31.12.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಮಧುಬನವು ಹೋಲಿಯೆಸ್ಟ್ ಆಫ್ ದಿ ಹೋಲಿ (ಪವಿತ್ರತೆಯ ಸಾಗರ) ತಂದೆಯ ಮನೆಯಾಗಿದೆ, ಇಲ್ಲಿಗೆ ನೀವು
ಪತಿತರನ್ನು ಕರೆತರುವಂತಿಲ್ಲ”
ಪ್ರಶ್ನೆ:
ಈ ಈಶ್ವರೀಯ
ಮೆಷಿನ್ನಲ್ಲಿ ಯಾರು ಪಕ್ಕಾ ನಿಶ್ಚಯ ಬುದ್ಧಿಯವರಿದ್ದಾರೆ ಅವರ ಚಿಹ್ನೆಗಳೇನು?
ಉತ್ತರ:
1. ಅವರು
ನಿಂದಾ-ಸ್ತುತಿ, ಮಾನ-ಅಪಮಾನ.... ಎಲ್ಲದರಲ್ಲಿ ತಾಳ್ಮೆಯಿಂದ ಕೆಲಸ ತೆಗೆದುಕೊಳ್ಳುತ್ತಾರೆ. 2.
ಕ್ರೋಧ ಮಾಡುವುದಿಲ್ಲ. 3. ಯಾರನ್ನೂ ದೈಹಿಕ ದೃಷ್ಟಿಯಿಂದ ನೋಡುವುದಿಲ್ಲ, ಆತ್ಮವನ್ನೇ ನೋಡುತ್ತಾರೆ,
ಆತ್ಮನಾಗಿ ಮಾತನಾಡುತ್ತಾರೆ. 4. ಸ್ತ್ರೀ-ಪುರುಷ ಜೊತೆಯಲ್ಲಿದ್ದರೂ ಕಮಲಪುಷ್ಫ ಸಮಾನ ಇರುತ್ತಾರೆ.
5. ಯಾವುದೇ ಪ್ರಕಾರದ ಇಚ್ಛೆಯನ್ನಿಟ್ಟುಕೊಳ್ಳುವುದಿಲ್ಲ.
ಗೀತೆ:
ಏಕೆ
ಸುಡುತ್ತಿಲ್ಲ ಪತಂಗವೇ..............
ಓಂ ಶಾಂತಿ.
ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಿದ್ದಾರೆ ಅರ್ಥಾತ್ ಭಗವಂತನು ಆತ್ಮಿಕ
ವಿದ್ಯಾರ್ಥಿಗಳಿಗೆ ಓದಿಸುತ್ತಿದ್ದಾರೆ. ಆ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಆತ್ಮಿಕ
ವಿದ್ಯಾರ್ಥಿಗಳೆಂದು ಹೇಳುವುದಿಲ್ಲ. ಅವರು ಆಸುರೀ ಸಂಪ್ರದಾಯದವರಾಗಿರುತ್ತಾರೆ. ನೀವೂ ಸಹ ಮೊದಲು
ಆಸುರೀ ಅಥವಾ ರಾವಣ ಸಂಪ್ರದಾಯದವರಾಗಿದ್ದಿರಿ, ಈಗ ರಾಮ ರಾಜ್ಯದಲ್ಲಿ ಹೋಗಲು 5 ವಿಕಾರಗಳೆಂಬ ರಾವಣನ
ಮೇಲೆ ಜಯ ಗಳಿಸುವ ಪುರುಷಾರ್ಥ ಮಾಡುತ್ತಿದ್ದೀರಿ. ಯಾರು ಈ ಜ್ಞಾನವನ್ನು ಪ್ರಾಪ್ತಿ
ಮಾಡಿಕೊಳ್ಳುವುದಿಲ್ಲವೋ ಅವರಿಗೆ ರಾವಣ ರಾಜ್ಯದಲ್ಲಿದ್ದೀರೆಂದು ತಿಳಿಸಬೇಕಾಗಿದೆ ಏಕೆಂದರೆ ಅವರು
ಅರ್ಥ ಮಾಡಿಕೊಳ್ಳುವುದಿಲ್ಲ. ನೀವು ಮಿತ್ರ ಸಂಬಂಧಿ ಮೊದಲಾದವರಿಗೂ ಸಹ ಬೇಹದ್ದಿನ ತಂದೆಯಿಂದ ನಾವು
ಓದುತ್ತೇವೆಂದು ಹೇಳಿದರೆ ಅವರಿಗೂ ಇದರ ಮೇಲೆ ನಿಶ್ಚಯ ಬರುವುದಿಲ್ಲ. ಎಷ್ಟಾದರೂ ತಂದೆಯೆಂದು ಹೇಳಿರಿ
ಅಥವಾ ಭಗವಂತನೆಂದು ಹೇಳಿದರೂ ಸಹ ನಿಶ್ಚಯವನ್ನಿಡುವುದಿಲ್ಲ. ಹೊಸಬರಿಗಂತೂ ಇಲ್ಲಿ (ಮಧುಬನ) ಬರಲು
ಅನುಮತಿಯಿಲ್ಲ. ಪತ್ರದ ಮೂಲಕ ಅಥವಾ ಕೇಳದೆ ಯಾರೂ ಬರುವಂತಿಲ್ಲ ಆದರೆ ಕೆಲವೊಮ್ಮೆ ಬಂದು ಬಿಡುತ್ತಾರೆ.
