದ್ರಿಯ ಸುಖದ ಉಯ್ಯಾಲೆ ತೂಗಾಡುವಿರಿ, ಕೆಲವೊಮ್ಮೆ ಖುಶಿ,ಕೆಲವೊಮ್ಮೆ ಶಾಂತಿ,
ಕೆಲವೊಮ್ಮೆ ಜ್ಞಾನ, ಕೆಲವೊಮ್ಮೆ ಆನಂದ ಮತ್ತು ಕೆಲವೊಮ್ಮೆ ಪರಮಾತ್ಮನ ಮಡಿಲಿನಲ್ಲಿ
ತೂಗಾಡುತ್ತಿರುವಿರಿ. ಪರಮಾತ್ಮನ ಮಡಿಲಾಗಿದೆ - ನೆನಪಿನ ಲವಲೀನ ಅವಸ್ಥೆ. ಈ ಮಡಿಲು ಸೆಕೆಂಡಿನಲ್ಲಿ
ಅನೇಕ ಜನ್ಮಗಳ ದುಃಖ-ನೋವನ್ನು ಮರೆಸಿ ಬಿಡುವುದು. ಅಂದಾಗ ಈ ಶ್ರೇಷ್ಠ ಸಂಸ್ಕಾರವನ್ನು ಸದಾ
ಸ್ಮತಿಯಲ್ಲಿಟ್ಟು ಭಾಗ್ಯವಾನ್ ಆತ್ಮ ಭವ.
ಸ್ಲೋಗನ್:
ಈ ರೀತಿಯ
ಸುಪುತ್ರರಾಗಿ ಯಾವುದರಿಂದ ಬಾಬಾ ತಮ್ಮ ಗೀತೆ ಹಾಡಬೇಕು ಮತ್ತು ತಾವು ಬಾಬಾನ ಗೀತೆ ಹಾಡಿ.
ಅವ್ಯಕ್ತ ಸೂಚನೆ:-
ಸ್ವಯಂನ ಮತ್ತು ಸರ್ವರ ಪ್ರತಿ ಮನಸ್ಸಾ ಮೂಲಕ ಯೋಗದ ಶಕ್ತಿಗಳ ಪ್ರಯೋಗ ಮಾಡಿ.
ಮೊದಲು ಸ್ವಯಂನ
ಮೇಲೆ ಯೋಗದ ಪ್ರಯೋಗ ಮಾಡಿ ನೋಡಿ. ಪ್ರತಿ ತಿಂಗಳು ಅಥವಾ 15 ದಿನದವರೆಗೆ ಯಾವುದಾದರೂ ವಿಶೇಷ ಗುಣ
ಅಥವಾ ಯಾವುದಾದರೂ ವಿಶೇಷ ಶಕ್ತಿಯ ಸ್ವಯಂ ಪ್ರತಿ ಪ್ರಯೋಗ ಮಾಡಿ ನೋಡಿ ಏಕೆಂದರೆ ಸಂಘಟನೆಯಲ್ಲಿ ಅಥವಾ
ಸಂಬಂಧ-ಸಂಪರ್ಕದಲ್ಲಿ ಪೇಪರ್ ಬಂದೇ ಬರುತ್ತದೆ, ಮೊದಲು ತಮ್ಮ ಮೇಲೆ ಪ್ರಯೋಗ ಮಾಡಿ ಚೆಕ್ ಮಾಡಿ,
ಯಾವುದೇ ಪೇಪರ್ ಬಂದರೆ ಯಾವ ಗುಣ ಅಥವಾ ಶಕ್ತಿಯ ಪ್ರಯೋಗ ಮಾಡುವುದರಿಂದ ಎಷ್ಟು ಸಮಯದಲ್ಲಿ ಸಫಲತೆ
ಸಿಕ್ಕಿತು? ಯಾವಾಗ ಸ್ವಯಂ ಪ್ರತಿ ಸಫಲವಾಗುವಿರಿ ಆಗ ಅನ್ಯರ ಪ್ರತಿಯೂ ಪ್ರಯೋಗ ಮಾಡುವ
ಉಮಂಗ-ಉತ್ಸಾಹ ಸ್ವತಃವೇ ಹೆಚ್ಚಾಗುತ್ತದೆ.