30.04.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನಿಮ್ಮದು ಇದು ಅದ್ಭುತವಾದ ವಿಶ್ವ ವಿದ್ಯಾಲಯವಾಗಿದೆ, ಇದರಲ್ಲಿ ಹಾಳಾಗಿರುವುದನ್ನು ಸರಿ ಪಡಿಸುವಂತಹ ಭೋಲಾನಾಥ ತಂದೆಯು ಶಿಕ್ಷಕನಾಗಿ ಓದಿಸುತ್ತಾರೆ”

ಪ್ರಶ್ನೆ:
ಈ ಅಂತಿಮ ಸಮಯದಲ್ಲಿ ನೀವು ಮಕ್ಕಳು ಎಲ್ಲರಿಗೆ ಯಾವ ಲಕ್ಷ್ಯವನ್ನು ಕೊಡುತ್ತೀರಿ?

ಉತ್ತರ:
ಹೇ ಆತ್ಮರೇ, ಈಗ ಪಾವನರಾಗಿರಿ. ಪಾವನರಾಗದೇ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಅರ್ಧಕಲ್ಪದ ಯಾವ ರೋಗವು ಅಂಟಿದೆಯೋ ಅದರಿಂದ ಮುಕ್ತರಾಗಲು ನೀವು ಎಲ್ಲರನ್ನೂ 7 ದಿನಗಳ ಭಟ್ಟಿಯಲ್ಲಿ ಕುಳ್ಳರಿಸುತ್ತೀರಿ. ಪತಿತರ ಸಂಗದಿಂದ ದೂರವಿರಬೇಕು, ಯಾವುದೇ ನೆನಪು ಬರಬಾರದು ಆಗ ಬುದ್ಧಿಯಲ್ಲಿ ಸ್ವಲ್ಪ ಜ್ಞಾನದ ಧಾರಣೆಯಾಗುವುದು.

ಗೀತೆ:
ನೀನು ರಾತ್ರಿಯನ್ನು ನಿದ್ರಿಸುತ್ತಾ ಕಳೆದೆ, ದಿನವನ್ನು ತಿನ್ನುತ್ತಾ ಕಳೆದೆ...............

ಓಂ ಶಾಂತಿ.
ಇದನ್ನು ಮಕ್ಕಳಿಗೆ ಯಾರು ಹೇಳಿದರು? ಏಕೆಂದರೆ ಶಾಲೆಯಲ್ಲಿ ಕುಳಿತಿದ್ದೀರಿ ಅಂದಮೇಲೆ ಅವಶ್ಯವಾಗಿ ಶಿಕ್ಷಕರು ಹೇಳಿದರು. ಈಗ ಪ್ರಶ್ನೆ ಬರುತ್ತದೆ - ಇದನ್ನು ಶಿಕ್ಷಕರು ಹೇಳಿದರೋ, ತಂದೆಯು ಹೇಳಿದರೋ ಅಥವಾ ಸದ್ಗುರುವು ಹೇಳಿದರೋ? ಈ ಮಹಾವಾಕ್ಯಗಳನ್ನು ಯಾರು ಹೇಳಿದರು? ಮಕ್ಕಳಿಗೆ ಬುದ್ಧಿಯಲ್ಲಿ ಇದು ಮೊಟ್ಟ ಮೊದಲಿಗೆ ಬರಬೇಕು - ನಮ್ಮ ತಂದೆಯು ಬೇಹದ್ದಿನ ತಂದೆಯೂ ಆಗಿದ್ದಾರೆ, ಅವರಿಗೇ ಪರಮಪಿತ ಪರಮಾತ್ಮನೆಂದು ಕರೆಯಲಾಗುತ್ತದೆ ಅಂದಾಗ ತಂದೆಯೂ ಹೇಳಿದರು, ಶಿಕ್ಷಕನೂ ಹೇಳಿದರು ಜೊತೆ ಜೊತೆಗೆ ಸದ್ಗುರುವೂ ಹೇಳಿದರು. ಇದು ನಿಮ್ಮ ಬುದ್ಧಿಯಲ್ಲಿದೆ - ನೀವು ವಿದ್ಯಾರ್ಥಿಗಳಾಗಿದ್ದೀರಿ. ಅನ್ಯ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ಓದಿಸುತ್ತಾರೆ, ಅವರಿಗೆ ತಂದೆ ಅಥವಾ ಗುರುವೆಂದು ಹೇಳುವುದಿಲ್ಲ. ಇದು ಪಾಠಶಾಲೆಯಾಗಿದೆ. ಇದಕ್ಕೆ ಯುನಿವರ್ಸಿಟಿ ಎಂದಾದರೂ ಹೇಳಿ ಅಥವಾ ಕಾಲೇಜು ಎಂದಾದರೂ ಹೇಳಿ, ಅಂತು ವಿದ್ಯೆಯಲ್ಲವೆ. ಮೊಟ್ಟ ಮೊದಲು ಇದನ್ನು ತಿಳಿದುಕೊಳ್ಳಬೇಕಾಗಿದೆ, ಪಾಠಶಾಲೆಯಲ್ಲಿ ನಮಗೆ ಯಾರು ಓದಿಸುತ್ತಾರೆ? ಮಕ್ಕಳಿಗೆ ತಿಳಿದಿದೆ - ಆ ನಿರಾಕಾರನು ಎಲ್ಲಾ ಆತ್ಮರ ತಂದೆಯಾಗಿದ್ದಾರೆ, ಸರ್ವರ ಸದ್ಗತಿದಾತನಾಗಿದ್ದಾರೆ, ಅವರೇ ನಮಗೆ ಓದಿಸುತ್ತಿದ್ದಾರೆ. ಈ ಇಡೀ ರಚನೆಯು ಆ ಒಬ್ಬ ರಚಯಿತನ ಆಸ್ತಿಯಾಗಿದೆ ಅಂದಾಗ ತಾವೇ ಕುಳಿತು ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ನೀವು ಮಕ್ಕಳು ತಂದೆಯ ಬಳಿ ಜನ್ಮ ಪಡೆದಿದ್ದೀರಿ. ನೀವು ಬುದ್ಧಿಯಿಂದ ತಿಳಿದುಕೊಂಡಿದ್ದೀರಿ - ಅವರು ನಾವೆಲ್ಲಾ ಆತ್ಮರ ತಂದೆಯಾಗಿದ್ದಾರೆ. ಅವರಿಗೆ ಜ್ಞಾನ ಸಾಗರ, ಜ್ಞಾನ ಪೂರ್ಣನೆಂದು ಹೇಳಲಾಗುತ್ತದೆ. ಜ್ಞಾನ ಸಾಗರ, ಪತಿತ-ಪಾವನನಾಗಿದ್ದಾರೆ. ಜ್ಞಾನದಿಂದಲೇ ಸದ್ಗತಿಯಾಗುತ್ತದೆ, ಮನುಷ್ಯರು ಪತಿತರಿಂದ ಪಾವನರಾಗುತ್ತಾರೆ. ಈಗ ನೀವು ಮಕ್ಕಳು ಇಲ್ಲಿ ಕುಳಿತಿದ್ದೀರಿ, ಮತ್ತ್ಯಾವುದೇ ಶಾಲೆಯಲ್ಲಿ ನಮಗೆ ಜ್ಞಾನ ಸಾಗರ, ನಿರಾಕಾರ ತಂದೆಯು ಓದಿಸುತ್ತಿದ್ದಾರೆಂದು ಯಾರಿಗೂ ಬುದ್ಧಿಯಲ್ಲಿರುವುದಿಲ್ಲ. ಇದನ್ನು ಇಲ್ಲಿಯೇ ನೀವು ತಿಳಿದುಕೊಂಡಿದ್ದೀರಿ. ನಿಮಗೇ ತಿಳಿಸಲಾಗುತ್ತದೆ. ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚದಲ್ಲಿ ನಮಗೆ ನಿರಾಕಾರ ಪರಮಾತ್ಮನು ಓದಿಸುತ್ತಾರೆಂದು ಯಾರೂ ತಿಳಿದುಕೊಳ್ಳುವುದಿಲ್ಲ. ಅವರಿಗೆ ಮನುಷ್ಯ ಶಿಕ್ಷಕರೇ ಓದಿಸುತ್ತಾರೆ ಮತ್ತು ನಾವಾತ್ಮರಾಗಿದ್ದೇವೆ ಎಂದು ತಿಳಿದುಕೊಳ್ಳುವಂತಹ ಜ್ಞಾನವು ಮತ್ತ್ಯಾವುದೂ ಇಲ್ಲ. ಆತ್ಮವೇ ಓದುತ್ತದೆ, ಆತ್ಮವೇ ಎಲ್ಲವನ್ನೂ ಮಾಡುತ್ತದೆ, ಆತ್ಮವೇ ಕರ್ಮೇಂದ್ರಿಯಗಳ ಮೂಲಕ ನೌಕರಿ ಮಾಡುತ್ತದೆ. ನಾನು ಇಂತಹವನಾಗಿದ್ದೇನೆಂದು ಅದಕ್ಕೆ ಸ್ಮೃತಿಯಿರುತ್ತದೆ, ಕೂಡಲೇ ತನ್ನ ನಾಮ-ರೂಪವು ನೆನಪಿಗೆ ಬಂದು ಬಿಡುತ್ತದೆ. ನಾನು ಇದನ್ನು ಮಾಡುತ್ತೇನೆ, ನಾನು ಹೀಗೆ ಮಾಡುತ್ತೇನೆ ಎಂದು ಶರೀರದ ಹೆಸರೇ ನೆನಪಿಗೆ ಬಂದು ಬಿಡುತ್ತದೆ ಆದರೆ ಅದು ತಪ್ಪಾಗಿದೆ. ನಾವಂತೂ ಮೊದಲು ಆತ್ಮರಲ್ಲವೆ ನಂತರ ಈ ಶರೀರವನ್ನು ತೆಗೆದುಕೊಂಡಿದ್ದೇವೆ. ಶರೀರದ ಹೆಸರು ಬದಲಾಗುತ್ತಿರುತ್ತದೆ, ಆತ್ಮದ ಹೆಸರು ಬದಲಾಗುವುದಿಲ್ಲ. ಆತ್ಮವು ಒಂದೇ ಆಗಿದೆ. ತಂದೆಯು ತಿಳಿಸುತ್ತಾರೆ - ನಾನಾತ್ಮನಿಗೆ ಒಂದೇ ಹೆಸರಾಗಿದೆ - ಶಿವ. ಇದನ್ನು ಇಡೀ ಪ್ರಪಂಚವು ತಿಳಿದುಕೊಳ್ಳುತ್ತದೆ ಬಾಕಿ ಇಷ್ಟೆಲ್ಲಾ ಹೆಸರುಗಳನ್ನು ಶರೀರಗಳಿಗೆ ಇಡಲಾಗುತ್ತದೆ. ಶಿವ ತಂದೆಗೆ ಕೇವಲ ಶಿವನೆಂದೇ ಹೇಳುತ್ತಾರೆ, ಅವರಿಗೆ ಯಾವುದೇ ಶರೀರವಿಲ್ಲ. ಮನುಷ್ಯರಿಗಾದರೆ ನಾನು ಇಂತಹವನಾಗಿದ್ದೇನೆ ಎಂದು ಶರೀರಕ್ಕೆ ಹೆಸರಿಡಲಾಗುತ್ತದೆ. ನಮಗೆ ಇಂತಹ ಶಿಕ್ಷಕರು ಓದಿಸುತ್ತಾರೆಂದು ಶರೀರದ ಹೆಸರು ತೆಗೆದುಕೊಳ್ಳುತ್ತಾರಲ್ಲವೆ. ವಾಸ್ತವದಲ್ಲಿ ಆತ್ಮವು ಶರೀರದ ಮೂಲಕ ಶಿಕ್ಷಕನ ಕೆಲಸ ಮಾಡುತ್ತದೆ. ಅವರ ಆತ್ಮಕ್ಕೆ ಓದಿಸುತ್ತದೆ, ಸಂಸ್ಕಾರವು ಆತ್ಮದಲ್ಲಿರುತ್ತದೆ. ಕರ್ಮೇಂದ್ರಿಯಗಳ ಮೂಲಕ ಸಂಸ್ಕಾರದ ಅನುಸಾರ ಓದಿಸುತ್ತದೆ, ಪಾತ್ರವನ್ನು ಅಭಿನಯಿಸುತ್ತದೆ ಆದರೆ ದೇಹದ ಮೇಲೆ ಯಾವ ಹೆಸರಿದೆಯೋ ಅದರ ಆಧಾರದಿಂದಲೇ ಉದ್ಯೋಗ-ವ್ಯವಹಾರಗಳು ನಡೆಯುತ್ತವೆ. ಇಲ್ಲಿ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಮಗೆ ನಿರಾಕಾರ ತಂದೆಯು ಓದಿಸುತ್ತಾರೆ. ನಿಮ್ಮ ಬುದ್ಧಿಯು ಎಲ್ಲಿ ಹೋಯಿತು! ನಾವಾತ್ಮರು ಆ ತಂದೆಯ ಮಕ್ಕಳಾಗಿದ್ದೇವೆ. ಆತ್ಮವು ತಿಳಿದುಕೊಳ್ಳುತ್ತದೆ - ನಿರಾಕಾರ ತಂದೆಯು ಬಂದು ಈ ಸಾಕಾರದ ಮೂಲಕ ನಮಗೆ ಓದಿಸುತ್ತಾರೆ, ಅವರ ಹೆಸರಾಗಿದೆ - ಶಿವ. ಶಿವ ಜಯಂತಿಯನ್ನೂ ಆಚರಿಸುತ್ತಾರೆ, ಶಿವನಂತೂ ಬೇಹದ್ದಿನ ತಂದೆಯಾಗಿದ್ದಾರೆ ಆದ್ದರಿಂದ ಅವರಿಗೇ ಪರಮಪಿತ ಪರಮಾತ್ಮನೆಂದು ಹೇಳಲಾಗುತ್ತದೆ. ಅವರು ಎಲ್ಲಾ ಆತ್ಮರ ತಂದೆಯಾಗಿದ್ದಾರೆ, ಈಗ ಅವರ ಜಯಂತಿಯನ್ನು ಹೇಗೆ ಆಚರಿಸುತ್ತಾರೆ! ಆತ್ಮವು ಶರೀರದಲ್ಲಿ ಪ್ರವೇಶ ಮಾಡುತ್ತದೆ ಅಥವಾ ಗರ್ಭದಲ್ಲಿ ಬರುತ್ತದೆ. ಮೇಲಿನಿಂದ ಬರುತ್ತದೆ, ಇದು ಯಾರಿಗೂ ತಿಳಿಯುವುದಿಲ್ಲ. ಕ್ರಿಸ್ತನನ್ನು ಧರ್ಮ ಸ್ಥಾಪಕನೆಂದು ಹೇಳುತ್ತಾರೆ, ಅವರ ಆತ್ಮವು ಮೊಟ್ಟ ಮೊದಲು ಮೇಲಿನಿಂದ ಬರಬೇಕು, ಸತೋಪ್ರಧಾನ ಆತ್ಮವು ಬರುತ್ತದೆ. ಅದು ಯಾವುದೇ ವಿಕರ್ಮ ಮಾಡಿರುವುದಿಲ್ಲ. ಮೊದಲು ಸತೋಪ್ರಧಾನ ನಂತರ ಸತೋ, ರಜೋ, ತಮೋದಲ್ಲಿ ಬರುತ್ತಾರೆ ಆಗ ವಿಕರ್ಮಗಳಾಗುತ್ತವೆ. ಮೊದಲು ಯಾವ ಆತ್ಮವು ಬರುವುದೋ ಆಗ ಸತೋಪ್ರಧಾನವಾಗಿರುವ ಕಾರಣ ಯಾವುದೇ ದುಃಖವನ್ನು ಅನುಭವಿಸುವುದಿಲ್ಲ. ಅರ್ಧ ಸಮಯವು ಕಳೆದ ನಂತರ ವಿಕರ್ಮ ಮಾಡಲು ತೊಡಗುತ್ತದೆ.

ಇಂದಿಗೆ 5000 ವರ್ಷಗಳ ಮೊದಲು ಅವಶ್ಯವಾಗಿ ಸೂರ್ಯವಂಶಿ ರಾಜ್ಯವಿತ್ತು, ಮತ್ತೆಲ್ಲಾ ಧರ್ಮದವರು ನಂತರದಲ್ಲಿ ಬಂದರು. ಭಾರತವಾಸಿಗಳೇ ವಿಶ್ವದ ಮಾಲೀಕರಾಗಿದ್ದರು. ಭಾರತಕ್ಕೆ ಅವಿನಾಶಿ ಖಂಡವೆಂದು ಹೇಳಲಾಗುತ್ತದೆ, ಮತ್ತ್ಯಾವುದೇ ಖಂಡವಿರಲಿಲ್ಲ. ಅಂದಾಗ ಶಿವ ತಂದೆಯು ಹಾಳಾಗಿರುವುದನ್ನು ಸರಿಪಡಿಸುವವರಾಗಿದ್ದಾರೆ. ಭೋಲಾನಾಥನೆಂದು ಶಿವನಿಗೇ ಹೇಳಲಾಗುತ್ತದೆ, ಶಂಕರನಿಗಲ್ಲ. ಭೋಲಾನಾಥ ಶಿವನು ಹಾಳಾಗಿರುವುದನ್ನು ಸುಧಾರಣೆ ಮಾಡುವವರಾಗಿದ್ದಾರೆ. ಶಿವ-ಶಂಕರ ಒಂದೇ ಅಲ್ಲ, ಬೇರೆ-ಬೇರೆಯಾಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರನಿಗೆ ಯಾವುದೇ ಮಹಿಮೆಯಿಲ್ಲ. ಮಹಿಮೆಯು ಕೇವಲ ಒಬ್ಬ ಶಿವನದಾಗಿದೆ. ಯಾರು ಹಾಳಾಗಿರುವುದನ್ನು ಸರಿ ಪಡಿಸುತ್ತಾರೆ. ತಿಳಿಸುತ್ತಾರೆ - ನಾನು ಸಾಧಾರಣ ವೃದ್ಧನ ತನುವಿನಲ್ಲಿ ಬರುತ್ತೇನೆ. ಇವರು 84 ಜನ್ಮಗಳನ್ನು ಪೂರ್ಣ ಮಾಡಿದರು, ಈಗ ಆಟವು ಮುಕ್ತಾಯವಾಯಿತು. ಈ ಹಳೆಯ ವಸ್ತ್ರ, ಹಳೆಯ ಸಂಬಂಧಗಳೂ ಸಮಾಪ್ತಿಯಾಗಲಿವೆ ಅಂದಮೇಲೆ ಈಗ ಯಾರನ್ನು ನೆನಪು