ಇದೂ ಸಹ ಕಾಯಿದೆಯ ಉಲ್ಲಂಘನೆಯಾಗಿದೆ. ಪ್ರತಿಯೊಬ್ಬರ ಪೂರ್ಣ ಸಮಾಚಾರ, ಹೆಸರು ಇತ್ಯಾದಿಗಳನ್ನು
ಬರೆದು ಇವರನ್ನು ಕಳುಹಿಸುವುದೇ ಎಂದು ಕೇಳಬೇಕಾಗಿದೆ ಆಗ ತಂದೆಯು ತಿಳಿಸುತ್ತಾರೆ - ಭಲೆ ಕಳುಹಿಸಿ
ಕೊಡಿ. ಒಂದುವೇಳೆ ಆಸುರೀ ಪತಿತ ಪ್ರಪಂಚದ ವಿದ್ಯಾರ್ಥಿಯಾಗಿದ್ದರೆ ಅವರಿಗೆ ತಂದೆಯು ತಿಳಿಸುತ್ತಾರೆ
- ಆ ವಿದ್ಯೆಯನ್ನು ವಿಕಾರಿ ಪತಿತರು ಓದಿಸುತ್ತಾರೆ. ಇಲ್ಲಿ ಈಶ್ವರನೇ ಓದಿಸುತ್ತಾರೆ. ಆ
ವಿದ್ಯೆಯಿಂದ ಬಿಡುಗಾಸಿನ ಪದವಿ ಸಿಗಬಹುದು. ಭಲೆ ಕೆಲವರು ಬಹಳ ದೊಡ್ಡ ಪರೀಕ್ಷೆಯನ್ನು ತೇರ್ಗಡೆ
ಮಾಡುತ್ತಾರೆ ಆದರೆ ಎಲ್ಲಿಯವರೆಗೆ ಸಂಪಾದಿಸುತ್ತಾ ಇರುತ್ತಾರೆ! ವಿನಾಶವಂತೂ ಸನ್ಮುಖದಲ್ಲಿ ನಿಂತಿದೆ,
ಪ್ರಾಕೃತಿಕ ಆಪತ್ತುಗಳೆಲ್ಲವೂ ಬರಲಿವೆ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ, ಯಾರು
ತಿಳಿದುಕೊಂಡಿಲ್ಲವೋ ಅವರನ್ನು ವಿಜಿಟಿಂಗ್ ರೂಂನಲ್ಲಿ ಕೂರಿಸಿ ತಿಳಿಸಲಾಗುತ್ತದೆ. ಇದು ಈಶ್ವರೀಯ
ವಿದ್ಯೆಯಾಗಿದೆ, ಇದರಲ್ಲಿ ನಿಶ್ಚಯ ಬುದ್ಧಿಯವರೇ ವಿಜಯಿಗಳಾಗುತ್ತಾರೆ ಅರ್ಥಾತ್ ವಿಶ್ವದ ಮೇಲೆ
ರಾಜ್ಯ ಮಾಡುತ್ತಾರೆ. ರಾವಣ ಸಂಪ್ರದಾಯದವರಂತೂ ಇದನ್ನು ತಿಳಿದುಕೊಂಡಿಲ್ಲ. ಇಲ್ಲಂತೂ ಬಹಳ ಎಚ್ಚರ
ವಹಿಸಬೇಕು. ಅನುಮತಿಯಿಲ್ಲದೆ ಯಾರೂ ಒಳಗೆ ಬರುವಂತಿಲ್ಲ. ಇದೇನು ಪ್ರವಾಸಿ ತಾಣವಲ್ಲ, ಇನ್ನು
ಸ್ವಲ್ಪ ಸಮಯದಲ್ಲಿಯೇ ಕಾಯಿದೆಯು ಬಹಳ ಕಠಿಣವಾಗಿ ಬಿಡುತ್ತದೆ ಏಕೆಂದರೆ ಇವರು ಪವಿತ್ರತೆಯ
ಸಾಗರನಾಗಿದ್ದಾರೆ. ಶಿವ ತಂದೆಗೆ ಇಂದ್ರನೆಂದೂ ಹೇಳುತ್ತಾರೆ. ಇದು ಇಂದ್ರ ಸಭೆಯಾಗಿದೆ. ನವರತ್ನಗಳ
ಉಂಗುರವನ್ನು ಧರಿಸುತ್ತಾರಲ್ಲವೆ. ಆ ರತ್ನಗಳಲ್ಲಿ ಮುತ್ತು, ಮಾಣಿಕ್ಯ, ನೀಲರತ್ನವೂ ಇರುತ್ತದೆ.
ಇವೆಲ್ಲಾ ಹೆಸರುಗಳನ್ನು ಇಡಲಾಗಿದೆ. ಫರಿಶ್ತೆಗಳ ಹೆಸರೂ ಇದೆಯಲ್ಲವೆ. ನೀವು ಫರಿಶ್ತೆಗಳು
ಹಾರುವಂತಹ ಆತ್ಮಗಳಾಗಿದ್ದೀರಿ, ನಿಮ್ಮದೇ ವರ್ಣನೆಯಿದೆ ಆದರೆ ಮನುಷ್ಯರು ಈ ಮಾತುಗಳೇನನ್ನೂ
ತಿಳಿದುಕೊಂಡಿಲ್ಲ.
ಉಂಗುರದಲ್ಲಿಯೂ
ರತ್ನಗಳನ್ನು ಹಾಕುವಾಗ ಅದರಲ್ಲಿ ಕೆಲವು ನೀಮ ಮಣಿ, ಕೆಲವು ಪದ್ಮರಾಗ ಇತ್ಯಾದಿಗಳು ಇರುತ್ತವೆ.
ಕೆಲವುಗಳ ಬೆಲೆ ಸಾವಿರ ರೂಪಾಯಿಗಳಾಗಿದ್ದರೆ, ಇನ್ನೂ ಕೆಲವುದರ ಬೆಲೆ ಕೇವಲ 10-20
ರೂಪಾಯಿಗಳಿರುತ್ತದೆ ಹಾಗೆಯೇ ಮಕ್ಕಳಲ್ಲಿಯೂ ನಂಬರ್ವಾರ್ ಇದ್ದಾರೆ. ಕೆಲವರಂತೂ ಚೆನ್ನಾಗಿ ಓದಿ
ಮಾಲೀಕರಾಗಿ ಬಿಡುತ್ತಾರೆ. ಇನ್ನೂ ಕೆಲವರು ದಾಸ-ದಾಸಿಯರಾಗುತ್ತಾರೆ. ರಾಜಧಾನಿಯು
ಸ್ಥಾಪನೆಯಾಗುತ್ತದೆಯಲ್ಲವೆ ಅಂದಾಗ ತಂದೆಯು ಕುಳಿತು ಓದಿಸುತ್ತಾರೆ, ಅವರಿಗೆ ಇಂದ್ರನೆಂದೂ
ಹೇಳಲಾಗುತ್ತದೆ. ಇದು ಜ್ಞಾನದ ಮಳೆಯಾಗಿದೆ, ಈ ಜ್ಞಾನವನ್ನು ತಂದೆಯ ವಿನಃ ಮತ್ತ್ಯಾರೂ ಕೊಡಲು
ಸಾಧ್ಯವಿಲ್ಲ. ನಿಮ್ಮ ಗುರಿ-ಧ್ಯೇಯವೇ ಇದಾಗಿದೆ. ಒಂದುವೇಳೆ ಈಶ್ವರನೇ ಓದಿಸುತ್ತಾರೆ ಎಂಬುದು
ನಿಶ್ಚಯವಾಗಿ ಬಿಟ್ಟರೆ ಮತ್ತೆ ಅವರು ಎಂದೂ ವಿದ್ಯೆಯನ್ನು ಬಿಡುವುದಿಲ್ಲ. ಯಾರು ಕಲ್ಲು
ಬುದ್ಧಿಯವರಾಗಿರುವರೋ ಅವರಿಗೆಂದೂ ಬಾಣವು ನಾಟುವುದಿಲ್ಲ. ಕೆಲವು ದಿನಗಳ ಕಾಲ
ನಡೆಯುತ್ತಾ-ನಡೆಯುತ್ತಾ ಕೆಳಗೆ ಬೀಳುತ್ತಾರೆ. ಪಂಚ ವಿಕಾರಗಳು ಅರ್ಧಕಲ್ಪದ ಶತ್ರುಗಳಾಗಿವೆ,
ದೇಹಾಭಿಮಾನದಲ್ಲಿ ಬಂದು ಪೆಟ್ಟು ತಿನ್ನುತ್ತಾರೆ. ಸ್ವಲ್ಪ ದಿನಗಳವರೆಗೆ ಆಶ್ಚರ್ಯವೆನಿಸುವಂತೆ
ಕೇಳುತ್ತಾ-ನಡೆಯುತ್ತಾ ಮತ್ತೆ ಬಿಟ್ಟು ಹೋಗುತ್ತಾರೆ. ಮಾಯೆಯು ಬಹಳ ಪ್ರಬಲವಾಗಿದೆ. ಒಂದೇ ಏಟಿಗೆ
ಕೆಳಗೆ ಬೀಳಿಸಿ ಬಿಡುತ್ತದೆ. ನಾವೆಂದೂ ಬೀಳುವುದಿಲ್ಲವೆಂದು ತಿಳಿಯುತ್ತಾರೆ ಆದರೂ ಸಹ ಮಾಯೆಯು
ಪೆಟ್ಟು ಕೊಡುತ್ತದೆ. ಇಲ್ಲಿ ಸ್ತ್ರೀ-ಪುರುಷ ಇಬ್ಬರನ್ನೂ ಪವಿತ್ರರನ್ನಾಗಿ ಮಾಡಲಾಗುತ್ತದೆ.
