31.03.26 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ –
ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದರೆ ಸತ್ಯ ತಂದೆಯ ಜೊತೆ ಸದಾ ಸತ್ಯವಾಗಿರಿ, ಯಾವುದೇ ತಪ್ಪಾದರೆ
ತಂದೆಯಿಂದ ಕ್ಷಮೆ ಯಾಚಿಸಿರಿ, ತನ್ನ ಮತದಂತೆ ನಡೆಯಬೇಡಿ”
ಪ್ರಶ್ನೆ:
ಎಂತಹ ಮುದ್ದು
ಮಕ್ಕಳನ್ನು ಎಂದೂ ಮುಚ್ಚಿಡಲು ಸಾಧ್ಯವಿಲ್ಲ?
ಉತ್ತರ:
ಯಾರಿಗೆ
ಈಶ್ವರೀಯ ಪರಿವಾರದ ಜೊತೆ ಪ್ರೀತಿಯಿದೆಯೋ, ಯಾರಿಗೆ ಹಗಲು-ರಾತ್ರಿ ಸೇವೆಯದೇ ಚಿಂತೆಯಿರುತ್ತದೆಯೋ
ಅಂತಹ ಸೇವಾಧಾರಿಗಳು ಯಾರು ಆಜ್ಞಾಕಾರಿ ಮತ್ತು ಪ್ರಾಮಾಣಿಕರಾಗಿದ್ದಾರೆಯೋ, ಎಂದೂ ಮನಮತದಂತೆ
ನಡೆಯುವುದಿಲ್ಲವೋ, ತಂದೆಯೊಂದಿಗೆ ಸತ್ಯ ಮತ್ತು ಸ್ವಚ್ಛ ಹೃದಯಿಗಳಾಗಿದ್ದಾರೆಯೋ ಅಂತಹ ಮಕ್ಕಳೆಂದೂ
ಮುಚ್ಚಿಡಲ್ಪಡುವುದಿಲ್ಲ.
ಗೀತೆ:
ನೀವೇ ಮಾತಾಪಿತಾ........
ಓಂ ಶಾಂತಿ.
ಗೀತೆಯಲ್ಲಿ ಗ್ಯಾರಂಟಿಯು ಯಾರದಾಗಿತ್ತು? ಮಾತಾಪಿತರ ಜೊತೆ ಮಕ್ಕಳ ಗ್ಯಾರಂಟಿಯಾಗಿದೆ - ಬಾಬಾ,
ನಮ್ಮವರು ತಮ್ಮ ವಿನಃ ಬೇರೆ ಯಾರೂ ಇಲ್ಲ. ಎಷ್ಟು ಉನ್ನತ ಗುರಿಯಾಗಿದೆ! ಇಂತಹ ಶ್ರೇಷ್ಠ ತಂದೆಯ
ಶ್ರೀಮತದಂತೆ ಯಾರಾದರೂ ನಡೆದಿದ್ದೇ ಆದರೆ ಅದಕ್ಕೆ ಗ್ಯಾರಂಟಿಯೇನೆಂದರೆ ಅವರು ಶ್ರೇಷ್ಠ ಆಸ್ತಿಯನ್ನು
ಖಂಡಿತ ಪಡೆಯುತ್ತಾರೆ. ಆದರೆ ಬುದ್ಧಿಯು ಹೇಳುತ್ತದೆ - ಗುರಿಯು ಬಹಳ ಉನ್ನತವಾಗಿದೆ. ಕೋಟಿಯಲ್ಲಿ
ಕೆಲವರು, ಕೆಲವರಲ್ಲಿಯೂ ಕೆಲವರೇ ಮಾಲೆಯ ಮಣಿಯಾಗುತ್ತಾರೆ. ನೀವು ಮಾತಾಪಿತಾ ಎಂದು ಹೇಳುತ್ತಾರೆ
ಆದರೆ ಮಾಯೆಯು ಇಷ್ಟು ಶಕ್ತಿಶಾಲಿಯಾಗಿದೆ, ಕೆಲವರೇ ಕೊಟ್ಟ ಮಾತಿನಂತೆ ನಡೆಯುತ್ತಾರೆ.
ಪ್ರತಿಯೊಬ್ಬರೂ ತಮ್ಮನ್ನು ಕೇಳಿಕೊಳ್ಳಬಹುದು - ಸತ್ಯ-ಸತ್ಯವಾಗಿಯೂ ನಾನು ಮಾತಾಪಿತರ
ಮಗುವಾಗಿದ್ದೇನೆಯೇ ತಂದೆಯು ಹೇಳುತ್ತಾರೆ - ಇಲ್ಲ. ಅಂತಹವರು ಬಹಳ ಕೆಲವರೇ ಇದ್ದಾರೆ, ಆದ್ದರಿಂದಲೇ
ನೋಡಿ ಎಷ್ಟು ಮಂದಿಯ ಮಾಲೆಯಾಗುತ್ತದೆ! ಇಷ್ಟು ಕೋಟಿಗಳಲ್ಲಿ ಕೇವಲ 8 ಮಂದಿಯದೇ ವೈಜಯಂತಿ
ಮಾಲೆಯಾಗುತ್ತದೆ. ಕೆಲವರು ಹೇಳುವುದೊಂದು, ಮಾಡುವುದು ಇನ್ನೊಂದು. ಆದ್ದರಿಂದ ತಂದೆಯು ಹೇಳುತ್ತಾರೆ
- ನೋಡಿ, ಎಷ್ಟು ವಿಚಿತ್ರವಾಗಿದೆ! ತಂದೆಯು ಎಷ್ಟು ಪ್ರೀತಿಯಿಂದ ತಿಳಿಸುತ್ತಾರೆ ಆದರೆ ಬಹಳ ಕೆಲವರೇ
ಸುಪುತ್ರ (ಮಾಲೆಯ ಮಣಿ) ರಾಗುತ್ತಾರೆ. ಶ್ರೀಮತದಂತೆ ನಡೆಯಲು ಮಕ್ಕಳಲ್ಲಿ ಅಷ್ಟು ಶಕ್ತಿಯಿಲ್ಲ
ಅಂದಾಗ ಅವಶ್ಯವಾಗಿ ರಾವಣನ ಮತದ ಮೇಲಿದ್ದಾರೆ ಆದ್ದರಿಂದಲೇ ಇಷ್ಟು ಪದವಿಯನ್ನು ಪಡೆಯಲು
ಸಾಧ್ಯವಿಲ್ಲ. ಮಾಲೆಯ ಮಣಿಯಾಗುವವರು ಕೆಲವರೇ ವಿರಳ. ಅಂತಹ ಮುದ್ದು ಮಕ್ಕಳು
ಮುಚ್ಚಿಡಲ್ಪಡುವುದಿಲ್ಲ. ಅಂತಹವರು ಹೃದಯವನ್ನೇರಿರುತ್ತಾರೆ. ಹಗಲು-ರಾತ್ರಿ ಸೇವೆಯದೇ
ಚಿಂತೆಯಿರುತ್ತದೆ. ಈಶ್ವರೀಯ ಸಂಬಂಧದೊಂದಿಗೆ ಪ್ರೀತಿಯಿರುತ್ತದೆ. ಅವರ ಬುದ್ಧಿಯು ಹೊರಗಡೆ ಎಲ್ಲಿಯೂ
ಹೋಗುವುದಿಲ್ಲ. ಇಂತಹ ಪ್ರೀತಿಯನ್ನು ದೈವೀ ಪರಿವಾರದೊಂದಿಗೆ ಇಟ್ಟುಕೊಳ್ಳಬೇಕಾಗಿದೆ. ಅಜ್ಞಾನ
ಕಾಲದಲ್ಲಿಯೂ ತಂದೆಯೊಂದಿಗೆ ಮಕ್ಕಳಿಗೆ ಸಹೋದರ-ಸಹೋದರಿಯರಲ್ಲಿ ಪರಸ್ಪರ ಬಹಳ ಪ್ರೀತಿಯಿರುತ್ತದೆ.
ಇಲ್ಲಂತೂ ಕೆಲವು ಮಕ್ಕಳದು ಅಂಶ ಮಾತ್ರವೂ ತಂದೆಯೊಂದಿಗೆ ಯೋಗವಿಲ್ಲ. ಬಹಳ ಗ್ಯಾರಂಟಿ ಕೊಡುತ್ತಾರೆ.
ಭಕ್ತಿಮಾರ್ಗದಲ್ಲಿ ಹಾಡುತ್ತಾರೆ, ಈಗಂತೂ ಮಕ್ಕಳು ಸಮ್ಮುಖದಲ್ಲಿದ್ದೀರಿ ಅಂದಮೇಲೆ ವಿಚಾರ ಮಾಡಬೇಕು
- ಭಕ್ತಿಮಾರ್ಗದಲ್ಲಿ ಹಾಡುತ್ತಿರುತ್ತಾರೆ, ಎಷ್ಟೊಂದು ಪ್ರೀತಿಯಿಂದ ನೆನಪು ಮಾಡುತ್ತಾರೆ ಆದರೆ
ಇಲ್ಲಿ ಕೆಲವರು ನೆನಪೇ ಮಾಡುವುದಿಲ್ಲ. ತಂದೆಯ ಮಕ್ಕಳಾದರೆ ಮಾಯೆಯು ಶತ್ರುವಾಗಿ ಬಿಡುತ್ತದೆ.
ಬುದ್ದಿಯು ಹೊರಗೆ ಅಲೆದಾಡುತ್ತದೆ ಆದ್ದರಿಂದ ಮಾಯೆಯು ಚೆನ್ನಾಗಿ ಬೀಳಿಸಿ ಬಿಡುತ್ತದೆ. ನಾವು
ಏನೆಲ್ಲಾ ಮಾಡುತ್ತೇವೆಯೋ ಬೀಳುವುದಕ್ಕಾಗಿಯೇ ಮಾಡುತ್ತೇವೆ ಎಂಬುದು ಅವರು ತಿಳಿದುಕೊಳ್ಳುವುದಿಲ್ಲ.
ತನ್ನ ಮತದಂತೆ ಬೀಳುತ್ತಿರುತ್ತಾರೆ. ನಾವು ಏನು ಮಾಡುತ್ತಿದ್ದೇವೆ ಎಂಬುದು ಅವರಿಗೆ ಅರ್ಥವಾಗುವುದೇ
ಇಲ್ಲ. ಮಕ್ಕಳಲ್ಲಿ ಕೆಲವು ಬಲಹೀನತೆಗಳು ಇರುತ್ತವೆಯಲ್ಲವೆ. ಒಂದು ಹೇಳಿ ಇನ್ನೊಂದನ್ನು ಮಾಡುತ್ತಾರೆ.
ಇಲ್ಲವಾದರೆ ತಂದೆಯಿಂದ ಎಷ್ಟು ಶ್ರೇಷ್ಠ ಆಸ್ತಿಯು ಸಿಗುತ್ತದೆ! ಎಷ್ಟು ಸತ್ಯತೆಯಿಂದ ತಂದೆಯ
ಸೇವೆಯಲ್ಲಿ ತೊಡಗಬೇಕು ಆದರೆ ಮಾಯೆಯು ಬಹಳ ಬಲಶಾಲಿಯಾಗಿದೆ. ಕೋಟೆಯಲ್ಲಿ ಕೆಲವರೇ ತಂದೆಯನ್ನು
ಪೂರ್ಣ ಅರ್ಥ ಮಾಡಿಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ, ಕಲ್ಪ-ಕಲ್ಪವೂ ಇದೇ ರೀತಿಯಾಗುತ್ತದೆ.
ಪೂರ್ಣ ಆಜ್ಞಾಕಾರಿ, ಪ್ರಾಮಾಣಿಕರಾಗದೇ ಇರುವ ಕಾರಣವೇ ಪಾಪ! ಅವರ ಪದವಿಯು ಈ ರೀತಿಯಾಗಿ ಬಿಡುತ್ತದೆ.
ಬಾಬಾ, ನಾವು ರಾಜಯೋಗವನ್ನು ಕಲಿತು ನರನಿಂದ ನಾರಾಯಣ ನಾರಿಯಿಂದ ಲಕ್ಷ್ಮಿಯಾಗುತ್ತೇವೆಂದು
ಹೇಳುತ್ತೇವೆ, ರಾಮ-ಸೀತೆಯಾಗುವುದಿಲ್ಲ ಎಂದು ಕೈಯನ್ನೆತ್ತುತ್ತಾರೆ. ಆದರೆ ಚಲನೆಯೂ ಅದೇರೀತಿ
ಇರಬೇಕಲ್ಲವೆ. ಬೇಹದ್ದಿನ ತಂದೆಯು ಆಸ್ತಿಯನ್ನು ಕೊಡುವುದಕ್ಕಾಗಿ ಬಂದಿದ್ದಾರೆ ಅಂದಮೇಲೆ ಎಷ್ಟೊಂದು
ಶ್ರೀಮತದಂತೆ ನಡೆಯಬೇಕು! ಅನೇಕ ಮಕ್ಕಳು ಹೇಗೆ ನಾವು ಶ್ರೀಮತದಂತೆ ನಡೆಯುವುದಿಲ್ಲವೆಂದು ಪ್ರತಿಜ್ಞೆ
ಮಾಡಿರುವರೇನೋ ಎನ್ನುವಂತೆ ಇರುತ್ತಾರೆ. ಅಂತಹವರನ್ನು ಮುಚ್ಚಿಡಲಾಗುವುದಿಲ್ಲ. ಯಾರ ಅದೃಷ್ಟದಲ್ಲಿ
ಇಲ್ಲವೋ ಅವರಿಗೆ ದೇಹಾಭಿಮಾನವು ಮೊದಲು ಪೆಟ್ಟು ಕೊಡುತ್ತದೆ ನಂತರ ಕಾಮ ವಿಕಾರವು ಪೆಟ್ಟು
ಕೊಡುತ್ತದೆ. ಕಾಮವಿಲ್ಲವೆಂದರೆ ಕ್ರೋಧ, ಲೋಭವಿರುತ್ತದೆ. ಎಲ್ಲವೂ ಶತ್ರುಗಳೇ ಅಲ್ಲವೆ. ಮೋಹವೂ ಸಹ
ಒಮ್ಮೆಲೆ ಸತ್ಯ ನಾಶ ಮಾಡಿ ಬಿಡುತ್ತದೆ ಹಾಗೆಯೇ ಲೋಭವೂ ಕಡಿಮೆಯಿಲ್ಲ. ಬಹಳ ಕಠಿಣ ಶತ್ರುಗಳಾಗಿವೆ.
ಬಿಡುಗಾಸಿನ ವಸ್ತುವನ್ನು ಕಳ್ಳತನ ಮಾಡುತ್ತಾರೆ, ಇದೂ ಸಹ ಲೋಭವಲ್ಲವೆ. ಕಳ್ಳತನದ ಹವ್ಯಾಸವು ಬಹಳ
ಕೆಟ್ಟದ್ದಾಗಿದೆ. ಅಂತಹವರಿಗೆ ಮನಸ್ಸು ತಿನ್ನಬೇಕು - ನಾವು ಪಾಪ ಮಾಡುತ್ತಾ ಇರುತ್ತೇವೆಂದರೆ ಏನು
ಪದವಿ ಪಡೆಯುತ್ತೇವೆ? ಶಿವ ತಂದೆಯ ಯಜ್ಞದಲ್ಲಿ ಬಂದು ತಂದೆಯ ಬಳಿ ನಾವು ಇಂತಹ ಕೆಲಸವನ್ನು ಮಾಡಬಹುದೇ?
ಮಾಯೆಯು ಬಹಳ ಉಲ್ಟಾ ಕರ್ಮವನ್ನು ಮಾಡಿಸುತ್ತದೆ. ಎಷ್ಟಾದರೂ ತಿಳಿಸಿ ಆದರೂ ಹವ್ಯಾಸವು
ಕಳೆಯುವುದಿಲ್ಲ. ಯಾರದೇ ನಾಮ-ರೂಪದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ, ದೇಹಾಭಿಮಾನದ ಕಾರಣ
ನಾಮ-ರೂಪದಲ್ಲಿಯೂ ಬಂದು ಬಿಡುತ್ತಾರೆ. ತಂದೆಗೆ ಪ್ರತಿಯೊಂದು ಸೇವಾಕೇಂದ್ರದ ಬಗ್ಗೆ
ತಿಳಿದಿರುತ್ತದೆಯಲ್ಲವೆ. ತಂದೆಯಾದರೂ ಏನು ಮಾಡುವರು? ತಿಳಸಲೇಬೇಕಾಗುತ್ತದೆ. ಎಷ್ಟೊಂದು
ಸೇವಾಕೇಂದ್ರಗಳಿವೆ, ತಂದೆಯ ಬಳಿ ಎಷ್ಟೊಂದು ಸಮಾಚಾರಗಳು ಬರುತ್ತವೆ. ಚಿಂತೆಯಂತೂ ಇರುತ್ತದೆಯಲ್ಲವೆ.
ನಂತರ ಅಂತಹವರಿಗೆ ತಿಳಿಸಬೇಕಾಗುತ್ತದೆ - ಮಾಯೆಯೂ ಕಡಿಮೆಯಿಲ್ಲ, ಬಹಳ ತೊಂದರೆ ಕೊಡುತ್ತದೆ.
ಒಳ್ಳೊಳ್ಳೆಯ ಮಕ್ಕಳಿಗೆ ಹೇಳಲಾಗುತ್ತದೆ - ದೊಡ್ಡವರೆಂದು ಕರೆಸಿಕೊಳ್ಳುವುದು ಎಂದರೆ ದೊಡ್ಡ
ದುಃಖವನ್ನು ಪಡೆಯುವುದು. ಇಲ್ಲಂತೂ ದುಃಖದ ಯಾವುದೇ ಮಾತಿಲ್ಲ ಏಕೆಂದರೆ ನಿಮಗೆ ತಿಳಿದಿದೆ - ಕಲ್ಪದ
ಮೊದಲೂ ಸಹ ಇದೇ ರೀತಿಯಾಗಿತ್ತು, ಈಶ್ವರನ ಮಕ್ಕಳಾಗಿಯೂ ಮಾಯೆಗೆ ವಶವಾಗಿ ಬಿಡುತ್ತಾರೆ, ಒಂದಲ್ಲ
ಒಂದು ವಿಕರ್ಮ ಮಾಡಿ ಬಿಡುತ್ತಾರೆ. ಆದ್ದರಿಂದಲೇ ತಂದೆಯು ಹೇಳುತ್ತಾರೆ - ಬಾಬಾ, ನಾವು ತಮ್ಮ
ಶ್ರೀಮತದಂತೆ ಖಂಡಿತ ನಡೆಯುತ್ತೇವೆ ಎಂದು ಮಕ್ಕಳು ಬಹಳ ಪ್ರತಿಜ್ಞೆ ಮಾಡುತ್ತಾರೆ ಆದರೆ
ನಡೆಯುವುದಿಲ್ಲ. ಆದ್ದರಿಂದಲೇ ನೋಡಿ, ಇಷ್ಟೊಂದು ಮಂದಿ ಮಕ್ಕಳಿದ್ದರೂ ಸಹ ಎಷ್ಟು ಚಿಕ್ಕ
ಮಾಲೆಯಾಗುತ್ತದೆ, ಉಳಿದೆಲ್ಲರೂ ಪ್ರಜೆಗಳಾಗುತ್ತಾರೆ. ಎಷ್ಟು ದೊಡ್ಡ ಗುರಿಯಾಗಿದೆ! ಇದರಲ್ಲಿ
ಹೃದಯದ ಸ್ವಚ್ಛತೆಯಿರಬೇಕು. ಸತ್ಯ ಹೃದಯದವರನ್ನು ಮುಚ್ಚಿಡಲು ಸಾಧ್ಯವಿಲ್ಲವೆಂದು ಗಾದೆಯಿದೆ.
ಒಂದುವೇಳೆ ತಂದೆಯ ಜೊತೆ ಸತ್ಯವಾಗಿ ನಡೆಯುತ್ತಿದ್ದರೆ ಸತ್ಯಯುಗದಲ್ಲಿ ಕೃಷ್ಣನ ಜೊತೆ ನರ್ತನ
ಮಾಡುತ್ತಾರೆ. ಸತ್ಯಯುಗದಲ್ಲಿ ಕೃಷ್ಣನ ನೃತ್ಯವೇ ಪ್ರಸಿದ್ಧವಾಗಿದೆ. ರಾಸ ಲೀಲೆ,
ರಾಧೆ-ಕೃಷ್ಣರದನ್ನೇ ತೋರಿಸುತ್ತಾರೆ ನಂತರ ರಾಮ ಲೀಲೆಯನ್ನು ತೋರಿಸುತ್ತಾರೆ ಆದರೆ ನಂಬರ್ವನ್ನಲ್ಲಿ
ರಾಧೆ-ಕೃಷ್ಣರ ರಾಸ ಲೀಲೆಯಾಗಿದೆ ಏಕೆಂದರೆ ಈ ಸಮಯದಲ್ಲಿ ಅವರು ತಂದೆಯೊಂದಿಗೆ ಬಹಳ
ಸತ್ಯವಂತರಾಗುತ್ತಾರೆ ಆದ್ದರಿಂದ ಎಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಕೈಯನ್ನಂತೂ ಅನೇಕರು
ಎತ್ತುತ್ತಾರೆ ಆದರೆ ಮಾಯೆಯು ಹೇಗಿದೆ! ಪ್ರತಿಜ್ಞೆ ಮಾಡುತ್ತಾರೆ ಅಂದಮೇಲೆ ಅದರಂತೆ ನಡೆಯಬೇಕಲ್ಲವೆ.