ಮಾಡುವುದು? ಸಮಾಪ್ತಿಯಾಗಲಿರುವ ವಸ್ತುವನ್ನು ಎಂದೂ ನೆನಪು ಮಾಡುವುದಿಲ್ಲ. ಹೊಸ ಮನೆಯು ತಯಾರಾದರೆ ಹಳೆಯ ಮನೆಯಿಂದ ಮನಸ್ಸು ದೂರವಾಗುತ್ತದೆ ಹಾಗೆಯೇ ಇದು ಬೇಹದ್ದಿನ ಮಾತಾಗಿದೆ. ಸರ್ವರ ಸದ್ಗತಿಯಾಗುತ್ತದೆ ಅರ್ಥಾತ್ ರಾವಣ ರಾಜ್ಯದಿಂದ ಎಲ್ಲರಿಗೆ ಬಿಡುಗಡೆ ಸಿಗುತ್ತದೆ. ರಾವಣನು ಎಲ್ಲರನ್ನೂ ಹಾಳು ಮಾಡಿದ್ದಾನೆ. ಭಾರತವು ಸಂಪೂರ್ಣ ಕಂಗಾಲ, ಭ್ರಷ್ಟಾಚಾರಿಯಾಗಿದೆ. ಮನುಷ್ಯರು ಲಂಚ ಖೋರತನ, ಕಳ್ಳತನ, ಮೋಸಕ್ಕೆ ಭ್ರಷ್ಟಾಚಾರವೆಂದು ತಿಳಿಯುತ್ತಾರೆ, ಅದಕ್ಕೆ ತಂದೆಯು ತಿಳಿಸುತ್ತಾರೆ - ವಿಕಾರದಲ್ಲಿ ಹೋಗುವುದು ಮೊದಲ ಭ್ರಷ್ಟಾಚಾರವಾಗಿದೆ. ಶರೀರವು ವಿಕಾರದಿಂದಲೇ ಜನ್ಮ ಪಡೆಯುತ್ತದೆ ಅದಕ್ಕಾಗಿ ಇದನ್ನು ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಸತ್ಯಯುಗಕ್ಕೆ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ನಾವು ಸತ್ಯಯುಗದಲ್ಲಿ ಪ್ರವೃತ್ತಿ ಮಾರ್ಗದ ದೇವಿ-ದೇವತೆಗಳಾಗಿದ್ದೆವು, ಪವಿತ್ರರಾದರೆ ವಿಕಾರವಿಲ್ಲದೆ ಮಕ್ಕಳು ಹೇಗೆ ಜನಿಸುವರು ಎಂದು ಕೇಳುತ್ತಾರೆ, ಆಗ ತಿಳಿಸಿ - ನಾವು ನಮ್ಮ ರಾಜಧಾನಿಯನ್ನು ಬಾಹು ಬಲದಿಂದ ಅಲ್ಲ, ಯೋಗ ಬಲದಿಂದ ಸ್ಥಾಪನೆ ಮಾಡುತ್ತೇವೆ ಅಂದಮೇಲೆ ಯೋಗ ಬಲದಿಂದ ಮಕ್ಕಳಾಗಲು ಸಾಧ್ಯವಿಲ್ಲವೆ! ಅಲ್ಲಿರುವುದೇ ನಿರ್ವಿಕಾರಿ ಪ್ರಪಂಚ, ಪವಿತ್ರ ಗೃಹಸ್ಥಾಶ್ರಮ, ಯಥಾ ರಾಜ-ರಾಣಿ, ಸಂಪೂರ್ಣ ನಿರ್ವಿಕಾರಿ ತಥಾ ಪ್ರಜೆ. ಇಲ್ಲಿ ಸಂಪೂರ್ಣ ವಿಕಾರಿಗಳಾಗಿದ್ದಾರೆ. ಸತ್ಯಯುಗದಲ್ಲಿ ವಿಕಾರವಿರುವುದಿಲ್ಲ, ಅದಕ್ಕೆ ಈಶ್ವರೀಯ ರಾಜ್ಯವೆಂದು ಹೇಳಲಾಗುತ್ತದೆ, ಅದು ಈಶ್ವರನಿಂದ ಸ್ಥಾಪಿಸಲ್ಪಟ್ಟಿರುವುದಾಗಿದೆ. ಈಗಂತೂ ರಾವಣ ರಾಜ್ಯವಾಗಿದೆ. ಯಾರು ಸ್ವರ್ಗ ಸ್ಥಾಪನೆ ಮಾಡಿದರೋ ಆ ಶಿವ ತಂದೆಯ ಪೂಜೆಯು ನಡೆಯುತ್ತದೆ, ಯಾರು ನರಕವನ್ನಾಗಿ ಮಾಡಿದರೋ ಆ ರಾವಣನನ್ನು ಸುಡುತ್ತಾ ಬರುತ್ತಾರೆ. ದ್ವಾಪರವು ಯಾವಾಗ ಆರಂಭವಾಯಿತು ಎಂಬುದು ಯಾರಿಗೂ ತಿಳಿದಿಲ್ಲ. ಇದೂ ಸಹ ತಿಳುವಳಿಕೆಯ ಮಾತಾಗಿದೆ, ಇದು ತಮೋಪ್ರಧಾನ, ಆಸುರೀ ಪ್ರಪಂಚವಾಗಿದೆ, ಅದು ಈಶ್ವರೀಯ ಪ್ರಪಂಚವಾಗಿದೆ. ಅದಕ್ಕೆ ಸ್ವರ್ಗ, ದೈವೀ ಪಾವನ ಪ್ರಪಂಚವೆಂದು ಹೇಳಲಾಗುತ್ತದೆ. ಇದು ನರಕ ಪತಿತ ಪ್ರಪಂಚವಾಗಿದೆ. ಯಾರು ಪ್ರತಿನಿತ್ಯವೂ ಓದುವರೋ ಅವರೇ ಈ ಮಾತುಗಳನ್ನು ತಿಳಿದುಕೊಳ್ಳುತ್ತಾರೆ. ನಾವಿರುವ ಜಾಗದಲ್ಲಿ ಶಾಲೆಯಿಲ್ಲವಲ್ಲ ಎಂದು ಹೇಳುತ್ತಾರೆ. ಅರೆ! ಪ್ರಧಾನಕೇಂದ್ರವಂತೂ ಇದೆಯಲ್ಲವೆ, ನೀವು ಬಂದು ಇಲ್ಲಿ ಸಲಹೆ ತೆಗೆದುಕೊಂಡು ಹೋಗುವುದು ದೊಡ್ಡ ಮಾತೇನಲ್ಲ. ಸೃಷ್ಟಿಚಕ್ರವನ್ನು