ಅಂದಮೇಲೆ ಈ ಕಾರ್ಯವನ್ನು ಈಶ್ವರನ ಹೊರತು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಇದು ಈಶ್ವರೀಯ ಮೆಷಿನ್
ಆಗಿದೆ.
ತಂದೆಗೆ ಅಂಬಿಗನೆಂದೂ
ಹೇಳಲಾಗುತ್ತದೆ, ನೀವೆಲ್ಲರೂ ದೋಣಿಗಳಾಗಿದ್ದೀರಿ. ಎಲ್ಲರ ಜೀವನದ ದೋಣಿಯನ್ನು ಪಾರು ಮಾಡಲು ಅಂಬಿಗನು
ಬರುತ್ತಾರೆ. ಸತ್ಯದ ದೋಣಿಯು ಅಲುಗಾಡುವುದು ಆದರೆ ಮುಳುಗುವುದಿಲ್ಲವೆಂದು ಹೇಳುತ್ತಾರೆ. ಎಷ್ಟು
ಅನೇಕಾನೇಕ ಮಠ ಪಂಥಗಳಿವೆ, ಜ್ಞಾನ ಮತ್ತು ಭಕ್ತಿಯ ನಡುವೆ ಹೇಗೆ ಯುದ್ಧವಾಗುತ್ತದೆ. ಕೆಲವೊಮ್ಮೆ
ಭಕ್ತಿಗೆ ವಿಜಯವಾಗುವುದು ಆದರೆ ಕೊನೆಗೆ ಜ್ಞಾನಕ್ಕೆ ವಿಜಯ ಸಿಗುವುದು. ಭಕ್ತಿಯ ಕಡೆ ನೋಡಿ ಎಷ್ಟು
ದೊಡ್ಡ-ದೊಡ್ಡ ಯೋಧರಿದ್ದಾರೆ, ಜ್ಞಾನ ಮಾರ್ಗದ ಕಡೆಯೂ ಎಷ್ಟು ದೊಡ್ಡ-ದೊಡ್ಡ ಯೋಧರಿದ್ದಾರೆ. ಇದಕ್ಕೆ
ಅರ್ಜುನ, ಭೀಮ ಇತ್ಯಾದಿ ಹೆಸರುಗಳನ್ನಿಟ್ಟಿದ್ದಾರೆ. ಇದೆಲ್ಲವನ್ನೂ ಅವರು ಕಥೆಗಳ ರೂಪದಲ್ಲಿ
ಬರೆದಿದ್ದಾರೆ. ಗಾಯನವೂ ನಿಮ್ಮದೇ ಆಗಿದೆ, ನೀವೀಗ ನಾಯಕ-ನಾಯಕಿಯ ಪಾತ್ರವನ್ನು
ಅಭಿನಯಿಸುತ್ತಿದ್ದೀರಿ. ಈ ಸಮಯದಲ್ಲಿಯೇ ಯುದ್ಧವು ನಡೆಯುತ್ತದೆ. ನಿಮ್ಮಲ್ಲಿಯೂ ಸಹ ಅನೇಕರು ಈ
ಮಾತುಗಳನ್ನು ಪೂರ್ಣ ರೀತಿಯಲ್ಲಿ ತಿಳಿದುಕೊಳ್ಳುವುದಿಲ್ಲ. ಯಾರು ಒಳ್ಳೊಳ್ಳೆಯವರಿರುವರೋ ಅವರಿಗೇ
ಬಾಣವು ನಾಟುತ್ತದೆ. ಕೆಳ ದರ್ಜೆಯವರು (ಥರ್ಡ್ ಕ್ಲಾಸ್) ಕುಳಿತುಕೊಳ್ಳಲು ಸಾಧ್ಯವಿಲ್ಲ.
ದಿನ-ಪ್ರತಿದಿನ ಬಹಳ ಕಠಿಣ ಕಾಯಿದೆಗಳಾಗುತ್ತಾ ಹೋಗುತ್ತವೆ. ಕಲ್ಲು ಬುದ್ಧಿಯವರು ಯಾರು ಏನನ್ನೂ
ತಿಳಿದುಕೊಳ್ಳುವುದಿಲ್ಲವೋ ಅವರು ಇಲ್ಲಿ ಕುಳಿತುಕೊಳ್ಳುವುದೂ ಸಹ ನಿಯಮಕ್ಕೆ ವಿರುದ್ಧವಾಗಿದೆ.