ಮಾಯೆಯ ಭೂತಗಳನ್ನು ಓಡಿಸಬೇಕಾಗಿದೆ. ದೇಹಾಭಿಮಾನದ ಹಿಂದೆ ಎಲ್ಲಾ ಭೂತಗಳು ಅಂಟಿಕೊಳ್ಳುತ್ತದೆ.
ತಂದೆಯು ತಿಳಿಸುತ್ತಾರೆ - ಆತ್ಮಾಭಿಮಾನಿಯಾಗಿ ತಂದೆಯನ್ನು ನೆನಪು ಮಾಡಿ, ಅದರಲ್ಲಿಯೂ ಬೆಳಗ್ಗೆ
ಬೆಳಗ್ಗೆ ಕುಳಿತು ಮಾತನಾಡಿ. ತಂದೆಯ ಮಹಿಮೆ ಮಾಡಿ. ಭಕ್ತಿಮಾರ್ಗದಲ್ಲಿ ಭಲೆ ಮಹಿಮೆ ಮಾಡುತ್ತಾರೆ
ಆದರೆ ಮಹಿಮೆಯಂತೂ ಯಾರಿಗೂ ಇಲ್ಲ. ಕೃಷ್ಣನನ್ನು ನೆನಪು ಮಾಡುತ್ತಾರೆ, ಬೆಣ್ಣೆ ಕದ್ದ,
ಗೋಪಿಕೆಯರನ್ನು ಓಡಿಸಿಕೊಂಡು ಹೋದ, ಅಕಾಸುರ ಬಕಾಸುರರನ್ನು ಕೊಂದ, ಹೀಗೆ ಮಾಡಿದ, ಹಾಗೆ ಮಾಡಿದ...
ಎಂದು ಮಹಿಮೆ ಮಾಡುತ್ತಾರೆ. ಅಷ್ಟೇ ಇನ್ನೇನು ಮಾಡುತ್ತಾರೆ! ಇದೆಲ್ಲವೂ ಸುಳ್ಳಾಗಿದೆ. ಸತ್ಯವು ಅಂಶ
ಮಾತ್ರವೂ ಇಲ್ಲ ಅಂದಮೇಲೆ ಮತ್ತೆ ಮಾರ್ಗವನ್ನೇನು ತಿಳಿಸುತ್ತಾರೆ? ಮುಕ್ತಿಯನ್ನೇ ತಿಳಿದುಕೊಂಡಿಲ್ಲ.
ಈ ಸಮಯದಲ್ಲಿ ಇಡೀ ವಿಶ್ವದ ಮೇಲೆ ರಾವಣ ರಾಜ್ಯವಿದೆ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ.
ಮನುಷ್ಯರು ಭ್ರಷ್ಟಾಚಾರಿ ಎಂಬುದರ ಅರ್ಥವನ್ನೂ ತಿಳಿದುಕೊಳ್ಳುವುದಿಲ್ಲ. ಸತ್ಯಯುಗದಲ್ಲಿ
ನಿರ್ವಿಕಾರಿ ದೇವತೆಗಳಿದ್ದರು ಎಂಬುದನ್ನೂ ತಿಳಿದುಕೊಂಡಿಲ್ಲ. ಸರ್ವಗುಣ ಸಂಪನ್ನರು, 16 ಕಲಾ
ಸಂಪೂರ್ಣರೆಂದು ಹಾಡುತ್ತಾರೆ ಆದರೆ ಮತ್ತೆ ಅಲ್ಲಿಯೂ ರಾವಣ, ಕಂಸ, ಜರಾಸಂದ ಮೊದಲಾದವರು ಇದ್ದರು
ಎಂದು ಹೇಳಿ ಬಿಡುತ್ತಾರೆ. ಪವಿತ್ರರಾಗಿರಿ ಎಂದು ಹೇಳಿದಾಗ ದೇವತೆಗಳಿಗೂ ಸಹ ಮಕ್ಕಳು
ಮೊದಲಾದವರಿದ್ದರಲ್ಲವೆ ಎಂದು ಹೇಳುತ್ತಾರೆ. ಅರೆ! ನೀವು ಹಾಡುತ್ತೀರಿ - ಸರ್ವಗುಣ ಸಂಪನ್ನರು,
ಸಂಪೂರ್ಣ ನಿರ್ವಿಕಾರಿಗಳು..... ಅಂದಮೇಲೆ ಅಲ್ಲಿ ವಿಕಾರದ ಮಾತಿರಲು ಹೇಗೆ ಸಾಧ್ಯ. ನೀವೂ ಸಹ
ನಿರ್ವಿಕಾರಿಗಳಾಗಿ ಎಂದು ಹೇಳಿದಾಗ ನಿರ್ವಿಕಾರಿಗಳಾದರೆ ಸೃಷ್ಟಿಯು ಹೇಗೆ ವೃದ್ಧಿಯಾಗುವುದು,
ಮಕ್ಕಳು ಹೇಗೆ ಜನ್ಮ ಪಡೆಯುತ್ತಾರೆ ಎಂದು ಕೇಳುತ್ತಾರೆ. ಮಂದಿರಗಳಲ್ಲಿ ಹೋಗಿ ಮಹಿಮೆಯನ್ನು
ಹಾಡುತ್ತಾರೆ. ಮತ್ತೆ ಮನೆಗೆ ಬಂದ ನಂತರ ಆ ಮಹಿಮೆಯನ್ನೂ ಮರೆತು ಹೋಗುತ್ತಾರೆ. ಭಲೆ ನೀವು ಹೋಗಿ
ಪರಿಶೀಲನೆ ಮಾಡಿ ನೋಡಿ, ಮನೆಯಲ್ಲಿ ಹೋಗಿ ತಿಳಿಸಿದರೆ ಅವರು ಒಪ್ಪುವುದಿಲ್ಲ. ಅಲ್ಲಿಯ ಮಾತು
ಅಲ್ಲಿಯೇ ಉಳಿದು ಬಿಡುತ್ತದೆ. ಪವಿತ್ರರಾಗುವುದಕ್ಕಾಗಿ ಹೇಳಿದರೆ ವಾಹ್! ಈ ಪ್ರಪಂಚವು ಹೇಗೆ
ನಡೆಯುವುದು ಎಂದು ಕೇಳುತ್ತಾರೆ. ನಿರ್ವಿಕಾರಿ ಪ್ರಪಂಚವು ಹೇಗೆ ನಡೆಯುತ್ತದೆ ಎಂಬುದು ಅವರಿಗೆ
ಗೊತ್ತೇ ಇಲ್ಲ.