ಸೆಕೆಂಡಿನಲ್ಲಿ ತಿಳಿಸಲಾಗುತ್ತದೆ. ಸತ್ಯ, ತ್ರೇತಾ ಯುಗವು ಕಳೆಯಿತು ನಂತರ ದ್ವಾಪರ, ಕಲಿಯುಗವೂ ಕಳೆಯಿತು, ಈಗ ಸಂಗಮಯುಗವಾಗಿದೆ. ಹೊಸ ಪ್ರಪಂಚಕ್ಕೆ ಹೋಗುವುದಕ್ಕಾಗಿ ಪ್ರತಿಯೊಬ್ಬರಿಗೂ ಓದಲು ಹಕ್ಕಿದೆ. ಬಾಬಾ, ನಾವು ನೌಕರಿ ಮಾಡುತ್ತೇವೆ ಎಂದು ಹೇಳುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ - ಒಳ್ಳೆಯದು, ಒಂದು ವಾರದವರೆಗೆ ಜ್ಞಾನವನ್ನು ತಿಳಿದುಕೊಂಡು ಮತ್ತೆ ಎಲ್ಲಿಯಾದರೂ ಹೋಗಿ, ಅಲ್ಲಿಯೇ ಮುರುಳಿ ಸಿಗುತ್ತಿರುವುದು. ಮೊದಲು 7 ದಿನಗಳವರೆಗೆ ಭಟ್ಟಿಯಲ್ಲಿ ಅವಶ್ಯವಾಗಿ ಇರಬೇಕಾಗಿದೆ. ಭಲೆ 7 ದಿನಗಳ ಕಾಲ ಬರುತ್ತಾರೆ ಆದರೆ ಎಲ್ಲರ ಬುದ್ಧಿಯು ಒಂದೇರೀತಿ ಇರುವುದಿಲ್ಲ. 7 ದಿನಗಳ ಭಟ್ಟಿಯೆಂದರೆ ಯಾರದೇ ನೆನಪು ಬರಬಾರದು, ಯಾರೊಂದಿಗೂ ಪತ್ರ ವ್ಯವಹಾರವೂ ಇರಬಾರದು. ಎಲ್ಲರೂ ಒಂದೇ ರೀತಿ ತಿಳಿದುಕೊಳ್ಳುವುದಿಲ್ಲ. ಇಲ್ಲಿ ಪತಿತರಿಂದ ಪಾವನರಾಗಬೇಕಾಗಿದೆ, ಇದೂ ಸಹ ರೋಗವಾಗಿದೆ. ಮನುಷ್ಯರು ಅರ್ಧ ಕಲ್ಪದ ಮಹಾರೋಗಿಯಾಗಿದ್ದಾರೆ. ಅವರಿಗೆ ಪ್ರತ್ಯೇಕವಾಗಿ ಕೂರಿಸಬೇಕಾಗುತ್ತದೆ. ಯಾರದೇ ಸಂಗ ಇರಬಾರದು. ಅವರನ್ನು ಹೊರಗಡೆ ಕಳುಹಿಸಿದರೆ ಅಂತಿಂತಹ ಪದಾರ್ಥಗಳನ್ನು ತಿನ್ನುತ್ತಾರೆ, ಪತಿತರ ಕೈಯಿಂದ ತಿನ್ನುತ್ತಾರೆ. ಸತ್ಯಯುಗದಲ್ಲಿ ದೇವತೆಗಳು ಪಾವನರಿರುತ್ತಾರಲ್ಲವೆ. ಅದಕ್ಕಾಗಿ ನೋಡಿ, ಅವರ ಮಂದಿರಗಳನ್ನು ವಿಶೇಷವಾಗಿ ಕಟ್ಟಿಸುತ್ತಾರೆ. ದೇವತೆಗಳನ್ನು ಪತಿತರು ಸ್ಪರ್ಷಿಸುವುದಕ್ಕೂ ಸಾಧ್ಯವಿಲ್ಲ. ಈ ಸಮಯದಲ್ಲಂತೂ ಮನುಷ್ಯರು ಸಂಪೂರ್ಣ ಪತಿತ, ಭ್ರಷ್ಟಾಚಾರಿಗಳಾಗಿದ್ದಾರೆ. ಶರೀರವು ವಿಕಾರದಿಂದಲೇ ಜನ್ಮ ಪಡೆಯುತ್ತದೆ ಆದ್ದರಿಂದ ಭ್ರಷ್ಟಾಚಾರಿಗಳೆಂದು ಹೇಳಲಾಗುತ್ತದೆ. ಸನ್ಯಾಸಿಗಳ ಶರೀರವೂ ಸಹ ವಿಕಾರದಿಂದಲೇ ಆಗಿದೆ. ತಂದೆಯು ತಿಳಿಸುತ್ತಾರೆ – ಮೊಟ್ಟ ಮೊದಲು ಆತ್ಮವು ಪವಿತ್ರವಾಗಬೇಕಾಗಿದೆ ನಂತರ ಶರೀರವು ಪವಿತ್ರವಾದುದೇ ಬೇಕು ಆದುದರಿಂದ ಹಳೆಯ ಅಪವಿತ್ರ ಶರೀರಗಳೆಲ್ಲವೂ ವಿನಾಶವಾಗಲಿದೆ. ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ. ಇದು ಅಂತಿಮ ಸಮಯವಾಗಿದೆ, ಎಲ್ಲರೂ ಪವಿತ್ರರಾಗಿ ಹಿಂತಿರುಗಿ ಹೋಗಬೇಕಾಗಿದೆ. ಭಾರತದಲ್ಲಿಯೇ ಹೋಲಿಯನ್ನಾಚರಿಸುತ್ತಾರೆ. ಇಲ್ಲಿ ಪಂಚ ತತ್ವಗಳ ಶರೀರವು ತಮೋಪ್ರಧಾನವಾಗಿದೆ, ಸತ್ಯಯುಗದಲ್ಲಿ ಶರೀರವೂ ಸಹ ಸತೋಪ್ರಧಾನವಾಗಿರುತ್ತದೆ, ಶ್ರೀಕೃಷ್ಣನ ಚಿತ್ರವಿದೆಯಲ್ಲವೆ. ನರಕವನ್ನು ಒದೆಯಲಾಗುತ್ತದೆ ಏಕೆಂದರೆ ಸತ್ಯಯುಗದಲ್ಲಿ ಹೋಗಬೇಕಾಗಿದೆ. ಶವವನ್ನೂ ಸಹ ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಾಗ ಮೊದಲು ಮುಖವನ್ನು ನಗರದ ಕಡೆ ಕಾಲನ್ನು ಸ್ಮಶಾನದ ಕಡೆ ತಿರುಗಿಸುತ್ತಾರೆ. ನಂತರ ಸ್ಮಶಾನದಲ್ಲಿ ಪ್ರವೇಶಿಸುವಾಗ ಮುಖವನ್ನು ಸ್ಮಶಾನದ ಕಡೆ ಮಾಡುತ್ತಾರೆ. ನೀವೀಗ ಸ್ವರ್ಗದಲ್ಲಿ ಹೋಗುತ್ತೀರಿ, ಆದ್ದರಿಂದ ನಿಮ್ಮ ಮುಖವು ಸ್ವರ್ಗದ ಕಡೆಯಿದೆ. ಕಾಲು ದುಃಖಧಾಮದ ಕಡೆಯಿದೆ. ಅದಂತೂ ಶವದ ಮಾತಾಗಿದೆ. ಇಲ್ಲಿ ನೀವು ಪುರುಷಾರ್ಥ ಮಾಡಬೇಕಾಗಿದೆ. ಮಧುರ ಮನೆಯನ್ನು ನೆನಪು ಮಾಡುತ್ತಾ, ಮಾಡುತ್ತಾ ನೀವಾತ್ಮರು ಮಧುರ ಮನೆಗೆ ಹೊರಟು ಹೋಗುತ್ತೀರಿ. ಇದು ಬುದ್ಧಿಯ ಅಭ್ಯಾಸವಾಗಿದೆ. ತಂದೆಯು ಕುಳಿತು ಇದೆಲ್ಲಾ ರಹಸ್ಯವನ್ನು ತಿಳಿಸುತ್ತಾರೆ. ನಿಮಗೆ ತಿಳಿದಿದೆ - ನಾವಾತ್ಮರು ಈಗ ಮನೆಗೆ ಹೋಗಬೇಕಾಗಿದೆ, ಇದು ಹಳೆಯ ವಸ್ತ್ರ, ಹಳೆಯ ಪ್ರಪಂಚವಾಗಿದೆ. ಈಗ ನಾಟಕವು ಮುಕ್ತಾಯವಾಯಿತು ಎಂದರೆ 84 ಜನ್ಮಗಳ ಪಾತ್ರವನ್ನು ಅಭಿನಯಿಸಿದೆವು. ತಂದೆಯು ಇದನ್ನೂ ತಿಳಿಸಿದ್ದಾರೆ - ಎಲ್ಲರೂ 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಯಾರು ಅನ್ಯ ಧರ್ಮಗಳಲ್ಲಿ ಕೊನೆಯಲ್ಲಿ ಬರುವರೊ ಅವರಿಗೆ ಅವಶ್ಯವಾಗಿ ಕಡಿಮೆ ಜನ್ಮಗಳಿರುತ್ತವೆ. ಇಸ್ಲಾಮಿಗಳಿಗಿಂತಲೂ ಬೌದ್ಧಿಯರ ಜನ್ಮಗಳು ಇನ್ನೂ ಕಡಿಮೆ. ಅವರಿಗಿಂತಲೂ ಕ್ರಿಶ್ಚಿಯನ್ನರದು ಕಡಿಮೆ ಜನ್ಮಗಳಾಗಿವೆ. ಗುರು ನಾನಕರು ಸಿಖ್ಖರಂತೂ ಈಗೀಗ ಬಂದಿದ್ದಾರೆ. ಗುರು ನಾನಕರು ಬಂದು 500 ವರ್ಷಗಳಾಯಿತು ಅಂದಮೇಲೆ ಅವರು 84 ಜನ್ಮಗಳನ್ನು ತೆಗೆದುಕೊಳ್ಳುವರೇ! ಲೆಕ್ಕವನ್ನು ಮಾಡಲಾಗುತ್ತದೆ, 5000 ವರ್ಷಗಳಲ್ಲಿ ಇಷ್ಟು ಜನ್ಮಗಳಾದರೆ 500 ವರ್ಷಗಳಲ್ಲಿ ಎಷ್ಟು ಜನ್ಮಗಳಿರಬಹುದು? 12-13 ಜನ್ಮಗಳು. ಕ್ರಿಸ್ತನಿಗೆ 2000 ವರ್ಷಗಳಾಯಿತು ಅಂದಮೇಲೆ ಅವರಿಗೆ ಎಷ್ಟು ಜನ್ಮಗಳಾಯಿತು? ಅರ್ಧಕ್ಕಿಂತಲೂ ಕಡಿಮೆ. ಲೆಕ್ಕವಿದೆಯಲ್ಲವೆ. ಇದರಲ್ಲಿ ಕೆಲಕೆಲವರು ಕೆಲವೊಂದು ರೀತಿಯಲ್ಲಿ ಜನ್ಮವನ್ನು ತೆಗೆದುಕೊಳ್ಳುತ್ತಾರೆ, ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಮಾತುಗಳನ್ನು ವಾದ ಮಾಡುವುದರಲ್ಲಿ ಸಮಯವನ್ನು ವ್ಯರ್ಥ ಮಾಡಬಾರದು. ನಿಮ್ಮ ಕರ್ತವ್ಯವಾಗಿದೆ - ತಂದೆಯನ್ನು ನೆನಪು ಮಾಡುವುದು. ವ್ಯರ್ಥ ಮಾತುಗಳಲ್ಲಿ ಬುದ್ಧಿಯು ಹೋಗಬಾರದು, ತಂದೆಯೊಂದಿಗೆ ಬುದ್ಧಿಯೋಗವನ್ನು ಇಡಬೇಕು, ಚಕ್ರವನ್ನು ಅರಿತುಕೊಳ್ಳಬೇಕಾಗಿದೆ ಆದರೆ ನೆನಪಿನಿಂದಲೇ ಪಾಪ ನಾಶವಾಗುತ್ತದೆ. ಇದರಲ್ಲಿಯೇ ಪರಿಶ್ರಮವಿದೆ ಆದ್ದರಿಂದ ಭಾರತದ ಪ್ರಾಚೀನ ಯೋಗವೆಂದು ಹೇಳುತ್ತಾರೆ, ಇದನ್ನು ತಂದೆಯೆ ಕಲಿಸುತ್ತಾರೆ. ಸತ್ಯ-ತ್ರೇತಾ ಯುಗದಲ್ಲಿ ಯೋಗದ ಮಾತೇ ಇರುವುದಿಲ್ಲ. ಮತ್ತೆ ಭಕ್ತಿ ಮಾರ್ಗದಲ್ಲಿ ಹಠಯೋಗವು ಪ್ರಾರಂಭವಾಗುತ್ತದೆ. ಇದು ಸಹಜ ರಾಜಯೋಗವಾಗಿದೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡುವುದರಿಂದ ಪಾವನರಾಗುತ್ತೀರಿ. ಮೂಲ ಮಾತು ನೆನಪಿನದಾಗಿದೆ. ಯಾವುದೇ ಪಾಪ ಮಾಡಬಾರದು. ದೇವಿ-ದೇವತೆಗಳ ಮಂದಿರಗಳಿವೆ ಏಕೆಂದರೆ ಅವರು ಪಾವನರಾಗಿದ್ದಾರೆ. ಪೂಜಾರಿಗಳು ಪತಿತರಾಗಿದ್ದಾರೆ, ಪಾವನ ದೇವತೆಗಳಿಗೆ ಸ್ನಾನ ಇತ್ಯಾದಿಗಳನ್ನು ಮಾಡಿಸುತ್ತಾರೆ. ವಾಸ್ತವದಲ್ಲಿ ದೇವತೆಗಳಿಗೆ ಪತಿತರ ಕೈ ತಗುಲಬಾರದು, ಇವೆಲ್ಲವೂ ಭಕ್ತಿಮಾರ್ಗದ ರೀತಿ-ನೀತಿಯಾಗಿದೆ. ಈಗಂತೂ ನಾವು ಪಾವನರಾಗುತ್ತಿದ್ದೇವೆ, ಪಾವನರಾಗಿ ಬಿಟ್ಟರೆ ನಂತರ ದೇವತೆಗಳಾಗುತ್ತೀರಿ. ಅಲ್ಲಂತೂ ಪೂಜೆ ಇತ್ಯಾದಿಗಳ ಅವಶ್ಯಕತೆಯಿರುವುದಿಲ್ಲ. ಸರ್ವರ ಸದ್ಗತಿದಾತನು ಒಬ್ಬ ತಂದೆಯಾಗಿದ್ದಾರೆ, ಅವರಿಗೇ ಭೋಲಾನಾಥನೆಂದು ಹೇಳುತ್ತಾರೆ. ನಾನು ಪತಿತ ಪ್ರಪಂಚ, ಪತಿತ ಶರೀರದಲ್ಲಿ ಹಳೆಯ ರಾವಣ ರಾಜ್ಯದಲ್ಲಿ ಬರುತ್ತೇನೆ. ನಾನು ಯಾರದೇ ತನುವಿನಲ್ಲಿ ಪ್ರವೇಶ ಮಾಡಿ ಮುರುಳಿಯನ್ನು ನುಡಿಸಬಲ್ಲೆನು ಆದರೆ ಇದರ ಅರ್ಥ - ನಾನು ಸರ್ವವ್ಯಾಪಿ ಎಂದಲ್ಲ. ಪ್ರತಿಯೊಬ್ಬರಲ್ಲಿ ತಮ್ಮ-ತಮ್ಮ ಆತ್ಮವಿದೆ, ಫಾರ್ಮ್ನಲ್ಲಿಯೂ ನಿಮ್ಮ ತಂದೆಯು ಯಾರು? ಎಂಬುದನ್ನು ಬರೆಸಲಾಗುತ್ತದೆ ಆದರೆ ತಿಳಿದುಕೊಳ್ಳುವುದಿಲ್ಲ. ಆತ್ಮಗಳ ತಂದೆಯಂತೂ ಒಬ್ಬರೇ ಇರುವರು, ಆದರೆ ನಾವು ಸಹೋದರರಾಗಿದ್ದೇವೆ, ತಂದೆಯು ಒಬ್ಬರೇ ಇದ್ದಾರೆ. ಅವರಿಂದ ಜೀವನ್ಮುಕ್ತಿಯ ಆಸ್ತಿಯು ಸಿಗುತ್ತದೆ, ಅವರೇ ಮುಕ್ತಿದಾತ, ಮಾರ್ಗದರ್ಶಕನಾಗಿದ್ದಾರೆ. ಎಲ್ಲಾ ಆತ್ಮರನ್ನು ಮಧುರ ಮನೆಗೆ ಕರೆದುಕೊಂಡು ಹೋಗುತ್ತಾರೆ ಆದ್ದರಿಂದ ಹಳೆಯ ಪ್ರಪಂಚದ ವಿನಾಶವಾಗುತ್ತದೆ ಅಂದರೆ ಹೋಲಿಕಾ ಆಗುತ್ತದೆಯಲ್ಲವೆ, ಶರೀರಗಳೆಲ್ಲವೂ ಸಮಾಪ್ತಿಯಾಗುತ್ತದೆ. ಬಾಕಿ ಆತ್ಮಗಳೆಲ್ಲರೂ ಹಿಂತಿರುಗಿ ಹೋಗುವರು. ಸತ್ಯಯುಗದಲ್ಲಿ ಕೆಲವರೇ ಇರುತ್ತಾರೆ, ಅಂದಮೇಲೆ ತಿಳಿದುಕೊಳ್ಳಬೇಕು - ಸ್ವರ್ಗದ ಸ್ಥಾಪನೆಯನ್ನು ಯಾರು ಮಾಡಿಸುತ್ತಾರೆ, ಕಲಿಯುಗದ ವಿನಾಶವನ್ನು ಯಾರು ಮಾಡಿಸುತ್ತಾರೆ? ಇದನ್ನು ಸ್ಪಷ್ಟವಾಗಿ ಬರೆಯಲಾಗಿದೆ. ಪ್ರೀತಿ ಮಾಡಿದರೆ ಪ್ರೀತಿ ಸಿಗುವುದು ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಯಾರು ನನ್ನ ಅರ್ಥವಾಗಿ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಬಹಳ ಸೇವೆ ಮಾಡುವರೋ ಅವರು ನನಗೆ ಹೆಚ್ಚು ಪ್ರಿಯರೆನಿಸುತ್ತಾರೆ.