ಈ ಹಾಲ್ ಅತಿ
ಪವಿತ್ರಸ್ಥಾನವಾಗಿದೆ. ಪೋಪನಿಗೂ ಸಹ ಹೋಲಿ ಎಂದು ಹೇಳುತ್ತಾರೆ. ತಂದೆಯಂತೂ ಪವಿತ್ರತೆಯ
ಸಾಗರನಾಗಿದ್ದಾರೆ, ತಂದೆಯು ತಿಳಿಸುತ್ತಾರೆ - ನಾನೇ ಇವರೆಲ್ಲರ ಕಲ್ಯಾಣ ಮಾಡಬೇಕಾಗಿದೆ. ಇದೆಲ್ಲವೂ
ವಿನಾಶವಾಗಲಿದೆ, ಇದನ್ನೂ ಸಹ ಎಲ್ಲರೂ ತಿಳಿದುಕೊಳ್ಳುವುದಿಲ್ಲ. ಭಲೆ ಹೇಳುತ್ತಾರೆ ಆದರೆ ಒಂದು
ಕಿವಿಯಿಂದ ಕೇಳಿಸಿಕೊಂಡು ಇನ್ನೊಂದು ಕಿವಿಯಿಂದ ಬಿಟ್ಟು ಬಿಡುತ್ತಾರೆ. ಧಾರಣೆ ಮಾಡುವುದೂ ಇಲ್ಲ,
ಮಾಡಿಸುವುದೂ ಇಲ್ಲ. ಇಂತಹ ಕಿವುಡರು ಅನೇಕರಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳು
ಕೆಟ್ಟದ್ದನ್ನು ಕೇಳಬೇಡಿ..... ಇದಕ್ಕೆ ಅವರು ಕೋತಿಗಳ ಚಿತ್ರಗಳನ್ನು ತೋರಿಸುತ್ತಾರೆ. ಆದರೆ ಇದು
ಮನುಷ್ಯರಿಗೆ ಸಲ್ಲುತ್ತದೆ. ಮನುಷ್ಯರು ಈ ಸಮಯದಲ್ಲಿ ಕೋತಿಗಿಂತಲೂ ಕೀಳಾಗಿದ್ದಾರೆ. ನಾರದನ
ಕಥೆಯನ್ನೂ ಬರೆದಿದ್ದಾರೆ. ನೀನು ತನ್ನ ಮುಖವನ್ನು ನೋಡಿಕೋ, ಒಳಗೆ ಪಂಚ ವಿಕಾರಗಳಂತೂ ಇಲ್ಲವೆ? ಎಂದು
ನಾರದನಿಗೆ ಹೇಳಲಾಯಿತು. ಹೇಗೆ ಸಾಕ್ಷಾತ್ಕಾರವಾಗುತ್ತದೆ, ಹನುಮಂತನ ಸಾಕ್ಷಾತ್ಕಾರವೂ
ಆಗುತ್ತದೆಯಲ್ಲವೆ. ಇದು ಕಲ್ಪ-ಕಲ್ಪವೂ ಆಗುತ್ತದೆ. ಸತ್ಯಯುಗದಲ್ಲಿ ಈ ಮಾತುಗಳೇನೂ ಇರುವುದಿಲ್ಲ. ಈ
ಹಳೆಯ ಪ್ರಪಂಚವೇ ಸಮಾಪ್ತಿಯಾಗುತ್ತದೆ. ಕಲ್ಪದ ಹಿಂದೆಯೂ ಸಹ ನಾವು ರಾಜ್ಯ ಮಾಡಿದ್ದೇವೆಂಬುದನ್ನು
ಪಕ್ಕಾ ನಿಶ್ಚಯ ಬುದ್ಧಿಯವರೇ ತಿಳಿದುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ದೈವೀ
ಗುಣಗಳನ್ನು ಧಾರಣೆ ಮಾಡಿ, ಯಾವುದೇ ತದ್ವಿರುದ್ಧವಾದ ಕೆಲಸಗಳನ್ನು ಮಾಡಬೇಡಿ. ಹೊಗಳಿಕೆ-ತೆಗಳಿಕೆ
ಎಲ್ಲದರಲ್ಲಿ ತಾಳ್ಮೆ ವಹಿಸಬೇಕಾಗಿದೆ, ಕ್ರೋಧವಿರಬಾರದು. ನೀವು ಎಷ್ಟು ಶ್ರೇಷ್ಠ
ವಿದ್ಯಾರ್ಥಿಗಳಾಗಿದ್ದೀರಿ! ಭಗವಂತ ತಂದೆಯು ಓದಿಸುತ್ತಾರೆ. ಅವರು ಡೈರೆಕ್ಟ್ ಓದಿಸುತ್ತಿದ್ದಾರೆ
ಆದರೂ ಸಹ ಎಷ್ಟೊಂದು ಮಕ್ಕಳು ಇದನ್ನೇ ಮರೆತು ಹೋಗುತ್ತಾರೆ ಏಕೆಂದರೆ ಸಾಧಾರಣ ತನುವಲ್ಲವೆ. ತಂದೆಯು
ತಿಳಿಸುತ್ತಾರೆ - ದೇಹಧಾರಿಗಳನ್ನು ನೋಡಿದರೆ ನೀವು ಅಷ್ಟು ಮೇಲೆ ಬರಲು ಸಾಧ್ಯವಿಲ್ಲ. ಆತ್ಮವನ್ನೇ
ನೋಡಿ, ಆತ್ಮವು ಈ ಭೃಕುಟಿಯ ಮಧ್ಯದಲ್ಲಿರುತ್ತದೆ. ಆತ್ಮವೇ ಕಿವಿಗಳ ಮೂಲಕ ಕೇಳಿ ತಲೆಯನ್ನು
ಅಲುಗಾಡಿಸುತ್ತದೆ. ಯಾವಾಗಲೂ ಆತ್ಮನೊಂದಿಗೆ ಮಾತನಾಡಿ, ನೀವಾತ್ಮಗಳು ಈ ಶರೀರರೂಪಿ ಸಿಂಹಾಸನದಲ್ಲಿ
ಕುಳಿತಿದ್ದೀರಿ. ನೀವು ತಮೋಪ್ರಧಾನರಾಗಿದ್ದಿರಿ, ಈಗ ಸತೋಪ್ರಧಾನರಾಗಿ. ತಮ್ಮನ್ನು ಆತ್ಮನೆಂದು
ತಿಳಿದು ತಂದೆಯನ್ನು ನೆನಪು ಮಾಡುವುದರಿಂದ ದೇಹಭಾನವು ಕಳೆಯುವುದು. ಅರ್ಧ ಕಲ್ಪದಿಂದ ದೇಹಾಭಿಮಾನವು
ಉಳಿದುಕೊಂಡಿದೆ, ಈ ಸಮಯದಲ್ಲಿ ಎಲ್ಲರೂ ದೇಹಾಭಿಮಾನಿಗಳಾಗಿದ್ದಾರೆ.
ಈಗ ತಂದೆಯು
ತಿಳಿಸುತ್ತಾರೆ - ಮಕ್ಕಳೇ, ದೇಹೀ-ಅಭಿಮಾನಿಗಳಾಗಿ. ಆತ್ಮವೇ ಎಲ್ಲವನ್ನೂ ಧಾರಣೆ ಮಾಡುತ್ತದೆ.