ಮಕ್ಕಳು ಗೀತೆಯನ್ನು
ಕೇಳಿದಿರಿ. ನಿಮ್ಮ ಮತದಂತೆ ನಡೆಯುತ್ತೇವೆಂದು ಹಾಡುತ್ತಾರೆ ಏಕೆಂದರೆ ಶ್ರೀಮತದಂತೆ ನಡೆಯುವುದರಲ್ಲಿ
ಕಲ್ಯಾಣವಿದೆ. ತಂದೆಯಂತೂ ಹೇಳುತ್ತಿರುತ್ತಾರೆ - ಮಕ್ಕಳೇ, ಶ್ರೀಮತದಂತೆ ನಡೆಯಿರಿ. ಇಲ್ಲದಿದ್ದರೆ
ಕೊನೆಗೆ ಮೃತ್ಯು ಬಂದು ಬಿಡುತ್ತದೆ ನಂತರ ಧರ್ಮರಾಜನ ಮುಂದೆ ಎಲ್ಲವನ್ನೂ ತಿಳಿಸಬೇಕಾಗುವುದು. ನೀವೇ
ಈ ಪಾಪ ಮಾಡಿದ್ದೀರಿ. ತನ್ನ ಮತದಂತೆ ನಡೆದು ಮತ್ತೆ ಕಲ್ಪ-ಕಲ್ಪದ ಕಲೆಯುಂಟಾಗಿ ಬಿಡುವುದು. ಒಂದು
ಬಾರಿ ಅನುತ್ತೀರ್ಣರಾದರೆ ಎರಡನೇ ಅಥವಾ ಮೂರನೇ ವರ್ಷದಲ್ಲಿ ಓದುವರೆಂದಲ್ಲ. ಈಗ ಅನುತ್ತೀರ್ಣರಾದರೆ
ಕಲ್ಪ-ಕಲ್ಬವೂ ಆಗುತ್ತಿರುತ್ತಾರೆ ಆದ್ದರಿಂದ ಬಹಳ ಪುರುಷಾರ್ಥ ಮಾಡಬೇಕಾಗಿದೆ. ಹೆಜ್ಜೆ
ಹೆಜ್ಜೆಯಲ್ಲಿ ಶ್ರೀಮತದಂತೆ ನಡೆಯಿರಿ. ಒಳಗೇನೂ ಕೊಳಕು ಇರಬಾರದು. ಹೃದಯವನ್ನು ಶುದ್ಧ
ಮಾಡಿಕೊಳ್ಳಬೇಕಾಗಿದೆ. ನಾರದನಿಗೂ ಸಹ ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊ ಎಂದು ಹೇಳಿದರಲ್ಲವೆ.
ನೋಡಿಕೊಂಡಾಗ ನಾನು ಮಂಗನಂತೆ ಇದ್ದೇನೆ ಎಂಬುದು ಅರ್ಥವಾಯಿತು. ಇದೊಂದು ಉದಾಹರಣೆಯಿದೆ. ತಮ್ಮೊಂದಿಗೆ
ತಾವು ಕೇಳಿಕೊಳ್ಳಬೇಕು - ನಾವು ಎಲ್ಲಿಯವರೆಗೆ ಶ್ರೀಮತದಂತೆ ನಡೆಯುತ್ತಿದ್ದೇವೆ? ಬುದ್ಧಿಯೋಗವು
ಎಲ್ಲಿಯೂ ಹೊರಗಡೆ ಅಲೆಯುತ್ತಿಲ್ಲವೆ? ದೇಹಾಭಿಮಾನದಲ್ಲಂತೂ ಇಲ್ಲವೆ? ದೇಹೀ-ಅಭಿಮಾನಿಗಳು ಸೇವೆಯಲ್ಲಿ
ತೊಡಗಿರುವರು, ಎಲ್ಲವೂ ಯೋಗದ ಮೇಲಿದೆ. ಭಾರತದ ಯೋಗವು ಪ್ರಸಿದ್ಧವಾಗಿದೆ. ಅದನ್ನು ನಿರಾಕಾರ ತಂದೆಯೇ
ನಿರಾಕಾರ ಮಕ್ಕಳಿಗೆ ತಿಳಿಸುತ್ತಾರೆ, ಇದಕ್ಕೆ ಸಹಜ ರಾಜಯೋಗವೆಂದು ಹೇಳಲಾಗುತ್ತದೆ. ಇದುವೂ
ಬರೆಯಲ್ಪಟ್ಟಿದೆ - ನಿರಾಕಾರ ತಂದೆಯು ಸಹಜ ರಾಜಯೋಗವನ್ನು ಕಲಿಸಿದರು. ಕೇವಲ ಕೃಷ್ಣನ ಹೆಸರನ್ನು
ಹಾಕಿ ಬಿಟ್ಟಿದ್ದಾರೆ. ನಿಮಗೆ ತಿಳಿದಿದೆ - ನಾವೀಗ ಈ ಲಕ್ಷ್ಮೀ-ನಾರಾಯಣರಂತೆ ಆಗಬೇಕಾಗಿದೆ,
ಪುಣ್ಯಾತ್ಮರಾಗಬೇಕಾಗಿದೆ. ಪಾಪದ ಯಾವುದೇ ಮಾತಿಲ್ಲ. ತಂದೆಯ ನೆನಪಿನಲ್ಲಿಯೇ ಇದ್ದು ಅವರ
ಸೇವೆಯಲ್ಲಿರಬೇಕಾಗಿದೆ. ಇಷ್ಟು ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದರೆ ಸ್ವಲ್ಪ ಪರಿಶ್ರಮ
ಪಡಬೇಕಲ್ಲವೆ. ಸನ್ಯಾಸಿಗಳು ಗೃಹಸ್ಥ ವ್ಯವಹಾರದಲ್ಲಿದ್ದು ಕಮಲ ಪುಷ್ಪದಂತೆ ಇರಲು ಹೇಗೆ ಸಾಧ್ಯ!
ಎನ್ನುತ್ತಾರೆ. ಸಂರ್ಪೂಣರಾಗುವುದರಲ್ಲಿ ಅನೇಕರು ಅನುತ್ತೀರ್ಣರಾಗುತ್ತಾರೆ ಏಕೆಂದರೆ ನೆನಪು
ಮಾಡುವುದಿಲ್ಲ. ಈಗ ಪ್ರಾಚೀನ ಯೋಗವನ್ನು ತಂದೆಯೇ ಕಲಿಸುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ -
ಯೋಗವನ್ನಂತೂ ನಾನೇ ಸ್ವಯಂ ಬಂದು ಕಲಸಿ ಕೊಡುತ್ತೇನೆ. ಈಗ ನನ್ನನ್ನು ನೆನಪು ಮಾಡಿ, ನೀವು ನನ್ನ
ಬಳಿಗೆ ಬರಬೇಕಾಗಿದೆ. ಇದು ನೆನಪಿನ ಯಾತ್ರೆಯಾಗಿದೆ. ನಿಮ್ಮ ಮಧುರ ಶಾಂತಿಯ ಮನೆಯು ಆದಾಗಿದೆ, ಇದೂ
ಸಹ ತಿಳಿದಿದೆ - ನಾವು ಭಾರತವಾಸಿಗಳೇ ಭಾರತದಲ್ಲಿ ಬರುತ್ತೇವೆ ಮತ್ತು ಪೂರ್ಣ ಆಸ್ತಿಯನ್ನು
ಪಡೆಯುತ್ತೇವೆ. ಆದ್ದರಿಂದ ತಂದೆಯು ಪದೇ-ಪದೇ ತಿಳಿಸುತ್ತಾರೆ, ಮಕ್ಕಳೇ ಪ್ರತಿಜ್ಞೆಯಂತೆ ಪೂರ್ಣ
ನಡೆಯಿರಿ. ಮರೆತು ಹೋದರೆ ತಂದೆಯೊಂದಿಗೆ ಕ್ಷಮೆ ಯಾಚಿಸಬೇಕು. ನೋಡಿ, ಈ ಮಗು ಕ್ಷಮೆ
ಯಾಚಿಸುವುದಕ್ಕಾಗಿ ವಿಶೇಷವಾಗಿ ತಂದೆಯ ಬಳಿ ಒಂದು ದಿನಕ್ಕಾಗಿ ಬಂದಿದ್ದಾರೆ. ಸ್ವಲ್ಪ ತಪ್ಪಾದ
ಕಾರಣ ಓಡಿ ಬಂದಿದ್ದಾರೆ, ಏಕೆಂದರೆ ಮನಸ್ಸು ತಿನ್ನುತ್ತದೆ ಅದರಿಂದ ಸಮ್ಮುಖದಲ್ಲಿ ಹೋಗಿ ತಂದೆಗೆ
ತಿಳಿಸಬೇಕು ಎಂದುಕೊಂಡರು. ತಂದೆಯ ಪ್ರತಿ ಎಷ್ಟು ಗೌರವವಿದೆ! ಕೆಲವು ಮಕ್ಕಳಂತೂ ಇದಕ್ಕಿಂತಲೂ
ಹೆಚ್ಚು ವಿಕರ್ಮ ಮಾಡುತ್ತಿರುತ್ತಾರೆ. ಅದು ಗೊತ್ತಾಗುವುದೇ ಇಲ್ಲ. ವಾಹ್! ಬಹಳ ಒಳ್ಳೆಯ
ಮಗುವಾಗಿದ್ದಾರೆ, ಸ್ವಲ್ಪ ತಪ್ಪು ಮಾಡಿದ ಕಾರಣ ಕ್ಷಮೆ ಯಾಚಿಸಲು ಬಂದಿದ್ದಾರೆ ಎಂದು ನಾವು
ಹೇಳುತ್ತೇವೆ. ತಂದೆಯ ಹೇಳಿಕೆಯಾಗಿದೆ - ಮಕ್ಕಳೇ, ಆದ ತಪ್ಪನ್ನು ಹೇಳಿ, ಕ್ಷಮೆ ಯಾಚಿಸಿ ಇಲ್ಲವಾದರೆ
ಆ ಪಾಪವು ವೃದ್ಧಿಯಾಗುತ್ತಾ ಇರುತ್ತದೆ. ಇದರಿಂದ ಕೆಳಗೆ ಬಿಳುತ್ತೀರಿ. ಮುಖ್ಯವಾಗಿ ಯೋಗದಿಂದಲೇ
ರಕ್ಷಿಸಲ್ಪಡುತ್ತೀರಿ. ಈಗಿನ್ನೂ ಆ ಯೋಗದಲ್ಲಿ ಬಹಳ ನಿರ್ಬಲರಾಗಿದ್ದೀರಿ. ಜ್ಞಾನವಂತೂ ಬಹಳ
ಸಹಜವಾಗಿದೆ. ಇದಂತೂ ಒಂದು ಕಥೆಯಾಗಿದೆ. ಇಂದಿಗೆ 5000 ವರ್ಷಗಳ ಮೊದಲೂ ಯಾರ ರಾಜ್ಯವಿತ್ತು? ಹೇಗೆ
ರಾಜ್ಯ ಮಾಡಿದರು? ಎಷ್ಟು ಸಮಯ ಮಾಡಿದರು? ಮತ್ತೆ ರಾಜ್ಯ ಮಾಡುತ್ತಾ - ಮಾಡುತ್ತಾ ಹೇಗೆ ವಿಕಾರದಲ್ಲಿ
ಸಿಲುಕಿದರು? ಯಾರೂ ಸಹ ಬಂದು ಮುತ್ತಿಗೆ ಹಾಕಲಿಲ್ಲ ನಂತರ ಯಾವಾಗ ವೈಶ್ಯರಾದರೋ ಆಗ ಮುತ್ತಿಗೆ
ಹಾಕಿದರು. ಅವರಿಂದಂತು ರಾವಣನು ರಾಜ್ಯವನ್ನು ಕಸಿದುಕೊಂಡ. ನೀವೀಗ ಮತ್ತೆ ರಾವಣನ ಮೇಲೆ ಜಯ ಗಳಿಸಿ
ರಾಜ್ಯವನ್ನು ಪಡೆಯುತ್ತೀರಿ, ಇದು ಸಹ ಮಕ್ಕಳ ಬುದ್ಧಿಯಲ್ಲಿ ಕುಳಿತುಕೊಳ್ಳುವುದು ಬಹಳ ವಿರಳ. ಯಾರು
ತಂದೆಯ ಜೊತೆ ಪೂರ್ಣ ಆಜ್ಞಾಕಾರಿ ಪ್ರಾಮಾಣಿಕರಾಗಿದ್ದಾರೆಯೋ ಅವರ ಬುದ್ದಿಯಲ್ಲಿ
ಕುಳಿತುಕೊಳ್ಳುತ್ತದೆ. ಅಜ್ಞಾನ ಕಾಲದಲ್ಲಿಯೂ ಸಹ ಕೆಲವರು ಪ್ರಾಮಾಣಿಕರು,
ಆಜ್ಞಾಕಾರಿಗಳಾಗಿರುತ್ತಾರೆ, ಕೆಲವರು ನೌಕರರೂ ಸಹ ಬಹಳ ಪ್ರಾಮಾಣಿಕರಾಗಿರುತ್ತಾರೆ. ಲಕ್ಷಾಂತರ
ರೂಪಾಯಿಗಳು ಬಿದ್ದಿದ್ದರು ಸಹ ಎಂದು ಒಂದು ಪೈಸೆಯನ್ನೂ ಮುಟ್ಟುವುದಿಲ್ಲ. ಸೇಟ್ ಜೀ ತಾವು ಬೀಗದ
ಕೈಯನ್ನು ಬಿಟ್ಟು ಹೊರಟು ಹೋಗಿದ್ದಿರಿ, ನಾವು ಅದನ್ನು ಸಂಭಾಲನೆ ಮಾಡುವುದಕ್ಕಾಗಿ ಕುಳಿತಿದ್ದೇವೆ
ಎಂದು ಹೇಳುತ್ತಾರೆ. ಇಂತಹ ಪ್ರಾಮಾಣಿಕರೂ ಇರುತ್ತಾರೆ. ತಂದೆಯಂತೂ ಬಹಳ ಚೆನ್ನಾಗಿ
ತಿಳಿಸುತ್ತಿರುತ್ತಾರೆ. ವಿವೇಕವು ಹೇಳುತ್ತದೆ, ಈ ಕಾರಣದಿಂದಲೇ ಮಾಲೆಯ ಮಣಿಯಾಗುವುದಿಲ್ಲ. ಅಂತಹವರು
ಅಲ್ಲಿ ಹೋಗಿ ದಾಸ-ದಾಸಿಯರಾಗುತ್ತಾರೆ. ಓದದಿದ್ದರೆ ಅವಶ್ಯವಾಗಿ ಇದೇ ಗತಿಯಾಗುವುದು. ಶ್ರೀಮತದಂತೆ
ನಡೆಯುವುದಿಲ್ಲ, ತಂದೆಯು ತಿಳಿಸುತ್ತಾರೆ - ನಿಮ್ಮ ಗುರಿಯೆಲ್ಲವೂ ಯೋಗದ್ದಾಗಿದೆ. ಮಾಯೆಯೂ ಒಮ್ಮೆಲೆ
ಉಸಿರು ಕಟ್ಟಿಸಿ ಯೋಗ ಮಾಡಲು ಬಿಡುವುದಿಲ್ಲ. ಯೋಗವು ಇದ್ದಿದ್ದೇ ಆದರೆ ಬಹಳ ಚೆನ್ನಾಗಿ ಸೇವೆ
ಮಾಡುವರು, ಪಾಪಗಳ ಬಗ್ಗೆ ಭಯವಿರುವುದು. ಹೇಗೆ ಈ ಮಗು ಬಹಳ ಒಳ್ಳೆಯವರಾಗಿದ್ದಾರೆ. ಸತ್ಯತೆಯಿದ್ದರೆ
ಈ ರೀತಿಯಿರಬೇಕು. ಒಳ್ಳೊಳ್ಳೆಯ ಮಕ್ಕಳಿಗಿಂತ ಇವರ ಪದವಿಯು ಒಳ್ಳೆಯದಾಗಿದೆ. ಯಾರು ಸರ್ವಿಸ್
ಮಾಡುತ್ತಿರುತ್ತಾರೆಯೋ ಅವರು ಒಂದಲ್ಲ ಒಂದು ಕಡೆ ಸಿಕ್ಕಿ ಹಾಕಿಕೊಂಡಿರುತ್ತಾರೆ, ಏನನ್ನೂ
ತಿಳಿಸುವುದಿಲ್ಲ. ಹೇಳುವುದರಿಂದ ಬಿಡುವುದೂ ಇಲ್ಲ. ಗೀತೆಯಲ್ಲಿ ನೋಡಿ, ಏನೇ ಆಗಲಿ ನಾವೆಂದೂ ಇಂತಹ
ತಪ್ಪನ್ನು ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡುತ್ತಾರೆ. ಮೂಲ ಮಾತು ದೇಹಾಭಿಮಾನದ್ದಾಗಿದೆ.
ದೇಹಾಭಿಮಾನದಿಂದಲೇ ತಪ್ಪುಗಳಾಗುತ್ತವೆ. ಬಹಳ ತಪ್ಪುಗಳನ್ನು ಮಾಡುತ್ತಾರೆ ಆದ್ದರಿಂದ ಸಾವಧಾನ
ನೀಡಲಾಗುತ್ತದೆ. ತಂದೆಯ ಆದೇಶವಾಗಿದೆ - ತಿಳಿಸುವುದು. ತಿಳಿಸದೇ ಹೋದರೆ ನಮಗೆ ಯಾರೂ ತಿಳಿಸಲೇ
ಇಲ್ಲವೆಂದು ಹೇಳಿ ಬಿಡುತ್ತಾರೆ. ಇದರ ಮೇಲೆ ಒಂದು ಕಥೆಯೂ ಇದೆ. ತಂದೆಯು ಹೇಳುತ್ತಾರೆ - ಮಕ್ಕಳೇ,
ಎಚ್ಚರಿಕೆಯಿಂದಿರಿ ಇಲ್ಲವಾದರೆ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು. ನಂತರ ನಮಗೇಕೆ
ತಿಳಿಸಲಿಲ್ಲ ಎಂದು ಹೇಳುವಂತಿಲ್ಲ, ಆದ್ದರಿಂದ ತಂದೆಯು ಸ್ಪಷ್ಟವಾಗಿ ತಿಳಿಸುತ್ತಾರೆ. ಸ್ವಲ್ಪ ಪಾಪ
ಮಾಡಿದರೂ ಸಹ ಅದು ಬಹಳ ವೃದ್ಧಿಯಾಗಿ ಬಿಡುತ್ತದೆ. ಮತ್ತೆ ತಂದೆಯ ಮುಂದೆ ತಲೆ ಎತ್ತುವುದಕ್ಕೂ
ಸಾಧ್ಯವಿಲ್ಲ. ಸುಳ್ಳು ಹೇಳಿದರೆ ನೀವು ಅಯ್ಯೊ ಅಯ್ಯೊ ಎನ್ನಬೇಕು. ಶಿವ ತಂದೆಯು ನಮ್ಮನ್ನು ಎಲ್ಲಿ
ನೋಡುತ್ತಾರೆ ಎಂದು ತಿಳಿದುಕೊಳ್ಳಬೇಡಿ. ಅರೆ! ಅಜ್ಞಾನ ಕಾಲದಲ್ಲಿಯೂ ಸಹ ಅವರಿಗೆ ಎಲ್ಲವೂ
ತಿಳಿದಿರುತ್ತದೆ. ಆದ್ದರಿಂದಲೇ ಪಾಪ ಮತ್ತು ಪುಣ್ಯದ ಫಲವನ್ನು ಕೊಡುತ್ತಾರೆ. ನೇರವಾಗಿ
ತಿಳಿಸುತ್ತಾರೆ - ನೀವು ಪಾಪ ಮಾಡಿದರೆ ನಿಮಗಾಗಿ ಬಹಳ ದೊಡ್ಡ ಕಠಿಣ ಶಿಕ್ಷೆಯಿದೆ. ತಂದೆಯಿಂದ
ಆಸ್ತಿಯನ್ನು ತೆಗೆದುಕೊಳ್ಳಲು ಬಂದಿದ್ದೀರಿ, ಅಂದಮೇಲೆ ಅದನ್ನು ಬಿಟ್ಟು ಎರಡು ಕಿವಿಗಳನ್ನು
ಕತ್ತರಿಸಿಕೊಳ್ಳುವಂತೆ ಮಾಡಬಾರದಲ್ಲವೆ? ಹೇಳುವುದು ಒಂದು, ನೆನಪು ಇನ್ನೊಬ್ಬರನ್ನು ಮಾಡುತ್ತಾರೆ.