ಯಾರು ಪುರುಷಾರ್ಥ ಮಾಡುವರೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಆತ್ಮಗಳು ಪರಮಾತ್ಮ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಆತ್ಮಾಭಿಮಾನಿಯಾಗಬೇಕಾಗಿದೆ. ಕೆಲವರು ಬಹಳ ತಪ್ಪುಗಳನ್ನು ಮಾಡುತ್ತಾರೆ, ಹಳೆಯ ಹವ್ಯಾಸಗಳು ಪಕ್ಕಾ ಆಗಿ ಬಿಟ್ಟಿದೆ. ಆದ್ದರಿಂದ ಎಷ್ಟಾದರೂ ತಿಳಿಸಿ ಅವು ಬಿಟ್ಟು ಹೋಗುವುದೇ ಇಲ್ಲ. ಅದರಿಂದ ತಮ್ಮದೇ ಪದವಿಯನ್ನು ನಷ್ಟ ಮಾಡಿಕೊಳ್ಳುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1) ಯಾವುದೇ ಮಾತಿನ ವಾದ-ವಿವಾದದಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು. ವ್ಯರ್ಥ ಮಾತುಗಳಲ್ಲಿ ಬುದ್ಧಿಯು ಹೋಗಬಾರದು. ಎಷ್ಟು ಸಾಧ್ಯವೋ ನೆನಪಿನ ಯಾತ್ರೆಯಿಂದ ವಿಕರ್ಮವನ್ನು ವಿನಾಶ ಮಾಡಿಕೊಳ್ಳಬೇಕಾಗಿದೆ. ಆತ್ಮಾಭಿಮಾನಿಯಾಗಿರುವ ಹವ್ಯಾಸ ಮಾಡಿಕೊಳ್ಳಬೇಕಾಗಿದೆ.

2) ಹಳೆಯ ಪ್ರಪಂಚದಿಂದ ತಮ್ಮ ಮುಖವನ್ನು ತಿರುಗಿಸಿಕೊಳ್ಳಬೇಕಾಗಿದೆ. ಶಾಂತಿ ಮತ್ತು ಸುಖಧಾಮವನ್ನು ನೆನಪು ಮಾಡಬೇಕಾಗಿದೆ. ಹೊಸ ಮನೆಯು ತಯಾರಾಗುತ್ತಿದೆ ಆದ್ದರಿಂದ ಹಳೆಯ ಮನೆಯೊಂದಿಗಿನ ಮನಸ್ಸನ್ನು ತೆಗೆಯಬೇಕಾಗಿದೆ.

ವರದಾನ:
ಈಶ್ವರೀಯ ಕುಲದ ಸ್ಮೃತಿಯ ಮೂಲಕ ಮಾಯೆಯನ್ನು ಎದುರಿಸುವಂತಹ ಸದಾ ಸಮರ್ಥ ಸ್ವರೂಪ ಭವ.

ಯಾವುದೇ ಕಾರ್ಯದಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳಬೇಕೆಂದರೆ ಮೊದಲು ಸ್ಮೃತಿಯ ಮೂಲಕ ಸಮರ್ಥ ಸ್ವರೂಪರಾಗಿರಿ. ಸಮರ್ಥತೆ ಬರುವುದರಿಂದ ಮಾಯೆಯನ್ನು ಎದುರಿಸುವುದು ಸಹಜವಾಗುವುದು. ಸ್ಮೃತಿಯಂತೆ ಸ್ವರೂವಾಗುವುದು ಆದ್ದರಿಂದ ಸದಾ ಶಕ್ತಿಶಾಲಿ ಸ್ಮೃತಿಯಿರುತ್ತದೆ - ಎಲ್ಲಿಯವರೆಗೆ ಈ ಈಶ್ವರೀಯ ಜನ್ಮವಿದೆಯೋ ಅಲ್ಲಿಯವರೆಗೆ ಪ್ರತೀ ಸೆಕೆಂಡ್, ಪ್ರತೀ ಸಂಕಲ್ಪ, ಪ್ರತೀ ಕಾರ್ಯದಲ್ಲಿ ಈಶ್ವರೀಯ ಸೇವೆಯಲ್ಲಿದ್ದೇನೆ. ಇದು ನಮ್ಮ ಈಶ್ವರೀಯ ಕುಲವಾಗಿದೆ ಎಂಬ ಸ್ಮೃತಿಯ ಸ್ಥಾನವು, ಸರ್ವ ಬಲಹೀನತೆಗಳನ್ನು ಸಮಾಪ್ತಿ ಮಾಡಿ ಬಿಡುತ್ತದೆ.

ಸ್ಲೋಗನ್:
ಸತ್ಯತೆಯು ಸಮಯದನುಸಾರ ಸ್ವಯಂ ತಾನೆ ಸಿದ್ಧವಾಗುವುದು, ಅದನ್ನು ಸಿದ್ಧ ಮಾಡುವ ಅವಶ್ಯಕತೆಯಿಲ್ಲ.

ಅವ್ಯಕ್ತ ಸೂಚನೆ:– “ಮಹಾನರಾಗಲು ಮಧುರತೆ ಮತ್ತು ನಮ್ರತೆಯ ಗುಣ ಧಾರಣೆ ಮಾಡಿ”

ಮೆಜಾರಿಟಿಯ ಮುಂದೆ ಸರ್ವೀಸ್ನಲ್ಲಿ ಅಡಚನೆಯನ್ನುಂಟು ಮಾಡುವಂತಹ ಮುಖ್ಯ ವಿಘ್ನ ಬರುತ್ತದೆ, ನಾನು ಮಾಡಿದ್ದೇನೆ, ನಾನೇ ಇದನ್ನು ಮಾಡಬಹುದು. ಈ ನನ್ನತನ ಬರುವುದು ಇದಕ್ಕೆ ಹೇಳಲಾಗುತ್ತದೆ, ಜ್ಞಾನದ ಅಭಿಮಾನ, ಬುದ್ಧಿಯ ಅಭಿಮಾನ, ಸರ್ವೀಸ್ನ ಅಭಿಮಾನ, ಈ ರೂಪಗಳಲ್ಲಿಯೇ ವಿಘ್ನ ಬರುತ್ತದೆ. ಈ ಪ್ರಕಾರದ ವಿಘ್ನಗಳನ್ನು ಸಮಾಪ್ತಿ ಮಾಡಲು ಸದಾ ಒಂದೇ ಶಬ್ದ ನೆನಪಿಟ್ಟುಕೊಳ್ಳಿ ನಾನು ನಿಮಿತ್ತನಾಗಿದ್ದೇನೆ. ನಿಮಿತ್ತರಾಗುವುದರಿಂದಲೇ ನಿರಾಕಾರಿ, ನಿರಹಂಕಾರಿ ಮತ್ತು ನಮ್ರಚಿತ್ತ, ನಿಸಂಕಲ್ಪ ಅವಸ್ಥೆಯಲ್ಲಿರಲು ಸಾಧ್ಯ, ಈ ಧಾರಣೆಗಳೇ ವಾಯುಮಂಡಲವನ್ನು ನಿರ್ವಿಘ್ನವನ್ನಾಗಿ ಮಾಡುತ್ತದೆ.