ತಿನ್ನುವುದು-ಕುಡಿಯುವುದು ಎಲ್ಲವನ್ನೂ ಆತ್ಮವೇ ಮಾಡುತ್ತದೆ. ತಂದೆಗಂತೂ ಅಭೋಕ್ತನೆಂದು
ಹೇಳಲಾಗುತ್ತದೆ. ಅವರು ನಿರಾಕಾರನಾಗಿದ್ದಾರೆ. ಈ ಶರೀರಧಾರಿ (ಬ್ರಹ್ಮಾ) ಎಲ್ಲವನ್ನೂ ಮಾಡುತ್ತಾರೆ.
ಶಿವ ತಂದೆಯು ಅಭೋಕ್ತನಾಗಿದ್ದಾರೆ, ಅವರು ಏನನ್ನೂ ತಿನ್ನುವುದಾಗಲಿ, ಕುಡಿಯುವುದಾಗಲಿ ಇಲ್ಲ.
ಇದನ್ನೇ ಸಾಧು-ಸನ್ಯಾಸಿಗಳು ಕಾಪಿ ಮಾಡುತ್ತಾರೆ. ಮನುಷ್ಯರು ಎಷ್ಟೊಂದು ಮೋಸಗೊಳಿಸುತ್ತಾರೆ. ನಿಮ್ಮ
ಬುದ್ಧಿಯಲ್ಲಿ ಈಗ ಇಡೀ ಜ್ಞಾನವಿದೆ. ಕಲ್ಪದ ಹಿಂದೆ ಯಾರು ತಿಳಿದುಕೊಂಡಿದ್ದರೋ ಅವರೇ
ತಿಳಿದುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ನಾನೇ ಕಲ್ಪ-ಕಲ್ಪವೂ ಬಂದು ನಿಮಗೆ ಓದಿಸುತ್ತೇನೆ
ಮತ್ತು ಸಾಕ್ಷಿಯಾಗಿ ನೋಡುತ್ತೇನೆ. ನಂಬರ್ವಾರ್ ಪುರುಷಾರ್ಥದನುಸಾರ ಯಾರು ಓದಿದ್ದರೋ ಅವರೇ
ಓದುತ್ತಾರೆ, ಸಮಯ ಹಿಡಿಸುತ್ತದೆ. ಕಲಿಯುಗವು ಇನ್ನೂ 40 ಸಾವಿರ ವರ್ಷಗಳು ಉಳಿದಿದೆ ಎಂದು
ಹೇಳುತ್ತಾರೆ ಅಂದಾಗ ಘೋರ ಅಂಧಕಾರದಲ್ಲಿದ್ದಾರೆ. ಇದಕ್ಕೆ ಅಜ್ಞಾನ ಅಂಧಕಾರವೆಂದು ಹೇಳಲಾಗುತ್ತದೆ.
ಭಕ್ತಿ ಮಾರ್ಗ ಮತ್ತು ಜ್ಞಾನ ಮಾರ್ಗದಲ್ಲಿ ರಾತ್ರಿ-ಹಗಲಿನ ಅಂತರವಿದೆ. ಇವೂ ಸಹ ತಿಳಿದುಕೊಳ್ಳುವ
ಮಾತುಗಳಾಗಿವೆ. ನೀವು ಮಕ್ಕಳು ಬಹಳ ಖುಷಿಯಲ್ಲಿ ಮುಳುಗಿರಬೇಕು. ಎಲ್ಲವೂ ಇದೆ ಅಂದಮೇಲೆ ಯಾವುದೇ
ಇಚ್ಛೆಯೂ ಬೇಡ. ನಿಮಗೆ ತಿಳಿದಿದೆ, ಕಲ್ಪದ ಹಿಂದಿನ ತರಹ ನಮ್ಮ ಎಲ್ಲಾ ಕಾಮನೆಗಳು ಈಡೇರುತ್ತವೆ.
ಆದ್ದರಿಂದ ಹೊಟ್ಟೆ ತುಂಬಿರುತ್ತದೆ. ಯಾರಿಗೆ ಜ್ಞಾನವಿಲ್ಲವೋ ಅವರ ಹೊಟ್ಟೆಯು ತುಂಬಿರುತ್ತದೆಯೇ?
ಖುಷಿಯಂತಹ ಔಷಧಿಯಿಲ್ಲವೆಂದು ಹೇಳಲಾಗುತ್ತದೆ. ನಿಮಗೆ ಜನ್ಮ-ಜನ್ಮಾಂತರದ ರಾಜ್ಯಭಾಗ್ಯವು ಸಿಗುತ್ತದೆ.
ದಾಸ-ದಾಸಿಗಳಾಗುವವರಿಗೆ ಇಷ್ಟೊಂದು ಖುಷಿಯಾಗುವುದಿಲ್ಲ. ಪೂರ್ಣ ಮಹಾವೀರರಾಗಬೇಕು. ಮಾಯೆಯು
ಅಲುಗಾಡಿಸಲು ಸಾಧ್ಯವಾಗಬಾರದು.
ತಂದೆಯು ತಿಳಿಸುತ್ತಾರೆ
- ದೃಷ್ಟಿಯ ಮೇಲೆ ಬಹಳ ಗಮನವಿರಬೇಕು. ವಿಕಾರಿ ದೃಷ್ಟಿಯಾಗದಿರಲಿ. ಸ್ತ್ರೀಯನ್ನು
ನೋಡುತ್ತಿದ್ದಂತೆಯೇ ಚಂಚಲತೆ ಬಂದು ಬಿಡುತ್ತದೆ. ಅರೆ! ನೀವಂತೂ ಸಹೋದರ-ಸಹೋದರಿ,
ಕುಮಾರ-ಕುಮಾರಿಯರಾಗಿದ್ದೀರಲ್ಲವೆ ಅಂದಮೇಲೆ ಕರ್ಮೇಂದ್ರಿಯಗಳು ಏಕೆ ಚಂಚಲತೆ ಮಾಡುತ್ತವೆ!
ದೊಡ್ಡ-ದೊಡ್ಡ ಲಕ್ಷಾಧೀಶ್ವರ, ಕೋಟ್ಯಾಧೀಶ್ವರರನ್ನೂ ಸಹ ಮಾಯೆಯು ಸಮಾಪ್ತಿ ಮಾಡಿ ಬಿಡುತ್ತದೆ.
ಬಡವರನ್ನೂ ಸಹ ಮಾಯೆಯು ಒಮ್ಮೆಲೆ ತುಳಿದು ಬಿಡುತ್ತದೆ ನಂತರ ಹೇಳುತ್ತಾರೆ - ಬಾಬಾ, ನಾವು ಮೋಸ
ಹೋದೆವು ಎಂದು. ಅರೆ! 10 ವರ್ಷಗಳ ನಂತರವೂ ಸೋಲನ್ನನುಭವಿಸಿದಿರಿ, ಪಾತಾಳದಲ್ಲಿ ಬಿದ್ದು ಹೋದಿರಿ.