ತಂದೆಯನ್ನು ನೆನಪು ಮಾಡದಿದ್ದರೆ ಹೇಳಿ, ಅಂತಹವರ ಗತಿಯೇನಾಗುತ್ತದೆ? ಸತ್ಯವಾದುದನ್ನೇ ತಿನ್ನಬೇಕು,
ಸತ್ಯವನ್ನೇ ಹೇಳಬೇಕು, ಸತ್ಯವಾದುದನ್ನೇ ತೊಡಬೇಕು. ಇದೂ ಸಹ ಈಗಿನ ಮಾತಾಗಿದೆ. ಯಾವಾಗ ತಂದೆಯು
ಕಲಿಸುತ್ತಾರೆ ಅಂದ ಮೇಲೆ ಅವರೊಂದಿಗೆ ಪ್ರತಿ ಮಾತಿನಲ್ಲಿ ಸತ್ಯವಾಗಿರಬೇಕು. ಒಳ್ಳೆಯದು.
ಇಂತಹ ಸತ್ಯ ಆಜ್ಞಾಕಾರಿ,
ಪ್ರಾಮಾಣಿಕ ಮಕ್ಕಳ ಪ್ರತಿ ಮಾತಾಪಿತಾ ಬಾಪ್ ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ, ಆತ್ಮಿಕ
ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಸತ್ಯತೆಯಿಂದ
ತಂದೆಯ ಸೇವೆಯಲ್ಲಿ ತೊಡಗಬೇಕಾಗಿದೆ. ಸಂಪೂರ್ಣ ಆಜ್ಞಾಕಾರಿ ಪ್ರಾಮಾಣಿಕರಾಗಬೇಕಾಗಿದೆ. ಈಶ್ವರೀಯ
ಪರಿವಾರದೊಂದಿಗೆ ಸತ್ಯವಾದ ಪ್ರೀತಿಯನ್ನಿಡಬೇಕಾಗಿದೆ.
2. ಶ್ರೀಮತದಲ್ಲಿ ಮನ ಮತ
ಅಥವಾ ರಾವಣನ ಮತವನ್ನು ಬೆರಕೆ ಮಾಡಬಾರದು, ಒಬ್ಬ ತಂದೆಯ ವಿನಃ ಬೇರೆ ಯಾರೂ ಇಲ್ಲ. ಈ
ಪ್ರತಿಜ್ಞೆಯಲ್ಲಿ ಪಕ್ಕಾ ಇರಬೇಕಾಗಿದೆ. ಹೃದಯವನ್ನು ಶುದ್ಧ, ಪವಿತ್ರ ಮಾಡಿಕೊಳ್ಳಬೇಕಾಗಿದೆ.
ವರದಾನ:
ಆತ್ಮೀಯತೆಯ
ಸುಗಂಧದ ಆಧಾರದ ಮೇಲೆ ಸರ್ವರಿಗೂ ಪರಮಾತ್ಮನ ಸಂದೇಶ ಕೊಡುವಂತಹ ವಿಶ್ವ ಕಲ್ಯಾಣಕಾರಿ ಭವ.
ಸ್ವಯಂನಲ್ಲಿ ಆತ್ಮೀಯತೆಯ
ಸರ್ವಶಕ್ತಿಗಳನ್ನು ಧಾರಣೆ ಮಾಡಿಕೊಳ್ಳುತ್ತೀರೆಂದರೆ, ಸಹಜವಾಗಿಯೇ ಆತ್ಮೀಯತೆಯ ಸುಗಂಧದಿಂದ ಅನೇಕ
ಆತ್ಮರನ್ನು ತನ್ನಕಡೆಗೆ ಆಕರ್ಷಣೆ ಮಾಡುವುದು. ಹೇಗೆ ಮನಸಾ ಶಕ್ತಿಯಿಂದ ಪ್ರಕೃತಿಯನ್ನೂ
ತಮೋಪ್ರಧಾನದಿಂದ ಸತೋಪ್ರಧಾನವನ್ನಾಗಿ ಮಾಡುತ್ತೀರಿ ಹಾಗೆಯೇ ವಿಶ್ವದಲ್ಲಿರುವ ಅನ್ಯ ಆತ್ಮರು, ಯಾರು
ತಮ್ಮ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಅವರಿಗೆ ತಾವು ದೂರವಿದ್ದರೂ ತಾವು ಆತ್ಮೀಯತೆಯ
ಶಕ್ತಿಯಿಂದ ತಂದೆಯ ಪರಿಚಯ ಅಥವ ಮುಖ್ಯ ಸಂದೇಶವನ್ನು ಕೊಡಬಹುದು. ಯಾವಾಗ ಈ ಸೂಕ್ಷ್ಮವಾದ
ಯಂತ್ರವನ್ನು ತೀವ್ರಗೊಳಿಸುತ್ತೀರಿ ಆಗಲೇ ಚಡಪಡಿಸುತ್ತಿರುವ ಅನೇಕ ಆತ್ಮರುಗಳಿಗೆ ಹನಿಯಾದರೂ
ಸಿಗುವುದು ಹಾಗೂ ತಾವು ವಿಶ್ವ ಕಲ್ಯಾಣಕಾರಿ ಎಂದು ಕರೆಸಿಕೊಳ್ಳುತ್ತೀರಿ.
ಸ್ಲೋಗನ್:
ತಮ್ಮ ಬಳಿ
ಶುದ್ಧ ಹಾಗೂ ಶ್ರೇಷ್ಠ ಸಂಕಲ್ಪವನ್ನು ಸ್ವರೂಪದಲ್ಲಿ ಇಟ್ಟುಕೊಳ್ಳುತ್ತೀರೆಂದರೆ, ವ್ಯರ್ಥವು
ಸ್ವತಹವಾಗಿಯೇ ಮರ್ಜ್ ಆಗಿ ಬಿಡುತ್ತದೆ.
ಅವ್ಯಕ್ತ ಸೂಚನೆ:-
“ನಿಶ್ಚಯದ ಫೌಂಡೇಷನ್ (ತಳಪಾಯವನ್ನು) ಬಲಗೊಳಿಸಿ ಸದಾ ನಿರ್ಭಯ ಮತ್ತು ನಿಶ್ಚಿಂತರಾಗಿರಿ”
ಯಾವ ಸಮಯ ಯಾವುದೇ
ಪರಿಸ್ಥಿತಿ ಬಂದರೆ ತಂದೆಯನ್ನು ಜೊತೆಗಾರರನ್ನಾಗಿ ಮಾಡಿಕೊಳ್ಳಿ ಆಗ ಅನುಭವ ಮಾಡುವಿರಿ ನಾನು
ಒಂಟಿಯಾಗಿಲ್ಲ, ನನ್ನ ಜೊತೆ ವಿಶೇಷ ಶಕ್ತಿಯಿದೆ. ಎಲ್ಲಿ ತಂದೆಯಿದ್ದಾರೆ ಅಲ್ಲಿ ಎಷ್ಟೇ
ಬಿರುಗಾಳಿಯಿರಲಿ, ಅದು ಬಳುವಳಿಯಾಗಿ ಬಿಡುತ್ತದೆ. ನಿಶ್ಚಯ ಬುದ್ಧಿ ವಿಜಯಂತಿ – ಈ ಟೈಟಲ್ನ
ಸ್ಮೃತಿಯಿಂದ ವಿಜಯಿಯಾಗಿರಿ ಮತ್ತು ವಿಜಯಿ ವರ್ಷವನ್ನು ಆಚರಿಸಿರಿ.