ಇವರ ಸ್ಥಿತಿಯು ಹೇಗಿದೆ ಎಂಬುದು ತಂದೆಗೆ ಗೊತ್ತಿದೆ. ಕೆಲಕೆಲವರಂತೂ ಬಹಳ ಚೆನ್ನಾಗಿ ಸರ್ವೀಸ್
ಮಾಡುತ್ತಾರೆ, ಕನ್ಯೆಯರು ಭೀಷ್ಮ ಪಿತಾಮಹ ಮೊದಲಾದವರಿಗೂ ಬಾಣವನ್ನು ಹೊಡೆದರಲ್ಲವೆ. ಗೀತೆಯಲ್ಲಿ
ಅಲ್ಪ ಸ್ವಲ್ಪ ಉಳಿದಿದೆ, ಇದು ಭಗವಾನುವಾಚವಾಗಿದೆ. ಒಂದುವೇಳೆ ಕೃಷ್ಣ ಭಗವಂತನು ಗೀತೆಯನ್ನು
ತಿಳಿಸಿದ್ದೇ ಆದರೆ ನಾನು ಹೇಗಿದ್ದೇನೆ, ಯಾರಾಗಿದ್ದೇನೆ ಎಂಬುದನ್ನು ಕೆಲವರೇ ವಿರಳ
ತಿಳಿದುಕೊಳ್ಳುತ್ತಾರೆ ಎಂಬ ಮಾತನ್ನು ಏಕೆ ಹೇಳುತ್ತಿದ್ದರು? ಒಂದುವೇಳೆ ಇಲ್ಲಿ ಕೃಷ್ಣನು
ಇಲ್ಲಿದ್ದರೆ ಏನು ಮಾಡಿ ಬಿಡುತ್ತಿದ್ದರೋ ಗೊತ್ತಿಲ್ಲ. ಕೃಷ್ಣನ ಶರೀರವಂತೂ ಸತ್ಯಯುಗದಲ್ಲಿಯೇ
ಇರುತ್ತದೆ, ಕೃಷ್ಣನ ಬಹಳ ಜನ್ಮಗಳ ಅಂತಿಮದ ಶರೀರದಲ್ಲಿ ನಾನು ಪ್ರವೇಶ ಮಾಡುತ್ತೇನೆ ಎಂಬುದನ್ನೂ ಸಹ
ಅವರು ತಿಳಿದುಕೊಂಡಿಲ್ಲ. ಕೃಷ್ಣನು ಮುಂದೆ ಇದ್ದಿದ್ದೇ ಆದರೆ ಎಲ್ಲರೂ ಓಡಿ ಬಂದು ಬಿಡುತ್ತಿದ್ದರು.
ಪೋಪ್ ಮೊದಲಾದವರು ಬಂದರೆ ಅಲ್ಲಿ ಎಷ್ಟೊಂದು ಗುಂಪು ಸೇರುತ್ತದೆ ಆದರೆ ಈ ಸಮಯದಲ್ಲಿ ಎಲ್ಲರೂ ಪತಿತ,
ತಮೋಪ್ರಧಾನರಾಗಿದ್ದಾರೆ ಎಂಬ ಮಾತನ್ನು ಮನುಷ್ಯರು ತಿಳಿದುಕೊಳ್ಳುವುದಿಲ್ಲ. ಹೇ ಪತಿತ-ಪಾವನ ಬನ್ನಿ
ಎಂದು ಹೇಳುತ್ತಾರೆ ಆದರೆ ನಾವು ಪತಿತರಾಗಿದ್ದೇವೆ ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ಮಕ್ಕಳಿಗೆ
ತಂದೆಯು ಎಷ್ಟು ಚೆನ್ನಾಗಿ ತಿಳಿಸಿ ಕೊಡುತ್ತಾರೆ. ತಂದೆಯ ಬುದ್ಧಿಯು ಎಲ್ಲಾ ಸೇವಾಕೇಂದ್ರಗಳ ಅನನ್ಯ
ಮಕ್ಕಳ ಕಡೆ ಹೊರಟು ಹೋಗುತ್ತದೆ. ಯಾವಾಗ ಹೆಚ್ಚು ಅನನ್ಯ ಮಕ್ಕಳು ಇಲ್ಲಿಗೆ ಬರುವರೋ ಆಗ ಇಲ್ಲಿ
ನೋಡುತ್ತೇನೆ ಇಲ್ಲವೆಂದರೆ ಹೊರಗೆ ಇರುವ ಮಕ್ಕಳನ್ನು ನೆನಪು ಮಾಡಿಕೊಳ್ಳಬೇಕಾಗುತ್ತದೆ. ಅವರ ಮುಂದೆ
ಜ್ಞಾನ ನರ್ತನ ಮಾಡುತ್ತೇನೆ. ಬಹಳ ಮಂದಿ ಜ್ಞಾನಿ ಆತ್ಮಗಳಿದ್ದಾಗ ಅಲ್ಲಿ ಬಹಳ ಆನಂದವಾಗುತ್ತದೆ,
ಇಲ್ಲವೆಂದರೆ ಕನ್ಯೆಯರ ಮೇಲೆ ಎಷ್ಟೊಂದು ಅತ್ಯಾಚಾರಗಳಾಗುತ್ತವೆ. ಕಲ್ಪ-ಕಲ್ಪವೂ ಸಹನೆ
ಮಾಡಬೇಕಾಗುತ್ತದೆ. ಜ್ಞಾನದಲ್ಲಿ ಬಂದಾಗ ಭಕ್ತಿಯು ಬಿಟ್ಟು ಹೋಗುತ್ತದೆ. ತಿಳಿದುಕೊಳ್ಳಿ, ಮನೆಯಲ್ಲಿ
ಮಂದಿರವಿದೆ, ಸ್ತ್ರೀ-ಪುರುಷರಿಬ್ಬರೂ ಭಕ್ತಿ ಮಾಡುತ್ತಾರೆ, ಅವರಲ್ಲಿ ಒಂದುವೇಳೆ ಸ್ತ್ರೀ
ಜ್ಞಾನದಲ್ಲಿ ಬಂದು ಬಿಟ್ಟರೆ ಭಕ್ತಿಯನ್ನು ಬಿಟ್ಟು ಬಿಡುತ್ತಾರೆ ಆಗ ಎಷ್ಟೊಂದು
ಹೊಡೆದಾಟಗಳಾಗುತ್ತವೆ! ಶಾಸ್ತ್ರಗಳನ್ನು ಓದದೇ ವಿಕಾರದಲ್ಲಿ ಹೋಗದೇ ಇದ್ದಾಗ ಜಗಳವಾಗುತ್ತದೆಯಲ್ಲವೆ.
ಇದರಲ್ಲಿ ಬಹಳ ವಿಘ್ನಗಳು ಬರುತ್ತವೆ. ಅನ್ಯ ಸತ್ಸಂಗಗಳಿಗೆ ಹೋಗಲು ಯಾರೂ ತಡೆಯುವುದಿಲ್ಲ. ಇಲ್ಲಿ
ಪವಿತ್ರತೆಯ ಮಾತಾಗಿದೆ. ಪುರುಷರು ಪವಿತ್ರರಾಗಿರಲು ಸಾಧ್ಯವಾಗದಿದ್ದರೆ ಕಾಡಿಗೆ ಹೊರಟು ಹೋಗುತ್ತಾರೆ
ಆದರೆ ಸ್ತ್ರೀಯರು ಎಲ್ಲಿ ಹೋಗುವುದು! ಸ್ತ್ರೀಯರು ನರಕದ ದ್ವಾರವೆಂದು ತಿಳಿಯುತ್ತಾರೆ. ತಂದೆಯು
ತಿಳಿಸುತ್ತಾರೆ - ನೀವು ನರಕದ ದ್ವಾರವಲ್ಲ, ಸ್ವರ್ಗದ ದ್ವಾರವಾಗಿದ್ದೀರಿ. ನೀವೀಗ ಸ್ವರ್ಗ ಸ್ಥಾಪನೆ
ಮಾಡುತ್ತೀರಿ, ಇದಕ್ಕೆ ಮೊದಲು ನರಕದ ದ್ವಾರವಾಗಿದ್ದಿರಿ, ಈಗ ಸ್ವರ್ಗದ ಸ್ಥಾಪನೆಯಾಗುತ್ತದೆ.
ಸತ್ಯಯುಗವು ಸ್ವರ್ಗದ ದ್ವಾರ, ಕಲಿಯುಗವು ನರಕದ ದ್ವಾರವಾಗಿದೆ. ಇದು ತಿಳುವಳಿಕೆಯ ಮಾತಾಗಿದೆ. ನೀವು
ಮಕ್ಕಳೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಳ್ಳುತ್ತೀರಿ. ಭಲೆ ಪವಿತ್ರರಾಗಿರುತ್ತಾರೆ
ಆದರೆ ಜ್ಞಾನದ ಧಾರಣೆಯು ನಂಬರ್ವಾರ್ ಇರುತ್ತದೆ. ನೀವು ಅಲ್ಲಿಂದ ಬಿಡುಗಡೆಯಾಗಿ ಬಂದು ಇಲ್ಲಿ
ಕುಳಿತಿದ್ದೀರಿ ಆದರೆ ಈಗ ತಿಳಿಸಲಾಗುತ್ತದೆ - ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕಾಗಿದೆ ಇಲ್ಲವಾದರೆ
ಅವರಿಗೆ ತೊಂದರೆಯಾಗುತ್ತದೆ. ಇಲ್ಲಿರುವವರಿಗಂತೂ ಯಾವುದೇ ತೊಂದರೆಯಿಲ್ಲ ಆದ್ದರಿಂದ ತಂದೆಯು
ತಿಳಿಸುತ್ತಾರೆ - ಗೃಹಸ್ಥ ವ್ಯವಹಾರದಲ್ಲಿ ಕಮಲಪುಷ್ಫ ಸಮಾನ ಪವಿತ್ರರಾಗಿರಿ ಅದೂ ಈ ಅಂತಿಮ ಜನ್ಮದ
ಮಾತಾಗಿದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ತಮ್ಮನ್ನು ಆತ್ಮನೆಂದು ತಿಳಿಯಿರಿ. ಆತ್ಮವೇ
ಕೇಳಿಸಿಕೊಳ್ಳುತ್ತದೆ, ಆತ್ಮವೇ ಜನ್ಮ-ಜನ್ಮಾಂತರದ ಭಿನ್ನ-ಭಿನ್ನ ವಸ್ತ್ರಗಳನ್ನು ಧರಿಸುತ್ತಾ
ಬಂದಿದೆ. ಈಗ ನಾವಾತ್ಮಗಳು ಹಿಂತಿರುಗಿ ಹೋಗಬೇಕಾಗಿದೆ. ತಂದೆಯೊಂದಿಗೆ ಬುದ್ಧಿಯೋಗವನ್ನು
ಇಡಬೇಕಾಗಿದೆ, ಮೂಲ ಮಾತೇ ಇದಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಆತ್ಮಗಳೊಂದಿಗೆ
ಮಾತನಾಡುತ್ತೇನೆ, ಆತ್ಮವು ಭೃಕುಟಿಯ ಮಧ್ಯದಲ್ಲಿರುತ್ತದೆ, ಈ ಕರ್ಮೇಂದ್ರಿಯಗಳ ಮೂಲಕ ಕೇಳುತ್ತದೆ.
ಆತ್ಮವು ಇದರಲ್ಲಿ ಇಲ್ಲವೆಂದರೆ ಈ ಶರೀರವು ಶವವಾಗಿ ಬಿಡುತ್ತದೆ. ತಂದೆಯು ಎಷ್ಟು ಅದ್ಭುತ
ಜ್ಞಾನವನ್ನು ತಿಳಿಸುತ್ತಾರೆ. ಪರಮಾತ್ಮನ ವಿನಃ ಮತ್ತ್ಯಾರೂ ಈ ಜ್ಞಾನವನ್ನು ತಿಳಿಸಲು ಸಾಧ್ಯವಿಲ್ಲ.
ಸನ್ಯಾಸಿಗಳು ಆತ್ಮವನ್ನು ನೋಡುವುದಿಲ್ಲ. ಅವರಂತೂ ಆತ್ಮವನ್ನೇ ಪರಮಾತ್ಮನೆಂದು ತಿಳಿಯುತ್ತಾರೆ.
ಎರಡನೆಯದಾಗಿ ಆತ್ಮದಲ್ಲಿ ಯಾವುದೇ ಲೇಪಚೇಪವಿಲ್ಲವೆಂದು ಹೇಳಿ ಶರೀರವನ್ನು ತೊಳೆಯಲು ಗಂಗಾ ನದಿಗೆ
ಹೋಗುತ್ತಾರೆ. ಆದರೆ ಆತ್ಮವೇ ಪತಿತವಾಗುತ್ತದೆ, ಆತ್ಮವೇ ಎಲ್ಲವನ್ನು ಮಾಡುತ್ತದೆ ಎಂಬುದನ್ನು ಅವರು
ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಿರುತ್ತಾರೆ, ನಾನು ಇಂತಹ ವ್ಯಕ್ತಿಯಾಗಿದ್ದೇನೆ, ನಾನು
ಇಂತಹವನಾಗಿದ್ದೇನೆ..... ಹೀಗೂ ತಿಳಿದುಕೊಳ್ಳಬೇಡಿ. ಎಲ್ಲರೂ ಆತ್ಮಗಳಾಗಿದ್ದೀರಿ, ಅಂದಮೇಲೆ ಯಾವುದೇ
ಜಾತಿ-ಪಾತಿಯ ಭೇದವಿರಬಾರದು. ತಮ್ಮನ್ನು ಆತ್ಮನೆಂದು ತಿಳಿಯಿರಿ, ಸರ್ಕಾರವು ಧರ್ಮವನ್ನು
ಒಪ್ಪುವುದಿಲ್ಲ. ಇವೆಲ್ಲವೂ ದೇಹದ ಧರ್ಮಗಳಾಗಿವೆ ಆದರೆ ಎಲ್ಲಾ ಆತ್ಮಗಳ ತಂದೆಯು ಒಬ್ಬರೇ ಆಗಿದ್ದಾರೆ.
ಆತ್ಮವನ್ನೇ ನೋಡಬೇಕಾಗಿದೆ, ಎಲ್ಲಾ ಆತ್ಮಗಳ ಸ್ವಧರ್ಮವು ಶಾಂತಿಯಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಯಾವ ಮಾತು
ಪ್ರಯೋಜನಕಾರಿಯಲ್ಲವೋ ಅದನ್ನು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟು ಬಿಡಬೇಕಾಗಿದೆ.
ಕೆಟ್ಟದ್ದನ್ನು ಕೇಳಬೇಡಿ.... ಎಂದು ತಂದೆಯು ಯಾವ ಶಿಕ್ಷಣವನ್ನು ಕೊಡುತ್ತಾರೆಯೋ ಅದನ್ನು ಧಾರಣೆ
ಮಾಡಿಕೊಳ್ಳಬೇಕಾಗಿದೆ.
2. ಯಾವುದೇ ಮಿತವಾದ
ಇಚ್ಛೆಗಳನ್ನು ಇಟ್ಟುಕೊಳ್ಳಬಾರದು. ದೃಷ್ಟಿಯ ಕಡೆ ಬಹಳ ಗಮನ ಕೊಡಬೇಕಾಗಿದೆ. ವಿಕಾರಿ
ದೃಷ್ಟಿಯಿರಬಾರದು, ಯಾವುದೇ ಕರ್ಮೇಂದ್ರಿಯವು ಚಂಚಲವಾಗಬಾರದು. ಖುಷಿಯಿಂದ ಸಂಪನ್ನವಾಗಿರಬೇಕು.
ವರದಾನ:
ಮಾಯೆಯ ಆಟವನ್ನು
ಸಾಕ್ಷಿಯಾಗಿ ನೋಡುವಂತಹವರು ಸದಾ ನಿರ್ಭಯ, ಮಯಾಜೀತ್ ಭವ.
ಸಮಯ ಪ್ರತಿ ಸಮಯ ಹೇಗೆ
ತಾವು ಮಕ್ಕಳ ಸ್ಟೇಜ್ ಮುಂದುವರೆಯುತ್ತಿದೆ, ಅಂದರೆ ಈಗ ಮಾಯೆಯ ಮೇಲೆ ಘರ್ಷಣೆ ಮಾಡಬೇಕಾಗಿಲ್ಲ, ಮಾಯೆ
ನಮಸ್ಕಾರ ಮಾಡಲು ಬಂದಿದೆ ಯುದ್ಧ ಮಾಡಲು ಅಲ್ಲ. ಒಂದುವೇಳೆ ಮಾಯೆ ಬಂದರೂ ಸಹ ಅದನ್ನು ಆಟ ಎಂದು
ತಿಳಿದು ನೋಡಿ. ಈ ರೀತಿ ಅನುಭವ ಆಗಲಿ ಹೇಗೆ ಸಾಕ್ಷಿಯಾಗಿ ಹದ್ದಿನ ಡ್ರಾಮವನ್ನು ನೋಡುವಿರಿ ಹಾಗೆ.
ಮಾಯೆಯ ಎಂತಹದೇ ವಿಕ್ರಾಳ ರೂಪವಿರಲಿ ತಾವು ಅದನ್ನು ಆಟದ ಗೊಂಬೆ ಮತ್ತು ಆಟ ಎಂದು ತಿಳಿದು ನೋಡುವಿರಿ
ಆಗ ಬಹಳ ಸಂತೋಷವಾಗುತ್ತದೆ, ನಂತರ ಅದರಿಂದ ಭಯ ಅಥವಾ ಗಾಬರಿಯಾಗುವುದಿಲ್ಲ. ಯಾವ ಮಕ್ಕಳು ಸದಾ
ಆಟಗಾರನಾಗಿ ಸಾಕ್ಷಿಯಾಗಿದ್ದು ಮಾಯೆಯ ಆಟವನ್ನು ನೋಡುವರು ಅವರು ಸದಾ ನಿರ್ಭಯ ಅಥವಾ ಮಾಯಾಜೀತ್ ಆಗಿ
ಬಿಡುವರು.
ಸ್ಲೋಗನ್:
ಇಂತಹ ಸ್ನೇಹದ
ಸಾಗರ ಆಗಿ ಆಗ ಕ್ರೋಧ ಸಮೀಪ ಸಹ ಬರಲು ಸಾಧ್ಯವಾಗಬಾರದು.
ಅವ್ಯಕ್ತ ಸೂಚನೆ:- ಈಗ
ಸಂಪನ್ನ ಅಥವಾ ಕರ್ಮಾತೀತರಾಗುವುದರಲ್ಲಿ ತತ್ಪರರಾಗಿರಿ.
ಕರ್ಮಾತೀತ ಅರ್ಥಾತ್
ಕರ್ಮದ ಅಧೀನರಲ್ಲ, ಕರ್ಮಗಳ ಪರ ತಂತ್ರವಲ್ಲ. ಸ್ವತಂತ್ರರಾಗಿದ್ದೀರಿ, ಕರ್ಮೇಂದ್ರಿಯಗಳ ಮೂಲಕ ಕರ್ಮ
ಮಾಡಿಸಿರಿ. ಮಾಡುತ್ತ ಅಕರ್ತ, ಸಂಪರ್ಕ-ಸಂಬಂಧಗಳಲ್ಲಿರುತ್ತ ಕರ್ಮಾತೀತರು ಎನ್ನುವ ಗಾಯನವಿದೆ,
ಇಂತಹ ಸ್ಟೇಜ್ ಇರುತ್ತದೆಯೇ? ಯಾವುದೇ ಆಕರ್ಷಣೆಯಿರಬಾರದು ಮತ್ತು ಸರ್ವೀಸ್ ಸಹ ಆಕರ್ಷಣೆಯಿಂದರಬಾರದು
ಆದರೆ ನಿಮಿತ್ತ ಭಾವದಿಂದಿರಲಿ, ಇದರಿಂದ ಸಹಜವೇ ಕರ್ಮಾತೀತರಾಗಿಬಿಡುವಿರಿ.